Showing posts with label ಬೋಧಕರಾರೊ ಲೋಕದೀ ದಾಸಗೆ ಬಾಧಿಪ ದುರಿತಗಳ ದೂರ ಮಾಡಿ vasudeva vittala. Show all posts
Showing posts with label ಬೋಧಕರಾರೊ ಲೋಕದೀ ದಾಸಗೆ ಬಾಧಿಪ ದುರಿತಗಳ ದೂರ ಮಾಡಿ vasudeva vittala. Show all posts

Wednesday 1 September 2021

ಬೋಧಕರಾರೊ ಲೋಕದೀ ದಾಸಗೆ ಬಾಧಿಪ ದುರಿತಗಳ ದೂರ ಮಾಡಿ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಬೋಧಕರಾರೊ ಲೋಕದೀ ದಾಸಗೆ

ಬಾಧಿಪ ದುರಿತಗಳ ದೂರ ಮಾಡಿ

ಮಾಧವ ನೀನೆ ದಯವು ಮಾಡಲಿ ಬೇಕೊ

ಸಾಧಕ ಸಾಧ್ಯನೊ ನೀನು ಸ್ವಾಮಿ ಪ


ಓದಲು ಮೊದಲಿಲ್ಲ ಕೇಳಿ ಶಾಸ್ತ್ರಗಳಿಲ್ಲ

ಮೋದಿಸುವ ಮಾತ್ರ ಭಕ್ತರ ಕಡು

ಮೋದತೀರ್ಥರ ಮತ ಇವನಿಗೆ ತಿಳುವಂತೆ

ನೀ ದಯವನು ಮಾಡಿ ಕರವ ಪಿಡಿಯೊ 1


ಆಲಸಬಟ್ಟನು ಇವ ನಿನ್ನ ಪೂಜಿಗೆ ತಕ್ಕ

ಕೆಲಸವ ಮಾಡಲು ಮೊದಲರಿಯ

ಒಲಿಸಬೇಕೆಂದು ಮನದಿ ಹಂಬಲಿಸು

ಚಲಿಸದ ಮನ ಮಾತ್ರಕೆ ಕೊಡಲಿಬೇಕು 2


ದಾಸರ ಸಾಧನದ ಭಾರ ನಿನ್ನದು ಸ್ವಾಮಿ

ಆಸರಾಗಲಿ ಬೇಕು ಒಬ್ಬರಿಗೆ

ದಾಸ ಮತ್ತೊಬ್ಬ ಎಂದು ನಿನ್ನಯ ಕ್ಲಪ್ತ

ವಾಸುದೇವವಿಠಲ ನೀನರಿಯದೇನೊ 3

***