Showing posts with label ಆರಾಯರ ಪದ ನೀರಜ ಯುಗ ಮನೋವಾರಿಜದಲಿ ನಾ ಭಜಿಸುವೆನು ankita gurujagannatha vittala. Show all posts
Showing posts with label ಆರಾಯರ ಪದ ನೀರಜ ಯುಗ ಮನೋವಾರಿಜದಲಿ ನಾ ಭಜಿಸುವೆನು ankita gurujagannatha vittala. Show all posts

Monday 6 September 2021

ಆರಾಯರ ಪದ ನೀರಜ ಯುಗ ಮನೋವಾರಿಜದಲಿ ನಾ ಭಜಿಸುವೆನು ankita gurujagannatha vittala

 ರಾಗ: ಶಂಕರಾಭರಣ ತಾಳ: ಏಕ


ಆ ರಾಯರ ಪದ ನೀರಜ ಯುಗ ಮನೋ-

ವಾರಿಜದಲಿ ನಾ ಭಜಿಸುವೆನು


ಸಾರಿದ ಜನರಘÀ ದೂರದಿ ಓಡಿಸಿ

ಧಾರುಣಿಯೊಳು ಸುರಸೌರಭಿ ಎನಿಸಿಹ ಅ.ಪ


ಆವರ ಪದಜಲ ಈ ಭುವನತ್ರಯ

ಪಾವನತರವೆಂದೆನಿಸುವದೋ

ಆವರ ಪದಯುಗ ಕೋವಿದಜನರು

ಭಾವದಿ ದಿನದಿನ ಸೇವಿಪರೊ

ಆವರ ಹೃದಯದಿ ನಾರಾಯಣ ಚ-

ಕ್ರಾವತಾರವ ಧರಿಸಿಹನೊ

ಶ್ರೀವರ ಹರಿ ಕರುಣಾವಲೋಕನದಿ

ದೇವಸ್ವಭಾವವನೈದಿಹರೊ 1

ಆವ ಮಾನವನಿವರ ಚರಣ 

ಸೇವಕತೆರನೆಂದೆನಿಸುವನೋ1

ಭಾವಿಪರವನೀತಳದೊಳು ಮತ್ತೆ 

ಕೋವಿದ ಜನರೆಲ್ಲರು ಆವನ-

ಧೀನನಾಗುವರು ಅವನೇ ಅವನಿ- 

ದೇವೋತ್ತಮನೆಂದೆನಿಸುವನು

ಪಾವನಿ ಮುಖ ದೇವೋತ್ತಮರೆಲ್ಲರು

ಈ ವಿಧ ಮಹಿಮೆಯ ತೀವ್ರದಿ ತೋರುವರು 2

ಆವರು ಅವನಿ ದೇವತೆಗಳಿಗೆ

ಜೀವನವಿತ್ತು ಪೊರೆದಿಹರೊ

ಪಾವಕಗ್ಹಾಕಿದ ಹಾರವ ಮತ್ತೆ

ಭೂವರನಿಗೆ ತಂದಿತ್ತಿಹರೊ

ಮಾವಿನ ರಸದಲಿ ಬಿದ್ದಿಹ ಶಿಶುವಿಗೆ

ಜೀವನವಿತ್ತು ಕಾಯ್ದಿಹರೋ

ಶೈವನ ನಿಜ ಶೈವವ ಬಿಡಿಸಿ ತಮ್ಮ

ಸೇವೆಯನಿತ್ತು ಕಾಯ್ದಿಹರೊ 3

ಸಲಿಲವ ತಂದಿರುತಿಹ ನರನಿಗೆ

ಸುಲಲಿತ ಮುಕ್ತಿಯನಿತ್ತಿಹರೊ

ಚಲುವ ತನಯನಾ ಪುಲಿನದಿ ಪಡೆದಿಹ

ಲಲನೆಯ ಚೈಲದಿ ಕಾದಿಹರೊ

ಸಲಿಲವು ಇಲ್ಲದೆ ಬಳಲಿದ ಜನಕೆ 

ಸಲಿಲವನಿತ್ತು ಸಲಹಿದರೊ

ಇಳೆಯೊಳು ಯತಿಕುಲತಿಲಕರೆಂದೆನಿಸಿ

ಸಲಿಸದಂಥದು ತಾವು ಸಲಿಸಿಹರೊ 4

ಅನುದಿನದಲಿ ತಮ್ಮ ಪದಕಮಲವನು

ಮನದಲಿ ಬಿಡದೆ ಭಜಿಸುವ

ಜನರಿಗೆ ನಿಜಘನಸುಖವನು ಕೊಟ್ಟವ-

ರನುಸರಿಸಿ ಇರುತಿಹರ

ಮನೋವಾಕ್ಕಾಯದಿ ನಂಬಿದ ಜನಕೆ

ಜನುಮವನ್ನು ನೀಡರು ಇವರ

ಘನಗುಣನಿಧಿ ಗುರುಜಗನ್ನಾಥವಿಠಲ-

ನಣುಗಾಗ್ರೇಸರನೆನಿಸಿಹರ 5

***