..
ರಾಗ - : ತಾಳ -
ಎಲ್ಲ ದೇವರ ಗಂಡ l ಕೃಷ್ಣ
ಚಿಲ್ಲರೆ ದೈವರ ಮಿಂಡ ll ಪ ll
ಪಾದದಿ ನದಿಯನು ಪೆತ್ತ l ಅದನು
ರುದ್ರನು ಶಿರದಲಿ ಪೊತ್ತ
ಮಾಧವನ್ಹೊಕ್ಕಳ ಜಾತ l ಶತ
ಮೋದನು ಲೋಕ ಪ್ರಖ್ಯಾತ ll 1 ll
ಸೃಷ್ಟಿ ಸಂಹಾರಗೈದ l ಪರ
ಮೇಷ್ಟಿ ರುದ್ರರನಾಳ್ದ
ಯೆಟ್ಟ ದೈತ್ಯರ ಶಿರ ಮುರಿದ l ದುರಿತ-
ದೃಷ್ಟಿಸಿ ನಾಶಗೈದ ll 2 ll
ಬಂಟರ ಪಾಲಕನೀತ l ವೈ
ಕುಂಠದ ಒಡೆಯನು ದಾತ
ತುಂಟರ ಮಡುಹುವ ಸತತ l ನಮಗೆ
ನಂಟನು ಗೋಕುಲನಾಥ ll 3 ll
ಮನಸಿಗೆ ಬಂದುದು ಸಿದ್ಧ l ಪ್ರತಿ
ಯೆಣಿಸುವ ಜೀವನೆ ಬದ್ಧ
ನೆನೆಸುವರಲಿ ತಾನಿದ್ದ l ದಯ
ವನಧಿಯು ಬೆಣ್ಣೆಯ l ಕದ್ದ ll 4 ll
ದುರಿತ ದುರುಳರ ಸಂಗ l ತಾ
ನಿರುತ ಮಾಡುವ ರಂಗ
ಜಯೇಶವಿಟ್ಠಲ ತುಂಗ l ಮಹಿ
ಮಾ ರಕ್ಷಿಸು ದಯಾಪಾಂಗ ll 5 ll
***
ಎಲ್ಲ ದೇವರ ಗಂಡ | ಕೃಷ್ಣ
ಚಿಲ್ಲರೆ ದೈವರ ಮಿಂಡ ಪ
ಪಾದದಿ ನದಿಯನು ಪೆತ್ತ | ಅದನು
ರುದ್ರನು ಶಿರದಲಿ ಪೊತ್ತ
ಮಾಧವನ್ಹೊಕ್ಕಳ ಜಾತ | ಶತ
ಮೋದನು ಲೋಕ ಪ್ರಖ್ಯಾತ 1
ಸೃಷ್ಟಿ ಸಂಹಾರಗೈದ | ಪರ
ಮೇಷ್ಟಿ ರುದ್ರರನಾಳ್ದ
ಯೆಟ್ಟ ದೈತ್ಯರ ಶಿರ ಮುರಿದ | ದುರಿತ-
ದೃಷ್ಟಿಸಿ ನಾಶಗೈದ 2
ಬಂಟರ ಪಾಲಕನೀತ | ವೈ-
ಕುಂಠದ ಒಡೆಯನು ದಾತ
ತುಂಟರ ಮಡಹುವ ಸತತ | ನಮಗೆ
ನಂಟನು ಗೋಕುಲನಾಥ 3
ಮನಸಿಗೆ ಬಂದುದು ಸಿದ್ಧ | ಪ್ರತಿ
ಯೆಣಿಸುವ ಜೀವನೆ ಬದ್ಧ
ನೆನೆಸುವರಲಿ ತಾನಿದ್ದ | ದಯ
ವನಧಿಯು ಬೆಣ್ಣೆಯ | ಕದ್ದ 4
ದುರಿತ ದುರುಳರ ಭಂಗ | ತಾ
ನಿರುತ ಮಾಡುವ ರಂಗ
ಜಯೇಶವಿಠಲ ತುಂಗ | ಮಹಿ
ಮಾ ರಕ್ಷಿಸು ದಯಾಪಾಂಗ
****