Showing posts with label ಯಾಕೆ ಕರುಣ ಬಾರದ್ಹರಿಯೆ ಲೋಕನಾಯಕ ನಿನಗೆ ಸರಿಯೆ kamalanabha vittala. Show all posts
Showing posts with label ಯಾಕೆ ಕರುಣ ಬಾರದ್ಹರಿಯೆ ಲೋಕನಾಯಕ ನಿನಗೆ ಸರಿಯೆ kamalanabha vittala. Show all posts

Thursday 5 August 2021

ಯಾಕೆ ಕರುಣ ಬಾರದ್ಹರಿಯೆ ಲೋಕನಾಯಕ ನಿನಗೆ ಸರಿಯೆ ankita kamalanabha vittala

 ..


kruti by Nidaguruki Jeevubai


ಯಾಕೆ ಕರುಣ ಬಾರದ್ಹರಿಯೆ

ಲೋಕನಾಯಕ ನಿನಗೆ ಸರಿಯೆ ಪ


ವ್ಯಾಕುಲದಲಿ ಮುಳುಗಿ ಬಹಳ

ಶೋಕಪಡುವ ಜನರ ಕಂಡು ಅ.ಪ


ತಂದೆ ತಾಯಿ ಬಂಧು ಬಳಗ

ಇಂದು ಮುಂದು ಗತಿ ನೀನೆಂದು

ಪೊಂದಿ ನಿನ್ನ ಭಜಿಸದಿರುವ

ಮಂದ ಮತಿಗಳನ್ನೆ ಕಂಡು 1


ಕಾಮ ಕ್ರೋಧ ಲೋಭ ಮೋಹ

ಮದ ಮತ್ಸರದಿ ಮುಳುಗಿ ಮುಳುಗಿ

ಕಾಮಜನಕ ನಿನ್ನ ಮರೆತ

ತಾಮಸ ಜನರುಗಳ ಕಂಡು 2


e್ಞÁನಿಗಳನೆ ಕಂಡು ಪರಮ

ಸಾನುರಾಗದಿಂದ ಪೊರೆವೆ

e್ಞÁನ ಶೂನ್ಯರಾದ ಪರಮ ಅ-

e್ಞÁನಿ ಜನರುಗಳನೆ ಕಂಡು 3


ಪರಮಪುರಷ ನಿನ್ನ ಮಹಿಮೆ

ನಿರುತ ಧ್ಯಾನಿಸುವವರ ಸಂಗ

ಕರುಣದಿಂದ ಪಾಲಿಸಯ್ಯ

ಪರಮ ಕರುಣಾನಿಧಿಯೆ ದೇವ4


ನೊಂದೆ ಭವದ ಬಂಧನದೊಳು

ತಂದೆ ಕಮಲನಾಭ ವಿಠ್ಠಲ

ಬಂಧನಗಳ ಬಿಡಿಸಿ ಸಲಹೊ

ಮುಂದೆ ಶ್ರಮವ ಹರಿಸೊ ಬೇಗ5

***