ಕಾಖಂಡಕಿ ಕೃಷ್ಣದಾಸರ ರಚನೆ
ರಾಗ - : ತಾಳ -
ಕರುಣಾಕರ ಕಮಲಾರಮಣ
ಕರಿರಾಜ ಬಂಧನ ಹರಣಾ
ಸುರ ಬ್ರಹ್ಮ ಮುಖಾರ್ಚಿತ ಚರಣಾ
ಶರಣಾಗೆಲೋ ದೀನೋದ್ಧರಣಾ ll ಪ ll
ಅತಿಸುಂದರ ನಂದ ಕುಮಾರಾ
ಸುತ ನಾಗೈ ತಂದನು ಮಾರಾ
ಆತನೇ ಕುಸುಮದ ಶರೀರಾ
ಸುತ ಸದ್ಗುಣ ಗಣ ಮಂದಾರ
ಪ್ರತಿಯುಗದಲಿ ಧರಿಸೈವತಾರಾ
ಕ್ಷಿತಿಯೊಳು ಪಾಲಿಪ ಸುರನಿಕರಾ ll 1 ll
ಜಲಧಿ ಯೊಳಗೆರಡು ರೂಪಾದೆ
ಸಲೆ ವೇದಾಮೃತವನು ತಂದೆ
ಬಲಿದೀ ಕ್ರೂರಾಂಗವ ವಿಡಿದೆ
ಇಳೆಸಲೆ ಪ್ರಹ್ಲಾದರ ಹೊರೆದೆ
ನೆಲೆ ಪ್ರಥಮಾಶ್ರಮದಲಿ ನಿಂದೇ
ಬಲಿ ಜಮದಗ್ನ್ಯರ ತೋಷಿಸಿದೆ ll 2 ll
ಎರಡನೆ ವರ್ಣದೊಳಗೆ ಜನಿಸಿ
ಸುರ ಪಾಂಡವರೇಳಿಗೆ ಬಲಿಸಿ
ನೆರೆ ಅಂತ್ಯಯುಗದಿ ಅವತರಿಸಿ
ಪುರಹರ ದ್ವಿಜರಭಿಮತ ಸಲಿಸಿ
ಗುರು ಮಹಿಪತಿ ಪ್ರಭು ಕರುಣಿಸಿ
ಹೊರಿಯೋ ನಿನ್ನೆಚ್ಚರ ನಿಲಿಸಿ ll 3 ll
***
ಕರುಣಾಕರಾ ಕಮಲಾರಮಣ ಕರಿರಾಜ ಬಂಧನ ಹರಣಾ ಸುರ ಬ್ರಹ್ಮ ಮುಖಾರ್ಚಿತ ಚರಣಾ ಶರಣಾಗೆಲೋ ದೀನೋದ್ಧರಣಾ ಪ
ಅತಿಸುಂದರ ನಂದ ಕುಮಾರಾ ಸುತ ನಾಗೈ ತಂದನು ಮಾರಾ ಅತನೇ ಕುಸುಮದ ಶರೀರಾ ಸುತ ಸದ್ಗುಣ ಗಣ ಮಂದಾರಾ ಪ್ರತಿಯುಗದಲಿ ಧರಿಸೈವತಾರಾ ಕ್ಷಿತಿಯೊಳು ಪಾಲಿಪ ಸುರನಿಕರಾ 1
ಜಲಧಿ ಯೊಳಗೆರಡು ರೂಪಾದೆ ಸಲೆ ವೇದಾಮೃತವನು ತಂದೆ ಬಲಿದೀ ಕ್ರೂರಾಂಗವ ವಿಡಿದೆ ಇಳೆಸಲೆ ಪ್ರಲ್ಹಾದರ ಹೊರೆದೆ ನೆಲೆ ಪ್ರಥಮಾಶ್ರಮದಲಿ ನಿಂದೇ ಬಲಿ ಜಮದಗ್ನ್ಯರ ತೋಷಿಸಿದೆ 2
ಎರಡನೆ ವರ್ಣದೊಳಗೆ ಜನಿಸಿ ಸುರ ಪಾಂಡವರೇಳಿಗೆ ಬಲಿಸಿ ನೆರೆ ಅಂತ್ಯಯುಗದಿ ಅವತರಿಸಿ ಪುರಹರ ದ್ವಿಜರಭಿಮತ ಸಲಿಸಿ ಗುರು ಮಹಿಪತಿ ಪ್ರಭು ಕರುಣಿಸಿ ಹೊರಿಯೋ ನಿನ್ನೆಚ್ಚರ ನಿಲಿಸಿ 3
***