Showing posts with label ಕರುಣಾಕರಾ ಕಮಲಾರಮಣ ಕರಿರಾಜ ಬಂಧನ ಹರಣಾ gurumahipati. Show all posts
Showing posts with label ಕರುಣಾಕರಾ ಕಮಲಾರಮಣ ಕರಿರಾಜ ಬಂಧನ ಹರಣಾ gurumahipati. Show all posts

Wednesday, 1 September 2021

ಕರುಣಾಕರಾ ಕಮಲಾರಮಣ ಕರಿರಾಜ ಬಂಧನ ಹರಣಾ ankita gurumahipati

ಕಾಖಂಡಕಿ ಕೃಷ್ಣದಾಸರ ರಚನೆ

ರಾಗ - : ತಾಳ -


ಕರುಣಾಕರ ಕಮಲಾರಮಣ 

ಕರಿರಾಜ ಬಂಧನ ಹರಣಾ

ಸುರ ಬ್ರಹ್ಮ ಮುಖಾರ್ಚಿತ ಚರಣಾ

ಶರಣಾಗೆಲೋ ದೀನೋದ್ಧರಣಾ ll ಪ ll


ಅತಿಸುಂದರ ನಂದ ಕುಮಾರಾ 

ಸುತ ನಾಗೈ ತಂದನು ಮಾರಾ 

ಆತನೇ ಕುಸುಮದ ಶರೀರಾ 

ಸುತ ಸದ್ಗುಣ ಗಣ ಮಂದಾರ 

ಪ್ರತಿಯುಗದಲಿ ಧರಿಸೈವತಾರಾ

ಕ್ಷಿತಿಯೊಳು ಪಾಲಿಪ ಸುರನಿಕರಾ ll 1 ll


ಜಲಧಿ ಯೊಳಗೆರಡು ರೂಪಾದೆ 

ಸಲೆ ವೇದಾಮೃತವನು ತಂದೆ

ಬಲಿದೀ ಕ್ರೂರಾಂಗವ ವಿಡಿದೆ 

 ಇಳೆಸಲೆ ಪ್ರಹ್ಲಾದರ ಹೊರೆದೆ 

ನೆಲೆ ಪ್ರಥಮಾಶ್ರಮದಲಿ ನಿಂದೇ 

ಬಲಿ ಜಮದಗ್ನ್ಯರ ತೋಷಿಸಿದೆ ll 2 ll


ಎರಡನೆ ವರ್ಣದೊಳಗೆ ಜನಿಸಿ

ಸುರ ಪಾಂಡವರೇಳಿಗೆ ಬಲಿಸಿ

ನೆರೆ ಅಂತ್ಯಯುಗದಿ ಅವತರಿಸಿ

ಪುರಹರ ದ್ವಿಜರಭಿಮತ ಸಲಿಸಿ

ಗುರು ಮಹಿಪತಿ ಪ್ರಭು ಕರುಣಿಸಿ

ಹೊರಿಯೋ ನಿನ್ನೆಚ್ಚರ ನಿಲಿಸಿ ll 3 ll

***


ಕರುಣಾಕರಾ ಕಮಲಾರಮಣ ಕರಿರಾಜ ಬಂಧನ ಹರಣಾ ಸುರ ಬ್ರಹ್ಮ ಮುಖಾರ್ಚಿತ ಚರಣಾ ಶರಣಾಗೆಲೋ ದೀನೋದ್ಧರಣಾ ಪ 


ಅತಿಸುಂದರ ನಂದ ಕುಮಾರಾ ಸುತ ನಾಗೈ ತಂದನು ಮಾರಾ ಅತನೇ ಕುಸುಮದ ಶರೀರಾ ಸುತ ಸದ್ಗುಣ ಗಣ ಮಂದಾರಾ ಪ್ರತಿಯುಗದಲಿ ಧರಿಸೈವತಾರಾ ಕ್ಷಿತಿಯೊಳು ಪಾಲಿಪ ಸುರನಿಕರಾ 1 

ಜಲಧಿ ಯೊಳಗೆರಡು ರೂಪಾದೆ ಸಲೆ ವೇದಾಮೃತವನು ತಂದೆ ಬಲಿದೀ ಕ್ರೂರಾಂಗವ ವಿಡಿದೆ ಇಳೆಸಲೆ ಪ್ರಲ್ಹಾದರ ಹೊರೆದೆ ನೆಲೆ ಪ್ರಥಮಾಶ್ರಮದಲಿ ನಿಂದೇ ಬಲಿ ಜಮದಗ್ನ್ಯರ ತೋಷಿಸಿದೆ 2 

ಎರಡನೆ ವರ್ಣದೊಳಗೆ ಜನಿಸಿ ಸುರ ಪಾಂಡವರೇಳಿಗೆ ಬಲಿಸಿ ನೆರೆ ಅಂತ್ಯಯುಗದಿ ಅವತರಿಸಿ ಪುರಹರ ದ್ವಿಜರಭಿಮತ ಸಲಿಸಿ ಗುರು ಮಹಿಪತಿ ಪ್ರಭು ಕರುಣಿಸಿ ಹೊರಿಯೋ ನಿನ್ನೆಚ್ಚರ ನಿಲಿಸಿ 3

***