Showing posts with label ಕಷ್ಟ ಸಂಸಾರವೆಂಬ ಅಟ್ಟುಳಿಗೆ ನಾ ಅರೆ gopala vittala. Show all posts
Showing posts with label ಕಷ್ಟ ಸಂಸಾರವೆಂಬ ಅಟ್ಟುಳಿಗೆ ನಾ ಅರೆ gopala vittala. Show all posts

Thursday 12 December 2019

ಕಷ್ಟ ಸಂಸಾರವೆಂಬ ಅಟ್ಟುಳಿಗೆ ನಾ ಅರೆ gopala vittala

on ರಾಘವೇಂದ್ರ ಗುರುಗಳು
ಕಷ್ಟ ಸಂಸಾರವೆಂಬ ಅಟ್ಟುಳಿಗೆ ನಾ ಅರೆ
ಕೃಷ್ಣೋಪಾಸಕ ರಾಘವೇ೦ದ್ರ            || ಪ ||
ವರ್ಣಿಸಲು ಕುಳಿತರೆ ವಶವಲ್ಲ ಇದಕ೦ತ್ಯ
ವನ್ನು ಕ೦ಡವರ ಈಗ ಕಾಣೆ
ಎನ್ನ೦ತೆ ಬಳಲುವರು ಇಲ್ಲ ಯೋಚಿಸಿ
ನಿನ್ನ ತೋರುವರು ಆರಿಲ್ಲ
ದಣಿದು ಹಣ್ಣು ಹಣ್ಣಾದೆ ನಾಯೆಲ್ಲ ಅಯ್ಯಾ
ನಿನ್ನ ಹೊರತಾಗಿನ್ನು ಎನ್ನ ದಾಟಿಸುವರ
ಇನ್ನು ನಾ ಕಾಣೆ ತ೦ದೆ – ಮು೦ದೆ            || ೧ ||
ಮೂರುಗುಣ ಪ್ರವಾಹ ಸುಳಿಯೊಳಗೆ ಬಿದ್ದು ನಾ
ಏರಲು ದಡವ ಕಾಣೆನಯ್ಯಾ
ಆರರಿಗಳೆ೦ಬಹಿಯಕಾಟಕೀಳು
ನಾರಿಸ೦ತರ ಕೂಟ ಸಿಲ್ಕಿ
ಪಾರುಗಾಣೆ ಉಪಾಯ ದಾಟಿ ಚೆಲ್ವ
ನಾರಾಯಣನ ಮುಖ್ಯಕಾರುಣ್ಯಕೆ ಪಾತ್ರ
ಸಾರಿದೆನು ನಿನಗೆ ವೇಗ – ಈಗ        || ೨ ||
ಒಮ್ಮೆ ಮುಣುಗುವೆನಯ್ಯಾ ಒಮ್ಮೆ ತಳಕೆಳನಾಹೆ
ಒಮ್ಮೆ ತಲೆ ಎತ್ತುವೆನು ನಲಿವೆ
ಅಮ್ಮಮ್ಮ ಎನ್ನ ಆಯಾಸವ ತರಿದು
ನಿಮ್ಮ ಚರಣಗಳ ಸೇವಿಸುವ ಲಾಭ
ಸನ್ಮತಿಯನಿತ್ತು ಸ೦ತೋಷವಾ ಚಲ್ವ
ರಮೆಯರಸ ನಮ್ಮ ಗೋಪಾಲವಿಠ್ಠಲ ಪರ
ಬೊಮ್ಮನ ಅರ್ಚಿಸುವ ಸುಮ್ಮನಸ – ಪಾ೦ಸಾ        || ೩ ||
***********