Showing posts with label ಜನನ ಮರಣ ಬಿಡಿಸೋ ವನಜನಾಭ sukhanidhi vittala. Show all posts
Showing posts with label ಜನನ ಮರಣ ಬಿಡಿಸೋ ವನಜನಾಭ sukhanidhi vittala. Show all posts

Saturday 1 May 2021

ಜನನ ಮರಣ ಬಿಡಿಸೋ ವನಜನಾಭ ankita sukhanidhi vittala

 ರಾಗ : ಸಾರಂಗ  ತಾಳ : ಝ೦ಪೆ 


ಜನನ ಮರಣ 

ಬಿಡಿಸೋ ವನಜನಾಭ ।

ಇನಕೋಟಿ ತೇಜ ಯೆನ-

ಗನುಕೂಲ ದೋರಿ ।। ಪಲ್ಲವಿ ।।  


ಕೆಟ್ಟ ವಿಷಯಂಗಳು 

ಯನಗಿಷ್ಟವೆಂದಾಚಾರಿಸಿ ।

ಬಟ್ಟೆಗೆಟ್ಟೆನೋ ದೇವ ಭ್ರಷ್ಟತನದಿ ।

ದುಷ್ಟ ಸೇವೆಯ ಮಾಡಿ 

ಕಷ್ಟ ಪಡವರೇ ಸ್ವಾಮಿ ।

ನಷ್ಟ ತುಷ್ಟಿಗಳಿಗಿದು ಶ್ರೇಷ್ಠ 

ಭಕುತಿಯನಿತ್ತು ।। ಚರಣ ।।


ಹಿಂದಿನಂದದಿ ತಂದೆ 

ಇಂದು ನೀ ಮರೆದರೆ ।

ನಂದ ಕಾಂಬುವ-

ಧ್ಯಾ೦ಗೋ ಇಂದಿರೇಶ ।

ಸಂದೇಹ ಮಾಡದಲೇ 

ಹೊಂದಿದವರೊಳ-

ಗೆಣಿಸಿ ಭವ ।

ಬಂಧನವ ಹರಿಸಿ ಪೊರೆ । ಗೋ । 

ವಿಂದ ಗೋವಳರಾಯ ।। ಚರಣ ।।


ಮೋದತೀರ್ಥರ 

ಶಾಸ್ತ್ರ ಆದರದಿ ತಿಳಿಸಿ ।

ಭೇದ ಪಂಚಕ ಮರ್ಮ ಬೋಧಿಸಿ ।

ಮೊದಮಯನಾದ 

ಸಿರಿ ಸುಖನಿಧಿ ವಿಠಲನೇ ।

ಹಾದಿ ತೋರುವನೆಂದು 

ಪಾದಕೆರಗಿದ ಬಳಿಕ ।। ಚರಣ ।।

****