CLICK-> INDEX ದೇವರನಾಮ ಕೇಳಿ ಕಲಿಯಲು ಲಿಂಕ್ LINKS TO LEARN DEVARANAMA
or just scroll down for other devaranama
ಗುಬ್ಬಿಯಾಳೊ ಗೋವಿಂದ ಗೋವಿಂದಾ |
ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ ||ಪ||
ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊ
ನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ ||೧||
ಮಾಧವನ್ನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊ
ಗೋವಿಂದನ್ನ ದಯದಿಂದ ಘೋರದುರಿತ ನಾಶನವು ಗುಬ್ಬಿಯಾಳೊ ||೨||
ವಿಷ್ಣುಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೇ ಗುಬ್ಬಿಯಾಳೊ
ಮಧುಸೂದನನ ಧ್ಯಾನದಿಂದ ಅತಿಶಯವು ಇಹುದೊ ಗುಬ್ಬಿಯಾಳೊ ||೩||
ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊ
ವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ ||೪||
ಶ್ರೀಧರನ್ನ ನೆನೆದರೆ ಸಿರಿ ನಮಗೆ ಒಲಿವಳೊ ಗುಬ್ಬಿಯಾಳೊ
ಹೃಷೀಕೇಶನ ಧ್ಯಾನದಿಂದ ಹೃದಯ ಪರಿಶುದ್ಧವೊ ಗುಬ್ಬಿಯಾಳೊ ||೫||
ಪದ್ಮನಾಭ ನಮ್ಮೆಲ್ಲರ ಪಾಲಿಸಿ ರಕ್ಷಿಪನೊ ಗುಬ್ಬಿಯಾಳೊ
ದಾಮೋದರನ ನೆನೆದರೆ ಪಾಮರತ್ವ ಬಿಡಿಸುವನೊ ಗುಬ್ಬಿಯಾಳೊ ||೬||
ಸಂಕರ್ಷಣನ ಧ್ಯಾನದಿಂದ ಸಂತಾನ ಅಭಿವೃದ್ಧಿಯು ಗುಬ್ಬಿಯಾಳೊ
ವಾಸುದೇವನ ದಯದಿಂದ ವಂಶ ಉದ್ಧಾರವೊ ಗುಬ್ಬಿಯಾಳೊ ||೭||
ಪ್ರದ್ಯುಮ್ನನ ನೆನೆದರೆ ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೊ
ಅನಿರುದ್ಧನ ಸೇವಿಸೆ ಪುನೀತರಹೆವೊ ಗುಬ್ಬಿಯಾಳೊ ||೮||
ಪುರುಷೋತ್ತಮನ್ನ ಪುರಾಣಪುರುಷನೆಂದು ತಿಳಿಯಿರೊ ಗುಬ್ಬಿಯಾಳೊ
ಅಧೋಕ್ಷಜ ನಮ್ಮೆಲ್ಲರಿಗಾಧಾರವಾಗಿಹನೊ ಗುಬ್ಬಿಯಾಳೊ ||೯||
ನಾರಸಿಂಹದೇವರು ನಮ್ಮ ಕುಲದೈವವೊ ಗುಬ್ಬಿಯಾಳೊ
ಅಚ್ಯುತ ಲಕ್ಷ್ಮಿಯ ಕೂಡಿ ಸಚ್ಚಿದಾನಂದನೊ ಗುಬ್ಬಿಯಾಳೊ ||೧೦||
ಜನಾರ್ದನದೇವರು ಜಗಕೆಲ್ಲ ಶ್ರೇಷ್ಠರೊ ಗುಬ್ಬಿಯಾಳೊ
ಉಪೇಂದ್ರನು ನಮ್ಮ ಅಪರಾಧವ ಕ್ಷಮಿಸುವನೊ ಗುಬ್ಬಿಯಾಳೊ ||೧೧||
ಹರಿನಾಮಾಮೃತಕೆ ಸರಿ ಧರೆಯೊಳಗೆ ಇಲ್ಲವೊ ಗುಬ್ಬಿಯಾಳೊ
ಶ್ರೀಕೃಷ್ಣ ರಂಗೇಶಯೆಂಬೊ ಸಿದ್ಧಕ್ರಿಯ ಬಲ್ಲರೆ ಗುಬ್ಬಿಯಾಳೊ ||೧೨||
ಈ ಗುಬ್ಬಿ ಪಾಡುವರಿಗೆ ಇಹ ಪರವು ಸಂತತವು ಗುಬ್ಬಿಯಾಳೋ
ಧರಣಿಯೊಳು ಆಚಂದ್ರಾರ್ಕ ತಾರಕವಾಗಿಹರು ಗುಬ್ಬಿಯಾಳೊ ||೧೩||
ಹಯವದನನ್ನ ಪಾದಧ್ಯಾನ ನಿತ್ಯ ಮರೆಯದೆ ನೀ ನೆನೆ ಮನವೆ
ನಮ್ಮ ಹಯವದನನ್ನ ಪಾದವೇ ನಿತ್ಯ ಮನವೆ ಗುಬ್ಬಿಯಾಳೊ ||೧೪ ||
***
ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ ||ಪ||
ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊ
ನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ ||೧||
ಮಾಧವನ್ನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊ
ಗೋವಿಂದನ್ನ ದಯದಿಂದ ಘೋರದುರಿತ ನಾಶನವು ಗುಬ್ಬಿಯಾಳೊ ||೨||
ವಿಷ್ಣುಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೇ ಗುಬ್ಬಿಯಾಳೊ
ಮಧುಸೂದನನ ಧ್ಯಾನದಿಂದ ಅತಿಶಯವು ಇಹುದೊ ಗುಬ್ಬಿಯಾಳೊ ||೩||
ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊ
ವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ ||೪||
ಶ್ರೀಧರನ್ನ ನೆನೆದರೆ ಸಿರಿ ನಮಗೆ ಒಲಿವಳೊ ಗುಬ್ಬಿಯಾಳೊ
ಹೃಷೀಕೇಶನ ಧ್ಯಾನದಿಂದ ಹೃದಯ ಪರಿಶುದ್ಧವೊ ಗುಬ್ಬಿಯಾಳೊ ||೫||
ಪದ್ಮನಾಭ ನಮ್ಮೆಲ್ಲರ ಪಾಲಿಸಿ ರಕ್ಷಿಪನೊ ಗುಬ್ಬಿಯಾಳೊ
ದಾಮೋದರನ ನೆನೆದರೆ ಪಾಮರತ್ವ ಬಿಡಿಸುವನೊ ಗುಬ್ಬಿಯಾಳೊ ||೬||
ಸಂಕರ್ಷಣನ ಧ್ಯಾನದಿಂದ ಸಂತಾನ ಅಭಿವೃದ್ಧಿಯು ಗುಬ್ಬಿಯಾಳೊ
ವಾಸುದೇವನ ದಯದಿಂದ ವಂಶ ಉದ್ಧಾರವೊ ಗುಬ್ಬಿಯಾಳೊ ||೭||
ಪ್ರದ್ಯುಮ್ನನ ನೆನೆದರೆ ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೊ
ಅನಿರುದ್ಧನ ಸೇವಿಸೆ ಪುನೀತರಹೆವೊ ಗುಬ್ಬಿಯಾಳೊ ||೮||
ಪುರುಷೋತ್ತಮನ್ನ ಪುರಾಣಪುರುಷನೆಂದು ತಿಳಿಯಿರೊ ಗುಬ್ಬಿಯಾಳೊ
ಅಧೋಕ್ಷಜ ನಮ್ಮೆಲ್ಲರಿಗಾಧಾರವಾಗಿಹನೊ ಗುಬ್ಬಿಯಾಳೊ ||೯||
ನಾರಸಿಂಹದೇವರು ನಮ್ಮ ಕುಲದೈವವೊ ಗುಬ್ಬಿಯಾಳೊ
ಅಚ್ಯುತ ಲಕ್ಷ್ಮಿಯ ಕೂಡಿ ಸಚ್ಚಿದಾನಂದನೊ ಗುಬ್ಬಿಯಾಳೊ ||೧೦||
ಜನಾರ್ದನದೇವರು ಜಗಕೆಲ್ಲ ಶ್ರೇಷ್ಠರೊ ಗುಬ್ಬಿಯಾಳೊ
ಉಪೇಂದ್ರನು ನಮ್ಮ ಅಪರಾಧವ ಕ್ಷಮಿಸುವನೊ ಗುಬ್ಬಿಯಾಳೊ ||೧೧||
ಹರಿನಾಮಾಮೃತಕೆ ಸರಿ ಧರೆಯೊಳಗೆ ಇಲ್ಲವೊ ಗುಬ್ಬಿಯಾಳೊ
ಶ್ರೀಕೃಷ್ಣ ರಂಗೇಶಯೆಂಬೊ ಸಿದ್ಧಕ್ರಿಯ ಬಲ್ಲರೆ ಗುಬ್ಬಿಯಾಳೊ ||೧೨||
ಈ ಗುಬ್ಬಿ ಪಾಡುವರಿಗೆ ಇಹ ಪರವು ಸಂತತವು ಗುಬ್ಬಿಯಾಳೋ
ಧರಣಿಯೊಳು ಆಚಂದ್ರಾರ್ಕ ತಾರಕವಾಗಿಹರು ಗುಬ್ಬಿಯಾಳೊ ||೧೩||
ಹಯವದನನ್ನ ಪಾದಧ್ಯಾನ ನಿತ್ಯ ಮರೆಯದೆ ನೀ ನೆನೆ ಮನವೆ
ನಮ್ಮ ಹಯವದನನ್ನ ಪಾದವೇ ನಿತ್ಯ ಮನವೆ ಗುಬ್ಬಿಯಾಳೊ ||೧೪ ||
***
gubbiyaḷō gōvinda gōvindā |
gōvinda gōvindānendu neneyirō gubbiyaḷō || pa ||
1. kēśavanna nenedare klēśa parihāravu gubbiyaḷō
nārāyaṇana dhyānadinda narakabhayavillavō gubbiyaḷō ||
2. mādhavanna nenedare manōbhīṣṭa koḍuvanu gubbiyaḷō
gōvindanna dayadinda ghōradurita nāśanavu gubbiyaḷō ||
3. viṣṇubhajaneyilladavage vaiṣṇavara janmavuṇṭē gubbiyaḷō
madhusūdanana dhyānadinda atiśayavu ihudō gubbiyaḷō ||
4. trivikramana nenedare sāvitriyāgiharō gubbiyaḷō
vāmanadēvaru namage varagaḷa koḍuvōru gubbiyaḷō ||
5. śrīdharanna nenedare siri namage olivāḷō gubbiyaḷō
hṛṣīkēśana dhyānadinda hṛdaya pariśuddhavō gubbiyaḷō ||
6. padmanābha nammellara pālisi rakṣipanō gubbiyaḷō
dāmōdarana nenedare pāmaratva biḍisuvanō gubbiyaḷō ||
7. saṅkarṣaṇana dhyānadinda santāna abhivṛddhiyu gubbiyaḷō
vāsudēvana dayadinda vaṃśa uddhāravō gubbiyaḷō ||
8. pradyumnana nenedare bhūpradakṣiṇe phalavu gubbiyaḷō
aniruddhana sēvise punītarahēvō gubbiyaḷō ||
9. puruṣōttamanna purāṇapuruṣanendu tiḷiyirō gubbiyaḷō
adhōkṣaja nammellari gādhāravāgihanō gubbiyaḷō ||
10. nārasiṃhadēvaru namma kuladaivavō gubbiyaḷō
acyuta lakṣmiya kūḍi saccidānandanō gubbiyaḷō ||
11. janārdanadēvaru jagakella śrēṣṭharō gubbiyaḷō
upēndranu namma aparādhava kṣamisuvanō gubbiyaḷō ||
12. harināmāmṛtake sari dhareyoḷage illavō gubbiyaḷō
śrīkṛṣṇa raṅgēśayembō siddhakriya ballare gubbiyaḷō ||
13. ī gubbi pāḍuvarige iha paravu santatavu gubbiyaḷō
dharaṇiyoḷu ācandrārka tārakavāgiharu gubbiyaḷō ||
14. hayavadananna pādadhyāna nitya mareyade nī nene manave
namma hayavadananna pādavē nitya manave gubbiyaḷō ||
***
Pronounciation Guide
Vowel Duration: Use a bar (ā, ē, ī, ō, ū) for long sounds held for two beats (e.g., Gōvinda) and no mark for short, quick beats.
Soft Dentals: For t and d, touch the tip of the tongue to the back of the upper front teeth (e.g., Daya, Dhyāna).
Hard Retroflexes: For dotted letters (ṭ, ḍ, ṇ, ḷ), curl the tongue upward to touch the roof of the mouth (e.g., Koḍu, Viṭhala).
Aspirated Puffs: Release a distinct puff of air for letters followed by 'h' (bh, dh, gh, th), as in Bhīṣṭa or Abhivṛddhi.
Nasal Resonance: Treat ṁ or ṅ as a resonant "ng" sound that vibrates in the nasal cavity (e.g., Saṅkarṣaṇa, Maṅgaḷa).
Gubbi Rhythm: Sing with a light, repetitive, and playful cadence, emphasizing the "Gubbiyaḷō" refrain like the chirping of a bird.
***
ದಾಸ ಸಾಹಿತ್ಯದಲ್ಲಿ 'ಗುಬ್ಬಿ ಪದ' ಎಂಬ ವಿಶಿಷ್ಟ ಶೈಲಿಯಲ್ಲಿ ರಚಿತವಾಗಿರುವ ಈ ಕೃತಿಯು ಭಗವಂತನ ಚತುರ್ವಿಂಶತಿ (೨೪) ನಾಮಗಳ ಮಹಿಮೆಯನ್ನು ಅತ್ಯಂತ ಸರಳವಾಗಿ ಮತ್ತು ಸುಂದರವಾಗಿ ವಿವರಿಸುತ್ತದೆ.
ಸಂಕ್ಷಿಪ್ತ ಸಾರಾಂಶ (Summary)
ಈ ಹಾಡಿನಲ್ಲಿ ಹರಿನಾಮ ಸ್ಮರಣೆಯ ಮಹತ್ವವನ್ನು ಪ್ರತಿ ನಾಮದ ಫಲಶೃತಿಯೊಂದಿಗೆ ವಿವರಿಸಲಾಗಿದೆ. ಕೇಶವನಿಂದ ಹಿಡಿದು ಶ್ರೀಕೃಷ್ಣನವರೆಗೆ ಭಗವಂತನ ವಿವಿಧ ರೂಪಗಳನ್ನು ಸ್ಮರಿಸುವುದರಿಂದ ಕ್ಲೇಶ ನಿವಾರಣೆ, ಸಂಪತ್ತು, ಸಂತಾನ ಅಭಿವೃದ್ಧಿ, ಪಾಪ ನಾಶ ಮತ್ತು ಅಂತಿಮವಾಗಿ ಮೋಕ್ಷ ದೊರೆಯುತ್ತದೆ ಎಂದು ದಾಸರು ಸಾರಿದ್ದಾರೆ. ಹಯವದನನ (ವಿಷ್ಣುವಿನ) ಪಾದಧ್ಯಾನವೇ ಜೀವನದ ಪರಮ ಗುರಿ ಎಂಬುದು ಈ ಕೃತಿಯ ಸಾರ.
ಅರ್ಥ (Meaning Parawise)
ಪಲ್ಲವಿ:
ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ...
ಅರ್ಥ: ಎಲ್ಲರೂ ಒಟ್ಟಾಗಿ ಗೋವಿಂದನ ನಾಮವನ್ನು ಸ್ಮರಿಸುತ್ತಾ ಆನಂದಿಸಿರಿ. ಆ ಹರಿಯ ನಾಮವೇ ನಮಗೆ ಗತಿ.
ಚರಣ ೧ & ೨: ಕ್ಲೇಶ ಮತ್ತು ದುರಿತ ನಾಶ
ಕೇಶವನನ್ನು ನೆನೆದರೆ ಜೀವನದ ಕಷ್ಟಗಳು (ಕ್ಲೇಶ) ದೂರವಾಗುತ್ತವೆ. ನಾರಾಯಣನ ಧ್ಯಾನದಿಂದ ನರಕದ ಭಯವಿರುವುದಿಲ್ಲ. ಮಾಧವನು ಮನಸ್ಸಿನ ಆಸೆಗಳನ್ನು ಪೂರೈಸಿದರೆ, ಗೋವಿಂದನ ದಯೆಯಿಂದ ಘೋರ ಪಾಪಗಳು ನಾಶವಾಗುತ್ತವೆ.
ಚರಣ ೩ & ೪: ಭಕ್ತಿ ಮತ್ತು ವರ
ವಿಷ್ಣು ಭಜನೆ ಇಲ್ಲದವನಿಗೆ ವೈಷ್ಣವ ಜನ್ಮ ಸಾರ್ಥಕವಾಗದು. ಮಧುಸೂದನನ ಧ್ಯಾನದಿಂದ ಜೀವನದಲ್ಲಿ ಶ್ರೇಷ್ಠತೆ ದೊರೆಯುತ್ತದೆ. ತ್ರಿವಿಕ್ರಮನ ಸ್ಮರಣೆಯಿಂದ ಪವಿತ್ರತೆ ಲಭಿಸಿದರೆ, ವಾಮನ ದೇವರು ಕೇಳಿದ ವರಗಳನ್ನು ನೀಡುತ್ತಾನೆ.
ಚರಣ ೫ & ೬: ಸಂಪತ್ತು ಮತ್ತು ಪರಿಶುದ್ಧತೆ
ಶ್ರೀಧರನನ್ನು ನೆನೆದರೆ ಲಕ್ಷ್ಮಿಯ (ಸಿರಿ) ಅನುಗ್ರಹವಾಗುತ್ತದೆ. ಹೃಷೀಕೇಶನ ಧ್ಯಾನದಿಂದ ಹೃದಯವು ನಿರ್ಮಲವಾಗುತ್ತದೆ. ಪದ್ಮನಾಭನು ನಮ್ಮನ್ನು ಸಲಹುವನು ಮತ್ತು ದಾಮೋದರನು ನಮ್ಮ ಅಜ್ಞಾನವನ್ನು (ಪಾಮರತ್ವ) ಹೋಗಲಾಡಿಸುವನು.
ಚರಣ ೭ & ೮: ವಂಶೋದ್ಧಾರ ಮತ್ತು ಪುಣ್ಯ
ಸಂಕರ್ಷಣನ ಧ್ಯಾನದಿಂದ ಸಂತಾನ ಭಾಗ್ಯ ಲಭಿಸುತ್ತದೆ. ವಾಸುದೇವನ ಕೃಪೆಯಿಂದ ವಂಶವು ಉದ್ಧಾರವಾಗುತ್ತದೆ. ಪ್ರದ್ಯುಮ್ನನ ಸ್ಮರಣೆಯು ಭೂಪ್ರದಕ್ಷಿಣೆ ಮಾಡಿದ ಪುಣ್ಯವನ್ನು ನೀಡುತ್ತದೆ ಮತ್ತು ಅನಿರುದ್ಧನ ಸೇವೆಯಿಂದ ನಾವು ಪವಿತ್ರರಾಗುತ್ತೇವೆ.
ಚರಣ ೯ & ೧೦: ಆಧಾರ ಮತ್ತು ಕುಲದೈವ
ಪುರುಷೋತ್ತಮನೇ ಪುರಾಣ ಪುರುಷನೆಂದು ತಿಳಿಯಿರಿ. ಅಧೋಕ್ಷಜನು ಜಗತ್ತಿಗೆಲ್ಲ ಆಧಾರವಾಗಿದ್ದಾನೆ. ನಾರಸಿಂಹನು ನಮ್ಮ ಕುಲದೈವವಾಗಿ ರಕ್ಷಿಸುತ್ತಾನೆ. ಅಚ್ಯುತನು ಲಕ್ಷ್ಮಿಯೊಡನೆ ಕೂಡಿ ಸಚ್ಚಿದಾನಂದ ಸ್ವರೂಪನಾಗಿದ್ದಾನೆ.
ಚರಣ ೧೧ & ೧೨: ಕ್ಷಮೆ ಮತ್ತು ಹರಿನಾಮ
ಜನಾರ್ದನನು ಜಗತ್ತಿಗೆ ಶ್ರೇಷ್ಠನಾದವನು. ಉಪೇಂದ್ರನು ನಮ್ಮ ತಪ್ಪುಗಳನ್ನು ಕ್ಷಮಿಸುತ್ತಾನೆ. ಈ ಭೂಮಿಯಲ್ಲಿ ಹರಿನಾಮಕ್ಕೆ ಸಾಟಿಯಾದದ್ದು ಯಾವುದೂ ಇಲ್ಲ. ಶ್ರೀಕೃಷ್ಣ ರಂಗೇಶನ ನಾಮವೇ ಸಿದ್ಧೌಷಧ.
ಚರಣ ೧೩ & ೧೪: ಫಲಶೃತಿ ಮತ್ತು ಅಂಕಿತ
ಈ ಗುಬ್ಬಿ ಪದವನ್ನು ಹಾಡುವವರಿಗೆ ಇಹಲೋಕದ ಸುಖ ಮತ್ತು ಪರಲೋಕದ ಮುಕ್ತಿ ದೊರೆಯುತ್ತದೆ. ಭೂಮಿಯಲ್ಲಿ ಅವರು ಚಂದ್ರ-ಸೂರ್ಯರಿರುವವರೆಗೆ ಕೀರ್ತಿವಂತರಾಗಿರುತ್ತಾರೆ. ಮನವೇ, ಹಯವದನನ ಪಾದಗಳನ್ನು ಒಂದು ಕ್ಷಣವೂ ಮರೆಯದೆ ಸ್ಮರಿಸು, ಅದೇ ನಿತ್ಯವಾದ ಸತ್ಯ.
***
This composition is written in the unique 'Gubbi Pada' (Sparrow Song) style of Dasa Sahitya. It beautifully enumerates the glories of the Chaturvimshati (24) names of Lord Vishnu, explaining the spiritual merit (Phalashruti) of each.
Brief Summary
The song emphasizes the power of chanting the various names of Lord Hari. It serves as a spiritual guide, detailing how different forms of the Lord grant specific blessings—from removing worldly miseries and fears of hell to granting progeny, wealth, and internal purity. The poet concludes that meditating on the feet of Hayavadana (the horse-headed form of Vishnu) is the ultimate purpose of human life.
Stanza-wise Meaning
Refrain (Pallavi):
gubbiyaḷō gōvinda gōvindā...Meaning: O friends, join in and chant "Govinda, Govinda!" Let us always remember the name of Govinda as we sing this Gubbi song.
Stanzas 1 & 2: Removal of Misery and Sin
By remembering Keshava, all worldly miseries (Klesha) are resolved. Meditating on Narayana removes the fear of hell. Madhava fulfills the heart’s deepest desires, and the mercy of Govinda destroys even the most terrible sins.
Stanzas 3 & 4: Devotion and Boons
Without the worship of Vishnu, can one truly be called a 'Vaishnava'? Meditating on Madhusudana brings excellence to life. Remembering Trivikrama makes one pure like Savitri, and Vamana Deva is the granter of all boons.
Stanzas 5 & 6: Wealth and Inner Purity
Remembering Shridhara ensures the grace of Lakshmi (wealth). Meditating on Hrishikesha purifies the heart. Padmanabha protects and nourishes us all, while Damodara removes our ignorance and commonness (Pamarathva).
Stanzas 7 & 8: Lineage and Merit
The meditation of Sankarshana leads to the growth of one’s progeny. By the grace of Vasudeva, the entire lineage is uplifted. Remembering Pradyumna grants the merit of trekking across the entire earth, and serving Aniruddha makes us holy.
Stanzas 9 & 10: The Ultimate Support and Family Deity
Know Purushottama as the Primordial Being (Purana Purusha). Adhokshaja is the fundamental support of all. Narasimha is our family deity who protects us. Achyuta, along with Lakshmi, is the embodiment of Truth, Consciousness, and Bliss (Satchidananda).
Stanzas 11 & 12: Forgiveness and the Nectar of the NameJanardana is the supreme Lord of the universe. Upendra forgives all our transgressions. There is nothing in this world equal to the nectar of Hari’s name. One who knows the "Siddha-Kriya" (the perfected path) of chanting Shri Krishna Rangesha is truly wise.
Stanzas 13 & 14: Final Merit and Signature
Those who sing this 'Gubbi' song will find happiness in this world and liberation in the next. They will remain immortal in fame as long as the sun and moon shine. O Mind, never forget to meditate on the feet of Hayavadana; His feet are the only eternal truth.
***
Gubbiyalo govinda govinda |
Govinda govindanemdu neneyiro gubbiyalo ||pa||
Kesavanna nenedare klesa pariharavu gubbiyalo
Narayanana dhyanadinda narakabayavillavo gubbiyalo ||1||
Madhavanna nenedare manobishta koduvonu gubbiyalo
Govindanna dayadinda goradurita nasanavu gubbiyalo ||2||
Vishnubajaneyilladavage vaishnavara janmavunte gubbiyalo
Madhusudanana dhyanadinda atisayavu ihudo gubbiyalo ||3||
Trivikramana nenedare savitriyagiharo gubbiyalo
Vamanadevaru namage varagala koduvoru gubbiyalo ||4||
Sridharanna nenedare siri namage olivalo gubbiyalo
Hrushikesana dhyanadinda hrudaya parisuddhavo gubbiyalo ||5||
Padmanaba nammellara palisi rakshipano gubbiyalo
Damodarana nenedare pamaratva bidisuvano gubbiyalo ||6||
Sankarshanana dhyanadinda santana abivruddhiyu gubbiyalo
Vasudevana dayadinda vamsa uddharavo gubbiyalo ||7||
Pradyumnana nenedare bupradakshine Palavu gubbiyalo
Aniruddhana sevise punitarahevo gubbiyalo ||8||
Purushottamanna puranapurushanemdu tiliyiro gubbiyalo
Adhokshaja nammellarigadharavagihano gubbiyalo ||9||
Narasimhadevaru namma kuladaivavo gubbiyalo
Acyuta lakshmiya kudi saccidanamdano gubbiyalo ||10||
Janardanadevaru jagakella sreshtharo gubbiyalo
Upendranu namma aparadhava kshamisuvano gubbiyalo ||11||
Harinamamrutake sari dhareyolage illavo gubbiyalo
Srikrushna rangesayembo siddhakriya ballare gubbiyalo ||12||
I gubbi paduvarige iha paravu santatavu gubbiyalo
Dharaniyolu acandrarka tarakavagiharu gubbiyalo ||13||
Hayavadananna padadhyana nitya mareyade ni nene manave
Namma hayavadananna padave nitya manave gubbiyalo ||14 ||
***
ಹರಿದಾಸಸಾಹಿತ್ಯದಲ್ಲಿ ಕೇಶವನಾಮ
ಗುಬ್ಬಿಯಾಳೊ ಗೋವಿಂದ ಗೋವಿಂದಾ ।
ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ ॥
ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊ
ನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ ॥
ಮಾಧವನ್ನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊ
ಗೋವಿಂದನ್ನ ದಯದಿಂದ ಘೋರದುರಿತ ನಾಶನವು ಗುಬ್ಬಿಯಾಳೊ ॥
ವಿಷ್ಣುಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೇ ಗುಬ್ಬಿಯಾಳೊ
ಮಧುಸೂದನನ ಧ್ಯಾನದಿಂದ ಅತಿಶಯವು ಇಹುದೊ ಗುಬ್ಬಿಯಾಳೊ ॥
ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊ
ವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ ॥
ಶ್ರೀಧರನ್ನ ನೆನೆದರೆ ಸಿರಿ ನಮಗೆ ಒಲಿವಳೊ ಗುಬ್ಬಿಯಾಳೊ
ಹೃಷೀಕೇಶನ ಧ್ಯಾನದಿಂದ ಹೃದಯ ಪರಿಶುದ್ಧವೊ ಗುಬ್ಬಿಯಾಳೊ ॥
ಪದ್ಮನಾಭ ನಮ್ಮೆಲ್ಲರ ಪಾಲಿಸಿ ರಕ್ಷಿಪನೊ ಗುಬ್ಬಿಯಾಳೊ
ದಾಮೋದರನ ನೆನೆದರೆ ಪಾಮರತ್ವ ಬಿಡಿಸುವನೊ ಗುಬ್ಬಿಯಾಳೊ ॥
ಸಂಕರ್ಷಣನ ಧ್ಯಾನದಿಂದ ಸಂತಾನ ಅಭಿವೃದ್ಧಿಯು ಗುಬ್ಬಿಯಾಳೊ
ವಾಸುದೇವನ ದಯದಿಂದ ವಂಶ ಉದ್ಧಾರವೊ ಗುಬ್ಬಿಯಾಳೊ ॥
ಪ್ರದ್ಯುಮ್ನನ ನೆನೆದರೆ ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೊ
ಅನಿರುದ್ಧನ ಸೇವಿಸೆ ಪುನೀತರಹೆವೊ ಗುಬ್ಬಿಯಾಳೊ ॥
ಪುರುಷೋತ್ತಮನ್ನ ಪುರಾಣಪುರುಷನೆಂದು ತಿಳಿಯಿರೊ ಗುಬ್ಬಿಯಾಳೊ
ಅಧೋಕ್ಷಜ ನಮ್ಮೆಲ್ಲರಿಗಾಧಾರವಾಗಿಹನೊ ಗುಬ್ಬಿಯಾಳೊ ॥
ನಾರಸಿಂಹದೇವರು ನಮ್ಮ ಕುಲದೈವವೊ ಗುಬ್ಬಿಯಾಳೊ
ಅಚ್ಯುತ ಲಕ್ಷ್ಮಿಯ ಕೂಡಿ ಸಚ್ಚಿದಾನಂದನೊ ಗುಬ್ಬಿಯಾಳೊ ॥
ಜನಾರ್ದನದೇವರು ಜಗಕೆಲ್ಲ ಶ್ರೇಷ್ಠರೊ ಗುಬ್ಬಿಯಾಳೊ
ಉಪೇಂದ್ರನು ನಮ್ಮ ಅಪರಾಧವ ಕ್ಷಮಿಸುವನೊ ಗುಬ್ಬಿಯಾಳೊ ॥
ಹರಿನಾಮಾಮೃತಕೆ ಸರಿ ಧರೆಯೊಳಗೆ ಇಲ್ಲವೊ ಗುಬ್ಬಿಯಾಳೊ
ಶ್ರೀಕೃಷ್ಣ ರಂಗೇಶಯೆಂಬೊ ಸಿದ್ಧಕ್ರಿಯ ಬಲ್ಲರೆ ಗುಬ್ಬಿಯಾಳೊ ॥
ಈ ಗುಬ್ಬಿ ಪಾಡುವರಿಗೆ ಇಹ ಪರವು ಸಂತತವು ಗುಬ್ಬಿಯಾಳೋ
ಧರಣಿಯೊಳು ಆಚಂದ್ರಾರ್ಕ ತಾರಕವಾಗಿಹರು ಗುಬ್ಬಿಯಾಳೊ ॥
ಹಯವದನನ್ನ ಪಾದಧ್ಯಾನ ನಿತ್ಯ ಮರೆಯದೆ ನೀ ನೆನೆ ಮನವೆ
ನಮ್ಮ ಹಯವದನನ್ನ ಪಾದವೇ ನಿತ್ಯ ಮನವೆ ಗುಬ್ಬಿಯಾಳೊ ॥
***
ವಿವರ :
ಪರಮಾತ್ಮನ ಕೇಶವನಾಮದ ಜಪವಿಲ್ಲದೆ ನಮ್ಮ ದಿನವೂ ಆರಂಭವಾಗುವುದಿಲ್ಲ, ಹೆಣ್ಣುಮಕ್ಕಳು ಗುರುಮಂತ್ರದ ಸಮಯದಲ್ಲಾದರೂ, ಗಂಡಸರು ಸಂಧ್ಯಾವಂದನೆಯ ಸಮಯದಲ್ಲಾದರೂ, ಶುಭಾಶುಭ ಎಲ್ಲ ಕಾರ್ಯಕ್ರಮಗಳೆಲ್ಲವೂ ಆರಂಭವಾಗುವುದೇ ಕೇಶವನಾಮದ ಸ್ಮರಣೆಯಿಂದಲೇ ಆರಂಭವಾಗುವುದು ಸರಿ. ಸಮಯ ಸಿಕ್ಕಾಗ ಈ ಕೇಶವನಾಮಗಳ ಒಂದೊಂದು ಹೆಸರಿನ ಅರ್ಥವೂ ನಿರೂಪಣೆ ಮಾಡುವ ಶಕ್ತಿ ಪರಮಾತ್ಮ ನೀಡಲಿ..
ಇವತ್ತಿನ ಕೃತಿಗೆ ಬಂದರೆ ಶ್ರೀಮದ್ವಾದಿರಾಜತೀರ್ಥ ಪೂಜ್ಯಪಾದರು ಅದ್ಭುತವಾದ ರೀತಿಯಲ್ಲಿ ಕೇಶವನಾಮದಲ್ಲಿನ ಯಾವ ನಾಮವನ್ನು ಸ್ಮರಿಸಿದರೆ ನಮಗೆ ಯಾವರೀತಿಯ ಅನುಗ್ರಹವಾಗುವುದೆನ್ನುವುದನ್ನು ತಿಳಿಸಿ ಹೇಳಿದ್ದಾರೆ.
ನಮ್ಮ ಹರಿದಾಸರುಗಳೆಲ್ಲ ತಮ್ಮ ತಮ್ಮ ಕೃತಿಗಳಲ್ಲಿ ಆಯಾ ಪ್ರಾಂತ್ಯದ ಜನಪದ ಶೈಲಿಯ ವಿಧಾನಗಳನ್ನು ಬಳಸಿ ರಚಿಸಿದ್ದು ಕಂಡಿರ್ತೇವೆ. ಹಾಗೆಯೇ ಈ ಕೃತಿ ಬಹಳ ವಿಶೇಷವಾಗಿದೆ.
ಸುವ್ವಿ ಪದಗಳಾಗಲಿ, ಕೋಲುಪದಗಳಾಗಲಿ, ಲಾವಣಿ ಇತ್ಯಾದಿ ಎಲ್ಲವೂ ಸಹ ಜನಪದ ಶೈಲಿಯಲ್ಲಿ ರಚನೆಯಾಗಿರುವಂತವು. ಅಂತಹುಗಳಲ್ಲಿ ಗೊಬ್ಬಿಳ್ಳು ಪದವನ್ನು ಉಪಯೋಗಿಸಿ ರಚನೆಯಾದ ಪದವೇ ಗೊಬ್ಬೀಯಾಳೊ - ಗುಬ್ಬಿಯಾಳೊ ಪದ.
ಆಂಧ್ರಪ್ರದೇಶದಲ್ಲಿ ಭೋಗಿ ಹಬ್ಬದ ದಿನ ಬೆಳಗಿನ ಜಾವ ೪ ಗಂಟೆಯ ಸಮಯ ಮನೆಯ ಮುಂದೆ ಬೆಂಕಿಯನ್ನು ಹಚ್ಚಿ ದೊಡ್ಡ ಉರಿಯನ್ನು ಹಾಕುತ್ತಾರೆ. ಒಂದು ವರ್ಷದಿಂದ ಸೇಕರಿಸಿ ಇಟ್ಟ ಹಳೆಯ ವಸ್ತುಗಳನ್ನು ಆ ಉರಿಯಲ್ಲಿ ಹಾಕಿ ಸುಟ್ಟುತ್ತಾರೆ. ಇಡೀ ವರ್ಷದ ಕಷ್ಟಗಳು, ಮನಸಿನಲ್ಲಿನ ದುಗುಡಗಳು ಆ ಬೆಂಕಿಯಲ್ಲಿ ಸುಟ್ಟುಹೋಗಲಿ ಎನ್ನುವ ಕಾರಣಕ್ಕೆ ಹಾಗೆಯೇ ಅಗ್ನ್ಯಂತರ್ಗತ ಶ್ರೀ ಹರಿಣೀಪತಿ ಪರಶುರಾಮದೇವರು ನಮ್ಮ ಮನಸಿನ ಕಷ್ಮಲಗಳನ್ನು ಸುಟ್ಟು ಹಾಕಿ ಜ್ಞಾನದ ಬೆಳಕನ್ನು ಜೀವನದಲ್ಲಿ ನೀಡಲಿ ಎಂದು ಈ ಭೋಗಿಯ ದಿನ ಮನೆಯ ಹೊರಗಡೆ ಉರಿಯನ್ನು ಹಾಕುತ್ತಾರೆ.....
ಹಾಗೆಯೇ ಗೋಬರದಿಂದ ಗೊಬ್ಬೆಮ್ಮ ಅಂತ ಮುದ್ದೆ ತರಾ ಮಾಡಿ ರಂಗವಲ್ಲಿಗಳನ್ನು ದೊಡ್ಡ ದೊಡ್ಡದಾಗಿ ಹಾಕಿ ಆ ಗೋಬರದ ಮುದ್ದೆಗೆ ಕುಂಕುಮ, ಅರಿಶಿನ, ಏರಿಸಿ , ವಿಶೇಷವಾಗಿ ಕುಂಬಳಕಾಯಿ ಹೂವುಗಳಿಂದ ಅಲಂಕರಿಸಿ , ಉರಿಹಾಕಿದ ಆ ಬೆಂಕಿ ಶಾಂತವಾದ ನಂತರ ಮನೆಯ ಮುಂದೆ ಹಾಕಿದ ದೊಡ್ಡ ಹಬ್ಬದ ರಂಗೋಲಿಯ ಮಧ್ಯದಲ್ಲಿ ಇಟ್ಟು ಆರಂಗೋಲಿಯ ಸುತ್ತಲೂ ನೆರೆದು ಚಪ್ಪಾಳೆ ತಟ್ಟುತ್ತಾ ಗೊಬ್ಬಿಯಳ್ಳೋ ಎಂದು ಹಾಡುತ್ತ, ನೃತ್ಯ ಮಾಡುವ ಸಂಪ್ರದಾಯ.. ಗೊಬ್ಬಿಯಳ್ಳು ಆಡುವುದಕ್ಕೇನೆ ಹಳ್ಳಿಗಳಿಂದ ಮುತ್ತೈದಿ ಹೆಣ್ಣುಮಕ್ಕಳು ಬರ್ತಾರೆ. ಅದೇ ಅವರ ಪರಂಪರಾ ವೃತ್ತಿಯೂ ಹೌದು. ಅವರು ಬಂದು ನಾವು ಸುವ್ವಿ ಆಡಿದಂತೆ ಗೊಬ್ಬಿಯಳ್ಳು ಹಾಡಿ, ಆಡಿ ರಂಗೋಲಿಸುತ್ತಲೂ ಪ್ರದಕ್ಷಿಣೆಯಂತೆ ನೃತ್ಯ ಮಾಡ್ತಾರೆ. ಬಂದ ಅವರಿಗೆ ಮನೆಯವರು ಅಕ್ಕಿ ಬೇಳೆ ಸ್ವಯಂಪಾಕಗಳನ್ನು ಸಮರ್ಪಣೆ ಮಾಡುತ್ತಾರೆ. ಅವರಂತೆಯೇ ಹರಿದಾಸರು ಬರ್ತಾರೆ. ಮೇಲೆ ಯಾಯಿವಾರದ ಪಾತ್ರೆಯನ್ನಿಟ್ಟುಕೊಂಡು ಮನೆಯ ಮುಂದೆ ಬಂದು ದೇವರ ನಾಮ ಹಾಡುತ್ತಾ ನೃತ್ಯ ಮಾಡುತ್ತಾರೆ.. ಆನಂತರ ಎತ್ತನ್ನು ಅಲಂಕರಿಸಿ ತಮ್ಮೊಂದಿಗೆ ಸಂಪ್ರದಾಯದವರೂ ಬರ್ತಾರೆ ತುತ್ತೂರಿ ಊದುತ್ತ ರಂಗೋಲಿಗೆ ಪ್ರದಕ್ಷಿಣೆ ಹಾಕಿ ಹರಸ್ತಾರೆ. ಇವರೆಲ್ಲರೂ ಬರುವ ಕಾರಣ ದೇಶದಲ್ಲಿ ಬೆಳೆ ಚಂದ ಬೆಳೆದು, ಜನರಿಗೆ ಆರೋಗ್ಯ ,ಐಶ್ವರ್ಯ ಸ್ಥಿರವಾಗಿರಲಿ ಎಂದು ಹಾರೈಸಲು.. ಈ ಸಂಪ್ರದಾಯ ಆಂಧ್ರದಲ್ಲಿ ಇಂದಿಗೂ ಕಾಣುತ್ತೇವೆ...
ಮೇಲೆ ತಿಳಿಸಿದ ಗೊಬ್ಬಿಯಳ್ಳೋ ಪದವನ್ನೇ ಶ್ರೀಮದ್ವಾದಿರಾಜತೀರ್ಥ ಗುರುಸಾರ್ವಭೌಮರು ತಮ್ಮ ಕೇಶವನಾಮದ ಈ ಕೃತಿ ಗುಬ್ಬಿಯಾಳೋ ಗೋವಿಂದಾ ಈ ಪದದಲ್ಲಿ ಬಳಸಿರುವುದು ಕಾಣಬಹುದು.. ಶ್ರೀ ರಾಜರು ಆಂಧ್ರದ ಕಡೆ ಸಂಚಾರಕ್ಕೆ ಬಂದಾಗ ಗೊಬ್ಬಿಯ ಸಂಪ್ರದಾಯ ನೋಡಿ ಅದರ ಮುಖಾಂತರ ಪರಮಾತ್ಮನ ಸ್ಮರಣೆ ಮಾಡಿ ಎಂದೇ ರಚಿಸಿದ ಪದವಿದು.
ಗುಬ್ಬಿ, ಗಿಳಿ ಎಂದು ಇಲ್ಲಿ ನಾವು ಜೀವಿಗಳಕುರಿತು ಉಲ್ಲೇಖಿಸುವುದು ಕಾಣಬಹುದು. ಮತ್ತೆ ಗುಬ್ಬಿ ಎನ್ನುವ ಜೀವನನ್ನು ಆಳುವ ನಮ್ಮ ಪರಮಾತ್ಮನನ್ನು ನೆನೆಯಿರಿ ಎನ್ನುವುದರ ಮೂಲಕವೂ ನಾವು ಈ ಪದದಲ್ಲಿ ಕಾಣಬಹುದು. ಗುಬ್ಬಿಯಾಳೋ ಗೋವಿಂದಾ ! ಎಂದು.
ನಾವು ಸದಾ ಪರಮಾತ್ಮನ ಇಪ್ಪತ್ತಾಲ್ಕು ನಾಮಗಳನ್ನು ನೆನೆಯ್ತುತ್ತಲಿದ್ದರೆ ಈ ದೇಹವನ್ನು ಆಳುವ ಭಗವಂತ ಪ್ರೀತನಾಗ್ತಾನೆ ಎನ್ನುವುದು ಸೂಕ್ಷ್ಮ..
ಗುಬ್ಬಿ ಎನ್ನುವುದು ಪಕ್ಷಿವೃಂದದಲ್ಲಿ ಸಣ್ಣ ಪರಿಮಾಣದ ಹಕ್ಕಿ. ಅದು ಒಂದು ಜಾಗದಲ್ಲಿ ಸ್ಥಿರವಾಗಿರದೆ ಎಲ್ಲೆಡ ಓಡಾಡುತ್ತಲೇ ಇರುತ್ತದೆ. ಚಂಚಲತ್ವದ ಹಕ್ಕಿ ಅದು. ಹಾಗೆಯೇ ಚಂಚಲತ್ವದ ಜೀವವೂ, ಆತನ ಮನಸ್ಸೂ ಸಹ ಸ್ಥರವಾಗಿ ನಿಲ್ಲಲು ಆ ಗುಬ್ಬಿಯನ್ನು ಆಳುವ ಪರಮಾತ್ಮನನ್ನು ಅರ್ಥಾತ್ ಗೋವಿಂದನನ್ನು ಸ್ಮರಿಸಿ ಎಂದು ಇಲ್ಲಿ ತಿಳಿಸಿ ಹೇಳಿದ್ದಾರೆ.
ಗೋ - ಎಂದರೆ ಸಾಮಾನ್ಯ ಅರ್ಥ ಹಸು, ಹಾಗೆಯೇ ಗೋ ಅಂದರೆ ವೇದಗಳು, ಆಕಾಶ, ಭೂಮಿ ಇತ್ಯಾದಿ ಅರ್ಥಗಳಿಂದ ಇವೆಲ್ಲವನ್ನು ಆಳುವವನು ಶ್ರೀಹರಿ ಎನ್ನುವ ಅರ್ಥದಿಂದ ಗೋವಿಂದ ಎಂದು ಸ್ತುತಿಮಾಡಿ ಎಂದು ಹೇಳ್ತಿದ್ದಾರೆ.
ಗಿಳಿಯು ಪಂಜರದೊಳಿಲ್ಲ ಎನ್ನುವ ಶ್ರೀಮತ್ಪುರಂದರದಾಸಾರ್ಯರ ಕೃತಿಯಲ್ಲಾದರೂ
ಕೆಂಪುಮೂಗಿನ ಹಕ್ಕಿ ಎನ್ನುವ ಶ್ರೀ ಕನಕದಾಸಾರ್ಯರ ಕೃತಿ ಯಲ್ಲಾದರೂ ನಾವು ಜೀವನನ್ನು ಗಿಳಿಪದದಿಂದ, ಹಕ್ಕಿಗಳಿಂದ ಹೋಲಿಸಿದ್ದನ್ನು ನಾವು ಕಾಣುತ್ತೇವೆ.
ಈ ದೇಹದಲ್ಲಿ ಜೀವವಿರುವವರೆಗೂ ನಮ್ಮನ್ನಾಳುವ ಪರಮಾತ್ಮ ನಮ್ಮ ಮೇಲೆ ಸದಾ ಅನುಗ್ರಹ ತೋರಿ ನಮ್ಮಲ್ಲಿನ ಎಲ್ಲ ಕಷ್ಮಲಗಳನ್ನು ತೊಲಗಿಸಿ ಪರಿಶುದ್ಧರನ್ನಾಗಿ ಮಾಡಿ ಸದಾ ಆತನ ಪದಗಳಲ್ಲಿ ಸ್ಥಾನವನ್ನು ನೀಡಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ...
- smt ಪದ್ಮ ಸಿರಿಷ್
ಜೈ ವಿಜಯರಾಯ
ನಾದನೀರಾಜನದಿಂ ದಾಸಸುರಭಿ 🙏🏽
***