Showing posts with label ಭಾರತೀಶನೆ ಎನ್ನ ಭಾರ ನಿನ್ನದು ತಂದೆ jayesha vittala. Show all posts
Showing posts with label ಭಾರತೀಶನೆ ಎನ್ನ ಭಾರ ನಿನ್ನದು ತಂದೆ jayesha vittala. Show all posts

Thursday 5 August 2021

ಭಾರತೀಶನೆ ಎನ್ನ ಭಾರ ನಿನ್ನದು ತಂದೆ ankita jayesha vittala

 ..

ಭಾರತೀಶನೆ ಎನ್ನ ಭಾರ ನಿನ್ನದು ತಂದೆ

ಭೂರಿದಯ ಸಿಂಧು ಎಂದೆಂದು | ಗುರುವರ್ಯ

ಬಂದು ಕರುಣಿಸುವನು ಮದ್ಬಂಧೊ 1


ಮಂಗಳಾತ್ಮನೆ ಎನ್ನ ಅಂಗದಲಿ ನೀನಿಂದು

ಪೊಂಗಳಧರನ ತೋರಯ್ಯ | ಅಜರಾಯ

ಭಂಗಬಡಲಾರೆ ಭವದೊಳÀು 2


ನಾರಾಯಣನ ಪುತ್ರ ನಾರಾಯಣಗೆ ಮಿತ್ರ

ನಾರಾಯಣಾತ್ಮ ನಿರವದ್ಯ | ನೀಡಭಯ

ಕರುಣಾತ್ಮ ಗುರುವೆ ಒಲಿದಿಂದು 3


ಕಾಮರೂಪನೆ ಹರಿಯನೇಮದಲಿ ಕಪಿಯಾಗಿ

ಆ ಮಹಿಮೆಗುಂಗುರ ಅರ್ಪಿಸಿ | ಅಗ್ನಿಯಲಿ

ತಾಮಸರ ಹುರಿದೆ ಪುರದಲ್ಲಿ 4


ಮರಳಿ ಶರಧಿಯ ದಾಂಟಿ ಭರದಿ ರಘುಪತಿ ಚರಣ

ಸರಸಿಜದಿ ಚೂಡಾಮಣಿಯನ್ನು | ಒಪ್ಪಿಸಿ

ಹರಿ ಅಂಗ ಸಂಗ ಪಡೆದಯ್ಯ 5


ಸಿಂಧÀುವನು ಬಂಧಿಸಿ ಬಂದ ವಿಭೀಷಣಗೆ

ಕುಂದದೆ ಅಭಯ ಕೊಡಿಸಿದೆ | ದಯಸಿಂಧು

ನಿಂದೆನ್ನ ಒಳಗೆ ಮುದವೀಯೊ 6


ದೇವೇಶನಾಜ್ಞೆಯಲಿ ಜೀವೇಶ ಸಂಜೀವ

ಪರ್ವತ ತಂದು ಕಪಿಸೈನ್ಯ | ಎಬ್ಬಿಸಿ

ಮೊದಲೆಡೆಗೆ ಬಗೆದ ಕುಶಲಾತ್ಮ 7

ದಶಶಿರನ ಕೊಲ್ಲಿಸಿ ವಸುಧಿಪುತ್ರಿಯ ತಂದು

ನಸುನಗುತ ರಾಮಚಂದ್ರಾಗೆ | ಒಪ್ಪಿಸಿ ವಿ

ಭೀಷಣಗೆ ರಾಷ್ಟ್ರ ಕೊಡಿಸಿದೆ 8


ಪ್ರೇಮದಿ ಭರತನು ಸ್ವಾಮಿ ಬರಲಿಲ್ಲೆಂದು

ನೇಮದಲಿ ಕಾಯ ಬಿಡುತೀರೆ | ಉಳುಹಿದೆ ಶ್ರೀ

ರಾಮನಾಗಮನ ತಿಳುಹೀಸಿ9


ತುಷ್ಟನಾದೆನು ಹನುಮ ಇಷ್ಟ ನೀ ಬೇಡೆನಲು

ಗಟ್ಯಾಗಿ ಪಾದ ಪಿಡಿಯಲು | ಭಕ್ತಿಯಲಿ

ಪಟ್ಟಾಭಿರಾಮ ತನ್ನಿತ್ತ 10


ಆಖಣಾತ್ಮಕಾಯನೆ ಅಕಳಂಕ ಗುಣಧಾಮ

ನಿಖಿಲಾತ್ಮ ಹರಿಯ ಪೂಜಿಪ | ದೃಢಮಹಿಮ

ಶ್ರೀಕೃಷ್ಣ ಭಕ್ತಾ ಕಲಿಭೀಮ 11


ಶಿಶುಭಾವದಲಿ ನೀನು ಶತಶೃಂಗ ಗಿರಿವಡೆದು

ನಸುನಗುತ ಜನನಿಗಭಯವ | ನಿತ್ತಂಥ

ಪಶುಪಾಲ ಪರನೆ ಪೊರೆಯೆನ್ನ 12


ದುರ್ಯೋಧನನ ತ್ರಾಣ ತಂತುಗಳ ಹರಿದಾಡಿ

ಸರ್ವೇಶ ಹರಿಗೆ ಪ್ರಿಯಮಾಡಿ | ನಲಿದಂಥ

ಸರ್ವಜ್ಞ ಭೀಮ ಬಿಡೆ ನಿನ್ನ 13


ದುಶ್ಯಾಸನನ ಮಹಾದುಶ್ಯೀಲ ಸ್ಮರಿಸುತ್ತ

ಪಶುವಂತೆ ವಧೆಯ ಮಾಡಿದಿ | ರಣದೊಳು

ಸುಸ್ವಾದ ಗುಣಸಾರ ಮಹವೀರ 14

ಮಾನಿನಿಯ ಸಂಕಲ್ಪ ತ್ರಾಣನೀ ಪೂರೈಸಿ

ಪ್ರಾಣಸಖನಾಗಿ ಸಲಹಿದೆ | ಜಯಭೀಮ

ಪಾಣೆ ಪಿಡಿಯೆನ್ನ ಮಹಘನ್ನ 15


ದುರಾರಾಧಕ ದುಷ್ಟ ಜರಸಂಧನ ಸೀಳಿ

ಮುರಾರಿ ಮತ್ಪ್ರೀತಿ ಬಿಡಿಸಿದೆ | ದೀಕ್ಷೆಯಲಿ ತ್ರಿ

ಪುರಾರಿ ವಂದ್ಯಾಗತಿ ನೀನೆ 16


ನಾರಾಯಣಾಸ್ತ್ರವನು ವೀರ ಗುರುಸುತ ಬಿಡಲು

ಚೀರಿ ನಮೋಯೆನ್ನೆ ನೃಪರೆಲ್ಲ | ಸ್ಮøತಿ ತಪ್ಪೆ

ಧೀರ ಎದುರಾಗಿ ನೀ ನಿಂತೆ 17


ಗರಡಿಯಲಿ ಕೀಚಕನ ಮುರಿದು ಮುದ್ದೆಯ ಮಾಡಿ

ಮರಿಯದೆ ಅವನ ಅನುಜರ | ಸದೆಬಡಿದು

ವರಸತಿಗೆ ಮೋದ ನೀನಿತ್ತೆ 18


ಗರಳಬಕ್ಷಗಳ ವುಂಡು ಉರಗ ಬಂಧವ ಹರಿದು

ಹರಿಯಂತೆ ಕುರುಪ ಕರಿ ಮುಂದೆ | ನೀನಿಂತೆ

ಸರ್ವನಿತ್ಯಾತ್ಮ ಕೃಷ್ಣಾತ್ಮ 19


ಮಧುವೈರಿ ಧ್ಯಾನದಲಿ ಕುದುರೆ ಆಟವನಾಡಿ

ಮುದದಿಂದ ಕುರುಪನ್ಹೆಗಲೇರಿ | ಹುದುಗ್ಯವನ

ಮುದದಿಂದ ನಲಿದೆ ಕಮಲಾಕ್ಷ 20


ಅರಗಿನ ಮನೆಯಲ್ಲಿ ವೈರಿಜನರ ಕೊಂದು

ಪೊರೆದೆ ನೀ ಜನನಿ ಅನುಜರ | ಪಂಜರನೆ

ಧರೆಯೊಳಗೆ ಎನ್ನ ಸಲಹಯ್ಯ 21

ಹಿಡಿಂಬನ ಕೊಂದು ವರ ಹಿಡಿಂಬಿಯ ಕೈಪಿಡಿದು

ನಡೆದೇಕ ಚಕ್ರಪುರದಲ್ಲಿ | ಬಕನೊರಸಿ

ನಡಕ ಬಿಡಿಸೀದಿ ಸುಜನರ 22


ವ್ಯಾಸದೇವನ ಕಂಡು ಸೂಸಿದ ಸದ್ಭಕ್ತಿ

ಪಾಶದಲಿ ಕಟ್ಟಿ ಒಳಗಿಟ್ಟು | ಪೂಜಿಸುತ

ಲೇಸಾಗಿ ಮುಂದೆ ನಡೆದಯ್ಯ 23


ನೀ ಸ್ವಯಂವರ ಸಭೆಯ ವೇಷಾಂತರದಿ ಪೊಕ್ಕು

ವಾಸುದೇವನ ಕಂಡು ಆನಂದ | ತುಳುಕುತ್ತ

ಆ ಸತಿಯ ತಂದೆ ವಿಜಯಾತ್ಮ 24


ರಾಜರೆಲ್ಲರ ಹಿಡಿದು ರಾಜಸೂಯಯಾಗವನು

ಸೋಜಿದಿಗೈದೆ ಸರ್ವೇಶ | ಕೃಷ್ಣನ

ಪೂಜೆಯನು ಮಾಡಿ ಮೆರದಯ್ಯ 25


ಲಕ್ಷ್ಮೀವನಕ್ಹೋದಂತೆ ಪಕ್ಷಿಯರ ಒಡಗೂಡಿ

ದಕ್ಷನೆ ನೀನು ವನವಾಸ | ಅe್ಞÁತ

ಪಕ್ಷವ ಕಳೆದು ಮರಳಿದೆ26

ಸಂಗರವ ನೀ ಹೂಡಿ ಭಂಗಿಸಿ ಕೌರವನ

ರಂಗನ ಮುಂದೆ ಅರ್ಪಿಸಿ | ವಂದಿಸಿ

ಮಂಗಳಾತ್ಮಕನೆ ಸಲಹೆಮ್ಮ 27


ನಿರ್ಮಲ ರಾಜ್ಯವನು ಧರ್ಮಂಗೆ ನೀನಿತ್ತೆ

ನಿರ್ಮೂಲಗೈದು ಅರಿಗಳ | ಕೊಂದ ಪರ

ಧರ್ಮಪರರನ್ನು ಪೊರೆದಯ್ಯ 28


ಮಧ್ವಾಖ್ಯ ಮಹವೀರ ಶುದ್ಧ ಸತ್ವ ಶರೀರ

ಉದ್ಧರಿಪುದೊಂದೆ ವ್ಯಾಪಾರ | ಕೈಕೊಂಡ

ವಿದ್ಯಾಧಿಪತಿಯೆ ಸಲಹೆನ್ನ 29

ಶ್ವಾಸ ನಿಯಾಮಕ ಪ್ರಭುವಾಸವೆ ನಿನ್ನಿಂದ

ಉಸರಲೇನಯ್ಯ ನಿನ್ನಲ್ಲಿ | ಜೀವೇಶ

ಸೂಸುವ ಭಕ್ತಿ ನೀಡಯ್ಯ 30


ವೇದ ಚೋರನ ಮಡುಹಿ ಸಾದರದಿ ಸುಜನಕ್ಕೆ

ಬೋಧ ಮಾಡೆಂದು ಶ್ರೀ ವಿಷ್ಣು | ಕಳುಹಿದ

ಮಧ್ವಾಖ್ಯ ಗುರುವೆ ಪರಿಪಾಹಿ 31


ಧರೆಯಲ್ಲಿ ಜನಿಸಲು ಸುರರು ದುಂದಭಿ ಮೊರೆಯೆ

ದುರುಳರ ಎದೆಯು ನಡುಗಲು | ಹರುಷದಲಿ

ಮೆರೆದು ನೆರೆದರು ಸುಜನರು 32


ಗೋವಿತ್ತ ವಿಪ್ರಂಗೆ ಕೈವಲ್ಯ ನೀನಿತ್ತೆ

ಶ್ರೀವಲ್ಲಭನ ಪ್ರಥಮಾಂಗ | ಪ್ರಸನ್ನ

ನೀವಲಿದು ಹರಿಯ ತೋರಯ್ಯ 33


ಹುಣಿಸೆ ಬೀಜದಿ ಪಿತನ ಘನೃಣವ ತೀರಿಸಿದಿ

ಅಣಿಮಾದಿ ಸಿದ್ಧಿ ತೃಣವಯ್ಯ | ನಿನಗಿನ್ನು

ಗುಣಪೂರ್ಣ ಹರಿಯ ಪ್ರತಿಬಿಂಬ 34


ಶಿವಭಟ್ಟನನು ಗೆದ್ದು ಜಯಾಂಕ ರಸ ತೋರೆ

ಆ ವಿಪ್ರ ಸುರರು ಪೂಜಿಸೆ | ನಲವಿಂದ

ಅವನಿಯೊಳು ಪೊಳೆದೆ ರವಿಯಂತೆ 35


ವಿದ್ಯಾಧಿಪತಿ ಗುರುವೆ ವಿದ್ಯೆ ಪೇಳಿದ ದ್ವಿಜಗೆ

ಸದ್ಭಕ್ತಿ ದಕ್ಷಿಣೆ ನೀನಿತ್ತೆ | ಕರುಣಾತ್ಮ

ಉದ್ಧರಿಸು ಎನ್ನ ದ್ವಿಜರತ್ನ 36

ಜನನಿ ಜನಕರು ತಡಿಯೆ ಅನುವಾದ ಸುತನಿತ್ತು

ಘನವಾದ ತುರ್ಯ ಆಶÀ್ರಮ | ಕೈಗೊಂಡು

ಸುನವ ಪದ್ಧತಿಯ ತೋರಿದೆ 37


ಅಚ್ಯುತಗೆ ಮೊರೆಯಿಟ್ಟ ಅಚ್ಯುತ ಪ್ರೇಕ್ಷಕರಿಗೆ

ಹೆಚ್ಚಾದ ದಯದಿ ಹರಿ ನಿನ್ನ | ವೊಯ್ದಿತ್ತ

ಅಚ್ಚುಮೆಚ್ಚುವ ನೀ ಹರಿಗೆಂದು 38


ವಾದಿಗಳ ಭಂಗಿಸಲು ಸಾದರದಿ ಯತಿ ಕರಿಯೆ

ಛೇದಿಸಿ ಖಳರ ಮದವನ್ನು | ಹರಿಸಿದೆ

ಸ್ವಾದ ಗುಣಸಿಂಧು ಮದ್ಬಂಧು 39

ಬಾಳೆಗೊನೆಗಳ ಮೆದ್ದು ಬಾಡಲೇತಕೆ ಉದರ

ಪೇಳೆಂದ ಯತಿಗೆ ಜಠರಾಗ್ನಿ | ಬ್ರಹ್ಮಾಂಡ

ಕೊಳ್ಳುವದುಯೆಂದು ವರದಯ್ಯ 40


ವಾದಗಳ ಪರಿಹರಿಸಿ ಬೋಧಿಸಲು ಆ ದ್ವಿಜರು

ಪಾದಕ್ಕೆ ಎರಗಿ ನಮೋ ಎಂದು ಅಮರರಿಗೆ ಆ

ಬೋಧವೊ ಮಹಿಮೆಯೆಂದಾರು 41


ಬದರಿಯಾತ್ರೆಯಲಿ ಸುರನದಿಯು ತಾ ಮಹಿಪಡೆದು

ಮುದದಲ್ಲಿ ಬಂದು ನಮಿಸಲು | ಶಿಷ್ಯಜನ

ಯೈದಿ ಭಕ್ತಿಯನು ನಮೋ ಎಂದು 42


ಹರಿಯಂತೆ ನರಿಗಳನು ತುರಕ ದೂತರ ಜರಿದು

ನರಪನಿಂದರ್ಧ ಮಹಿಮೆಯನ್ನು | ಪಡೆದಂಥ

ಯರಡೇಳು ಭುವನ ಅಧಿಪತಿ 43


ಸತ್ಯತೀರ್ಥರ ಬಳಿಗೆ ದೈತ್ಯ ವ್ಯಾಘ್ರನು ಬರಲು

ಮೃತ್ಯುವಿನ ಪುರಕೆ ಕಳುಹಿದೆ | ಲೀಲೆಯಲಿ

ಭೃತ್ಯತ್ವಯೆನಗೆ ನೀಡಯ್ಯ 44

ಸೂಸುವಾ ಭಕ್ತಿಯಲಿ ವ್ಯಾಸದೇವನ ಕಂಡು

ಈಶ ಸಲಹೆಂದು ಎರಗಲು | ಮನವುಬ್ಬಿ

ಬಾ ಸುತನೆ ಎಂದು ತಬ್ಬಿದ 45


ಆನಂದ ಮೂರ್ತಿಯ ಆನಂದ ಸಂಗವನು

ಆನಂದದಿಂದ ನೀ ಯೈದಿ | ನಂದ

ಆನಂದ ತೀರ್ಥ ಕೊಟ್ಟೆಯೊ 46


ನಾರಾಯಣನಲಿ ಕರೆದೊಯ್ಯೆ ಬದರಿಪನ

ಚರಣಾಬ್ಜಕೆರಗಿ ಹರಿಲೀಲೆ | ಸ್ಮರಿಸಿದ

ಗುರುರತ್ನ ಸಲಹೊ ಧನ್ಯಾತ್ಮ 47


ಅಚ್ಯುತನ ಸಂಗದಲಿ ಚಿತ್ಸುಖವ ಉಂಡುಬ್ಬಿ

ಹೆಚ್ಚಿನ ಪದವಿ ಇಲ್ಲೆಂದು | ನಲಿದಂಥ

ಅಚ್ಯುತಾತ್ಮಾನೆ ಸಲಹೆನ್ನ 48

***