Showing posts with label ಬಾರಯ್ಯ ರಾಘವೇಂದ್ರಾ ಸದ್ಗುಣಸಾಂದ್ರಾ bhupati vittala. Show all posts
Showing posts with label ಬಾರಯ್ಯ ರಾಘವೇಂದ್ರಾ ಸದ್ಗುಣಸಾಂದ್ರಾ bhupati vittala. Show all posts

Monday 6 September 2021

ಬಾರಯ್ಯ ರಾಘವೇಂದ್ರಾ ಸದ್ಗುಣಸಾಂದ್ರಾ ankita bhupati vittala

 ankita ಭೂಪತಿವಿಠಲ   

ರಾಗ: ಕೇವಾರ  ತಾಳ: ತ್ರಿ


ಬಾರಯ್ಯಾ ರಾಘವೇಂದ್ರಾ ಸದ್ಗುಣಸಾಂದ್ರಾ 


ಬಾರಯ್ಯ ಶಂಕುಕರ್ಣ ಬಾರಯ್ಯಾ ಪ್ರಹ್ಲಾದ

ಬಾರಯ್ಯ ಬಾಹ್ಲೀಕ ವ್ಯಾಸ ಮುನೀಂದ್ರಾ  1

ಸತ್ಯಲೋಕದಿ ಸ್ವಲ್ಪ ತಪ್ಪು ಮಾಡಲು ಶಾಪ

ಕೊಟ್ಟ ಬ್ರಹ್ಮನು ದೈತ್ಯ ಕುಲದಿ ಜನಿಸು ಎಂದು  2

ಶಾಪವೇ ವರವಾಯಿತು ಭಕ್ತಿಯ ಬಲದಿ

ಸರ್ವತ್ರ ಶ್ರೀಹರಿಯ ವ್ಯಾಪ್ತಿ ತೋರಿದ ಕಂದಾ  3

ಬಾಹ್ಲೀಕನಾಗಿ ನೀ ರುಕ್ಮಿಣಿ ಅರಸನ 

ಪ್ರೀತಿ ಪಾತ್ರನಾದಿ ದ್ವಾಪಾರ ಯುಗದಿ  4

ಶಾಪಶೇಷದಿಂದ ಪಾಪಿಗಳೊಡಗೂಡಿ

ದ್ರೌಪದಿಯ ಪತಿಯ ಗದೆಯಿಂದ ಪ್ರಾಣನೀಗಿದಿ  5

ಪರಮಹಂಸನಾಗಿ ಪುಣ್ಯ ಸಂಚಯ ಮಾಡಿ

ದುರ್ಮತಗಳ ಮುರಿದು ಹರಿಯ ಕುಣಿಸಿದ ಧೀರಾ  6

ಶಾಪ ಮುಕ್ತಿಯ ಕಾಲ ಸಮೀಪಿಸಿತೆಂದು

ಪ್ರಾಪ್ತ ಅನಿಷ್ಠ ಪುಣ್ಯವ ತೂರುತಿರುವಿಯಾ  7

ಭಕ್ತವತ್ಸಲ ಬಾರೋ ಭಯ ನಿವಾರಣ ಬಾರೋ

ಗುರುಸಾರ್ವಭೌಮ ಭೂಪತಿವಿಠಲ ಪ್ರೀಯಾ  8

***