Showing posts with label ಸ್ಮರಿಸುವರ ಪಾಲಿಪ ಬಿರುದು ಭಕುತರ ಪೊರೆವ ಕರುಣಿಯೆ kamalanabha vittala. Show all posts
Showing posts with label ಸ್ಮರಿಸುವರ ಪಾಲಿಪ ಬಿರುದು ಭಕುತರ ಪೊರೆವ ಕರುಣಿಯೆ kamalanabha vittala. Show all posts

Thursday, 5 August 2021

ಸ್ಮರಿಸುವರ ಪಾಲಿಪ ಬಿರುದು ಭಕುತರ ಪೊರೆವ ಕರುಣಿಯೆ ankita kamalanabha vittala

kruti by Nidaguruki Jeevubai

ರಾಗ - : ತಾಳ -


ಸ್ಮರಿಸುವರ ಪಾಲಿಪ

ಬಿರುದು ಭಕುತರ ಪೊರೆವ ಕರುಣಿಯೆ ll ಪ ll


ಪರಿಪರಿ ವಿಧದಲಿ ಪರಿತಪಿಸುವರನು

ಕರವಿಡಿದುದ್ಧರಿಸುತ ಸಂತೈಸುವ

ಉರಗಾದ್ರಿವಾಸವಿಟ್ಠಲ ಸಂತೈಸು

ಚರಣಕಮಲಗಳಿಗೆರಗಿ ಬಿನ್ನೈಸುವೆ ll 1 ll


ಮಂದಮತಿಯು ನಾನೆಂದು ವಂದಿಪರ

ಬಂಧನ ಕಳೆಯುತ ಮುಂದೆ ಗತಿಯು ತೋರಿ

ತಂದೆವೆಂಕಟೇಶವಿಟ್ಠಲ ಭಕುತರ

ಸಂದಣಿ ಪೊರೆಯುವರೆಂಬ ಬಿರುದು ದೇವ ll 2 ll


ಆಶಾಪಾಶಗಳಿಗೊಳಗಾಗುವ ಮನ-

ದಾಸೆ ಪೂರೈಸುತ ನೀ ಸಲಹೈ ಗುರು

ವಾಸುದೇವವಿಟ್ಠಲ ಹರಿ ಭಕುತರ

ದಾಸ್ಯವ ಕೊಟ್ಟು ಉಲ್ಲಾಸ ಒದಗಿಸುತ ll 3 ll


ಮೊದಲೆ ನಿನ್ನಯಪಾದ ಹೃದಯದಿ ಭಜಿಸದೆ

ಒದಗಿದ ಪಾಪದಿ ಹೆದರುತಲಿದೆ ಮನ

ಪದುಮಜಾಂಡ ಸೃಜಿಸಿದ ಪರಮಾತ್ಮನಿ-

ಗದ್ಭುತವೇ ಪಾಮರರನು ಪೊರೆವುದು ll 4 ll


ಮಣಿದು ಬಿನ್ನೈಸುವೆ ಪವನಮತವ ತೋರಿ

ಬಿನಗು ಬುದ್ಧಿಗಳ ಗಮನಕೆ ತಾರದೆ

ಕಮಲನಾಭವಿಟ್ಠಲ ತವ ಕರುಣದಿ

ಮನದ ಕ್ಲೇಶಗಳ ಕಳೆದು ಉದ್ಧರಿಸುತ ll 5 ll

***


ಸ್ಮರಿಸುವರ ಪಾಲಿಪ

ಬಿರುದು ಭಕುತರ ಪೊರೆವ ಕರುಣಿಯೆ ಪ


ಪರಿಪರಿವಿಧದಲಿ ಪರಿತಪಿಸುವರನು

ಕರವಿಡಿದುದ್ಧರಿಸುತ ಸಂತೈಸುವ

ಉರಗಾದ್ರಿವಾಸ ವಿಠ್ಠಲ ಸಂತೈಸು

ಚರಣಕಮಲಗಳಿಗೆರಗಿ ಭಿನ್ನೈಸುವೆ1


ಮಂದಮತಿಯು ನಾನೆಂದು ವಂದಿಪರ

ಬಂಧನ ಕಳೆಯುತ ಮುಂದೆ ಗತಿಯು ತೋರಿ

ತಂದೆ ವೆಂಕಟೇಶ ವಿಠ್ಠಲ ಭಕುತರ

ಸಂದಣಿ ಪೊರೆಯುವರೆಂಬ ಬಿರುದು ದೇವ 2

ಆಶಾಪಾಶಗಳಿಗೊಳಗಾಗಿಹ ಮನ-

ದಾಸೆ ಪೂರೈಸುತ ನೀ ಸಲಹೈ ಗುರು

ವಾಸುದೇವ ವಿಠ್ಠಲ ಹರಿ ಭಕುತರ

ದಾಸ್ಯವ ಕೊಟ್ಟು ಉಲ್ಲಾಸ ಒದಗಿಸುತ 3

ಮೊದಲೆ ನಿನ್ನಯಪಾದ ಹೃದಯದಿ ಭಜಿಸದೆ

ಒದಗಿದ ಪಾಪದಿ ಹೆದರÀುತಲಿದೆ ಮನ

ಪದುಮಜಾಂಡ ಸೃಜಿಸಿದ ಪರಮಾತ್ಮನಿ-

ಗದ್ಭುತವೇ ಪಾಮರರನು ಪೊರೆವುದು 4

ಮಣಿದು ಬಿನ್ನೈಸುವೆ ಪವನಮತವÀ ತೋರಿ

ಬಿನಗು ಬುದ್ಧಿಗಳ ಗಮನಕೆ ತಾರದೆ

ಕಮಲನಾಭ ವಿಠ್ಠಲ ತವ ಕರುಣದಿ

ಮನದ ಕ್ಲೇಶಗಳ ಕಳೆದು ಉದ್ಧರಿಸುತ 5

***