kruti by Nidaguruki Jeevubai
ರಾಗ - : ತಾಳ -
ಸ್ಮರಿಸುವರ ಪಾಲಿಪ
ಬಿರುದು ಭಕುತರ ಪೊರೆವ ಕರುಣಿಯೆ ll ಪ ll
ಪರಿಪರಿ ವಿಧದಲಿ ಪರಿತಪಿಸುವರನು
ಕರವಿಡಿದುದ್ಧರಿಸುತ ಸಂತೈಸುವ
ಉರಗಾದ್ರಿವಾಸವಿಟ್ಠಲ ಸಂತೈಸು
ಚರಣಕಮಲಗಳಿಗೆರಗಿ ಬಿನ್ನೈಸುವೆ ll 1 ll
ಮಂದಮತಿಯು ನಾನೆಂದು ವಂದಿಪರ
ಬಂಧನ ಕಳೆಯುತ ಮುಂದೆ ಗತಿಯು ತೋರಿ
ತಂದೆವೆಂಕಟೇಶವಿಟ್ಠಲ ಭಕುತರ
ಸಂದಣಿ ಪೊರೆಯುವರೆಂಬ ಬಿರುದು ದೇವ ll 2 ll
ಆಶಾಪಾಶಗಳಿಗೊಳಗಾಗುವ ಮನ-
ದಾಸೆ ಪೂರೈಸುತ ನೀ ಸಲಹೈ ಗುರು
ವಾಸುದೇವವಿಟ್ಠಲ ಹರಿ ಭಕುತರ
ದಾಸ್ಯವ ಕೊಟ್ಟು ಉಲ್ಲಾಸ ಒದಗಿಸುತ ll 3 ll
ಮೊದಲೆ ನಿನ್ನಯಪಾದ ಹೃದಯದಿ ಭಜಿಸದೆ
ಒದಗಿದ ಪಾಪದಿ ಹೆದರುತಲಿದೆ ಮನ
ಪದುಮಜಾಂಡ ಸೃಜಿಸಿದ ಪರಮಾತ್ಮನಿ-
ಗದ್ಭುತವೇ ಪಾಮರರನು ಪೊರೆವುದು ll 4 ll
ಮಣಿದು ಬಿನ್ನೈಸುವೆ ಪವನಮತವ ತೋರಿ
ಬಿನಗು ಬುದ್ಧಿಗಳ ಗಮನಕೆ ತಾರದೆ
ಕಮಲನಾಭವಿಟ್ಠಲ ತವ ಕರುಣದಿ
ಮನದ ಕ್ಲೇಶಗಳ ಕಳೆದು ಉದ್ಧರಿಸುತ ll 5 ll
***
ಸ್ಮರಿಸುವರ ಪಾಲಿಪ
ಬಿರುದು ಭಕುತರ ಪೊರೆವ ಕರುಣಿಯೆ ಪ
ಪರಿಪರಿವಿಧದಲಿ ಪರಿತಪಿಸುವರನು
ಕರವಿಡಿದುದ್ಧರಿಸುತ ಸಂತೈಸುವ
ಉರಗಾದ್ರಿವಾಸ ವಿಠ್ಠಲ ಸಂತೈಸು
ಚರಣಕಮಲಗಳಿಗೆರಗಿ ಭಿನ್ನೈಸುವೆ1
ಮಂದಮತಿಯು ನಾನೆಂದು ವಂದಿಪರ
ಬಂಧನ ಕಳೆಯುತ ಮುಂದೆ ಗತಿಯು ತೋರಿ
ತಂದೆ ವೆಂಕಟೇಶ ವಿಠ್ಠಲ ಭಕುತರ
ಸಂದಣಿ ಪೊರೆಯುವರೆಂಬ ಬಿರುದು ದೇವ 2
ಆಶಾಪಾಶಗಳಿಗೊಳಗಾಗಿಹ ಮನ-
ದಾಸೆ ಪೂರೈಸುತ ನೀ ಸಲಹೈ ಗುರು
ವಾಸುದೇವ ವಿಠ್ಠಲ ಹರಿ ಭಕುತರ
ದಾಸ್ಯವ ಕೊಟ್ಟು ಉಲ್ಲಾಸ ಒದಗಿಸುತ 3
ಮೊದಲೆ ನಿನ್ನಯಪಾದ ಹೃದಯದಿ ಭಜಿಸದೆ
ಒದಗಿದ ಪಾಪದಿ ಹೆದರÀುತಲಿದೆ ಮನ
ಪದುಮಜಾಂಡ ಸೃಜಿಸಿದ ಪರಮಾತ್ಮನಿ-
ಗದ್ಭುತವೇ ಪಾಮರರನು ಪೊರೆವುದು 4
ಮಣಿದು ಬಿನ್ನೈಸುವೆ ಪವನಮತವÀ ತೋರಿ
ಬಿನಗು ಬುದ್ಧಿಗಳ ಗಮನಕೆ ತಾರದೆ
ಕಮಲನಾಭ ವಿಠ್ಠಲ ತವ ಕರುಣದಿ
ಮನದ ಕ್ಲೇಶಗಳ ಕಳೆದು ಉದ್ಧರಿಸುತ 5
***