..
ಈತನೇನೆ ನಮ್ಮ ಶ್ರೀ ಸೀತಾಪತಿ ರಘು
ನಾಥನೆಂಬಾತನು ll ಪ ll
ವ್ಯಾಸನ ಜನನಿಯ ವ್ಯಾಘ್ರವ ತಾಳ್ದನು
ದೇಶದೊಳಗೆ ಬಲು ಹೇರಿಗೆಯುಳ್ಳವನು
ನಾಸದೊಳೊರ್ವಳ ಪೊತ್ತುಮೆರೆದ ಮು
ನೀಶನ ಶಾಪಪಡದನ ಕೊಂದಾತನು ll 1 ll
ಆನೆವಾಹನ ಪಿತನ ತಾಯನಳೆದ
ಭಾನುಸುತಗೆ ಶಾಪವನಿತ್ತು ಮೆರೆದ
ಕಾನನವಾಸದಿ ನಿಂದಳಿಗೊಡೆಯ ನಿ
ಧಾನಿ ಶರಧಿಯಲಿ ಶಯನವಾದಾತನು ll 2 ll
ಮೂಗ್ರಾಮ ಮುರಿದು ವಾಜಿಯನೇರಿ ಮೆರೆದ
ಸಾಗ್ರದಿ ವಸುಧೆಯಳ ಮೋಹಿಸಿದ
ಶೀಘ್ರದಿಂದಹೋಬಲಪತಿ ಕನಕನ ಸ್ವಾಮಿ ಎನಗೆ
ಭಾಗ್ಯವನಿತ್ತ ಕಾಗಿನೆಲೆಯಾದಿಕೇಶವನು ll 3 ll
***
ಈತನೇನೆ ನಿನ್ನ ಮಗನು ಪ
ಸೀತಾಪತಿ ರಘುನಾಥನೆಂಬವನು ಅ
ವ್ಯಾಸನ ಜನನಿಯ ವಾಸನೆ ತಾಳ್ದನುದೇಶದೊಳಗೆ ಬಲು ಪೆಸರುಳ್ಳವನುನಾಸದೊಳೊರ್ವನ ಪೊತ್ತು ಮುರಿದು ಮು-ನೀಶರ ಶಾಪವ ಪಿಡಿದು ಕೊಂದಾತನು 1
ಆನೆವಾಹನ ಪಿತನ ತಾಯನಳೆದೋನುಭಾನುಸುತಗೆ ಶಾಪವಿತ್ತವನುಕಾನನ ಜನನಿಯ ಕೊಂದು ಪ್ರಿಯದಲಿ ನಿ-ಧಾನದಿ ಶರಧಿ ಶಯನ ಮಾಡಿದಾತನು 2
ಮೂಗ್ರಾಮ ಮುರಿದು ವಾಜಿಯನೇರಿದಾತನುಸಾಗ್ರದಿಂದಿಳೆಯ ಭಾಗ್ಯ ಹಿಂಗಿಸಿದಯೋಗ್ಯದಿಂದ ಬಳಪತಿತನವನಿಗೆಭಾಗ್ಯವಿತ್ತ ಕಾಗಿನೆಲೆಯಾದಿಕೇಶವ 3
***