Showing posts with label ಗುರುವೆ ಕರುಣದಿಂದ ನೊಡೋ ನಿನ್ನ ತರಳನೆಂದು ದಯಮಾಡೊ shreeshakeshavavittala. Show all posts
Showing posts with label ಗುರುವೆ ಕರುಣದಿಂದ ನೊಡೋ ನಿನ್ನ ತರಳನೆಂದು ದಯಮಾಡೊ shreeshakeshavavittala. Show all posts

Monday 6 September 2021

ಗುರುವೆ ಕರುಣದಿಂದ ನೊಡೋ ನಿನ್ನ ತರಳನೆಂದು ದಯಮಾಡೊ ankita shreeshakeshavavittala

 ankita ಶ್ರೀಶಕೇಶವವಿಠಲ 

ರಾಗ: ಸಾವೇರಿ  ತಾಳ: ಆದಿ


ಗುರುವೆ ಕರುಣದಿಂದ ನೊಡೋ ನಿನ್ನ

ತರಳನೆಂದು ದಯಮಾಡೊ


ದುರುಳರೊಳತಿದುರುಳ ನರ ನಾ

ಮೊರೆಯ ಪೋಗುವೆನು ಪೊರೆಯೊ ಅಸ್ಮದ್ಗುರುವೆ ಅ.ಪ


ಸುಧೀಂದ್ರಕರಕಂಜಜಾತ ಈ ವ-

ಸುಧೆಯೊಳು ಪರಮಪ್ರಖ್ಯಾತ

ಸದಮಲ ಶುಭಗುಣನಿಧಿ ನಿರ್ಮಲಜ್ಞಾನ-

ಪ್ರದಪ್ರೇರಕನಾಗಿ ಮದಡಮತಿಯ ಬಿಡಿಸೊ

ಪದುಮನಾಭನ ಪದಪದುಮ ಪದೋಪದೆಗೆ

ಹೃದಯದಿ ಮುದದಿ ಧೇನೀಪ ಮುದಮುನಿಮತಉದಧಿಗೆಚಂದ್ರ 1

ಪಂಚಬಾಣನ ನಿರಾಕರಿಸಿ ಪಂಚ-

ಪಂಚಕರಣವ ಸ್ವೀಕರಿಸಿ 

ಪಂಚಮುಖನೆ ಪರನೆಂಬ ವಾದಿಯ ಮತ

ಮುಂಚೆ ಮುರಿದನೆಂದು ಸಂಚಕಾರವ(?) ಪಿಡಿದು

ಸಂಚರಿಸಿ ಅವರುಕುತಿ ನಿಲ್ಲಿಸಿ ಪ್ರಪಂಚದೊಳಗಿಹ ಸರ್ವಜನ ಮನೋ

ವಾಂಛಿತವಗರೆದವ ನೀ ಮುನ್ನ ಪೊರೆದಂತೆ ಎನ್ನ 2

ದೇಶದೇಶದಿ ತವಕೀರ್ತಿ ತುಂಬಿ

ಸೂಸಿಪರಿವುದೆಂಬವಾರ್ತಿ

ಲೇಸಾಗಿ ಕೇಳಿ ಬಂದಾಸುಜನರ ಮನ-

ದ್ಹಾಸೆ ಪೂರೈಸು ವಿಶೇಷಫಲವ ನಿತ್ಯ

ಮಾಸರೊಜ ವ್ಯೋಮಕೇಶಾಮರೇಶ ಮುಖರಿಗೆ

ಈಶನೆನಿಸುವ ಶ್ರೀಶಕೇಶವವಿಠಲನದಾಸಾ ತುಂಗಾನಿವಾಸ 3

***