Showing posts with label ತರಣಿ ಶತಕೋಟಿ vijaya vittala ankita suladi ತಿರುವೆಂಗಳೇಶ ಸುಳಾದಿ TARANI SHATAKOTI TIRUVENGALESHA SULADI. Show all posts
Showing posts with label ತರಣಿ ಶತಕೋಟಿ vijaya vittala ankita suladi ತಿರುವೆಂಗಳೇಶ ಸುಳಾದಿ TARANI SHATAKOTI TIRUVENGALESHA SULADI. Show all posts

Monday 9 December 2019

ತರಣಿ ಶತಕೋಟಿ vijaya vittala ankita suladi ತಿರುವೆಂಗಳೇಶ ಸುಳಾದಿ TARANI SHATAKOTI TIRUVENGALESHA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಶ್ರೀ ತಿರುವೆಂಗಳೇಶ ಸುಳಾದಿ 

 ರಾಗ ಶಂಕರಾಭರಣ 

 ಝಂಪೆತಾಳ 

ತರಣಿ ಶತಕೋಟಿ ರುಚಿಗಧಿಕವೆಂದೆನಿಸುವ 
ತಿರುಪತಿವಾಸನ ವರಕಿರೀಟವ ಕಂಡೆ 
ಶಿರದಲ್ಲಿ ಮುಡಿದಿದ್ದ ಪರಿಪರಿಯ ಕುಸುಮಗಳು 
ಅರಳಿ ಪರಿಮಳಿಸುತ್ತ ಹರಿಯುತಿವೆ ದೆಸಿದೆಸಿಗೆ 
ಹರಿಣ ಕುರುಹಿನ ತೆರದಿ ನೊಸಲ ಕಸ್ತೂರಿ ತಿಲುಕ 
ಸರಸಿಜದಳವ ಧಿಕ್ಕರಿಸುವ ನಯನನ ಕಂಡೆ 
ಸ್ಮರನ ಕರದಿಂದ ನ್ಯಾವರಿಸಿದ ಚಾಪವೆನೆ 
ಎರಡು ಪೆರ್ಬುಜ್ಜುಗಳು ತಿರುಹು ತಿಪ್ಪದ ಕಂಡೆ 
ಭರದಿಂದ ತೂಗುವತಿ ಮಕರ ಕುಂಡಲ ಕಾಂತಿ 
ಮಿರಗುತಿರೆ ಗಲ್ಲದಲ್ಲಿ ಸರಳ ನಾಸಿಕ ಕಂಡೆ 
ಎರಡುಸಾಲ್ ಪಂಕ್ತಿದಂತಗಳೆಸಿಯೆ ಕರ್ಪೂರ 
ಕರಡಿಗೆ ಯಂದದಲಿ ವದನ ಎಳೆನಗೆ ಕಂಡೆ 
ಗಿರಿಯ ತಿರುಮಲ ಸಿಂಧು  ವಿಜಯವಿಟ್ಠಲನ್ನ 
ಸುರಿವಧರಾಮೃತ ಕಂಡೆ ಉತ್ಸವದಲ್ಲಿ 
ಕಿರಿ ಬೆವರು ಮೊಗದಲ್ಲಿ ಬರಲು ಮೌಕ್ತಿಕದಂತೆ 
ಶಿರಸ ಮೊಗಪರಿಯಂತೀ ಪರಿಯಲ್ಲಿ ಕಂಡೆನಾ ॥ 1 ॥

 ಮಟ್ಟತಾಳ 

ಕಂಬುಕಂಠ ಕೊರಳ ತ್ರಿರೇಖೆ 
ಕಂಬುಚಕ್ರ ಪಿಡಿದ ಹಸ್ತತಾಮ್ರಮಯದ ಕರತಳ ಕಾಂತೆ 
ಅಂಬುಜನಾಭ ವಿಜಯವಿಟ್ಠಲ 
ಸಂಭ್ರಮದಿಂದ ಪೊಳವದು ಕಂಡೆ 
ಅಂಬುಜನಾಭಾ ರತುನ ಭಾಸಾ ಪೊಳವದು ಕಂಡೆ ॥ 2 ॥

 ರೂಪಕತಾಳ 

ಕಡಗ ಕಂಕಣ ಮೇಲು ಕೈಯ್ಯ ಸರಪಳಿ ಬಳೆ 
ಜಡಿತದುಂಗುರು ಬೆರಳೊಳಗೆ ವಂದೊಂದು 
ನಿಡಿದೋಳು ಬಂದಿ ತಾಯತ ವಂಕಿ ರಂಜಿಸಿ 
ಕೊಡುವ ಮಾಣಿಕ ಹಸ್ತ ಕಟಿಕರ ಶೃಂಗಾರ 
ಪಡಿಗಾಣೆ ನಾನು ಮತ್ತಾವಲ್ಲಿ ಚತುರ್ದಶ 
ಪೊಡಿವೇಶ ಸುಂದರ ವಿಜಯವಿಟ್ಠಲನ 
ಕಡುತೇಜ ವಿಗ್ರಹನ ಬಿಡದೆ ನಾ ಕಂಡೆ ॥ 3 ॥

 ಧ್ರುವತಾಳ 

ಸೋಲು ಮುಡಿಯ ಪೂವ ಸಿರಿದೇವಿಯ ನಿಜ 
ಮಾಲೆ ಕೌಸ್ತುಭಹಾರ ಉರ ವಿಶಾಲನ ಕಂಡೆ 
ತಾಳೆಸರ ಎಳೆದುಳಿಸಿ ಹೀರಹಾರ ಪದಕ 
ಏಳುಸರಿಗೆ ಉದರ ಏಳುಲೋಕವ ಕಂಡೆ 
ಸಾಲತ್ರಿವಳಿ ಡೊಳ್ಳು ಕಿರಿ ಬೊಜ್ಜೆ ಕೆಳನಾಭಿ 
ಮೇಲಾದ ಕಿಂಕಿಣಿ ಕಾಂಚಿದಾಮನ ಕಂಡೆ 
ವೀಲೋಚನಾ ನಾಮ ವಿಜಯವಿಟ್ಠಲ ಭಕ್ತಾ 
ಪಾಲಾಯ ದಯಾಳಿನ ಆಳುವವನ ಕಂಡೆ ॥ 4 ॥

 ತ್ರಿವಿಡಿತಾಳ 

ಪೀತಾಂಬರ ಕಿರಿದೊಡೆ ಜಾನುಜಂಘೆ 
ಜ್ಯೋತಿರ್ಮಯದ ಪೆಂಡೆ ಸರಪಳಿ ಪೊಂಗೆಜ್ಜೆ 
ಜಾತಿವರ್ನದಂದಿಗೆ ದುಷ್ಟದನುಜರ 
ಘಾತಿಸಿದ ಪಾದ ಗಂಗೆ ಪಡದ ಪಾದ 
ಜ್ಯೋತಿ ಗಣೇಶ್ವರ ವಿಜಯವಿಟ್ಠಲ ಪ್ರ -
ಖ್ಯಾತ ಮೂರುತಿಯ ಪ್ರಜ್ಯೋತಿಯ ಕಂಡೆ ॥ 5 ॥

 ಅಟ್ಟತಾಳ 

ಅನಂತ ಜನುಮಕ್ಕೆ ಯಾದಡಂ 
ಮಾನುಷೋತ್ತುಮನಾಗಿ ನೋಡಿದಡಂ 
ಜ್ಞಾನದಲ್ಲಿ ವಮ್ಮೆ ಪಾಡಿದಡಂ 
ಧ್ಯಾನದಲ್ಲಿ ವಮ್ಮೆ ಕೂಡಿದಡಂ 
ಮೌನದಲ್ಲಿ ನಿಂದು ಕರದಡಂ 
ಪಾನ ಚರಣಾಂಬು ಕೊಂಡಾದಡಂ 
ಶ್ರೀ ನೈವೇದ್ಯವ ಮೆದ್ದುದಡಂ 
ಏನು ಕೊಡದಲೆ ನೆನದಡಂ 
ಈ ನಿಧಿಯಲ್ಲೀಗ ಇದ್ದಡಂ 
ಶ್ರೀನಿವಾಸನ ದ್ವಾರ ಕಾದಡಂ 
ಹೀನಭವರೋಗವಾದಡಂ 
ಬೇನೆ ಬಡಿಸುತ್ತಲಿದ್ದಡಂ 
ಆ ನರಗೆ ಪಂಚಪ್ರಾಣವಾಗಿ ಇಪ್ಪ 
ಅನಂತಾತ್ಮ ನಮ್ಮ ವಿಜಯವಿಟ್ಠಲನೀತಾ 
ಕಾಣುತ ಲಪವರ್ಗ ಕೊಡುವನಂ ॥ 6 ॥

 ಆದಿತಾಳ 

ಅಂಬರಾವನ್ನು ಮೀಟಿ ಅಂಬುಜ ಜಾಂಡವನೊಡದು 
ಅಂಬುಜ ಚರಣದಲ್ಲಿ ಅಂಬುವೇಗದಿಂದ ಪಡಿಯೆ 
ಅಂಬುಜ ಸಂಭವ ತೊಳಿಯೆ ಅಂಬಕತ್ರಯನು ಧರಿಸೆ 
ಅಂಬರಾದ್ಯರು ವೊಲಿಸೆ ತುಂಬರಾಧ್ಯರು ತುತಿಸೆ 
ಎಂಬ ಮೂರುತಿ ಇದೆ ನೋಡಿ 
ಅಂಬುಧಿಯೊಳಗೆ ಚರಿಸಿದ ಧರಿಸೀದ 
ಕುಂಭಿಣಿಯ ಅಣುಗನ ಉದ್ಧರಿಸಿದ 
ಕುಂಭಿಣಿಯಳೆದ ನೃಪರನಳಿದ 
ಅಂಬುಧಿ ಮಾರ್ಗವ ಬಿಗಿದು ಪೋದ 
ಅಂಬರ ಪುರಗಳು ಹುತ ರಾವುತ 
ಎಂಬ ದಶಾವತಾರ ನೀತ 
ಸಂಭ್ರಮ ವಿಭುವೆ ವಿಜಯವಿಟ್ಠಲ 
ನಂಬಿದವರಿಗೆ ಗತಿ ಪ್ರದಾತ ॥ 7 ॥

 ಜತೆ 

ವೈಕುಂಠ ಇದೆಯೆಂದು ಮೆರೆವ ತಿರುವೆಂಗಳ 
ವೈಕುಂಠನಾಮ ಸಿರಿ  ವಿಜಯವಿಟ್ಠಲ ವರದಾ ॥
*********