Showing posts with label ಶ್ರೀರಾಮಚಂದ್ರ ಪಂಕೇರುಹ ಚರಣಸುಧಾರಸವ್ರತ ಪೊರೆಯೋ ರಾಘವೇಂದ್ರ tandevenkatesha vittala. Show all posts
Showing posts with label ಶ್ರೀರಾಮಚಂದ್ರ ಪಂಕೇರುಹ ಚರಣಸುಧಾರಸವ್ರತ ಪೊರೆಯೋ ರಾಘವೇಂದ್ರ tandevenkatesha vittala. Show all posts

Monday 6 September 2021

ಶ್ರೀರಾಮಚಂದ್ರ ಪಂಕೇರುಹ ಚರಣಸುಧಾರಸವ್ರತ ಪೊರೆಯೋ ರಾಘವೇಂದ್ರ ankita tandevenkatesha vittala

 ankita ತಂದೆವೆಂಕಟೇಶವಿಠಲ

ರಾಗ: ಶಹನ/ಅಠಾಣ ತಾಳ: ಆದಿ


ಶ್ರೀ ರಾಮಚಂದ್ರಪಂಕೇರುಹಚರಣಸು-

ಧಾರಸವ್ರತ ಪೊರೆಯೋ ರಾಘವೇಂದ್ರ


ಕೋರೀದವರ ಮನಸಾರೇ ಬೀರುವ ಬುಧ

ತಾರಾಪರಿವೃತ ಪರಮೋದಾರೇಂದು ಗುಣಸಿಂಧು ಅ.ಪ


ಕುಂಭಕೋಣದಿ ಶ್ರೋತ್ರೀಯಾಂಬರದಿನಮಣಿ ಎಂಬುವತೆರನುದಿಸೀ 

ಇಂಬು ವೈಣಿಕ ಶಾಸ್ತ್ರಾಂಭೋನಿಧಿಗೆ ಚಂದ್ರಬಿಂಬದವೊಲು ರಾಜಿಸೀ

ಅಂಬುಜೋದ್ಭವಪಿತ ನಾನೆಂಬ ದುಸ್ತಾರ್ಕಿಕ

ರಂಭಾಟವಿಗೆ ಮತ್ತ ಕುಂಭಿ ಎಂದೆನಿಸಿದ 1

ಆಶುಗಮನಮತ ಭೂಸುರಮಕುಟ ಪ್ರಕಾಶ ವಿದ್ಯನ್ಮಣಿಯೆ 

ಶ್ರೀ ಸುಧೀಂದ್ರಾರ್ಯವಿದ್ಯಾಸಾಮ್ರಾಜ್ಯಸಿಂಹಾಸಾದಿಷ್ಟಿತಮುನಿಯೇ 

ವ್ಯಾಸಬಾಹ್ಲೀಕ ವಿಭೀಷಣ ಪ್ರಹ್ಲಾದ

ಲೇಸು ರೂಪದ ಮಂತ್ರಾವಾಸನಿಕೇತನ 2

ವಾತಾಗಮಾಬ್ಜ ಪ್ರದ್ಯೋತ ಸದ್ಗ್ರಂಥ ಪ್ರಣೀತ ಪರಿಣತ ಪೂಜ್ಯನೇ 

ಭೂತಳದೊಳಗೆ ಅಭೂತಪೂರ್ವಮಹಿಮಾತಿಶಯ ವಿರಾಜನೇ

ಪಾತಕಹರ ತಂದೆವೆಂಕಟೇಶವಿಠಲನ್ನ

ಪ್ರೀತ್ಯಾಸ್ಪದನೆ ಎನ್ನ ಮಾತ ಲಾಲಿಸಿ ಕಾಯೋ 3

***

ಪರಿವೃತ=ಸುತ್ತುವರಿದ; ರಂಭಾಟವಿ=ಬಾಳೆಯ ಮರದ ಅಡವಿ; 

ಮತ್ತ ಕುಂಭ=ಮದಿಸಿದ ಆನೆ; ವಾತಾಗಮಾಬ್ಜ 

ಪ್ರದ್ಯೋತ=ವಾಯುದೇವರ ಮತವೆಂಬ ಕಮಲಕ್ಕೆ 

ಸೂರ್ಯನಂತೆ; ಪ್ರಣೀತ=ರಚಿತ;