Showing posts with label ರಾಘವೇಂದ್ರ ಮಹಾನುರಾಗದಲಿ ಪೊರೆ ಸತತ tandevenkatesha vittala. Show all posts
Showing posts with label ರಾಘವೇಂದ್ರ ಮಹಾನುರಾಗದಲಿ ಪೊರೆ ಸತತ tandevenkatesha vittala. Show all posts

Monday 6 September 2021

ರಾಘವೇಂದ್ರ ಮಹಾನುರಾಗದಲಿ ಪೊರೆ ಸತತ ankita tandevenkatesha vittala

 ankita ತಂದೆವೆಂಕಟೇಶವಿಠಲ

ರಾಗ: ಶ್ರೀರಂಜಿನಿ ತಾಳ: ಝಂಪೆ


ರಾಘವೇಂದ್ರ ಮಹಾನುರಾಗದಲಿ ಪೊರೆ ಸತತ

ಬಾಗಿ ನಮಿಸುವೆನಯ್ಯ ಪಿಡಿ ಎನ್ನ ಕೈಯ್ಯ


ಯೋಗೀಂದ್ರ ತ್ವಚ್ಚರಣಪರಾಗಮಧುಕರನೆನಿಸಿ

ಬೇಗ ಸೂಚಿಸೊ ಹಾದಿ ವಿತತದಯವನಧೀ ಅ.ಪ


ನಾವಿಕನ ಬಿಟ್ಟು ವಿಕರ್ಮಕಾವಳದಿ ನೆಲೆಗಾಣ-

ದವಿರತಾಶ್ರುಗಳಿಂದ ವಿವಿಧ ಭಯದಿ

ಕವಿವ ದುಷ್ಟಷಡೂರ್ಮಿ ಭವಜಲಧಿತೆರೆಗಳೊಳು 

ಬವಣೆ ಪಡುವುದನರಿಯ ದಯಾದ್ರ್ರಹೃದಯ 1

ದಣಿದಣಿದು ಕಂಡವರ್ಗೆ ಮಣಿದು ಮೂರ್ಖತೆಯಿಂದ

ಕ್ಷಣದೊಳಣುಗಾಲ ಹರಿ ಗುಣ ವಿವೇಚಿಸದೆ

ಉಣುವ ದುಷ್ಪಲಗಳಿಗೆ ಎಣೆಗಾಣದಾದೆ ನಿ-

ನ್ನಣುಗನೆಂದೆನ್ನ ಪೊರೆ ಪ್ರಣತಾರ್ತಿ ಹರನೇ 2

ಅಕುಟಿಲರ ದೈವ ತಂದೆವೆಂಕಟೇಶವಿಠಲ ಸಾ-

ತ್ವಿಕರ ಸಲಹಲ್ಕೆ ನಿನ್ನೊಳಿರುತಿರಲೂ

ಸುಖದಾಸೆಯಿಂದಹಿಕ ನಿಕರದಲಿ ಮೈಮರೆದು

ಪ್ರಕಟಭವನಾಟಕದಿ ವಿಕಟನಾದೆ 3

***

ಕಾವಳ=ಕತ್ತಲೆ; ಅವಿರತಾಶ್ರು=ನಿಲ್ಲದ ಕಣ್ಣೀರು; 

ಷಡೂರ್ಮಿ=ಆರುತೆರೆಗಳು-ಹಸಿವು, ನೀರಡಿಕೆ, ಶೋಕ, 

ಮೋಹ, ವಾರ್ಧಕ್ಯ, ಮರಣ; ದಯಾರ್ದ=ದಯೆಯಿಂದ 

ತೋಯಿದ (ಒದ್ದೆಯಾದ); ನಿನ್ನಣುಗ=ನಿನ್ನಮಗ-ಭಕ್ತ; 

ಪ್ರಣತಾರ್ಥಿಹರ=ಶರಣಾಗತರಾದವರ ಕಷ್ಟ ನಿವಾರಕ; 

ಅಕುಟಿಲ=ದೋಷವಿಲ್ಲದವ; ವಿಕಟ=ಹಾಸ್ಯಗಾರ-ಛಿಟoತಿಟಿ;