Showing posts with label ಸ್ಮರಿಸಿ ತೀರ್ಥಕ್ಷೇತ್ರ ವಾರ್ಧಕ ಷಟ್ಪದಿ ankita jagannatha vittala SMARISI TEERTHA KSHETRA VAARDHAKA SHATPADI. Show all posts
Showing posts with label ಸ್ಮರಿಸಿ ತೀರ್ಥಕ್ಷೇತ್ರ ವಾರ್ಧಕ ಷಟ್ಪದಿ ankita jagannatha vittala SMARISI TEERTHA KSHETRA VAARDHAKA SHATPADI. Show all posts

Friday 27 December 2019

ಸ್ಮರಿಸಿ ತೀರ್ಥಕ್ಷೇತ್ರ ವಾರ್ಧಕ ಷಟ್ಪದಿ ankita jagannatha vittala SMARISI TEERTHA KSHETRA VAARDHAKA SHATPADI


  Audio by Vidwan Sumukh Moudgalya


ಶ್ರೀ ಜಗನ್ನಾಥದಾಸಾರ್ಯ ವಿರಚಿತ  ತೀರ್ಥಾಕ್ಷೇತ್ರ ಸ್ಮರಣೆಯ ಪದ 

 " ವಾರ್ಧಕ ಷಟ್ಪದಿ "
(ಜಗನ್ನಾಥದಾಸರ ಈ ಕೃತಿಯು ಭರತಖಂಡದ ಪ್ರಮುಖ ತೀರ್ಥ ಕ್ಷೇತ್ರಗಳ ಪಟ್ಟಿಯಾಗಿದೆ)

 ರಾಗ : ಸಾರಮತಿ 

ಸ್ಮರಿಸಿ ತೀರ್ಥಕ್ಷೇತ್ರ ಸಜ್ಜನರು ನಿರುತದಲಿ
ಅರಣೋದಯದಲೆದ್ದು ಭಕ್ತಿಪೂರ್ವಕವಾಗಿ ॥ಪ॥

ಕರಣಣಶ್ರಮದಿ ಮಾಳ್ಪ ಪಾಪರಾಶಿಗಳ ಪರಿಹರಿಸಿ ಹರಿ ಸಂತೈಸುವಾ
॥ಅ.ಪ॥

ಭಾಗೀರಥಿ ಸರಸ್ವತಿ ಯಮುನಾ ವಾರಾಣಾ
ಸೀ ಗೋದ ಫಲ್ಗುಣಿ ಶೋಣಭದ್ರಾ ನರ್ಮ
ದಾ ಗಂಡಕಿ ಭಿಮರಥಿ ತುಂಗಭದ್ರೆ ಪ್ರಯಾಗ ತ್ರಿವೇಣಿ ಹೇಮಾ
ವೇಗವತಿ ಗಾಯತ್ರೀ ಕೌಶಿಕೀ ಮಣಿಕರಣೀ
ಕಾ ಗೌತಮಿ ವಿಯದ್ಗಂಗಾ ಕುಮದ್ವತೀ
ಕಾಗಿನೀ ವೇತ್ರವತಿ ನೇತ್ರವತಿ ಹೈಮವತಿ ಸಿಂಧು ಪಾಪಾಘನಾಶಿ॥೧॥

ಸರಯು ಜಯಮಂಗಳ ಜಮದಗ್ನಿ ವರತಾಮ್ರ
ಪರಣಿ ಯೋಗಾನಂದ ಕೃತಮಾಲ ಕುಹು ಮಹೇ
ಶ್ವರಿ ಶಂಖ ಚಕ್ರವತಿ ಭವನಾಶಿನಿ ಗದಾಧರ ಮೇನಕಾ ಸುನಾಸೀ
 ಗರುಡ ಮದಿರಾಮರುದ್ವತಿ ಸ್ವರ್ಣಮುಖರಿ ವಂ
 ಝರ ತಾಪಿನೀ ಕಾಳಿ ಸೌಪರಣಿ ದಕ್ಷಿಣೋ
ತ್ತರ ಪಿನಾಕಿನಿ ಕಪಿಲ ಸೀತಾಲಕಾನಂದ ತುರಗಮುಖಿ ಪ್ರಣವಸಿದ್ಧ
॥೨॥

ಕಾವೇರಿ ಸಿಂಧು ಮಾಲಿನೀ ಗಾರ್ಗಿಣೀ ಹರಿ
ದ್ರವತಿ ಇಂದ್ರಾಣಿ ಕುಂದ ಕುಂದಿನಿ ಶೈವ
ದೇವತತಿ ಪಾತಾಳ ಗಂಗಾ ಪುನಃ ಪುನಃ ನೀರಾ ಕುಮಾರಧಾರೀ
ಧಾವಿತ್ರಿ ಧಾನ್ಯಮಾಲಾ ಪುಷ್ಪವತಿ ಲೋಕ
ಪಾವನಿ ಮೌಳಿ ಮೌಕ್ತಿಕ ಸಿಂಧು ಧರ್ಮಕು
ಶಾವರ್ತಿನೀ ಚಕ್ರತೀರ್ಥ ಭವನಾಶಿನಿ ವರದಾ ಮಲಾಪಹಾರಿ॥೩॥

ಸ್ವಾಮಿ ಪುಷ್ಕರಣಿ ಮಾನಸ ಚಂದ್ರ ಪುಷ್ಕರಣಿ
ಭೂಮಂಡಲದೊಳುತ್ತಮ ತ್ರಿಪುಷ್ಕರಣಿ
ಶ್ರೀ ಮಧ್ವ ನಿತ್ಯ ಪುಷ್ಕರಣಿ ಸೀತಾ ಪದ್ಮಸರ ಚಂದ್ರಭಾಗತೀರ್ಥ
ವಾಮನ ಮಯೂರ ಪಂಪಾಸರೋವರ ಪುಣ್ಯ
ಧಾಮ ವ್ಯಾಸ ಸಮುದ್ರ ಧವಳಗಂಗಾ ಸುಸಾ
ಧ್ಯಮೃತ ಸಮುದ್ರ ಗುರು ಭೀಮಸೇನತಟಾಕ ರೋಮಹರ್ಷತೀರ್ಥ
॥೪॥

ದ್ವಾರಕಾನಗರ ಸಾಲಗ್ರಾಮ ಬದರಿ ನರ
 ನಾರಾಯಣಾಶ್ರಮ  ಜಗನ್ನಾಥ ಶ್ರೀ ಮುಷ್ಣ
ಮೇರು ಪಾಶ್ರ್ವ ಮಂದರ ಸುಪಾಶ್ರ್ವಮೈನಾಕ ಕೈಲಾಸ ಕಂಚಿ
ಶ್ರೀರಂಗನಾಥ ನೈಮಿಷ ದ್ವೈತ ಚಂಪಕಾ
ಅರಣ್ಯ ಕಾಶಿ ಪಂಪಾವಂತಿಕಾಪುರೀ
ಗೌರಿ ಮಯೂರ ಸಿಂಹಾದ್ರಿ ಪಾಟಲ ಹರಿದ್ವಾರ ಛಾಯಾ ಪಿಪ್ಪಲ ॥೫॥

ಕೇದಾರ ಸಗರ ಮಂದಾಕಿನಿ ಕುಸುಮವತಿ
ಸ್ವಾದಿ ಸುಬ್ರಹ್ಮಣ್ಯ ಕೋಟೇಶ್ವರ ನಂದಿ
ಪಾದ ಕ್ರೌಂಚಾದ್ರಿ ಮಹಾನಂದಿ ಶಂಕರ ನಾಮ ನಾರಯಣ ನಿವರ್ತಿ
ವೇದಪಾದ ಯಯಾತಿ ಗಿರಿ ಕಾಲಹಸ್ತಿ ಕೌ
ಮೋದಕೀ ಪಾಡುರಂಗ ಕ್ಷೇತ್ರ ಶ್ರೀ ವಿಷ್ಣು
ಪಾದ ಗಯಾ ಕಾಳೀಶ್ವರೀ ಹಸ್ತಿನಾಪುರಿ ಪಾಟಲಿ ಮಂತ್ರಾಲಯ॥೬॥

ಗೋವರ್ಧನಾದ್ರಿ ಮೈನಾಕ ಮಂದರ ಮಲಯ
ಕೈವಲ್ಯನಾಥ ಕಾಶ್ಮೀರ ಜಾಂಬವತಿ ವೃಂ
ದಾವನ ಧನುಷ್ಕೋಟಿ ವಾತಾಪುರಿ ಕನ್ಯಾಕುಮಾರಿ ಶ್ವೇತಾದ್ರಿ ವೃಷಭಾ
ಶ್ರೀ ವಿರೂಪಾಕ್ಷ ಕುಂದರ ನಂದಪುರಿ ಮಾಯಾ
ಶ್ರೀವತ್ಸ ಗಂಧಮಾದನ ಚಿತ್ರಕೂಟ ದ್ವಾ
ರಾವತಿ ವ್ಲಾಘ್ರಪುರಿ ಗೋಕುಲ ನಾರಾಚ ಸೌಭರೀ ಆದಿನಾಥ॥೭॥

ಈ ಮಹೀಮಂಡಲದೊಳಿಪ್ಪ ತೀರ್ಥಕ್ಷೇತ್ರ
ನಾಮಗಳ ಕಾಲತ್ರಯದಲ್ಲಿ ಸ್ಮರಿಸುತಿಹ
ಧೀಮಂತರಾಗಾಮಿ ಸಂಚಿತಾಫೌಘ ಪರಿಹರಿಸಿದಾನಂತರದಲಿ
ಸೋಮಾರ್ಕರುಳ್ಳನಕ ವಿವಿಧ ಭೋಗಗಳ ಸು
ತ್ರಾಮಲೊಕದೊಳುಣಿಸಿ ಕರುಣಾಳು ಪ್ರಾಂತಕೆ ಸ್ವ
ಧಾಮವೈದಿಸಿ ಮುಕ್ತರನ ಮಾಳ್ಪನಹುದೆಂದು ಸೂತ ಶೌನಕಗೆ ಪೇಳ್ದ
॥೮॥

ಈ ಭರತ ಖಂಡದೊಳಗುಳ್ಳ ತೀರ್ಥಕ್ಷೇತ್ರ
ವೈಭವಾಬ್ಜ ಭವಾಂಡ ಪೌರಾಣದೊಳಗೆ  ಹರಿ
ನಾಭಿ ಸಂಭವಗೆ ಪೇಳ್ದ ನಾರದನಿಗಿನಿತೆಂದು ಪರಮಕಾರುಣ್ಯದಿಂದ
ಸ್ತ್ರೀಬಾಲ ಗೋ ವಿಪ್ರ ಮಾತ ಪಿತೃಗಳ ಧನ
ಲೋಭದಿಂದಲಿ ಕೊಂದ ಪಾತಕವ ಪರಿಹರಿಸಿ
ಶ್ರೀಭೂರಮಣ ಜಗನ್ನಾಥವಿಠ್ಠಲ ಪೊರೆವ ಬೇಡಿದಿಷ್ಟಾರ್ಥವಿತ್ತು
॥೯॥
***


smarisi tIrthakShEtra sajjanaru nityadali
araNOdayadaleddu BaktipUrvakavAgi
kaThiNaSramadi mALpa pAparASigaLa pariharisutta santyesuvA ||pa||

BAgIrathi sarasvati yamunA vArANA
SrI gOda PalguNi SONaBadrA narma
dA ganDaki Bimarathi tuNgaBadre prayAga trivENi hEmA
vEgavati gAyatrI kASimaNikarNi
kA gautami viyadgaNgA kumudvatI
kAginI nEtrAvati haima siNdhu pApAGanASinI ||1||

sarayu jayamaNgaLa jamadagni varatAmra
paraNi yOgAnaNda kRutamAlakuhu mahE
Svari SaNKa cakravati BavanASini gadAdhara mEnakA
dhunASi garuDa madirA
marudvati svarNamuKari vara JaratApini kALi sau
paraNi dakShiNOttarapinAki kapila SItaLa kAnaMda
kuramuKi praNavasiddha||2||

kAvEri sidhu mAlati gArgiNi hari
dravati iNdrANi kuMda kuNdini Saiva
dEvavati pAtALa gaNgA punaha nIrA kumAradhArA
sAvitri dAnyamAlA puShpavati lOka
pAvani mauLi mauktika siNdhu dharmaku
SAvaNtini cakratIrtha Bava nASini
varadA malApahAri ||3||

svAmi puShkaraNi mAnasa caNdra puShkaraNi
BUmaNDaladoLuttamOttama tripuShkaraNi
SrI madhva nitya puShkaraNi sItA
padmasara caNdraBAgatIrtha
vAmana mayUra paMpAsarOvara puNya
dhAma vyAsa samudra dhavaLagaMgA susA
dhyamRuta samudra guru BImasEnataTAka
rOmaharShatIrtha ||4||

dvArakAnagara sAlagrAma Tarara badari kE
dAra naranArAyaNa SrI majjagannAtha SrI muShNa
mEru pASrva maNdara supASrva
mainAka kailAsa kaNci
SrIraNganAtha naimiSha dvaitavana caMpa
kAruNya kASi paMpAvaNtikA puri
gauri mayUra siMhAdri pATala
haridvAra CAyApippala ||5||

kEdAra sAgara maNdAkini kusumavati
AdisubrahmaNya kOTESvara naNdi
pAda krauMcAdri mahAnaMdi SaNkara nAma
nArayaNa nivarti
vEdapAda yayAti giri kAlahasti kau
mOdakI pADuraNga kShEtra SrI viShNu
pAda gayA kALESvarI hastanApuri
pATalI maMtrAlaya||6||

gOvardhanAdri mainAka maNdara malaya
kaivalyanAtha kASIra jAMbavati vRuN
dAvana dhanuShkOTi vAtApuri
kanyAkuvari kailAdri vRuShaBA
SrI virUpAkSha kuNdara naMdapuri mAyA
SrIvatsa gaMdhamAdana citrakUTa dvA
rAvati vlAGrapurigOkula
narAcalAsauBadri AdinAtha ||7||

I mahimaNDaladoLippa tIrthakShEtra
nAmagaLa kAlatrayadalli sarisutiha
dhImaMtarige saNcitApa pariharadAnaNtaradali
sOmArkaruLanaka sakala BOgagaLa su
trAmalokada luNisi karuNALu prAtyake sva
dhAma muktara mALpanu ahudu
ahudeMdu sUta SaunakaNe pELda||8||

I Barata KaNDadoLaguLLa tIrthakShEtra
vaiBavAbja BavANDa pAranadoLage hari
nABi saMBava pELda nAradanigisiteNdu
paramakAruNa diNda
strIbAla gOvipramAta pitRugaLa dhana
lOBadiNdalikoNda pAtakava pariharisi
SrIBUramaNa jagannAtha viThThala koDuva
bEDidiShTArthagaLanu ||9||
***

ಸ್ಮರಿಸಿ ತೀರ್ಥಕ್ಷೇತ್ರ ಸಜ್ಜನರು ನಿತ್ಯದಲಿ
ಅರಣೋದಯದಲೆದ್ದು ಭಕ್ತಿಪೂರ್ವಕವಾಗಿ
ಕಠಿಣಶ್ರಮದಿ ಮಾಳ್ಪ ಪಾಪರಾಶಿಗಳ ಪರಿಹರಿಸುತ್ತ ಸಂತ್ಯೆಸುವಾ ||pa||

ಭಾಗೀರಥಿ ಸರಸ್ವತಿ ಯಮುನಾ ವಾರಾಣಾ
ಶ್ರೀ ಗೋದ ಫಲ್ಗುಣಿ ಶೋಣಭದ್ರಾ ನರ್ಮ
ದಾ ಗಂಡಕಿ ಭಿಮರಥಿ ತುಂಗಭದ್ರೆ ಪ್ರಯಾಗ ತ್ರಿವೇಣಿ ಹೇಮಾ
ವೇಗವತಿ ಗಾಯತ್ರೀ ಕಾಶಿಮಣಿಕರ್ಣಿ
ಕಾ ಗೌತಮಿ ವಿಯದ್ಗಂಗಾ ಕುಮುದ್ವತೀ
ಕಾಗಿನೀ ನೇತ್ರಾವತಿ ಹೈಮ ಸಿಂಧು ಪಾಪಾಘನಾಶಿನೀ ||1||

ಸರಯು ಜಯಮಂಗಳ ಜಮದಗ್ನಿ ವರತಾಮ್ರ
ಪರಣಿ ಯೋಗಾನಂದ ಕೃತಮಾಲಕುಹು ಮಹೇ
ಶ್ವರಿ ಶಂಖ ಚಕ್ರವತಿ ಭವನಾಶಿನಿ ಗದಾಧರ ಮೇನಕಾ
ಧುನಾಶಿ ಗರುಡ ಮದಿರಾ
ಮರುದ್ವತಿ ಸ್ವರ್ಣಮುಖರಿ ವರ ಝರತಾಪಿನಿ ಕಾಳಿ ಸೌ
ಪರಣಿ ದಕ್ಷಿಣೋತ್ತರಪಿನಾಕಿ ಕಪಿಲ ಶೀತಳ ಕಾನಂದ
ಕುರಮುಖಿ ಪ್ರಣವಸಿದ್ಧ||2||

ಕಾವೇರಿ ಸಿಧು ಮಾಲತಿ ಗಾರ್ಗಿಣಿ ಹರಿ
ದ್ರವತಿ ಇಂದ್ರಾಣಿ ಕುಂದ ಕುಂದಿನಿ ಶೈವ
ದೇವವತಿ ಪಾತಾಳ ಗಂಗಾ ಪುನಹ ನೀರಾ ಕುಮಾರಧಾರಾ
ಸಾವಿತ್ರಿ ದಾನ್ಯಮಾಲಾ ಪುಷ್ಪವತಿ ಲೋಕ
ಪಾವನಿ ಮೌಳಿ ಮೌಕ್ತಿಕ ಸಿಂಧು ಧರ್ಮಕು
ಶಾವಂತಿನಿ ಚಕ್ರತೀರ್ಥ ಭವ ನಾಶಿನಿ
ವರದಾ ಮಲಾಪಹಾರಿ ||3||

ಸ್ವಾಮಿ ಪುಷ್ಕರಣಿ ಮಾನಸ ಚಂದ್ರ ಪುಷ್ಕರಣಿ
ಭೂಮಂಡಲದೊಳುತ್ತಮೋತ್ತಮ ತ್ರಿಪುಷ್ಕರಣಿ
ಶ್ರೀ ಮಧ್ವ ನಿತ್ಯ ಪುಷ್ಕರಣಿ ಸೀತಾ
ಪದ್ಮಸರ ಚಂದ್ರಭಾಗತೀರ್ಥ
ವಾಮನ ಮಯೂರ ಪಂಪಾಸರೋವರ ಪುಣ್ಯ
ಧಾಮ ವ್ಯಾಸ ಸಮುದ್ರ ಧವಳಗಂಗಾ ಸುಸಾ
ಧ್ಯಮೃತ ಸಮುದ್ರ ಗುರು ಭೀಮಸೇನತಟಾಕ
ರೋಮಹರ್ಷತೀರ್ಥ ||4||

ದ್ವಾರಕಾನಗರ ಸಾಲಗ್ರಾಮ ಟರರ ಬದರಿ ಕೇ
ದಾರ ನರನಾರಾಯಣ ಶ್ರೀ ಮಜ್ಜಗನ್ನಾಥ ಶ್ರೀ ಮುಷ್ಣ
ಮೇರು ಪಾಶ್ರ್ವ ಮಂದರ ಸುಪಾಶ್ರ್ವ
ಮೈನಾಕ ಕೈಲಾಸ ಕಂಚಿ
ಶ್ರೀರಂಗನಾಥ ನೈಮಿಷ ದ್ವೈತವನ ಚಂಪ
ಕಾರುಣ್ಯ ಕಾಶಿ ಪಂಪಾವಂತಿಕಾ ಪುರಿ
ಗೌರಿ ಮಯೂರ ಸಿಂಹಾದ್ರಿ ಪಾಟಲ
ಹರಿದ್ವಾರ ಛಾಯಾಪಿಪ್ಪಲ ||5||

ಕೇದಾರ ಸಾಗರ ಮಂದಾಕಿನಿ ಕುಸುಮವತಿ
ಆದಿಸುಬ್ರಹ್ಮಣ್ಯ ಕೋಟೇಶ್ವರ ನಂದಿ
ಪಾದ ಕ್ರೌಂಚಾದ್ರಿ ಮಹಾನಂದಿ ಶಂಕರ ನಾಮ
ನಾರಯಣ ನಿವರ್ತಿ
ವೇದಪಾದ ಯಯಾತಿ ಗಿರಿ ಕಾಲಹಸ್ತಿ ಕೌ
ಮೋದಕೀ ಪಾಡುರಂಗ ಕ್ಷೇತ್ರ ಶ್ರೀ ವಿಷ್ಣು
ಪಾದ ಗಯಾ ಕಾಳೇಶ್ವರೀ ಹಸ್ತನಾಪುರಿ
ಪಾಟಲೀ ಮಂತ್ರಾಲಯ||6||

ಗೋವರ್ಧನಾದ್ರಿ ಮೈನಾಕ ಮಂದರ ಮಲಯ
ಕೈವಲ್ಯನಾಥ ಕಾಶೀರ ಜಾಂಬವತಿ ವೃಂ
ದಾವನ ಧನುಷ್ಕೋಟಿ ವಾತಾಪುರಿ
ಕನ್ಯಾಕುವರಿ ಕೈಲಾದ್ರಿ ವೃಷಭಾ
ಶ್ರೀ ವಿರೂಪಾಕ್ಷ ಕುಂದರ ನಂದಪುರಿ ಮಾಯಾ
ಶ್ರೀವತ್ಸ ಗಂಧಮಾದನ ಚಿತ್ರಕೂಟ ದ್ವಾ
ರಾವತಿ ವ್ಲಾಘ್ರಪುರಿಗೋಕುಲ
ನರಾಚಲಾಸೌಭದ್ರಿ ಆದಿನಾಥ ||7||

ಈ ಮಹಿಮಂಡಲದೊಳಿಪ್ಪ ತೀರ್ಥಕ್ಷೇತ್ರ
ನಾಮಗಳ ಕಾಲತ್ರಯದಲ್ಲಿ ಸರಿಸುತಿಹ
ಧೀಮಂತರಿಗೆ ಸಂಚಿತಾಪ ಪರಿಹರದಾನಂತರದಲಿ
ಸೋಮಾರ್ಕರುಳನಕ ಸಕಲ ಭೋಗಗಳ ಸು
ತ್ರಾಮಲೊಕದ ಲುಣಿಸಿ ಕರುಣಾಳು ಪ್ರಾತ್ಯಕೆ ಸ್ವ
ಧಾಮ ಮುಕ್ತರ ಮಾಳ್ಪನು ಅಹುದು
ಅಹುದೆಂದು ಸೂತ ಶೌನಕಣೆ ಪೇಳ್ದ||8||

ಈ ಭರತ ಖಂಡದೊಳಗುಳ್ಳ ತೀರ್ಥಕ್ಷೇತ್ರ
ವೈಭವಾಬ್ಜ ಭವಾಂಡ ಪಾರನದೊಳಗೆ ಹರಿ
ನಾಭಿ ಸಂಭವ ಪೇಳ್ದ ನಾರದನಿಗಿಸಿತೆಂದು
ಪರಮಕಾರುಣ ದಿಂದ
ಸ್ತ್ರೀಬಾಲ ಗೋವಿಪ್ರಮಾತ ಪಿತೃಗಳ ಧನ
ಲೋಭದಿಂದಲಿಕೊಂದ ಪಾತಕವ ಪರಿಹರಿಸಿ
ಶ್ರೀಭೂರಮಣ ಜಗನ್ನಾಥ ವಿಠ್ಠಲ ಕೊಡುವ
ಬೇಡಿದಿಷ್ಟಾರ್ಥಗಳನು ||9||
*******