Showing posts with label ಹರನೇ ನೀ ಎನ್ನ ಪಾಲಿಸು ಜೀಯಾ indiresha HARANE NEE ENNA PAALISU. Show all posts
Showing posts with label ಹರನೇ ನೀ ಎನ್ನ ಪಾಲಿಸು ಜೀಯಾ indiresha HARANE NEE ENNA PAALISU. Show all posts

Friday 1 October 2021

ಹರನೇ ನೀ ಎನ್ನ ಪಾಲಿಸು ಜೀಯಾ ankita indiresha HARANE NEE ENNA PAALISU


Audio by Vidwan Sumukh Moudgalya

 ತಿರುಪತಿ ಶ್ರೀ ಪಾಂಡುರಂಗಿ ಹುಚ್ಚಾಚಾರ್ಯ ವಿರಚಿತ ( ಇಂದಿರೇಶಾಂಕಿತ )



 ಶ್ರೀ ಮಹದೇವರ ಸ್ತುತಿ ಪದ



 ರಾಗ : ರೀತಿಗೌಳ   ಆದಿತಾಳ



ಹರನೇ ನೀ ಎನ್ನ ಪಾಲಿಸು ಜೀಯಾ, ಸುರವರ ಗುಣಗೇಯ॥ಪ॥



ತುಂಗೆ ಕುಮುದೆಯರ ಮಧ್ಯದಲ್ಲಿ, ಸಂಗಮಸ್ಥಳದಲ್ಲಿ, ರಂಗನಂಘ್ರಿಗಳ ಸುಧ್ಯಾನದಲ್ಲಿ,

ಅಂಗಜರಿಪುಭವ, ಸಂಗ ಬಿಡಿಸು ಸತ್ಸಂಗದಿ ಭಾವಿಪನ್ನಂಗ ಪಾದಾರ್ಹ॥೧॥



ಮಾನಸಪತಿಯೆ ನಿನ್ನನು ತುತಿಪೆ,ಸಂತತ ನಾ ನಮಿಪೆ, ಶ್ರೀನಿವಾಸನ ಮಹಿಮೆ ಕಲಾಪೆ,

ಆನನ ನುಡಿವಂತೆ ನೀ ಮಾಡಿಸು ಹರ,ಏನು ಹೆಚ್ಚಿನ ಸುಖ ನಾನು ಬೇಡುವೆನೆ॥೨॥



ಅಂಧಕಾಸುರನ ಜಯಿಸಿದ ಧೀರ, ದುರಿತಾಬ್ಧ ಸಮೀರ,ವಂದಾರು ಜನರ ಕಾಮಿತಪೂರ,

ಬಂದು ಕೊಡುವ ಭವ, ಮಂದಾಕಿನಿಧರ ಇಂದಿರೇಶನು ವಲಿದಂದದಿ ಮಾಡೋ॥೩॥


*****