Showing posts with label ವಾದಿರಾಜ ಗುರು ನಿಮ್ಮಡಿಗೆರಗುವೆ ಸಾದರದಿಂದಲಿ krishnavittala. Show all posts
Showing posts with label ವಾದಿರಾಜ ಗುರು ನಿಮ್ಮಡಿಗೆರಗುವೆ ಸಾದರದಿಂದಲಿ krishnavittala. Show all posts

Monday 2 August 2021

ವಾದಿರಾಜ ಗುರು ನಿಮ್ಮಡಿಗೆರಗುವೆ ಸಾದರದಿಂದಲಿ ankita krishnavittala

ವಾದಿರಾಜಗುರು ನಿಮ್ಮಡಿಗೆರಗುವೆ

ಸಾದರದಿಂದಲಿ ಮಂದನ ಕೈಪಿಡಿಯೋ ಪ


ಸಾಧುಜನಾಶ್ರಯ ಮೇದಿನೀಸುರತರು

ಪಾದವಪಿಡಿದಿಹೆ ಬೋಧಿಸು ವಿe್ಞÁನ ಅ.ಪ.


ಕಾದಿಡೆ ಸುಜನಕೆ ಮಧ್ವಾಗಮನಿಧಿ

ಸಾದರದುದಿಸಿದಿ ಬುಧಜನಕುಲಮೌಳಿ

ಬೂದಿಯ ಮಾಡುತ ದುರ್ಮತಜಾಲವ

ಮಾಧವ ಮಧ್ವರ ಸೇವೆಯ ಸಲ್ಲಿಸಿದೇ 1

ಕವಿತಾವನಿತೆಯ ಕುಣಿಸುತ ಶಾಸ್ತ್ರವ

ನವವಿಧ ರಸದಿಂ ಪೇಳಿದೆ ಶಿಷ್ಯರಿಗೆ

ಭುವಿಯಲಿ ಮೆರೆದೆಯೋ ಮಧ್ವಾನುಜ ತೆರ

ಪವನ ಮತಾಬ್ಧಿಯ ಸೋಮನೆ ಶರಣೆಂಬೆ2

ರಿಕ್ತಬ್ರಹ್ಮನ ಭಕ್ತರ ನೊಲ್ಲನು

ಯುಕ್ತಿಗಳೆಂಬುವ ಮಲ್ಲಿಗೆ ಪಟ್ಟಲಿ

ಶಕ್ತಯತೀಂದ್ರನೆ ಅಡಗಿಸಿ ಸರ್ವೋ-

ದ್ರಿಕ್ತನ ಗುಣಗಣ ಸಾಧಿಸಿ ನೀ ಮರೆದೇ3

ತೀರ್ಥಕ್ಷೇತ್ರವ ಪಾವನಗೈಯ್ಯಲು

ಸುತ್ತುತನೀಡಿದೆ ತೀರ್ಥಪ್ರಬಂಧವನೂ

ಪಾರ್ಥಿವ ಮೊರೆಯಿಡೆ ಅಕ್ಷತೆನೀಡುತ

ಶತ್ರುಗಳಳಿಸುತ ಪೊರೆದೆಯೊ ಕರುಣಾಳು4

ಅರವತ್ನಾಲ್ಕು ಕಲಾಜ್ಞನೆ ಗುಣನಿಧಿ

ಸುರಗಣಗಚ್ಚಿರಿಯೇ ಸರಿ ತವ ಮಹಿಮ

ಹರಿಸಿದೆ ಮೃತ್ಯುವ ರಾಜನ ಅಳಿಯಗೆ

ಸಿರಿಪತಿ ವ್ಯಾಸರ ಕಂಡೆಯೊ ಪ್ರತ್ಯಕ್ಷ5

ಗುಂಡಕ್ರಿಯೆ ವೈಕುಂಠ ವರ್ಣನೆ

ಕಂಡಕಂಡಪದ ಪುಂಜವ ಪಾಡುತಲೀ

ಕೂಡದು ಭಾಷಾ ಸಡಗರ ವೆಂಬುದ

ಪಂಡಿತನಿಕರಕೆ ತೋರಿದೆ ಯತಿತಿಲಕಾ6

ಜಂಗಮಗರುವನ ಭಂಗಿಸೆ ತವಕದಿ

ಇಂಗಿಸಿ ಸಲಹಿದೆ ವಿಪ್ರರ ಕಷ್ಟಗಳ

ಗಂಗಾಪಿತ ತ್ರಿವಿಕ್ರಮ ದೇವನ

ಮಂಗಳ ಸುರಿಸಲು ಸ್ವಾದಿಲಿ ಸ್ಥಾಪಿಸಿದೆ7

ಗೋಧರ ಹಯಮುಖ ಸಾಕ್ಷಾತ್ತಿ ಎಂಬುವ

ಛಂದದಿ ನೀಡಿದ ಓದನವೆಂತೆನೆ

ಸಾಧ್ಯವೆ ಶೇಷನು ಪೊಗಳಲು ನಿಮ್ಮನು

ಮಂದಿರನವನಿವ ನೆನ್ನುತ ಕೈ ಪಿಡಿಯೋ8

ಇಂದ್ರನ ದೂತರ ತಡೆಯುತ ದಿನತ್ರಯ

ಚಂದದಿ ಕುಳಿತೆಯಾ ಬೃಂದಾವನದೊಳಗೆ

ಇಂದಿಗು ನೋಳ್ಪರು ಬುಧಜನ ನಿಮ್ಮನು

ವೃಂದಾರಕಗಣ ವಂದಿತ ಚರಣಯುಗ9

ಸುಂದರ ಹಯಮುಖ ರಾಮನು ಕೃಷ್ಣನು

ವೇದವ್ಯಾಸರು ಹನುಮಾದಿ ತ್ರಯರು

ಮಧ್ಯದಿ ಕುಳಿತಿಹ ನಿನ್ನ ಸುನಾಲ್ಕೆಡೆ

ನಿಂದಿಹರೆಂಬುದು ಸಿದ್ಧವು ಮಹಮಹಿಮಾ 10

ಬೃಂದಾವನ ಪಂಚದಿ ಹರಿ ತಾನಿಹ

ಚಂದದಿ ಸೇವೆಯ ಕೊಳ್ಳುತ ನಿನ್ನಿಂದ

ಸುಂದರ ದಶಗಳ ಪಂಚನುರೂಪವ

ವಂದಿಸಿ ನೋಡುತ ನೆನೆಯುವೆ ಏನೆಂಬೆ11

ಗಂಗಾಪಿತ ತ್ರಿವಿಕ್ರಮದೇವನ

ಹಿಂಗದೆ ನೆನೆಯುವೆ ಲಕ್ಷಾಭರಣವನು

ರಂಗಗೆ ನೀಡಿದೆ ನಮ್ಮಯ ಭವವನು

ಇಂಗಿಸೆ ಕಷ್ಟವೇ ಗುರುವರ ದಯಮಾಡೋ12

ಜಯಮುನಿ ಹೃದಯದಿ ವಾಯುವಿನಂತರ

ಜಯದಿಂ ನಲಿಯುವ ಶ್ರೀಕೃಷ್ಣವಿಠಲನ

ದಯದಿಂ ತೊರಿಸು ಭಾವೀಜಯಾಸುತ

ಹಯಮುಖ ಕಿಂಕರ ನಮಿಸುವೆ ಭೂಯಿಷ್ಠಾ13

****