Showing posts with label ಶ್ರೀಕರಾಂಬುಜರಂಜಿತ ಪಾದಮೆಯಾ ನಾಕಾಧಿಪ ಮುನಿಜನವರದಾಮೆಯಾ vaikunta vittala. Show all posts
Showing posts with label ಶ್ರೀಕರಾಂಬುಜರಂಜಿತ ಪಾದಮೆಯಾ ನಾಕಾಧಿಪ ಮುನಿಜನವರದಾಮೆಯಾ vaikunta vittala. Show all posts

Sunday 1 August 2021

ಶ್ರೀಕರಾಂಬುಜರಂಜಿತ ಪಾದಮೆಯಾ ನಾಕಾಧಿಪ ಮುನಿಜನವರದಾಮೆಯಾ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಶ್ರೀಕರಾಂಬುಜರಂಜಿತ ಪಾದಮೆಯಾ

ನಾಕಾಧಿಪ ಮುನಿಜನವರದಾಮೆಯಾ ಪ


ಲೋಕೇಶನುತ ಕಂಜಲೋಚನಾಮೆಯಾ

ಸಾಕಾರ ಭೋಗೀಶ್ವರ ಮಂಜುಳಚರಣಾ ಅ.ಪ


ಉದಧಿ ಗಂಭೀರ ಭೀರಹಿತ ಹಿತಚಾರಿತ್ರ

ಕದನ ಕರ್ಕಶ ಭೀಮ ರತಿಜಿತಹಿತಾ

ಮದಿತಕೌರವನಾತ್ತ ಚರಣವಿಖ್ಯಾತಾ

ಉದಿತ ಭಾಸ್ಕರಹಿತನಾಥನಾಧಾರೇ 1


ಶರಣಾಗತಜನ ಶಾಂತಿದಾಂತಿಜೀಯಾ

ಗುರುಕಾಮದ ಸರ್ವಕೋವಿದಾಯೇಮಾ

ನರಕೇಸರಿ ರೂಪ ನಾರದ ವಂದ್ಯ ಶ್ರೀ

ವರವೇಲಾಪುರವಾಸ ವೈಕುಂಠ ಸರ್ವೇಶಾ2

***