Showing posts with label ಎಂಜಲೆನ್ನಲಿಬಹುದೆ ಮನುಜರಿದನ ಅಘವನಧನಂಜಯ hayavadana. Show all posts
Showing posts with label ಎಂಜಲೆನ್ನಲಿಬಹುದೆ ಮನುಜರಿದನ ಅಘವನಧನಂಜಯ hayavadana. Show all posts

Wednesday 1 September 2021

ಎಂಜಲೆನ್ನಲಿಬಹುದೆ ಮನುಜರಿದನ ಅಘವನಧನಂಜಯ ankita hayavadana

 ..

ಎಂಜಲೆನ್ನಲಿಬಹುದೆ ಮನುಜರಿದನ ಅಘವನಧ-

ನಂಜಯ ಸುವೈಕುಂಠದಾಸರ ವದನದ ಕಣವ ಪ.


ವದನವೆಂಬಾಕಾಶದಲಿ ಭಕುತಿ ಜೀಮೂತ

ಪದುಮನಾಭನ ನಾಮಾಮೃತದ ಕಡಲ

ಮುದದಿಂದ ತಕ್ಕೊಂಡು ಎನ್ನಂಗ ದೇಹದಲಿ

ಹದನರಿತು ಸುರಿದು ಮುಕ್ತಿಫಲವ ಬೆಳೆಸಿದುದನು 1


ಹೃದಯ ಕಾರಾಗೃಹದಿ ಶ್ರೀಹರಿಯನಾವಾಗ

ಹುದುಗಿ ಅಗಲಿಸಿದ ಕಾರಣದೊಳಂಗುಟದಿ

ಉದಿಸಿ ಗಂಗೆಯು ಪೋಪೆಡೆಯು ಅಳಿದಿರೆ ಇವರ

ವದನದಲಿ ಪೊರಟೆನ್ನಮ್ಯಾಲೆ ಹರಿದುದನು 2


ಪರಸನ್ನ ಹಯವದನ ಚರಣಸರಸಿಜಮಧು-

ಕರ ಸುವೈಕುಂಠದಾಸೋತ್ತಮನ್ನ

ವರವದನದಲಿ ವೇದಶಾಸ್ತ್ರಾಗಮದ ತಾ-

ತ್ಪರಿಯ ಬಿಂದುಗಳೆನ್ನ ಮ್ಯಾಲೆ ಹರಿದುದನು 3

***