Showing posts with label ಗಿರಿಜಾಪತಿ ತವ ಚರಣಕೆ ಎರಗುವೆ ಕರುಣದಿಂದೆನ್ನನು varadesha vittala GIRIJAPATI TAVA CHARANAKE ERAGUVE KARUNADINDENNANU. Show all posts
Showing posts with label ಗಿರಿಜಾಪತಿ ತವ ಚರಣಕೆ ಎರಗುವೆ ಕರುಣದಿಂದೆನ್ನನು varadesha vittala GIRIJAPATI TAVA CHARANAKE ERAGUVE KARUNADINDENNANU. Show all posts

Monday 6 September 2021

ಗಿರಿಜಾಪತಿ ತವ ಚರಣಕೆ ಎರಗುವೆ ಕರುಣದಿಂದೆನ್ನನು ankita varadesha vittala GIRIJAPATI TAVA CHARANAKE ERAGUVE KARUNADINDENNANU


kruti by ವರದೇಶ ವಿಠಲರು varadesha vittala dasaru


ಗಿರಿಜಾಪತಿ ತವ ಚರಣಕೆ ಎರಗುವೆ

ಕರುಣದಿಂದೆನ್ನನು ಪೊರೆ ಮಹಾದೇವ ಪ


ನಂದಿವಾಹನ ಸುರವೃಂದ ಸುಪೂಜಿತ

ಇಂದ್ರವಿನುತ ಭಕ್ತಾನಂದದಾಯಕನೇ 1


ರುಂಡ ಮಾಲಾಧರ ಶುಂಡಾಲ ಮದಹರ

ಚಂಡವಿಕ್ರಮ ಮೃಕಂಡಜ ವರದ 2


ಭೂಜಗ ವಿಭೂಷ ವಿಜಯ ಸುಪೋಷ

ಅಜಿನಾಂಬರಧರ ತ್ರಿಜಗವಂದಿತನೆ 3


ಗರಕಂಧರ ಹರ ಸುರಗಂಗಾಧರ

ಸ್ಮರಸಂಹರ ನಿಜ ಶರಣರಪಾಲ 4


ವರದೇಶ ವಿಠಲನನಿರುತದಿ ಸ್ಮರಿಸುವ

ಕರುಣಾಕರಭವಹರ ಶಂಕರ ಶಿವ 5

***