Showing posts with label ಸರಿಯಗಾಣೆನೆಲ್ಲಿ ಜಗದೊಳು ಕರವ mohana vittala. Show all posts
Showing posts with label ಸರಿಯಗಾಣೆನೆಲ್ಲಿ ಜಗದೊಳು ಕರವ mohana vittala. Show all posts

Friday 27 December 2019

ಸರಿಯಗಾಣೆನೆಲ್ಲಿ ಜಗದೊಳು ಕರವ ankita mohana vittala

ಶ್ರೀ ವಿಜಯದಾಸರು ರಾಮಶಾಸ್ತ್ರಿಯೆಂಬ ವಾದಿಯನ್ನು ಜೈಸಿ ಶ್ರೀವಾದೀಂದ್ರ ಸ್ವಾಮಿಗಳಿಂದ ಮುದ್ರಾಧಾರಣ ಮಾಡಿಸಿ ಆತನಿಗೆ ತತ್ವೋಪದೇಶಗೈದ ಸಂಗತಿಯನ್ನು ಶ್ರೀಮೋಹನ್ನದಾಸರು ಈ ಸ್ತುತಿಯಲ್ಲಿ ವರ್ಣಿಸಿರುವರು

ಪದ : -     ಶ್ರೀರಾಗ, ರೂಪಕ ತಾಳ

ಸರಿಯಗಾಣೆನೆಲ್ಲಿ ಜಗದೊಳು ಕರವ ಮುಗಿರಘವ ತೆಗೆವ | 
ಗುರುವಿಜಯದಾಸರಿಗಿನ್ನು || ಪಲ್ಲ || 

ಭೇದವಿಲ್ಲಯೆಂಬ ಮಾಯವಾದಿ ರಾಮಶಾಸಿ ಬಂದು | 
ಪಾದಕೆರಗೆ ತಮವ ಛೇದಿಸಿ ಸುಜ್ಞಾನವಿತ್ತೆ || ೧ ||   

ವಾದಿಗಿರಿಗೆ ಇಂದ್ರಸ್ಥಾನೀಯರಾದ ಗುರುಗಳಿಂದ ಮು | 
ದ್ರಾಧಾರಣಿಯ ಕೊಡಿಸಿ ಪರಮ ಆದರದಿಂದ ಅವನ ಕಾಯ್ದೆ || ೨ || 

ಭಸುಮವನ್ನೆ ತೆಗಿಸಿ ಅವನ ನೊಸಲಲೂರ್ಧ್ವತಿಲಕ ಪಚ್ಚಿಸಿ | 
ಎಸೆವ ಪಂಚಮುದ್ರಿ ದ್ವಾದಶನಾಮಧರಿಪಂತೆ ಮಾಡಿದ || ೩ || 

ಶ್ರೀಮನೋಹರ ಒಡೆಯ ವಿರಂಚಿ ವ್ಯೋಮಕೇಶ ಸುರರು ಆತನ |
ತಾಮರಸಪದ ಧೂಳಿಗೆ ಯೆಂದು ಈ ಮರಿಯಾದಿಗಳ ಪೇಳಿದೆ|| ೪ ||

ಧರೆಯೊಳಿದ್ದ ಭಕ್ತಜನರ ಪೊರೆವೆನೆಂಬ ಬಿರಿದು ವೊಹಿಸಿ | 
ಸಿರಿ ಮೋಹನ್ನ ವಿಠಲನಂಘ್ರಿ ಸರಸಿರುಹವ ಎನಗೆ ತೋರ್ದೆ || ೫ ||
********