Showing posts with label ವೆಂಕಟಾಚಲ ನಿವಾಸಾ ಜಗದೀಶ ಸಂಕಟ ಹರಿಸೋ ಶ್ರೀಶಾ uragadrivasa vittala. Show all posts
Showing posts with label ವೆಂಕಟಾಚಲ ನಿವಾಸಾ ಜಗದೀಶ ಸಂಕಟ ಹರಿಸೋ ಶ್ರೀಶಾ uragadrivasa vittala. Show all posts

Monday 2 August 2021

ವೆಂಕಟಾಚಲ ನಿವಾಸಾ ಜಗದೀಶ ಸಂಕಟ ಹರಿಸೋ ಶ್ರೀಶಾ ankita uragadrivasa vittala

ವೆಂಕಟಾಚಲ ನಿವಾಸಾ-ಜಗದೀಶ

ಸಂಕಟ ಹರಿಸೋ ಶ್ರೀಶಾ ಪ


ಪಂಕಜಾಸನ ಪ್ರಮುಖ ಶಶಾಂಕಸುರವರಪೂಜಿತ

ಅಕಳಂಕಮಹಿಮ ಖಗಾಂಕ ಚಕ್ರಗದಾ

ಶಂಖಶ್ರೀಕರಕಂಜಧರಪಾಣೀ ಅ.ಪ


ಲೋಕನಾಥ ಲೋಕಬಂಧು-ದಯಾಸಿಂಧು

ಭಕುತರನಿಮಿತ್ತಬಂಧು-ಎಂದೆಂದೂ

ಭಕುತರ ಬೆಂಬಲನು ಎಂದೂ-ಇಂತೆಂದೂ

ಪಾಕಶಾಸನಪೂಜ್ಯ ಪಿನಾಕಿಪಿತ ಸುರಜೇಷ್ಠವಂದ್ಯ

ಏಕಮೇವ ನೀ ಕೈಬಿಡದೆ ಕರ್ಮ-

ಪಾಕಮಾಡಿಸೋ-ಕಾಲನಾಮಕ1


ಬಂಧಕಗಳ ತಂದೊಡ್ಡೀ-ಭಕುತರ ಮನ

ಒಂದೊಂದು ಪರಿ ಧೃಢಮಾಡಿ-ಪರಿಯುನೋಡಿ

ಬಂದ ಬಂಧವ ಹರಿಸಿ-ಹೃದ್ವಾಸೀ

ಹಿಂದುಮುಂದೂಕಾಣದ ಮಹ-

ಅಂಧಕಾರಣ್ಯದಲಿ ಸಲಹಿದೆ

ಬಂಧ ಮೋಚಕನಹುದೋ ಅನಾಥ

ಬಂಧು ನೀನೆಂದು ನಂಬಿದೇ 2


ಕರುಣಾಸಾಗರನೇ ನಿನ್ನಾ-ನಾ ನಂಬಿದೆ

ಸ್ಮರಣೆಯೊಂದನೆ ಪಾಲಿಸೋ ಈ ಜನುಮದೀ

ಪರಮಸಾಧನ ಕಾಣದೇ-ಪರಿತಪಿಸುವೇ

ನಿರುತ ಭವಸಂಕೋಲೆಯಾ ಕಡಿದು

ಪೊರೆಯುವುದೋ ಶ್ರೀ ವೆಂಕಟೇಶನೆ

ಸ್ಮರಿಪರಘ ಪರಿಹರಿಪ ಶ್ರೀ-

ಉರಗಾದ್ರಿವಾಸವಿಠಲ ಪ್ರಭೋ 3

****