Monday, 2 August 2021

ವೆಂಕಟಾಚಲ ನಿವಾಸಾ ಜಗದೀಶ ಸಂಕಟ ಹರಿಸೋ ಶ್ರೀಶಾ ankita uragadrivasa vittala

ವೆಂಕಟಾಚಲ ನಿವಾಸಾ ಜಗದೀಶ

ಸಂಕಟ ಹರಿಸೋ ಶ್ರೀಶಾ ll ಪ ll


ಪಂಕಜಾಸನ ಪ್ರಮುಖ ಶಶಾಂಕಸುರವರಪೂಜಿತ 

ಅಕಳಂಕಮಹಿಮ ಖಗಾಂಕ ಚಕ್ರಗದಾ 

ಶಂಖಶ್ರೀಕರಕಂಜಧರಪಾಣೀ ll ಅ ಪ ll


ಲೋಕನಾಥ ಲೋಕಬಂಧು ದಯಾಸಿಂಧು

ಭಕುತರನಿಮಿತ್ತಬಂಧು ಎಂದೆಂದೂ

ಭಕುತರ ಬೆಂಬಲನು ಎಂದೂ ಇಂತೆಂದೂ

ಪಾಕಶಾಸನಪೂಜ್ಯ ಪಿನಾಕಿಪಿತ ಸುರಜೇಷ್ಠವಂದ್ಯ

ಏಕಮೇವ ನೀ ಕೈಬಿಡದೆ ಕರ್ಮ

ಪಾಕಮಾಡಿಸೋ ಕಾಲನಾಮಕ ll 1 ll


ಬಂಧಕಗಳ ತಂದೊಡ್ಡೀ ಭಕುತರ ಮನ

ಒಂದೊಂದು ಪರಿ ದೃಢಮಾಡಿ ಪರಿಯುನೋಡಿ

ಬಂದ ಬಂಧವ ಹರಿಸಿ ಹೃದ್ವಾಸೀ

ಹಿಂದುಮುಂದೂಕಾಣದ ಮಹ

ಅಂಧಕಾರಣ್ಯದಲಿ ಸಲಹಿದೆ

ಬಂಧ ಮೋಚಕನಹುದೋ ಅನಾಥ

ಬಂಧು ನೀನೆಂದು ನಂಬಿದೇ ll 2 ll


ಕರುಣಾಸಾಗರನೇ ನಿನ್ನ ನಾ ನಂಬಿದೆ

ಸ್ಮರಣೆಯೊಂದನೆ ಪಾಲಿಸೋ ಈ ಜನುಮದೀ

ಪರಮಸಾಧನ ಕಾಣದೇ ಪರಿತಪಿಸುವೇ 

ನಿರುತ ಭವಸಂಕೋಲೆಯಾ ಕಡಿದು

ಪೊರೆಯುವುದೋ ಶ್ರೀ ವೆಂಕಟೇಶನೆ

ಸ್ಮರಿಪರಘ ಪರಿಹರಿಪ ಶ್ರೀ

ಉರಗಾದ್ರಿವಾಸವಿಟ್ಠಲ ಪ್ರಭೋ ll 3 ll

***


ವೆಂಕಟಾಚಲ ನಿವಾಸಾ-ಜಗದೀಶ

ಸಂಕಟ ಹರಿಸೋ ಶ್ರೀಶಾ ಪ


ಪಂಕಜಾಸನ ಪ್ರಮುಖ ಶಶಾಂಕಸುರವರಪೂಜಿತ

ಅಕಳಂಕಮಹಿಮ ಖಗಾಂಕ ಚಕ್ರಗದಾ

ಶಂಖಶ್ರೀಕರಕಂಜಧರಪಾಣೀ ಅ.ಪ


ಲೋಕನಾಥ ಲೋಕಬಂಧು-ದಯಾಸಿಂಧು

ಭಕುತರನಿಮಿತ್ತಬಂಧು-ಎಂದೆಂದೂ

ಭಕುತರ ಬೆಂಬಲನು ಎಂದೂ-ಇಂತೆಂದೂ

ಪಾಕಶಾಸನಪೂಜ್ಯ ಪಿನಾಕಿಪಿತ ಸುರಜೇಷ್ಠವಂದ್ಯ

ಏಕಮೇವ ನೀ ಕೈಬಿಡದೆ ಕರ್ಮ-

ಪಾಕಮಾಡಿಸೋ-ಕಾಲನಾಮಕ1


ಬಂಧಕಗಳ ತಂದೊಡ್ಡೀ-ಭಕುತರ ಮನ

ಒಂದೊಂದು ಪರಿ ಧೃಢಮಾಡಿ-ಪರಿಯುನೋಡಿ

ಬಂದ ಬಂಧವ ಹರಿಸಿ-ಹೃದ್ವಾಸೀ

ಹಿಂದುಮುಂದೂಕಾಣದ ಮಹ-

ಅಂಧಕಾರಣ್ಯದಲಿ ಸಲಹಿದೆ

ಬಂಧ ಮೋಚಕನಹುದೋ ಅನಾಥ

ಬಂಧು ನೀನೆಂದು ನಂಬಿದೇ 2


ಕರುಣಾಸಾಗರನೇ ನಿನ್ನಾ-ನಾ ನಂಬಿದೆ

ಸ್ಮರಣೆಯೊಂದನೆ ಪಾಲಿಸೋ ಈ ಜನುಮದೀ

ಪರಮಸಾಧನ ಕಾಣದೇ-ಪರಿತಪಿಸುವೇ

ನಿರುತ ಭವಸಂಕೋಲೆಯಾ ಕಡಿದು

ಪೊರೆಯುವುದೋ ಶ್ರೀ ವೆಂಕಟೇಶನೆ

ಸ್ಮರಿಪರಘ ಪರಿಹರಿಪ ಶ್ರೀ-

ಉರಗಾದ್ರಿವಾಸವಿಠಲ ಪ್ರಭೋ 3

****


No comments:

Post a Comment