Monday 2 August 2021

ವೆಂಕಟಾಚಲ ನಿವಾಸಾ ಜಗದೀಶ ಸಂಕಟ ಹರಿಸೋ ಶ್ರೀಶಾ ankita uragadrivasa vittala

ವೆಂಕಟಾಚಲ ನಿವಾಸಾ-ಜಗದೀಶ

ಸಂಕಟ ಹರಿಸೋ ಶ್ರೀಶಾ ಪ


ಪಂಕಜಾಸನ ಪ್ರಮುಖ ಶಶಾಂಕಸುರವರಪೂಜಿತ

ಅಕಳಂಕಮಹಿಮ ಖಗಾಂಕ ಚಕ್ರಗದಾ

ಶಂಖಶ್ರೀಕರಕಂಜಧರಪಾಣೀ ಅ.ಪ


ಲೋಕನಾಥ ಲೋಕಬಂಧು-ದಯಾಸಿಂಧು

ಭಕುತರನಿಮಿತ್ತಬಂಧು-ಎಂದೆಂದೂ

ಭಕುತರ ಬೆಂಬಲನು ಎಂದೂ-ಇಂತೆಂದೂ

ಪಾಕಶಾಸನಪೂಜ್ಯ ಪಿನಾಕಿಪಿತ ಸುರಜೇಷ್ಠವಂದ್ಯ

ಏಕಮೇವ ನೀ ಕೈಬಿಡದೆ ಕರ್ಮ-

ಪಾಕಮಾಡಿಸೋ-ಕಾಲನಾಮಕ1


ಬಂಧಕಗಳ ತಂದೊಡ್ಡೀ-ಭಕುತರ ಮನ

ಒಂದೊಂದು ಪರಿ ಧೃಢಮಾಡಿ-ಪರಿಯುನೋಡಿ

ಬಂದ ಬಂಧವ ಹರಿಸಿ-ಹೃದ್ವಾಸೀ

ಹಿಂದುಮುಂದೂಕಾಣದ ಮಹ-

ಅಂಧಕಾರಣ್ಯದಲಿ ಸಲಹಿದೆ

ಬಂಧ ಮೋಚಕನಹುದೋ ಅನಾಥ

ಬಂಧು ನೀನೆಂದು ನಂಬಿದೇ 2


ಕರುಣಾಸಾಗರನೇ ನಿನ್ನಾ-ನಾ ನಂಬಿದೆ

ಸ್ಮರಣೆಯೊಂದನೆ ಪಾಲಿಸೋ ಈ ಜನುಮದೀ

ಪರಮಸಾಧನ ಕಾಣದೇ-ಪರಿತಪಿಸುವೇ

ನಿರುತ ಭವಸಂಕೋಲೆಯಾ ಕಡಿದು

ಪೊರೆಯುವುದೋ ಶ್ರೀ ವೆಂಕಟೇಶನೆ

ಸ್ಮರಿಪರಘ ಪರಿಹರಿಪ ಶ್ರೀ-

ಉರಗಾದ್ರಿವಾಸವಿಠಲ ಪ್ರಭೋ 3

****


No comments:

Post a Comment