Showing posts with label ಹರಿನಿನ್ನೊಲುಮೆಯು ಆಗುವ ತನಕ purandara vittala HARI NINNOLUMEYU AAGUVA TANAKA. Show all posts
Showing posts with label ಹರಿನಿನ್ನೊಲುಮೆಯು ಆಗುವ ತನಕ purandara vittala HARI NINNOLUMEYU AAGUVA TANAKA. Show all posts

Monday 30 December 2019

ಹರಿನಿನ್ನೊಲುಮೆಯು ಆಗುವ ತನಕ purandara vittala HARI NINNOLUMEYU AAGUVA TANAKA






ಹರಿ ನಿನ್ನೊಲುಮೆಯು ಆಗುವ ತನಕ
ಅರಿತು ಸುಮ್ಮನಿರುವುದು ಲೇಸು ||ಪ||
ಮರಳಿ ಮರಳಿ ತಾ ಪಡೆಯದ ಭಾಗ್ಯಕೆ
ಹೊರ ಹೊರಳುತ ಕನಲಲು ಬಂದೀತೆ ||ಅ.ಪ||

ದೂರು ಬರುವ ತೆರ ನಂಬಿಗೆ ಕೊಟ್ಟರೆ 
ದುರ್ಜನ ಬರುವುದು ತಪ್ಪೀತೆ
ದೂರದಿ ನಿಂತು ಮೊರೆಯಿಟ್ಟು ಕೂಗಲು 
ಚೋರಗೆ ದಯವು ಪುಟ್ಟೀತೆ
ಬಾರಿ ಬಾರಿಗೆ ಪಾತಿವ್ರತ್ಯವ ಬೋಧಿಸೆ 
ಜಾರೆಗದರ ನಿಜ ಸೊಗಸೀತೆ
ಊರು ಬಿಟ್ಟು ಬೇರೂರಿಗೆ ಹೋದರೆ 
ಪ್ರಾರಬ್ಧವು ಬೇರಾದೀತೆ

ಪಟ್ಟೆಮಂಚ ತಿರುವಿಟ್ಟರೆ ಫಣೆಯೊಳು 
ಮೆಟ್ಟಿದ ಭ್ರಮಣೆಯು ಬಿಟ್ಟೀತೆ
ಹೊಟ್ಟೆಲಿ ಸುತರಿಲ್ಲೆಂದೊದರಲು 
ಹುಟ್ಟು ಬಂಜೆಗೆ ಫಲವಾದೀತೆ
ಬೆಟ್ಟದ ನಲಿವಿಗೆ ಕಣ್ಣೀರು ಬಂಧರೆ 
ಬೇಟೆಗಾರಗೆ ದಯ ಪುಟ್ಟೀತೆ ಕೆಟ್ಟ
ಹಾವು ಕಚ್ಚಿದ ಗಾಯಕೆ ಹಳೆ 
ಬಟ್ಟೆಯೊಳೊರಸೆ ವಿಷ ಹೋದೀತೆ

ಧನಿಕರ ಕಂಡು ದೈನ್ಯವ ಪಟ್ಟರೆ 
ದಾರಿದ್ರಿಯವು ಹಿಂಗೀತೆ
ದಿನದಿನ ನೊಸಲೊಳು ತಿರುಮಣಿಯಿಟ್ಟರೆ 
ದೇವರ ದಯವು ಪುಟ್ಟೀತೆ
ಎಣಿಸಿಕೊಂಡೇಳ್ಹಂಜಿಯ ನೂತರೆ 
ಮಣಿಯದ ಸಾಲವು ತೀರೀತೆ
ಅನುದಿನ ನಮ್ಮ ಪುರಂದರ ವಿಠಲನ 
ನೆನೆದಲ್ಲದೆ ಭವ ಹಿಂಗೀತೆ
***


pallavi

hari ninnolumeyu Aguva tanaka aridu summaniruvudu lEsu

anupallavi

maraLi maraLi tA paDeyada bhAgyage hora horaLuta kanalanu bandIte

caraNam 1

dUru baruva tera nambike koTTare durjana baruvudu tappIte dUradi nintu moreyiTTu kUgalu cOrage dayavu puTTide
bAri bArige pati vratyava bOdhise jAregadara nija sogasIte Uru biTTu bErUrige hOdare prArabdhavu bErAdIte

caraNam 2

paTTe manca tiruviTTare phaNeyoLu meTTida bhramaNeyu biTTite hoTTeli sutarillendodaralu huTTu banjege phalavAdIte
peTTada nalivige kaNNIru bandhare beTegArage daya puTTite keTTa hAvu kaccida kAyava haLe baTTeyoLorase viSa hOdIte

caraNam 3

dhanikara kaNDu dainyava paTTare kaDu dAridriyavu hingIte dinadina nosaloLu tirumaNiyiTTare dEvara dayavu puTTIte
eNisi koNDELhinjiya nUtare maNiyada sAlavu tIrite anudina namma purandara viTTalana nenedallade bhava hingIte
*** 

ರಾಗ ಶಂಕರಾಭರಣ. ಆದಿ ತಾಳ

ಹರಿ ನಿನ್ನೊಲುಮೆಯು ಆಗುವ ತನಕ
ಅರಿತು ಸುಮ್ಮನಿರುವುದು ಲೇಸು ||ಪ||
ಮರಳಿ ಮರಳಿ ತಾ ಪಡೆಯದ ಭಾಗ್ಯಕೆ
ಹೊರ ಹೊರಳುತ ಕನಲಲು ಬಂದೀತೆ ||ಅ.ಪ||

ದೂರು ಬರುವ ತೆರ ನಂಬಿಗೆ ಕೊಟ್ಟರೆ ದುರ್ಜನ ಬರುವುದು ತಪ್ಪೀತೆ
ದೂರದಿ ನಿಂತು ಮೊರೆಯಿಟ್ಟು ಕೂಗಲು ಚೋರಗೆ ದಯವು ಪುಟ್ಟೀತೆ
ಬಾರಿ ಬಾರಿಗೆ ಪಾತಿವ್ರತ್ಯವ ಬೋಧಿಸೆ ಜಾರೆಗದರ ನಿಜ ಸೊಗಸೀತೆ
ಊರು ಬಿಟ್ಟು ಬೇರೂರಿಗೆ ಹೋದರೆ ಪ್ರಾರಬ್ಧವು ಬೇರಾದೀತೆ

ಪಟ್ಟೆಮಂಚ ತಿರುವಿಟ್ಟರೆ ಫಣೆಯೊಳು ಮೆಟ್ಟಿದ ಭ್ರಮಣೆಯು ಬಿಟ್ಟೀತೆ
ಹೊಟ್ಟೆಲಿ ಸುತರಿಲ್ಲೆಂದೊದರಲು ಹುಟ್ಟು ಬಂಜೆಗೆ ಫಲವಾದೀತೆ
ಬೆಟ್ಟದ ನಲಿವಿಗೆ ಕಣ್ಣೀರು ಬಂಧರೆ ಬೇಟೆಗಾರಗೆ ದಯ ಪುಟ್ಟೀತೆ ಕೆಟ್ಟ
ಹಾವು ಕಚ್ಚಿದ ಗಾಯಕೆ ಹಳೆ ಬಟ್ಟೆಯೊಳೊರಸೆ ವಿಷ ಹೋದೀತೆ

ಧನಿಕರ ಕಂಡು ದೈನ್ಯವ ಪಟ್ಟರೆ ದಾರಿದ್ರಿಯವು ಹಿಂಗೀತೆ
ದಿನದಿನ ನೊಸಲೊಳು ತಿರುಮಣಿಯಿಟ್ಟರೆ ದೇವರ ದಯವು ಪುಟ್ಟೀತೆ
ಎಣಿಸಿಕೊಂಡೇಳ್ಹಂಜಿಯ ನೂತರೆ ಮಣಿಯದ ಸಾಲವು ತೀರೀತೆ
ಅನುದಿನ ನಮ್ಮ ಪುರಂದರ ವಿಠಲನ ನೆನೆದಲ್ಲದೆ ಭವ ಹಿಂಗೀತೆ

lyrics in video song is different except pallavi
***********

ಪುರಂದರದಾಸರು

ಹರಿ ನಿನ್ನೊಲುಮೆಯು ಆಗುವತನಕ |
ಅರಿತು ಸುಮ್ಮಗಿರುವುದೆ ಲೇಸು ಪ.

ಮರಳಿ ಮರಳಿ ತಾ ಪಡೆಯದ ಭಾಗ್ಯವು |
ಮರುಗಿದರೆ - ತನಗಾದೀತೆ ? ಅಪ

ದೂರು ಬರುವ ನಂಬಿಗೆಯನು ಕೊಟ್ಟರೆ |
ದುರ್ಜನ ಬರುವುದು ತಪ್ಪೀತೆ ||
ದೂರ ನಿಂತು ಮೊರೆಯಿಟ್ಟು ಕೂಗಿದರೆ |
ಚೋರರಿಗೆ ದಯ ಪುಟ್ಟೀತೆ |
ಜಾರನಾರಿ ತಾ ಪತಿವ್ರತೆ ಎನ್ನಲು |
ಜಾಣರಿಗೆ - ನಿಜ ತೋರೀತೆ ||
ಊರ ಬಿಟ್ಟು ಬೇರೂರಿಗೆ ಹೋದರೆ |
ಪ್ರಾರಬ್ಧವು ಬೇರಾದೀತೆ 1

ಪಾಟುಪಡುವುದು ಪಣೆಯಲ್ಲಿರಲು |
ಪಟ್ಟಮಂಚ ತನಗಾದೀತೆ ||
ಹೊಟ್ಟೆಯಲ್ಲಿ ಸುತರಿಲ್ಲೆಂದು ಹೊರಳಲು |
ಹುಟ್ಟು ಬಂಜೆಗೆ ಮಕ್ಕಳಾದೀತೆ ?||
ಬೆಟ್ಟದ ನವಿಲಿಗೆ ಕಣ್ಣೀರು ಬಂದರೆ |
ಬೇಟೆಗಾರಗೆ ದಯ ಪುಟ್ಟೀತೆ ||
ಕೆಟ್ಟ ಹಾವು ತಾ ಕಚ್ಚಿದ ವಿಷವದು |
ಬಟ್ಟೆಯಲೊರಸಲು ಹೋದೀತೆ 2

ಧನಿಕನ ಕಂಡು ಪಾಡಿ ಪೊಗಳಿದರೆ |
ದಾರಿದ್ರ್ಯವು ತಾ ಹಿಂಗೀತೆ ||
ದಿನದಿನ ನೊಸಲೊಳು ನಾಮವನಿಟ್ಟರೆ |
ದೇವರಿಗೆ ತೃಪ್ತಿಯಾದೀತೆ ||
ಎಣಿಸಿಕೊಂಡು ಎಳ ಹಂಜಿಯ ನೂತರೆ |
ಅಣೆಯದ ಸಾಲವು ತೀರೀತೆ |
ಅನುದಿನದಲಿ ಶ್ರೀ ಪುರಂದರವಿಠಲನ |
ನೆನೆಯದಿದ್ದರೆಭವಹಿಂಗೀತೆ3
**********