Showing posts with label ಗುರುಸುಶೀಲೇಂದ್ರರ ಚರಣ ವಾರಿಜಯುಗ್ಮ shyamasundara susheelendra teertha stutih. Show all posts
Showing posts with label ಗುರುಸುಶೀಲೇಂದ್ರರ ಚರಣ ವಾರಿಜಯುಗ್ಮ shyamasundara susheelendra teertha stutih. Show all posts

Saturday 1 May 2021

ಗುರುಸುಶೀಲೇಂದ್ರರ ಚರಣ ವಾರಿಜಯುಗ್ಮ ankita shyamasundara susheelendra teertha stutih

susheelendra teertha rayara mutt yati 1926 stutih

ಶ್ರೀ ಶ್ಯಾಮಸುಂದರದಾಸರು....

ರಾಗ : ದರ್ಬಾರಿ ಕಾನಡ   ತಾಳ : ರೂಪಕ 


ಗುರು ಸುಶೀಲೇಂದ್ರರ 

ಚರಣ ವಾರಿಜಯುಗ್ಮ ।

ಸ್ಮರಿಸುವ ನರರು 

ಶ್ರೀ ಹರಿದಾಸರೂ ।। ಪಲ್ಲವಿ ।।


ಹರಿವಾರ ಸುಮತಾಬ್ಧಿ 

ಹರಿಣಾಂಕರೆನಿಸಿದ ।

ವರ ಸುಕೃತೀಂದ್ರ ತೀರ್ಥರ 

ಕರ ಕಮಲಜ ।। ಅ ಪ ।।


ಕಡೆಯ ಆಶ್ರಮವ 

ಕೈಕೊಂಡು ಮಾಸತ್ರಯದಿ ।

ಸಡಗರದಲಿ ಮಹಾ 

ಸಭೆ ನಿರ್ಮಿಸಿ ।

ಪೊಡವಿಯೊಳಿದ್ದ ಭೂಸುರ-

ರಾಜ್ಞಾ ಪತ್ರದಿ ಬರ-

ಮಾಡಿ ವಿದ್ವಾಂಸರ 

ಒಡಗೂಡಿ ಮಧ್ವಾಗಮನವನು ।

ನೋಡಿ ಬೆಲೆಯುಳ್ಳ 

ವೆಗ್ಗಳ ಒಡವೇ ।

ಉಡುಪುಗಳನ್ನು ಕರುಣಿಸಿ 

ಮೃಷ್ಟಾನ್ನ ದ್ವಿಜರಿಗೆ ।

ಕಡು ಸುಪ್ರೇಮದಿ 

ಸಲಿಸಿ ಮುದ ಬಡಿಸಿ ।    

ಜಡಕು ಮಾಯ್ಗಳ ಗಡಣ 

ಜಡಧಿಗೆ ವಡವ ತಾನೆನಿಸಿ । 

ಕ್ರೋಡಜಾಸ್ಥಿತ ಒಡೆಯ 

ಶ್ರೀ ಗುರುರಾಘವೇಂದ್ರರ ।

ಅಡಿಗಳಾಬ್ಜ ಕಾರಡಿಯಂತೊಪ್ಪುತ ।

ಬಿಡದೆ ಸಂತತ ದೃಢದಿ ಸೇವಿಸಿ ।

ಜಡಜಜಾಂಡದಿ 

ಮೆರೆದ ಅಸ್ಮದ್ ।। ಚರಣ ।।  

 

ಮರುತಾಂತರ್ಗತ ಮೂಲ 

ತರಣಿ ಕುಲೇಂದ್ರನ ।

ಕರುಣವೆಷ್ಟಿವರೊಳು 

ಅರುಹಲಾರೆ ।

ವರ ರೌಪ್ಯಾಸನಪುರಕೆ 

ಎರುಡಾರು ಯತಿಗಳ ವತಿಯಿಂದ ।

ತಮ್ಮಯ ಶಿಷ್ಯ ತತಿಯಿಂದ 

ಬಹುವಿಧ ಬಿರುದಾವಳಿಯಿಂದ ।

ತೆರಳಿ ಶಶಿರವಿ ವರಸುವಾದ್ಯ 

ಧ್ವಾನ ಮೊಳಗಿಸುತ್ತಾ ।

ಘನ ಭಕುತಿ ಪರವಶರಾಗಿ 

ಸುರಶಿರ ಕನಕವಣಿ 

ಧನ ತನು ಮನ ತ್ವರಿತ ।।

ತೃಣ ಬಗೆದು ದೇವಕೀ 

ತರುಳ ರುಕ್ಮಿಣೀ 

ವರ ಮೂರಾಂತಕ ।

ಚರಣಕರ್ಪಿಸುತ 

ಆನಂದ ಬಡುತ ।

ಸರ್ವ ಮುನಿಜನಗಳಿಗೆ 

ಬಹು । ಉಪ ।

ಚರಿಸಿ ಮನ್ನಣೆ 

ಧರಿಸಿ ಹರುಷದಿ ।

ವರ ಸುಧೀಂದ್ರ ಕರಜರನು ।

ನೆರೆ ಸ್ಥಾಪಿಸಿದ 

ಆಶ್ಚರ್ಯ ಚರಿತ ।। ಚರಣ ।।


ಕ್ಷಿತಿಯೊಳು ಭಾರತೀ 

ಪತಿ ಉಕ್ತ ಶಾಸ್ತ್ರಾರ್ಥ ।

ಚತುರತನದಿ ಪಡೆದು 

ವಿತತ ಮಹಿಮಾನಾದ ।

ಪತಿತ ಪಾವನ 

ಶ್ಯಾಮಸುಂದರನ ।

ಸ್ತುತಿಸುತಲಿಯ ಚಿಂತನ 

ಗೈಯುತ ಶ್ರೀಯುತ ಸಂಸ್ಥಾನ ।

ಮತಿ ವಿಶಾರದರಾದವರ 

ಸುವ್ರತೀಂದ್ರ ತೀರ್ಥರಿಗೆ ।

ಹಿತದಿಂದ ಒಪ್ಪಿಸಿ ಯತಿ 

ಧೀರೇಂದ್ರರ ಚಾರು ಸ್ಥಳದೊಳಗೆ ।

ತನುವಿಟ್ಟು ಹರಿಪುರ ಪಥವ 

ಪಿಡಿದೈದಿದರು ಚೆನ್ನಾಗಿ ಸೇವಿಪ ಜನರಿಗೆ ।

ಅತಿಶಯದಿ ಮನೋರಥವ 

ನೀಡುತ ।ಸತತ ಮಾಣದೆ ಪರಮ ಭಕುತಿಲಿ ।

ಪೃಥ್ವಿ ಸುರಕರಶತದಳಗಳಿಂ 

ನುತಿಸಿಕೊಳತರ್ಚನೆಯಗೊಂಬ ।। ।। ಚರಣ ।।

****