Showing posts with label ಮಧ್ವಾಂತರ್ಗತ ವೇದವ್ಯಾಸಾ ಮಮ jagannatha vittala. Show all posts
Showing posts with label ಮಧ್ವಾಂತರ್ಗತ ವೇದವ್ಯಾಸಾ ಮಮ jagannatha vittala. Show all posts

Saturday 14 December 2019

ಮಧ್ವಾಂತರ್ಗತ ವೇದವ್ಯಾಸಾ ಮಮ jagannatha vittala

ಮಧ್ವಾಂತರ್ಗತ ವೇದವ್ಯಾಸಾ , ಮಮ
ಹೃದ್ವನರುಹ ಸನ್ನಿವಾಸ ||ಪ||

ಸದ್ಬುದ್ಧಿಯನೆ ಕೊಡು ಶ್ರೀಕೃಷ್ಣ ದ್ವೈಪಾಯನ
ಚಿದಚಿದ್ವಿಲಕ್ಷಣ ತತ್ಪಾದದ್ವಯಾಬ್ಜವ ತೋರೋ ||ಅ.ಪ||

ಹರಿತೋಪಲಾಭ ಶರೀರ 
ಮುನಿಪರಾಶರವರ ಸುಕುಮಾರ
ಪರಮಪುರುಷ ಕರ್ತ ಸ್ವರ್ಣಗರ್ಭ ಪ್ರಮುಖ 
ನಿರ್ಜರ ಮುನಿಗಣನುತ ಪದಪಂಕಜ
ಕುಲಕುಲದಿ ಧೃತರಾಷ್ಟ್ರ ಪಾಂಡುವಿದುರರ 
ಪಡೆದೈವರಿಗೊಲಿದು ಸಂ-
ಹರಿಸಿ ದುರ್ಯೋಧನನ ಭಾರತ 
ವಿರಚಿಸಿದ ಸುಧೀಂದ್ರ ಕವೀಂದ್ರ ||೧||

ಬಾದರಾಯಣ ಬಹುರೂಪ ಸನಕಾದಿ 
ಸನ್ನುತ ಧರ್ಮಯೂಪಾ
ವೇದೋದ್ಧಾರನಾದ ಅನಾದಿಕರ್ತ 
ಪೂರ್ಣಬೋಧ ಸದ್ಗುರುವರಾರಾಧಿಪದಯುಗ
ಮೇದಿನಿಯೊಳಗೋರ್ವ ಪರಮಾಧಮ 
ಕೈಪಿಡಿಯೇ ಕರುಣ ಮಹೋ-
ದಧಿಯೆ ಕಮನೀಯ ಕಪಿಲಪ್ರಬೋಧ 
ಮುದ್ರಾ-ಭಯಂಕರಾಂಬುಜ ||೨||

ಜಾತರೂಪ ಜಟಾಜೂಟ ಶ್ರೀನಿಕೇತನ 
ತಿಲಕ ಲಲಾಟಪೀತ ಕೃಷ್ಣಾಜಿನ ಶ್ವೇತ ಶ್ರೀ 
ಯಜ್ಞೋಪವೀತ ಮೇಖಲದಂಡಾನ್ವಿತ ಕಮಂಡಲ
ಭೂತಿ ಕೃತ್ಸದ್ಭೂತಿದಾಯಕ ಶ್ರೀಪತಿ ಜಗನ್ನಾಥವಿಠಲನೆ
ತುತಿಸಬಲ್ಲೆನೆ ಪಾತಕನು ಅಲ್ಪಾತ್ಮಕನು ನಾ ||೩||
***

madhvAntargata vEdavyAsA , mama
hRudvanaruha sannivAsa ||pa||

sadbuddhiyane koDu SrIkRuShNa dvaipAyana
cidacidvilakShaNa tatpAdadvayAbjava tOrO ||a.pa||

haritOpalABa SarIra muniparASaravara sukumAra
paramapuruSha karta svarNagarBa pramuKa nirjara munigaNanuta padapaMkaja
kulakuladi dhRutarAShTra pAnDuvidurara paDedaivarigolidu saM-
harisi duryOdhanana BArata viracisida sudhIndra kavIndra ||1||

bAdarAyaNa bahurUpa sanakAdi sannuta dharmayUpA
vEdOddhAranAda anAdikarta pUrNabOdha sadguruvarArAdhipadayuga
mEdiniyoLagOrva paramAdhama kaipiDiyE karuNa mahO-
dadhiye kamanIya kapilaprabOdha mudrA-BayaMkarAMbuja ||2||

jAtarUpa jaTAjUTa SrInikEtana tilaka lalATa
pIta kRuShNAjina SvEta SrI yaj~jOpavIta mEKaladanDAnvita kamanDala
BUti kRutsadBUtidAyaka SrIpati jagannAthaviThalane
tutisaballene pAtakanu alpAtmakanu nA ||3||
***

ಮಧ್ವಾಂತರ್ಗತ ವೇದವ್ಯಾಸ ಮಮ
ಹೃದ್ವನರುಹ ಸನ್ನಿವಾಸ ಪ

ಸದ್ವಿದ್ಯಾ ಕೊಡು ಶ್ರೀ ಕೃಷ್ಣ ದ್ವೈಪಾಯನ ಚಿದ
ಚಿದ್ವಿಲಕ್ಷಣ ತ್ವತ್ಪಾದ ದ್ವಯಾಬ್ಜವ ತೋರೊ ಅ

ಬಾದರಾಯಣ ಬಹುರೂಪಾ ಸನ
ಕಾದಿ ಸನ್ನುತ ಧರ್ಮಯೂಪಾ
ವೇದೋದ್ಧಾರ ದನಾದಿ ಕರ್ತ ಪೂರ್ಣ
ಬೋಧ ಸದ್ಗುರುವರಾರಾಧಿತ ಪದಯುಗ
ಮೇದಿನಿಯೊಳಾನೋರ್ವ ಪಾಮ
ರಾಧಮನು ಕೈ ಪಿಡಿ ಕರುಣ ಮ
ಹೋದಧೇ ಕಮನೀಯ ಕಾಯ ಪ್ರ
ಬೋಧ ಮುದ್ರಾಭಯ ಕರಾಂಬುಜ1

ಹರಿತೋಪ ಲಾಭ ಶರೀರಾ ಪರಾ
ಶರ ಮುನಿವರ ಸುಕುಮಾರ
ಪರಮ ಪುರುಷಕಾರ್ತಸ್ವರಗರ್ಭ ಪ್ರಮುಖ ನಿ
ರ್ಜರಗಣಮುನಿನುತ ವರಪಾದಪಂಕೇಜ
ಕುರುಕುಲದಿ ಧೃತರಾಷ್ಟ್ರ ಪಾಂಡು ವಿ
ದುರರ ಪಡೆದೈವರಿಗೊಲಿದು ಸಂ
ಹರಿಸಿ ದುರ್ಯೋಧನನ ಭಾರತ
ವಿರಚಿಸಿದ ಸುಂದರ ಕವೀಂದ್ರ 2

ಜಾತರೂಪ ಜಟಾ ಜೂಟ ಶ್ರೀ ನೀಕೇತನ ತಿಲಕ ಲಲಾಟ
ಪೀತ ಕೃಷ್ಣಾಜಿನ ಶ್ವೇತ ಶ್ರೀಯಜ್ಞೋಪ
ವೀತ ಮೇಖಲ ದಂಡಾನ್ವಿತ ಕಮಂಡಲ
ಭೂತಭಾವನ ಭೂತಿಕೃತ್ಸದ್ಭೂತಿದಾಯಕ ಶ್ರೀ ಜಗ
ನ್ನಾಥ ವಿಠಲನೆ ನಿನ್ನ ಮಹಿಮೆಯ
ನಾ ತುತಿಸಬಲ್ಲೆನೆ ಸುಖಾತ್ಮ 3
**********

ರಾಗ-ಮಧ್ಯಮಾವತಿ (ದರ್ಬಾರಿ ಕಾನಡಾ) ಆದಿತಾಳ

ಮಧ್ವಾಂತರ್ಗತ ವೇದವ್ಯಾಸಾ , ಮಮ
ಹೃದ್ವನರುಹ ಸನ್ನಿವಾಸ ||ಪ||
ಸದ್ಬುದ್ಧಿಯನೆ ಕೊಡು ಶ್ರೀಕೃಷ್ಣ ದ್ವೈಪಾಯನ
ಚಿದಚಿದ್ವಿಲಕ್ಷಣ ತತ್ಪಾದದ್ವಯಾಬ್ಜವ ತೋರೋ ||ಅ.ಪ||

ಹರಿತೋಪಲಾಭ ಶರೀರ ಮುನಿಪರಾಶರವರ ಸುಕುಮಾರ
ಪರಮಪುರುಷ ಕರ್ತ ಸ್ವರ್ಣಗರ್ಭ ಪ್ರಮುಖ ನಿರ್ಜರ ಮುನಿಗಣನುತ ಪದಪಂಕಜ
ಕುಲಕುಲದಿ ಧೃತರಾಷ್ಟ್ರ ಪಾಂಡುವಿದುರರ ಪಡೆದೈವರಿಗೊಲಿದು ಸಂ-
ಹರಿಸಿ ದುರ್ಯೋಧನನ ಭಾರತ ವಿರಚಿಸಿದ ಸುಧೀಂದ್ರ ಕವೀಂದ್ರ ||೧||

ಬಾದರಾಯಣ ಬಹುರೂಪ ಸನಕಾದಿ ಸನ್ನುತ ಧರ್ಮಯೂಪಾ
ವೇದೋದ್ಧಾರನಾದ ಅನಾದಿಕರ್ತ ಪೂರ್ಣಬೋಧ ಸದ್ಗುರುವರಾರಾಧಿಪದಯುಗ
ಮೇದಿನಿಯೊಳಗೋರ್ವ ಪರಮಾಧಮ ಕೈಪಿಡಿಯೇ ಕರುಣ ಮಹೋ-
ದಧಿಯೆ ಕಮನೀಯ ಕಪಿಲಪ್ರಬೋಧ ಮುದ್ರಾ-ಭಯಂಕರಾಂಬುಜ ||೨||

ಜಾತರೂಪ ಜಟಾಜೂಟ ಶ್ರೀನಿಕೇತನ ತಿಲಕ ಲಲಾಟ
ಪೀತ ಕೃಷ್ಣಾಜಿನ ಶ್ವೇತ ಶ್ರೀ ಯಜ್ಞೋಪವೀತ ಮೇಖಲದಂಡಾನ್ವಿತ ಕಮಂಡಲ
ಭೂತಿ ಕೃತ್ಸದ್ಭೂತಿದಾಯಕ ಶ್ರೀಪತಿ ಜಗನ್ನಾಥವಿಠಲನೆ
ತುತಿಸಬಲ್ಲೆನೆ ಪಾತಕನು ಅಲ್ಪಾತ್ಮಕನು ನಾ ||೩||

*********