Showing posts with label ನಾರಸಿಂಹನೆ ಧೀರ ನಂಬಿದೆನೊ ಪೊರೆಯೊ gopalakrishna vittala. Show all posts
Showing posts with label ನಾರಸಿಂಹನೆ ಧೀರ ನಂಬಿದೆನೊ ಪೊರೆಯೊ gopalakrishna vittala. Show all posts

Monday 2 August 2021

ನಾರಸಿಂಹನೆ ಧೀರ ನಂಬಿದೆನೊ ಪೊರೆಯೊ ankita gopalakrishna vittala

ನಾರಸಿಂಹನೆ ಧೀರ | ನಂಬಿದೆನೊ ಪೊರೆಯೊ

ಶ್ರೀ ರಮಾಪತಿ ವೀರ | ಕರಿಗಿರಿ ವಿಹಾರ ಪ.


ಸಾರಿದೆನೊ ನಿನ್ನ ಪದವ ಅನುದಿನ

ಸೇರಿಸೆನ್ನನು ಭಕ್ತಕೂಟದಿ

ಗಾರು ಮಾಡುವುದುಚಿತವೇ ಹರಿ

ಪಾರುಗಾಣಿಸೊ ಭವ ಸಮುದ್ರದಿ ಅ.ಪ.

ತಡೆಯಲಾರೆನೊ ತಾಪ | ನಾನಾರಿಗುಸುರಲೊ

ಒಡಲ ದುಃಖವ ಭೂಪ | ನೀನಲ್ಲದಿಲ್ಲವೊ

ಕಡೆಮಾಡು ಭವ ಶ್ರೀಪ | ತೋರದಿರು ಕೋಪ

ಘುಡು ಘುಡುಸಿ ನೀ ಎನ್ನ ಬೆದರಿಸೆ

ತಡೆವೆನೇ ನಿನ್ನ ಕೋಪದಗ್ನಿಗೆ

ಬಿಡು ಬಿಡು ಬಿಂಕ ಎನ್ನೊಳು

ತಡೆಯೊ ಎನ್ನ ದುರುಳತನಗಳ

ಕಡುಕರುಣಿ ನೀನಲ್ಲವೆ ಹರಿ

ಒಡಲೊಳಗೆ ಪ್ರೇರಕನು ನೀನೆ

ನಡಸಿದಂದದಿ ನಡೆವೆನಲ್ಲದೆ

ಒಡೆಯ ಎನ್ನ ಸ್ವತಂತ್ರವೇನೊ? 1

ದುರುಳತನದಲಿ ದೈತ್ಯ | ಭೂವಲಯವೆಲ್ಲವ

ಉರವಣಿಸಿ ದುಷ್ಕುತ್ಯ | ಎಸಗುತಿರೆ ದುಃಖದಿ

ಸುರರು ಮೊರೆಯಿಡೆ ಸತ್ಯ | ದೃಢಮನದಿ ಭೃತ್ಯ

ಕರಕರೆ ಪಿತ ಬಡಿಸುತಿರಲು ದೊರೆಯೆ ನೀ

ಪೊರೆ ಎಂದು ಮೊರೆಯಿಡೆ

ಸರ್ವವ್ಯಾಪಕನೆಂದು ತೋರಲು

ತ್ವರಿತದಲಿ ಕಂಭದಲಿ ಬಂದು

ಸರಸಿಜವು ಕಂಗೆಡುವೊ ಕಾಲದಿ

ಧರಿಸಿ ತೊಡೆಯ ಮೇಲಸುರ ಕಾಯವ

ಕರುಳ ಬಗೆದು ಮಾಲೆ ಧರಿಸಿ

ಪೊರೆದೆಯೊ ಸ್ತುತಿ ಕೇಳಿ ಬಾಲನ 2

ಅಜಭವಾದಿಗಳೆಲ್ಲ | ಸ್ತುತಿಸಿದರೆ ಮಣಿಯದ

ಭುಜಗಶಾಯಿ ಶ್ರೀ ನಲ್ಲ | ನಾ ನಿನ್ನ ಸ್ತುತಿಸಿ

ಭಜಿಸಲಾಪೆನೆ ಕ್ಷುಲ್ಲ | ಮಾನವನ ಸೊಲ್ಲ

ನಿಜಮನವ ನೀ ತಿಳಿದು ಸಲಹೊ

ಧ್ವಜವಜ್ರಪದ ಕಮಲ ತೋರಿ

ಕುಜನನಲ್ಲವೊ ಹಿರಿಯರೆನಗೆ

ನಿಜಗತಿಯ ಪಥ ತೋರುತಿಹರೊ

ರಜ ತಮವ ದೂರಟ್ಟಿ ಶುದ್ಧದಿ

ಭಜಿಸುವಂದದಿ ಕೃಪೆಯ ಮಾಡಿ

ಸುಜನರೆನ್ನನು ಪಾಲಿಸುತ್ತಿರೆ

ನಿಜದಿ ಗೋಪಾಲಕೃಷ್ಣವಿಠ್ಠಲ3

****