Showing posts with label ಶಾಂತ ಜನರಿಗೀಶಾ ರವಿಕುಲ ಕಾಂತನ ನಿಜದಾಸ shreenidhi vittala. Show all posts
Showing posts with label ಶಾಂತ ಜನರಿಗೀಶಾ ರವಿಕುಲ ಕಾಂತನ ನಿಜದಾಸ shreenidhi vittala. Show all posts

Friday 6 August 2021

ಶಾಂತ ಜನರಿಗೀಶಾ ರವಿಕುಲ ಕಾಂತನ ನಿಜದಾಸ ankita shreenidhi vittala

 ..

kruti by ಶ್ರೀನಿಧಿವಿಠಲರು shreenidhi vittalaru


ಶಾಂತ ಜನರಿಗೀಶಾ ರವಿಕುಲ

ಕಾಂತನ ನಿಜದಾಸ ಪ


ಭ್ರಾಂತಿ ಬಿಡಿಸಿ ನಿಶ್ಚಿಂತ ಮನದಿ ವೇ-

ದಾಂತವೇದ್ಯನಲಿ ಸಂತಸ ಕೊಡುವನ ಅ.ಪ.


ಕಡಲ ದಾಟಿ ಬಂದೂ ಒಡೆಯನ

ಮಡದಿಗುಂಗುರ ತಂದೂ

ಸಡಗರದಲಿ ತುಡುಗ ದೈತ್ಯವ ಕೊಂದು

ಅಡಿಯಿಡೆ ಲಂಕೆ ಸುಟ್ಟು ಸುಡುಭುಗಿ ಮಾಡಿದೆ 1


ಏಕಚಕ್ರದಲ್ಲೀ ಬಕಗೆಂ-

ದ್ಹಾಕಿದ ಗ್ರಾಸದಲೀ

ಶಾಖಡಿಸಲಬಿಡದೇಕತುತ್ತು ಮಾಡಿ

ಭೀಕರ ದೈತ್ಯನವಲೋಕಿಸದ್ಹೊಡದೆಲೋ 2


ವಾಯು ಹನುಮ ಭೀಮ ಮಧ್ವಾ

ಕಾಯೋ ಪೂರ್ಣಕಾಮಾ

ಸಾಯ ಬಡಿದೀ ನೀ ಮಾಯಿಗಳೆಲ್ಲರ

ರಾಯ ಶ್ರೀನಿಧಿವಿಠಲಾಯಗೆ ತಿಳಿಸಿದೆ ಎಲೆಲೋ 3

***