Showing posts with label ಪೂರ್ವಾಶ್ರಮದ ನಾಮ ankita madhwesha krishna raghuvarya teertha stutih. Show all posts
Showing posts with label ಪೂರ್ವಾಶ್ರಮದ ನಾಮ ankita madhwesha krishna raghuvarya teertha stutih. Show all posts

Thursday 26 December 2019

ಪೂರ್ವಾಶ್ರಮದ ನಾಮ ankita madhwesha krishna raghuvarya teertha stutih

ರಘುವರ್ಯತೀರ್ಥರ ಸ್ಮರಣೆ

ಪೂರ್ವಾಶ್ರಮದ ನಾಮ ರಾಮಚಂದ್ರಶಾಸ್ತ್ರಿಎಂದೆನುತ
ಪ್ರಚಾರ ಕಾಲದಲ್ಲಿ ಬಹಳ ಆಸಕ್ತಿಯ ಪೊಂದುತ್ತ||ಪಲ್ಲ||

ಸಂಚಾರಮಾರ್ಗದಿ ಮುಂದೆ  ಮಣಪುರ ಗ್ರಾಮಸೇರಿ
 ಮ್ಲೇಚ್ಛ ರಾಜನಿರಲು  ಮತ್ತೆ ಮುಂದೆ ಸಾಗಿ||೧||

 ಮೂಲರಾಮನ ಪೆಟ್ಟಿಗೆ ಭುಜದ ಮೇಲೆ ಇರಿಸಿ
ನದಿಯ ದಾಟುತಿರಲು ಭೀಮರತಿಯು ದಾರಿಯ ಬಿಡಲು||೨||

 ಸ್ವರ್ಣಾವಳಿ ಗ್ರಾಮದಲ್ಲಿ ಸುಬ್ಬಾಭಟ್ಟ ದಂಪತಿಗಳಿಗೆ 
 ಮಗುವು ಆಗುವ ಸೂಚನೆ ತಿಳಿಸಿ ಮಠಕ್ಕೆ ಕೊಡಬೇಕಂತ
ಹೇಳಿ||೩||

 ಪ್ರಸವದ ಸಮಯದಲ್ಲಿ ಬಂಗಾರು ತಟ್ಟೆಯ ಕಳಿಸಿ
 ಕುಶಲದಿ ಮಗುವನೆ ತರಿಸಿ ಕೂರ್ಮಾಭಿಷೇಕದ ಹಾಲು ಕುಡಿಸಿ||೪||

 ನಾಮಕರಣ ಮಾಡಿ ರಾಮಚಂದ್ರನೆಂದುಯುಕ್ತ
ವಯಸುಬರಲು ಉಪನಯನ ಕಾರ್ಯ ಮಾಡಿ||೫||

 ಸರ್ವಮೂಲ ಗ್ರಂಥಗಳ ಪಾಠ ಪ್ರವಚನ ಮಾಡಿ
ತುರೀಯಾಶ್ರಮವಿತ್ತು"ರಘೋತ್ತಮತೀರ್ಥ" ರೆಂದು ಕರೆದು||೬||

 ಪಿಂಗಳನಾಮ ಸಂವತ್ಸರ ದ ಜ್ಯೇಷ್ಟ  ಬಹುಳ  ತದಿಗಿ
ಮಧ್ವೇಶಕೃಷ್ಣನ  ಪಾದ ಸೇರಿದರು ಬಹು ತ್ವರದಿ||೭||
*********