Showing posts with label ಯೇನೆಲೆ ಭಾಮಿನಿ ಬಾಗಿಲು ತೆಗೀಯ ankita others part of srinivasa kalyana. Show all posts
Showing posts with label ಯೇನೆಲೆ ಭಾಮಿನಿ ಬಾಗಿಲು ತೆಗೀಯ ankita others part of srinivasa kalyana. Show all posts

Tuesday, 13 April 2021

ಯೇನೆಲೆ ಭಾಮಿನಿ ಬಾಗಿಲು ತೆಗೀಯ ankita others part of srinivasa kalyana

 ಶ್ರೀ ಏರೀ ಶೇಷಾಚಾರ್ಯ ಕೃತ ಶ್ರೀ ಶ್ರೀನಿವಾಸ ಕಲ್ಯಾಣದ ಒಂದು ಪ್ರಸಂಗದಲ್ಲಿ ಶ್ರೀ ಶ್ರೀನಿವಾಸನು ತನ್ನನ್ನು ತಾನೇ ವರ್ಣಿಸಿಕೊಳ್ಳುವ ಪರಿ...ಬಹು ಸುಂದರವಾಗಿದೆ...

ಸುಪದ || ೬೧ || ತಾಳ: ಅರ್ಧಾದಿ

ಯೇನೆಲೆ ಭಾಮಿನಿ ಬಾಗಿಲು ತೆಗೀಯ | ನಾ ಗಾನಪ್ರಿಯನು ಬಂದೆ ಕೋಮಲೀ | ನಾನು ಗಾನಪ್ರಿಯ 

ಯೇನೆಲೆಯನುತೆಂದು ಹೀನ ಮಾತಾಡುವಾ | ನೀನ್ಯಾರೆ ಕತ್ತಲಲ್ಲಿ ಬಂದವಾ ಯಲ ನೀನಾರೈ ಕತ್ತಲಲ್ಲಿ || ೧ ||

ತುಚ್ಛ ಸೋಮಕನಾ ಮಡುಹೀ ಸ್ವಚ್ಛ ವೇದವಾ ತಂದಾ ಮತ್ಯಾವತಾರನೇ ಮಾನಿನಿ ನಾನು । ಮತ್ಯಾವತಾರನೇ ಮತ್ತ್ವ, ನೀನಾದರೆ ಕುತ್ತಿತ ಜಲದೊಳು ಸ್ಟೇಚ್ಛೆಯಿಂದಲಿ ತಿರುಗೋಗ್ಯ ನೀನು ಸ್ಟೇಚ್ಛೆಯಿಂದಲಿ ತಿರುಗೋಗೈ || ೨ ||

ಮಂದರ ಗಿರಿಯನು ಛಂದಾಗಿ ಯತ್ತಿದ ಕುಂದಾರದಾನೆ ಕೂರ್ಮರೂಪಿಯೇ ನಾನು ಕುಂದಾರವಾನೆ ಮಂದಾರ ಯತ್ತಿದವಗೆ ಯಿಂದು ಬಾಡಿಗೆ ಕೊಟ್ಟು ಮುಂದೆ ಕೆಲಸಾ ಪೇಳುವರಾರೆ | ಯಿಲ್ಲಿ ಕೆಲಸಾ ಪೇಳುವರಾರೈ || ೩ ||

ದುರಳಾ ಹಿರಣ್ಯಾನ ಮುರಿದು ಭೂಮಿಯಾ ತಂದ ವರಹಾವತಾರನೇ ವನಜಾಕ್ಷಿ ನಾನು | ವರಹಾವತಾರನೇ ವನಜಾಕ್ಷಿ 

ವರಾಹ ನೀನಾದರೆ ತರುಳೇರು ಕಂಡಂಜಾರೂ ಗಿರಿಮುಖಿಗಳ ಕುರಿತೋಗೈ | ಬೇಗ ನೀನು ಗಿರಿಮುಖಿಗಳ ಕುರಿತೋಗ್ಯ || ೪ ||

ಕರಿಯಾ ಕಂಭದೀ ಬಂದು ದುರುಳನೂದರ ಬಗದಾ | ನರಸಿಂಹರೂಪ ಕಣೆ ನಾಯಕಿ | ನಾನು ನರಸಿಂಹರೂಪ ಕಣೆ || 

ನರಸಿಂಹನಾದರೇ ನಾರೇರು ನಕ್ಕಾರು ಕರಿರಾಜಗಳ ಹುಡುಗೋಗೈ | ಕರಿರಾಜಗಳ ಹುಡುಗೋಗೈ || ೫ ||

ಬಲಿಯ ದಾನವ ಬೇಡೀ ಯಳಿಯಾ ಸಾಧಿಸಿಯವನಾ |ತಲಿಯಾ ತುಳಿದ ವಾಮನಾಖ್ಯನೇ ನಾನೂ || ವಾಮನಾಖ್ಯನೇ ಬಲಿಯ ದಾನವ ಬೇಡಿದ ಚೆಲುವ ಬ್ರಹ್ಮಚಾರಿಗೆ ಕೆಲಸಾ ನಾರೇರಲ್ಲೇನದ್ಹೇಳೈ | ನಿನಗೆ ಕೆಲಸಾ ನಾರೇರಲ್ಲೇನದೇ || ೬ ||

ಛಂದಾದಿ ಕ್ಷತ್ರಿಯರ ಕೊಂದು ಶೋಣಿತ ಮಡುಹಾ ಹಿಂದೆ ಮಾಡಿದ ಪರಶುರಾಮನೆ ನಾನು | ಪರಶುರಾಮನೇ ನಾನು ||

ಹಿಂದೆ ನೀ ಕ್ಷತ್ರಿಯರ ಕೊಂದವನಾದರೆ ಮುಂದೆ ಖಳರ ಕೊಲ್ಲಲಿ ಪೋಗೈ | ಮುಂದೆ ಖಳರ ಕೊಲ್ಲಲಿ ಪೋಗ್ಯ ॥ ೭ ||

ಛಂದಾದಿ ರಾವಣನಾ ಕೊಂದು ಸೀತೆಯಾ ಬ್ಯಾಗ ತಂದಂಥಾ ರಾಮನು ಕಾಣೆ ರಮಣೀ | ನಾನು ರಾಮನು ಕಾಣೆ ||ತಂದಾದರೆ ಸೀತೆಯ ಪೋಂದೀಯಯೋಧ್ಯಾವ ಕುಂದಾರದನೇ ರಾಜ್ಯಪಾಲಿಸೈ ಬ್ಯಾಗ ನೀನು ಕುಂದಾರದನೇ ರಾಜ್ಯಪಾಲಿಸೈ || ೮ ||

ಗೋವರ್ಧನವನೆತ್ತಿ ಗೋವು ಗೋಪಾಲಕರಾ। ದೇವ ಕಾಯಿದಾ ಗೋಪಾಲಕೃಷ್ಣನೇ ನಾನು | ದೇವ ಕಾಯಿದಾ ಗೋಪಾಲಕೃಷ್ಣನೇ ॥ 

ಗೋವುಗಳನ್ನು ಕಾಯ್ವಾ ನೀ ಯಿವ್ಯಾಳಿಯಾಕೆ ಬಂದೀ ತೀವ್ರ ಉದಯದಲ್ಲಿ ಬಾಹೋಗೈ ನಾಳೆ | ತೀವ್ರ ಉದಯದಲ್ಲಿ ಬಾಹೋಗೈ || ೯ ||

ಶುದ್ಧೋದನಿಯಲ್ಲಿ ನಾನಿದ್ದು ಬೋಧಿಸಿದಾವನಾ ಬುದ್ಧಾ ಬಂದಾವ ಕಾಣೆ ಶುದ್ಧಳೆ ನಾನು । ಬುದ್ದಾ ಬಂದಾವ ಕಾಣೆ ಬುದ್ಧ ನೀನಾದರಲ್ಲಿದ್ದವರೆಲ್ಲಾ ಜನರು ಬೌದ್ಧರಿದ್ದಲ್ಲಿ ಪೋಗ್ಯ | ಬೌದ್ಧರಿದ್ದಲ್ಲಿ ನೀ ಪೋಗೈ || ೧೦ ||

ಕುದರೀಯನೇರಿ ಖಡ್ಗ ಮುದದಿ ಧರಿಸಿ ಬಂದಾ ಸುದತಿ ಕಲ್ಕಿಯು ಕಾಣೆ ಶೋಭಾಳೇ | ನಾನು ಸುದತಿ ಕಲ್ಕಿಯು ಕಾಣೆ|| 

ಕುದುರೆಯೇರಿದ ಕಲ್ಕಿ ಮುದದಲ್ಲಿ ಬರಲ್ಯಾಕೆ ವಧೀಯಾ ಮಾಡೆ ದುಷ್ಟರಾ ಮೋಗಯ್ಯಾ ಬ್ಯಾಗ ॥ ವಧೀಯಾ ಮಾಡೆ ದುಷ್ಟರಾ ಪೋಗೈ || ೧೧ ||

ನಾರೀಯನೆತ್ತಿಕೊಂಡು ನಾರೀ ಬಹಳ್ಹೊತ್ತಾಯಿತು ಧೀರೆ ವಂದಿಪೆ ತೆರೆ ಬಾಗಿಲು ನಿನ್ನಾ | ವಂದಿಪೆ ತೆರೆ ಬಾಗಿಲಾ ||

ನೀರಜಾಕ್ಷನೇ ನಿನ್ನ ನಾರಿಯ ಸಹಿತಾಲೆ ವೀರ ಸುಖದಿ ಬದುಕೋಗೈ | ಬ್ಯಾಗ ವೀರ ಸುಖದಿ ಬದುಕೋಗೈ ॥ ೧೨ ||

ಯೇರೀವೇಂಕಟ ನಿನ್ನ ವಾರಿಜಾಕ್ಷೀ ಮುದ್ದಾಡೆ ನೀರಜೋದ್ಭವಳ ಸಹಿತಾ ಬಂದೆನೇ ಲಕುಮೀ ॥ ನಾನು ನೀರಜೋದ್ಭವಳ ಸಹಿತ ಬಂದೆನೇ ನೀರಜಾಕ್ಷಾ ನೀನಾದರಾನಂದವೆನುತೆಂದು ಭಾರೀ ಬಾಗಿಲು ತೆಗೆದಪ್ಪಿದಾಳು ಹರಿಗೆ | ಭಾರೀ ಬಾಗಿಲು ತೆಗೆದಪ್ಪಿದಾಳು ಹರಿಗೆ || ೧೩ ||

***

yeri sheshacharyaru - jyeshta shukla ashtami