Showing posts with label ಅಂತರಂಗದಿ ಬ್ರಹ್ಮಾನಂದ shree krishna ankita suladi ಕೃಷ್ಣ ಸುಳಾದಿ ANTARANGADI BRAHMANANDA KRISHNA SULADI. Show all posts
Showing posts with label ಅಂತರಂಗದಿ ಬ್ರಹ್ಮಾನಂದ shree krishna ankita suladi ಕೃಷ್ಣ ಸುಳಾದಿ ANTARANGADI BRAHMANANDA KRISHNA SULADI. Show all posts

Sunday 8 December 2019

ಅಂತರಂಗದಿ ಬ್ರಹ್ಮಾನಂದ shree krishna ankita suladi ಕೃಷ್ಣ ಸುಳಾದಿ ANTARANGADI BRAHMANANDA KRISHNA SULADI

Audio by Mrs. Nandini Sripad

ಶ್ರೀ ವ್ಯಾಸರಾಜ ವಿರಚಿತ  ಉದಯಾದ್ರಿ ಶ್ರೀಕೃಷ್ಣ ಸುಳಾದಿ 

 ರಾಗ ಬಾಗೇಶ್ರೀ 

 ಧ್ರುವತಾಳ 

ಅಂತರಂಗದಿ ಬ್ರಹ್ಮಾನಂದನಾಗಿ ನೀನಿರಲು
ಅಂತಕನ ಭಯವೇನಯ್ಯ ಶ್ರೀಹರಿಯೆ
ಪಂಥದಿ ದನುಜನು ಬಾಧಿಸಲು ಸುತನ
ಚಿಂತೆ ಯಾರಿಗೋ ಎಂದಿರದೆ ಸಾಕಿದೆ
ಉದಯಾದ್ರಿ ಶ್ರೀಕೃಷ್ಣ ॥ 1 ॥

 ಮಠ್ಯತಾಳ 

ಮುರಹರ ನರಹರಿ ಸಿರಿವರ ಗಿರಿಧರ 
ಎಂದು ಕರೆಯಲು ಕರುಣದಿ ಬಂದು
ಕರಿಯ ಕಾಯಿದೆ ಸಂತೋಷದಿ ಕಾಯಿದೆ
ನರಕಾಂತಕ ಉದಯಾದ್ರಿ ಶ್ರೀಕೃಷ್ಣ ॥ 2 ॥

 ತ್ರಿಪುಟತಾಳ 

ತನ್ನ ತಾನರಿಯಾದೆ ತಗುಲಿದ ಕಾಳಿಯನು
ನಿನ್ನ ಪರಾಕ್ರಮ ತೋರಿ ಕಾಯಿದೆ ಶ್ರೀಹರಿಯೆ
ಮುನ್ನ ನಾ ನಿನ್ನ ಡಿಂಗರಿಗನಾದೆನಯ್ಯಾ
ಪನ್ನಗಾಸನ ತುರಗ ಪಾಲಿಸು ಉದಯಾದ್ರಿ ಶ್ರೀಕೃಷ್ಣ ॥ 3 ॥

 ಅಟ್ಟತಾಳ 

ನಿನ್ನ ಮೃದು ಪಾದವ ನೋಯದಂತೆ
ಎನ್ನ ಶಿರಸ್ಸಿನಲ್ಲಿಡೋ
ರನ್ನ ಕಾಲಂದಿಗೆ ಗೆಜ್ಜೆಯ ನಾದದಿಂ -
ದಿನ್ನು ಧಿಂ ಧಿಮಿಕೆಂದು ಕುಣಿಸುವೆ ಉದಯಾದ್ರಿ ಶ್ರೀಕೃಷ್ಣ ॥ 4 ॥

 ಏಕತಾಳ 

ಎನ್ನ ದೃಢವ ನೀ ಕಂಡೆ ಯಾದವ ಕೃಷ್ಣ
ನಿನ್ನ ದೃಢವ ನಾ ಕಾಣೆ
ಎನ್ನ ದೃಢ ನಿನ್ನ ದೃಢವೆರಡನು ಕಂಡರೆ
ದಿನ್ನು ಧಿಂ ಧಿಮಿಕೆಂದು ಕುಣಿಸುವೆ ಉದಯಾದ್ರಿ ಶ್ರೀಕೃಷ್ಣ ॥ 5 ॥

 ತ್ರಿಪುಟತಾಳ 

ಎನ್ನ ಗುಣದೋಷಗಳನೆಣಿಸುವರೇನೊ ಶ್ರೀಹರಿ
ನಿನ್ನ ಬಿರುದಾಪನ್ನ ರಕ್ಷಕನೆಂದು ವಿಭೀ -
ಷಣನು ಕೀರ್ತಿಸಲಿ ಆ ಆ ಆ
ಅನ್ಯಥಾ ಶರಣಂ ನಾಸ್ತಿ 
ಅನಾಥನಾಥನೆ ಆರ್ತಬಂಧುವೆ
ನಿನ್ನ ಚರಣವನ್ನು ನಂಬಿದೆನೊ 
ಸಾಕ್ಷಿ ಉದಯಾದ್ರಿ ಶ್ರೀಕೃಷ್ಣ ॥ 6 ॥

 ರೂಪಕತಾಳ 

ಶರಣಾಗತ ಜನ ಪರಿಪಾಲನೆಂಬ
ಬಿರುದೆ ನಿಷ್ಕಾರಣ ಫಲದಾಯಕವೆನುತ
ವರುಣಿಸುತಿಹ ಕುಚೇಲನುದಿನ
ಕರುಣಾಕರ ಎನ್ನ ಕಾಯೊ ಉದಯಾದ್ರಿ ಶ್ರೀಕೃಷ್ಣ ॥ 7 ॥

 ಜತೆ 

ಎಂಥಾ ಸುಲಭನೊ ನೀನು ಉದಯಾದ್ರಿ ಶ್ರೀಕೃಷ್ಣ 
ಚಿಂತೆ ಮಾಡುವರಿಗೆಲ್ಲ ಉದಯಾದ್ರಿ ಶ್ರೀಕೃಷ್ಣ ॥
**********