Showing posts with label ರೋಗವನೆ ಪರಿಹರಿಸೋ ಭವರೋಗ ವೈದ್ಯ udayadreesha vittala. Show all posts
Showing posts with label ರೋಗವನೆ ಪರಿಹರಿಸೋ ಭವರೋಗ ವೈದ್ಯ udayadreesha vittala. Show all posts

Monday 6 September 2021

ರೋಗವನೆ ಪರಿಹರಿಸೋ ಭವರೋಗ ವೈದ್ಯ ankita udayadreesha vittala

 ರಾಗ: ಕಾನಡ ತಾಳ: ಖಂಡಛಾಪು

ರೋಗವನೆ ಪರಿಹರಿಸೋ ಭವರೋಗ ವೈದ್ಯ


ರಾಘವನ ಪೂಜಿಸುವ ಭಾಗವತ ಪ್ರಿಯ ಅ. ಪ


ವರಹಜೆ ತಟವಾಸ ಪುರ ಮಂತ್ರಾಲಯಾಧೀಶ 

ವರ ಬೃಂದಾವನದಿ ವಾಸ ಮೆರೆವೆ ಪ್ರತಿದಿವಸ

ಸುರಮುನಿ ಉಪದೇಶ ಹರಿರೇವ ವಿಜಿಜ್ಞಾಸ

ಹರಿಸೋ ಮನಕ್ಲೇಶ ದೂರಮಾಡಿ ಆಶಾ 1

ಬಂಗಾರ ಕಣ್ಣನ ಅಣ್ಣನ ಎದುರಿನೊಳು

ರಂಗ ಸರ್ವೋತ್ತಮನೆಂಬ ಸತ್ಯವನೇ ತಿಳಿಸಿ

ಹಿಂಗಿಲ್ಲದೇ ಬಂದ ಭಂಗವನೇ ತಾ ಸಹಿಸಿ ನರ-

ಸಿಂಗನನು ತೋರಿಸಿದ ಉತ್ತುಂಗ ಮಹಿಮ 2

ವ್ಯಾಸರಾಯ ಮುನಿ ಎನಿಸಿ ವಾಸುದೇವನ ಸೇವಿಸಿ

ಶ್ರೀಶ ಕೃಷ್ಣನಂಕಿತದಿ ಕೀರ್ತನೆಗಳ ರಚಿಸಿ

ವ್ಯಾಸ ದಾಸ ಕೂಟ ಸಮನ್ವಯವನೇ ತಿಳಿಸಿ

ಶ್ರೇಷ್ಠ ಚಂದ್ರಿಕೆ ರಚಿಸಿ ವಸುಧೆಯೊಳು ಮೆರೆಸಿ 3

ಅನಿಷ್ಠ ಪುಣ್ಯವ ಗಳಿಸಿ ಕನಿಷ್ಟರ ಹಿತಕೆ ಬಳಸಿ

ಅನೇಕ ಸೇವೆ ಸ್ವೀಕರಿಸಿ ದೀನರನ್ನುದ್ಧರಿಸಿ

ಜಿಷ್ಣುನಣ್ಣನಾವೇಶ ವಿಷ್ಣುವಿನ ಆದೇಶ

ಚೆನ್ನ ಬೃಂದಾವನದಿ ವಾಸ ಎನಗೀಯೋ ಲೇಶ 4

ಶರಣೆಂದು ಬರುವ ಭಕುತರಿಗೆ ಕಲ್ಪತರು

ಕರೆದು ಅಭಯನೀವ ಸುರ ಕಾಮಧೇನು

ವರದ ಉದಯಾದ್ರೀಶವಿಠಲನ ನಿಜದಾಸ

ಚರಣ ಭಜಕರಘನಾಶ ಪೊರೆಯುತಿಹೇ ಅನಿಶಾ 5

***