Showing posts with label ಮಾಧವನಂಘ್ರಿ ನಿತ್ಯ vijaya vittala ankita suladi ವಾದಿರಾಜರ ಮೇಲೆ ಸ್ತೋತ್ರ ಸುಳಾದಿ MAADHAVANANGHRI NITYA STOTRA SULADI VADIRAJA. Show all posts
Showing posts with label ಮಾಧವನಂಘ್ರಿ ನಿತ್ಯ vijaya vittala ankita suladi ವಾದಿರಾಜರ ಮೇಲೆ ಸ್ತೋತ್ರ ಸುಳಾದಿ MAADHAVANANGHRI NITYA STOTRA SULADI VADIRAJA. Show all posts

Sunday 8 December 2019

ಮಾಧವನಂಘ್ರಿ ನಿತ್ಯ vijaya vittala ankita suladi ವಾದಿರಾಜರ ಮೇಲೆ ಸ್ತೋತ್ರ ಸುಳಾದಿ MAADHAVANANGHRI NITYA STOTRA SULADI VADIRAJA

Audio by Mrs. Nandini Sripad

vadirajara stotra sulaadi  ವಾದಿರಾಜರ ಮೇಲೆ ಸ್ತೋತ್ರ ಸುಳಾದಿ
ಶ್ರೀ ವಿಜಯದಾಸಾರ್ಯ ವಿರಚಿತ 
ಶ್ರೀ ವಾದಿರಾಜರ ಸ್ತೋತ್ರ ಸುಳಾದಿ

ರಾಗ ಮಧುವಂತಿ 

ಧ್ರುವತಾಳ

ಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪ
ಸಾಧು ಸನ್ಮುನಿವರ್ಯ ಸಮ್ಮೋದತೀರ್ಥರ ಪಾದ
ಸಾದರದಿಂದ ಭಜಿಸಿ ಮೇದಿನಿಗೆ ಭಾರ -
ವಾದ ಮಾಯಾವಾದಿಗಳ ಗೆದ್ದ
ವಾದಿರಾಜರ ಮಹಿಮೆ ವರ್ಣಿಸಲಳವಲ್ಲಾ
ಮಾಧವ ವೇದವೇದ್ಯ ವಿಜಯವಿಠ್ಠಲ ತಾನು
ಆದರದಿಂದವರ ಭುಜದಿ ಹಯವಕ್ತ್ರನಾಗಿ
ಪಾದವನ್ನು ಇಟ್ಟು ಸ್ವಾದುವಾದ 
ಕಡಲಿ ಹೂರಣವನು ಉಂಡ
ಶ್ರೀಧರನ ಮಹಿಮೆ ಸಾಧುಜನರು ಕೇಳಿ ॥ 1 ॥

ಮಟ್ಟತಾಳ

ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ
ಮೃಡನುತ ಗೋವಿಂದ ಜಡಿಥದ್ಹರಿವಾಣದಲ್ಲಿ
ಕಡಲಿ ಸಕ್ಕರೆ ಬೆರೆಸಿ ಲಡ್ಡುಗೆಯ ಮಾಡಿದ
ಸಡಗರದ ಭಕ್ಷ ಪಾಯಸ ಘೃತ ನೀಡೆ
ಒಡಿಯನು ಬ್ರಹ್ಮಾದಿ ಪರಿವಾರ ಸಹಿತುಂಡು
ಕಡಗೋಲು ನೇಣು ಪಿಡಿದುಡುಪಿಲಿನಿಂದ
ಉಡುರಾಜಮುಖ ನಮ್ಮ ವಿಜಯವಿಠ್ಠಲನು
ಬೆಡಗು ಕಾರ್ಯವನ್ನು ನಡೆಸಿದ ಬಗೆ ಕೇಳಿ ॥ 2 ॥

ತ್ರಿವಿಡಿತಾಳ

ತಾಮಸ ಗುಣವುಳ್ಳ ಪಾಮರ ಜನರಿಗೆ
ಈ ಮಹಿಮೆ ದೊರಕುವುದೇ ಸ್ವಾಮಿ ಸಿಲಕುವನೆ
ಕಾಮಿಸಿ ಕೋಟಿ ವರುಷ ನಾಮ ನುಡಿಯೆ ಪರಂ -
ಧಾಮ ದೊರಿಯದು ಭೂಮಿಯೊಳಗಿದ್ದ
ಭ್ರಾಮಕ ಜನರಿಗೆ 
ವಾಮದೇವನೆ ಹಿರಿಯನೆಂದು ಬುದ್ಧಿಯ ಕೊಡುವ
ಕಾಮಾರಿ ವಂದ್ಯ ನಮ್ಮ ವಿಜಯವಿಠ್ಠಲನು
ಸಾಮಾನ್ಯ ಜನರಿಗೆ ದೊರಕುವನೆ ಕೇಳಿ ॥ 3 ॥

ಅಟ್ಟತಾಳ

ಅಜ ಸತ್ಯಲೋಕಾಧಿಪತ್ಯವನ್ನು ಮಾಡಿ ದಿ -
ಗ್ವಿಜಯ ಮಾಡಲು ಪುರಕೆ 
ನಿಜ ಸುಜ್ಞಾನ ಪೂರ್ಣಪ್ರಜ್ಞರೆಂಬೋ ಮುನಿಯು
ಅಜನ ಪದಕೆ ಬಂದು ಅಖಿಳರನಾಳಿದಾ
ನಿಜ ವಾಯು ಹನುಮ ಭೀಮ ಮಧ್ವನೆನಿಸಿದ
ವಿಜಯಸಾರಥಿ ಪಾದರಜದ ಮಹಾತ್ಮೆಯಿಂದ
ಗಜವೈರಿ ಭಂಜನ ವಿಜಯವಿಠ್ಠಲನ್ನ
ಭಜನಿಯ ಗೈಯುತ ಬಹುಕಾಲದಿ
ಋಜುಗಣ ಪಂಕ್ತಿಯೊಳಗೆ ಕುಳಿತಾ
ನಿಜ ನಿರ್ಮಲ ಸುಜ್ಞಾನ ಧ್ಯಾನದಿಂದ 
ಜ್ಞಾನಪಕ್ವಾದ ಮನವುಳ್ಳ
ಸುಜನ ಶಿರೋಮಣಿ ವಾದಿರಾಜನು ತಾ
ನಿಜವಾಗಿ ಬೊಮ್ಮಾಂಡ ಪುರಾಣ ಸಾಧಕರಿಂದ
ಅಜಪದಕೆ ಸಲ್ವನು ಲೇಶ ಸಂಶಯಬೇಡಿ
ನಿಜ ನಿಜ ನಿಜವೆಂದು ನಿತ್ಯ ಕೊಂಡಾಡಿರೊ ॥ 4 ॥

ಆದಿತಾಳ

ಮನ ಶುದ್ಧರಾಗಿ ಮಾಧವನಂಘ್ರಿಯನು
ದಿನ ದಿನದಲ್ಲಿ ನಂಬಿ ಕೊಂಡಿಪ್ಪರೆ
ಅನವರತಾನಂದ ಗುರು ಮಧ್ವರಾಯರ ದಿವ್ಯ -
ವನಜಪಾದಂಗಳ ಸ್ಮರಿಸಲು
ಹನುಮೇಶ ನಮ್ಮ ಸಿರಿ ವಿಜಯವಿಠ್ಠಲ ತಾನು
ಮುನಿ ವಾದಿರಾಜರ ಸಾಮಾನ್ಯರೆಂತೆಂದು
ಎಣಿಸಿದವರನ್ನು ಘನವಾಗಿ ಶಿಕ್ಷಿಪ
ಇನತನೋಧ್ಬವ ಕೋಪದಿಂದ
ವಾದಿರಾಜರ ಮಹಿಮೆಯನು ಕೊಂಡಾಡಿ 
ಅನುದಿನ ಸುಜನರು ॥ 5 ॥

ಜತೆ

ಮೋದತೀರ್ಥರ ಮತ ಸೇನಾಧಿಪತಿಯಾದ
ವಾದಿರಾಜ ಮುನಿಯು ವಿಜಯವಿಠ್ಠಲ ದಾಸಾ ॥
***********

ಧ್ರುವತಾಳ
ಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪ
ಸಾಧು ಸನ್ಮುನಿವರ್ಯ ಸಮ್ಮೋದ ತೀರ್ಥಕರಪಾದ
ಸಾದರದಿಂದ ಭಜಿಸಿ ಮೇದಿನಿಗೆ ಭಾರ
ವಾದ ಮಾಯಾವಾದಿಗಳ ಗೆದ್ದೆ
ವಾದಿರಾಜರ ಮಹಿಮೆ ವರ್ಣಿಸಲರ್ಹನಲ್ಲಾ
ಮಾಧವ ವೇದವೇದ್ಯ ವಿಜಯವಿಠ್ಠಲ ತಾನು
ಆದರದಿಂದವರ ಭುಜದಿ ಹಯವಕ್ತ್ರನಾಗಿ
ಪಾದವನ್ನು ಇಟ್ಟು ಸ್ವಾದುವಾದ
ಕಡಲಿ ಹೂರಣವನು ಉಂಡ
ಶ್ರೀಧರನ ಮಹಿಮೆ ಸಾಧುಜನರು ಕೇಳಿ ||1||

ಮಟ್ಟತಾಳ
ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ
ಮೃಡನುತ ಗೋವಿಂದ ಜಡದ ಹರಿವಾಣದಲ್ಲಿ
ಕಡಲಿ ಸಕ್ಕರೆ ಬೆರಿಸಿ ಲಡ್ಡುಗೆಯ ಮಾಡಿದ
ಸಡಗರದ ಭಕ್ಷ ಪಾಯಸ ಘೃತ ನೀಡೆ
ಒಡೆಯನು ಬ್ರಹ್ಮಾದಿ ಪರಿವಾರ ಸಹಿತುಂಡು
ಕಡಗೋಲು ನೇಣು ಪಿಡಿದುಡುಪಿಲಿ ನಿಂದ
ಉಡುರಾಜಮುಖ ನಮ್ಮ ವಿಜಯ ವಿಠ್ಠಲನು
ಬೆಡಗು ಕಾರ್ಯವನ್ನು ನಡೆಸಿದ ಬಗೆ ಕೇಳಿ ||2||

ತ್ರಿವಿಡಿತಾಳ
ತಾಮಸಗುಣವುಳ್ಳ ಪಾಮರ ಜನರಿಗೆ
ಈ ಮಹಿಮೆ ದೊರಕುವುದೇ ಸ್ವಾಮಿ ಸಿಲಕುವನೆ
ಕಾಮಿಸಿ ಕೋಟಿ ವರುಷ ನಾಮನುಡಿಯೆ ಪರಂ
ಧಾಮ ದೊರಿಯದು ಭೂಮಿಯೊಳಗಿದ್ದ
ಭ್ರಾಮಕ ಜನರಿಗೆ ವಾಮದೇವನೆ
ಹಿರಿಯನೆಂದು ಬುದ್ಧಿಯಕೊಡುವ
ಕಾಮಾರಿ ವಂದ್ಯ ನಮ್ಮ ವಿಜಯ ವಿಠ್ಠಲನು
ಸಾಮಾನ್ಯ ಜನರಿಗೆ ದೊರಕುವನೆ ಕೇಳಿ ||3||

ಅಟ್ಟತಾಳ
ಅಜ ಸತ್ಯಲೋಕಾಧಿಪತ್ಯವನ್ನು ಮಾಡಿ ದಿ
ಗ್ವಿಜಯ ಮಾಡಲು ಪುರಕೆ
ನಿಜಸುಜ್ಞಾನ ಪೂರ್ಣಪ್ರಜ್ಞರೆಂಬೋ ಮುನಿಯು
ಅಜಪದಕೆ ಬಂದು ಅಖಿಳರನಾಳಿದಾ
ನಿಜವಾಯು ಹನುಮ ಭೀಮ ಮಧ್ವನೆನಿಸಿದ
ವಿಜಯಸಾರಥಿ ಪಾದರಜದ ಮಹಾತ್ಮೆಯಿಂದ
ಗಜವೈರಿ ಭಂಜನ ವಿಜಯವಿಠಲನ್ನ
ಭಜನಿಯ ಗೈಯುತ ಬಹುಕಾಲದಿ
ಋಜುಗಣ ಪಂಕ್ತಿಯೊಳಗೆ ಕುಳಿತಾ
ನಿಜ ನಿರ್ಮಲ ಸುಜ್ಞಾನ ಧ್ಯಾನದಿಂದ
ಜ್ಞಾನ ಪಕ್ವಾದ ಮಾನವುಳ್ಳ
ಸುಜನ ಶಿರೋಮಣಿ ವಾದಿರಾಜನು ತಾ
ನಿಜವಾಗಿ ಬೊಮ್ಮಾಂಡ ಪುರಾಣ ಸಾಧಕದಿಂದ
ಅಜಪದ ಸಲ್ವದು ಲೇಶ ಸಂಶಯಬೇಡಿ
ನಿಜ ನಿಜ ನಿಜವೆಂದು ನಿತ್ಯದಿ ಕೊಂಡಾಡಿ||4||

ಆದಿತಾಳ
ಮನಶುದ್ಧರಾಗಿ ಮಾಧವನಂಘ್ರಿಯನು
ದಿನ ದಿನದಲ್ಲಿ ನಂಬಿ ಕೊಂಡಿಪ್ಪರೆ
ಅನವರತಾನಂದ ಗುರು ಮಧ್ವರಾಯರ ದಿವ್ಯ
ವನಜ ಪಾದಂಗಳ ಸ್ಮರಿಸಲು
ಹನುಮೇಶ ನಮ್ಮ ಸಿರಿ ವಿಜಯವಿಠ್ಠಲ ತಾನು
ಮುನಿವಾದಿರಾಜರು ಸಾಮಾನ್ಯರೆಂತೆಂದು
ಎಣಿಸಿದವರನ್ನು ಘನವಾಗಿ ಶಿಕ್ಷಿಪ
ಇನತನೂಧ್ಬವ ಕೋಪದಿಂದೀ ಕಾರಣ ಮಹಿಮೆ
ಯನು ಕೊಂಡಾಡಿ ಅನುದಿನ ಸುಜನರು ||5||

ಜತೆ
ಮೋದ ತೀರ್ಥ ಮತ ಸೇನಾಧಿಪತಿಯಾದ
ವಾದಿರಾಜ ಮುನಿಯು ವಿಜಯವಿಠ್ಠಲದಾಸಾ||6||
***********