Showing posts with label ಇಷ್ಟಾದರು ದಯಮಾಡು ಪಂಡರಿನಾಥ kamalanabha vittala. Show all posts
Showing posts with label ಇಷ್ಟಾದರು ದಯಮಾಡು ಪಂಡರಿನಾಥ kamalanabha vittala. Show all posts

Thursday, 5 August 2021

ಇಷ್ಟಾದರು ದಯಮಾಡು ಪಂಡರಿನಾಥ ankita kamalanabha vittala

 ..

kruti by Nidaguruki Jeevubai

ರಾಗ - : ತಾಳ - 


ಇಷ್ಟಾದರು ದಯಮಾಡು ಪಂಡರಿನಾಥ

ವಿಟ್ಠಲ ನಿನ್ನ ಪಾದ ಮುಟ್ಟಿ ಪ್ರಾರ್ಥಿಪೆನು ll ಪ ll


ದಾನಧರ್ಮವು ಮಾಡಬೇಕೆಂದು ಮನವಿರೆ

ದಾನವಾಂತಕ ಕೃಷ್ಣ ಧನವಿಲ್ಲವಯ್ಯ

ಗಾನಲೋಲನೆ ಭಕ್ತಪಾಲ ನಿನ್ನಯ ಪಾದ

ಧ್ಯಾನವ ಮಾಳ್ಪರ ಪಾದಧ್ಯಾನ ಕೊಡಿಸುದೇವ ll 1 ll


ತೀರ್ಥಯಾತ್ರೆಗಳಿಂದ ಪಾರ್ಥಸಾರಥಿ ಕೃಷ್ಣ-

ಮೂರ್ತಿ ಸೇವಿಸಲಸಮರ್ಥನಾಗಿರುವೆ

ಮಾತು ಮಾತಿಗೆ ಕೃಷ್ಣಗೋವಿಂದ ಮಾಧವ

ಶ್ರೀಪತಿ ಶ್ರೀಧರ ಸಲಹೆಂಬ ಸ್ಮರಣೆ ll 2 ll


ಜ್ಞಾನಿಗಳೊಡನಾಡಿ ಶ್ರೀನಿವಾಸನೆ ನಿನ್ನ

ನಾನಾಲೀಲೆಗಳ ಧ್ಯಾನಿಸಲಿಲ್ಲ ಹರಿಯೆ

ಜ್ಞಾನಿಗಳರಸ ಭಕ್ತರ ಸುರಧೇನು

ಅಜ್ಞಾನಗಳಳಿದು ಸುಜ್ಞಾನಜನರ ಸಂಘ ll 3 ll


ಅಗಣಿತ ಮಹಿಮನೆ ನಿಗಮಗೋಚರ ಕೃಷ್ಣ

ಖಗವಾಹನ ಕಂಸಾರಿಯೆ ದೇವ

ಹಗಲು ಇರುಳು ನಿನ್ನ ಬಗೆಬಗೆ ಸ್ತುತಿಪರ

ಪಾದಗಳು ಸೇವಿಪ ಪರಮಲಾಭವನು ll 4 ll


ಕರೆ ಕರೆಗೊಳಿಸದೆ ಕಡಲಶಯನನೆ ಎನ್ನ

ತೊಡರುಗಳ ಬಿಡಿಸೆಂದು ಮೊರೆ ಇಡುವೆ

ಮಡುವಿನೊಳ್ ಗಜವನುದ್ಧರಿಸಿ ರಕ್ಷಿಸಿದಂಥ

ಕಮಲನಾಭವಿಟ್ಠಲನೆ ನಿನ್ನ ಸ್ಮರಣೆ ll 5 ll

***


ಇಷ್ಟಾದರು ದಯಮಾಡು ಪಂಡರಿನಾಥ
ವಿಠ್ಠಲ ನಿನ್ನ ಪಾದ ಮುಟ್ಟಿ ಪ್ರಾರ್ಥಿಪೆನು ಪ

ದಾನಧರ್ಮವು ಮಾಡಬೇಕೆಂದು ಮನವಿರೆ
ದಾನವಾಂತಕ ಕೃಷ್ಣ ಧನವಿಲ್ಲವಯ್ಯ
ಗಾನಲೋಲನೆ ಭಕ್ತಪಾಲ ನಿನ್ನಯ ಪಾದ
ಧ್ಯಾನವ ಮಾಳ್ಪರ ಪಾದಧ್ಯಾನ ಕೊಡಿಸುದೇವ 1

ತೀರ್ಥಯಾತ್ರೆಗಳಿಂದ ಪಾರ್ಥಸಾರಥಿ ಕೃಷ್ಣ-
ಮೂರ್ತಿ ಸೇವಿಸಲಸಮರ್ಥನಾಗಿರುವೆ
ಮಾತು ಮಾತಿಗೆ ಕೃಷ್ಣಗೋವಿಂದ ಮಾಧವ
ಶ್ರೀಪತಿ ಶ್ರೀಧರ ಸಲಹೆಂಬ ಸ್ಮರಣೆ 2

e್ಞÁನಿಗಳೊಡನಾಡಿ ಶ್ರೀನಿವಾಸನೆ ನಿನ್ನ
ನಾನಾಲೀಲೆಗಳ ಧ್ಯಾನಿಸಲಿಲ್ಲ ಹರಿಯೆ
e್ಞÁನಿಗಳರಸ ಭಕ್ತರ ಸುರಧೇನು
ಅe್ಞÁನಿಗಳಳಿದು ಸುe್ಞÁನಜನರ ಸಂಘ 3

ಅಗಣಿತ ಮಹಿಮನೆ ನಿಗಮಗೋಚರ ಕೃಷ್ಣ
ಖಗವಾಹನ ಕಂಸಾರಿಯೆ ದೇವ
ಹಗಲು ಇರುಳು ನಿನ್ನ ಬಗೆಬಗೆ ಸ್ತುತಿಪರ
ಪಾದಗಳು ಸೇವಿಪ ಪರಮಲಾಭವನು 4

ಕರೆ ಕರೆಗೊಳಿಸದೆ ಕಡಲಶಯನನೆ ಎನ್ನ
ತೊಡರುಗಳನೆ ಬಿಡಿಸೆಂದು ಮೊರೆ ಇಡುವೆ
ಮಡುವಿನೊಳ್ ಗಜವನುದ್ಧರಿಸಿ ರಕ್ಷಿಸಿದಂಥ
ಕಮಲನಾಭ ವಿಠ್ಠಲನೆ ನಿನ್ನ ಸ್ಮರಣೆ 5
***