Showing posts with label c dasa sahitya roopagalu and prakara types ಹರಿದಾಸ ಸಾಹಿತ್ಯದ ರೂಪಗಳು ಪ್ರಕಾರಗಳು. Show all posts
Showing posts with label c dasa sahitya roopagalu and prakara types ಹರಿದಾಸ ಸಾಹಿತ್ಯದ ರೂಪಗಳು ಪ್ರಕಾರಗಳು. Show all posts

Wednesday 12 May 2021

c dasa sahitya roopagalu and prakara types ಹರಿದಾಸ ಸಾಹಿತ್ಯದ ರೂಪಗಳು ಪ್ರಕಾರಗಳು

keertane in mysuru



ಪೀಠಿಕೆ 
ಕನ್ನಡ ಸಾಹಿತ್ಯ ಸುಮಾರು ಎರಡು ಸಾವಿರ ವರುಷಗಳಗಿಂತ ಹಳೆಯದು. ಕನ್ನಡ ಸಾಹಿತ್ಯವನ್ನು ಹೀಗೆ ವಿಂಗಡಿಸಬಹುದು.
  1. ಪ್ರಾಚೀನ ಸಾಹಿತ್ಯ 
  2. ಅರ್ವಾಚೀನ ಸಾಹಿತ್ಯ (just before present time)
  3. ಆಧುನಿಕ ಸಾಹಿತ್ಯ 
ಕನ್ನಡ ಸಾಹಿತ್ಯ ಅನೇಕ ಪ್ರಕಾರಗಳಿಂದ ಶ್ರೀಮಂತವಾಗಿದೆ. ಸಾಹಿತ್ಯ ಪ್ರಕಾರದ ಸ್ವರೂಪ, ರಚನೆ ಆಧಾರದ ಮೇಲೆ ಈ ಕೆಳಕಂಡಂತೆ ವಿಂಗಡಿಸಬಹುದು.
ಕಾವ್ಯ
೧.೧ ವಚನ
೧.೨ ಕವನ
೧.೩ ಕೀರ್ತನೆ/ಸಂಗೀತ 
ಕಾದಂಬರಿ
ಕಥೆ
ನಾಟಕ
ಪ್ರಬಂಧ
೫     ಜಾನಪದ

ಹಾಗೆಯೇ ಕನ್ನಡ ಸಾಹಿತ್ಯವನ್ನು ಹೀಗೂ ವಿಂಗಡಿಸಬಹುದು 
  1. ಹಳೆಗನ್ನಡ
  2. ನಡುಗನ್ನಡ
  3. ಆಧುನಿಕ ಕನ್ನಡ  19 ನೆಯ ಶತಮಾನದ ಕೊನೆಯಿಂದ ಪ್ರಾರಂಭ.
ಕ್ರಿ ಶ 12 ನೆಯ ಶತಮಾನದವರೆಗೆ ಹಳೆಗನ್ನಡ - ಈ ಘಟ್ಟವನ್ನು ಆದಿ ಕಾವ್ಯ ಎಂದೂ ಕರೆಯಬಹುದು. ಆದಿ ಕವಿ ಪಂಪ, ರನ್ನ ಮತ್ತು ಪೊನ್ನ ರ ಕಾಲವಿದು (10 ನೇ  ಶತಮಾನ). ಜೈನ ಸಾಹಿತ್ಯವೇ ಪ್ರಧಾನ.  ಛಂದಸ್ಸಿನ ಪ್ರಕಾರ ಚಂಪೂ ಶೈಲಿ (ಒಂದು ರೀತಿಯ ಗದ್ಯ ಮಿಶ್ರಿತ ಪದ್ಯ) ಪ್ರಧಾನವಾಗಿದ್ದಿತ್ತು. 

ನಡುಗನ್ನಡ ಕ್ರಿ ಶ 12 ನೆಯ ಶತಮಾನದಿಂದ ಪ್ರಧಾನವಾಗಿ, ಕ್ರಿ ಶ 19 ನೆಯ ಶತಮಾನದ ವರೆಗಿನ ಕಾಲ.  ಕ್ರಿ ಶ 13ನೇ ಶತಮಾನದಲ್ಲಿ 
ಕವಿ ಹರಿಹರ ಮತ್ತು ಕವಿ ರಾಘವಾಂಕ ಪ್ರಮುಖರು. ಹಾಗೆಯೇ ಜೈನ ಕವಿ ಜನ್ನನ ಕಾಲವೂ ಇದೇ.  ಸಾಂಗತ್ಯ, ರಗಳೆ ಮತ್ತು ದೇಸಿ ಸಾಹಿತ್ಯದ ಪ್ರಕಾರಗಳು ಹೆಚ್ಚಿದ್ದವು.

ಕ್ರಿ  ಶ 12 ನೆಯ ಶತಮಾನದಲ್ಲಿ ವಚನ ಸಾಹಿತ್ಯ ಉಗಮವಾಯಿತು. ಬಸವೇಶ್ವರ (೧೧೩೪-೧೧೯೬), ಅಲ್ಲಮಪ್ರಭು ಮತ್ತು ಕನ್ನಡದ ಮೊದಲ ಮಹಿಳಾ ಲೇಖಕಿಯಾದ ಅಕ್ಕ ಮಹಾದೇವಿ ಪ್ರಮುಖರು. ವಚನಗಳು ಮುಕ್ತ ಛಂದಸ್ಸಿನಲ್ಲಿ ಇವೆ. ಇವರ ನಂತರ ಬಂದ ಸರ್ವಜ್ಞನ ವಚನಗಳು ಮಾತ್ರ ತ್ರಿಪದಿಯಲ್ಲಿವೆ.

ಕ್ರಿ ಶ  1400 ಸುಮಾರಿನಲ್ಲಿದ್ದ ಕುಮಾರವ್ಯಾಸರ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿಸಲ್ಪಟ್ಟಿದೆ.

ಹರಿದಾಸ ಸಾಹಿತ್ಯ ಮತ್ತು ಹರಿದಾಸ ಸಾಹಿತ್ಯದ ಪ್ರಕಾರಗಳು 
ಹರಿದಾಸರ ಪರಂಪರೆಯಲ್ಲಿ ಮೊದಲಿಗೆ ಆದ್ಯರು ೬೦ ಜನರು ಪ್ರಮುಖರು ಎಂದು ಪ್ರತೀತಿ ಇದೆ. ಹರಿದಾಸ ಸಾಹಿತ್ಯಕರ್ತೃ ಶ್ರೀ ನರಹರಿ ತೀರ್ಥರು. ಇವರು ಮಾಧ್ವ ಯತಿಗಳು. ಇವರ ಕಾಲ ಕ್ರಿ ಶ 1263 - ಕ್ರಿ ಶ 1333. ಹರಿದಾಸ ಸಾಹಿತ್ಯ ಇವರ ಕಾಲದಿಂದ ಉಗಮವಾದರೂ ನಮಗೆ ಸಿಕ್ಕಿರುವ ಈ ಕರ್ತೃವಿನ ಹಾಗೂ ಆದ್ಯ ಹರಿದಾಸರ ಕೃತಿಗಳು ಅತಿ ವಿರಳ. ಶ್ರೀ ಸೊಬಗುವಿಠಲರು, ಶ್ರೀ ಸುಲಭವಿಠಲರು,  ಶ್ರೀ ಮುದ್ದು ವಿಠಲರು,  ಶ್ರೀ ಸಿರಿ ವಿಠಲರು,  ಶ್ರೀ ಅಚಲಾನಂದ ವಿಠಲರು ಮುಂತಾದವರನ್ನು  ಆದ್ಯ ಹರಿದಾಸರೆಂದು ಗುರುತಿಸಿದ್ದಾರೆ. 

ಶ್ರೀ ನರಹರಿ ತೀರ್ಥರ ನಂತರದ ಎಲ್ಲ ಮಾಧ್ವ ಯತಿಗಳು ಹರಿದಾಸ ಸಾಹಿತ್ಯವನ್ನು ಉತ್ತುಂಗಕ್ಕೆ ಕರೆದೊಯ್ದವರು. ಇವರಲ್ಲಿ  ಪ್ರಮುಖರು ಯತಿ ಶ್ರೀಪಾದರಾಜರು. ಇವರ ಕಾಲ  ಕ್ರಿ ಶ 1412 - ಕ್ರಿ ಶ 1504. ಶ್ರೀಪಾದರಾಜರು ನಂತರ ಬಂದ ಯತಿಗಳಿಗೆ ಮತ್ತು ದಾಸರುಗಳಿಗೆ ಮಾರ್ಗದರ್ಶನವಾದರು. ಅವರಲ್ಲಿ ಪ್ರಮುಖರು.
  1. ಶ್ರೀಪಾದರಾಜರ ಶಿಷ್ಯರಾದ ಮತ್ತು ಶ್ರೀ ಕೃಷ್ಣದೇವರಾಯನ ರಾಜ್ಯವನ್ನು ಕೆಲ ಕಾಲ ಆಳಿದ  ಶ್ರೀವ್ಯಾಸರಾಜ ತೀರ್ಥರು (ಕ್ರಿ ಶ 1447 - ಕ್ರಿ ಶ 1539) 
  2. ಶ್ರೀ ವಾದಿರಾಜ ತೀರ್ಥರು (ಕ್ರಿ ಶ 1488 - ಕ್ರಿ ಶ 1600)      
  3. ಶ್ರೀ ಪುರಂದರದಾಸರು  (ಕ್ರಿ ಶ 1494 - ಕ್ರಿ ಶ 1564) ಶ್ರೀ ವ್ಯಾಸರಾಜರು ಶ್ರೀ ಪುರಂದರ ದಾಸರಿಗೆ ಕ್ರಿ ಶ 1520 ರಲ್ಲಿ ದೀಕ್ಷೆ ಕೊಟ್ಟವರು.
  4. ಕನಕದಾಸರು (ಕ್ರಿ ಶ 1509 - ಕ್ರಿ ಶ 1609)
  5. ಶ್ರೀ ವಿಜಯ ದಾಸರು  (ಕ್ರಿ ಶ 1682 - ಕ್ರಿ ಶ 1755)
  6. ಶ್ರೀ ಗೋಪಾಲ ದಾಸರು  (ಕ್ರಿ ಶ 1722 - ಕ್ರಿ ಶ 1762)
  7. ಜಗನ್ನಾಥ ದಾಸರು (ಕ್ರಿ ಶ 1727 - ಕ್ರಿ ಶ 1807)
ಕೀರ್ತನೆ, ಸುಳಾದಿ, ಉಗಾಭೋಗಗಳು ಹರಿದಾಸ ಸಾಹಿತ್ಯದ ಪ್ರಮುಖ ರೂಪಗಳು/ಪ್ರಕಾರಗಳು. ಹರಿದಾಸ ಸಾಹಿತ್ಯದಲ್ಲಿ ತ್ರಿಪದಿ, ಷಟ್ಪದಿ, ಗುಂಡಕ್ರೀಯೆ ದಂಡಕ ಮುಂತಾದ ದೇಸಿ ರೂಪಗಳು/ಪ್ರಕಾರಗಳು ಕಂಡು ಬರುತ್ತದೆ. 

ವಾದಿರಾಜರ 'ಬಿರುದಿನ ಸುವ್ವಾಲಿ', ಜಗನ್ನಾಥದಾಸರ, 'ತತ್ವಸುವ್ವಾಲಿ'ಗಳು ತ್ರಿಪದಿಯಲ್ಲಿ ಬಂದರೆ, ರಾಮಧಾನ್ಯ ಚರಿತೆ (ಕನಕದಾಸರು), ಹರಿಕಥಾಮೃತಸಾರ (ಜಗನ್ನಾಥದಾಸರು) ಗಳಂಥವು ಷಟ್ಪದಿಯಲ್ಲಿ ರಚನೆಗೊಂಡಿವೆ. ವಾದಿರಾಜರಿಂದ ಗುಂಡಕ್ರೀಯೆ, ಶ್ರೀಪಾದರಾಜರಿಂದ ದಂಡಕಗಳು (ಸರಳ ರಗಳೆಯ ರೂಪ) ರಚನೆಗೊಂಡಿವೆ. 

ಉದ್ಗ್ರಾಹ, ಮೇಲಾಪಕ, ಧ್ರುವ, ಅಂತರ , ಆಭೋಗ ಎಂಬ ಐದು ಧಾತುಗಳಿಂದ ಉಗಾಭೊಗ ರಚನೆಗೊಂಡಿತೆಂದು ಹೇಳುತ್ತಾರೆ. ಈ ಉಗಾಭೋಗಗಳು ಬಹು ಚಿಕ್ಕದಾದವಂಥದು.

ತಾಳ ಪ್ರಧಾನವಾಗಿ ಸಪ್ತ ತಾಳಗಳಲ್ಲಿ 'ಜತೆ' ಎಂಬ ಎರಡು ಸಾಲಿನೊಂದಿಗೆ ಅಂಕಿತದೊಂದಿಗೆ ಕೊನೆಗೊಳ್ಳುವ ರಚನೆಯಾಗಿ ಸುಳಾದಿ ದಾಸಸಾಹಿತ್ಯದಲ್ಲಿ ತನ್ನದೆ ಆದ ಸ್ಥಾನವನ್ನು ಪಡೆದುಕೊಂಡಿದೆ.

"ಭಾವನೆ" ಗಳು ಅಮೂರ್ತ ಸ್ವರೂಪವಾದರೆ,  "ಭಾಷೆ" ಮೂರ್ತ ಸ್ವರೂಪ. ಈ ಮೂರ್ತ ಸ್ವರೂಪವು ಭಾವನೆ ಸಂದರ್ಭಗಳಿಗನುಗುಣವಾಗಿ ಭಿನ್ನ ಭಿನ್ನ "ಛಂದೋ" ರೂಪಗಳನ್ನು ಪಡೆದುಕೊಳ್ಳುತ್ತವೆ. 

ಹೀಗಾಗಿ ಹರಿದಾಸರು ರಚಿಸಿರುವ ಭಕ್ತಿ ಸಾಹಿತ್ಯ ಕೃತಿಗಳನ್ನು ಆಧರಿಸಿ ಕನ್ನಡ/ಹರಿದಾಸಸಾಹಿತ್ಯ ಚರಿತ್ರೆಯಲ್ಲಿ ಹೆಚ್ಚು ಪ್ರಚಲಿತವಿರುವ ಕೆಳಗಿನ ಅಚ್ಚ ಕನ್ನಡ ಛಂದೋ ರೂಪಗಳನ್ನು/ ಪ್ರಕಾರಗಳನ್ನು  ಕಾಣಬಹುದು.
  1. ಚಂಪೂ- ಗದ್ಯ ಪದ್ಯ ಮಿಶ್ರಣ
  2. ವಚನ- ಮುಕ್ತ ಛಂದಸ್ಸು ಹಾಗೂ ತ್ರಿಪದಿಯಲ್ಲಿವೆ. ಶೈವ/ವೀರಶೈವ/ಲಿಂಗಾಯತ ತತ್ತ್ವಗಳಿಂದ ಕೂಡಿ ವಚನಗಳು ಸಾಮನ್ಯವಾಗಿ ಶಿವನ ಕುರಿತಾಗಿ ಇರುತ್ತವೆ
  3. ರಗಳೆ- ಚತುಷ್ಪದಿ ವರ್ಗದ ಪ್ರಮುಖ ವೃತ್ತವೇ ರಗಳೆ
  4. ಜಾವಳಿ- ಶೃಂಗಾರ ಪ್ರಧಾನವಾದುದು. ಕನ್ನಡದಲ್ಲಿ"ಜಾವಡಿ" ಎಂಬ ಲಘು ಶೃಂಗಾರ ಪದಗಳ ರೂಪಾಂತರ
  5. ತ್ರಿಪದಿ- ಅಂದರೆ ಮೂರು ಸಾಲಿನ ಪದ್ಯ
  6. ಷಟ್ಪದಿ- ಪದ್ಯವೊಂದರಲ್ಲಿ ಆರು ಪಾದಗಳಿದ್ದರೆ ಅದು ಷಟ್ಪದಿ
  7. ಸಾಂಗತ್ಯ- ಷಟ್ಪದಿ ಯಂತೆ ರಾಗ, ಛಂದಸ್ಸಿನ ರೂಪೇಣಾ ಭಿನ್ನತೆ
  8. ವೃತ್ತನಾಮ- ವೃತ್ತನಾಮವೆಂಬುದು ಪಲ್ಲವಿ, ಅನುಪಲ್ಲವಿ ಬಳಿಕ ಪದ-ಶ್ಲೋಕ-ಪದ ಶ್ಲೋಕ ಹೀಗೆ ಮುಂದುವರಿಯುವ ಒಂದು ಸಾಹಿತ್ಯ ಪ್ರಕಾರ
  9. ಕೀರ್ತನೆ-  ದೇವಾಲಯದ ಸೇವೆಯಲ್ಲಿ ಭಗವಂತನ ಗೌರವಾರ್ಥವಾಗಿ ಹಾಡುವ ಹಾಡು. ಕೀರ್ತನೆ ಭಾರತದ ಭಕ್ತಿ ಸಂಪ್ರದಾಯಗಳಲ್ಲಿ ನಡೆಸಲಾಗುವ ಒಂದು ಕರೆ ಮತ್ತು ಪ್ರತಿಕ್ರಿಯೆ ಪಠಣ
  10. ಉಗಾಭೋಗ- ಐದು ಧಾತುಗಳಿಂದ ಉಗಾಭೊಗ ರಚನೆ
  11. ಸುಳಾದಿಒಂದೇ ರಾಗ, ಆದರೆ  ಅನೇಕ ತಾಳಗಳಿಂದ ಕೂಡಿದೆ. ಅರ್ಥ-ಅಭಿಪ್ರಾಯ ಜತೆಯಲ್ಲಿ ವ್ಯಕ್ತವಾಗಿರುತ್ತದೆ 
  12. ಗುಂಡಕ್ರಿಯೆ- ರಾಗವೊಂದರಿಂದ ಬಂದ ಹೆಸರು
  13. ದಂಡಕ- ಸರಳ ರಗಳೆಯ ರೂಪ
  14. ಮುಂಡಿಗೆ- ಸಾಹಸ ಪ್ರದರ್ಶನಕ್ಕೆ ಸವಾಲು. ಪದ್ಯದಲ್ಲಿ ಗೂಢಾರ್ಥ ಇರುತ್ತದೆ
  15. ರಾಗ ಮಾಲಿಕೆ- ಕೀರ್ತನೆ ಅನೇಕ ರಾಗಗಳಿಂದ ಕೂಡಿರುತ್ತದೆ, ಆದರೆ  ಒಂದೇ ತಾಳದಲ್ಲಿರುತ್ತದೆ
  16. ಗಮಕ- ಶ್ರುತಿ ಬದ್ಧವಾಗಿ ಕಾವ್ಯವನ್ನು ಓದಿ ಅದರ ಸಾರ ವಿಶ್ಲೇಷಿಸುವುದು
  17. ಹರಿಕಥೆ/ಹರಿಕಥಾ ಕಾಲಕ್ಷೇಪಮ್- ಧಾರ್ಮಿಕ ವಿಷಯದ ಬಗೆಗಿನ ಕಥೆ ಗದ್ಯ ಪದ್ಯ ನಾಟಕ ಸಮೇತ ನಿರೂಪಿಸುವುದು
  18. ಪ್ರವಚನ- ಧಾರ್ಮಿಕ ಗ್ರಂಥದ  ಪಠ್ಯದ ಪಠಣ ಮತ್ತು ವಿಶ್ಲೇಷಣೆ 
  19. ಜನಪದ ಪದಗಳು- ಛಂದಸ್ಸು ಜನಪದೀಯತೆಯ ಮುಖ್ಯ ಲಕ್ಷಣಗಳಲ್ಲೊಂದಾಗಿರುತ್ತದೆ.
  20. ಬಯಲಾಟ- ಗುಡಿಯ ಪ್ರಾಂಗಣ ದಾಟಿ ಬಯಲಲ್ಲಿ ಭಕ್ತಿ ಪ್ರದರ್ಶನ
  21. ಲಾವಣಿ- ಮುಖ್ಯವಾಗಿ ಶೃಂಗಾರ ಮತ್ತು ವೀರತೆಗೆ ಹೆಚ್ಚು ಅವಕಾಶವಿರುತ್ತದೆ. ನಾಡ ವಿಡಂಬನೆ ಹಾಸ್ಯಮಯ ಪ್ರಸಂಗ.
  22. ಕೋಲುಪದ/ಕೋಲಾಟದ ಹಾಡು- ದೇವಸ್ಥಾನದ ಮುಂದೆ ಕೋಲು ಪೂಜೆ ಮಾಡಿ ಕೋಲಾಟ ಆರಂಭಿಸಿ ಭಕ್ತಿ ಪ್ರದರ್ಶನ
  23. ಗೀ ಗೀ ಪದ- ಗೀಗೀ ಶ್ರುತಿ ಹಾಕಿ, ಶ್ರುತಿದೇವ (ಗಣಪತಿ) ಶ್ರುತಿದೇವಿ (ಸರಸ್ವತಿ) ಎಂದು ಹಾಡುವ ಪದ್ದತಿ ಗೀಗೀ ಪದ ಕ್ರಿ ಶ 1875 ರಲ್ಲಿ ಜನಕ
  24. ಜೋಗಳದ ಹಾಡು- ತೊಟ್ಟಿಲಲ್ಲಿ ಮಗು ಮಲಗಿಸಿ ಜೋ ಜೋ ಎಂಬ ಪಲ್ಲವಿಯೊಡನೆ ತೂಗುತ್ತಾ ಹಾಡುವ ಹಾಡು
  25. ಲಾಲಿಹಾಡು- ಹುಟ್ಟಿಗೆ ಸಂಬಂಧಿಸಿದ ಹಾಗೂ ಮಕ್ಕಳಿಗೆ ಸಂಬಂಧಿಸಿದ ಹಾಡು ಲಾಲಿಪದಗಳು 
  26. ಸೋಬಾನೆ/ಶೋಭಾನೆ ಪದಗಳುವಿವಾಹ ಸಮಯದಲ್ಲಿ ಹಾಡುವ ಪದಗಳು 
  27. ಕಥನ ಕವನಗಳು- ಕವಿತೆ ಭಾಷೆಯ ಉಪಯೋಗದ ಒಂದು ಕಲೆ. ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಿಗೆ ಅಥವಾ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ
  28. ಡೊಳ್ಳಿನ ಕುಳಿತ-  ಜನಪದ ಹಾಗೂ ಶಾಸ್ತ್ರೀಯ ಕಲೆ,  ನೃತ್ಯ ರೂಪಕದ್ದು. ಡೊಳ್ಳು ಬಾರಿಸಿಕೊಂಡು ಕುಣಿಯುವುದರಿಂದ ಇದಕ್ಕೆ ಡೊಳ್ಳು ಕುಣಿತ ಎಂಬ ಹೆಸರು
  29. ಸೂತ್ರದ ಗೊಂಬೆಯಾಟ- ಸೂತ್ರಧಾರ ತೆರೆಯ ಮರೆಯಲ್ಲೇ ಇದ್ದು ಕೇವಲ ಗೊಂಬೆಗಳಿಂದ ಅಭಿನಯ ಪ್ರದರ್ಶನ ಮಾಡಿಸುವುದು
  30. ತೊಗಲು ಗೊಂಬೆಯಾಟ-   ಚರ್ಮದ ಗೊಂಬೆಗಳ ಆಟವೆಂದು ಅರ್ಥ ಮತ್ತು ನೆರಳು ಗೊಂಬೆಯಾಟ ಎಂದೂ ಹೆಸರು 
  31. ಗಾರುಡಿ ಗೊಂಬೆ- ಬೊಂಬೆಯ ಬಟ್ಟೆಯೊಳಗೆ ಸೇರಿಕೊಂಡು ನರ್ತಿಸುವ ಮನುಷ್ಯ
  32. ಕಂಸಾಳೆ ಪದ-  ಕಂಸಾಳೆ ಹಿಡಿದು ಶಿವ ಮತ್ತು ಶರಣರ ಮಹಿಮೆಗಳನ್ನು ಕಥಾರೂಪದಲ್ಲಿ ಹಾಡುವ ಒಂದು ವಿಶಿಷ್ಟ ಜಾನಪದ ಸಂಪ್ರದಾಯ 
  33. ನಂದಿಕಂಬದ ಕುಣಿತ- 30 ಅಡಿ ಎತ್ತರದ ಕಂಬವನ್ನು ನೃತ್ಯಕಾರರು ಹೊಟ್ಟೆಗೆ ಜೋತುಹಾಕಿ ಕುಣಿಯುತ್ತಾರೆ 
  34. ಕರಗದ ಕುಣಿತ- ಕರಗವನ್ನು ತಲೆಯ ಮೇಲೆ ಧರಿಸಿ ಕುಣಿಯುವುದು 
  35. ವೀರಭದ್ರ ಕುಣಿತ- ವೀರಕುಣಿತ ಆವೇಶಭರಿತವಾದುದು
  36. ಗೊಂದಲ- ಭವಾನಿ ದೇವಿಯ ಭಕ್ತರು ಗೊಂದಲದ ಪದ ಹಾಡಿಸುವರು
  37. ಭೂತನೃತ್ಯ- ತಾವು ನಂಬುವ ಭೂತಗಳ ತೃಪ್ತಿಗಾಗಿ ಕುಣಿತ
  38. ವೀರಗಾಸೆ-  ಶೈವ ಸಂಪ್ರದಾಯದ ಧಾರ್ಮಿಕ ವೀರ ನೃತ್ಯ
  39. ಪೂಜಾ ಕುಣಿತ- ಇದು ಶಕ್ತಿ ದೇವತೆಗೆ ಸಂಬಂದಿಸಿದಂತಹ ಕುಣಿತ 
  40. ಕೀಲು ಕುದುರೆ- ಕುದುರೆಯ ಆಕಾರದಲ್ಲಿ ಸಿದ್ಧಪಡಿಸಿ ಕುಣಿತ 
  41. ಪಟದ ಕುಣಿತ/ಪಟ್ಟ ಕುಣಿತ- ಹತ್ತು ಅಡಿ ಉದ್ದದ ಪಟದ ಬಿದಿರಿನ ಕೋಲಿಗೆ ರೇಷ್ಮೆ ಬಟ್ಟೆ ಸುತ್ತಿಹಿತ್ತಾಳೆ ಅಥವಾ ಬೆಳ್ಳಿಯ ಛತ್ರಿಯನ್ನು ಅಳವಡಿಸಿ ಕುಣಿತ   
  42. ಲಂಬಾಣಿ ತಾಂಡ ನೃತ್ಯ- ಲಂಬಾಣಿ ಕುಣಿತ (ತೀಜೆರ್ ನಾಸ್) ದೇವರನ್ನು, ಸಮಾಜವನ್ನು ಕೊಂಡಾಡಿ ಮಾಡುವ ನೃತ್ಯ 
  43. ಹುತ್ತರಿ ಕುಣಿತ - ಹುತ್ತರಿ ಹಬ್ಬದ ಸಂದರ್ಭದಲ್ಲಿ ನಡೆಯುವ ಕೊಡಗಿನ ಒಂದು ಜನಪದ ನೃತ್ಯ
  44.  

ಇತರೆ others/other categories

  • ರಂಗದ ಕುಣಿತ
  • ಹುಲಿಹೆಜ್ಜೆ ಕುಣಿತ
  • ಸುಗ್ಗಿಯ ಕುಣಿತ 
  • ಕಂಗಿಲು ಕುಣಿತ
  • ಲಂಬಾಣಿಯರ ಜನಪದ ನೃತ್ಯ
  • ಕೊಡಗರ ಜನಪದ ನೃತ್ಯ 
  • ತುಳುನಾಡಿನ ಜನಪದ ನೃತ್ಯ 
  • ಮದುವೆಯ ಹಾಡುಗಳು 
  • ಎಣ್ಣೆಯೊತ್ತುವ ಪದ 
  • ಉರುಟಣೆ ಹಾಡು
  • ಸೋಬಾನೆ ಪದ
  • ತಿಂಗಳುಮಾವನ ಪದ
  • ಮಾನವಮಿ ಪದ
  • ಕಥನ ಗೀತಗಳು
  • ಹಾಸ್ಯದ ಪದ
  • ಮಕ್ಕಳ ಹಾಡು
  • ಪಾಡ್ದನ ಮತ್ತು ಓಬೇಲೆ ಪದ
  • ಬಂಡಿಯ ಪದ
  • ಕಿನ್ನರಿ ಪದ
  • ಹಳ್ಳಿಯ ಪದಗಳು
  • ಕಣಿ -  ಕೊರವಂಜಿ ಹೇಳುವ ಭವಿಷ್ಯ

***

ಇತರೆ  
  • ಬೊಳ್ಕಾಟ ನೃತ್ಯ
  • ಕೂಟ ನೃತ್ಯ
  • ಕುಮ್ಮಿಗಳ ಕೈ ಚಪ್ಪಾಳೆ ನೃತ್ಯ
  • ನಾಗ ನೃತ್ಯ - ನಾಗಮಂಡಲ
  • ಅನಾಗರಿಕರ ಯುದ್ಧ ನೃತ್ಯ

***

ಇತರೆ - ಉತ್ತರ ಕರ್ನಾಟಕದಲ್ಲಿ ಕಾಣಸಿಗುವುದು 
  • ಅಲಾವಿ ಕುಣಿತ 
  • ಕರಡೆ ಮಜಲು ಕುಣಿತ 
  • ನಂದೀ ಧ್ವಜ ಕುಣಿತ 
  • ಕೊಡದ ಕುಣಿತ/ ಪುಗಡಿ ಕುಣಿತ
  • ಜಗ್ಗಳಿಗೆ ಮೇಳ
  • ಜೋಗತಿ ಕುಣಿತ 
  • ಡೊಳ್ಳಿನ ಕೈ ಪೆಟ್ಟು ಕುಣಿತ 
  • ದಟ್ಟೀ ಕುಣಿತ 
  • ದುಮ್ಮಾಲಿ ಮೇಳ/ ದಿಮ್ಮಿ ಮೇಳ/ಶಿವ ಭಜನೆ 
  • ಪುರವಂತಿಕೆ
  • ಬಹುರೂಪಿ/ಹಗಲುವೇಷ ಕಲೆ 
  • ಭಜನಾ ಬಾರೋಡ್ (ಭಜನೆ + ಬಯಲಾಟ)
  • ಭೂತೇರ ಕುಣಿತ 
  • ಹೆಜ್ಜೆ ಮೇಳ 
  • ಹೋಳಿ ಕುಣಿತ
end
****



ಅಂತರ್ಜಾಲ ಮಾಹಿತಿಗಳಿಂದ ದಾಸ ಸಾಹಿತ್ಯ ಪ್ರಕಾರಗಳ ವಿಸ್ತಾರವಾದ ವಿವರಣೆ



ಪ್ರಕಾರ....
01. ಚಂಪೂ - ಗದ್ಯ ಪದ್ಯ ಮಿಶ್ರಣ
ಚಂಪೂ ಎಂಬುದು ಪ್ರಾಚೀನವೂ ಪ್ರಸಿದ್ಧವೂ ಆದ ಒಂದು ಸಾಹಿತ್ಯ ಪ್ರಕಾರ. ಗದ್ಯ ಮತ್ತು ಪದ್ಯಗಳೆರಡರನ್ನು ಒಳಗೊಂಡ ವಿಶಿಷ್ಟವಾದ ಸಾಹಿತ್ಯ.  ಬಹಳ ಪ್ರಾಚೀನ ಕನ್ನಡ ಕೃತಿಗಳು ಚಂಪೂ ರೂಪದಲ್ಲಿವೆ. ಕಾವ್ಯದಲ್ಲಿ ಗದ್ಯಕ್ಕಿಂತ ಪದ್ಯವೇ ಹೆಚ್ಚು. ಎಲ್ಲವೂ ಹೀಗೇ ಇರಬೇಕೆಂಬ ನಿಯಮವಿಲ್ಲ.
****




ಪ್ರಕಾರ....
02. ವಚನ ಮುಕ್ತ ಛಂದಸ್ಸು ಹಾಗೂ ತ್ರಿಪದಿಯಲ್ಲಿವೆ. 
ವಚನದ ವಿಶೇಷತೆಯಂದರೆ ಓದಿದರೆ ಗದ್ಯವಾಗುವ ಮತ್ತು ಹಾಡಿದರೆ ಹಾಡಾಗುವ ಕನ್ನಡ ಸಾಹಿತ್ಯ ಪ್ರಕಾರವಿದು. ದೇವರ ದಾಸಿಮಯ್ಯ, ಮಾದಾರ ಚೆನ್ನಯ್ಯ ನವರ ಆದಿಯಾಗಿ ಶ್ರೀ ಬಸವೇಶ್ವರರು ವಚನ ಸಾಹಿತ್ಯವನ್ನು ಬೆಳಗಿಸಿದವರು. ಶೈವ/ವೀರಶೈವ/ಲಿಂಗಾಯತ ತತ್ತ್ವಗಳಿಂದ ಕೂಡಿ ವಚನಗಳು ಸಾಮನ್ಯವಾಗಿ ಶಿವನ ಕುರಿತಾಗಿ ಇರುತ್ತವೆ.



ಪ್ರಕಾರ....
03. ರಗಳೆ - ಚತುಷ್ಪದಿ ವರ್ಗದ ಪ್ರಮುಖ ವೃತ್ತವೇ ರಗಳೆ
following info is from https://kn.wikipedia.org/
ನಡುಗನ್ನಡ ಕಾವ್ಯದ ಛಂದಸ್ಸಿನ, ದೇಸಿಯ ಕಾವ್ಯ ಪದ್ಧತಿಯ ಬಹುಮುಖ್ಯ ಪ್ರಕಾರ. ಇದು ಮಾತ್ರಾಗಣ ಘಟಿತವಾದ ಪದ್ಯಜಾತಿ. ಹರಿಹರನ ರಗಳೆಯ ಆದಿ ಮತ್ತು ಅಂತ್ಯದಲ್ಲಿ ವಿರೂಪಾಕ್ಷ ಮುದ್ರಿಕೆಯ ಕಂದಪದ್ಯ ಇರುತ್ತದೆ. ಈ ಛಂದಸ್ಸಿನಲ್ಲಿ ಹರಿಹರನಾದಿಯಾಗಿ ಅನೇಕ ಕವಿಗಳು ಕಾವ್ಯರಚನೆ ಮಾಡಿದ್ದಾರೆ. 
ಕಥನಕಾವ್ಯ ರಚನೆಗೆ ಬಳಸುತ್ತಿರುವ ಚತುಷ್ಪದಿ ವರ್ಗದ ಪ್ರಮುಖ ವೃತ್ತವೇ ರಗಳೆ.
ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯ ಅನಿಯಮಿತ ಪಾದಸಂಖ್ಯೆಗಳೂ ಆದಿ ಅಥವಾ ಅಂತ್ಯ ಪ್ರಾಸಗಳೂ ಎಲ್ಲಾ ರಗಳೆಗಳಿಗೂ ಸಾಮಾನ್ಯ ಅಂಶಗಳು.
ಇದರಲ್ಲಿ ಮೂರು ಮುಖ್ಯ ವಿಧಗಳನ್ನು ಕಾಣಬಹುದು
೧.ಉತ್ಸಾಹ ರಗಳೆ
೨.ಮಂದನಿಲ ರಗಳೆ
೩.ಲಲಿತ ರಗಳೆ

ರಗಳೆಯ ಲಕ್ಷಣಗಳು 
ಪ್ರತಿಪಾದದಲ್ಲೂ ಮಾತ್ರೆಗಳು ಸಮನಾಗಿರಬೇಕು.
ಪಾದಗಳು ಇಂತಿಷ್ಟೇ ಇರಬೇಕೆಂಬ ನಿಯಮವಿಲ್ಲ.
ಗಣಗಳ ಯೋಜನೆಯಲ್ಲಿ ಲಯಕ್ಕೆ ಹೊಂದುವ ವೈವಿಧ್ಯ ಇರಬೇಕು.
ಎರಡೆರಡು ಪಾದಗಳ ಅಂತ್ಯದಲ್ಲಿ ಪ್ರಾಸವಿರಬೇಕು.
ಸುಶ್ರಾವ್ಯವಾಗಿ, ತಾಳಬದ್ಧವಾಗಿರಬೇಕು.
end
****



ಪ್ರಕಾರ....
04. ಜಾವಳಿ  - ಲಘು ಶೃಂಗಾರ ಪದ
following is write-up by ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ
" ಜಾವಳಿ " ಶಬ್ದದ ಅರ್ಥ - ಹುಟ್ಟು ಎಲ್ಲವೂ ವಿವಾದಾಸ್ಪದವಾಗಿದೆ. 
ಈ ಶಬ್ದವು ಹೊಸದಾದರೂ ಹಾಡಿನ ರೀತಿ ತುಂಬಾ ಹಳೆಯದು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈ ಜಾವಳಿಗಳು ಶ್ರೀ ಧೃವಾಂಶ ಶ್ರೀಪಾದರಾಜರ ಕಾಲದಲ್ಲಿ ಪ್ರಾರಂಭವಾಯಿತು.
" ಜಾವಳಿ " ಗಳು ಪದಗಳಂತೆ ಶೃಂಗಾರ ಪ್ರಧಾನವಾದುದು.
" ಜಾವಳಿ " ಕನ್ನಡ " ಜಾವಡಿ " ಎಂಬ ಲಘು ಶೃಂಗಾರ ಪದಗಳ ರೂಪಾಂತರ. 
ಇವು ತಿಳಿಯಾದ ಅರ್ಥಪೂರ್ಣ ಸಾಹಿತ್ಯವುಳ್ಳ ರಚನೆಗಳಾಗಿವೆ.
" ಜಾವಳಿ " ಯಲ್ಲಿ ಪಲ್ಲವಿ - ಅನುಪಲ್ಲವಿ - ಚರಣಗಳಿಂದ ಕೂಡಿ, ಪದಗಳಲ್ಲಿರುವಂತೆ ಜಾವಳಿಯಲ್ಲಿಯೂ ನಾಯಕ - ನಾಯಕಿ - ಸಖಿ ಎಂಬ ಪ್ರಾತ್ರಗಳಿರುತ್ತವೆ.
ಜಾವಳಿಗಳ ವಿಷಯ ದೈವಿಕವಾಗಿರುತ್ತವೆ.
ಪದಗಳಲ್ಲಿರುವ ಗಂಭೀರ ಭಾವವು ಜಾವಳಿಗಳಲ್ಲಿ ಇರುವುದಿಲ್ಲ.
ಒಟ್ಟಿನಲ್ಲಿ " ಜಾವಳಿ " ಗಳು ತಮ್ಮದೇ  ಆಕಾರವನ್ನು ಹೊಂದಿರುವ ಭಾವಪೂರ್ಣ ರಚನೆಗಳಾಗಿವೆ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಪದ್ಧತಿಗೆ ಸರಳ ಸುಂದವಾಗಿವೆ ಈ " ಜಾವಳಿ " ಗಳು!!
" ಗೋಪಿಯರು "....
ಹಲವು ಕಾಲವು ನಿನ್ನ ಸ್ನೇಹ ಸುಖವ -
ಹಾರೈಸಿ ಕೊಂಡಿರುತಿಹ ।
ಲಲನಾ ವ್ಯೂಹವ ಬಿಟ್ಟು ಅಕ್ರೂರನೊಡನೆ -
ನೀ ಮಧುರೆಗೆ ಪೋದರೆ ।
ಕಳೆಯಲಾಪೆವೇ ಕಾಂತ ಕೇಳು -
ದಿನವ ಈ ಕಂತುವಿನ ಬಾಧೆಗೆ ।
ಘಳಿಗೊಂದು ಯುಗವಾಗಿ ತೋರುತಿಹುದೋ -
ಜಲಜಾಕ್ಷ ನೀನಲ್ಲದೆ ।।
ಬ್ಯಾಡ ಮಧುರೆಗೆ ಪೊಗ -
ಬ್ಯಾಡೆಲವೋ ಶ್ರೀ ಕೃಷ್ಣ ।
ಬೇಡಿಕೊಂಬೆವೋ ದೈನ್ಯದಿ ।
ನೋಡು ನಮ್ಮ್ಯಾಲೆ -
ದಯಮಾಡು ಮದನಂಗೀಡು ।
ಮಾಡುವುದೇನುಚಿತವೆಲೋ -
ಮಾಧವ ಕೃಪಾಕರನೇ ।।
ಶ್ರೀ ಕೃಷ್ಣನು....
ಬಾಲ ಭಾವದಲಿಂದಾಲಿಂಗಸುಖವ -
ಬಹು ಬಗೆಯಲಿಂದುಳುಹಿದೆ ।
ಲೋಲಲೋಚನೆ ನಿಮ್ಮ ಬಿಟ್ಟು -
ಪುರದ ನಾರೇರಿಗಾನೊಲಿದರೆ ।
ನೀಲಕಂಠನು ಮೆಚ್ಚ ನೋಡು -
ನಿಜವ ನಮಗ್ಯಾತಕೀ ಸಂಶಯ ।
ಕಾಲಕ್ಷೇಪವನಲ್ಲಿ ಮಾಡೆ -
ಕಿಂಚಿತ್ಕಾಲಾದೊಳಾನೈದುವೆ ।।
ಪಾಲಿಸಿರೆನಗಪ್ಪಣೆಯ -
ಪಾಟಿಲ ಸುಗಂಧಿಯರೆ ।
ಕಾಲ ಹರಣವ ಮಾಡದೆ ।
ನಾಳೆ ಉದಯಕೆ ಪೋಗಿ -
ನಾಲ್ಕೆಂಟು ದಿನದೊಳು ।
ವ್ಯಾಳೆಗಿಲ್ಲಿಗೆ ಬರುವೆ -
ಕಾಳಾಹಿವೇಣಿಯರೆ ।।
ಎಂದು ನೀಲಕಂಠನ ಹೆಸರನ್ನು ಹೇಳಿ ಭರವಸೆಯ ಮಾತುಗಳನ್ನು ಆಡುವನು. 
ನೀಲಮೇಘ ಶ್ಯಾಮನಿಗೆ ನೀಲಕಂಠನಲ್ಲದೆ ಬೇರಾರು ತಕ್ಕ ಸಾಕ್ಷಿ!!
ಎಮ್ಮ ತನುಮನ ತನ್ನಧೀನವಲ್ಲೇ ।
ಅನ್ಯವರಿಯೆವು ತನ್ನರಿದಂತೆ ಮಾಡಲಿ ।
ಎಮ್ಮಸುವು ತನ್ನಧೀನವಲ್ಲೇ ।
ಅನ್ಯವರಿಯೆವು ತನ್ನರಿದಂತೆ ಮಾಡಲಿ ।
ನಮ್ಮ ರಂಗವಿಠಲರೇಯಗೆ -
ಇನ್ನು ಸಲೆ ಮಾರುಹೋದೆವೆ ಕೆಳದಿ ।
ಅವನ ಹಂಬಲವೆನಗೆ ಜೀವನವವ್ವಾ ।
ಭುವನ ಮೋಹನ ರಂಗವಿಠಲನು ಕರುಣಿಯೇ ।।
ತಮ್ಮ ಪ್ರಿಯನ ಹಂಬಲದಿಂದ ಅವರು ತಮ್ಮ ಜೀವನವನ್ನು ಹಿಡಿದಿಟ್ಟಿದ್ದಾರೆಂಬ ಮಾತು ಸಾಕಷ್ಟು ಪರಿಣಾಮಕಾರಿಯಾಗಿದೆ.
ಈ ವಿರಹದ ತಾನವನ್ನೇ ಶ್ರೀ ಶ್ರೀಪಾದರಾಜರು ಇನ್ನೂ ಹಲವಾರು ತೆರನಾಗಿ ಮಿಡಿದಿರುವರು. ಒಮ್ಮೆ ಒಬ್ಬ ಗೋಪಿ...
ಒಲ್ಲೆನವ್ವಾ ಲಕುಮಿಯ ।
ನಲ್ಲ ಬಾರದಿದ್ದರೆ ತನು -
ಹೊರೆಯನೊಲ್ಲೆನವ್ವಾ ।।
ಎಂದು ಹೇಳ ತೊಡಗಿ...
ಹಾರ ಕೊರಳಿಗೆ ಭಾರ ಹೂವಿನ -
ಭಾರ ಸೈರಿಸಲಾರೆನೇ ।
ಮಾರನಯ್ಯನು ಬಾರದಿದ್ದರೆ -
ಮಾರನಂಬಿಗೆ ಗುರಿಯ ಮಾಡಿ ।।
ಎಂದು ತನ್ನ ಹೃದಯವನ್ನೇ ತೆರೆದಿಡುವಳು.
ತಿಳಿಗನ್ನಡದ ಈ ನುಡಿಗಳಲ್ಲಿ ಹೊರಹೊಮ್ಮಿರುವ ಭಾವ ಲಹರಿ ಗಮನಾರ್ಹವಾದುದು!!!
end 
****



ಪ್ರಕಾರ....
05. ತ್ರಿಪದಿ - ಅಂದರೆ ಮೂರು ಸಾಲಿನ ಪದ್ಯ
following info is from https://kn.wikipedia.org/
ಇದು ಅಚ್ಚಕನ್ನಡದೇಸೀಮಟ್ಟಿನ ಛಂದಸ್ಸಾಗಿದೆ. ಇದರಲ್ಲಿ ಕೂಡ ಹಲವಾರು ಪ್ರಬೇಧಗಳಿದ್ದರೂ ಅಂಶಗಣ ಆಧಾರಿತ ತ್ರಿಪದಿಗಳೇ ಹೆಚ್ಚು ಪ್ರಾಮುಖ್ಯತೆ ಪಡೆದಿವೆ.
ಸರ್ವಜ್ಞನ ವಚನಗಳಲ್ಲಿ ಮಾತ್ರಾಗಣಗಳ ಆಧಾರದ ಮೇಲೆ ಕೂಡ ತ್ರಿಪದಿಗಳನ್ನು ರಚಿಸಿರುವುದು ಕಂಡುಬರುತ್ತದೆ. ಅಲ್ಲಿ ಐದು ಮಾತ್ರೆಗಳ ಗಣಗಳನ್ನು ನಾವು ಕಾಣಬಹುದು.
ಅಂಶಗಣ ಆಧಾರಿತ ತ್ರಿಪದಿಗಳಲ್ಲಿ ಹಲವು ವೈವಿಧ್ಯಗಳಿದ್ದರೂ ಜಾನಪದ ಒನಕೆವಾಡು,ಬೀಸುವಕಲ್ಲಿನ ಹಾಡುಗಳಲ್ಲೆಲ್ಲ ಕಂಡುಬರುವ ಸಾಮಾನ್ಯ ತ್ರಿಪದಿಯ ಲಕ್ಷಣ ಹೀಗಿದೆ.
ಮೊದಲ ಸಾಲಿನಲ್ಲಿ ನಾಲ್ಕು ವಿಷ್ಣುಗಣಗಳು ಹಾಗೇ ಎರಡನೇ ಸಾಲಿನಲ್ಲಿ ನಾಲ್ಕುಗಣಗಳಲ್ಲಿ ಎರಡನೇ ಗಣ ಬ್ರಹ್ಮಗಣ ಹಾಗೂ ಉಳಿದವು ವಿಷ್ಣುಗಣಗಳು,
ಮೂರನೇ ಸಾಲಿನಲ್ಲಿ ಮೂರುಗಣಗಳೂ, ಅದರಲ್ಲಿಯೂ ಎರಡನೇ ಗಣ ಬ್ರಹ್ಮಗಣವಾಗಿರುತ್ತದೆ.
ವಿನ್ಯಾಸ ಹೀಗಿದೆ-
ವಿಷ್ಣು|ವಿಷ್ಣು|ವಿಷ್ಣು|ವಿಷ್ಣು|
ವಿಷ್ಣು|ಬ್ರಹ್ಮ|ವಿಷ್ಣು|ವಿಷ್ಣು|
ವಿಷ್ಣು|ಬ್ರಹ್ಮ|ವಿಷ್ಣು|
ಇವುಗಳಲ್ಲಿ ಪ್ರತಿ ಸಾಲಿನ ಎರಡನೇ ಅಕ್ಷರ ಹಾಗೂ ಮೊದಲ ಸಾಲಿನ ಮೂರನೇ ಗಣದ ಎರಡನೇ ಅಕ್ಷರ ಪ್ರಾಸದಿಂದಕೂಡಿರುವುದೂ ಇದೆ. ಅಲ್ಲದೇ ಎರಡನೇ ಸಾಲಿನ ಮೊದಲ ಮೂರು ಗಣಗಳ ನಂತರ ಯತಿ ಬರುವಂತೆ ರಚಿಸಿದ ರಚನೆಗಳೂ ಇವೆ.
ನಾಗವರ್ಮನ ತ್ರಿಪದಿಯಲ್ಲೇ ರಚಿತವಾದ ಲಕ್ಷಣ ಪದ್ಯ ಹೀಗಿದೆ-
ಬಿಸುರು ಹೋದ್ಭವಗಣಂ ರಸದಶ ಸ್ಥಾನದೊಳ್
ಬಿಸುರುಹ ನೇತ್ರ ಗಣಮೇ ಬರ್ಕುಳಿದವು
ಬಿಸುರುಹ ನೇತ್ರೇ|
ಕನ್ನಡ ಸಾಹಿತ್ಯದ ತ್ರಿಪದಿಯ ಇತಿಹಾಸದಲ್ಲಿ ಮೊಟ್ಟಮೊದಲ ರಚನೆ ಸಿಗುವುದು ಬಾದಾಮಿಯ ತಟ್ಟುಕೋಟಿ ಶಾಸನದಲ್ಲಿರುವ ಕಪ್ಪೆಅರಭಟ್ಟನ ಕೀರ್ತಿಯನ್ನು ಹೇಳುವ ತ್ರಿಪದಿಗಳು
(ಮೊದಲ ಪದ್ಯಕ್ಕೆ ಮಾತ್ರ ಗಣವಿಂಗಡಿಸಿ ತೋರಿಸಿದೆ)
೧.ಸಾಧುಗೆ| ಸಾಧು ಮಾ|ಧುರ್ಯನ್ಗೆ| ಮಾಧುರ್ಯಂ|
ಬಾಧಿಪ್ಪ|ಕಲಿಗೆ | ಕಲಿಯುಗ|ವಿಪರೀತನ್|
ಮಾಧವ|ನೀತನ್|ಪೆಱನಲ್ಲ||
‌ ೨. ಒಳ್ಳಿತ್ತ ಕೆಯ್ವೊರಾರ್ಪೊಲ್ಲದುಮದರನ್ತೆ
ಬಲ್ಲಿತ್ತು ಕಲಿಗೆ ವಿಪರೀತಾ ಪುರಾಕೃತ|
ಮಿಲ್ಲಿ ಸಂಧಿಕ್ಕುಮದು ಬಂದು||
೩. ಕಟ್ಟಿದ ಸಿಂಘಮನ್ಕೆಟ್ಟೊಡೇನೆಮಗೆಂದು |
ಬಿಟ್ಟವೋಲ್ಕಲಿಗೆ ವಿಪರೀತಂಗಹಿತರ್ಕ್ಕ|
ಳ್ಕೆಟ್ಟರ್ಮೇಣ್ಸತ್ತರವಿಚಾರಮ್||
end
****
following info is from https://kn.wikipedia.org/
ತ್ರಿಪದಿ
ಹಳ್ಳಿಯ ಪದಗಳಲ್ಲಿ ತ್ರಿಪದಿಯ ಸ್ಥಾನ ಮಹತ್ತ್ವದ್ದು. ಹೆಣ್ಣು ಮಕ್ಕಳ ಹಾಡುಗಳಲ್ಲಿ ಬಹುಭಾಗ ಈ ಮಟ್ಟಿನಲ್ಲಿದೆ. ಹಾಲು ಜೇನು ಸುರಿದಂತೆ ಇದರ ಸವಿ. ಮಲ್ಲಿಗೆ ಮೊಗ್ಗು ಅರಳಿದಂತೆ ಇದರ ಪರಿಮಳ. ಮೂರೇ ಪಾದಗಳು ಕಂಡರೂ ಹಾಡುವಾಗ ನಡುವಿನ ಪಾದದ ಪುನರಾವರ್ತನೆಯಿಂದ ತ್ರಿಪದಿಗೆ ನಾಲ್ಕು ಪಾದಗಳಾಗುತ್ತವೆ. ಕುಟ್ಟುವಾಗ, ಬೀಸುವಾಗ, ಜೋಗುಳ ಹಾಡುವಾಗ, ಪೂಜೆ ಮಾಡುವಾಗ, ಜೀವನದ ರಸಸಮಯಗಳಲ್ಲಿ ತ್ರಿಪದಿಯ ಹಾಡುಗಳನ್ನು ಜನ ಬಳಸುತ್ತಾರೆ. ಒಬ್ಬರೋ ಇಬ್ಬರೋ ಹಲವರೋ ಹಾಡುವುದು ಉಂಟು. ರಾಗಗಳು ಒಂದೊಂದು ಕಡೆ ಒಂದೊಂದು ರೀತಿಯವಾಗಿರುತ್ತವೆ. ದಕ್ಷಿಣಾದಿ ಸಂಗೀತದ ಮಧ್ಯಮಾವತಿ, ಕಾಂಭೋಧಿ, ಆನಂದ ಭೈರವಿ, ನಾದನಾಮಕ್ರಿಯೆ, ನವರೋಜು ರಾಗಗಳು ಬಳಕೆಯಲ್ಲಿವೆ. ಆದರೂ ಎಲ್ಲಿಯೂ ಶಾಸ್ತ್ರೀಯ ಸಂಗೀತದ ಛಾಯೆ ಕಾಣದು. ದನಿಯಲ್ಲಿ ಎಳೆತದಲ್ಲಿ ತಾಳಲಯಗಳಲ್ಲಿ ದೇಸಿಯ ಸೊಗಡೇ ಹೆಚ್ಚು. ಇಡೀ ಕನ್ನಡ ನಾಡಿನಲ್ಲೆಲ್ಲ ತ್ರಿಪದಿಯ ಬೆಳೆ ಹುಲುಸಾಗಿ ಹಬ್ಬಿದೆ. ನಾಡು ನುಡಿ ಒಂದೇ ಎಂಬುದಕ್ಕೆ ತ್ರಿಪದಿಯೂ ಒಂದು ಆಧಾರ. ಇದರ ಸಾಹಿತ್ಯ ಮತ್ತು ಸಂಗೀತ ಹಿಂದಿನ ಮತ್ತು ಇಂದಿನ ಉತ್ತಮ ಕವಿಗಳಿಗೆ ಸ್ಫೂರ್ತಿ ಕೊಟ್ಟಿದೆ.

ಹೂವಿನಾಗ ಹುದುಗ್ಯಾನ ಮಾಲ್ಯಾಗ ಮಲಗ್ಯಾನ
ಮೊಗ್ಗಾಗಿ ಕಣ್ಣ ತೆರದಾನ- ಲಿಂಗಯ್ಯನ
ನೋಡುತಲೆ ನಿದ್ದಿ ಬಯಲಾದೊ||

ಮುಂಗೋಳಿ ಕೂಗ್ಯಾವು ಮೂಡುಕೆಂಪೇರ್ಯಾವು
ನಾರಾಯಣಸಾಮಿ ರಥವೇರಿ-ಬರುವಾಗ
ನಾವೆದ್ದು ಕೈಯಾ ಮುಗಿದೇವು||

ಹೊತ್ತು ಮುಳುಗಿದರೇನು ಕತ್ತಲಾದರೇನು
ಅಪ್ಪನಿನ ಗುಡಿಗೆ ಬರುವೇನು-ಮಾದಯ್ಯ
ಮುತ್ತಿನ ಬಾಗಿಲ ತೆರದೀರು.||
end
****
following info is by ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ

ಕನ್ನಡ ಸಾಹಿತ್ಯದ ಪ್ರಪ್ರಥಮ ಕಾಲದಲ್ಲಿಯೇ ತೋರಿ ಬರುವ ಅಂಶಗಣಬದ್ಧವಾದ " ತ್ರಿಪದಿ " ಪ್ರಕಾರ ಕೊನೆ ಕೊನೆಗೆ ಮಾತ್ರಾಗಣವಾಗಿ ಮಾರ್ಪಟ್ಟು ಜನಪ್ರಿಯತೆಯನ್ನು ಗಳಿಸಿತು. 

ಗೀರ್ವಾಣಾ ಭಾಷಾ ಕೋವಿದ ರಾದ ಶ್ರೀ ಶ್ರೀಪಾದರಾಜರು.... 

" ಸಂಸ್ಕೃತ ಸಾಹಿತ್ಯವನ್ನು ಕನ್ನಡ ಸಾಹಿತ್ಯಕ್ಕೆ ತರಲು ಪ್ರಯತ್ನಿಸಿದಂತೆ ಮುಂದಿನ ಹರಿದಾಸರುಗಳು ಜನಪದೀಯ ಮಟ್ಟುಗಳನ್ನು - ಮಧ್ವ ತತ್ತ್ವಗಳನ್ನು ಮೇಳೈಸಿ ಪ್ರಚಾರಕ್ಕೆ ತಂದರು. 

ಕನ್ನಡ ನಾಡಿನ ಜನರ ನಾಲಿಗೆಯ ನಲಿದಾಡುವ ತ್ರಿಪದಿಯನ್ನು ಹರಿದಾಸರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. 

ವಿಶೇಷವಾಗಿ ಶ್ರೀ ವಾದಿರಾಜರು " ಬಿರುದಿನ ಸುವ್ವಾಲಿ " ಮತ್ತು ಶ್ರೀ ಜಗನ್ನಾಥದಾಸರು " ತತ್ತ್ವ ಸುವ್ವಾಲಿ " ಯಲ್ಲಿ ಬಳಸಿದ್ದಾರೆ. 

end
****




ಪ್ರಕಾರ....
06. ಷಟ್ಪದಿ - ಪದ್ಯವೊಂದರಲ್ಲಿ ಆರು ಪಾದಗಳಿದ್ದರೆ ಅದು ಷಟ್ಪದಿ
following info is from https://kn.wikipedia.org/
ಷಟ್ಪದಿ ಎಂಬುದು ಛಂದಸ್ಸಿನ ಒಂದು ಪ್ರಕಾರ. ಪದ್ಯವೊಂದರಲ್ಲಿ ಆರು ಪಾದಗಳಿದ್ದರೆ ಅದು ಷಟ್ಪದಿ ಎನಿಸುತ್ತದೆ. ಪಾದಗಳ ಗಣ/ಮಾತ್ರಾ/ಅಕ್ಷರ ವಿನ್ಯಾಸಗಳನ್ನು ಹಿಡಿದು ಬೇರೆ ಬೇರೆ ರೀತಿಯ ಷಟ್ಪದಿಗಳಿವೆ. ಆರು ಪಾದಗಳುಳ್ಳ ಪದ್ಯವು ಷಟ್ಪದಿಯೆನಿಸುಕೊಳ್ಳುತ್ತದೆ. ಇದರ ೧, ೨, ೪ ಮತ್ತು ೫ನೇ ಪಾದಗಳು ಪರಸ್ಪರ ಸಮನಾಗಿರುತ್ತದೆ.೩ನೆಯ ಮತ್ತು ೬ನೆಯ ಪಾದಗಳು ಪರಸ್ಪರ ಸಮನಾಗಿರುತ್ತವೆ. ೩ನೆಯ ಪಾದ ೧ನೆಯ ಪಾದದ ಒಂದೂವರೆಯಷ್ಟಿದ್ದು, ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ.ಉದ್ದಂಡ ಷಟ್ಪದಿ ಎಲ್ಲಾ ಷಟ್ಪದಿಗಳಿಂದ ಬೇರೆಯಾಗಿದೆ.
ಕನ್ನಡ ಕಾವ್ಯದಲ್ಲಿ ಷಟ್ಪದಿಗಳನ್ನು ಪ್ರಥಮವಾಗಿ ರಾಘವಾಂಕನು ಬಳಕೆಗೆ ತಂದನು. ಹಳಗನ್ನಡ ಸಾಹಿತ್ಯದಲ್ಲಿ ಕಂದ, ಖ್ಯಾತ ಕರ್ನಾಟಕ ವೃತ್ತಗಳು, ಹೇರಳವಾಗಿದ್ದರೆ ನಡುಗನ್ನಡ ಕಾಲದ ಸಾಹಿತ್ಯದಲ್ಲಿ ಷಟ್ಪದಿಗೆ ಮೊದಲ ಸ್ಥಾನ. ಕುಮಾರವ್ಯಾಸನ 'ಗದುಗಿನ ಭಾರತ'ವೆಂದೆ ಪ್ರಸಿದ್ಧವಾಗಿರುವ ಕರ್ಣಾಟ ಭಾರತ ಕಥಾಮಂಜರಿ, ಲಕ್ಷ್ಮೀಶಕವಿಯ ಜೈಮಿನಿ ಭಾರತ ಇವೆರಡೂ ಷಟ್ಪದಿ ಕಾವ್ಯಗಳೆ. ಮುದ್ದಣ ವಿರಚಿತ ಶ್ರೀರಾಮ ಪಟ್ಟಾಭಿಷೇಕ ಇರುವುದು ವಾರ್ಧಕ ಷಟ್ಪದಿಯಲ್ಲಿ.
ಕನ್ನಡ ಸಾಹಿತ್ಯದಲ್ಲಿ ಬಳಕೆಯಲ್ಲಿದ್ದ ಷಟ್ಪದಿಗಳು ಇವು.

ಶರ
ಕುಸುಮ
ಭೋಗ
ಭಾಮಿನಿ
ಪರಿವರ್ಧಿನೀ
ವಾರ್ಧಕ
ಉದ್ದಂಡ
ಇವುಗಳಲ್ಲಿ ಭಾಮಿನೀ ಷಟ್ಪದಿ ಜನಪ್ರಿಯ. ಗದುಗಿನ ಭಾರತವಿರುವುದು ಈ ಛಂದಸ್ಸಿನಲ್ಲಿಯೆ. ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಪಾದ(ಅಂದರೆ ಸಾಲು)ಗಳಿರುತ್ತವೆ. ಮೂರನೆಯ, ಆರನೆಯ ಸಾಲುಗಳಲ್ಲಿ ೭ ಮಾತ್ರೆಗಳ(೩+೪) ಮೂರುಗಣಗಳೂ ಮತ್ತು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ ೭ ಮಾತ್ರೆಗಳ(೩+೪) ಎರಡು ಗಣಗಳಿರುತ್ತವೆ. ಉದಾಹರಣೆಯಾಗಿ ಗದುಗಿನ ಭಾರತದ ಈ ಪ್ರಸಿದ್ಧ ಪದ್ಯವನ್ನು ನೋಡಿ:

ವೇದ ಪುರುಷನ | ಸುತನ ಸುತನ ಸ
ಹೋದರನ ಹೆ|ಮ್ಮಗನ ಮಗನ ತ
ಳೋದರಿಯ ಮಾ|ತುಳನ ಮಾವನ|ನತುಳಭುಜಬಲ|ದಿ
ಕಾದು ಗೆಲಿದನ|ನಣ್ಣನವ್ವೆಯ 
ನಾದಿನಿಯ ಜಠ|ರದಲಿ ಜನಿಸಿದ
ನಾದಿಮೂರುತಿ | ಸಲಹೊ ಗದುಗಿನ | ವೀರನಾರಯ|ಣ
'|' ಸಂಜ್ಞೆ ಗಣವಿಭಾಗವನ್ನು ತೋರಿಸುತ್ತದೆ.
end
****
following info is from university of mysore
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಷಟ್ಪದಿ
ಷಟ್ಪದಿ ಛಂದಸ್ಸಿನ ಪ್ರಮುಖ ಮಟ್ಟುಗಳಲ್ಲೊಂದು. ದೇಶ್ಯಕಾವ್ಯ ಪ್ರಕಾರಗಳಲ್ಲಿ ಹೆಚ್ಚು ಪ್ರಸಿದ್ಧವಾದದ್ದು. ಷಟ್ಪದ, ಷಟ್ಪದಿ, ಷಟ್ಪದಿಕಾ ಎಂಬ ಹೆಸರುಗಳಿಂದ ಉಲ್ಲೇಖಗೊಂಡಿದೆ. ಅಮ್ಮಿನಬಾವಿ ಶಾಸನ, ಸುಕುಮಾರ ಚರಿತ ಹಾಗೂ ತೆಲುಗಿನ ಛಂದೋಗ್ರಂಥಗಳಲ್ಲಿ ಷಟ್ಪದ ಎಂದು ಬಳಕೆಗೊಂಡಿದ್ದರೆ ಛಂದೋಂಬುಧಿಯ ಪ್ರಚಲಿತ ಪಾಠದಲ್ಲಿ, ಸಂಗೀತರತ್ನಾಕರ, ಮಾನಸೋಲ್ಲಾಸ, ಬೃಹದ್ದೇಶೀಗಳಲ್ಲಿ ಷಟ್ಪದಿ ಎಂದು ಬಳಕೆಗೊಂಡಿದೆ. ಜಯಕೀರ್ತಿ ಇದನ್ನೇ ಷಟ್ಪದಿಕಾ ಎಂದು ಕರೆದಿದ್ದಾನೆ. ವಿದ್ವಾಂಸರ ಅಭಿಪ್ರಾಯದಂತೆ ಷಟ್ಪದ, ಷಟ್ಪದಿಗಳು ಜತೆಜತೆಯ ಪ್ರಯೋಗಗಳಾಗಿ ಸಾಹಿತ್ಯ ಕೃತಿಗಳಲ್ಲಿಯೂ ಲಕ್ಷಣಾದಿ ಗ್ರಂಥಗಳಲ್ಲಿಯೂ ಬಳಕೆಗೊಂಡಿವೆ. ಈ ಎರಡು ರೂಪಗಳೂ ಅಂಶಗಣಾತ್ಮಕವಾಗಿದ್ದ ಕಾಲದಲ್ಲಿ ಪದ್ಯಜಾತಿಗೆ ಬಳಕೆಯಾಗುತ್ತಿದ್ದುವು. ಮಾತ್ರಾಗಣಾತ್ಮಕವಾಗಿ ಪರಿವರ್ತಿತವಾದ ಮೇಲೆ ಷಟ್ಪದಿ ಎಂಬುದು ಬಳಕೆಯಲ್ಲಿ ಸ್ಥಿರವಾಗಿ ಉಳಿಯಿತು.
ಪ್ರಾಚೀನ ಕಾಲದಲ್ಲಿ ಅಂಶಗಣಘಟಿತವಾದ ಒಂದೇ ಒಂದು ಷಟ್ಪದಿ ಇತ್ತೆನ್ನಲಾಗಿದೆ.

ನಡುಗನ್ನಡ ಕಾಲದಲ್ಲಿ ಮಾತ್ರಾಷಟ್ಪದಿ ಶರ, ಕುಸುಮ, ಭೋಗ, ಭಾಮಿನೀ, ಪರಿವರ್ಧಿನೀ ಹಾಗೂ ವಾರ್ಧಕ ಷಟ್ಪದಿಗಳೆಂಬ ಆರು ಬಗೆಯಲ್ಲಿ ಕಾಣಿಸಿಕೊಂಡು ಜನಪ್ರಿಯವಾಗಿದೆ. ಇವುಗಳ ಲಕ್ಷಣಗಳನ್ನು ಹೀಗೆ ಗುರುತಿಸಲಾಗಿದೆ:
೧. ಶರಷಟ್ಪದಿ : ನಾಲ್ಕು ಮಾತ್ರೆಯ ಗಣ. ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಎರಡೆರಡೂ ಮೂರು, ಆರನೆಯ ಪಾದಗಳಲ್ಲಿ ಮೂರು ಮೂರೂ ಒಂದು ಗುರುವೂ ಬರಬೇಕು. U-U ಈ ಗಣ ನಿಷಿದ್ಧ.
೨. ಕುಸುಮಷಟ್ಪದಿ : ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಐದು ಮಾತ್ರೆಯ ಗಣಗಳು ಎರಡೆರಡೂ ಮೂರು, ಆರನೆಯ ಪಾದಗಳಲ್ಲಿ ಮೂರು ಮೂರೂ ಒಂದು ಗುರುವೂ ಬರಬೇಕು. U - UU, U - - ಈ ಗಣಗಳು ನಿಷಿದ್ಧ.
೩. ಭೋಗಷಟ್ಪದಿ : ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಮೂರು ಮಾತ್ರೆಯ ಗಣ ನಾಲ್ಕು ನಾಲ್ಕೂ ಮೂರು, ಆರನೆಯ ಪಾದಗಳಲ್ಲಿ ಆರಾರೂ ಒಂದು ಗುರುವೂ ಬರಬೇಕು.
೪. ಭಾಮಿನೀಷಟ್ಪದಿ : ಮೂರು ಮಾತ್ರೆಯ ಗಣದ ಮುಂದೆ ನಾಲ್ಕು ಮಾತ್ರೆಯ ಗಣ ಬರುವ ಹಾಗೆ ಈ ಗಣಗಳು ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಎರಡೆರಡೂ ಮೂರು, ಆರನೆಯ ಪಾದಗಳಲ್ಲಿ ಮೂರು ಮೂರೂ ಒಂದು ಗುರುವೂ ಬರಬೇಕು. ಇದರಲ್ಲಿ U -, U-U ಈ ಗಣಗಳು ನಿಷಿದ್ಧ.
೫. ಪರಿವರ್ಧಿನೀ ಷಟ್ಪದಿ : ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಚತುರ್ಮಾತ್ರಾಗಣ ನಾಲ್ಕು, ನಾಲ್ಕೂ ಮೂರು, ಆರನೆಯ ಪಾದಗಳಲ್ಲಿ ಆರಾರೂ ಒಂದು ಗುರುವೂ ಬರಬೇಕು. U-U ಗಣ ನಿಷಿದ್ಧ.
೬. ವಾರ್ಧಕ ಷಟ್ಪದಿ : ಒಂದು, ಎರಡು, ನಾಲ್ಕು ಮತ್ತು ಐದನೆಯ ಪಾದಗಳಲ್ಲಿ ಪಂಚಮಾತ್ರಾಗಣ ನಾಲ್ಕು ನಾಲ್ಕೂ ಮೂರು, ಆರನೆಯ ಪಾದಗಳಲ್ಲಿ ಆರಾರೂ ಒಂದು ಗುರುವೂ ಬರಬೇಕು. U-UU, U - - ಈ ಗಣಗಳು ನಿಷಿದ್ಧ. [೧]
end 
****



ಪ್ರಕಾರ....
07. ಸಾಂಗತ್ಯ ಷಟ್ಪದಿ ಯಂತೆ. ಆದರೂ ರಾಗ, ಛಂದಸ್ಸಿನ ರೂಪೇಣಾ ಭಿನ್ನತೆ
following is write-up by ಪದ್ಮ ಶಿರೀಷ...
ಇದೂ ನೋಡಲು ಷಟ್ಪದಿಯಂತೇ ಇರುತ್ತದೆ. ಈ ಸಾಂಗತ್ಯ ಪ್ರಕ್ರಿಯಕ್ಕೆ ಉದಾಹರಣೆ ಎಂದರೆ " ಶ್ರೀ ವಾದಿರಾಜ ಗುರುಸಾರ್ವಭೌಮರ ಲಕ್ಷ್ಮೀ ಶೋಭಾನೆ, ಹರಪನಹಳ್ಳಿ ಭೀಮವ್ವನವರ ಸಂಪ್ರದಾಯಕ ಪದಗಳು,  ಕನಕದಾಸರ ಮೋಹನ ತರಂಗಿಣೀ ಎಂಬುವ ಮೇರು ಕೃತಿ.... ಲಕ್ಷ್ಮೀ ಶೋಭಾನೆ ಎಲ್ಲರಿಗೂ ಸುಪರಿಚಯವಾದದ್ದು... ಮತ್ತೆ ಭೀಮವ್ವನವರ ಪದಗಳು ಸಹಾ ಗೊತ್ತಿದ್ದೇ ಇರುತ್ತವೆ... 
ಕನಕದಾಸರ ಈ  ಮೋಹನ ತರಂಗಿಣಿ ಒಟ್ಟು 42 ಸಂಧಿಗಳಲ್ಲಿ 2659 ನುಡಿಗಳಲ್ಲಿ ರಚಿತವಾದದ್ದು... ಇಡೀ ಕೃತಿಯಲ್ಲಿ ದಾಸರು "ವಿಷ್ಣು ಪುರಾಣ, ರತೀ-ಪ್ರದ್ಯುಮ್ನರ ಕಥೆ, ಕಾಮದಹನದ ಪ್ರಸಂಗ, ಭಾಗವತದ ಕಥೆ ಕೃಷ್ಣನ ಕಥೆ ಆದರೇ ಒಟ್ಟಾರೆ ಅವನ ಲೀಲೆ ಮಿಕ್ಕ ಎಲ್ಲಾ ಕೃತಿಯಲ್ಲಿದ್ದ ಪಾತ್ರಗಳು ಆ ಕೃಷ್ಣ ಪರಮಾತ್ಮ ಆಡಿಸಿ ಕುಣಿಸುವ ಬೊಂಬೆಗಳಂತೆ ರಚನ ವಾಗಿರುತ್ತೆ..
ಇದರ ಜೊತೆಗೆ ಯುದ್ಧಗಳ ವರ್ಣನೆ, ರಾಜಕೀಯ ಪ್ರಸಂಗಗಳು, ಪ್ರಣಯ ಕೇಳಿಯ ವರ್ಣನೆ ಹೀಗೆ ಬಹಳಷ್ಟು ವಿಷಯಗಳ ಉಲ್ಲೇಖ ಈ "ಮೋಹನ ತರಂಗಿಣಿ" ಎನ್ನುವ  ಮೇರು ಕೃತಿಯಲ್ಲಿ ಮೊಹಕವಾಗಿ ರಚಿಸಲ್ಪಟ್ಟಿವೆ......
ಒಟ್ಟಾರೆ ಈ ಸಾಂಗತ್ಯದ ಪ್ರಕಾರವೂ ಷಟ್ಪದಿ ಯಂತೆ ಇದ್ದರೂ ರಾಗ, ಛಂದಸ್ಸಿನ ರೂಪೇಣಾ ಭಿನ್ನತೆ ಹೊಂದಿವೆ ಎಂದು ಹೇಳಬಹುದು ....
end
****

By Smt. Padma Sirish

ಹರಿದಾಸ ಸಾಹಿತ್ಯದ ಪ್ರಕಾರಗಳಲ್ಲಿ ಸಾಂಗತ್ಯ
ನಂತರದಲಿ ಮತ್ತೊಂದು ಪ್ರಕಾರವಾದ ಸಾಂಗತ್ಯ ದ ಕುರಿತು ತಿಳಿಯೋಣ. ನಡುಕನ್ನಡದ ಕಾಲದಲ್ಲಿ ಷಟ್ಪದಿಯಂತೆ ಜನಪ್ರಿಯವಾದ ಪ್ರಕಾರ ಈ ಸಾಂಗತ್ಯ ಆಗಿತ್ತು... 
      ಶ್ರೀಮದ್ವಾದಿರಾಜ ಗುರುಸಾರ್ವಭೌಮರ ಕೃತಿಯಾದ ಲಕ್ಷ್ಮೀ ಶೋಭಾನೆ, ಶ್ರೀ ಕನಕದಾಸಾರ್ಯರ ಮೋಹನ ತರಂಗಿಣಿ , ಭೀಮವ್ವನವರ ಸಂಪ್ರದಾಯದ ಪದಗಳು ಇತ್ಯಾದಿಗಳು ಸಾಂಗತ್ಯದ ಪ್ರಕಾರದ ಕೆಳಗೆ ಬರ್ತವು...
ಇದು ಒಂದು ಅಂಶ ಛಂದಸ್ಸಿನ ಪ್ರಕಾರವಾಗಿದೆ... ಇದರಲ್ಲಿ ನಾಲ್ಕು  ಸಾಲುಗಳು ಇರ್ತವು.. ಮೊದಲನೇ ಸಾಲು - ಮೂರನೇಸಾಲು ಸಮವಾಗಿ ಇರ್ತವೆ.. ಹಾಗೂ ಎರಡನೇ ಸಾಲು - ನಾಲ್ಕನೇಸಾಲು ಸಮವಾಗಿರ್ತವೆ ...  
ಉದಾಹರಣೆಗೆ  ಶ್ರೀ ಕನಕದಾಸಾರ್ಯರ ಮೋಹನ ತರಂಗಿಣಿ ಕೃತಿಯನ್ನು ತಗೊಂಡಾಗ ಅದರಲ್ಲಿ ಒಟ್ಟು 42 ಸಂಧಿಗಳು, 2659 ನುಡಿಗಳು ಇದ್ದವೆ... ಅದ್ಭುತವಾದ ಕೃತಿ... ಇದು ಭಾಗವತದ ಪ್ರಸಂಗದ  ಕೃತಿ, ಹಾಗೂ ಕಾಮದಹನ ಪ್ರಸಂಗ, ರತಿ-ಪ್ರದ್ಯುಮ್ನರ ಕಥೆಯನ್ನು ತಗೊಂಡು ಬಹಳ ರಸವತ್ತರವಾಗಿ ರಚಿತಗೊಂಡಿದೆ.. ಆದರೂ ಅಂತರ್ಗತನಾಗಿರುವ ಕಥೆಯ ಕಥಾನಾಯಕನು ನಮ್ಮ ಶ್ರೀ ಕೃಷ್ಣ ಪರಮಾತ್ಮನೇ.. ಆತನ ಲೀಲೆಗಳನ್ನ ವಿವರಣೆ ಮಾಡುತ್ತಾ ಆತನಿಂದ ಮಿಕ್ಕ ಪಾತ್ರಗಳನ್ನು ನರ್ತನೆ ಮಾಡುವಂತೆ ರಚನೆ ಮಾಡಿದ್ದಾರೆ ಶ್ರೀ ಕನಕದಾಸಾರ್ಯರು...
ಯುದ್ಧದ ವರ್ಣನೆ ಒಂದು ಅದ್ಭುತ ಆದರೇ, ಶೃಂಗಾರ, ಪ್ರಣಯ ಜೊತೆಗೆ ರಾಜಕೀಯವೂ ಕಾವ್ಯದ ಮೌಲ್ಯತೆಯನ್ನು ಅದ್ಭುತವಾದ ರೀತಿಯಲ್ಲಿ ಹೆಚ್ಚಿಸಿದೆ... 
      ಒಟ್ಟಿನಲ್ಲಿ  ಸೊಗಸಾದ ಸಾಂಗತ್ಯದ ಪ್ರಕಾರ ನಮ್ಮ ದಾಸ ಸಾಹಿತ್ಯದ ಪ್ರಕಾರಗಳಲ್ಲಿ ಮುಖ್ಯವಾದದ್ದು ಅನ್ನುವುದರಲ್ಲಿ ಸಂದೇಹವಿಲ್ಲ.. ಇಂಥಾ ಪ್ರಕಾರಗಳ ಮುಖಾಂತರ ಸದಾ ಪರಮಾತ್ಮನ ಸೇವೆಯನ್ನು ಪದ ಪದ್ಯಗಳ ರೂಪದಲ್ಲಿ ರಚನೆ ಮಾಡಿ ನೀಡಿದ ಹರಿದಾಸರೆಲ್ಲರ ಪಾದಪದ್ಮಗಳಿಗೆ ನಮಸ್ಕಾರಗಳನ್ನು ಸಲ್ಲಿಸುತ್ತಾ....
ಶ್ರೀಮತಿ. ಪದ್ಮ ಶಿರೀಷ
ನಾದನೀರಾಜನದಿಂ ದಾಸಸುರಭಿ
end
**** 

following info is from https://kn.wikipedia.org/
"ಸಾಂಗತ್ಯ " ಇದು ಕನ್ನಡದಲ್ಲಿ ಬಹು ಪ್ರಸಿದ್ಧವಾದ ಒಂದು ಅಂಶಚ್ಛಂದಸ್ಸಿನ ಪ್ರಕಾರ.
ಇದರಲ್ಲಿ ನಾಲ್ಕು ಸಾಲು(ಪಾದ)ಗಳಿರುತ್ತವೆ. ಮೊದಲ ಸಾಲು ಹಾಗೂ ಮೂರನೇ ಸಾಲು ಸಮವಾಗಿರುತ್ತವೆ. ಹಾಗೇ ಎರಡನೇ ಸಾಲು ಹಾಗೂ ನಾಲ್ಕನೇ ಸಾಲು ಸಮವಾಗಿರುತ್ತವೆ.
ಹಳೆಗನ್ನಡದ ಕವಿಗಳ ಸಾಂಗತ್ಯಗಳಲ್ಲಿ ಆದಿಪ್ರಾಸ ಬಳಕೆ ಕಂಡುಬಂದರೂ ಇತ್ತೀಚಿನ ಕವಿಗಳು ಆದಿಪ್ರಾಸವನ್ನು ಬಳಸದೇ ಅಂತ್ಯಪ್ರಾಸಬಳಕೆ ಮಾಡಿರುವುದೂ ಇದೆ.
ಮೊದಲ ಸಾಲು ನಾಲ್ಕು ವಿಷ್ಣು ಗಣಗಳಿರುತ್ತವೆ. ಎರಡನೇ ಸಾಲಿನಲ್ಲಿ ಎರಡು ವಿಷ್ಣು ಹಾಗೂ ಒಂದು ಬ್ರಹ್ಮಗಣವಿರುತ್ತದೆ. ಅದರ ವಿನ್ಯಾಸ ಹೀಗಿದೆ.
೧ನೇ ಸಾಲು- ವಿಷ್ಣು |ವಿಷ್ಣು |ವಿಷ್ಣು |ವಿಷ್ಣು
೨ನೇ ಸಾಲು-ವಿಷ್ಣು |ವಿಷ್ಣು |ಬ್ರಹ್ಮ
೩ನೇ ಸಾಲು- ವಿಷ್ಣು |ವಿಷ್ಣು |ವಿಷ್ಣು |ವಿಷ್ಣು
೪ನೇ ಸಾಲು-ವಿಷ್ಣು |ವಿಷ್ಣು |ಬ್ರಹ್ಮ
ಹಳೆಗನ್ನಡ ಪದ್ಯಕ್ಕೆ ಉದಾಹರಣೆ-
ಅಡಿಗಡಿ|ಗಗ್ರಜ|ರೆಲ್ಲರ|ಬೆಸಗೊಂಡು|
ಮೃಡರಿಪು|ವಾಪುರ|ದಿಂದ|
ಕಡುವೇಗ|ದಿಂದವೆ|ತೆರಳಿದ|ನಾರದ|
ನೊಡನೆ ವಿ|ಮಾನವ|ನೇರಿ|
(ಕಾಮನಕಥೆ-೫-೩)
ಹೊಸಗನ್ನಡ ಪದ್ಯಕ್ಕೆ ಉದಾಹರಣೆ-ಎಸ್.ವಿ.ಪರಮೇಶ್ವರಭಟ್ಟರ "ಇಂದ್ರಚಾಪ"ಕೃತಿಯ ಪದ್ಯ
ಬಂಗಾರ|ದಂತಹ| ನಾ ಕೊಟ್ಟ |ದಿನವನು |
ನೀ ಮಣ್ಣು |ಮಾಡಿದೆ|ಯೆಂದು|
ಕೆಂಪನೆ| ಮುಖಮಾಡಿ| ನನ್ನನೆ |ನೋಳ್ಪನು|
ದಿನಪನು| ತಾ ಪೋಗು|ವಂದು|
end 
*****



ಪ್ರಕಾರ....
08. ವೃತ್ತನಾಮ - ವೃತ್ತನಾಮವೆಂಬುದು ಪಲ್ಲವಿ, ಅನುಪಲ್ಲವಿ ಬಳಿಕ ಪದ-ಶ್ಲೋಕ-ಪದ ಶ್ಲೋಕ ಹೀಗೆ ಮುಂದುವರಿಯುವ ಒಂದು ಸಾಹಿತ್ಯ ಪ್ರಕಾರ

following info is from  
ಈ ವೃತ್ತನಾಮವೆಂಬುದು ಹರಿದಾಸ ಸಾಹಿತ್ಯದ  ಒಂದು ಪ್ರಕಾರವೆನಿಸಿದೆ. ಪಲ್ಲವಿ, ಅನುಪಲ್ಲವಿ ಬಳಿಕ ಪದ-ಶ್ಲೋಕ-ಪದ ಶ್ಲೋಕ ಹೀಗೆ ಮುಂದುವರಿಯುದು ಈ ಪ್ರಕಾರದಲ್ಲಿ. ಶ್ರೀ ಶ್ರೀಪಾದರಾಜ ತೀರ್ಥರು ಈ ಪ್ರಕಾರದಲ್ಲಿ ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ. .

ಶ್ರೀಪಾದರಾಜರ ವೃತ್ತನಾಮ ಹೀಗಿದೆ:

ಮಾನನಿಧಿ ಶ್ರೀಕೃಷ್ಣ ಮಧುರೆಗೈದುವನಂತೆ
ಏನು ಪಥವಮ್ಮ ನಮಗೆ ||ಪ||

ಮಾನವೇ ನಿನ್ನಿದಕೆ ಮಾನಿನಿಯರೆಲ್ಲರು
ಆಣೆಯನು ಕಟ್ಟಿವನಿಗಡ್ಡ ನಿಲ್ಲುವ ಬನ್ನಿ ||ಅ.ಪ||

ಕಳ್ಳತನವೇ ನಮ್ಮ ವಲ್ಲಭರು ಈ ಸುಳಿವು
ಎಲ್ಲವನು ಬಲ್ಲರಮ್ಮ
ಒಲ್ಲದಲೆ ನಮ್ಮ ಬಿಟ್ಟರೆ ಒಳಿತು ವನಜಾಕ್ಷ
ಎಲ್ಲಿಗೈದಿದರೆ ನಾವಲ್ಲಿಗೈದುವ ಬನ್ನಿ ||೧||
…………………………………….. ||೨||
……………………………………… ||೩||

ಶ್ಲೋಕ

ಹಲವು ಕಾಲವು ನಿನ್ನ ಸ್ನೇಹಸುಖವ ಹಾರೈಸಿಕೊಂಡಿರುತಿಹ
ಲಲನಾವ್ಯೂಹವ ಬಿಟ್ಟು ಅಕ್ರೂರನೊಡನೆ ನೀ ಮಧುರೆಗೆ ಪೋದರೆ
ಕಳೆಯಲಾಪೆವೇ ಕಾಂತಕೇಳು ದಿನವ ಈ ಕಂತುವಿನ ಬಾಧೆಗೆ
ಘಳಿಗೊಂದು ಯುಗವಾಗಿ ತೋರುತಿಹುದೋ ಜಲಪಾಕ್ಷ ನೀನಿಲ್ಲದೆ

ಪದ

ಬ್ಯಾಡ ಮಧುರಿಗೆ ಪೋಗಬ್ಯಾಡೆಲವೋ ಶ್ರೀಕೃಷ್ಣ
ಬೇಡಿಕೊಂಬೆವೋ ದೈನ್ಯದಿ
ನೋಡು ನಮ್ಮ್ಯಾಲೆ ದಯಮಾಡು ಮದನಂಗೀಡು
ಮಾಡುವುದೇನುಚಿತವೆಲೋ ಮಾಧವ ಕೃಪಾಕರನೆ ||೪||

-ಹೀಗೆ ಹನ್ನೆರಡು ನುಡಿಗಳಲ್ಲಿ ಮುಂದುವರಿಯುವ ಈ ವೃತ್ತನಾಮದಲ್ಲಿ ಸಂಭಾಷಣಾ ತಂತ್ರದ ಸೊಗಸಿದೆ. ಬಿಲ್ಲಹಬ್ಬಕ್ಕೆಂದು ಗೋಕುಲದಿಂದ ಮಧುರೆಗೆ ಹೊರಟು ನಿಂತ ಕೃಷ್ಣನನ್ನು ಗೋಪಿಯರೆಲ್ಲ ಅಡ್ಡಗಟ್ಟಿ ನಿಲ್ಲಿಸುವುದೇ ಇಲ್ಲಿಯ ವಸ್ತು. ಕೃಷ್ಣ-ಗೋಪಿಯರ ಮಾತಿನ ಚಕಮಕಿಯ ಹಿನ್ನೆಲೆಯಲ್ಲಿ ಪರಸ್ಪರರ ವಿಶ್ವಾಸ ಕಳೆಗಟ್ಟಿದೆ. ಈ ಕೃತಿಗೆ ‘ಶೃಂಗಾರ ಪಾರಿಜಾತ’ ವೆಂಬ ಹೆಸರೂ ಇದೆ.
end
****

following info is by ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ

ದಾಸ ಸಾಹಿತ್ಯ ಪ್ರಕಾರದಲ್ಲಿ ಉಗಾಭೋಗಗಳಂತೆ " ವೃತ್ತನಾಮ " ವಿರಳವಾದರೂ ಅತ್ಯಂತ ಪ್ರಸಿದ್ಧಿಯಾಗಿವೆ. 

ಆದರೆ " ವೃತ್ತನಾಮ " ಗಳ ಲಕ್ಷಣ ಇನ್ನೂ ಸ್ಪಷ್ಟವಾಗಿ ಲಕ್ಷಿಸಲು ಸಾಧ್ಯವಾಗಿಲ್ಲ. 

ಈ ಬಗೆಯ ಕಾವ್ಯ ಪ್ರಭೇದವನ್ನು ಶ್ರೀ ಶ್ರೀಪಾದರಾಜರು " ವೃತ್ತನಾಮ " ಗಳನ್ನು ಪ್ರಪ್ರಥಮವಾಗಿ ರಚಿಸಿದರು. 

ಇದರಲ್ಲಿ.... 

ಪಲ್ಲವಿ - ಒಂದು ವೃತ್ತ [ ಶ್ಲೋಕ ] ನುಡಿ - ಪದ - ಚರಣಗಳು ಇವೆ. 

" ವೃತ್ತನಾಮ " ವೆಂದರೆ.... 

ಒಂದು ಪದದ ಪಲ್ಲವಿಯನ್ನು ಬರೆಯುವುದು - ಅನಂತರ ಒಂದು ವೃತ್ತವನ್ನು ಬರೆಯುವುದು - ನಂತರ ಚರಣವನ್ನು ಹಾಡುವುದನ್ನು " ವೃತ್ತನಾಮ " ಯೆನ್ನುತ್ತಾರೆ . 

ಹರಿದಾಸ ಸಾಹಿತ್ಯದಲ್ಲಿ ಇವು ಅತ್ಯಂತ ಪ್ರಸಿದ್ಧಿಯಾಗಿವೆ. 

ಮಾನನಿಧಿ ಶ್ರೀ ಹರಿಯು -

ಮಧುರಿಗೈದುವನಂತೆ ।

ಏನು ಪಥವನ್ನು ನಮಗೆ ।

ಮಾನವೇ ನಿನ್ನಿದಕೆ -

ಮಾನಿನಿಯರೆಲ್ಲರೂ ಕೂಡಿ ।

ಆಣೆಯನುಗಟ್ಟೆವನ -

ಅಡ್ಡಗಟ್ಟುವ ಬನ್ನಿ ।। ಪಲ್ಲವಿ ।।

:::: ಶ್ಲೋಕ :::::

ಹಲವೂ ಕಾಲದಿ ನಿನ್ನನ್ಯೇಹ -

ಸುಖವಾ ಹಾರೈಸಿಕೊಂಡಿರುತಿಹ್ಯಾ ।

ಲಲನಾಯೂಹವ ಬಿಟ್ಟು -

ಕ್ರೂರರೊಡನೆ ನೀ ಮಧುರಿಗೆ ಪೋದಡೇ ।

ಕಳಿಯಾಲಾರೆವೋ ಕಾಂತ ಕೇಳು -

ದಿನವಾ ಆ ಕಂತುವಿನ ಬಾಧೆಗೆ ।

ಘಳಿಗೊಂದುಯುಗವಾಗಿ -

ತೋರುತಿಹ್ಯದೇ ಜಲಜಾಕ್ಷ ನೀನಲ್ಲದೆ ।। 1 ।।

::: ಪದ :::

ಬ್ಯಾಡ ಮಧುರಿಗೆ ಪೋಗ-

ಬ್ಯಾಡೆಲವೋ ಶಿರಿ ಕೃಷ್ಣ ।

ಬೇಡಿಕೊಂಬೆವೋ ದೈನ್ಯದೀ ।

ನೋಡು ನಮ್ಮ್ಯಾಲೆ -

ದಯಮಾಡು ಮದನಂಗುರಿ ।

ಮಾಡುವುದನುಚಿತವೆಲೊ -

ಮಾಧವಾ ಕೃಪಾಕರನೇ ।। 1 ।।  

:::: ಶ್ಲೋಕ :::: 

ಮಾರಾನೆಂಬವನಂದು ಮಡಿದ -

ಹೋದ ಶಿವನ ಆ ಮೂರನೇಕಂಣೀಲಿ ।

ನಾರೇರಿಲ್ಲದೆ ನಾಭಿಯಲಿ -

ಪಡದಾ ಆ ಬ್ರಹ್ಮನೆಂಬಾತನಾ ।

ನಾರಿ ಇರ್ವ ಕುಮಾರ ರಾಣೆ -

ಹರಿಯುತಾ ತಾನೆಂತ್ತೆಂದರೆ ಮಾರೀ ।

ಹೊರಗಿನ ಧೋರಗೆ ಹೋಯಿತೆಂಬೋ -

ತೇರಾಗ್ಯೆದೆ ಭಾಕೀ ।। 9 ।।

:::: ಪದ :::::

ಹಲವು ಮಾತ್ಯಾಕೆಮಗೆ -

ಜಲಜಾಕ್ಷ ನಿನ್ನ ಪದ ।

ನಳಿನಗಳ ನೆರೆನಂಬಿಹ್ಯ ।

ಬಲುವಿನಿಂದಿರುತಿಪ್ಪ -

ಲಲನೆಯರನೆಲ್ಲರನು ಸಲಹು ।

ಸಲಹದೆ ಮಾಣೋ   -

ರಂಗ ವಿಠ್ಠಲರೇಯಾ ।। 9 ।।

end

***





ಪ್ರಕಾರ....
09. ಕೀರ್ತನೆ  - ದೇವಾಲಯದ ಸೇವೆಯಲ್ಲಿ ಭಗವಂತನ ಗೌರವಾರ್ಥವಾಗಿ ಹಾಡುವ ಹಾಡು. ಕೀರ್ತನೆ ಭಾರತದ ಭಕ್ತಿ ಸಂಪ್ರದಾಯಗಳಲ್ಲಿ ನಡೆಸಲಾಗುವ ಒಂದು ಕರೆ ಮತ್ತು ಪ್ರತಿಕ್ರಿಯೆ ಪಠಣ 
following info is from
‘ಕೀರ್ತನೆ’ ಎಂದರೆ ‘ಸ್ತುತಿ’, ‘ಹೊಗಳುವಿಕೆ’ ಎಂಬುದು ಶಬ್ದಾರ್ಥ. ನವವಿಧ ಭಕ್ತಿ ಮಾರ್ಗಗಳಲ್ಲಿ ಕೀರ್ತನಭಕ್ತಿಯೂ ಒಂದು. ಅಂದರೆ ಭಗವಂತನನ್ನು ಗಾಯನ ಮುಖೇನ ಸ್ತುತಿಸುವುದು ಎಂದಿಟ್ಟುಕೊಳ್ಳಬಹುದು. ಕನ್ನಡದ ಈ ಪ್ರಕಾರಕ್ಕೆ ಸುಮಾರು ಎಂಟುನೂರು ವರ್ಷಗಳ ಇತಿಹಾಸವಿದೆ. 
ಕೀರ್ತನೆಗಳ ವಸ್ತು ಭಿನ್ನಭಿನ್ನವೆಂಬಂತೆ ಕಂಡರೂ ಎಲ್ಲ ಕೀರ್ತನೆಗಳಲ್ಲಿ ಸೂತ್ರಪ್ರಾಯವಾಗಿರುವ ವಸ್ತು ಹರಿಭಕ್ತಿ. ಸಂಗೀತದ ಹಿನ್ನೆಲೆಯಲ್ಲಿ, ನೀತಿಯ ಚೌಕಟ್ಟಿನಲ್ಲಿ, ಸಾಮಾಜಿಕ ವರ್ತುಲಗಳಲ್ಲಿ ಅಧ್ಯಾತ್ಮವನ್ನು ಬಿತ್ತರಿಸುವ, ಹರಿಭಕ್ತಿ ಹಾಗೂ ಭಕ್ತರ ಹಿರಿಮೆ-ಗರಿಮೆಗಳನ್ನು ಸಾರುವ ಈ ಕೀರ್ತನ ಪ್ರಕಾರ ಪಂಡಿತ ಪಾಮರಿರಿಬ್ಬರನ್ನೂ ರಂಜಿಸಬಲ್ಲದು. ರಾಗ-ತಾಳಗಳೆರಡೂ ಪ್ರಧಾನವಾಗಿರುವ ಕೀರ್ತನೆ ತಾಳಪ್ರಧಾನವಾದ ಸುಳಾದಿಗಿಂತ ಸರಳವಾದ; ರಾಗ ಪ್ರಧಾನವಾದ ಉಗಾಭೋಗಕ್ಕಿಂತ ಬಿಗಿಯಾದ ರಚನೆ. ಪಲ್ಲವಿ, ಅನುಪಲ್ಲವಿ, ನುಡಿಗಳಲ್ಲಿ ದ್ವಿತೀಯ ಪ್ರಾಸವಿರುತ್ತದೆ. ಮತ್ತು ‘ವಡಿ’ ಎದ್ದು ಕಾಣುತ್ತದೆ. ಅಲ್ಲಲ್ಲಿ ಒಳಪ್ರಾಸವಿರುವುದೂ ಉಂಟು. ಉಪಮೆ ರೂಪಕಾದಿ ಅಲಂಕಾರಗಳಿಂದ ಕೂಡಿದ, ಜೀವನಾನುಭವದಿಂದ ತುಂಬಿ ತುಳುಕುತ್ತಿರುವ ಕೀರ್ತನೆಗಳು ಓದುಗರು, ಕೇಳುಗರು ಮತ್ತು ಹಾಡುವವರು-ಎಲ್ಲರಿಗೂ ಆಪ್ಯಾಯಮಾನವಾಗಿರುತ್ತವೆ. ಕೀರ್ತನೆಗಳನ್ನು ಅಲ್ಪಸ್ವಲ್ಪ ಸಂಗೀತಜ್ಞಾನವುಳ್ಳವರೂ ಹಾಡಬಹುದು.
end
****
following info is by ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ

ದಾಸ ಸಾಹಿತ್ಯವೆಂದರೆ " ಕೀರ್ತನೆ " ಗಳು ಯೆಂಬರ್ಥದಲ್ಲಿ ಕೀರ್ತನ ಪ್ರಕಾರ ಜನಜನಿತವಾಗಿದೆ. 

ಈ ಬಂಧಗಳು ಸಾಮಾನ್ಯವಾಗಿ " ಛಂದೋ ವೃತ್ತ " - " ತಾಳ ವೃತ್ತ " ವೆಂದು ವಿಂಗಡಿಸಬಹುದು. 

ಕೀರ್ತನೆಗಳನ್ನು.... 

ಶ್ರೀ ವಾದಿರಾಜರು " ಪದ " ವೆಂದೂ - ಶ್ರೀ ವ್ಯಾಸರಾಜರು " ಗೀತ " ಯೆಂದೂ - ಶ್ರೀ ವಿಜಯರಾಯರು " ಕೃತಿ " ಯೆಂದೂ  - ಶ್ರೀ ಪ್ರಸನ್ನ ವೆಂಕಟದಾಸರು " ಪದಪದ್ಯ " ಯೆಂದೂ ಬಳಸಿದ್ದಾರೆ. 

ಆದರೆ ಕಾಲಕಾಲಕ್ಕೆ ಈ ಪದಗಳ ಅರ್ಥ ರೂಪ ಬದಲಾಗುತ್ತಾಸಾಗಿದೆ. 

ಹರಿದಾಸ ಸಾಹಿತ್ಯವು ಮೂಲದಲ್ಲಿ " ಸಂಗೀತ ಪಾಠ " ದಲ್ಲಿದ್ದು - ನಂತರದಲ್ಲಿ ಪ್ರಯೋಗಾನುಸಾರವಾಗಿ " ಸಂಕೀರ್ತನ ಪಾಠ " ಹಾಗೂ ಸಂಪ್ರವಚನ ಪಾಠ " ಗಳು ಕೆಲವು ಅಕ್ಷರಗಳ ಅಥವಾ ಶಬ್ದಗಳಿಂದಾಗಿರುವವು. 

ಇದನ್ನು ಗಮನಿಸಿದರೆ ಶ್ರೀ ಹರಿದಾಸರ ಪದಗಳು ಮೂಲಭೂತವಾಗಿ ಸಂಗೀತ ಪ್ರಕಾರಕ್ಕೆ ಸೇರಿದ " ಪದ " ಗಳೆಂದೂ -  ಭಜನೆ ಮಾಡುವವರು ವಹಿಸುವ ಸ್ವಾತಂತ್ಯದಿಂದ " ಸಂಕೀರ್ತನ " ವಾಗಿಯೂ - ಹರಿಕಥೆಯನ್ನು ಹೇಳುವವರು ಮತ್ತಷ್ಟು ಸ್ವಾತಂತ್ರ್ಯವನ್ನು ತೆಗದು ಕೊಳ್ಳುವುದರಿಂದ " ಸಂಪ್ರವಚ " ವಾಗಿಯೂ ಪರಿಗಣಿಸಿದ್ದಾರೆ. 

end
****

ಕೀರ್ತನೆಗಳು ಸಾಮನ್ಯವಾಗಿ ವಿಷ್ಣುವಿನ ಕುರಿತಾಗಿ ಇರುತ್ತವೆ. ದೇವಿ, ಗಣಪತಿ, ಆಂಜನೇಯ ಬಗ್ಗೆಯೂ ಕೆಲವು ಕೀರ್ತನೆಗಳಿವೆ. ಕೀರ್ತನೆಗಳನ್ನು ರಚಿಸಿದವರು ಹರಿದಾಸರು. ಕೀರ್ತನೆಗಳು ವೈಷ್ಣವ/ದ್ವೈತ ತತ್ತ್ವಗಳಿಂದ ಕೂಡಿವೆ. ಕೀರ್ತನೆಗಳು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಚ್ಚುಮೆಚ್ಚು. ಕೀರ್ತನೆಯ ಆಚರಣೆಯು ಪಕ್ಕ ವಾದ್ಯಗಳ ಜೊತೆಗೂಡಿ ಭಕ್ತಿಯ ಪ್ರದಶನ.  ಪಕ್ಕವಾದ್ಯಗಳಾದ ಪಿಟೀಲು, ಮೃದಂಗ, ಘಟ, ಖಂಜಿರ, ಮೋರ್ಚಿಂಗ್ ದಕ್ಷಿಣ ಭಾರತದಲ್ಲಿ ಕಂಡುಬರುತ್ತದೆ. ಮಧ್ಯ ಹಾಗೂ ಉತ್ತರ ಭಾರತ ಮತ್ತು ಕರ್ನಾಟಕದ ಉತ್ತರ ಭಾಗದಲ್ಲಿ  ಹಾರ್ಮೋನಿಯಂ, ತಬಲಾ,  ಕರತಾಳಗಳಂತಹ ವಾದ್ಯಗಳು ಜೊತೆಗೂಡಿರುತ್ತವೆ. ಕೀರ್ತನೆಗಳಲ್ಲಿ ಪದ್ಯಗಳ ಜೊತೆಗೆ ಶ್ಲೋಕಗಳು ಅಥವಾ ಮಂತ್ರಗಳ ಪಠಣವನ್ನು ಕೂಡ ಒಳಗೊಳ್ಳುತ್ತದೆ. ತ್ಯಾಗರಾಜರು, ಶಾಮಶಾಸ್ತ್ರಿ, ಮುತ್ತುಸ್ವಾಮಿ ದೀಕ್ಷಿತರು ತೆಲುಗು/ತಮಿಳಿನಲ್ಲಿ, ಪುರಂದರದಾಸರು ಕನ್ನಡದಲ್ಲಿ ಬಹಳಷ್ಟು ಕೀರ್ತನೆಗಳನ್ನು ರಚಿಸಿದ್ದಾರೆ.
****

 


ಪ್ರಕಾರ....
10.ಉಗಾಭೋಗ  -ಉದ್ಗ್ರಾಹ+ಮೇಲಾಪಕ+ಧ್ರುವ+ಅಂತರ+ಆಭೋಗ 
ಉದ್ಗ್ರಾಹ, 
ಮೇಲಾಪಕ,
ಧ್ರುವ,
ಅಂತರ 
ಆಭೋಗ 
ಎಂಬ ಐದು ಧಾತುಗಳಿಂದ 'ಉಗಾಭೊಗ' ರಚನೆಗೊಂಡಿತೆಂದು ಹೇಳುತ್ತಾರೆ. ಈ ಉಗಾಭೋಗಗಳು ಬಹು ಚಿಕ್ಕದಾದವು. ಉಗಾಭೋಗ ಕೃತಿಗಳು ೪ ಸಾಲುಗಳಿಂದ ೧೨ ಸಾಲುಗಳವರೆಗೆ ಇರುತ್ತವೆ. ಹರಿದಾಸರೆಲ್ಲರೂ ಈ ಉಗಾಭೋಗಗಳನ್ನು ರಚಿಸಿದ್ದಾರೆ.
end
****
following info is from https://kn.wikipedia.org/
ಉಕ್ + ಆಭೋಗ, ಎಂದರೆ ಮಾನವನ ಅನುಭವ ಸಮಷ್ಟಿಯ ವಾಗಭಿವ್ಯಕ್ತಿ, ಎನ್ನುವುದು ಒಂದು ಪಂಥ; ಯುಗಾಭೋಗ, ಎಂದರೆ ಪರಮಾತ್ಮನಲ್ಲಿ ಲೀನವಾಗಿಬಿಡುವುದರ ಆನಂದಾನುಭವ, ಎನ್ನುವುದು ಎರಡನೆಯದು. ಉದ್ಗ್ರಾಹ + ಆಭೋಗ ಎಂಬ ಸಂಧಿಯಲ್ಲಿ ಕಠಿಣೋಚ್ಚರಿತಗಳಾದ ದ್, ರ್, ಹ್ ಗಳ ಲೋಪದಿಂದ ಈ ಪದ ಹುಟ್ಟಿದೆ-ಎನ್ನುವುದು ಹೆಚ್ಚು ಪ್ರಚಾರದಲ್ಲಿರುವ ಮತ. ಸಂಗೀತ ಪ್ರಬಂಧವೊಂದನ್ನು ಮೊದಲು ಮಾಡುವ ಧಾತುಭಾಗಕ್ಕೆ ಉದ್ಗ್ರಾಹವೆಂದೂ ಮುಗಿಸುವ ಧಾತುಭಾಗಕ್ಕೆ ಆಭೋಗವೆಂದೂ ಸಂಗೀತಶಾಸ್ತ್ರದ ಪರಿಭಾಷೆ. ಈ ಮೂರು ಮತಗಳೂ ಕೇವಲ ಕಲ್ಪನೆಯಿಂದ ಹುಟ್ಟಿವೆ. ಭಾಷಾತ್ಮಕ, ಚಾರಿತ್ರಿಕ ಅಥವಾ ಇತರ ಯಾವ ಆಧಾರಗಳೂ ಇವಕ್ಕೆ ಇಲ್ಲ. ಕೆಲವರು ಸಂಗೀತಶಾಸ್ತ್ರ ಪ್ರಕ್ರಿಯೆಗೆ ವಿರುದ್ಧವಾದುದು ಎಂದೂ ಪ್ರತಿಕ್ರಿಯಿಸುತ್ತಾರೆ.
end
***
following info is from
ಉಗಾಭೋಗವೂ ಹರಿದಾಸರು ಬಳಸಿರುವ ಇನ್ನೊಂದು ಗೇಯ ಪ್ರಕಾರ. ಯಾವುದೇ ರಾಗತಾಳಗಳ ಕಟ್ಟಿಗೆ ಒಳಪಡದ, ಬೇಕೆನಿಸಿದ ರಾಗವನ್ನು ಅಳವಡಿಸಬಹುದಾದ ಸರಳ ಬಂಧವಿದು . ಪಾದಗಳಲ್ಲಿ ನಿಯತ ಸಂಖ್ಯಾನಿಯಮವಿಲ್ಲ. ರಚನೆಯ ಕೊನೆಯಲ್ಲಿ ರಚನಕಾರರ ಅಂಕಿತವಿರುತ್ತದೆ. ಮೇಲ್ನೋಟಕ್ಕೆ ಇವು ವಚನಗಳನ್ನು ಹೋಲುತ್ತವೆಯಾದರೂ ಮೂಲಭೂತವಾಗಿ ಇವು ಸಂಗೀತ ಪ್ರಧಾನ ರಚನೆಗಳು. ನುಡಿಗಳ ತಡೆಯಿಲ್ಲ. ರಾಗ-ತಾಳ ಪ್ರಧಾನ ಕೀರ್ತನೆ ಹಾಗೂ ತಾಳಪ್ರಧಾನ ರಚನೆಯಾದ ಸುಳಾದಿಗಿಂತ ಲಘುವಾದ ರಚನೆ ಘನೀಭೂತವಾದ ಭಾವನೆಗಳ ಅಭಿವ್ಯಕ್ತಿಯನ್ನಿಲ್ಲಿ ಕಾಣುತ್ತೇವೆ.
***

by -Smt. Padma Sirish

ದಾಸ ಸಾಹಿತ್ಯದ ಪ್ರಕಾರಗಳಲ್ಲಿ ಉಗಾಭೋಗ

         ದಾಸ ಸಾಹಿತ್ಯದ ಪ್ರಕಾರಗಳಲ್ಲಿ ಉಗಾಭೋಗ ದ ಸ್ಥಾನ ಬಹಳ ಉತ್ಕೃಷ್ಟವಾದದ್ದು.. ಇದರಲ್ಲಿ ಮಾತು ಕಡಿಮೆ ಅರ್ಥ ಹೆಚ್ಚಾಗಿರುತ್ತದೆ.. ಈ ಸಣ್ಣ ಕೃತಿಯಲ್ಲೇನೇ ಅಗಾಧವಾದ ಅರ್ಥ ತುಂಬಿರ್ತದೆ... ಉಗಾಭೋಗ ಎನ್ನುವ ಹೆಸರನ್ನು  ಬಳಿಸದೇ ಇದ್ದರೂ ಶ್ರೀ ವಿಜಯದಾಸಾರ್ಯರ ಪದವೊಂದಲ್ಲಿ ಶ್ರೀ ಪುರಂದರದಾಸರು ಸಾವಿರಾರು ಉಗಾಭೋಗಗಳ ರಚಿಸಿದ್ದಾರೆಂದು ತಿಳಿದು ಬರ್ತದೆ.. ಈ ಉಗಾಭೋಗ ಎನ್ನುವ ಹೆಸರು 13 ನೇ ಶತಮಾನದಲ್ಲಿ ಶಾಜ್ಙದೇವನ ಕಾಲದಿಂದ ಬಳಕೆಯಲ್ಲಿದೆ ಎಂದು ಹೇಳ್ತಾರೆ..  

       ಉಗಾಭೋಗಗಳಲ್ಲಿ ನೇರವಾದ ಮಾತು, ಸರಳವಾದ ನಿರೂಪಣೆ, ಪದ ಜೋಡಣೆಯ ಸೊಬಗು ಬಲು ಮನೋಹರ.. 

       ಉಗಾಭೋಗ ಪದವನ್ನು ಕೆಲವರು ಉಕ್ + ಆಭೋಗ ಎನ್ನುವುದಾಗಿ ಬಿಡಿಸಿಕೋತಾರೆ... ಉಗಾಭೋಗಗಳಿಗೆ ರಾಗ-ತಾಳದ ಪ್ರತ್ಯೇಕ  ನಿಯಮವಿಲ್ಲದೇ ಇದ್ದರೂ,  ಉದ್ಗ್ರಾಹ, ಮೇಲಾಪಕ, ಧ್ರುವ, ಅಂತರಾ, ಆಭೋಗ ಎನ್ನುವ ಸಂಗೀತದ ಪಂಚಧಾತುಗಳಿಂದ ಕೂಡಿದ್ದಾಗಿ ಉದ್ಗ್ರಾಹಾಭೋಗ ಆಗಿ ನಂತರದಲ್ಲಿ ಉಗಾಭೋಗ ಆಗಿದೆ... ಆದ್ದರಿಂದ ಸಂಗೀತ ಪ್ರಧಾನವಾದದ್ದೂ ಹೌದು. 

        ಶ್ರೀ ಸುಳಾದಿಕುಪ್ಪೇರಾಯರು 

100 - ಕೀರ್ತನೆಗಳು = ಒಂದು ಸುಳಾದಿ ಎಂತಲೂ

100 ಸುಳಾದಿ = ಒಂದು ಉಗಾಭೋಗ ಎಂದು  ಉಗಾಭೋಗದ ಔನ್ನತ್ಯವನ್ನು ತಿಳಿಸಿದ್ದಾರೆ...

 ಅನುಭವದ ಭಾವ ಉಕ್ಕೇರಿದಾಗ ನುಡಿಮುತ್ತಿನಂತ ಉಗಾಭೋಗ ಹೊರಹೊಮ್ಮಿ ಬರುತ್ತದೆ... ಅಂತ ಹೇಳ್ತಾರೆ...

 ಆದ್ಯರಿಂದ ಪ್ರಾರಂಭವಾದ, ಶ್ರೀ ಶ್ರೀಪಾದರಾಜರಿಂದ ಖ್ಯಾತಗೊಂಡ ಈ ಪ್ರಕಾರ ಇವತ್ತಿನ ದಾಸದಾಸರ ರಚನೆಗಳಲ್ಲಿಯೂ ಕಂಡು ಬರುತ್ತದೆ ಅಂದರೇ ಅತಿಶಯೋಕ್ತಿಯಲ್ಲ... 

   ಒಟ್ಟಿನಲ್ಲಿ ಉಗಾಭೋಗ ಎಂದರೇ 

ಮಿತವಾದ  ಮಾತು

ಹಿತವಾದ ಸ್ಮರಣೆ

ಉತ್ಕಟವಾದ ಅನುಭವ ಇವುಗಳಿಂದ ಕೂಡಿದ್ದಾಗಿ ಪರಮಾತ್ಮನ ಗುಣಗಾನವನ್ನು ಮನಸಿಗೆ ಮುಟ್ಟುವಂತೆ ಮಾಡುವುದರಲ್ಲಿ ಸಣ್ಣ ಕೃತಿಯಾದರೂ ದೊಡ್ಡ ಸ್ಥಾನವನ್ನು ಪಡೆದಿದ್ದವೆ.. ಇಂಥಹಾ ಅದ್ಭುತವಾದ  ಹರಿದಾಸ ಸಾಹಿತ್ಯದ ಪ್ರಕಾರವಾದ ಉಗಾಭೋಗಗಳ ಗಾಯನವನ್ನು ನಾವು ಬಿಡದೇ ಮಾಡುವಂತಾಗಲೀ... 

ಶ್ರೀಮತಿ. ಪದ್ಮ ಶಿರೀಷ

ನಾದನೀರಾಜನದಿಂ ದಾಸಸುರಭಿ

end

***

by Suguna Vittala

ಉಗಾಭೋಗಗಳು ಸಾಹಿತ್ಯದೃಷ್ಠಿಯಿಂದ ಉಪಮಾ ರೂಪಕಾದಿ ಅಲಂಕಾರಗಳಿಂದಲೂ ಶ್ರೀಮಂತವಾಗಿವೆ.ಶಾಸ್ತ್ರದೃಷ್ಠಿಯಿಂದಂತೂ ಪ್ರಮೇಯಗಳ, ಆಗಮಗಳ, ಭಗವತ್ತತ್ವ ನಿರೂಪಿಸುವಲ್ಲಿ..ಜನಮನದಲ್ಲಿ ನೆಲೆಸುವಲ್ಲಿ  ಪ್ರಮೇಯಗಳ ಅಧ್ಭುತವಾದ ಅಮೃತಸಮುದ್ರದಂತಿವೆ.

ಉಗಾಭೋಗಗಳು ನಿರ್ಮಲಭಕ್ತಿಯ ಉತ್ಕಟೆಯಲ್ಲಿ ಹೊರಬಂದ ಅಮೃತಸಿಂಚನಗಳು...ನುಡಿಮುತ್ತುಗಳು.ಮಜ್ಜಿಗೆಯೊಳಗಿನ ನವನೀತದಂತೆ 

ಶುದ್ಧ-ಶುಭ್ರ ,ನಯ, ಸ್ವಾದಿಷ್ಟ, ಉದ್ಗಾಹ, ಮೇಲಾಪಕ, ಧ್ರುವ, ಆಭೋಗ, ಹಾಗೂ ಅಂತರ ಎಂಬ ಐದು ಧಾತು ಸೇರಿ ಉಗಾಭೋಗ

ರೂಪುಗೊಂಡಿದೆ.

ಇವುಗಳಲ್ಲಿ ಆದ್ಯಂತವಾಗಿ ಪದಗಳ ಸಂಯೋಜನೆಯಿಂದ 

*ಉದ್ಗ್ರಹ+ಆಭೋಗ=ಉಗಾಭೋಗವಾಗಿದೆ.ಎಂಬುದು ವಿದ್ವಾಂಸರ ಅಭಿಮತ.ಉಗಾಭೋಗಗಳು ಸಂಗೀತ, ತಾತ್ವಿಕ, ವಿಚಾರಗಳನ್ನು ಮೇಳೈಸಿಕೊಂಡ ಹರಿದಾಸ ಸಾಹಿತ್ಯದ ವಿಳಾಸ ಪತ್ರಗಳಂತಿವೆ.

ಇವು ನಿತ್ಯಪಠನೀಯ ಕೃತಿಗಳಾಗಿದ್ದೂ ವಿಶೇಷ ಫಲಧಾಯಕವಾಗಿವೆ.

೧೦೮ ಕೀರ್ತನೆಗಳಿಗೆ ಒಂದು ಸುಳಾದಿ ಸಮಾನವಾದರೇ..ಅದರಂತೆ ೧೦೮ ಸುಳಾದಿಗಳ ಫಲವನ್ನು ಒಂದು ಉಗಾಭೋಗದ ನಿಜವಾದ ಅರ್ಥಾನುಸಂಧಾನ&ಚಿಂತನ , ಪಠಣ, ಶ್ರವಣಾದಿಗಳಿಂದ ಅದ್ಬುತವಾದ ವಿಶೇಷ ಫಲ ದೊರೆಯುವುದೆಂದು ಜ್ಞಾನಿಗಳ ಅಭಿಮತ.

end

***



ಪ್ರಕಾರ....
11. ಸುಳಾದಿ   - ಒಂದೆ ರಾಗ ಅನೇಕ ತಾಳ+ಅಭಿಪ್ರಾಯ ಜತೆಯಲ್ಲಿರುವುದು
following info is from
ಸುಳಾದಿ ಹರಿದಾಸರು ಬಳಸಿರುವ ಇನ್ನೊಂದು ವಿಶಿಷ್ಟ ಗೇಯರಚನೆ. ತಾಳಪ್ರಧಾನ ರಚನೆಗಳಿವು. ಒಂದೊಂದು ನುಡಿಯೂ ಒಂದೊಂದು ತಾಳದಲ್ಲಿದ್ದು ಅಂತಹ ಐದು ಅಥವಾ ಏಳು ನುಡಿಗಳಿರುತ್ತವೆ. ಧ್ರುವ ಮಠ್ಯ ರೂಪಕ ಝಂಪೆ ತ್ರಿಪುಟ, ಅಟ್ಟ ಮತ್ತು ಏಕ- ಇವುಗಳನ್ನು ಸುಳಾದಿಯ ಸಪ್ತತಾಳಗಳೆಂದೇ ಕರೆಯಲಾಗಿದೆ. ಈ ಏಳುತಾಳಗಳೊಂದಿಗೆ ಆದಿತಾಳವೂ ಬರುವುದು. ಹಾಗಾಗಿ ಕೆಲವೊಮ್ಮೆ ಎಂಟು ನುಡಿಗಳಿರುವುದೂ ಉಂಟು. ನುಡಿಗಳ ಪಾದಗಳಲ್ಲಿ ನಿಯತ ಸಂಖ್ಯಾ ನಿಯಮವಿರುವುದಿಲ್ಲ. ಸುಳಾದಿಯ ಪ್ರತಿ ನುಡಿಯ ಕೊನೆಯಲ್ಲೂ ಆಯಾ ರಚನಕಾರರ ‘ಅಂಕಿತ’ವಿರುತ್ತದೆ. ಮತ್ತು ಸುಳಾದಿಯ ಕಡೆಯಲ್ಲಿ ಎರಡು ಸಾಲುಗಳ ಒಂದು ‘ಜತೆ’ಯಿದ್ದು, ಜತೆಯಲ್ಲೂ ರಚನಕಾರರ ಅಂಕಿತ ನಿಯತವಾಗಿ ಬರುತ್ತದೆ. ಕೀರ್ತನೆಯ ಸಾರ ಪಲ್ಲವಿಯಲ್ಲಿರುವಂತೆ ಸುಳಾದಿಯ ಸಾರ ‘ಜತೆ’ಯಲ್ಲಿರುತ್ತದೆ. ‘ಕನ್ನಡ ದಾಸ ಸಾಹಿತ್ಯದ ವಿನಾ ಈ ಜಾತಿ ಬೇರೆಲ್ಲಿಯೂ ಕಂಡುಬರುವುದಿಲ್ಲ’[2]ವೆಂಬ ಮಾತಿದೆ. ಅಂತೆಯೇ ಸಧ್ಯಕ್ಕೆ, ನಮಗೆ ತಿಳಿದಂತೆ ಶ್ರೀಪಾದರಾಜರೇ ಅಧಿಕೃತವಾಗಿ ಮೊದಲ ಸುಳಾದಿ ರಚನಕಾರರು.
end
**** 
following info is from
ಕೀರ್ತನೆಯು ಅನೇಕರಾಗ ಮಾಲಿಕೆಗಳಲ್ಲಿದ್ದು ಒಂದೇ ತಾಳದಲ್ಲಿದ್ದಂತೆ;ಒಂದೆ ರಾಗ ಅನೇಕ ತಾಳದಲ್ಲಿರುವುದು ಸುಳಾದಿ. ಎಳು ಭಿನ್ನ ತಾಳಗಳ ನುಡಿಗಳನ್ನು ಏಕತ್ವಗೊಳಿಸಿ 'ಸುಳಾದಿ' ರಚನೆಗೊಳ್ಳುತ್ತದೆ.ಅವೇ ಧ್ರುವ , ಮಟ್ಟ ,ರೂಪಕ,ಝಂಪ ,ತ್ರಿಪುಟ,ಅಟ್ಟ ಮತ್ತು ಆದಿ ತಾಳಗಳು. ಕನಿಷ್ಟ 5, ಗರಿಷ್ಟ 10 ನುಡಿಗಳು ಸುಳಾದಿಗಳಲ್ಲಿ ಇವೆ. 5 ನುಡಿಗಳಲ್ಲಿ (ರೂಪಕ,ಝುಂಪ) ಇವೆರಡಿಲ್ಲಾ ,10ರಲ್ಲಿ ಪುನರಾವರ್ತನೆಗೊಳ್ಳುತ್ತವೆ.ಮುಂದೆ 'ಜತೆ' ಯಲ್ಲಿ ಎಲ್ಲ ತಾಳಗಳಲ್ಲಿ ಹೇಳಿರುವುದು ಜತೆ(ಸರಿ)ಯಾಗಿ ಕೂಡಿಕೊಂಡು ಬರುವುದು.ಅಂದರೆ ಎರಡು ಸರಳ ರೇಖೆಗಳ ಹೇಗೆ ಜತೆಯಾಗಿರುವವೊ ಹಾಗೆಯೆ ಸಮನ್ವಯಿಸುವುದು. ಪದದ ಅರ್ಥ ಪಲ್ಲವಿಯಲ್ಲಿದ್ದಂತೆ, ಸುಳಾದಿಯ ಅರ್ಥ ಅಭಿಪ್ರಾಯ ಜತೆಯಲ್ಲಿರುವುದು.

ಸುಳಾದಿಗಳಲ್ಲಿ ಸಾಮನ್ಯ ವಿವರಣೆ
ಧ್ರುವತಾಳದಲ್ಲಿ : - ವಸ್ತು ನಿಶ್ಚಯ ವಿಷಯ
ಮಟ್ಟತಾಳದಲ್ಲಿ : - ವಸ್ತುವಿನ ಗುಣಧರ್ಮ ನಿರೂಪಣೆ.
ರೂಪದಲ್ಲಿ :- ವಸ್ತುವಿನ ಗುಣಧರ್ಮ ಕಾರಣ ವಿವೇಚನೆ
ಝಂಪಾದಲ್ಲಿ :- ವಸ್ತು ಗುಣಧರ್ಮ ಕಾರಣ ಕಾರ್ಯರೂಪದಿ,ಮನಸ್ಸಿನಲ್ಲಿ ಪರಿಣಮಿಸುವಿಕೆ.
ತ್ರಿಪುಟದಲ್ಲಿ :- ಗುಣಧರ್ಮ ಕಾರ್ಯ ಪ್ರಾಪ್ತಿ ವಿಷಯ ಪ್ರಾರ್ಥನೆ.
ಅಟ್ಟತಾಳದಲ್ಲಿ :- ಮನೋವೇಗ ಸ್ತೋತ್ರ ಸಂಗೀತ ತಾಳ ಕುಣಿತ
ಆದಿತಾಳದಲ್ಲಿ :-ಸ್ತೊತ್ರಾನಂದದಲ್ಲಿ ನಲಿದಾಡುವಿಕೆ ಮತ್ತು ಸ್ವಲ್ಪ ಹೆಚ್ಚಿನ ವೇಗ ಕುಣಿತ..

ಸುಳಾದಿಯ ಸ್ವರೂಪದ ಬಗ್ಗೆ 
ಸುಳಾದಿಯ ಸ್ವರೂಪದ ಬಗ್ಗೆ  ಬೆಳಕಿಗೆ ಬಂದಿರುವ ವಿಷಯಗಳು ಸ್ವಲ್ಪ ಪರಿಶೀಲಿಸಬಹುದು .
ಒಮ್ಮೆ  ಹುಲುಜೂರು ಕೃಷ್ಣಾಚಾರ್ಯರು "ಕರ್ಣಾಟಕ  ಸಂಗೀತವೂ ದಾಸಕೂಟವೂ " ಎಂಬ ತಮ್ಮ ಗ್ರಂಥದಲ್ಲಿ  ಸುಳಾದಿಯ ಸ್ವರೂಪವನ್ನು ಸಾಕಷ್ಟು ಪರಿಚಯ ಮಾಡಿ ಕೊಟ್ಟಿದ್ದರೂ
ಇತ್ತೀಚಿಗೆ (೧೯೮೫)  ಈ  ಕ್ಷೇತ್ರದಲ್ಲಿ ವಿಶೇಷವಾಗಿ ಅಧ್ಯಯನ ನಡೆಸಿರುವ  ಡಾ ।। ರಾ.  ಸತ್ಯನಾರಾಯಣ  ಅವರು ತಮ್ಮ ಲೇಖನವೊಂದರಲ್ಲಿ (Click here :Suladis and Ugabhogas of Karnataka Music )ಶ್ರೀ ಪುರಂದರ ದಾಸರ ಸಾಹಿತ್ಯ XI ೧೯೬೫ : ಕೃಷ್ಣ  ಲೀಲಾ ,ಇಂಗ್ಲಿಷ್  ಲೇಖನ (ಪುಟ  ೬೮-೭೮) ಸುಳಾದಿಯ  ಹೆಸರಿನ  ಉಲ್ಲೇಖವೇನೋ  'ಸೂಡಾದಿ' ಎಂಬುದಾಗಿ , ಅಗ್ಗಳ ( ಕ್ರಿ . ಶ  ೧೧೮೯) ಮೊದಲ್ಗೊಂಡು ಗೋವಿಂದ ವೈದ್ಯನ  ವರೆಗೆ  ( ಕ್ರಿ . ಶ  ೧೬೪೫) ಅನೇಕ ಕಾವ್ಯಗಳಲ್ಲಿ ಪ್ರಯೋಗ ವಾಗಿರುವದನ್ನು ಗಮನ್ನಕ್ಕೆ  ತಂದಿರುವರು . ಇದ ಲಕ್ಷಣವನ್ನು ಪುಂಡಲಿಕ ವಿಠಲನು  ( ಕ್ರಿ . ಶ  ೧೫೧೯-೧೫೭೭) ಹೀಗೆ ಹೇಳಿರುವನು .
ಧ್ರುವಕೊ ಮಂಠ ಕಶ್ಚೈ ವ  ರೂಪಕೋ ಝುಂಪ ಕಸ್ತಥಾ ।
ತ್ರಿಪುಟಶ್ಚಾಡ್ಜ   ತಾಲಾಖ್ಯ ಶ್ವೇಕ ತಾಲ  ಇತಿಕ್ರಮಾತ್ ।
ಸಪ್ತ ಸೂಡಾದಿರಿತ್ಯಾಕ್ತೋ ಲಕ್ಷ ಲಕ್ಷಣ ಕೋವಿದೈ : ।। (ನರ್ತನ ನಿರ್ಣಯ )

ಈ ಸೂತ್ರವನ್ನು ಸ್ಥೂಲವಾಗಿ ಸಮೀಕ್ಷಿಸಿದರೆ "ಸುಳಾದಿ " ಎಂಬ ಪ್ರಕಾರವು  ಸಪ್ತ  ಸುಡಾದಿಗಳ ಆಧರಾದ ಮೇಲೆ ರಚಿತವಾದುದೆಂದು ಸ್ಪಷ್ಟ ವಾಗುತ್ತದೆ . ಈ ತಾಳಗಳು ಯಾವುದೆಂದರೆ ಧ್ರುವ ,ಮಂಠ ,ರೂಪಕ ,ಝುಂಪ ,ತ್ರಿಪುಟ ,ಅಡ್ದತಾಲ ಮತ್ತು  ಏಕತಾಲಗಳು . ಇವು  ಕ್ರಮವಾಗಿ ಬರಬೇಕೆಂಬ ನಿರ್ಬಂಧವೂ  ಉಂಟು . ಕಟ್ಟಕಡೆಯ 'ಜತೆ ' ಯ ಹೆಸರನ್ನು ಹೇಳವದಿದ್ದರೂ ,ಪ್ರಯೋಗದಲ್ಲಿರುವದನ್ನು  ಕಾಣಬಹುದು . ಒಮ್ಮೊಮ್ಮೆ ಕೆಲವು ಸುಳಾದಿಗಳಲ್ಲಿ "ಜತೆ" ಇಲ್ಲದಿರುವದನ್ನು  ಕಂಡರೆ ಇದು ಐಚ್ಚಿಕ ವಿರಬಹುದೇ  ಎಂಬ ಸಂಶಯ  ಉದ್ಭವ ವಾಗುತ್ತದೆ.

ಹರಿದಾಸರಲ್ಲಿ ಶ್ರೀ ಪಾದರಾಜರು ಮೊದಲ್ಗೊಂಡು ಅನೇಕರು ಸುಲಾದಿಗಲನ್ನು  ಬರೆದಿದ್ದರೂ ಸಂಗೀತ ಶಾಸ್ತ್ರಗ್ರಂಥ ಗಳಲ್ಲಿ ಈ ವರೆಗೆ ಪುರಂದರದಾಸರ  ಹೆಸರು  ಹಾಗು ಅವರ ಸುಳಾದಿಗಳು ಉದಾಹರಣೆಗಳು ಕಂಡು ಬರುತ್ತವೆ . "ಸಂಗೀತ ಸಾರಾಮೃತ "ದ  ಕರ್ತೃವಾದ  ತುಲ್ಜಾಜಿ  ಮಹಾರಾಜನು  ಸುಳಾದಿಯ ಲಕ್ಷಣವನ್ನು  ನಿರ್ದೇಶಿಸುವಲ್ಲಿ ಪುರಂದರ ದಾಸರ ಹೆಸರನ್ನು  ಹೇಳಿರುತ್ತಾನೆ .
ಇತಿ ಸಾಲಿಗ ಸೂಡಸ್ಥ  ಗೀತಾನಾಂ ಲಕ್ಷ ಕೀರ್ತನಂ  ।
ಶ್ರೀ ಪುರಂದರ ದಾಸಾದೈರಭಿಯುಕ್ತೈ : ಪುರಾತನೈ :
ಪ್ರಯುಕ್ತೆಷು ಪ್ರಸಿದ್ದೆಷು ಲಕ್ಸ್ಹೇ ಷು ವಿವಿಧೇ ಷ್ವ ಪಿ
ಧ್ರುವಾ ದಿ ಷುತ್ವದುಕ್ತಾನಿ ಲಕ್ಷಣಾನಿ ಮಹಾಮತೇ ।।
(ಅ XII,ಪು ೧೫೦)
"ಸಂಗೀತ ಸಂಪ್ರದಾಯ  ಪ್ರದರ್ಶಿನಿ"ಯ  ಕರ್ತೃವಾದ  ಸುಬ್ಬುರಾಮ  ದೀಕ್ಷಿತರು (ಕ್ರಿ  ಶ  ೧೮೨೯ - ೧೯೧೬) ತಮ್ಮ ಗ್ರಂಥದಲ್ಲಿ ಪುರಂದರ ದಾಸರ ಎರಡು ಲಕ್ಷವಾಗಿ ಉದಾಹರಿಸಿರುವರು . ಇವುಗಳನ್ನೆಲ್ಲ ಗಮನಿಸಿದರೆ  ಸುಳಾದಿಯ ಪ್ರಾಚೀನತೆ  ಆದರ ತಾಳಮಾಲಿಕೆಯ  ನಿಯತತೆ  ಮತ್ತು ಪುರಂದರದಾಸರ  ಪ್ರಾಶಸ್ತ್ಯಗಳನೆಲ್ಲ  ಪ್ರಕಟವಾಗುತ್ತದೆ.
ಆಧಾರ:
1.ಪ್ರಾರ್ಥನಾ ಸುಳಾದಿಗಳು (೧೯೮೬ ಪ್ರಕಟಿತ) .ಶ್ರೀವರದೇಂದ್ರ ಹರಿದಾಸ ಸಾಹಿತ್ಯ ಮಂಡಲ.ಲಿಂಗಸೂಗುರು.
2.ವಿಜಯದಾಸರು, ಶ್ರೀವರದೇಂದ್ರ ಹರಿದಾಸ ಸಾಹಿತ್ಯ ಮಂಡಲ.ಲಿಂಗಸೂಗುರು.
3.ದಾಸ ಸಾಹಿತ್ಯ ಸೌರಭ : ಡಾ|| ಮಧುಸೂಧನಾಚಾರ್ಯ ಜೋಷಿ
end
***
following info is by ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ

" ಸುಳಾದಿ " ಯ ಶಬ್ದ ನಿಷ್ಪತ್ತಿಗೆ " ಸೂಡ "  " ಸೂಳ " ಯೆಂಬ ದೇಶೀ ಮೂಲವಾದ ಕನ್ನಡ " ಸೂಡ " ವೇ ಯೆಂಬ ಅಭಿಪ್ರಾಯ !

ಸುಳಾದಿ ಎಂಬುದು ತುಂಬು ನಾದವು - ಒಂದು ನಿಶ್ಚಿತ ಕಲ್ಪನೆಯ ಮೇಲೆ ಬೆಳೆದಿರುವ ಸ್ವರೂಪವೆಂದು ಅನ್ವಯವಾಗುತ್ತದೆ. 

ಕೇಶೀ ರಾಜನ ಪ್ರಕಾರ " ಸೂಡವು " - " ಸೂಳ ".... 

ವ್ಯವಹೃತಿಗಾಗವು ದೇಶೀ ।

ಯವೆನಿಪುವಾ ಹ್ರಸ್ವವನಿಸದೆ  ಓ ಸಹಿತಮ್ ।

ಇವು ವರ್ಣವೃತ್ತಿಗೆ । ಸ ।

ಲ್ದುವು ಸಂದುಂ ಪ್ರಾಸದೆಡೆಗೆ ಸಲ್ಲವು ಯಮಕ ।

ವೃತ್ತಿಯಲ್ಲಿ " ಡಕಾರಮ್ ಮೂರ್ಧನ್ಯಮ್ " ।

ರಳ ನದರೊಳೇಕ ಸ್ಥಾನೀ; 

ಆದಕಾರಣದನಿವು ।

ರ್ಣವೃತ್ತಿಗೆ ಸಲ್ದುವು ।।     

ಸುಳುವಾದ ಹಾದಿ - ಸುಲಲಿತವಾದ - ಸುಲಭವಾದ - ಜ್ಞಾನಿಗಳಿಗೆ ಸುಲಭವಾಗಿ ಮನಸ್ಸಿಗೆ ಬೋಧೆಯಾಗುವ - ಹೊಳೆಯುವ ವಿಷಯವನ್ನು ಸಮಾಧಿಯಲ್ಲಿ ಯಥಾರ್ಥವಾಗಿ ವಿವರಿಸುವುದೇ " ಸುಳಾದಿ ". 

ಆದಿಯಲ್ಲಿ ಸುಳಿದಿದ್ದು [ ಪ್ರಕಾಶಿಸಿದ್ದು ] " ಸುಳಾದಿ " ಯೆನ್ನುವರು.  

" ಸುಳಾದಿ ಲಕ್ಷಣ - ಸಪ್ತ ತಾಳಗಳು "

ಆದಿ - ತ್ರಿತಾಳ - ಧ್ರುವ - ಅಟ್ಟ - ಮಠ್ಯ - ರೂಪಕ - ಝ೦ಪ   

ಧ್ರುವಕೋ ಮಂಟಕಶ್ಚೈವ 

ರೂಪಿಕೋ ಝ೦ಪಕಸ್ತಥಾ ।

ತ್ರಿಪುಟಶ್ಚ ತಾಲಾಖ್ಯ 

ಶೈಕ್ಯತಾಲ ಇತಿ ಕ್ರಮಾತ್ ।

ಸಪ್ತ ಸೂಡಾದಿ ರಿತ್ಯುಕ್ತೋ 

ಲಕ್ಷ್ಯ ಲಕ್ಷಣ ಕೋವಿದೈ ।।

ಮೇಲ್ಕಂಡ ಏಳು ತಾಳಗಳ ಸಮೂಹವಿದ್ದು ಇವುಗಳನ್ನು ಸುಳಾದಿ ಅನ್ನುತ್ತಾರೆ. 

 ಈ ಲಕ್ಷಣದಲ್ಲಿ ಮೊದಲು ಸುಳಾದಿ ರಚಿಸಿದವರೆಂದರೆ " ಶ್ರೀ ಶ್ರೀಪಾದರಾಜರು ". 

ಸಾಮಾನ್ಯವಾಗಿ ಸುಳಾದಿಗಳು 5 - 7 - 9 -11 - 13 ತಾಳಗಳಲ್ಲಿ ರಚನೆಗೊಂಡಿರುತ್ತವೆ. 

ಕೊನೆಗೊಂದು ಎರಡು ಪಾದದ " ಜತೆ " ಇರುತ್ತದೆ - ಸುಳಾದಿಯ ಸಾರವೆಲ್ಲ " ಜತೆ " ಯಲ್ಲಿಯೇ ಅಡಕವಾಗಿರುತ್ತದೆ. 

ಸುಳಾದಿಯ ಪಾದಗಳ ಸಂಖ್ಯೆಯಲ್ಲಿ - ಪಾದದ ಉದ್ದದಲ್ಲಿ ನಿಯತತೆ ಇಲ್ಲ. 

ಪ್ರತಿಯೊಂದು ತಾಳದಲ್ಲೂ ಹಾಗೂ ಜತೆಯಲ್ಲಿಯೂ ರಚನಕಾರರ ಅಂಕಿತವಿರುತ್ತದೆ. 

ಸುಳಾದಿಯಲ್ಲಿ ಸಾಮಾನ್ಯವಾಗಿ ಅಂತ್ಯಪ್ರಾಸ ಕಂಡು ಬರುತ್ತದೆ - ಅಲ್ಲಲ್ಲಿ ಅಂತ್ಯಪ್ರಾಸದ ಸೊಗಸನ್ನೂ ಕಾಣಬಹುದು. 

ಸುಳಾದಿಯು ಮೇಲ್ನೋಟಕ್ಕೆ ಸರಳ ರಗಳೆಯನ್ನು ಹೋಲುತ್ತದೆ. 

ಕೀರ್ತನೆಗಳಿಗಿಂತ ಬಿಗಿಯಾದ ಬಂಧವನ್ನಿಲ್ಲಿ ಕಾಣುತ್ತೇವೆ. 

ಮಧ್ವ ತತ್ತ್ವಗಳನ್ನು ಸಂಗೀತದ ಹಿನ್ನೆಲೆಯಲ್ಲಿ - ಸಾಹಿತ್ಯಕ ಚೌಕಟ್ಟಿನಲ್ಲಿ ಆಧ್ಯಾತ್ಮಿಕ ಮಹತ್ವದೊಂದಿಗೆ ಬಿತ್ತರಿಸುವ ಈ ಸುಳಾದಿ ಪ್ರಕಾರ ನಿಜಕ್ಕೂ ಕನ್ನಡ ಸಾಹಿತ್ಯಕ್ಕೆ ಹರಿದಾಸರ ಅದ್ಭುತವಾದ - ಅತ್ಯಮೂಲ್ಯವಾದ ಕೊಡುಗೆಯಾಗಿದೆ. 

ಶ್ರೀ ಗೋರೆಬಾಳು ಹನುಮಂತರಾಯರು ಒಂದೊಂದು ತಾಳದಲ್ಲಿಯ ವಸ್ತು ನಿಷ್ಠೆಯನ್ನು ಹೀಗೆ ತಿಳಿಸಿದ್ದಾರೆ. 

" ಧ್ರುವತಾಳದಲ್ಲಿ "

ವಸ್ತು ನಿಶ್ಚಯ ವಿಷಯ 

" ಮಠ್ಯ ತಾಳದಲ್ಲಿ "

ವಸ್ತುವಿನ ಗುಣ ಧರ್ಮ ವಿವರಣೆ 

" ರೂಪಕ ತಾಳದಲ್ಲಿ "

ವಸ್ತುವಿನ ಗುಣ ಧರ್ಮ ಕಾರಣ ವಿವೇಚನೆ 

" ರೂಪಕ ತಾಳದಲ್ಲಿ "

ವಸ್ತು ಗುಣ ಧರ್ಮ ಕಾರಣ ಕಾರ್ಯ ರೂಪದಿ ಮನಸ್ಸಿನಲ್ಲಿ ಪರಿಣಮಿಸುವಿಕೆ 

" ತ್ರಿಪುಟ ತಾಳದಲ್ಲಿ "

ಗುಣ ಧರ್ಮ ಕಾರ್ಯ ಪ್ರಾಪ್ತಿ ವಿಷಯ ಪ್ರಾರ್ಥನೆ 

" ಅಟ್ಟ ತಾಳದಲ್ಲಿ "

ಮನೋ ವೇಗ ಸ್ತೋತ್ರ, ಸಂಗೀತ, ತಾಳ, ಕುಣಿತ 

" ಆದಿ ತಾಳದಲ್ಲಿ "

ಸ್ತೋತ್ರಾನಂದದಲ್ಲಿ ನಲಿದಾಡುವಿಕೆ ಮತ್ತು ಸ್ವಲ್ಪ ಹೆಚ್ಚಿನ ಕುಣಿತ 

ಹೀಗೆ ಮನೋಭಾವವು ಪರಮಾತ್ಮನಲ್ಲಿಟ್ಟು ಶ್ರೀ ಹರಿಯನ್ನು ಕುಣಿಸ್ಯಾಡುವ ಹರಿದಾಸರ ಸುಳಾದಿಗಳಿವು - ಸುಲಭದ ಹಾದಿಯಲ್ಲ. 

ಮುಂದೆ " ಜತೆ " ಯಲ್ಲಿ ಎಲ್ಲ ಏಳು ತಾಳದಲ್ಲಿ ಹೇಳಿರುವುದು " ಜತೆ " (ಸರಿ ) ಯಾಗಿ ಕೊಡಿಕೊಂಡು ಬರುವುದು. 

ಅಂದರೆ... 

ಎರಡು  ಸರಳ ರೇಖೆಗಳು ಹೇಗೆ " ಜತೆ " ಯಾಗಿರುವವೂ ಹಾಗೆ ಸಮನ್ವಯಿಸುವುದು " ಪದದ ಅರ್ಥ ಪಲ್ಲವಿಯಲ್ಲಿದ್ದಂತೆ ಸುಳಾದಿಗಳ ಅರ್ಥ - ಅಭಿಪ್ರಾಯ " ಜತೆ " ಯಲ್ಲಿರುತ್ತದೆ. 

ಯೆಂದು ಏಳು ತಾಳಗಳಲ್ಲಿಯ ವಸ್ತು ವಿಶ್ಲೇಷಣೆಯನ್ನು ವಿವರಿಸಿದ್ದಾರೆ. 

ಹೀಗೆ ವಿಶಿಷ್ಟ ಲಕ್ಷಣಗಳನ್ನು ಒಳಗೊಂಡ ಈ ಸಾಹಿತ್ಯ ಪ್ರಕಾರವು ನಿಜಕ್ಕೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹರಿದಾಸರ ಮಹತ್ವದ ಕೊಡುಗೆಯಾಗಿದೆ. 

ಪ್ರತಿಯೊಂದು ಸುಳಾದಿಯಲ್ಲಿ ಆವೇಶ ಭಾವ ಕಾಣಿಸುತ್ತದೆ. 

ಆಲೋಚನೆ - ಸೂತ್ರಪ್ರಾಯವಾದ ಮಾತಿನ ಸರಣಿ - ಆಧ್ಯಾತ್ಮಿಕ ಮಹತ್ವ ಇವೆಲ್ಲವೂ ಸ್ವಾನುಭವದ ಮೂಲಕ ಬಂದಿರುವುದನ್ನು ಗಮನಿಸಬಹುದು. 

ಕೊನೆಯಲ್ಲಿ ಬರುವ ಎರಡು ಸಾಲಿನ " ಜತೆ " ಈ ದಾಸ ಸಾಹಿತ್ಯ ರೂಪದ ವಿಶಿಷ್ಟತೆಗೆ ಸಾಕ್ಷಿಯಾಗಿದೆ - ಯೆಂಬ ವಿಚಾರವು ಸುಳಾದಿಯ ಲಕ್ಷಣವನ್ನು ವಿವರಿಸುತ್ತದೆ. 

" ಸುಳಾದಿ " ಯ " ಮಹತ್ವ "

ಹರಿದಾಸ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಕೃತಿ ರಚನೆ ಮಾಡಿದ ಕೀರ್ತಿ ಶ್ರೀ ಶ್ರೀಪಾದರಾಜರಿಗೆ ಸಲ್ಲುತ್ತದೆ.

end 

****



ಪ್ರಕಾರ....
12. ಗುಂಡಕ್ರಿಯೆ  - ರಾಗ ವೊಂದರಿಂದ ಬಂದ ಹೆಸರು
following info is by ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ
ದಾಸ ಸಾಹಿತ್ಯದಲ್ಲಿ ಆವಿರ್ಭಾವಗೊಂಡ ಇನ್ನೊಂದು ಪ್ರಕಾರವೆಂದರೆ "ಗುಂಡಕ್ರಿಯೆ ". 

ಇದೂ ಕೂಡಾ ದಂಡಕದಂತೆ ಪ್ರಚಾರಕ್ಕೆ ಬರಲಿಲ್ಲ. 

ಈ ಪ್ರಕಾರವನ್ನು ನಾವು ಹೆಚ್ಚಾಗಿ ಶ್ರೀ ವಾದಿರಾಜರ ಕೃತಿಗಳಲ್ಲಿ ಕಾಣಬಹುದು. 

" ಗುಂಡಕ್ರಿಯೆ " ಯೆಂದರೆ [ To Pound ] " ಪುಡಿ ಮಾಡು " ಯೆಂದರ್ಥ.  ಅಂದರೆ... 

" ಯುಕ್ತಿ ಪೂರ್ವಕ ಇತರೆ ವಾದಿಗಳನ್ನು ನಿರುತ್ತಾರರನ್ನಾಗಿಸುವುದು "ಯೆಂದು ಅರ್ಥ. 

ಕಾರಣ ಸಂಸ್ಕೃತ ಪಂಡಿತರಾದ ಶ್ರೀ ಶ್ರೀ ಪಾದರಾಜರು ಸಂಸ್ಕೃತ - ಕನ್ನಡ ಭಾಷೆಗೆ ಅನೇಕ ಗ್ರಂಥಗಳನ್ನು ನೀಡಿದ್ದಾರೆ. ಅವರ ವಾದಕ್ಕೆ ಮಾಯಾವಾದಿ ಪಂಡಿತರು ಸೋತು ಶರಣಾಗತರಾಗಿದ್ದಾರೆ. ಅವರ ಗ್ರಂಥಗಳಲ್ಲಿ ಮಾಯಾವಾದಿಗಳನ್ನು ಖಂಡಿಸಿರುವ ವಿಷಯ ಹೇರಳವಾಗಿವೆ. 

ಇನ್ನಾದರು ಭೇದ ಮತವನು ।

ಚೆನ್ನಾಗಿ ತಿಳಿಯೋ ರಂಗವಿಠಲನು ।

ತನ್ನ ದಾಸ್ಯವನು ಕೊಟ್ಟು ।

ಉನ್ನತ ಪದವೀವನು ನಿನಗೆ ।।

ಶ್ರೀ ಶ್ರೀಪಾದರಾಜ ತೀರ್ಥರು ಹಾಗೂ ಶ್ರೀ ವಾದಿರಾಜ ತೀರ್ಥರು ಈ ಪ್ರಕಾರದಲ್ಲಿ ರಚನೆಗಳನ್ನು ಮಾಡಿದ್ದಾರೆ.
end
*** 




ಪ್ರಕಾರ....
13. ದಂಡಕ - ಸರಳ ರಗಳೆಯ ರೂಪ
following info is from 
ವರ್ಣ ಛಂದಸ್ಸು ಸಂಸ್ಕೃತ ಛಂದೋ ಗ್ರಂಥಗಳಲ್ಲಿ ಪ್ರತಿಪಾದಕ್ಕೆ ಒಂದು ಅಕ್ಷರವುಳ್ಳ ಉಕ್ತಾ ಹೆಸರಿನ ವೃತ್ತದಿಂದ ತೊಡಗಿ ಇಪ್ಪತ್ತಾರು ಅಕ್ಷರಗಳಿರುವ ಉತ್ಕೃತಿಯವರೆಗೆ ಬೇರೆ ಬೇರೆ ಛಂದೋ ಹೆಸರುಗಳನ್ನು ಒಳಗೊಂಡಿದೆ. 1 ರಿಂದ 26 ಅಕ್ಷರಗಳನ್ನು ಹೊರತು ಪಡಿಸಿ 27 ರಿಂದ 54 ಅಕ್ಷರಗಳುಳ್ಳ ವೃತ್ತಗಳೂ ಇದ್ದು ದಂಡಕಗಳು ಎಂಬ ಹೆಸರಿನಿಂದ ಸೂಚಿಸಲ್ಪಟ್ಟಿವೆ. ಈ ದಂಡಕದಲ್ಲಿ ಪ್ರತಿಪಾದದಲ್ಲಿ ಇಪ್ಪತ್ತಾರಕ್ಕಿಂತ ಹೆಚ್ಚುಅಕ್ಷರಗಳಿರಬೇಕೆಂದಿದೆಯೇ ಹೊರತು ಗರಿಷ್ಟವಾಗಿ ಎಷ್ಟಿರಬೇಕೆಂದು ತಿಳಿದುಬಂದಿಲ್ಲ.
ಈ ದಂಡಕ ಅಥವಾ ಮಾಲಾವೃತ್ತಗಳನ್ನು ಹೊರತುಪಡಿಸಿ 26ರ ವರೆಗಿನ ಅಕ್ಷರಗಳನ್ನು ಬೇರೆ ಬೇರೆ ಗಣವಿನ್ಯಾಸಕ್ಕನುಗುಣವಾಗಿ 134217726 ಸಮವೃತ್ತಗಳಾಗಿ ರಚಿಸಬಹುದು ಎಂಬುದು ಛಂದೋ ಲಾಕ್ಷಣಿಕರ ಅಭಿಪ್ರಾಯ.
end
***
following info is from
ಶ್ರೀ ಲಕ್ಷ್ಮೀನೃಸಿಂಹ ಪ್ರಾದುರ್ಭಾವ ದಂಡಕ’ವೆಂಬ ಹೆಸರಿನ ದಂಡಕ ಶ್ರೀಪಾದರಾಜರ ಮತ್ತೊಂದು ವಿಶಿಷ್ಟರಚನೆ. ಹಿರಣ್ಯ ಕಶಿಪುವಿನ ಸಂಹಾರಾರ್ಥವಾಗಿ ವಿಷ್ಣು ನರಸಿಂಹಾವತಾರಿಯಾಗಿ ಬರುವುದೇ ಕೃತಿಯ ವಸ್ತು. ಭಾಗವತ ಸಪ್ತಮಸ್ಕಂಧದ ಅಷ್ಟಮ ಅಧ್ಯಾಯದಲ್ಲಿ ಬರುವ ಹರಿಯ ನರಸಿಂಹಾವತಾರದ ಕತೆಯ ಅನುವಾದದಂತಿದೆ, ಈ ದಂಡಕ:

ಶ್ರೀರಮಾ ಮಾನಿನೀ ಮಾನಸೇಂದಿವರೋ
ತ್ಫುಲ್ಲ ಸಂಪುಲ್ಲ ಚಂದ್ರಾ ಚಿದಾನಂದ ಸಾಂ
ದ್ರಾ ಸದಾ ಸನ್ನತೇಂದ್ರಾ ನಮೋಪೇಂದ್ರ ನಿ
ಸ್ತಂದ್ರ ನೀ ಕೇಳು …..

-ಹೀಗೆ ಪ್ರಾರಂಭವಾಗಿ ೫೪೬ ಸಾಲುಗಳಲ್ಲಿ ಮುಂದುವರಿಯುವ ಈ ಕೃತಿಯಲ್ಲಿ ಪ್ರತಿಸಾಲಿನಲ್ಲೂ ಐದೈದು ಮಾತ್ರೆಗಳ ಐದೈದು ಗಣಗಳು ಬರುತ್ತವೆ. ನರಸಿಂಹಾವತಾರಿ ಹರಿಭಕ್ತ ಪ್ರಹ್ಲಾದನಿಗೆ ಅನುಗ್ರಹಿಸಿದ ಕತೆಯಿದು. ರಗಳೆಯನ್ನು ನೆನಪಿಸುವ ನಿರರ್ಗಳ ಓಟ ಈ ಪ್ರಕಾರದ ವೈಶಿಷ್ಟ್ಯ. ಇದುವರೆಗೆ ಹರಿದಾಸಸಾಹಿತ್ಯದಲ್ಲಿ ಸಿಕ್ಕಿರುವ ದಂಡಕ ಇದೊಂದೇ.
end
****
following info is by ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ

ಶ್ರೀ ಶ್ರೀಪಾದರಾಜರಿಂದ ಉಗಮಗೊಂಡ ದಾಸ ಸಾಹಿತ್ಯದ ಮತ್ತೊಂದು ಪ್ರಕಾರವೇ " ದಂಡಕ ". 

" ದಂಡಕ " ಯೆಂದರೆ... 

" ಅನಿಯತ ಪಾದಗಳಿರುವ - ಲಯ ಬದ್ಧವಾದ ಗದ್ಯ " ವನ್ನು  " ದಂಡಕ ಯೆನ್ನುತ್ತಾರೆ . 

ನಿಯತ ಗುಣಗಳಿರುವುದಾದರೂ - ಪಾದ ವಿಭಾಗವಿಲ್ಲದೆ ದಂಡಾಕಾರವಾಗಿದ್ದರಿಂದ ಈ ಪ್ರಕಾರಕ್ಕೆ ಈ ಹೆಸರು ಬಂದಿದೆ. 

ಇದು ಸರಳ ರಗಳೆಯನ್ನು ಹೋಲುತ್ತದೆ. 

ಇದರ ಸ್ವರೂಪವನ್ನು ಗದ್ಯಕ್ಕೂ - ಪದ್ಯಕ್ಕೂ ನಡುವಿನ ಶೈಲಿ ಎಂದು ಕರೆದಿದ್ದಾರೆ. ಒಂದು ವಿಧವಾದ ಲಯಬದ್ಧವಾದ ಗದ್ಯವಿದು.

end

**** 




ಪ್ರಕಾರ....
14. ಮುಂಡಿಗೆ ಸಾಹಸ ಪ್ರದರ್ಶನಕ್ಕೆ ಸವಾಲು ರೂಪ+ಗೂಢಾರ್ಥ ಇದೆ.
following info is from
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೊದಲು ವಚನ ಸಾಹಿತ್ಯ, ನಂತರ ಹರಿದಾಸ ಸಾಹಿತ್ಯ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿದವು. ಭಕ್ತಿ, ಜ್ಞಾನ ವೈರಾಗ್ಯಗಳನ್ನು ಜನರಲ್ಲಿ ಬಿತ್ತುತ್ತಾ ಸಮಾಜದ ಓರೆಕೋರೆಗಳನ್ನು ಸರಿಪಡಿಸುತ್ತಾ, ತಮ್ಮನ್ನೂ ಆತ್ಮ ವಿಮರ್ಶೆಗೆ ಗುರಿಪಡಿಸಿಕೊಳ್ಳುತ್ತಾ ವಚನಕಾರರು ಹಾಗೂ ಹರಿದಾಸರೂ ಸಾಹಿತ್ಯ ನಿರ್ಮಾಣ ಮಾಡಿದರು.
ಬುದ್ಧಿಶಕ್ತಿಯ ಪ್ರದರ್ಶನ ಮನುಷ್ಯನ ಸಹಜ ಪ್ರವೃತ್ತಿಗಳಲ್ಲೊಂದು. ಹೆಚ್ಚು ಚುರುಕು ಬುದ್ಧಿಯವರೆಲ್ಲಾ ಈ ಬಗೆಯ ಅಭಿವ್ಯಕ್ತಿಗೆ ಹೊಸ ಹೊಸ ಮಾಧ್ಯಮಗಳನ್ನು ಕಂಡುಕೊಂಡರು. ಜನಪದ ಒಗಟುಗಳು ಇದಕ್ಕೆ ಉದಾಹರಣೆ. ಈ ದಿಕ್ಕಿನಲ್ಲಿ ಜನಪದದಿಂದ ಪ್ರೇರಿತರಾಗಿ ಶಿಷ್ಟ ಕವಿಗಳು ತಮ್ಮ ಕಾವ್ಯಗಳಲ್ಲಿ ಈ ಬಗೆಯ ವಿನ್ಯಾಸಗಳನ್ನು ಬಳಸಿದರು. ಇದೇ ರೀತಿಯಲ್ಲಿ ಕನಕದಾಸರ ಮುಂಡಿಗೆಗಳು ಅವರ ಸೃಜನಶೀಲತೆಗೆ ಸಾಕ್ಷಿಯಾಗಿದೆ. ದಾಸಸಾಹಿತ್ಯದಲ್ಲಿ ಕನಕದಾಸರಲ್ಲದೇ ಪುರಂದರದಾಸರು, ಭಾಗಣ್ಣದಾಸರು ಮುಂತಾದವರೂ ಮುಂಡಿಗೆಗಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕನಕದಾಸರ ಮುಂಡಿಗೆಗಳಿಗೆ ವಿಶಿಷ್ಟ ಸ್ಥಾನವಿದೆ.
ಮುಂಡಿಗೆಗಳು ಎಂದರೇನು? ವಿವಿಧ ವಿದ್ವಾಂಸರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
“ಮುಂಡಿಗೆ ಎಂಬ ಶಬ್ದಕ್ಕೆ ಅರ್ಥ ತೊಲೆ ಅಥವಾ ಮರದ ದಿಮ್ಮಿ ಎಂಬುದಾಗಿದೆ. ಸಾಹಸ ಪ್ರದರ್ಶನಕ್ಕೆ ಸವಾಲು ರೂಪದಲ್ಲಿ ಇದನ್ನು ಎತ್ತಿ ಎಸೆಯುವ ಪದ್ಧತಿ ಇತ್ತೆಂದು ತೋರುತ್ತದೆ. ಹೀಗಾಗಿ ಕನಕರ ಈರೀತಿಯ ರಚನೆಗಳಿಗೆ ಮುಂಡಿಗೆಗಳು ಎಂದು ಹೆಸರಿಸಿರಬೇಕು.” ಎನ್ನುತ್ತಾರೆ ಪ್ರೊ. ಶ್ರೀ ಸುಧಾಕರ್ ಅವರು.
ಶ್ರೀ ಬಿಂದು ಮಾಧವ ಬುರ್ಲಿಯವರು, “ಕಟ್ಟಿಗೆಯ ದೊಡ್ಡ ತೊಲೆಯು ಎತ್ತಲು ಹೇಗೆ ಸುಲಭಸಾಧ್ಯವಲ್ಲವೋ ಹಾಗೆಯೇ ಕನಕರ ಈರೀತಿಯ ಹಾಡುಗಳನ್ನು ಸುಲಭವಾಗಿ ಅರ್ಥೈಸಲು ಸಾಧ್ಯವಿಲ್ಲವೆಂದೇ ಇವುಗಳಿಗೆ ಮುಂಡಿಗೆಗಳು ಎಂದು ಕರೆದಿರುವರು” ಎಂದಿದ್ದಾರೆ.
ಹೀಗೆ ಹಲವು ವಿದ್ವಾಂಸರು ಹಲವಾರು ಅಭಿಪ್ರಾಯಗಳನ್ನು ಕೊಟ್ಟಿದ್ದಾರೆ. ಕನಕದಾಸರು ಗೂಢಾರ್ಥದ ಮುಂಡಿಗೆಗಳನ್ನು ರಚಿಸಲು ಏನು ಕಾರಣ ಎಂದು ಯೋಚಸಿದಾಗ ಶ್ರೀ ಬುರ್ಲಿಯವರು ಕೆಲವು ಉತ್ತರಗಳನ್ನು ನೀಡಿದ್ದಾರೆ.
1. ಕೆಲವು ಪಾಂಡಿತ್ಯ ಪ್ರದರ್ಶನಕ್ಕಾಗಿ ಇರಬೇಕು.
2. ಇನ್ನು ಕೆಲವು ಪಾಂಡಿತ್ಯ ಪರೀಕ್ಷೆಗಾಗಿ ಇದ್ದಂತೆ ಕಾಣುತ್ತದೆ.
3. ಮತ್ತೆ ಕೆಲವು ಬುದ್ಧಿಪೂರ್ವಕವಾಗಿ ಗುಹ್ಯ ಭಾಷೆಯಲ್ಲಿ ಹೇಳಿರಬಹುದು.
4. ಕೆಲವೊಮ್ಮೆ ಜ್ಞಾನಿ ಜ್ಞಾನಿಗಳ ಆಂತರಿಕ ಭಾಷೆಯಾಗಿ ಹೊರಹೊಮ್ಮಿರಬಹುದು.
5. ಆತ್ಮಾನುಭವ ಹಾಗೂ ತತ್ವಜ್ಞಾನವನ್ನು ವಿವರಿಸಿರಬಹುದು.
6. ಪಂಡಿತರನ್ನೂ ಪೌರಾಣಿಕರನ್ನೂ ಕೆಣಕಿದ ಕೆಲವು ಹಾಡುಗಳನ್ನೂ ಕಾಣಬಹುದು.
ಡಾ. ಸಿದ್ದಣ್ಣ ಜಕಬಾಳರು, “ವ್ಯಾಸರಾಯರ ಶಿಷ್ಯ ವರ್ಗದವರಲ್ಲಿ ಕೆಲ ಒಣಪಾಂಡಿತ್ಯದಿಂದ ಕೂಡಿದ ಅಹಂಕಾರದಿಂದ ಮೆರೆಯುವ ವ್ಯಕ್ತಿಗಳು ಕನಕದಾಸರನ್ನು ನಿಂದಿಸಿರಬೇಕು. ಅವರನ್ನು ಸರಿ ಮಾರ್ಗಕ್ಕೆ ತರಲು ಕನಕದಾಸರು ಇಂತಹ ಮುಂಡಿಗೆಗಳನ್ನು ರಚಿಸಿರಬೇಕು.” ಎನ್ನುತ್ತಾರೆ.
ಸ್ವತಃ ಕನಕದಾಸರೇ,
“ವೇದವಾದಗಳಲ್ಲಿ| ಕಾದುವ ಜನರಲ್ಲಿ|
ಓದು ವಿದ್ಯೆಗಳಲ್ಲಿ| ವಾದವ ಗೆಲಿಸಯ್ಯ|
ಎಂದು ಹಾಡಿದ್ದಾರೆ.
ಪ್ರೊ. ಸುಧಾಕರ್ ಅವರು ಕನಕದಾಸರ ಮುಂಡಿಗೆಗಳನ್ನು ಎರಡುವಿಧವಾಗಿ ವಿಂಗಡಿಸಿದ್ದಾರೆ.
1. ಪೌರಾಣಿಕ ವಾವೆ ವರಸೆಯ ಮುಂಡಿಗೆಗಳು,
2. ಅನುಭಾವದ ನಿಗೂಢ ಮುಂಡಿಗೆಗಳು.
ಮೊದಲನೆಯದರಲ್ಲಿ ವಿಷ್ಣುವಿನ ದಶಾವತಾರಗಳು, ಅವನ ವಿವಿಧ ಲೀಲೆಗಳು ಅವನ ಮೇಲಿನ ಮುಕ್ತ ಸ್ತುತಿ ಮುಂತಾದವು ಪ್ರಮುಖವಾಗಿ ವ್ಯಕ್ತಗೊಂಡ ಭಾವಗಳಾಗಿವೆ.
ಅನುಭಾವ ನಿಗೂಢ ಮುಂಡಿಗೆಗಳು ವೈವಿದ್ಯಮಯವಾಗಿವೆ. ಮೇಲ್ನೋಟದ ಓದಿನಲ್ಲಿ ಸಾಮಾನ್ಯ ವಿಷಯಗಳ ವಿಚಾರವೆನ್ನಿಸಿದರೂ ಸೂಕ್ಷ್ಮ ಅವಲೋಕನದಿಂದ ನಿಗೂಢ ಅರ್ಥಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ.
end 
***

following info is by -Smt. Padma Sirish

ದಾಸ ಸಾಹಿತ್ಯದ ಪ್ರಕಾರಗಳಲ್ಲಿ  ಮುಂಡಿಗೆಗಳು
ದಾಸ ಸಾಹಿತ್ಯದಲ್ಲಿ ಮುಂಡಿಗೆ ಪ್ರಕಾರದ ವೈಶಿಷ್ಟ್ಯ ಹಿರಿದಾದದ್ದು... ಮೇಲ್ನೋಟಕ್ಕೆ  ಮುಂಡಿಗೆಗಳು ಕೀರ್ತನೆ, ಪದಗಳಂತೇ ಕಾಣುತ್ತವೆ... ಆದರೂ ಅದರಲ್ಲಿ ಅಡಗಿರುವ ಗೂಢಾರ್ರ್ಥವನ್ನು ಗಮನಿಸಿಕೊಂಡು ಅದು ಮುಂಡಿಗೆ ಎಂದು ಗುರ್ತಿಸಬೇಕಾಗುತ್ತದೆ... 
ಇದನ್ನು ಕನ್ನಡದಲ್ಲಿ ಕವಿರಾಜ ಮಾರ್ಗದಲ್ಲಿ ಹೇಳಿಕೆ ಅಂತಲೂ ಕಾವ್ಯಾವಲೋಕನದಲ್ಲಿ ಪೀಳಿಕೆ ಅಂತಲೂ ಕರೆಯಲ್ಪಡುವ ಈ ಪ್ರಕಾರ ಜನಪದ ಶೈಲಿಯಲ್ಲಿ ಒಗಟು ಎಂದು ಕರೆಯಲ್ಪಟ್ಟಿದೆ... 
ಮುಂಡಿಗೆ ಅಂದ ತಕ್ಷಣ ನೆನಪಾಗುವುದು ಶ್ರೀ ಪುರಂದರದಾಸಾರ್ಯರ, ಕನಕದಾಸಾರ್ಯರ ಮುಂಡಿಗೆಗಳು...  ಬಹಳ ಸೊಗಸಾಗಿ ಗುಹ್ಯೆಭಾಷೆಯಿಂದ ತುಂಬಿದ ತತ್ವಗಳಿಂದ ಪರಮಾತ್ಮನ ಅದ್ಭುತ ಮಾಹಾತ್ಮ್ಯಗಳನ್ನು ಸಜ್ಜನರಿಗೆ ಮಾತ್ರ ನೀಡುವ ಅವರ ಪ್ರತಿಭೆಗೆ ಅವರೇ ಸಾಟಿ... 
ನಂತರ ಈ ಒಗಟಿನಂತಿರುವ ಮುಂಡಿಗೆಯ ಪ್ರಕಾರವನ್ನು ಕಂತಿ ಪಂಪರ ಹಾಡುಗಳಲ್ಲಿ, ಅಲ್ಲಮನ ಬೆಡಗಿನ ವಚನಗಳಲ್ಲಿ ಸತ್ಯೇಂದ್ರ ಚೋಳನ ಸಾಂಗತ್ಯದಲ್ಲಿ, ಮುರುಳೇಶನ ಸಾಂಗತ್ಯದಲ್ಲಿಯೂ ಕಾಣಬಹುದು ಅಂತ ಹಿರಿಯರ ಉವಾಚ...
ಮೊದಲಿಗೆ ಮುಂಡಿಗೆ ಎನ್ನುವುದು ಮುಂಡಾಸು ಎನ್ನುವ ಪದದಿಂದ ಉತ್ಪನ್ನವಾದದ್ದೆಂದು ಕಂಡು ಬರ್ತದೆ.. ಮುಂಡಾಸು ಅಂದರೇ  ತಲೆಗೆ ಸುತ್ತಿಕೊಳ್ಳುವ, ವ್ಯಕ್ತಿಯ ಗೌರವವನ್ನು ಹೆಚ್ಚಿಸುವ ವಸ್ತ್ರ... ಇದೇ ಅರ್ಥವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು  ತಲೆಗೆ ಕಸರತ್ತು ಕೊಡುವ ಈ ಪ್ರಕಾರವನ್ನು ಮುಂಡಿಗೆ ಎಂದು ಎಂದು ಕರೆದಿರಬಹುದು ಅಂತ ತಿಳಿತದೆ...
ಆರಂಭದಲ್ಲಿ ಈ ಪ್ರಕ್ರಿಯೆ ಮನೋರಂಜನೆಯನ್ನು ಪ್ರಧಾನ ಉದ್ದೇಶ್ಯವಾಗಿಟ್ಟುಕೊಂಡು ರಚಿತವಾಗಿದೆ ಆದರೂ ನಂತರದಲಿ ಇದನ್ನು ಮಹಾ ಮಹಾ ರಾಜರು ಶತ್ರುಗಳಿಂದ ಸುರಕ್ಷಿತವಾಗಿ ಇರುವುದಕ್ಕಾಗಿ ತಮ್ಮ  ಸಂದೇಶಗಳನ್ನು ಈ ತರಹದ ಗುಪ್ತ ಭಾಷೆಯ ಮುಖಾಂತರ  ಬರೆದು ಗೂಢಚಾರಿಗಳಿಗೆ ಕಳಿಸುತ್ತಿದ್ದರಂತೆ... ಇದು ಒಂದು ಆದರೇ....
ದಾಸ ಸಾಹಿತ್ಯದ ಹಿರಿಯ ದಾಸರು ಪರಮಾತ್ಮನ ಗುಣಗಾನವನ್ನು ಜೀವ-ಪರಮಾತ್ಮನ ಭೇದದ ತತ್ವವನ್ನು ಅಯೋಗ್ಯರಿಗೆ ಅರ್ಥವಾಗದಿರುವಂತೆ ಗುಹ್ಯಭಾಷೆಯ ಮುಖಾಂತರ ರಚಿಸಿ ಮಹದುಪಕಾರವನ್ನು ಮಾಡಿದ್ದಾರೆ... 
ಹಿಂದೆ  ನಾವು ನಮ್ಮ ಸಮೂಹದಲಿ ನೋಡಿದ ಪಗಡಿಯ ಪದ ಕೇಳಿದ ಸಾಮಾನ್ಯ ಜನರಿಗೆ ಅಸಹ್ಯದಂತಾಗಿರಬಹುದು.. ಆದರೇ ಅದರ ಅರ್ಥ ತಿಳಿದರೇ ಮಾತ್ರ ಆ ಪದದಿಂದ ದಾಸಾರ್ಯರ ಆಂತರ್ಯ ಗೊತ್ತಾಗುವುದು... ಹಾಗೆಯೇ ಶ್ರೀ ಪುರಂದರದಾಸರು  ಭಾಗವತದ ಸಾರವನ್ನು ತಿಳಿಸಿದ ಬುಡುಬುಡುಕಿಯ ಮುಂಡಿಗೆ, ರಾಮಾಯಣದ ಕುರಿತು ಬರೆದ ಮುಂಡಿಗೆ ಇನ್ನೂ  ಬಹಳ  ನಮಗೆ ಗೊತ್ತಿರುವ ಅದ್ಭುತ ಮುಂಡಿಗೆಗಳು...
ಒಟ್ಟಿನಲ್ಲಿ ಶ್ರೀ ವೇದವ್ಯಾಸದೇವರು ರಚಿಸಿದ ಬ್ರಹ್ಮಸೂತ್ರ ಮಾಯಿಗಳಿಗೆ  ಮೇಲ್ನೋಟಕ್ಕೆ  ಹೇಗೆ ತಪ್ಪಾಗಿ ಕಾಣುತ್ತವೆಯೋ ಹಾಗೆಯೆ ಈ ಮುಂಡಿಗೆಯಲ್ಲಿನ ಪದ ಪ್ರಯೋಗಗಳು,  ಅದರ ತತ್ವ, ಆಂತರ್ಯ ಯೋಗ್ಯರಿಗೆ ಮಾತ್ರ ಅರ್ಥವಾಗಲಿ ಎನ್ನುವುದಕ್ಕಾಗಿಯೆ ರಚಿತವಾಗಿದ್ದವೆ ಅಂತಲೂ ಹೇಳಬಹುದು... 
ಕನಕದಾಸಾರ್ಯರ ಮುಂಡಿಗೆಗಳಂತೂ ಭೂರಿಭೋಜನದಂತೆ ಇರ್ತವೆ...  ಅಲ್ಲವೇ... ನಂತರದಲಿ ಬಂದ ಎಲ್ಲಾ ದಾಸರು ಮುಂಡಿಗೆಗಳ ರಚನೆ ಮಾಡಿದ್ದಾರೆ.. ಶ್ರೀ ಮಹಿಪತಿದಾಸರ, ಶ್ರೀ ಪ್ರಸನ್ನವೇಂಕಟ ದಾಸರ, ವಿಜಯದಾಸಾರ್ಯರ, ಗೋಪಾಲದಾಸರ, ಅವರ ಅನುಜರ, ಅವರ ಶಿಷ್ಯರ, ಶ್ರೀ ಪ್ರಾಣೇಶದಾಸಾರ್ಯರ ಹೀಗೆ ಎಲ್ಲಾ ಹರಿದಾಸರ ರಚನೆಗಳಲ್ಲಿ ಮುಂಡಿಗೆಗಳು ಇದ್ದವೆ...
ಹೀಗಾಗಿ ಇಂಥಹಾ ಅದ್ಭುತವಾದ ಪ್ರಕಾರದ ಮುಖಾಂತರ ಪರಮಾತ್ಮನ ಸ್ಮರಣೆಯನ್ನು ಮಾಡಿಸಲು ಪದರಚನೆ ಮಾಡಿ ನಮಗೆ ನೀಡಿದ ಹರಿದಾಸರೆಲ್ಲರಿಗೂ ಶಿರಬಾಗಿ ಕೋಟಿ ಕೋಟಿ ನಮಸ್ಕಾರಗಳು ಸಲ್ಲಿಸುತ್ತಾ....
ಶ್ರೀಮತಿ. ಪದ್ಮ ಶಿರೀಷ
ನಾದನೀರಾಜನದಿಂ ದಾಸಸುರಭಿ
end
****



ಪ್ರಕಾರ....
15. ರಾಗ ಮಾಲಿಕೆ ಕೀರ್ತನೆಯಲ್ಲಿ ಅನೇಕ ರಾಗಗಳು, ಆದರೆ ಒಂದೇ ತಾಳದಲ್ಲಿ ಇರುತ್ತದೆ.
following info is from https://en.wikipedia.org/
Ragamalika, literally a garland of ragas, is a popular form of composition in Carnatic music where different segments of the composition are set to different ragas.[1] It is also known as Raga Kadambakam, and forms parallel to the composition form talamalika which features segments set to different talas. Ragatalamalika are a special kind of ragamalika compositions featuring a range of talas.[1] Navaragamalika is a popular type of ragamalika composition where the music is set to 9 ragas.

Ramaswami Dikshitar is referred to as Ragamalika Chakravarti (King of Ragamalika) for his varied ragamalika compositions in Telugu. Over the years, composers composed elaborate pieces such as the 'ashtottarashata ragatalamalika’ of Ramaswami Dikshitar with 108 ragas and 108 talas,[2] and 'melakarta ragamalika' of Maha Vaidyanatha Iyer featuring all 72 sampoorna melakarta ragas.[3]
end
*****


ಪ್ರಕಾರ....
16.  ಗಮಕ- ಶ್ರುತಿ ಬದ್ಧವಾಗಿ ಕಾವ್ಯವನ್ನು ಓದಿ ಅದರ ಸಾರ ವಿಶ್ಲೇಷಿಸುವುದು
   following info is from https://kn.wikipedia.org/
ಗಮಕ ಕಲೆ ಅತ್ಯಂತ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿತ್ತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಯು ಲವ ಕುಶರಿಂದ ರಾಮಾಯಣ ಕಾವ್ಯವನ್ನು ಗಮಕ ಶೈಲಿಯಲ್ಲಿ ಹೇಳಿಸಿದನೆಂದು ಅದೇ ಕಾವ್ಯದಲ್ಲಿ ಹೇಳಿದೆ. ಈಗ ಸಂಸ್ಕೃತ ಕಾವ್ಯಗಳನ್ನು ಆಯಾ ಛಂದಸ್ಸಿನ ಮಟ್ಟಿನಲ್ಲಿ ಓದುವ / ಹೇಳುವ ಪದ್ಧತಿ ಇದೆ. ರಾಗ ಸಂಯೋಜನೆ ಮಾಡಿಹೇಳುವ ಪದ್ಧತಿಯೂ ಇದೆ. ಆದರೆ ತಾಳಬದ್ಧವಾಗಿ ಹೇಳುವ ಕ್ರಮ ಇರುವುದಿಲ್ಲ. ಈ ಗಮಕ ವಾಚನ ಕ್ರಮ ಅಥವಾ ಕಾವ್ಯಗಳನ್ನು, ರಾಗ, ಶ್ರುತಿ ಬದ್ಧವಾಗಿ ತಾಳದ ಹಂಗಿಲ್ಲದೆ ಹಾಡುವ ಪದ್ಧತಿ ಕನ್ನಡಕ್ಕೆ ಮಾತ್ರ ವಿಶಿಷ್ಟವಾದುದು. ಬೇರೆ ಯಾವ ಭಾರತೀಯ ಭಾಷೆಗಳಲ್ಲೂ ಇದ್ದಂತೆ ಕಾಣುವುದಿಲ್ಲ. .
ಗಮಕ ಕಲೆ ಎಂದರೇನು ? 
ಗಮಕ ಅಥವಾ ಗಮಕ ಕಲೆ ಎಂದರೆ ಪದ್ಯ ಮತ್ತು ಚಂಪೂ ಕಾವ್ಯವನ್ನು ರಾಗ ಬದ್ಧವಾಗಿ ಓದುವ ಒಂದು ವಿಶಿಷ್ಟ ಪದ್ಧತಿ. ಓದುವಾಗ ಸಂಗೀತದ ರಾಗಗಳನ್ನು ಬಳಸಿದರೂ, ಜಾನಪದ ಶೈಲಿಯನ್ನು ಬಳಸಿದರೂ ಕಾವ್ಯದ ಅರ್ಥ, ಭಾವ, ನವರಸಗಳಿಗೆ ಪ್ರಾಧಾನ್ಯತೆ ಕೊಟ್ಟು, ರಸ ಭಾವ ಕೆಡದಂತೆ ಕವಿ ಬಳಸಿದ ಛಂದಸ್ಸು, ಯತಿಗಳು ಕೆಡದಂತೆ ರಾಗ ಮತ್ತು ಶ್ರುತಿ ಬದ್ಧವಾಗಿ ಕಾವ್ಯವನ್ನು ಓದುವುದನ್ನು - ಗಮಕ - ಗಮಕ ಕಲೆ ಎಂದು ಹೇಳಬಹುದು.
ಹಿಂದೆ ಮನೆ ಮನೆಗಳಲ್ಲಿ ಕಾವ್ಯದ ಛಂದಸ್ಸಿಗೆ ಅನುಗುಣವಾಗಿ ವಾಡಿಕೆಯಲ್ಲಿದ್ದ ಮಟ್ಟಿನಲ್ಲಿ ಭಾವರಸಕ್ಕೆ ತಕ್ಕಂತೆ ಕಾವ್ಯವನ್ನು ಓದುತ್ತಿದ್ದರು/ಹಾಡುತ್ತಿದ್ದರು. ಆಗ ಸಾಮಾನ್ಯರೂ ಸಂಗೀತ ಕಲಿಯದವರೂ ಕಾವ್ಯಗಳನ್ನು ಓದುವ ರೂಢಿ ಇತ್ತು. ಹೆಣ್ಣು ಮಕ್ಕಳು ಬೆಳಗಿನ ಝಾವ ಎದ್ದವರು ಕೆಲಸ ಮಾಡುತ್ತಾ ನೀತಿಶತಕ, ಹರಿಭಕ್ತಿಸಾರ, ಮೊದಲಾದ ಕಾವ್ಯಗಳನ್ನು ಒಂದು ಮಟ್ಟಿನಲ್ಲಿ (ಹೆಚ್ಚಾಗಿ ಬಿಲಹರಿಯನ್ನು ಹೋಲುವ ರಾಗದಲ್ಲಿ ) ಹಾಡುತ್ತಿದ್ದರು, ಅದು ಉದಯರಾಗವೆಂದು ಕರೆಯಲ್ಪಡುತ್ತಿತ್ತು. ಹೀಗೆ ಕಾವ್ಯಗಳು ಬಾಯಿಂದ ಬಾಯಿಗೆ ಕಲಿತು ಜನಪ್ರಿಯವಾಗಿತ್ತು. ಆಧುನಿಕ ಯುಗದ ಪ್ರಭಾವ ಬಂದಮೇಲೆ, ಈ ಪದ್ಧತಿ ಮರೆಯಾಗಿ ಕಾವ್ಯದ ಪದ್ಯಗಳಿಗೆ ಶಾಸ್ತ್ರೀಯ ರಾಗಗಳನ್ನು ಹಾಕಿ, ರಸ, ಭಾವಕ್ಕೆ ಅನುಗುಣವಾಗಿ ಹೇಳುವ ರೂಢಿ ಬಂದಿತು. ಇದರ ಜೊತೆಗೆ ಜನರಲ್ಲಿ ಭಾಷಾಶಕ್ತಿ ಕುಗ್ಗಿದುದು, ಹೊಸಗನ್ನಡ / ನವ್ಯ / ನವೋದಯ ಸಾಹಿತ್ಯದ ಹುಟ್ಟು, ಸಿನಿಮಾ ಸಂಗೀತ, ಭಾವಗೀತೆಯ ಪ್ರಕಾರ ಇವೆಲ್ಲವೂ ಜನಸಾಮಾನ್ಯರಲ್ಲಿ ಹೆಚ್ಚು ಸುಲಭಗ್ರಾಹ್ಯವೂ ಲಘುಮನರಂಜನೆಯೂ ಆಗಿ ದೊರೆಯಿತು. ಜನಪ್ರಿಯ ಕಾವ್ಯಗಳು, ಅದರ ವಾಚನ, ಸಾಮಾನ್ಯ ಜನಪದದಿಂದ ದೂರವಾಗಿ ಓದುವಿಕೆ ಅಥವಾ ಹಾಡುವಿಕೆ ಶಾಸ್ತ್ರೀಯ ರೂಪ ಪಡೆದಿದ್ದರಿಂದ ಗಮಕ ವಿದ್ವಾಂಸರು ಮಾತ್ರ ಕಾವ್ಯವನ್ನು ಓದುವಂತಾಯಿತು.
ಕವಿ ತನ್ನ ಭಾಷಾ ಪ್ರೌಡಿಮೆಯಿಂದ ಛಂದಸ್ಸು ಅಲಂಕಾರ ಉಪಮೆಗಳಿಂದ ಕಾವ್ಯವನ್ನು ಬರೆದಿರುತ್ತಾನೆ. ಅದನ್ನು ಎಲ್ಲರಿಗೂ ಓದಲೂ ಕಷ್ಟ. ಇಂತಹ ಕಾವ್ಯ ಎಲ್ಲಾ ಮಟ್ಟದ ಓದುಗರಿಗೂ ಅರ್ಥವಾಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಸೂಕ್ತ ರಾಗ, ಧ್ವನಿಯ ಮೂಲಕ ಶಬ್ದಗಳನ್ನು ಸರಿಯಾಗಿ ಉಚ್ಛರಿಸುತ್ತಾ, ವಾಕ್ಯಗಳನ್ನು - ಸಂಧಿಗಳನ್ನು ಬೇಕಿರುವಲ್ಲಿ ಒಡೆದು ಅರ್ಥ ಹೊರ ಹೊಮ್ಮುವಂತೆ ಓದಿ ಸಹೃದಯರಿಗೆ ತಲುಪಿಸಬೇಕಾಗುತ್ತದೆ. ಎಡವದೆ, ತಡವರಿಸದೆ, ತಲೆಕೊಡಹದೆ, ಕರ್ಕಶವಾಗಿ ಹೇಳದೆ, ಎಲ್ಲರಮನಸ್ಸಿಗೂ ತಾಗುವಂತೆ ಕಾವ್ಯ ವಾಚನ ಮಾಡುವುದೇ ಗಮಕ, ಹಾಗೆ ಓದುವವನೇ ಗಮಕಿ ಎಂದು ಹೇಳುತ್ತದೆ ನೀತಿ ಸಾರ.
***




ಪ್ರಕಾರ....
17. ಹರಿಕಥೆ/ಹರಿಕಥಾ ಕಾಲಕ್ಷೇಪಮ್- ಧಾರ್ಮಿಕ ವಿಷಯದ ಬಗೆಗಿನ ಕಥೆ ಗದ್ಯ ಪದ್ಯ ನಾಟಕ ಸಮೇತ ನಿರೂಪಿಸುವುದು 
   following info is from https://kn.wikipedia.org/
ಹರಿಕಥೆಯು ಒಂದು ಕಥೆಯ ನಿರೂಪಣೆ, ಮತ್ತು ಕಥೆಗೆ ಸಂಬಂಧಿಸಿದ ವಿವಿಧ ಹಾಡುಗಳ ಒಗ್ಗೂಡಿಕೆಯನ್ನು ಒಳಗೊಳ್ಳುತ್ತದೆ. ಸಾಮಾನ್ಯವಾಗಿ, ನಿರೂಪಣೆಯು ಮುಖ್ಯ ಕಥೆಯ ವಿವಿಧ ಅಂಶಗಳ ಮೇಲೆ ಒತ್ತುಕೊಡಲು ಬಳಸಲಾದ ಅಸಂಖ್ಯಾತ ಉಪಕಥೆಗಳು ಮತ್ತು ಕಿರುಕತೆಗಳನ್ನು ಒಳಗೊಳ್ಳುತ್ತದೆ. ಮುಖ್ಯ ಕಥೆಗಾರನಿಗೆ ಸಾಮಾನ್ಯವಾಗಿ ಹಾಡುಗಳನ್ನು ವಿಸ್ತರಿಸುವ ಒಬ್ಬರು ಅಥವಾ ಹೆಚ್ಚು ಸಹ ಗಾಯಕರು, ಮತ್ತು ಒಬ್ಬ ಮೃದಂಗ ಪಕ್ಕವಾದ್ಯದವನು ನೆರವು ನೀಡುತ್ತಾರೆ. ಕಥೆಗಾರನು ತಾಳಗತಿಯನ್ನು ಕಾಪಾಡಲು ತಾಳಗಳನ್ನು ಬಳಸುತ್ತಾನೆ.
ಹರಿಕಥೆಯು (ಅಕ್ಷರಶಃ "ದೇವರ ಕಥೆ", ತೆಲುಗಿನಲ್ಲಿ ಹರಿಕಥಾ ಕಾಲಕ್ಷೇಪಮ್ ಎಂದು ಕರೆಯಲ್ಪಡುತ್ತದೆ) ಹಿಂದೂ ಧಾರ್ಮಿಕ ಪ್ರವಚನದ ಒಂದು ರೂಪ. ಇದರಲ್ಲಿ ಕಥೆಗಾರನು ಒಂದು ಧಾರ್ಮಿಕ ವಿಷಯವನ್ನು ಅನ್ವೇಷಿಸುತ್ತಾನೆ, ಸಾಮಾನ್ಯವಾಗಿ ಒಬ್ಬ ಸಂತನ ಜೀವನ ಅಥವಾ ಒಂದು ಭಾರತೀಯ ಮಹಾಕಾವ್ಯದಲ್ಲಿನ ಒಂದು ಕಥೆ. ಹರಿಕಥೆಯು ಕಥೆ, ಕಾವ್ಯ, ಸಂಗೀತ, ನಾಟಕ, ನೃತ್ಯ ಮತ್ತು ತತ್ತ್ವಶಾಸ್ತ್ರ ಸೇರಿರುವ ಒಂದು ಸಂಯುಕ್ತ ಕಲೆಯಾಗಿದೆ. ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಹೆಚ್ಚು ಪ್ರಚಲಿತವಾಗಿದೆ. ಯಾವುದೇ ಹಿಂದೂ ಧಾರ್ಮಿಕ ವಿಷಯವು ಹರಿಕಥೆಯ ವಿಷಯವಾಗಿರಬಹುದು. ಅದರ ಅತ್ಯುಚ್ಛ್ರಾಯದ ಕಾಲದಲ್ಲಿ ಹರಿಕಥೆಯು ಒಂದು ಜನಪ್ರಿಯ ಮನೋರಂಜನಾ ಮಾಧ್ಯಮವಾಗಿತ್ತು, ಮತ್ತು ಜನರಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಪ್ರಸರಿಸುವಲ್ಲಿ ನೆರವಾಯಿತು. ಜನರ ಮನಸ್ಸುಗಳಲ್ಲಿ ಸತ್ಯ ಮತ್ತು ಸದ್ಗುಣನಿಷ್ಠತೆಯನ್ನು ತುಂಬುವುದು ಮತ್ತು ಭಕ್ತಿಯ ಬೀಜಗಳನ್ನು ಬಿತ್ತುವುದು ಹರಿಕಥೆಯ ಮುಖ್ಯ ಗುರಿಯಾಗಿದೆ. ಅವರಿಗೆ ಕಥೆಗಳ ಮೂಲಕ ಅತ್ಮಜ್ಞಾನದ ಬಗ್ಗೆ ಕಲಿಸುವುದು ಮತ್ತು ಮುಕ್ತಿಯ ಮಾರ್ಗವನ್ನು ತೋರಿಸುವುದು ಮತ್ತೊಂದು ಗುರಿಯಾಗಿದೆ.
ಹಿಂದೂ ಪುರಾಣದಲ್ಲಿ, ವಿಷ್ಣುವಿಗಾಗಿ ಹಾಡಿದ ನಾರದ ಋಷಿಯು ಮೊದಲ ಹರಿಕಥಾ ಗಾಯಕನಾಗಿದ್ದನು. ರಾಮನ ಅವಳಿ ಜವಳಿ ಪುತ್ರರಾದ ಲವ ಮತ್ತು ಕುಶರು ಇತರ ಪ್ರಖ್ಯಾತ ಗಾಯಕರಾಗಿದ್ದರು. ಇವರು ಅಯೋಧ್ಯಾದಲ್ಲಿ ರಾಮನ ಆಸ್ಥಾನದಲ್ಲಿ ರಾಮಾಯಣವನ್ನು ಹಾಡಿದರು.
ಹರಿಕಥೆಯು ಕರಾವಳಿ ಆಂಧ್ರದಲ್ಲಿ ೧೯ನೇ ಶತಮಾನದ ಅವಧಿಯಲ್ಲಿ ಹುಟ್ಟಿಕೊಂಡಿತು. ಈಗಲೂ ಕೂಡ ಬುರ್ರ ಕಥಾದ ಜೊತೆಗೆ ಹರಿಕಥಾ ಕಾಲಕ್ಷೇಪಮ್ ಆಂಧ್ರದಲ್ಲಿ ಅತ್ಯಂತ ಪ್ರಚಲಿತವಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಮೊದಲು ಬರುವ ಧನುರ್ಮಾಸದ ಅವಧಿಯಲ್ಲಿ ಹರಿದಾಸರು ಹಳ್ಳಿಹಳ್ಳಿಗಳನ್ನು ಸುತ್ತುತ್ತ ಭಕ್ತಿಗೀತೆಗಳನ್ನು ಹಾಡುವುದು ದೀರ್ಘಕಾಲದ ಸಂಪ್ರದಾಯವಾಗಿದೆ. ಅಜ್ಜಡ ಆದಿಭಟ್ಲ ನಾರಾಯಣ ದಾಸು ತೆಲುಗು ಹರಿಕಥಾ ಸಂಪ್ರದಾಯದ ಜನಕರಾಗಿದ್ದರು, ಮತ್ತು ತಮ್ಮ ಕಾವ್ಯಗಳು ಹಾಗೂ ಪ್ರಬಂಧಗಳಿಂದ ಅದನ್ನು ಒಂದು ವಿಶೇಷವಾಗಿ ಕಲಾ ರೂಪವನ್ನಾಗಿ ಮಾಡಿದ್ದಾರೆ.
end
****



ಪ್ರಕಾರ....
18. ಪ್ರವಚನ- ಧಾರ್ಮಿಕ ಗ್ರಂಥದ  ಪಠ್ಯದ ಪಠಣ ಮತ್ತು ವಿಶ್ಲೇಷಣೆ 
   following info is from https://kn.wikipedia.org/
ಪ್ರವಚನ ಒಂದು ಸಂಸ್ಕೃತ ಪದವಾಗಿದೆ. ಇದರರ್ಥ ಯಾವುದೇ ಉಪದೇಶಸಂಗ್ರಹ ಅಥವಾ ಶಾಸ್ತ್ರಗ್ರಂಥದ ನಿರೂಪಣೆ, ಅಥವಾ ಜೈನ ಹಾಗೂ ಹಿಂದೂ ಸಂಪ್ರದಾಯಗಳಲ್ಲಿ ಒಂದು ಧರ್ಮಗ್ರಂಥ ಅಥವಾ ಪಠ್ಯದ ಪಠಣ. ವಿಶೇಷವಾಗಿ ಭಾರತೀಯ ಸಂಪ್ರದಾಯಗಳಲ್ಲಿ, ಇದು ಪ್ರವಚನಕಾರನು (ಸಂನ್ಯಾಸಿಗಳು, ವಿದ್ವಾಂಸರು ಅಥವಾ ಸಂತರು) ತಮ್ಮ ಬೋಧನೆಗಳು ಅಥವಾ ಆಧ್ಯಾತ್ಮಿಕ ವಿಚಾರಗಳ ವಿವರಣೆಗಳನ್ನು ಗೃಹವಾಸಿಗಳು ಅಥವಾ ಸಾರ್ವಜನಿಕರ ಸಮೂಹದ ಮುಂದೆ ಪ್ರಸ್ತುತಪಡಿಸುವ ಸಂಪ್ರದಾಯವನ್ನು ಸೂಚಿಸುತ್ತದೆ. ಪ್ರವಚನವು ಒಂದು ಪ್ರಾಚೀನ ಸಂಪ್ರದಾಯವಾಗಿದ್ದು, ಇದರ ಅತ್ಯಂತ ಮುಂಚಿನ ಉಲ್ಲೇಖಗಳು ವೈದಿಕ ಪಠ್ಯಗಳಲ್ಲಿ ಕಂಡುಬರುತ್ತವೆ, ಆದರೆ ಹಿಂದೂಗಳು ಮತ್ತು ಜೈನರ ವೈದಿಕೋತ್ತರ ಶಾಸ್ತ್ರ ಹಾಗೂ ಸೂತ್ರ ಪಠ್ಯಗಳಲ್ಲಿಯೂ ಕಂಡುಬರುತ್ತದೆ.
end
****



ಪ್ರಕಾರ....
19.



ಜನಪದ/ಜಾನಪದ ಸಾಹಿತ್ಯ ಪ್ರಕಾರಗಳು
ಜನಪದ ಸಾಹಿತ್ಯವೂ ಆಕಾಶದಷ್ಟು ವಿಶಾಲ, ಸಾಗರದಷ್ಟು ಆಳ. ಅದರಲ್ಲಿ ಹಲವು ಪ್ರಕಾರಗಳಿವೆ-ಗಾದೆ, ಒಗಟು, ಒಡಪು, ಕಥೆ, ಗೀತೆ, ಕಥನಗೀತೆ ಪ್ರಮುಖವಾಗಿವೆ. ಇಡೀ ಜಗತ್ತಿನ ಸಾಹಿತ್ಯದ ಮೂಲವನ್ನೇಲ್ಲ ಜನಪದಸಾಹಿತ್ಯದಲ್ಲಿ ಕಾಣಬಹುದು. ಅದಕ್ಕೆ ಬಿ.ಎಂ. ಶ್ರೀ ಅವರು ಜನಪದಸಾಹಿತ್ಯವನ್ನು 'ಜನವಾಣಿ ಬೇರು; ಕವಿವಾಣಿ ಹೂವು' ಎಂದು ಕರೆದಿದ್ದಾರೆ.
ಜನಪದ ಹಾಡು ಎಂದರೆ ಹಳ್ಳಿಯ ಜನರ ಸಂಗೀತ. ಹಳ್ಳಿಯ ಜನರು ತಮ್ಮ ದಿನ ನಿತ್ಯ ಕೆಲಸಗಳನ್ನು ಮಾಡುವಾಗ ಹಾಗೂ ತಮ್ಮ ಬಿಡುವಿನ ಸಂದರ್ಭದಲ್ಲಿ ತಮ್ಮದೇ ಪದಗಳಲ್ಲಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು.

ಜನಪದ ನೃತ್ಯಗಳು - ಮನುಷ್ಯನ ಬದುಕನ್ನು ತೀವ್ರ ಸಂವೇದನೆಗೊಳಗಾಗಿಸುವ ಹುಟ್ಟು, ಸಾವು ಮತ್ತು ಇವುಗಳ ನಡುವೆ ಅವನಿಗೆ ಉಂಟಾಗುವ ನಾನಾ ತರಹದ ಅನುಭವಗಳಿಗೆ ಒಂದು ಜನಾಂಗ ಚಲನೆಯ ಮೂಲಕ ವ್ಯಕ್ತಪಡಿಸುವ ಒಂದು ಪ್ರತಿಕ್ರಿಯೆಯಾಗಿ ನೃತ್ಯ ಹುಟ್ಟಿತೆನ್ನಬಹುದು. ಮೂಲಭೂತವಾಗಿ ಅದು ಅವನ ಅತೀವ ಆನಂದದ, ತೃಪ್ತಿಯ ಸರಳ ಅಭಿವ್ಯಕ್ತಿ. ಜನಾಂಗದ ಆಚರಣೆ, ಸಂಪ್ರದಾಯ, ನಂಬಿಕೆ, ಮೂಢನಂಬಿಕೆ, ವೃತ್ತಿ ಮುಂತಾದವನ್ನೂ ಅದು ಪ್ರತಿ ಬಿಂಬಿಸುತ್ತದೆ.
ಜನಪದ ನೃತ್ಯ ಗೀತೆಗಳು - ಕರ್ನಾಟಕದಲ್ಲಿ ಸಾವಿರಾರು ಬಗೆಯ ಜನಪದ ಗೀತೆಗಳಿವೆ. ಇವಕ್ಕೆ ಕೆಲವು ಗಾನನೃತ್ಯಗಳೂ ಇವೆ. ಶಿವಶರಣರ ವಚನಗಳು, ಭಾರತ ವಾಚನ, ಹರಿಕಥೆ, ಶಿವಕಥೆ, ಕೀರ್ತನೆ ಇವುಗಳೆಲ್ಲ ಜನತೆಯಲ್ಲಿ ಜ್ಞಾನ ಪ್ರಸಾರಮಾಡಲು ರೂಢಿಯಲ್ಲಿದ್ದ ವಿಧಾನಗಳು. ಇವುಗಳಲ್ಲಿ ಸಂಗೀತ, ಸಾಹಿತ್ಯ, ನಾಟ್ಯ, ಅಭಿನಯ ಇವುಗಳೆಲ್ಲ ಹದವಾಗಿ ಕೂಡಿಕೊಂಡಿದ್ದು ಪಂಡಿತ ಪಾಮರರೆಂಬ ಭೇದಭಾವವಿಲ್ಲದೆ ಎಲ್ಲರಿಗೂ ಮನರಂಜಕವಾಗಿ ವಿಷಯಬೋಧಕವಾಗಿವೆ. ಈಚೆಗೆ ಆಧುನಿಕ ರೀತಿಯ ನಾಟಕ ಚಲನಚಿತ್ರಗಳು ಬಂದು ಹಳೆಯ ಜನಪದ ನೃತ್ಯ ನಾಟಕಾದಿಗಳು ಹಿಂದೆ ಬಿದ್ದಿವೆ.
ಕರ್ನಾಟಕ ಜನಪದ ನೃತ್ಯ - ಹಾಡು, ಕಥೆಗಳಂತೆ ನೃತ್ಯವೂ ಜಾನಪದ ಸಂಪತ್ತಿನ ಒಂದು ಮುಖ್ಯ ಅಂಗ. ಕರ್ನಾಟಕದ ವಿವಿಧ ಭಾಗಗಳಲ್ಲಿ ಅನೇಕ ರೀತಿಯ ನೃತ್ಯವಿಧಾನಗಳು ಬಳಕೆಯಲ್ಲಿವೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ- ಈ ಪ್ರದೇಶಗಳಲ್ಲಿ ವೈಶಿಷ್ಟ್ಯ ಪಡೆದಿರುವ ನೃತ್ಯಗಳಲ್ಲಿ ಮುಖ್ಯವಾದವನ್ನು ಮಾತ್ರ ಇಲ್ಲಿ ಪರಿಗಣಿಸಲಾಗಿದೆ.



ಪ್ರಕಾರ....
20. ಜನಪದ ಪದಗಳು- ಛಂದಸ್ಸು ಜನಪದೀಯತೆಯ ಮುಖ್ಯ ಲಕ್ಷಣ ಗಳಲ್ಲೊಂದಾಗಿರುತ್ತದೆ.
   following info is from https://kn.wikipedia.org/
ಜನಪದ ಹಾಡು/ಜನಪದ ಛಂದಸ್ಸು- ಜನಪದ ಹಾಡು ಎಂದರೆ ಹಳ್ಳಿಯ ಜನರ ಸಂಗೀತ. ಹಳ್ಳಿಯ ಜನರು ತಮ್ಮ ದಿನ ನಿತ್ಯ ಕೆಲಸಗಳನ್ನು ಮಾಡುವಾಗ ಹಾಗೂ ತಮ್ಮ ಬಿಡುವಿನ ಸಂದರ್ಭದಲ್ಲಿ ತಮ್ಮದೇ ಪದಗಳಲ್ಲಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು. ಒಬ್ಬ ಮನುಷ್ಯ ಹೀಗೆ ಕಟ್ಟಿ ಹೇಳಿದ ಹಾಡು ಮತ್ತೊಬ್ಬರು ಹೇಳಿಕೊಳ್ಳುತ್ತ ಹೀಗೆ ಎಲ್ಲ ಜನಪದರ ಬಾಯಿಂದ ಬಾಯಿಗೆ ಹಾಡುಗಳನ್ನು ಹಾಡುತ್ತಿದ್ದರು.

ಜನಪದ ಹಾಡುಗಳ ರಚನೆ ಅಥವಾ ಅದರ ಛಂದಸ್ಸು ಆ ಒಂದು ವರ್ಗದ ವಿಶಿಷ್ಟವೂ ಸ್ವಕೀಯವೂ ಆದ ಲಕ್ಷಣಗಳನ್ನೊಳಗೊಂಡಿರುತ್ತದೆ. ಇತರ ಶಾಖೆಗಳಂತೆ ಇದೂ ಪ್ರಭಾವಿತವಾಗುವುದಕ್ಕಿಂತ ಪ್ರಭಾವ ನೀಡುವುದು ಹೆಚ್ಚು. ವಿಶೇಷವೆಂದರೆ ಜನಪದ ಛಂದಸ್ಸು ಭಾಷೆ ಇತ್ಯಾದಿಗಳಂತೆ ಬೇಗ ವಿಕಾರಗೊಳ್ಳದೆ ತನ್ನತನವನ್ನು ಗರಿಷ್ಠ ಪ್ರಮಾಣದಲ್ಲಿ ಉಳಿಸಿಕೊಂಡಿರುತ್ತದೆ. ಆದುದರಿಂದ ಛಂದಸ್ಸು ಜನಪದೀಯತೆಯ ಮುಖ್ಯ ಲಕ್ಷಣಗಳಲ್ಲೊಂದಾಗಿರುತ್ತದೆ. ವಿಕಾಸ ಜೀವಂತಿಕೆಯ ಕುರುಹು. ಜನಪದದ್ದು ಸಹಜವಾದ ವಿಕಾಸ. ಇಲ್ಲಿ ಪಲ್ಲವಿಯ ಪುನರುಕ್ತಿಯಿಂದಲೂ ಏಕತಾನ ಸಹಜವಾದರೂ ವಿಕಾಸಶೀಲವೂ ಆದ ಜನಪದರ ಸಮಾಜದ ಕೈಯಲ್ಲಿ ವೈವಿಧ್ಯಸಾಧನೆಯೂ ಆಗುತ್ತದೆ. ಈ ವೈವಿಧ್ಯ ಮತ್ತು ಅದರ ಚರಿತ್ರೆ ಆ ಒಂದು ಸಮಾಜದ ವಿಶಿಷ್ಟವಾದ ಸಾಂಸ್ಕೃತಿಕ ಕೊಡುಗೆಯನ್ನು ನಿರ್ಧರಿಸುತ್ತದೆ.
end
****





ಪ್ರಕಾರ....
21. ಬಯಲಾಟ - ಗುಡಿಯ ಪ್ರಾಂಗಣ ದಾಟಿ ಬಯಲಲ್ಲಿ ಭಕ್ತಿ ಪ್ರದರ್ಶನ 
 following info is from https://kn.wikipedia.org/
ಯಕ್ಷಗಾನ ಬಯಲಾಟ - ಕನ್ನಡ ನಾಡಿನ ಯಕ್ಷಗಾನ ಬಯಲಾಟದ ಪರಂಪರೆ ಆ ಸಂಸ್ಕೃತಿಯ ಅತ್ಯಂತ ಸುಂದರವಾದ ಅಂಗವಾಗಿದೆ. ಯಕ್ಷಗಾನ ಬಯಲಾಟ ಪ್ರೇಕ್ಷಣೀಯ ನೃತ್ಯ ಸಂಪ್ರದಾಯ. ಮಹಾಭಾರತ ರಾಮಾಯಣಾದಿ ಕಥಾನಕಗಳಲ್ಲಿ ಬರುವ ಪಾತ್ರಗಳು ಅತಿಮಾನುಷ ವೇಷಭೂಷಣ, ಕಿರೀಟ, ಬಣ್ಣಲೇಪನಗಳಿಂದ ಕೂಡಿದ್ದು ಪ್ರೇಕ್ಷಕರನ್ನು ಮೈಮರೆಸುತ್ತಾರೆ. ತಾಳ ನೃತ್ಯಕ್ಕೂ ಸಂಗೀತಕ್ಕೂ ಹೊಂದಿಕೊಂಡು ಭಾವಾವೇಶವನ್ನೂ ಸ್ಫೂರ್ತಿಯನ್ನೂ ಒದಗಿಸುತ್ತದೆ.
ಸಾಹಿತ್ಯ ಪಂಡಿತ ಪಾಮರರನ್ನು ರಂಜಿಸುವಂತಿರುತ್ತದೆ. ಭಾಗವತರು ಚಂಡೆ, ಮದ್ದಳೆ, ಶ್ರುತಿ, ತಾಳಗಳೊಡನೆ ಕಥೆಯನ್ನು ಆರಂಭಿಸುತ್ತಾರೆ. ಇಬ್ಬರು ಎತ್ತಿಹಿಡಿದ ಪರದೆಯ ಹಿಂದಿನಿಂದ ಅದ್ಭುತವೇಷಧಾರಿಗಳು ನೃತ್ಯಕ್ಕೆ ಸಿದ್ಧರಾಗುತ್ತಾರೆ. ಪಾತ್ರಧಾರಿಗಳು ನರ್ತಿಸುತ್ತಿರಲು ಭಾಗವತರು ಜಾಗಟೆ ಕೋಲುಗಳಿಂದ ತಾಳ ಸೂಚಿಸುತ್ತ ಪ್ರಸಂಗದ ಸಾಹಿತ್ಯವನ್ನು ಹಾಡಿ ಸಭಿಕರಾಗಿ ಹಾಸ್ಯಗಾರರಾಗಿ ಕಥಾಸರಣಿಯನ್ನು ಮುಂದುವರಿಸುತ್ತಾರೆ. ಯಕ್ಷಗಾನ ವೀರರಸ ಪ್ರಧಾನವಾದದ್ದು.
ಅಲ್ಲಿನ ವೇಷಗಳ ಅಲಂಕಾರಾದಿಗಳಲ್ಲಿ ಚಿತ್ರಕಲಾಪ್ರೌಢಿಮೆಯಿದೆ; ಧರ್ಮವಿಷಯವನ್ನು ಸರಳ ಮಾತಿನಲ್ಲಿ ಉದಾಹರಣೆ ಸಹಿತ ಕಥಾರೂಪಕವಾಗಿ ಬೋಧಿಸುವ ಮಧುರ ಸಂಭಾಷಣೆಯಿದೆ. ವೇದೋಪನಿಷತ್ತುಗಳ ತತ್ತ್ವಾರ್ಥವನ್ನು ಯಕ್ಷಗಾನ ಸುಲಭವಾಗಿ ತಿಳಿಸುತ್ತದೆ. ದೇದೀಪ್ಯಮಾನರಾದ ಪುರಾಣವ್ಯಕ್ತಿಗಳ ಪಾತ್ರಧಾರಿಗಳು ರಂಗಸ್ಥಳದ ಎತ್ತರವಾದ ಕಾಲು ದೀಪಗಳ, ದೀವಟಿಗೆಗಳ ಬೆಳಕಿನಲ್ಲಿ ಸಂಜೆಯಿಂದ ಮುಂಜಾನೆಯವರೆಗೆ ನರ್ತಿಸುವಾಗ ಪ್ರೇಕ್ಷಕರು ತನ್ಮಯರಾಗುತ್ತಾರೆ. ಯಕ್ಷಗಾನ ಬಯಲಾಟ ಅವರನ್ನು ಮಾಯೆಯ ಸುಂದರ ಕಲಾಜಗತ್ತಿಗೆ ಕೊಂಡೊಯ್ಯುತ್ತದೆ.
end
****
 following info is from https://kn.wikipedia.org/
ಯಕ್ಷಗಾನ - ಕರ್ನಾಟಕದಲ್ಲಿ ಪ್ರಸಿದ್ಧವಾಗಿರುವ ಒಂದು ಪ್ರದರ್ಶನ ಕಲೆಯಿದು. ರಾಮಾಯಣ, ಭಾರತ, ಭಾಗವತ, ಪುರಾಣಗಳಿಂದ ಆರಿಸಿದ ಸಂದರ್ಭಗಳನ್ನು ಪ್ರಸಂಗಗಳಿಗೆ ಅಳವಡಿಸಿಕೊಂಡಿದ್ದಾರೆ. ಇದರಲ್ಲಿ ಸಂಗೀತ, ನೃತ್ಯಗಳೇ ಹೆಚ್ಚು. ಮಾತುಗಾರಿಕೆಯೂ ಉಂಟು. ಸಂಗೀತ, ಕುಣಿತ, ವಚನಗಳು-ಪ್ರಸಂಗದ ಮೂರು ಮುಖ್ಯ ಅಂಶಗಳು. ದಕ್ಷಿಣಾದಿ ಸಂಗೀತಶಾಸ್ತ್ರ ಸಂಪ್ರದಾಯದ ಘನರಾಗಗಳನ್ನೇ ಹೆಚ್ಚಾಗಿ ಬಳಸುವರು.
ನಾಟಿ, ಮೋಹನ, ಆನಂದಭೈರವಿ, ಶಂಕರಾಭರಣ, ಬೇಹಾಗ್, ಬೇಗಡೆ, ಕಾನಡ, ಸುರಟಿ, ಕೇದಾರಗೌಳ, ಸಿಂಧುಭೈರವಿ, ನಾದನಾಮ ಕ್ರಿಯ, ಮುಖಾರಿ ಮೊದಲಾದ ರಾಗಗಳು ಬಳಕೆಯಲ್ಲಿವೆ. ಬೇರೆ ಬೇರೆ ಪ್ರದೇಶಗಳಲ್ಲಿ ಶೈಲಿಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಪ್ರಸಂಗದಲ್ಲಿ ಭಾಗವತರು ಬಹಳ ಮುಖ್ಯ. ಅವರೇ ಪ್ರಸಂಗವನ್ನು ನಡೆಸಿಕೊಡುವ ಸೂತ್ರಧಾರರು.
ನಾಂದಿ ಹಾಡುಗಳು, ಭರತವಾಕ್ಯ- ಎಲ್ಲ ಅವರವೇ. ಜಾಗಟೆ ಬಡಿದು ಅವರು ಹಾಡಿನ ಗತಿ ತೋರಿಸುತ್ತಾರೆ. ಮದ್ದಲೆಯವನು ಮದ್ದಲೆ ಬಾರಿಸುತ್ತಾನೆ. ಹಿಂದೆ ಶೃತಿಗೆ ಚಿಟ್ಮೇಳ, ಪುಂಗಿಗಳನ್ನು ಉಪಯೋಗಿಸುತ್ತಿದ್ದರು. ಈಗ ಹಾರ್ಮೋನಿಯಂ ಪೆಟ್ಟಿಗೆ ಇಟ್ಟುಕೊಳ್ಳುತ್ತಾರೆ. ಇಡೀ ರಾತ್ರಿ ಯಕ್ಷಗಾನ ಪ್ರಸಂಗ ನಡೆಯುತ್ತದೆ. ಅರುಣೋದಯಕ್ಕೆ ಸರಿಯಾಗಿ ಮಂಗಳ ಹಾಡುತ್ತಾರೆ. ಯಕ್ಷಗಾನ ಕಲೆಗೊಂದು ಶಾಸ್ತ್ರೀಯ ಬುನಾದಿ ಉಂಟು.
ಹತ್ತಾರು ವರ್ಷ ಅದನ್ನು ಅಭ್ಯಾಸ ಮಾಡುವವರಿದ್ದಾರೆ. ಕಲೆಗಳಲ್ಲೆಲ್ಲ ಇದು ಬಹು ತೂಕವಾದುದೆಂಬುದು ನಿರ್ವಿವಾದವಾದ ಅಂಶ.
ಯಕ್ಷಗಾನದ ಒಂದು ರೂಪವಾದ ತಾಳ ಮದ್ದಲೆಯಲ್ಲಿ ಪಾತ್ರಧಾರಿಗಳು ರಂಗಮಂಟಪದಲ್ಲಿ ಕುಳಿತು ವೇಷಭೂಷಣ ಮತ್ತು ನೃತ್ಯಗಳಲ್ಲದೆ ಪ್ರಸಂಗವನ್ನು ಮಾತ್ರ ನಡೆಸಿಕೊಡುವರು. ಭಾಗವತರು, ಹಿಮ್ಮೇಳದವರು ಬಯಲಾಟದಲ್ಲಿನಂತೆ ಇರುವರು ; ಅರ್ಥಧಾರಿಗಳು ಸಮಯಸ್ಫೂರ್ತಿಯಿಂದ ಮಾತಾಡುವರು. ಅನೇಕ ಕಡೆ ಪಾತ್ರಧಾರಿಗಳ ಬುದ್ಧಿವಂತಿಕೆ ಎದ್ದು ಕಾಣುವುದು. ವಾಕ್ಚಾತುರ್ಯ, ಆಶುಭಾಷಣಗಳೂ ಉಂಟು. ಹಲವೇಳೆ ವಾಗ್ಯುದ್ಧಗಳಾಗುತ್ತವೆ. ಈ ಕಲೆ ಸಾವಿರ ವರ್ಷದಿಂದಲೂ ಬೆಳೆದುಬಂದಿದೆ.
end
****
following is write-up by ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ
ಹರಿದಾಸ ಸಾಹಿತ್ಯದಲ್ಲಿ ಬಯಲಾಟಗಳು 
ಕನ್ನಡ ಸಾಹಿತ್ಯಕ್ಕೆ, ಕರ್ನಾಟಕದ ಸಂಸ್ಕೃತಿಗೆ ಹರಿದಾಸ ಸಾಹಿತ್ಯದ ಕೊಡುಗೆ ಅತ್ಯಮೂಲ್ಯವಾದುದು.
ದಾಸ ಸಾಹಿತ್ಯದಲ್ಲಿ :
1. ಶ್ರೀ ಶ್ರೀಪಾದರಾಜರ ಯುಗ - ಪ್ರಥಮ ಘಟ್ಟ
2. ಶ್ರೀ ವಿಜಯರಾಯರ ಯುಗ - ದ್ವಿತೀಯ ಘಟ್ಟ
3. ಶ್ರೀ ಪ್ರಾಣೇಶದಾಸರ ಯುಗ - ತೃತೀಯ ಘಟ್ಟ
ಹರಿದಾಸ ಸಾಹಿತ್ಯವು...
1. ಸುಳಾದಿ - ಪದ - ಉಗಾಭೋಗಗಳ ಜೊತೆ ದ್ವಿಪದಿ - ತ್ರಿಪದಿ - ಷಟ್ಪದಿ - ಸಾಂಗತ್ಯ - ರಗಳೆ - ದಂಡಕ - ವೃತ್ತನಾಮಗಳು ಮೊದಲಾದುವು ಛಂದೋ ರೂಪದಲ್ಲಿ ಬೆಳೆದಿದೆ.
2. ಮಧ್ವನಾಮ - ವೈಕುಂಠ ವರ್ಣನೆ - ಲಕ್ಷ್ಮೀ ಶೋಭಾನೆ - ಹರಿಭಕ್ತಿಸಾರ - ಮೋಹನ ತರಂಗಿಣೀ - ಹರಿಕಥಾಮೃತಸಾರ ಮೊದಲಾದುವು ಕಾವ್ಯ ಪ್ರಕಾರಗಳಲ್ಲಿ ಇದ್ದು, ವೇದ - ಉಪನಿಷತ್ - ಪುರಾಣ - ಇತಿಹಾಸ - ಸ್ಮೃತಿಗಳ ತತ್ತ್ವ ಪ್ರಮೇಯಗಳಿಂದ ಕೂಡಿವೆ.
3.ಹರಿದಾಸರಾಗಿ ಜೀವನದ ಗುಟ್ಟನ್ನು ಬಿಚ್ಚಿ ಸದ್ಗತಿ ಪಡೆಯಲು ಸಾಧನಾ ಕ್ರಮವನ್ನು ಬೀದಿ ಬೀದಿ - ಕೇರಿ ಕೇರಿ - ಮನೆ, ಗುಡಿಸಲುಗಳೆನ್ನದೆ ಎಲ್ಲೆಡೆಯೂ ಅಲೆದಾಡಿ, ಹಾಡಿ ಹಾಡಿ ತಿಳಿ ಹೇಳಿ ಕುಣಿ ಕುಣಿದಾಡಿದರು.
4. ಜನಪದ ಶೈಲಿಯಲ್ಲಿ ದೇಸಿ ಸೊಗಡಿನೊಂದಿಗೆ ಕೃತಿಗಳನ್ನು ರಚಿಸಿರುವುದರಿಂದ ಹರಿದಾಸ ಸಾಹಿತ್ಯವು ಎಲ್ಲರ ನಾಲಿಗೆಯ ಮೇಲೆ ಹರಿದಾಡುತ್ತಿವೆ.
" ಜನಪದ ಸಾಹಿತ್ಯದ ಪ್ರಕಾರಗಳಾದ " ..
1. ಜೋಗಳದ ಹಾಡು
2. ಲಾಲಿಹಾಡು
3. ಕೋಲಾಟದ ಹಾಡು
4. ಡೊಳ್ಳಿನ ಕುಳಿತ
5. ಲಾವಣಿ
6. ಕಥನ ಕವನಗಳು
ಜನಪದದ ಕಲೆಗಳಾದ...
1. ಸೂತ್ರದ ಗೊಂಬೆಯಾಟ
2. ತೊಗಲು ಗೊಂಬೆಯಾಟ
ಬಯಲಾಟಗಳನ್ನು ಮೊದಲು ಧರ್ಮಭೀರುಗಳು ವೇಷ ಧರಿಸಿ ಗುಡಿಗಳಲ್ಲಿ ಆಡುತ್ತಿದ್ದರು. 
ಈ ಬಯಲಾಟದಲ್ಲಿ ಭಕ್ತಿ ಶ್ರದ್ಧೆಗಳು ಮುಖ್ಯವಾಗಿದ್ದವು. 
ಈ ಬಯಲಾಟಕ್ಕೆ " ಗುಡಿ ಸಂಸ್ಕಾರ " ವೆಂದು ಕೂಡಾ ಎನ್ನುವರು. 
ನಂತರ ಪ್ರೇಕ್ಷಕರು ಹೆಚ್ಚಿದ್ದರಿಂದಲೂ; ಶ್ರೀ ಸಾಮಾನ್ಯರೂ ಪಾತ್ರ ವಹಿಸತೊಡಗಿದ್ದರಿಂದಲೂ ಗುಡಿಯ ಪ್ರಾಂಗಣ ದಾಟಿ ಬಯಲಿಗೆ ಬಿದ್ದುದ್ದರಿಂದ ಇದಕ್ಕೆ " ಬಯಲಾಟ " ಎಂದು ಹೆಸರಾಯಿತು.
ಹರಿದಾಸ ಸಾಹಿತ್ಯದ ತವರೂರೆನಿಸಿದ ರಾಯಚೂರು ಜಿಲ್ಲೆಯಲ್ಲಿ ಸುಮಾರು 10 ಜನ ಹರಿದಾಸರು 15 ಬಯಲಾಟಗಳನ್ನು ರಚಿಸಿದ್ದಾರೆ.
1. ಶ್ರೀ ಪ್ರಾಣೇಶದಾಸರು 17 ಕಥಾನಕವನಗಳು ರಚಿಸಿದ್ದಾರೆ.
2. ಗೊಂಬೆಯಾಟವನ್ನು ಶ್ರೀ ಶ್ರೀನಿವಾಸರಾಯರು ( ಕದರ ಮಂಡಲಗಿ ಪಾಂಡುರಂಗ ) ಗೊಂಬೆಯಾಟ ಆಡಿಸುತ್ತಿದ್ದರಿಂದ ಗೊಂಬೆ ಸೀನಪ್ಪ ಎಂದು ಪ್ರಸಿದ್ಧಿ ಆಗಿದ್ದರು.
3. ಶ್ರೀ ಸಿಂಗಾರಾಚಾರ್ಯರು ಲಾವಣಿಯನ್ನು ರಚಿಸಿದ್ದಾರೆ.
ಜನಪದ ರಂಗ ಪ್ರದರ್ಶನದ ಪ್ರಮುಖ ಪ್ರಕಾರ ಈ ಬಯಲಾಟಗಳದ್ದು.
ಮುಖ್ಯವಾಗಿ ದೊಡ್ಡಾಟ - ಯಕ್ಷಗಾನ - ಸಣ್ಣಾಟಗಳೆಂದು ಪ್ರಾದೇಶಿಕ ವೈಶಿಷ್ಟ್ಯಗಳೊಂದಿಗೆ ಪ್ರಸಿದ್ಧಿ ಪಡೆದಿದೆ.
ಬಯಲಾಟ ಮತ್ತು ಯಕ್ಷಗಾನಗಳು ಒಂದು ರೂಪ ಪಡೆಯುವುದಕ್ಕೂ ಮೊದ ಮೊದಲು ತುಣುಕು ತುಣುಕಾಗಿ ತೇಲು ರೂಪದಲ್ಲಿದ್ದ ಪ್ರಕಾರಗಳೆಂದರೆ...
1. ಕಿಳ್ಳಿಕೇತರ ಆಟ
2. ತೊಗಲು ಗೊಂಬೆ ಆಟ
3. ವೇಷಗಾರರು
4. ಗೊಂದಲಿಗರು
5. ಬಹು ರೂಪಿಗಳುಯಕ್ಷಗಾನ ಬಯಲಾಟವು ಒಂದು ಕಲೆಯಲ್ಲ. 
ಅದೊಂದು ಕಲಾ ಸಮುಚ್ಛಯ.
ಪ್ರೊ. ವ್ಹಿ ಸೀತಾರಾಮಯ್ಯನವರ ಮಾತಿನಲ್ಲಿ...
" ಸಮ್ಮಿಳಿತ ಸೌಭಾಗ್ಯ " = ಸಂಗೀತ - ವಾದನ - ನೃತ್ಯ - ಮಾತು - ಚಿತ್ರ. 
ಈ ಒಂದೊಂದು ಅಂಗವನ್ನೂ, ವೈಶಿಷ್ಟ್ಯ ಪೂರ್ಣವಾಗಿ - ಸಂಪೂರ್ಣವಾಗಿ ಬೆಳೆಸಿಕೊಂಡು ತಾನು ನಿರೂಪಿಸಲೆಳಸುವ ಪೌರಾಣಿಕ ಕಥಾ ವಸ್ತುವಿಗೆ ತಕ್ಕ ಒಂದು ವಾತಾವರಣವನ್ನೇ ಸೃಷ್ಟಿಸುವ ಒಂದು ಸಮಗ್ರ ರಂಗಭೂಮಿಯಾಗಿದೆ.
2. ಶ್ರೀ ಕಟ್ಟಾಚಾರ್ಯ ಜೋಶಿ ( ಶ್ರೀ ನರಹರಿವಿಠಲರು )...
" ಎಲೆ ಅಡಿಕೆ ಸುಣ್ಣದ ಜಗಳ ", 
" ಕ್ವಾನಮ್ಮನ ಹಾಡುಗಳು ", 
ಕಲಿಯುಗದ ವಿಪರ್ಯಾಸವನ್ನು ಹೇಳುವ ಲಾವಣಿಗಳನ್ನು ರಚಿಸಿದ್ದಾರೆ.
3. ಶ್ರೀ ಕೆ. ಭೀಮಸೇನದೇವರು ( ಶ್ರೀ ವೆಂಕಟವಿಠಲರು ) ಜೋಗುಳ ಹಾಡುಗಳನ್ನು ರಚಿಸಿದ್ದಾರೆ.
" ಬಯಲಾಟಗಳನ್ನು ರಚಿಸಿದ ಹರಿದಾಸರುಗಳು "
" ಶ್ರೀ ಶಿಂಗಾಜೋಷಿ ರಾಮಾಚಾರ್ಯರು "
( ಗುರು ಜಗಜ್ಜನ್ಮಾದಿ ಕಾರಣ ವಿಠಲ )
1. " ಹಿಡಂಬಾ ಪರಿಣಯ " 
2. ರಂಭಾ ವಿಲಾಸ
3. ಭೀಮಸೇನ ವಿಲಾಸ
4. ಬಾಣಾಸುರನ ಕಥೆ
5. ನಳ ಚರಿತ್ರೆ
6. ಲವಕುಶರ ಕಾಳಗ
" ಶ್ರೀ ಮದರಕಲ್ ಶ್ರೀಪಾದರಾಯರು "
( ರುಕ್ಮಿಣೀಶ ) 
"  ಶ್ರೀ ಕೃಷ್ಣ ಬೋಧಸಾರಶ್ರೀ ಸಿಂಗಪ್ಪ "
( ಅಂಕಿತ - ಶ್ರೀಶ ) 
1. ವಾಲ್ಮಿಕೀ ರಾಮಾಯಣ
2. ಕಂಸ ವಧೆ
3. ಕಾಳಿಂಗ ಮರ್ದನ
4. ಭಕ್ತ ಕುಚೇಲ ವೃತ್ತಾ೦ತ
5. ಧ್ರುವ
6. ಚಂದ್ರಹಾಸ ಚರಿತೆ
" ಶ್ರೀ ರಾಜಪುರೋಹಿತ ಶೀನಪ್ಪಾಚಾರ್ಯರು - 
ಇವರು ಸಂಸ್ಕೃತದಲ್ಲಿ ಬಯಲಾಟಗಳನ್ನು " ರಚಿಸಿದ್ದಾರೆ
1. ಕಾಳಿ ಪರಿಣಯ
2. ಮಲ್ಲೊಬ ಕಥೆ
3. ಚಿತ್ರಸೇನ ಗಂಧರ್ವ ಕಥೆ
" ಶ್ರೀ ಅಸ್ಕಿಹಾಳ ಗೋವಿಂದದಾಸರು "
( ಸಿರಿ ಗೋವಿಂದ ವಿಠಲ ) 
1. ಮಹಾಭಾರತ ಕಥೆಗಳು
ಆ. ಕನಕಾಂಗಿ ಕಲ್ಯಾಣದ ಕಥೆ
ಆ. ಅಭಿಮನ್ಯು ಮದುವೆಯ ಕಥಾ  
" ಶ್ರೀ ಮಾನ್ವಿ ಗುಂಡಾಚಾರ್ಯರು "
( ಶ್ಯಾಮಸುಂದರವಿಠಲ ) 
1. ಲಂಕಾದಹನ
2. ಪಾದುಕಾ ಪಟ್ಟಾಭಿಷೇಕ
3. ರುಕ್ಮಾ೦ಗದ ಚರಿತ್ರೆ
4. ಶ್ರೀನಿವಾಸ ಪದ್ಮಾವತೀ ಕಲ್ಯಾಣ
5. ಸುಭದ್ರಾ ಪರಿಣಯ ಮತ್ತು" ಸಂಪೂರ್ಣ ರಾಮಾಯಣ " ಎಂಬ ನಾಟಕವನ್ನೂ ಬರೆದಿದ್ದಾರೆ.
" ಶ್ರೀ ಸಿಂಗನೋಡಿ ಭೀಮಸೇನಾಚಾರ್ಯರು "
( ಗುರುಬಂಡೇ ರಂಗವಿಠಲ )
1. ಶಬರ ಶಂಕರ ವಿಲಾಸ
" ಶ್ರೀ ಸಂಗವಾರ ರಾಮಣ್ಣದಾಸರು  "
( ಲಕ್ಷ್ಮೀಶವಿಠಲ )
1. ವಾಲಿ ಸುಗ್ರೀವ
2. ನಹುಷರಾಜನ ಕಥೆ
3. ದ್ರೌಪದೀ ಸ್ವಯಂವರ
" ಶ್ರೀ ಮಖ್ತಲ್ ಮುತಾಲಿಕ ರಾಮಣ್ಣ "
( ಕೇಶವ ವಿಠಲ )
1. ರುಕ್ಮಾ೦ಗದ ಚರಿತ್ರೆ
" ಶ್ರೀ ರಾಘವೇಂದ್ರಾಚಾರ್ಯ ಜ್ಯೋಷಿ ಗುಡೇಬಲ್ಲೂರು " 
( ಶ್ರೀಶ ವೆಂಕಟೇಶ )
1. ಪ್ರಭಾವತೀ ಪರಿಣಯ
end
*****





ಪ್ರಕಾರ....
22. ಲಾವಣಿ - ಮುಖ್ಯವಾಗಿ ಶೃಂಗಾರ ಮತ್ತು ವೀರತೆಗೆ ಹೆಚ್ಚು ಅವಕಾಶವಿರುತ್ತದೆ. ನಾಡ ವಿಡಂಬನೆ ಹಾಸ್ಯಮಯ ಪ್ರಸಂಗಗಳು ಲಾವಣಿಯಲ್ಲಿ ಎದ್ದು ಕಾಣುವ ಅಂಶಗಳು
 following info is from https://kn.wikipedia.org/
ಲಾವಣಿ ಅತ್ಯಂತ ಹಳೆಯ ಹಾಗೂ ಜನಪ್ರಿಯ ಸಂಗೀತ ಮತ್ತು ನೃತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರ, ದಕ್ಷಿಣ ಮಧ್ಯ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಜನಪ್ರಿಯವಾಗಿದೆ. ಉತ್ಸಾಹ, ಶಕ್ತಿಯುತ ಹಾಗೂ ನಾಟಕೀಯವಾದ ನಿರೂಪಣೆಯೇ ಈ ಲಾವಣಿ. ಲಾವಣಿ ನೃತ್ಯವು ಮರಾಠಿ ಜಾನಪದ ರಂಗಭೂಮಿಯ ಅಭಿವೃದ್ಧಿಗೆ ಗಣನೀಯವಾದ ಕೊಡುಗೆ. ಮಹಾರಾಷ್ಟ್ರ ಮತ್ತು ದಕ್ಷಿಣ ಮಧ್ಯ ಪ್ರದೇಶಗಳಲ್ಲಿ ಇದು ಬಹಳ ಹೆಸರು ಮಾಡಿದೆ.
ಲಾವಣಿ ಮಹಾರಾಷ್ಟ್ರದ ಜನಪ್ರಿಯ ಜಾನಪದ ರೂಪವೂ ಹೌದು. ಸಾಂಪ್ರದಾಯಿಕವಾಗಿ, ಹಾಡುಗಳನ್ನು ಸ್ತ್ರೀ ಕಲಾವಿದರು ಹಾಡಿದರೆ, ಪುರುಷ ಕಲಾವಿದರು ಕೆಲವೊಮ್ಮೆ ಲಾವಣೀಸ್ (Lavanis) ಹಾಡಲಾಗುತ್ತದೆ. ಲಾವಣಿ ಸಂಬಂಧಿಸಿದ ನೃತ್ಯ ರೂಪವನ್ನು " ತಮಾಷಾ" ಎಂದು ಕರೆಯಲಾಗುತ್ತದೆ. ಲಾವಣಿಯನ್ನು ಒಬ್ಬ ಹುಡುಗಿಯು ತನ್ನ ಪ್ರಿಯಕರನಿಗೆ ಬರೆಯುವ ಒಂದು ಪ್ರಣಯ ಗೀತೆ ಎಂದು ಹೇಳಬಹುದಾಗಿದೆ. ಲಾವಣಿಯ ಮುಖ್ಯ ಗುಣವೆಂದರೆ ಇದು "ಢೋಲ್ಕಿ" (Dholki) ಎಂಬ ಒಂದು ಪರ್ಕಷನ್ ನ ಬೀಟ್ಸ್ ವಾದ್ಯದ ಸಹಾಯದಿಂದ ಸಾಂಪ್ರದಾಯಿಕ ಹಾಡು ಮತ್ತು ನೃತ್ಯವನ್ನು ಸಂಯೋಜನೆ ಮಾಡಲಾಗುತ್ತದೆ. ಇದರಿಂದ ಲಾವಣಿಯು ಪ್ರಮುಖವಾಗಿ ಅದರ ಲಯಕ್ಕೆ ಹೆಸರಾಗಿದೆ.
ಲಾವಣಿಯ  ಉತ್ಪತ್ತಿ 
ಒಂದು ಸಂಪ್ರದಾಯದ ಪ್ರಕಾರ ಲಾವಣಿ ಶಬ್ದವನ್ನು ಲಾವಣ್ಯ ಅಂದರೆ ಸೌಂದರ್ಯ ಎಂಬ ಪದದಿಂದ ಪಡೆಯಲಾಗಿದೆ. ಮತ್ತೊಂದು ಸಂಪ್ರದಾಯದ ಪ್ರಕಾರ, ಇದು ಮರಾಠಿ lavane ಎಂಬ ಪದದಿಂದ ಪಡೆಯಲಾಗಿದೆ. ಲಾವಣಿಯನ್ನು ಸೂಚಿಸುವ ಆಂಗ್ಲ ಪದವಾದ Ballad ವಿವಿಧ ಅರ್ಥಗಳನ್ನು ಹೊಂದಿರುವಂತಹದು. ಲಾವಣಿಯು ಜನಪದ ಗೀತೆಯ ಒಂದು ಉಪವರ್ಗವಾಗಿದೆ. Ballad ಪದವನ್ನು ಕೆಲವು ಸಾರಿ ನೃತ್ಯದೊಡನೆ ಹಾಡಲಾಗುವ ಲಾವಣಿಗಳಿಗೆ ಸೂಚಿಸುವುದುಂಟು. ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗಿದೆ.
ಜರ್ಮನ್ - volkslied
ಡ್ಯಾನಿಶ್- folkevise
ಸ್ಪ್ಯಾನಿಷ್- romance
ರಷ್ಯಾ- bylina
ಲಾವಣಿಯಲ್ಲಿ ನಿರ್ಗುಣಿ ಲಾವಣಿ (ತಾತ್ವಿಕ) ಮತ್ತು ಶೃಂಗಾರಿ ಲಾವಣಿ (ಇಂದ್ರಿಯ) ಎಂದು ಎರಡು ವಿಧಗಳಿವೆ. ಶೃಂಗಾರ ಲಾವಣಿಯನ್ನು ಹೆಚ್ಚಾಗಿ ಪುರುಷರು ಬರೆದರೆ, ಹೆಂಗಸರು ವೇದಿಕೆಯ ಮೇಲೆ ಹಾಡಿ ನೃತ್ಯ ಮಾಡುತ್ತಾರೆ. ನಿರ್ಗುಣಿ ಲಾವಣಿಯ ಆರಾಧನೆಯ ಮತ್ತು ಭಕ್ತಿಭಾವದ ಲಾವಣಿಗಳು ಬಹಳ ಜನಪ್ರಿಯವಾಗಿದೆ.
ಲಾವಣಿ ಎರಡು ವಿಭಿನ್ನ ಪ್ರದರ್ಶನಗಳನ್ನು, ಹೊಂದಿದೆ. ಅವುಗಳೆಂದರೆ ಫದಛಿ(Phadachi) ಲಾವಣಿ ಮತ್ತು ಬೈಥಕಿಛಿ (Baithakichi) ಲಾವಣಿ. ನಾಟಕ ವಾತಾವರಣದಲ್ಲಿ, ಹೆಚ್ಚು ಪ್ರೇಕ್ಷಕರ ಮುಂದೆ ಅಂದರೆ ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುವುದನ್ನು ಫದಛಿ ಲಾವಣಿ ಎಂದು ಕರೆಯಲಾಗುತ್ತದೆ. ಒಂದು ಮುಚ್ಚಿದ ಕೋಣೆಯಲ್ಲಿ ಆಯ್ದ ಪ್ರೇಕ್ಷಕರ ಮುಂದೆ ಹಾಡಿದಾಗ, ಇದು ಬೈಥಕಿಛಿ ಲಾವಣಿ ಎಂದು ಹೆಸರಾಯಿತು.
ಜನಪದ ಕಾವ್ಯದ ಕಥಾತ್ಮಕ ಭಾಗವನ್ನು ಕುರಿತದ್ದಾಗಿದೆ ಲಾವಣಿ. ಲಾವಣಿ ಮುಖ್ಯವಾಗಿ ಒಂದು ಹಾಡ್ಗತೆ. "ಕಥೆ ಹೇಳುವ ಗೀತೆ ಅಥವಾ ಗೀತೆಯಲ್ಲಿ ಹೇಳಿದ ಕಥೆ". ಲಾವಣಿಯು ಕ್ರಿಯೆಯ ಮೇಲೆ ಹೆಚ್ಚು ಒತ್ತು ನೀಡುತ್ತದೆ. ಕ್ರಿಯೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಕ್ರಮವನ್ನು ಅನುಸರಿಸುತ್ತದೆ. ಕ್ರಿಯೆ ಸಾಮಾನ್ಯವಾಗಿ ವಸ್ತುವಿನ ಸ್ವರೂಪದ್ದಾಗಿರುತ್ತದೆ. ಹಾಗೆಯೇ, ಲಾವಣಿಯಲ್ಲಿ ಸರಳತೆ ಸಹ ಒಂದು ಅಂಶವಾಗಿದೆ. ಲಾವಣಿಯು ಏಕ ಘಟನೆಯ ಮೇಲೆ ನಿಂತಿದೆ ಎಂಬುದು ಇನ್ನೊಂದು ಲಕ್ಷಣ. ಒಂದೇ ಘಟನೆಯ ಮೇಲೆ ನಡೆಯುವ ಕಥನ ಗೀತೆಗೆ ಮಾತ್ರ ಇದನ್ನು ಅನ್ವಯಿಸಬಹುದು. ಆದರೆ ದೀರ್ಘಕಾವ್ಯಗಳಿಗೆ ಇದನ್ನು ಅನ್ವಯಿಸಲಾಗುವುದಿಲ್ಲ.
ಆಶುರಚನೆ ಮತ್ತು ಸಂಪ್ರದಾಯ, ಲಾವಣಿಯ ಎರಡು ಸೂತ್ರಗಳು. ಲಾವಣಿಯ ವಿಚಾರ ಬಹಳಷ್ಟು ಪ್ರಾಚೀನವಾಗಿದ್ದು , ಮೇಳ ರಚನೆಯಲ್ಲಿ ಸೇರಿರುವ ಮತ್ತೊಂದು ಅಂಶವಾಗಿದೆ.
end
****
 following info is from https://kn.wikipedia.org/
ಲಾವಣಿ - ಗರಡಿಯ ಅಂಗಸಾಧನೆಯಲ್ಲಿ ಪರಿಶ್ರಮ ಹೊಂದಿದ ಆಸಾಮಿಗಳು ಗಮ್ಮತ್ತಿನಿಂದ ಲಾವಣಿ ಹಾಡುತ್ತಾರೆ. ಯುದ್ಧ ಬಂದಾಗ ಜನರನ್ನು ಜಾಗೃತಿಗೊಳಿಸಿ, ಹೋರಾಡಲು ಹುರುಪುಗೊಳಿಸುವ ಸಮ್ಮೋಹನಾಸ್ತ್ರವಿದು. ಪಶ್ಚಿಮದ ಜನಪದ ಸಾಹಿತ್ಯದ ಬ್ಯಾಲಡ್ ರಚನೆಗೆ ಇದನ್ನು ಹೋಲಿಸಬಹುದು. ಈಗಲೂ ಧಾರವಾಡ, ಹುಬ್ಬಳ್ಳಿ ಕಡೆ ತಲೆಗೆ ರಂಗಿನ ಮುಂಡಾಸು ಕಟ್ಟಿಕೊಂಡು, ಕಾಲಿಗೆ ಗೆಜ್ಜೆಕಟ್ಟಿಕೊಂಡು, ಕಡ ಹಿಡಿದುಕೊಂಡು ಲಾವಣಿಕಾರನಾದವ ತನ್ನ ಜೊತೆಗೆ ಮತ್ತೊಬ್ಬ ಅದೇ ರೀತಿ ಹಾಡುವವನನ್ನು ನಿಲ್ಲಿಸಿಕೊಂಡು ಬಲುಮೋಜಿನಿಂದ ಹಾಡುವುದುಂಟು. ಈ ಜಾತಿಯಲ್ಲಿ ತುರಾಯಿಲಾವಣಿ ಮತ್ತು ಕಲ್ಗಿಲಾವಣಿ ಎಂಬ ಭೇದವುಂಟು. ತುರಾಯಿಯವ ತಾಳಹಾಕುವ ಕಡಕ್ಕೆ ಹೂವಿನ ಅಲಂಕಾರ ಮಾಡುತ್ತಾನೆ. ಕಲ್ಗಿಯವ ಮಣಿಯನ್ನೋ ನವಿಲುಗರಿಯನ್ನೋ ತೊಡಿಸುತ್ತಾನೆ. ತುರಾಯಿಯವ ಹರಿಭಕ್ತನಾದರೆ ಕಲ್ಗಿಯವ ಶಿವ ಹಾಗೂ ಪರಾಶಕ್ತಿಯ ಭಕ್ತ. ಚೆನ್ನಾಗಿ ಹಾಡಿದಲ್ಲಿ ಲಾವಣಿ ಮಂದಿಯ ಮನಸ್ಸನ್ನು ಹೊಡೆದು ಜಎಬ್ಬಿಸುವುದರಲ್ಲಿ ಸಂದೇಹವಿಲ್ಲ. (ನೋಡಿ-ಕಲ್ಗಿ - ತುರಾಯಿ )
ಪಿರಿಯಾಪಟ್ಟಣದ ಕಾಳಗದ ಲಾವಣಿ ಚಾರಿತ್ರಿಕ ಲಾವಣಿಗೊಂದು ಉತ್ತಮ ನಿದರ್ಶನ. ವೀರರಾಜನಿಗೂ ಮೈಸೂರಿನ ದಳವಾಯಿಗೂ ನಡೆದ ಯುದ್ಧವನ್ನಿದು ವರ್ಣಿಸುತ್ತದೆ.
ಪಿರಿಯಾಪಟ್ಟಣದ ಜಗಳವ ಹೇಳುತೀನಿ ಕೇಳಿರಣ್ಣ ನೀವ್ ಸಭೆಯಲ್ಲಾ
ಅರಿಯದ ಹಸುಮಗ ದಳವಾಯ್ ಹೊಂಟರು ಮಾಡಲಿಕೆ ಹಲ್ಲಾ || ಪ ||
ಎಂಥ ಮಾತನು ಬರದೋ ರಣಹೇಡಿ ನಾಚಿಕೆಯಿಲ್ಲವೇ ನಿನಗೆ,
ಮತ್ತೆ ಮದ್ದುಗುಂಡು ಸಾಲದೆ ಹೋದರೆ ಕೊಡತೀನಿ ನಿನಗೆ,
ವ್ಯರ್ಥ ಹಮ್ಮು ನೀ ಮಾಡಿ ಕೆಡಬೇಡ ಬಾರೊ ರಣಾಗ್ರದೊಳಗೆ ||
ಸಮಸಾಟಿಯಾಗಿ ಎರಡು ಕೂಡಿತು ದಂಡು ಬೈಲಿನಾಗೆ
ಜಮಾಯಿಸಿ ಜಗಳ ಹತ್ತಿತು ನೋಡೊ ಕರ್ನ ಪಾರ್ಥರೀಗೆ
ನೇಮದಿ ಕಾದಿರುವಳು ಪೆರಿಯಪಟ್ಟಣದ ಮಾರಿ ಹೀಗೆ
ವೀರರಾಜಭೂಪಾಲನ ಅಗಲದೆ ಬೆನ್ಮ್ಯಾಗೆ
ತಮಾಂ ದಂಡು ಉರುಳಿ ಹೋಯಿತು ಮೂರು ಪಟಾಲಂ ದಳವಾಯ್ ಕಡೆಗೆ ||
ಹಲಗಲಿ ಬಂಟರ ಹತಾರದ ಕದನದ ಲಾವಣಿಯಿಂದ ಆರಿಸಿದ್ದು ಈ ಮುಂದಿನದು:
ಹೊತ್ತು ಬಂದಿತು ಮತ್ತ ನೋಡಿರಿ ಕತ್ತಿಹಿಡಿಯುವ ಜನಕ
ಸಿಟ್ಟಿನ ಮಂದಿ ಹಲಗಲಿ ಬಂಟರು ಮುಟ್ಟಲಿಲ್ಲೊ ದಡಕ ||
ವಿಲಾಯಿತಿಯಿಂದ ಹುಕುಮ ಕಳಿಸಿತು ಕುಂಪಣಿ ಸರಕಾರ
ಎಲ್ಲ ಜನರಿಗೆ ಜೋರಮಾಡಿ ಕಸಿದುಕೊಳ್ಳಿರಿ ಹತಾರ |
ಕಾರಸಾಹೇಬ ಬೆಂಕಿ ಚೂರಾದ ಲೂಟ್ ಮಾಡಂತನೋ ಊರಾ
ಸಿಟ್ಟಲೆ ಹೊಡೆದರು ಸಿಡಿಲ ಸಿಡಿದ್ಹಾಂಗ ಗುಂಡು ಸುರಿದಾದ ಭರಪುರಾ |
ರಾಮನ ಕಡಿದ ವಿಪರೀತಾ ಕಾಲುವೆ ಹರಿತೊ ರಕ್ತಾ
ಸಾವಿರ ಆಳಿಗೆ ಒಬ್ಬ ಕೂಗತಾನೊ ಕಡಿ ಕಡಿರಿ ಅಂತ ಮತ್ತಾ
ಊರು ಊರೆ ಇಲ್ಲದಾಯ್ತು ಊರಾಗಾಯ್ತು ಅಂತ ಲೂಟಾ
ಮನಿಮನಿ ಹೊಕ್ಕು ದಂಡು ಹುಡಿಕಿತು, ದನಕರ ಸಹಿತ ಲೂಟಾ
ಕೂಸುಕುನ್ನಿ ಹೋದಾವ ಸತ್ತು, ಬೆಂಕಿ ಹಚ್ಯಾರೊ ಕೂತ
ಬೂದಿ ಮಾಡ್ಯಾರೊ ಹಲಗಲಿ ಸುಟ್ಟು ಗುರುತುಳಿಯಲಿಲ್ಲ ಎಳ್ಳಷ್ಟು
ಹಾಳಾಗಿ ಹೋಯಿತೋ ! ಅತ್ತು ವರ್ಣಿಸಿ ಹೇಳಲಿನಾನೆಷ್ಟು.
ಲಾವಣಿಪದಗಳಲ್ಲಿ ದೇವತಾಸ್ತುತಿ, ದೇಶಪ್ರೇಮ, ಜನತೆಯ ಡೊಂಕನ್ನು ತಿದ್ದುವ ನೀತಿ, ಶೃಂಗಾರ, ವೀರ- ಇವೆಲ್ಲ ಉಂಟು.
ಅಂಬಾ ನಿನ್ನ ನಂಬಿದೆನು ಸಂಭ್ರಮದಿ ಸಲಹುವೆ ಕುಂಭಿಣಿಯೊಳೆಡಬಿಡದೆ
ಅಂಬಾ ತಾಯಿ | ಹಂಬಲಿಸಿ ಅಸುರರ ಕಂದರನ ಕೈಹಿಡಿದು ಸಲಹುವೆ
ಶಾಂಭವಿ ಸತಿ ಮಾಯಿ | ಅರುಣ ಕಿರಣವುಳ್ಳ ಧರಣಿ ಚಾಮುಂಡಿ ನಿನ್ನ
ಚರಣ ಶೃಂಗಾರವ ಪೇಳುವೆನು- ಇದು ಸ್ತುತಿ.
ಇದು ಬಹು ಗಮ್ಮತ್ತಿನ ಶ್ರೀರಂಗಪಟ್ಟಣದ ಲಾವಣಿ :
ಬೇಷಕ್ ತಮಾಷಾ ಟೈಗರ್ ನಿಶಾನಾ ಟೀಪುಸುಲ್ತಾನನ ಬಿರುದಾಯ್ತು
ಮಸಲತ್ ಮಾಡಿದ ಮೀರ್ಸಾದಕನಿಗೆ ದೇಶದ್ರೋಹಿ ಎಂದ್ಹೆಸರಾಯ್ತು || ಪ ||
ಚಾಲ್
ಸ್ವರಾಜ್ಯ ರಕ್ಷಣೆಗೋಸ್ಕರ ಸುಲ್ತಾನ್ ರಣಾಗ್ರಕ್ಹೊರಟನು ರೋಷದಲಿ
ಪರಂಗಿ ಸೋಲ್ಜರ್ ಮಧ್ಯದಿ ತುರಂಗಬಿಟ್ಟನು ತತ್ವದಲಿ |
ಪರಂಪರ ವಿರೋಧಿ ಫೌಜನು ಕುರಿಗಳಂದದಿ ಖಡ್ಗದಲಿ
ಸರಾಸರಿ ಇಲ್ ಬರೆಯಲು ಸಾಗದು ತರಿದನು ಎಷ್ಟೋ ಶಿಬಿರದಲಿ
ಪರಾಕ್ರಮದಿ ಬಲು ಹೋರಾಡಿ ಬಿದ್ದನು ಸಾರಂಗ ಬಾಗಿಲ ಗವಿಯ ಬಳಿ
ಪರಂಗಿ ಫೌಜಿನ ತರಂಗ ನುಗ್ಗಿತು ಶ್ರೀರಂಗಧಾಮನ ಪಟ್ನದಲಿ.
ಲಾವಣಿಗಳಲ್ಲಿ ಪಲ್ಲವಿ, ಚಾಲ್ ಉಡಾನ್, ಚಿಕ್ಕಉಡಾನ್, ಶ್ಲೋಕಗಳು ಅಡಕವಾಗಿರುತ್ತವೆ. ಆದಿ ಝಂಪ, ಚಾಪು ತಾಳಗಳನ್ನು ಸರಾಗವಾಗಿ ಉಪಯೋಗಿಸಲಾಗುತ್ತದೆ. ಜನಸಾಮಾನ್ಯರಲ್ಲಿ ಬಳಕೆಯಾದ ರಾಗಗಳನ್ನೇ ಇಲ್ಲಿ ಕಾಣಬಹುದು. ಉದಾ: ಯಮನ್, ಪೀಲು ಸಿಂಧುಭೈರವಿ, ಶಂಕರಾಭರಣ, ಮಧ್ಯಮಾವತಿ, ಮೋಹನ, ಇತ್ಯಾದಿ. ಹಾಡುವ ಶೈಲಿ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗಬಹುದು. ಶ್ಲೋಕಕ್ಕೆ ತಾಳವಿಲ್ಲ. ಮಿಕ್ಕ ಚಾಲ್ ಉಡಾನ್ಗಳಿಗೆ ತಾಳದ ಗತಿ ಉಂಟು. ಸರ್ಜಪ್ಪನಾಯಕನ ಲಾವಣಿಯೂ ಪ್ರಸಿದ್ಧವಿದೆ. ಐದುನೂರು ಪಾಳೆಯಗಾರರ ಕುರಿತು ಲಾವಣಿಗಳಿವೆ.
end
**** 





ಪ್ರಕಾರ....
23. ಕೋಲುಪದ/ಕೋಲಾಟದ ಹಾಡು - ದೇವಸ್ಥಾನದ ಮುಂದೆ ಕೋಲು ಪೂಜೆ ಮಾಡಿ ಕೋಲಾಟ ಆರಂಭಿಸಿ ಭಕ್ತಿ ಪ್ರದರ್ಶನ
 following info is from https://kn.wikipedia.org/
ಕೋಲಾಟವು ಕರ್ನಾಟಕ ರಾಜ್ಯಕ್ಕೆ ಸೇರಿದ ಜನಪ್ರಿಯ ಜಾನಪದ ನೃತ್ಯವಾಗಿದೆ. ಐತಿಹಾಸಿಕ ದಾಖಲೆಗಳ ಪ್ರಕಾರ ,ಕೋಲಾಟ ನೃತ್ಯವು ಏಳನೇ ಶತಮಾನದಲ್ಲಿ ಹುಟ್ಟಿಕೊಂಡಿದೆ[೧]. ಕೋಲಾಟ ಒಂದು ಗಂಡು ಕಲೆ, (ಹೆಣ್ಣು ಮಕ್ಕಳು ಕೋಲಾಡುವುದು ಅಪರೂಪ). ಹಾಡು ಮತ್ತು ಕುಣಿತವು ಬೆರೆತಿರುವಂತಹ ಕಲೆಯಾಗಿರುವುದು. ಗೋಕುಲದಲ್ಲಿ ಶ್ರೀಕೃಷ್ಣನ ಜನನವಾದಾಗ ಯಾದವರು ಕೋಲಾಡುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದುದು ಮತ್ತು ಗೋಪಿಕಾ ಸ್ತ್ರೀಯರು ಶ್ರೀ ಕೃಷ್ಣನೊಂದಿಗೆ ಬಣ್ಣದ ಕೋಲುಗಳಿಗೆ ಆಟವಾಡಿದುದು ಕೋಲಾಟದ ಪ್ರಾಚೀನವಾದ ಕಲೆಯನ್ನು ತಿಳಿಸುತ್ತದೆ. ಗಂಡಸರು ಹಾಗೂ ಹುಡುಗಿಯರ ಗುಂಪು ಎದುರಾಗಿ ನಿಂತು ನರ್ತಿಸುವ ಅಥವಾ ಹುಡುಗಿಯರು ಮಾತ್ರವೇ ನರ್ತಿಸುವ ದಕ್ಷಿಣ ಭಾರತದ ಉತ್ಸವಗಳಲ್ಲಿ ಒಂದು ಕೋಲು ನೃತ್ಯ. ಇದು ಕುಮ್ಮಿಗಳ ಕೈ ಚಪ್ಪಾಳೆ ನೃತ್ಯದಂತೆಯೇ ಇದೆ. ಇಲ್ಲಿ ನೃತ್ಯಗಾರರು ಕೈಯಲ್ಲಿ ಹಿಡಿದಿರುವ ಎರಡು ಕೋಲುಗಳನ್ನು ದೇಹದ ವಿವಿಧ ಭಾಗಗಳ ಬಳಿ, ತಲೆಯ ಮೇಲೆ, ಹೆಗಲ ಮೇಲೆ, ಹಿಂಭಾಗದಲ್ಲಿ, ಮೊಣಕಾಲ ಬಳಿ ಹೊಡೆಯುತ್ತಾರೆ. ಅಥವಾ ಸಂಗಾತಿಗಳ ಕೋಲನ್ನು ವಿವಿಧ ವಿನ್ಯಾಸಗಳಲ್ಲಿ ಹಾಗೂ ಲಯಗಳಲ್ಲಿ ಹೊಡೆಯುತ್ತಾರೆ. ಯುರೋಪಿನ ಕೋಲು ನೃತ್ಯಗಳಿಗಿಂತ ಈ ನೃತ್ಯದಲ್ಲಿ ಮೈ ಹಾಗೂ ಮೊಣಕಾಲಿನ ಬಳುಕುಗಳು ಗಮನಾರ್ಹವಾಗಿರುತ್ತದೆ. ಪಿನ್ನಾಲ್ ಕೋಲಾಟದಲ್ಲಿ ನೃತ್ಯಗಾರರು ಬಲಗೈಯಲ್ಲಿ ಒಂದು ಕೋಲನ್ನೂ ಎಡಗೈಯಲ್ಲಿ ಕೆಂಪು ಅಥವಾ ಬಿಳಿಯ ಹುರಿಯನ್ನು ಹಿಡಿದಿರುತ್ತಾರೆ. ಇವುಗಳನ್ನು ಅವರು ಮೆಪೋಲ್ ವಿನ್ಯಾಸದಲ್ಲಿ ಹೆಣೆಯುತ್ತಾ (ಮೇಪೋಲ್: ಮೇ ಉತ್ಸವದ ದಿನ ಅವರ ಸುತ್ತಲು ಕುಣಿಯುವುದಕ್ಕಾಗಿ ಬಣ್ಣ ಬಳಿದು ಹೂವಿನಿಂದ ಅಲಂಕರಿಸಿದ ಕಂಬ) ಅದೇ ಸಮಯದಲ್ಲಿ ಹೆಣೆವ ರೀತಿಯಲ್ಲಿ ಹೆಜ್ಜೆಗಳನ್ನು ಹಾಕುತ್ತಾ ಕೋಲುಗಳನ್ನು ಹೊಡೆಯುತ್ತಾರೆ. ಈ ಹೆಣೆಯುವಿಕೆ ಯುರೋಪಿಯನ್ ಮತ್ತು ಅಮೇರಿಕನ್ ಮೇಪೋಲ್ನ ವೃತ್ತಾಕಾರದ ಸುರುಳಿಗಷ್ಟೇ ಸೀಮಿತವಾಗಿರದೇ ಚೌಕಾಕೃತಿಯ ಮತ್ತು ಲಂಬಾಕೃತಿಯ ರಚನೆಗಳನ್ನೂ ಒಳಗೊಳ್ಳುತ್ತದೆ. ಮೂಲತಃ ಅವುಗಳಿಗೆ ಸಸ್ಯಜೀವನದ ಸಾಂಕೇತಿಕತೆ ಇದ್ದಿರಬಹುದು.
ಕೋಲಾಟ ಆಡುವ ಸಂದರ್ಭಗಳು
ನಮ್ಮಲ್ಲಿ ಹಬ್ಬ ಹರಿದಿನಗಳು, ಉತ್ಸವಗಳು, ವಿಶೇಷ ಸಮಾರಂಭಗಳು, ಕೋಲಾಟದ ಸಂದರ್ಭಗಳಲ್ಲಿ, ಕೋಲಾಟವನ್ನೇರ್ಪಡಿಸಲು ಕೋಲು ಹುಯ್ಯುವವರು. ಕನಿಷ್ಠ ಎಂಟು ಮಂದಿಯಿಂದ ಗರಿಷ್ಠ ಇಪ್ಪತ್ನಾಲ್ಕು ಮಂದಿಬೇಕು. ಕಣಿಕಣಿ ಎಂದು ಶಬ್ದ ಕೊಡುವಂಥ ಗಟ್ಟಿಯಾದ ಕೋಲುಗಳಿಗೆ ಎರಡನೇಯ ಮಹತ್ವ. ಸುಮಾರು ಮುಕ್ಕಾಲು ಅಡಿ ಉದ್ದವಿರುವ ಕಾರೆ, ಆಲೆ, ಬೈನೆ ಮುಂತಾದ ಮರಗಳಿಂದ ಮಾಡಿದ ಕೋಲು ಗೂಟಗಳು. ಇವುಗಳಿಗೆ ಬಣ್ಣ ಹಚ್ಚಿ ಗೀಲಿಟು ಮಾಡುವುದು ಉಂಟು. ಗೆಜ್ಜೆಗಳಿಗೆ ನಂತರದ ಸ್ಥಾನ. ಕೋಲಾಟವಾಡುವ ಆಳುಗಳು ತಮ್ಮ ಎರಡು ಕಾಲುಗಳಿಗೂ ಒಂದೊಂದು ಸರಗೆಜ್ಜೆಯನ್ನು ಕಟ್ಟಿಕೊಳ್ಳುತ್ತಾರೆ. ಕೋಲಾಟವಾಡುವವರ ಮಧ್ಯೆ ದಮ್ಮಡಿ ಬಾರಿಸುವವನು ಇರುತ್ತಾನೆ ಮತ್ತೊಬ್ಬ ತಾಳಗಳನ್ನು ಬಾರಿಸುತ್ತಾನೆ. ಇಷ್ಟು ಪರಿಕರಗಳನ್ನೊಳಗೊಂಡು ಕೋಲಾಟ ಪ್ರಾರಂಭವಾಗುತ್ತದೆ. ಕೆಲವು ಕಡೆ ಮತ್ತೊಂದು ವಿಶೇಷ ಸಾಧನವಿರುವುದುಂಟು. ಸುಮಾರು ಎರಡು ಅಥವಾ ಎರಡೂವರೆ ಅಡಿ ಎತ್ತರದ ಮರಗಾಲುಗಳನ್ನು ಒಬ್ಬ ವ್ಯಕ್ತಿ ತನ್ನ ಕಾಲಿಗೆ ಕಟ್ಟಿಕೊಂಡು ಕೋಲಾಟದವರ ಮಧ್ಯೆ ಕುಣಿಯುತ್ತಿದ್ದು ನೋಡುವವರಿಗೆ ತಮಾಷೆಗಾಗಿ ಕಾಣಿಸುತ್ತಾನೆ.
ಕೋಲು ಪದ
ಕೋಲಾಟದಲ್ಲಿ ಕೋಲುಪದಗಳಿಗೆ ಹೆಚ್ಚು ಪ್ರಾಮುಖ್ಯತೆ. ಇವು ಪ್ರಾಸ, ಚರಣ, ಪಲ್ಲವಿಗಳಿಂದ ರಚಿತವಾಗಿರುತ್ತದೆ. ವಿನೋದ, ದುರಂತ, ಪ್ರಣಯ ಮುಂತಾದ ವಸ್ತುಗಳನ್ನೊಳಗೊಂಡ ಕೋಲುಪದಗಳು ಕೋಲಾಟದ ಅವಿಭಾಜ್ಯ ಅಂಗ. ಕೋಲಾಟದವರ ವೇಷವೆಂದರೆ ಚಡ್ಡಿ ಅಥವಾ ಮೊಣಕಾಲಿನವರೆಗೆ ಎತ್ತಿಕಟ್ಟಿದ ಪಂಚೆ, ಒಳ ಅಂಗಿ, ಸೊಂಟಕ್ಕೆ ಒಂದು ವಸ್ತು ಮತ್ತು ಕಾಲಿಗೆ ಗೆಜ್ಜೆ. ಕೊಡವ, ಗೊಲ್ಲ ಮತ್ತು ಲಂಬಾಣಿ ಜನಾಂಗಗಳಲ್ಲಿ ಕೋಲಾಟವು ಹೆಚ್ಚು ಪ್ರಯೋಗಗೊಳ್ಳುತ್ತದೆ. ಆ ಜನಾಂಗಗಳಲ್ಲಿ ಹೆಂಗಸರೂ ಕೋಲಾಟವಾಡುವುದುಂಟು. ಉತ್ತರ ಕರ್ನಾಟಕದ ಕೆಲವೆಡೆ ಕೋಲಾಟವು ದೈವೀ ಆರಾಧನೆಯೊಡನೆ ಸಂಬಂಧವುಳ‍್ಳದ್ದಾಗಿದೆ. ಆಶ್ವಯುಜ ಮಾಸದಲ್ಲಿ ಹುಣ್ಣಿಮೆಯ ದಿನ ಶಾಸ್ತ್ರೋಕ್ತವಾಗಿ ಕಾಡಿಗೆ ಹೋಗಿ ಅಲ್ಲಿ ಗಂಧ, ಕೊಡಸು, ಬೈನೆ, ಹೊನ್ನೆ ಮರಗಳಲ್ಲಿ ಮಾತ್ರ ಕೋಲುಗಳನ್ನು ಕಡಿದು ತರುತ್ತಾರೆ. ಐದು ಜನ ಉಪವಾಸವಿದ್ದು ಮರಗಳಿಗೆ ಪೂಜಿಸಿ ಒಂದು ಮರಕ್ಕೆ ಒಂದೇ ಜೊತೆ ಕೋಲನ್ನು ಗೋಧೂಳಿ ಲಗ್ನದಲ್ಲಿ ಕಡಿಯಬೇಕೆಂಬ ನಿಯಮವೂ ಉಂಟು. ಇದಕ್ಕಾಗಿ ಕೆಲವು ಮನೆತನಗಳೇ ಇವೆ. ಆನಂತರ ಹದಿನೈದು ದಿನಗಳ ಕಾಲ ಕೋಲಾಟದ ಅಭ್ಯಾಸ ನಡೆಸಿ ದೀಪಾವಳಿ ವೇಳೆಗೆ ದೇವರ ಮುಂದೆ ಪ್ರದರ್ಶಿಸುವ ಸಂಪ್ರಾದಯವಿದೆ. ಕೃಷ್ಣ ಹುಟ್ಟಿದಾಗ ಯಾದವರು ಕೋಲಾಟವಾಡಿದುದು, ಗೋಪಿಕಾ ಸ್ತ್ರೀಯರು ಕೃಷ್ಣನೊಂದಿಗೆ ಕೋಲಾಟವಾಡಿದ ಸನ್ನಿವೇಶಗಳು ಪುರಾಣದಲ್ಲಿ ಉಲ್ಲೇಖವಾಗಿದೆ. ಕೋಲಾಟ ಪ್ರಾರಂಭವಾಗುವುದು ಗಣೇಶನ ಪ್ರಾರ್ಥನೆಯೊಡನೆ. ಮೊದಲಿಗೆ ಕಲಾವಿದರು ವರ್ತುಲಾಕಾರದಲ್ಲಿ ನಿಲ್ಲುವರು. ಮಧ್ಯೆ ಕೋಲುಗಳನ್ನಿಟ್ಟು ಪೂಜಿಸಿ ತಮ್ಮ ಮುಖಂಡನಿಗೆ ವಂದನೆ ಮಾಡಿದ ಬಳಿಕ ಗಣಪತಿ, ಇಷ್ಟದೈವ, ಗ್ರಾಮದೇವತೆ, ಪ್ರಕೃತಿ, ಶರಣ, ವೀರ ಮುಂತಾದವರ ಸ್ತುತಿ ಮಾಡುವರು. ಅನಂತರ ಕೋಲಾಟ ಪ್ರಾರಂಭವಾಗುತ್ತದೆ. ಮಧ್ಯೆ ಮಧ್ಯೆ 'ಥೈಯ್ಯ', 'ಉಡುದೈಯ' ಎಂದು ಒಂದಿಬ್ಬರು ಕೂಗುವುದುಂಟು. ಆಟದ ಮುಕ್ತಾಯದಲ್ಲಿ "ತಾಕಿತು, ತಗುಲಿತು ಯಾಕ್ಹಿಂಗಾಯಿತು ಥೈಯ್ಯ, ಥೈಯ್ಯ ಥಗಡದತ್ತೈಯ್ಯ" ಎಂದು ಹೇಳಿ ಮುಗಿಸುವ ಸಂಪ್ರದಾಯ ಉಂಟು.
end
****
 following info is from https://kn.wikipedia.org/
ಕೋಲಾಟ
ಕರ್ನಾಟಕದ ಎಲ್ಲ ಕಡೆಗಳಲ್ಲೂ ಕೋಲಾಟಗಳು ಆಕರ್ಷಣೀಯವಾಗಿರುತ್ತವೆ. ಅವುಗಳಲ್ಲಿ ವೀರರಸ ಹೆಚ್ಚು. ಸೊಗಸಾದ ಗೀತೆಗಳನ್ನು ಹಾಡುತ್ತ ನರ್ತಕರು ಕೋಲು ಹಿಡಿದು ಚಕ್ರಾಕಾರವಾಗಿ ನಿಂತು ಹಾಡಿಗೆ ಸರಿಯಾಗಿ ಗೆಜ್ಜೆಕಾಲಿನ ಹೆಜ್ಜೆಗಳನ್ನು ಹಾಕುತ್ತ, ಕೋಲು ಹೊಯ್ಯುತ್ತ ಕುಣಿಯುತ್ತಾರೆ. ನೃತ್ಯ ಸಾಗಿದಂತೆ ಪದ್ಮ, ಚಕ್ರ, ಕೋಟೆ, ಜಡೆ ಮುಂತಾದ ಆಕೃತಿಗಳಲ್ಲಿ ನರ್ತಿಸುತ್ತಾರೆ. ಪದವನ್ನು ಚೆನ್ನಾಗಿ ಹಾಡುವವನೇ ಮುಖಂಡ.
ದಿನವೆಲ್ಲ ದುಡಿದುಸೋತ ರೈತರು ಸುಗ್ಗಿಯ ದಿನಗಳ ರಾತ್ರಿ ಬೆಳದಿಂಗಳಲ್ಲಿ ಕೋಲುಗಳನ್ನು ಕುಟ್ಟುತ್ತ ಪದವನ್ನು ಹಾಡುತ್ತ ಗುಂಪುಗುಂಪಾಗಿ ಕೋಲಾಟವಾಡುತ್ತಾರೆ. ಈ ಕೋಲು ಪದ್ಯಗಳ ಸಾಹಿತ್ಯ ಬಹಳ ಸೊಗಸು. ಈ ಪದಗಳಲ್ಲಿ ಉತ್ಸಾಹ ಆನಂದ ರಸಗಳೇ ಪ್ರಧಾನ. ಗಂಡಸರೇ ಹೆಚ್ಚಾಗಿ ನಡೆಸುವ ಈ ಕೋಲಾಟಗಳನ್ನು ಕೆಲವೆಡೆ ಹೆಂಗಸರೂ ಆಡುತ್ತಾರೆ. ಕೋಲಾಟಗಳಲ್ಲಿ- ಒಂಟಿಕೋಲು, ಜೋಡಿಕೋಲು, ತೊಟ್ಟಿಲುಕೋಲು, ಸುತ್ತುಕೋಲು ಇತ್ಯಾದಿ ವಿಧಗಳಿವೆ. ಕೋಲಾಟವಾದ ಮೇಲೆ ಕೋಲುಗಳನ್ನು ಭೂಮಿತಾಯಿಗೆ ಒಪ್ಪಿಸುವುದರಲ್ಲೂ ಒಂದು ರೀತಿ ಇದೆ.
ಕೋಲಾಟದ ಪದ
ಕೋಲು ಹಾಕಲು ಕನಿಷ್ಠ ಆರು ಜನ ಬೇಕು. ಹನ್ನೆರಡಿದ್ದರೆ ದೊಡ್ಡ ಗುಂಪು. ಕಾಲಿಗೆ ಗೆಜ್ಜೆಕಟ್ಟಿಕೊಂಡು, ಭಾಗವಹಿಸುವ ಎಲ್ಲ ಮಂದಿ ಬಣ್ಣ ಬಣ್ಣದ ಬಟ್ಟೆ ಧರಿಸಿಕೊಂಡು ಕೋಲಿನ ತಾಳಕ್ಕೆ ಸರಿಯಾಗಿ ಹಾಡುತ್ತ ಕುಣಿಯುತ್ತಾರೆ. ಮೊದಲು ಪ್ರಾರಂಭಕ್ಕೆ, ಮತ್ತೆ ಮುಕ್ತಾಯಕ್ಕೆ ಸರಿಯಾಗಿ ಕಲಿಸಿದವನ ಸಂಕೇತ ಉಂಟು. ಬಗೆಬಗೆಯ ನಡಿಗೆ, ತಿರುಗುವಿಕೆ, ದನಿಯ ಏರು ಇಳಿತ ಮಂದಗತಿ, ತೀವ್ರ ಗತಿಗಳ ವಿನ್ಯಾಸ ಉಂಟು. ಚಿಕ್ಕ ಕೋಲಾಟ, ಜಡೆಕೋಲಾಟಗಳ ಮಾದರಿಗಳು ಬೇರೆ ಬೇರೆ. ಒಬ್ಬ ಸೊಲ್ಲು ಹೇಳಿಕೊಟ್ಟಂತೆ ಮಿಕ್ಕವರು ಹಾಡುವರು. ಸಪ್ತತಾಳಗಳೂ ಜನಪ್ರಿಯವಾದ ನವರಾಗಗಳೂ ಬಳಕೆಯಲ್ಲುಂಟು. ಕೋಲು ರನ್ನದಾ ಕೋಲನ್ನ-ಏಕೋಲು ಕೋಲು ಕೋಲನ್ನ ಅಥವಾ ತಾನು ತಾನಂದನೋ ತಂದನೋ ತಾನಾನು ತಂದನಾನೋ- ಎಂದು ತಾಳದ ಗತಿಗೆ ಹಾಡಿಕೊಳ್ಳುತ್ತಿರುವಂತೆ ಕೋಲಾಟ ಮೊದಲಾಗುತ್ತದೆ. ಉದಾ.-ಮಾತಾಡ್ ಮಾತಾಡ್ ಮಲ್ಲಿಗೆ-ಶಾವಂತಿಗೆ ಇರುವಂತಿಗೆ. ತ್ರಿಪದಿಗಳನ್ನೂ ಕೋಲಿಗೆ ಸರಿಪಡಿಸಿಕೊಳ್ಳುತ್ತಾರೆ.

ಮೂಡಲ್ ಕುಣಿಗಲುಕೆರೆ ನೋಡೋಕ್ ಒಂದೈಭೋಗ
ಮೂಡೀ ಬರ್ತಾನೆ ಚಂದಿರಾಮಾ-ತಾನಂದನೋ
ಮೂಡೀ ಬರ್ತಾನೆ ಚಂದಿರಾಮಾ
ಬಾಳೇಯ ಹಣ್ಣಂತೆ ಬಾಗಿದ್ ಕುಣಿಗಲ್ಕೆರೆ
ಭಾವ ತಂದನೆ ಬಣ್ಣದ್ ಸೀರೆ-ತಾನಂದನೋ
ಭಾವ ತಂದನೆ ಬಣ್ಣದ್ ಸೀರೆ ||
ಕೋಲಾಟದ ವಿಧಗಳು
೧. ಸುತ್ಕೋಲು
೨. ದಾಟ್ಕೋಲು
೩. ತೂಗು ಕೋಲು
೪. ಬಿಚ್ಚು ಕೋಲು
೫. ಸಾಲು ಕೋಲು
೬. ಒಂದಾಳ್ ಸುತ್ತು
೭. ಎರಡಾಳ್ ಸುತ್ತು
೮. ಮೂರಾಳ್ ಸುತ್ತು
೯. ಆಳು ಕಂಡು ಆಳು
೧೦. ಮಲ್ಕಿನ ಕೋಲು
೧೧. ಮುರವಯ್ಯನ ಕೋಲು
೧೨. ಐದು ಚಿಟಗೆನ ಕೋಲು
೧೩. ಎರಡಾಳು ಜಗ್ಗು
೧೪. ಗೀಜಗನ ಕೋಲು
೧೫. ಹುಲಿದನವಿನ ಕೋಲು
೧೬. ಗೀರ್ ಕಡ್ಡಿ ಕೋಲು
೧೭. ಒಂಟಿಕೋಲು
೧೮. ತೆಕ್ಕೋಲು
೧೯. ವಸ್ತ್ರ ಕೋಲು
೨೦. ರಂಗೋಲಿ ಕೋಲು
೨೧. ಧಾಳಂಧುಳಿ
೨೨. ಒನಿಕೆ ಆಟ
೨೪. ಚಕ್ರದಾಟ
೨೫. ಎಡಚಂಟಿಗೆ
೨೬. ಏಳು ಚುಟಿಗಿ
೨೭. ಚೌದಾ ಚುಟುಗಿ
೨೮. ಪಂಚವದನ
೨೯. ಝಲಾ
೩೦. ತಾಳಕುಟ್ಟಿಗೆ
೩೧. ತಿಪ್ಪರಿ
೩೨. ಒಂಟಿ ಕಡ್ಡಿ
೩೩. ಆರ್ಕಡ್ಡಿ
೩೪. ಕಾಳ್ಗಡ್ಡಿ
೩೫. ತಟ್ಕಡ್ಡಿ
೩೬. ಓನಾಟು
೩೭. ಏಳು ಚುಟುಕಿ
೩೮. ಒಂಬತ್ತು ಚುಟಕಿ
೩೯. ಮೇರಿ ಕೋಲು
೪೦. ಗೋಪಿನ ಕೋಲು
೪೧. ಚಿತ್ತಾರ ಗೊಂಬೆ ಕೋಲು
೪೨. ಚಂಡಾಡುವ ಕೋಲು
೪೩. ಉಯ್ಯಾಲೆ ಕೋಲು
೪೪. ದಂಡೆ ಕೋಲು
೪೫. ಸೋಬಾನೆ ಕೋಲು
೪೬. ಹರುಗೋಲು
೪೭. ಚಕ್ಕೆ ಕೋಲು
೪೮. ಅಲವಣಿ ಕೋಲು
೪೯. ಉದ್ರಿ ಕೋಲು
೫೦. ಚಿನ್ನಾಡಿ ಕೋಲು
ಗಣೇಶ ಸ್ತುತಿಯೊಂದಿಗೆ ಆರಂಭವಾಗುವ ಕೋಲಾಟವು ನಂತರ ಎಲ್ಲರೂ ಸುತ್ತಲೂ ನಿಂತು ಮಧ್ಯೆ ಕೋಲುಗಳನ್ನಿಟ್ಟು ಕೈಮುಗಿದು, ಕೋಲಾಟ ಕಲಿಸಿದ ಗುರುವಿಗೆ ನಮಸ್ಕಾರ ಮಾಡಿ ಕೋಲನ್ನು ಮುಟ್ಟುತ್ತಾರೆ. ಕೋಲುಗಳ ಸಪ್ಪಳವು ನಿಧಾನಗತಿಯಲ್ಲಿ ಆರಂಭವಾಗುವುದು.
end
****





ಪ್ರಕಾರ.... 
24. ಗೀ ಗೀ ಪದ - ಗೀಗೀ ಶ್ರುತಿ ಹಾಕಿ, ಶ್ರುತಿದೇವ (ಗಣಪತಿ) ಶ್ರುತಿದೇವಿ (ಸರಸ್ವತಿ) ಎಂದು ಹಾಡುವ ಪದ್ದತಿ ಗೀಗೀ ಪದ ಕ್ರಿ ಶ 1875 ರಲ್ಲಿ ಜನಕ
 following info is from https://kn.wikipedia.org/
ಈ ಗೀಗೀ ಪದದ ಜನನವಾದುದು 1875ರಲ್ಲಿ. ಮೊದಲಿನಿಂದಲೂ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದ ಮಾಯಾಮ್ಮನ ಜಾತ್ರೆಯಲ್ಲಿ ಕನ್ನಡ ಲಾವಣಿಕಾರರೂ ಮರಾಠಿ ಲಾವಣಿಕಾರರೂ ಕೂಡಿ ವಾದದ ಲಾವಣಿಗಳನ್ನು ಹಾಡುತ್ತಿದ್ದರು. 1875ರ ಮಾಯಮ್ಮನ ಜಾತ್ರೆಯಲ್ಲಿ ಮರಾಠಿ ಲಾವಣಿಕಾರರು ಡಪ್ಪು ಉಪಯೋಗಿಸಿ ಲಾವಣಿ ಹಾಡಿದರು. ಅದೇ ದಿನ ರಾತ್ರಿ ಕನ್ನಡಿಗರು ಡಪ್ಪು, ತುಂತುಣಿ, ತಾಳ ಬಾರಿಸಿ ಮೇಳ ಮಾಡಿದರು. ತುಂತುಣಿ, ತಾಳ ಬಾರಿಸುವವರು ಗೀಗೀ ದನಿ ಎಳೆದರು. ಈ ರಚನೆ ಮಾಡಿದವರಲ್ಲಿ ತೇರದಾಳ ಅಣ್ಣು ಯಂಕಾರಾಮ ಮುಖ್ಯನಾದವ. ಇವನೇ ಗೀಗೀ ಶ್ರುತಿ ಹಾಕಿ, ಶ್ರುತಿದೇವ (ಗಣಪತಿ) ಶ್ರುತಿದೇವಿ (ಸರಸ್ವತಿ) ಎಂದು ಹಾಡಿ ಗೀಗೀ ಪದಗಳ ಜನಕನೆಂದು ಕರೆಯಿಸಿಕೊಂಡ. ಅನಂತರ ಚಿಂಚಲಿ ಜಾತ್ರೆಯಲ್ಲಿ ಹಾಡುಗಳನ್ನು ಕೇಳಲು ಜನ ಕೂಡುವ ಸ್ಥಳ (ನಾಕಾಕಟ್ಟೆ) ಗೀಗೀಕಟ್ಟೆ ಎಂದು ಹೆಸರಾಯಿತು. ಗೀಗೀ ಮೇಳದವರಿಗೆ ಚಿಂಚಲಿ ಮೂಲಸ್ಥಳವಾಯಿತು. ಕನ್ನಡ ಲಾವಣಿಯೇ ಗೀಗೀ ಪದವಾಗಿ ಮಾರ್ಪಟ್ಟಿತು. ಅನಂತರ ಕನ್ನಡ ಗೀಗೀ ಪದ ಮರಾಠಿ ಜೀಜೀ ಪದಗಳ ಹುಟ್ಟಿಗೆ ಕಾರಣವಾಯಿತು.
ಗೀಗೀ ಪದಗಳ ರೀತಿ
ಗೀಗೀ ಪದಗಳಲ್ಲಿ ಮುಖ್ಯ ಗೀಗೀ ಹಾಡುಗಾರ ‘ಡಪ್ಪಿಗೆ’ ಗತ್ತಿನ ಕಡಿತ (ಪೆಟ್ಟು) ಹಾಕಿ ಪದ ಹಾಡುತ್ತಾನೆ. ಅವನ ಹಿಂದೆ ತುಂತುಣಿ ಹಾಗೂ ತಾಳ ಹಿಡಿದ ಇಬ್ಬರು ತಾಳ ಮತ್ತು ಲಯಗಳನ್ನೊಳಗೊಂಡ ಗೀಗೀ ದನಿ ಬೀರುತ್ತಾರೆ. ಜನಾಕರ್ಷಣೆಗಾಗಿ ರಮ್ಯವಾಗಿ ಡಪ್ಪು, ತುಂತುಣಿ ಮತ್ತು ತಾಳನುಡಿಸುತ್ತಾರೆ. ಡಪ್ಪು ವರ್ತುಳಾಕಾರದ 5-7.5ಸೆಂಮೀ. ದಪ್ಪವಾದ, 1.20-1.5ಮೀ ಪರಿಘವಿರುವ ಗಾಲಿಗೆ ಮತ್ತು ಅದಕ್ಕಿಂತ ಸಣ್ಣದಾದ ಕಬ್ಬಿಣದ ವರ್ತುಲಕ್ಕೆ ಸೇರಿದಂತೆ ಆಡಿನ ಚರ್ಮದಿಂದ ಹಲಗೆ ತಯಾರಿಸಿ ಎಡಗೈಯಲ್ಲಿ ಹಿಡಿದು ಬಲಗೈಯಿಂದ ಹದರು ಹಚ್ಚಿ ಬೆರಳು ಆಡಿಸಿ ಬಡಿದು ನಾದ ಹೊರಡಿಸುವ ವಾದ್ಯ. ತುಂತುಣಿ ಮರದ ತುಂಡಿನ 2.5ಸೆಂ.ಮೀ ಸಿಲಿಂಡರಿನಾಕಾರದ್ದಾಗಿದ್ದು, ಹಿಂಬದಿಗೆ ಮೇಕೆಯ ಆಡಿನ ಚರ್ಮವನ್ನು ಬಿಗಿದು ಒಂದು 90ಸೆಂಮೀ. ಬಿದರಿನ ತುಂಡನ್ನು ಸಿಲಿಂಡರಿಗೆ ಜೋಡಿಸಿ, ಅದರ ತುದಿಯಲ್ಲಿ ಒಂದು ಬೆಣೆಯನ್ನು ಕೂರಿಸಿ ತಂತಿಯನ್ನು ಬೆಣೆಗೂ ಹಿಂಬದಿಯ ಚರ್ಮದ ಮಧ್ಯಕ್ಕೂ ಜೋಡಿಸಿ ತಯಾರಿಸಿದ, ಬಲಗೈಯಲ್ಲಿ ಹಿಡಿದ ಕಡ್ಡಿಯಿಂದ ತಂತಿಯನ್ನು ಮಿಡಿದು ನಾದ ಹೊಮ್ಮಿಸುವ ವಾದ್ಯ. ಗೀಗೀ ಮೇಳದವರಿಗೆ ಚಾಲು (ಆರಂಭ) ನುಡಿತ, ಏರು ನುಡಿತಗಳೂ ಮುಖ್ಯ. ಇಳುವಿನಲ್ಲಿ ಸೌಮ್ಯ ಸಂಗೀತವಿರುತ್ತದೆ. ಒಮ್ಮೇಳವಾಗಿ (ಸಂಗಡಿಗರು) ಹಾಡುವುದು, ಬಾರಿಸುವುದು ಸಾಗುತ್ತದೆ.
ಗಂಡು-ಹೆಣ್ಣಿನ ವಾದದ ಮೇಳಗಳು
ಗೀಗೀ ಮೇಳದಲ್ಲಿ ಮೊದಲಿಗೆ ಹರದೇಶಿ (ತುರಾಯಿ) ಗೀಗೀ ಮೇಳ, ನಾಗೇಶಿ (ಕಲ್ಕಿ) ಗೀಗೀ ಮೇಳ ಎಂದು ಗಂಡು-ಹೆಣ್ಣಿನ ವಾದದ ಮೇಳಗಳು ಪ್ರಾರಂಭವಾದವು. ಗಂಡಸರ ಪಂಗಡ ಪುರುಷನನ್ನು (ಶಿವ) ಹೆಚ್ಚುಮಾಡಿ ಹಾಡುವುದು, ಹೆಂಗಸರ ಪಂಗಡ ಸ್ತ್ರೀಯನ್ನು (ಶಕ್ತಿ) ಹೆಚ್ಚುಮಾಡಿ ಹಾಡುವುದು ಸಂಪ್ರದಾಯವಾಯಿತು. 1925ರಿಂದ ಈಚೆಗೆ ಗೀಗೀ ಮೇಳದವರು ಲೌಕಿಕ ಹಾಡುಗಾರರಾಗಿ ಮಾರ್ಪಟ್ಟರು. ರಾಷ್ಟ್ರೀಯ ಗೀಗೀಮೇಳಗಳು ಹುಟ್ಟಿಕೊಂಡವು. ಭಾರತದೇಶ, ದೇಶದ ಜನ, ದೇಶದ ಸ್ಥಿತಿ, ಸಂಸ್ಕೃತಿ, ರೀತಿ, ನೀತಿ ಇತ್ಯಾದಿ ಕುರಿತು ಗೀಗೀ ಪದಗಳು ಪ್ರಾರಂಭವಾದವು. ಇಂಥ ಗೀಗೀಮೇಳಗಳಲ್ಲಿ ಹುಲಕುಂದ ಗೀಗೀ ಮೇಳ ಮುಖ್ಯವಾದ್ದು. ಹುಲಕುಂದದ ಭೀಮಸಿಂಗ ಕವಿ, ಶಿವಲಿಂಗ, ಪಾಂಡುರಂಗ, ಚನಬಸು, ಕಂದಭೀಮಸಿಂಗ ಇವರು ಗೀಗೀ ಗಂಗೋತ್ರಿಯನ್ನೇ ಹರಿಸಿದರು. ತಿಗಡೊಳ್ಳಿ ಗೀಗೀಮೇಳ, ಹೊಸೂರು ಗೀಗೀ ಮೇಳ, ಹೊಸಕೋಟೆ ತಮ್ಮಣ್ಣನ ಗೀಗೀಮೇಳ, ಗೋಕಾಂವಿ ಗೀಗೀ ಮೇಳ, ಬಿದರೆ ಗೀಗೀ ಮೇಳ, ರಾಯಚೂರು ಗೀಗೀ ಮೇಳ, ಬೆಳಗಾಂವಿ ಗೀಗೀ ಮೇಳ, ಬಿಜಾಪುರ ಗೀಗೀಮೇಳ, ಕಲಬುರ್ಗಿ ಗೀಗೀಮೇಳ, ಚಿತ್ರದುರ್ಗ ಗೀಗೀಮೇಳ, ಬೆಂಗಳೂರು ಗೀಗೀಮೇಳ, ಇತ್ಯಾದಿ ಮೇಳಗಳು ಹುಟ್ಟಿಕೊಂಡು ರಾಷ್ಟ್ರದ ಸ್ವಾತಂತ್ರ್ಯಹೋರಾಟ ಕಾಲದಲ್ಲಿ ಜನಜಾಗೃತಿಯನ್ನುಂಟುಮಾಡಿದವು. ಜ್ಞಾನಪ್ರಸಾರಕಾರ್ಯ ಕೈಗೊಂಡವು. ಇಂದು ಕರ್ನಾಟಕದಲ್ಲಿ ಎರಡು ನೂರಕ್ಕೂ ಹೆಚ್ಚು ಗೀಗೀ ಮೇಳಗಳಿವೆಯೆಂದು ತಿಳಿದುಬರುತ್ತದೆ.
ಗೀಗೀ ಪದಗಳ ವೈವಿಧ್ಯ
ಗೀಗೀ ಪದದ ಹಾಡುಗಾರರು ಸ್ತೋತ್ರ ಪದಗಳು, ಪೌರಾಣಿಕ ಪದಗಳು, ಐತಿಹಾಸಿಕ ಪದಗಳು, ಚಾರಿತ್ರಿಕ ಪದಗಳು, ಆರ್ಥಿಕ ಪದಗಳು, ಸಾಮಾಜಿಕ ಪದಗಳು, ನೈತಿಕ ಪದಗಳು, ಹಾಸ್ಯದ ಪದಗಳು, ಒಗಟಿನ ಪದಗಳು ಇತ್ಯಾದಿಗಳನ್ನು ಹಾಡುತ್ತಾರೆ. ಪದಗಳ ಮುಕ್ತಾಯದಲ್ಲಿ ಹಾಡು ರಚಿಸಿದ ಕವಿಯ ಊರು ಹೆಸರುಗಳಿರುತ್ತವೆ. ಗೀಗೀ ಪದಗಳು ಜನಮನವನ್ನು ತಿದ್ದುವ, ಜ್ಞಾನ ಹೆಚ್ಚಿಸುವ, ನೀತಿ ತಿಳಿಸುವ, ವೈಚಾರಿಕ ಜನಪದ ಪರಂಪರೆಯ ಗೀತೆಗಳಾಗಿವೆ. ಈ ಪದಗಳಲ್ಲಿ ಜಾನಪದ ಶಬ್ದಸಂಪತ್ತು ಬಹುವಾಗಿವೆ. ಉತ್ತರ ಕರ್ನಾಟಕದಲ್ಲಿ ಗೀಗೀ ಮೇಳ ಕಟ್ಟಿಕೊಂಡು ಗೀಗೀ ಪದ ಹಾಡುವವರು ಹೆಚ್ಚಾಗಿ ಹರಿಜನ ಮಹಿಳೆಯರು. ಸ್ತ್ರೀಪಂಗಡದಲ್ಲಿ ಒಬ್ಬರು ಮುಮ್ಮೇಳ ಹಾಡುಗಾರ್ತಿಯೂ ಹಿಮ್ಮೇಳಕ್ಕೆ ಈರ್ವರು ಪುರುಷರೂ ಇರುತ್ತಾರೆ. ಈ ಕಲೆ ಅವರ ಹೆಮ್ಮೆಯ ಪರಂಪರೆಯಾಗಿದೆ. ಹಾಡುಗಾರರು ತಮಗೆ ಸುಂದರವಾಗಿ ಕಾಣುವ ಇಷ್ಟವಾದ ಉಡುಗೆ ತೊಡುಗೆಗಳನ್ನು ಧರಿಸುತ್ತಾರೆ.
ಗೀಗೀ ಪದಗಳನ್ನು ಚೌಡಿಕೆಯವರೂ ಗೊಂದಲಿಗರೂ ಸಿದ್ಧಕ ಸಿದ್ಧಿಗಳೂ (ಜಾತಿಗಾರರು) ಕರ್ಬಲ್ ಹಾಡುಗಾರರೂ ಹಾಡತೊಡಗಿದ್ದಾರೆ.
end
****
 following info is from https://kn.wikipedia.org/
ಗೀಗೀಪದ - ಏಕನಾದದ ಶೃತಿಗೆ ಕಥನಕವನವನ್ನೋ ಸಂತರ, ವೀರರ ಕಥೆಯ ಹಾಡನ್ನೋ ಇಬ್ಬರು ಕೂಡಿ ಹಾಡುವರು. ಪ್ರತಿ ಚರಣ ಮುಗಿದೊಡನೆ ಗೀಗೀ ಗೀಗೀ ಎಂದು ತಾಳಕ್ಕೆ ಸರಿಯಾಗಿ ಶೃತಿಗೂಡಿಸುವರು. ತೆಲುಗಿನಲ್ಲಿ ತಂದ ನಾನು ತಂದಾನುತಾನಾ ಎನ್ನುವರು. ಇಡೀ ರಾತ್ರಿ, ಮಲೆನಾಡಿನ ಅಡಕೆತೋಟದ ಪ್ರದೇಶಗಳಲ್ಲಿ ಮನೋರಂಜನೆಯಾಗಿ ಈ ಪದ ಹಾಡುವುದು ವಾಡಿಕೆ. ಮರಾಠಿಯಲ್ಲೂ ಇಂಥ ಪದಗಳಿವೆ.
end
****
 





ಪ್ರಕಾರ....
25. ಜೋಗಳದ ಹಾಡು - ತೊಟ್ಟಿಲಲ್ಲಿ ಮಗು ಮಲಗಿಸಿ ಜೋ ಜೋ ಎಂಬ ಪಲ್ಲವಿಯೊಡನೆ ತೂಗುತ್ತಾ ಹಾಡುವ ಹಾಡು
 following info is from https://kn.wikipedia.org/
ಜೋಗುಳ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಜೋ ಜೋ ಎಂಬ ಪಲ್ಲವಿಯೊಡನೆ ತೂಗುತ್ತಾ ಹಾಡುವ ಹಾಡು. ಜನಪದರ ಪ್ರತಿಯೊಂದು ನಡವಳಿಕೆ ಜೀವನ ಕ್ರಮಗಳು ಅವರ ಹಾಡುಗಳಲ್ಲಿ ದಾಖಲಾಗಿವೆ. ಮಕ್ಕಳನ್ನು ಮಲಗಿಸುವ ಕ್ರಿಯೆ ಭಾವನಾ ತ್ಮಕವಾದುದು, ನವಿರಾದುದು. ಏಕೆಂದರೆ ಮಗುವಿನ ಪರಿಕಲ್ಪನೆಯೆ ಸೂಕ್ಷ್ಮ ಸ್ವರೂಪದ್ದು. ತಾಯಿ ತನ್ನ ಮಗುವನ್ನು ಅಕ್ಕರೆಯಿಂದ ಮಲಗಿಸುವ ಕ್ರಮಕ್ಕೆ ಜೋಗುಳ, ಲಾಲಿಪದ, ದೂರಿ ಹಾಡು, ತೊಟ್ಟೀಲಹಾಡುಗಳೆಂದು ಕರೆಯುತ್ತಾರೆ. ತಾಯಿ ಮಗುವನ್ನು ತೋಳಿನ ಮೇಲೆ ,ಹಾಸಿಗೆ ಮೇಲೆ ಇಲ್ಲವೆ ತೊಟ್ಟಿಲಲ್ಲಿ ಮಲಗಿಸಿ ಮೆದುವಾಗಿ ತೂಗುತ್ತಾ ಹೇಳುವ ಒಂದು ಆತ್ಮೀಯ ಪ್ರಕಾರವಾಗಿದೆ. ಜೋಗುಳದ ಹಾಡಿನಲ್ಲಿ ತೊಟ್ಟಿಲನ್ನು ಕಾಯುವುದಕ್ಕಾಗಿ ಸಂತರು, ದೇವರು, ದೇವತೆಗಳನ್ನೂ ಆಹ್ವಾನಿಸುವ ಪದ್ದತಿ ಪ್ರಪಂಚದ ಕೆಲವು ಭಾಗಗಳಲ್ಲಿದೆ. ಜೋಗುಳವೆಂದರೆ ಒಂದರ್ಥದಲ್ಲಿ ಮಗುವಿನ ಹಿತಕ್ಕಾಗಿ ತಾಯಿ ಪ್ರಾರ್ಥಿಸಿ ಹಾಡುವ ಪ್ರಾರ್ಥನಾ ಗೀತೆಗಳಾಗಿವೆ.
ತಾಯಿ ತನ್ನ ಮಗುವಿನ ಸೌಂದರ್ಯವನ್ನು ನಾನಾ ಬಗೆಯಲ್ಲಿ ವರ್ಣಿಸಿ ಹಾಡುತ್ತಾಳೆ. ಮಗುವನ್ನು ಸೂರ್ಯ, ಚಂದ್ರ, ನಕ್ಷತ್ರ, ಹೂವು, ಒಡವೆ, ಪಕ್ಷಿ, ಆಕಾಶ, ಭೂಮಿ- ಹೀಗೆ ಇಡೀ ಪ್ರಕೃತಿಯನ್ನೇ ಆರೋಪಿಸಿ ಮಗುವನ್ನು ಲಾಲಿಸುತ್ತಾಳೆ. ಉದಾಹರಣೆಗೆ:-

ಜೋ ಜೋ ಮುದ್ದಿನ ಪುಟಾಣಿ ಕಂದ
ಜೋ ಜೋ ಲಲ್ಲೆಯ ಮಾತಿನ ಅಂದ
ಜೋ ಜೋ ಗೆಜ್ಜೆಯ ಝಣಝಣ ಚಂದ
ಜೋ ಜೋ ತಾರಾಕುವರಿ ಆನಂದ||ಜೋ ಜೋ||

೧.ಅಳುವ ಕಂದನ ತುಟಿಯು ಹವಳದ ಕುಡಿಯಂಗೆ
ಕುಡಿ ಹುಬ್ಬು ಬೆವಿನೆಸಳಂಗ/ಕಣ್ಣೋಟ
ಶಿವನ ಕೈಯಲಗು ಹೊಳೆದಂಗ

೨.ಕೂಸೆಲ್ಲ ಕುಂದಣ ನೆತ್ತೆಲ್ಲ ಜಾವೂಳ
ಕಟ್ಟಿ ಕೆಳಗಾಡಿ ಬೆವತಾನ/ನನ ಬಾಲ
ಹೊಸ ಮುತ್ತಿನ ದೃಷ್ಟಿ ತಗದೇನ

೩.ಹಸರಂಗಿ ತೊಡಸಿದ ಹಾಲ್ಗಡಗ ಇಡಸಿದ
ಹಳ್ಳಕ್ಕೆ ನೀನು ಬರಬೇಡ /ನನ ಕಂದಯ್ಯ
ಬೆಳ್ಳಕ್ಕಿ ಹಿಂಡು ಬೆದರ್ಯಾವೆ

೪.ಬಾಳಿಹಣ್ಣಿನ ಮಾಟ ಬಾದಾಮಿ ಎಲಿದೋಟ
ಬಾಗಿಲಾಗಾಡು ಮಗನಾಟ/ಕಲಕೇರಿ
ತೇರಿನ ಮಾಟ ಬಲುಮಾಟ

೫.ಕಂದವ್ವ ಅತ್ತರ ತಂದಿದ ಹೊರಿಯಾಕ
ಚಂದಿರನ ನೋಡೊ ನನ ಬಾಲ/ತವರಿನ
ಅಂದಾಲ ನೋಡೊ ಅರಗಿಳಿಯೆ
ಜೋಗುಳದ ಹಾಡುಗಳು[ಬದಲಾಯಿಸಿ]

೧.ಜೋಜೋ ಕಂದ ಜೋಪುರ ಮಾಳಂದ
ನಾರಿಯ ಕಂದ ರಾಮ ಗೋವಿಂದ ಜೋಜೋ
ಜೋಜೋ ಎನ್ನಯ್ಯನಿಗೆ
ಜೋಜೋ ಚಿನ್ನಯ್ಯನಿಗೆ
ಕಲ್ಯಾಣಿ ಪಟ್ಟಣದಲ್ಲಿರುವ
ರುದ್ರಕುಮಾರನಿಗೆ ಜೋಜೋ

೨.ತೊಟ್ಟೀಲದಾಗೋಂದು ತೊಳದ ಮುತ್ತಿನ ಕಂಡೆ
ಹೊಟ್ಟಿ ಮ್ಯಾಲಾಗಿ ಮಲಗ್ಯಾನ/ಕಂದೈಗ
ಮುತ್ತಿನ ದೃಷ್ಠಿ ತೆಗೆದೇನ

೩.ಜೋಗುಳ ಹಾಡಿದರ ಆಗಳೇ ಕೇಳ್ಯಾನ
ಹಾಲ ಹಂಬಲ ಮರತಾನ/ಕಂದೈಗ
ಜೋಗುಳದಾಗ ಅತಿಮುದ್ದು

೪.ತೂಗು ತೊಟ್ಟಿಲಿಗೊಂದು ಪಾಗು ಪಟ್ಟೆಯ ಹಾಸಿ
ಮಾಗಾಯಿ ಮಗನ ಮಲಗಿಸಿ/ಅವರಮ್ಮ
ಜೋಗುಳ ಹಾಡಿ ಹಿಗ್ಯಾಳೆ

೫.ಅತ್ತಿಯ ಮರಕೆ ಹತ್ತೀತೊ ಗುಮ್ಮ
ಹತ್ತೆಂಟು ಹಣ್ಣ ಮೆದ್ದಿತೊ ಗುಮ್ಮ
ಗುಮ್ಮ ಬತ್ತದೆ ಕಂದ ಸುಮ್ಮನೆ ಮಲಗು ಜೋಜೋ

೬.ದೂರೀ ದೂರೀ ದೂರೀ ಆಡೋ
ಕಲ್ಲ ಮೇಲೆ ದೂರೀ ದೂರೀ
ಅಕ್ಕತಂಗೇರು ದೂರೀ ದೂರೀ
ಆಡಿ ಬಂದವರೆ ದೂರೀ ದೂರೀ
ತಾಯಿ ಮಕ್ಕಳು ದೂರೀ ದೂರೀ
ನೋಡುಕ್ ಬಂದವರೆ ದೂರೀ ದೂರೀ

೭.ಹಸು ಮಕ್ಕಳಿಲ್ಲದೆ ಹಸದವೆ ನಮ್ಮಂಗಳ
ಹಸುದೀ ಬಾಲವ್ವೀ ಬರುವಾಗೇ/ನಮ್ಮಂಗಳ
ಗೊಂಬೆ ಚಿನುದಂತೆ ಹೊಳೆವದೆ

ಪರಿಸಮಾಪ್ತಿ
ಜೋಗುಳದ ಹಾಡಿಗೆ ಸಂಗೀತವೇ ಬೇಕಿಲ್ಲ. ಹಾಡುಗಾರರ ಪರಿಸರ ,ಕಲ್ಪನೆಗಳಿಗನುಗುಣವಾಗಿ ಹಾಡು ಬೆಳೆಯುತ್ತಾ ಸಾಗುತ್ತದೆ. ಯಾವುದೇ ರೀತಿಯ ಹಾಡನ್ನು ಜೋಗುಳದಂತೆ ಹಾಡಬಹುದಾಗಿದೆ. ಏಕೆಂದರೆ ಜೋಗುಳದ ಹಾಡು ಬಹಳ ಕಾಲ ಮಗುವಿನ ಮನದಲ್ಲಿ ಉಳಿಯುತ್ತದೆ. ಜೋಗುಳದಲ್ಲಿರುವ ಮತ್ತಿತರ ಸೊಲ್ಲುಗಳೆಂದರೆ-ಲೂ..ಲೂ..ಲಲ್ಲೆ..ಲಲ್ಲೆ ,ದೂರೀ ದೂರೀ ,ಜೋ ಜೋ ಜೋ ಜೋ ,ಬೊ ಬೊ, ಡೂ ಡೂ ಇತ್ಯಾದಿ. ಎಲ್ಲಿಯವರೆಗೆ ಮಕ್ಕಳು ಅಳುತ್ತಾರೋ, ಅಲ್ಲಿಯವರೆಗೆ ತಾಯಂದಿರ ದನಿ ಜೋಗುಳ ರೂಪದಲ್ಲಿ ಅವನ್ನು ಸಮಾಧಾನಗೊಳಿಸುತ್ತಾ, ಅಂಥದನಿ, ಪದಗಳು ಒಬ್ಬರಿಂದೊಬ್ಬರಿಗೆ ಮೌಖಿಕವಾಗಿ ವರ್ಗಾಯಿತವಾಗುತ್ತಾ ಇನ್ನು ಅಸ್ತಿತ್ವದಲ್ಲಿ ಉಳಿದಿವೆ.
ಕೆಲವು ಉದಾಹರಣೆ
<poem>
ಜೋಗುಳ ಹಾಡಿದರೆ ಆಗಲೆ ಕೇಳ್ಯಾನು ಹಾಲ ಹಂಬಲವ ಮರೆತಾನು | ಕಂದಯ್ಯ ಜೋಗುಳದಾಗೆ ಅತಿಮುದ್ದು || ತೋಳುದ್ದ ತಲೆದಿಂಬು ಮಾರುದ್ದ ಹಾಸಿಗೆ ಮಾಣಿಕದಂಥ ಮಗ ಮುಂದೆ | ಮಲಗಿದರೆ ಮಾರಾಯ್ರ ಗೊಡವೆ ನನಗೇನ || ಲಾಲಿಯ ಹಾಡಿದರೆ ಲಾಲಿಸಿ ಕೇಳ್ಯಾನು ತಾಯ ಹಂಬಲವ ಮರೆತಾನು | ಕಂದಯ್ಯ ತೋಳ ಬೇಡ್ಯಾನ ತಲೆದಿಂಬ || ಜೋ ಜೋ ಮುದ್ದಿನ ಪುಟಾಣಿÂ ಕಂದ | ಜೋ ಜೋ ಲಲ್ಲೆಯ ಮಾತಿನ ಅಂದ | ಜೋ ಜೋ ಗೆಜ್ಜೆಯ ಝಣಝಣ ಚೆಂದ | ಜೋ ಜೋ ತಾರಾ ಕುವರಿ ಆನಂದಾ || ಜೋ ಜೋ ||
end
****






ಪ್ರಕಾರ....
26. ಲಾಲಿಹಾಡು - ಹುಟ್ಟಿಗೆ ಸಂಬಂಧಿಸಿದ ಹಾಗೂ ಮಕ್ಕಳಿಗೆ ಸಂಬಂಧಿಸಿದ ಹಾಡು ಲಾಲಿಪದಗಳು
ನಂಬರ್ 25 ಜೋಗುಳ ಹಾಡು ವಿವರಣೆ ನೋಡಿರಿ 
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ದ ಪ್ರಕಾರ ಜೋಗುಳದ ಹಾಡಿಗೇ ಲಾಲಿ ಪದ ಎಂದು ಕೊಟ್ಟಿದ್ದಾರೆ.  ಹಾಗಾಗಿ ಮೇಲೆ ಕೊಟ್ಟಿರುವ ಜೋಗುಳದ ವಿವರಗಳನ್ನು ಪರಿಗಣಿಸಬಹುದು. what it says -->
quote 
ಜೋಗುಳದ ಹಾಡುಗಳು ಜನಪದ ಸಾಹಿತ್ಯದ ಬಹು ಮುಖ್ಯ ಭಾಗವಾಗಿದೆ. ತಾಯಿ ಮಗುವನ್ನು ತೊಟ್ಟಿಲಲ್ಲೊ ಜೋಳಿಗೆಯಲ್ಲೊ ಮಲಗಿಸಿ ತೂಗುವಾಗ ಹಾಡುವ ಹಾಡುಗಳಿವು. ಇವನ್ನು ಲಾಲಿ ಪದಗಳು ಎನ್ನುವುದೂ ಉಂಟು. ಇವುಗಳ ಛಂದಸ್ಸು ಸಾಮಾನ್ಯವಾಗಿ ತ್ರಿಪದಿ. ರಾಗ, ಹಳ್ಳಿಯ ಹೆಣ್ಣುಮಕ್ಕಳಿಗೇ ಮೀಸಲಾದ್ದು. ವಸ್ತು ಮಗುವಿನ ಅಂದಚಂದ, ಸಂಸಾರದ ಸುಖ, ಮಕ್ಕಳ ಪ್ರಾಮುಖ್ಯಗಳನ್ನು ಕುರಿತದ್ದು. ಸಂಸಾರದ ಅತಿ ಮಧುರವಾದ ಅನುಭವಗಳನ್ನಿಲ್ಲಿ ತಾಯಿಯಾದವಳು ನೆನೆದು ಸುಖಿಸುತ್ತಾಳೆ. ಮಗುವಾದರೋ ತಾಯಿಯ ಇಂಪಾದ ಕಂಠಕ್ಕೆ ಮಾರುಹೋಗಿ, ಅಳುವನ್ನು ನಿಲ್ಲಿಸಿ, ಹಾಲು ಕುಡಿಯುವುದನ್ನೂ ಮರೆತು ನಿದ್ರಿಸುತ್ತದೆ. 
unquote
end
****





ಪ್ರಕಾರ....
27. ಸೋಬಾನೆ ಪದಗಳು / ಶೋಭನ ಪದಗಳುವಿವಾಹ ಸಮಯದಲ್ಲಿ ಹಾಡುವ ಪದಗಳು 
following info is from
ಸೋಬಾನೆ ಎಂಬುದು ‘ಶೋಭನ’ ಎಂಬ ಪದದಿಂದ ಬಂದದ್ದು.  ಅರ್ಥ ಕೋಶಗಳಲ್ಲಿ ಶುಭ, ಮಂಗಳಕರ, ಹೊಳೆಯುವ, ಪ್ರಕಾಶಮಾನ etc.

ಕರ್ನಾಟಕದಾದ್ಯಂತ ಜನಪದರು ಮೊದಲು ಹಾಡಿಕೊಳ್ಳುವ ತ್ರಿಪದಿಗಳೆಂದರೆ ತಂತಮ್ಮ ಗ್ರಾಮದೇವತೆಗಳನ್ನು ಕುರಿತು. ನಂಬಿಕೆಗಳೇ ಮುಖ್ಯವೆನಿಸುವ ಜನಪದ ಪರಂಪರೆಯಲ್ಲಿ ದೇವರೇ ಮೊದಲು. ಎರಡನೆಯದಾಗಿ ಜನಪದರು ಹಾಡಿಕೊಳ್ಳುವ ಗೀತೆಗಳೆಂದರೆ ಭೂಮಿ ಸಂಬಂಧದ ಆಚರಣೆಯವು. ಉತ್ತರ ಕರ್ನಾಟಕದಲ್ಲಿ ಹಂತಿ ಪದಗಳಿಂದ ಹಿಡಿದು ದನಕರುಗಳ ಅಲಂಕಾರದವರೆಗೆ ಹಾಡುಗಳಿದ್ದು, ದಕ್ಷಿಣ ಕರ್ನಾಟಕದಲ್ಲಿ ಸುಪ್ರಸಿದ್ಧವಾದ ಗೋವಿನ ಹಾಡನ್ನೇ ಸಂಕ್ರಾಂತಿಯ ದಿನ ಹಾಡಿಕೊಳ್ಳುವುದುಂಟು. ಹಾಗೆಯೇ ಭೂಮಿ ಸಂಬಂಧದ ಗೀತೆಗಳೂ ವ್ಯಾಪಕವಾಗಿವೆ. ನಂಬಿಕೆಯಾಧರಿಸಿದ ಗ್ರಾಮದೇವತೆ ಮತ್ತು ಭೂಮಿಯ ವ್ಯವಸಾಯ ಕುರಿತು ಇರುವ ಜನಪದ ಹಾಡುಗಳನ್ನು ಬಿಟ್ಟರೆ ಜನಪದರಲ್ಲಿ ಹೆಚ್ಚು ಹಾಡಿಕೊಳ್ಳುವಂಥವು ಮದುವೆಯ ಸಂಬಂಧದ ಗೀತೆಗಳು. ವಿವಾಹದಂಥ ಸಂತಸಮಯ, ಮಂಗಳಕರ ಸಂದರ್ಭದಲ್ಲಿ ಹಾಡುವ ಪದಗಳನ್ನು ಗ್ರಾಮೀಣರು ಸೋಬಾನೆ ಪದ ಎಂದು ಕರೆದುಕೊಂಡಿರುತ್ತಾರೆ. ಇದು ‘ಶೋಭನ’ ಎಂಬ ಪದದಿಂದ ಬಂದದ್ದು. ಈ ಪದಕ್ಕೆ ಅರ್ಥ ಕೋಶಗಳಲ್ಲಿ ಶುಭ, ಮಂಗಳಕರ, ಹೊಳೆಯುವ, ಪ್ರಕಾಶಮಾನವಾದ, ನಿಷೇಕ, ಪ್ರಸ್ತ ಎಂಬೆಲ್ಲ ಅರ್ಥಗಳಿವೆ. ಅನೇಕಾನೇಕ ಸಂಸ್ಕೃತ ಪದಗಳು ಕನ್ನಡದಲ್ಲಿ ಶುದ್ಧ ಕನ್ನಡದವೇ ಎಂಬಂತೆ ಅವು ಗ್ರಾಮ್ಯ ಸ್ವರೂಪ ಪಡೆದುಕೊಂಡುಬಿಟ್ಟಿರುತ್ತವೆ. ಈ ಸಂಬಂಧ ಸಿರಿಯಜ್ಜಿ ಹಾಡಿರುವ ಒಂದು ತ್ರಿಪದಿಯಲ್ಲಿಯೇ ಉಚ್ಫ್ರಾಯ ಎಂಬ ಪದ ಪ್ರಯೋಗವಿದೆ. ಹನುಮಂತರಯ ಉಚ್ಫ್ರಾಯವನ್ನೇರಿ ಬರುತ್ತಾನೆ ಎನ್ನುವಲ್ಲಿ ಸಿರಿಯಜ್ಜಿಯೇ ಆ ಪದಕ್ಕೆ ಕುದುರೆ ಎಂಬ ಅರ್ಥ ಹೇಳುತ್ತಾಳೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಆಂಜನೇಯನನ್ನು ಕುದುರೆಯ ಮೇಲೂ, ಚಲುವರಾಯ ಮತ್ತು ಕೃಷ್ಣನ ವಿಗ್ರಹಗಳನ್ನು ಗರುಡನ ವಿಗ್ರಹದ ಮೇಲೂ ಕೂರಿಸಿ ಮೆರವಣಿಗೆ ಹೊರಡಿಸುವುದುಂಟು. ಹಾಗೆ ಆಂಜನೇಯನನ್ನು ಉಚ್ಫ್ರಾಯವೆಂಬ ಕುದುರೆಯ ಮೇಲೆ ಕೂರಿಸಿ ಮೆರವಣಿಗೆ ಹೊರಟರು ಎಂದರೆ ಅದರ ಮೂಲ ‘ಉಚ್ಛೈಶ್ರವಸ್’ ಎಂಬ ಕುದುರೆ, ಇಂದ್ರನ ಕುದುರೆಯ ಹೆಸರು. ಆಂಜನೇಯನು ಇಂದ್ರನ ಕುದುರೆಯ ಮೇಲೆ ಊರಾಡಲು ಬರುವುದರಿಂದ ಆತನನ್ನು ಉಚ್ಚೂರಾಯ ಎಂತಲೂ ಕರೆಯುವುದಿದೆ. ಈ ಅರ್ಥದಲ್ಲಿ ಶೋಭನ ಸಂಸ್ಕೃತ ಪದ ಗ್ರಾಮೀಣ ವಾತಾವರಣದಲ್ಲಿ ಸೋಬಾನೆ ಆಗಿದೆ. ಶಿಷ್ಟ ಸಂಸ್ಕೃತಿ, ಜನಪದ ಪರಂಪರೆ ಅವು ಸ್ವರೂಪದಲ್ಲಿ ಬೇರೆ ಬೇರೆ ಇದ್ದರೂ ಅವುಗಳು ತಮ್ಮ ಬೇರಿನ ಆಳದಲ್ಲೆಲ್ಲೋ ಪರಸ್ಪರ ಒಂದಕ್ಕೊಂದು ಸಂಬಂಧ ಹೊಂದಿರುತ್ತವೆ.

ಸೋಬಾನೆ ಪದಗಳ ಮತ್ತು ಅವುಗಳ ಹಿನ್ನೆಲೆಯ ಆಚರಣೆಗಳು ಮೇಲ್ವರ್ಗದ ವಿವಾಹ ಕ್ರಮವನ್ನೇ ಅನುಸರಿಸಿದ್ದರೂ, ಅಲ್ಲಲ್ಲಿ ಎರಡೂ ಸಮೂಹಗಳ ಆಚರಣೆಗಳು ಬೇರೆ ಬೇರೆಯೇ ಇರುತ್ತವೆ. ಈ ಸಂಕಲನದಲ್ಲಿ ಕೊಡಲಾಗಿರುವಷ್ಟು ಸಿರಿಯಜ್ಜಿಯ ಸೋಬಾನೆ ಪದಗಳನ್ನು ಬಹುಶಃ ಕರ್ನಾಟಕದ ಬೇರಾವ ಗಾಯಕಿಯೂ ಹಾಡಿರಲಾರಳು. ಸಿರಿಯಜ್ಜಿ ಇದಿಷ್ಟು ಸಮಗ್ರವಾದ ತ್ರಿಪದಿಗಳನ್ನು ತಮ್ಮ ಕಾಡುಗೊಲ್ಲರ ಬುಡಕಟ್ಟು ಸಮುದಾಯ ಮದುವೆಯ ಸಂದರ್ಭದಲ್ಲಿ ಹಾಡುವಂಥ ಸೋಬಾನೆ ಪದಗಳು ಎಂದೇ ಹೆಳುತ್ತಾಳೆ. ಆದರೆ ಈ ತ್ರಿಪದಿಗಳು ಬುಡಕಟ್ಟು ಸಮೂಹದ ನಡುವೆ ಮಾತ್ರ ಹಾಡುವಂಥದ್ದಾಗಿರದೆ ಗ್ರಾಮೀಣ ಮದುವೆಯ ವೇಳೆಯೂ ಇದನ್ನೆ ಹಾಡುತ್ತಾರೆ. ಹಾಗೆ ನೋಡಿದರೆ ಸಿರಿಯಜ್ಜಿ ಗ್ರಾಮೀಣ ವಾತಾವರಣದ ಮದುವೆಯ ಹಾಡುಗಳನ್ನು ಕಲಿತು ಕೊಂಡು ತಮ್ಮ ಬುಡಕಟ್ಟಿನ ಲಗ್ನದ ವೇಳೆ ಹಾಡುತ್ತಾಳೆಂದೇ ಇಲ್ಲಿಯ ತ್ರಿಪದಿಗಳ ರಚನೆಯನ್ನು ನೋಡಿದರೆ ಭಾಸವಾಗುತ್ತದೆ. ಯಾಕೆಂದರತೆ ಬುಡಕಟ್ಟು ಸಮೂಹದ ಮದುವೆಗಳು ತುಂಬ ಸರಳ. ಅಲ್ಲಿ ಪುರೋಹಿತರಾಗಲಿ, ಬಾಜಾಭಜಂತ್ರಿಗಳಾಗಲಿ, ಚಪ್ಪರ ಛತ್ರಗಳಾಗಲಿ ಇರುವುದಿಲ್ಲ. ಆದಿವಾಸಿಗಳಲ್ಲಿ ಬುಡಕಟ್ಟು ಹಿರಿಯನೇ ಮದುವೆಗೆ ಅಪ್ಪಣೆ ಕೊಡುವ, ಮದುವೆ ಮಾಡಿಸುವ ಪುರೋಹಿತ. ಮತ್ತು ಹೆಣ್ಣಿಗೆ ತೆರಕೊಟ್ಟು ತರಬೇಕು. ಬುಡಕಟ್ಟು ಸಮೂಹದಲ್ಲಿ ಸ್ತ್ರೀ ಸ್ವಾತಂತ್ಯ್ರ ಹೆಚ್ಚು. ಆಕೆಯನ್ನು ತುಂಬ ಗೌರವದಿಂದಲೇ ಆ ವಿರುತ್ತದೆ. ಅಲ್ಲಿ ಶ್ರೀಮಂತಿಕೆ ಮತ್ತು ಬಡತನದ ಪರಿಕಲ್ಪನೆಗಳೂ ಇರುವುದಿಲ್ಲ. ಇದೇನೇ ಇರಲಿ ಗ್ರಾಮ್ಯ ವಾತಾವರಣದ ಮದುವೆಯ ಲಕ್ಷಣಗಳು ಸಿರಿಯಜ್ಜಿ ಹಾಡಿರುವ ಸೋಬಾನೆ ಪದಗಳಲ್ಲಿವೆ. ಒಂದೆರಡೂ ತ್ರಿಪದಿಗಳನ್ನು ಉದಾಹರಣೆಗಾಗಿ ಗಮನಿಸಬಹುದು. ಈ ಪದ್ಯಗಳಲ್ಲಿ ಪುರೋಹಿತನ ಪ್ರಸ್ತಾಪವೂ ಇದೆ :

ಅಣ್ಣಾ ಆರುವರಣ್ಣ ಕೆನ್ನೆ ಮ್ಯಾಗಳ ಜುಟ್ಟು
ಅನ್ನೊಂದೆಳೆಯಾ ಜನಿವಾರ |
ಅನ್ನೊಂದೆಳೆಯಾ ಜನಿವಾರ | ಆರೋರಣ್ಣ
ಚಂದವಾಗಿ ಆಕೋ ಬ್ರಮ್ಮಗಂಟ ||

ಅಪ್ಪ ಆರೋರಣ್ಣ ನೆತ್ತಿಮ್ಯಾಗಳ ಜುಟ್ಟು
ಇಪ್ಪತ್ತೊಂದೆಳೆಯಾ ಜನಿವಾರ |
ಇಪ್ಪತ್ತೊಂದೆಳೆಯಾ ಜನಿವಾರ | ಆರೋರಣ್ಣ
ವಪ್ಪವಾಗಿ ಆಕೋ ಬ್ರಮ್ಮಗಂಟು ||

ವಜ್ಜುರದ ಗಿಂಡಿ ತಿದ್ದುತಲಿ ಅಸನಾದಾವೆ
ಮುದ್ದು ಮೋವನ್ನರು ನೆರೆತಾರೆ |
ಮುದ್ದು ಮೋವನ್ನರು ನೆರೆತಾರೆ | ಗಂಡಿನೋರು
ಗೆದ್ದೆವೆಂದು ದಾರೆಯೆರುದಾರೆ ||
****





ಪ್ರಕಾರ....
28. ಕಥನ ಕವನಗಳು - ಕವಿತೆ ಭಾಷೆಯ ಉಪಯೋಗದ ಒಂದು ಕಲೆ. ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಿಗೆ ಅಥವಾ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ
 
ಕಥನ ಎಂದರೆ ಪ್ರೇಕ್ಷಕರಿಗೆ ಒಂದು ಕಥೆಯನ್ನು ತಿಳಿಸಲು ಲಿಖಿತ ಅಥವಾ ಮಾತಾನಾಡಲಾದ ನಿರೂಪಣೆಯ ಬಳಕೆ.[೧] ಕಥನವು ತಂತ್ರಗಳ ಒಂದು ಸಮೂಹವನ್ನು ಒಳಗೊಳ್ಳುತ್ತದೆ ಮತ್ತು ಇದರ ಮೂಲಕ ಕಥೆಯ ಸೃಷ್ಟಿಕರ್ತನು ತನ್ನ ಕಥೆಯನ್ನು ಪ್ರಸ್ತುತಪಡಿಸುತ್ತಾನೆ. ಇವುಗಳಲ್ಲಿ ಕಥನದ ದೃಷ್ಟಿಕೋನ: ಕಥೆಯನ್ನು ಹೇಳುವ ದೃಷ್ಟಿಕೋನ (ಅಥವಾ ವೈಯಕ್ತಿಕ ಅಥವಾ ಅವೈಯಕ್ತಿಕ "ಮಸೂರ"ದ ಬಗೆ); ಕಥನದ ಧ್ವನಿ: ಒಂದು ಕಥೆಯನ್ನು ಹೇಳುವ ಸ್ವರೂಪ; ಕಥನದ ಕಾಲ: ಭೂತಕಾಲದಲ್ಲಿ, ವರ್ತಮಾನ ಕಾಲದಲ್ಲಿ, ಅಥವಾ ಭವಿಷ್ಯ ಕಾಲದಲ್ಲಿ ಕಥೆಯ ಸಮಯ ಚೌಕಟ್ಟಿನ ವ್ಯಾಕರಣಾತ್ಮಕ ಸ್ಥಾಪನೆ ಸೇರಿವೆ.
ನಿರೂಪಕನು ಓದುಗರಿಗೆ ಮಾಹಿತಿ ಒದಗಿಸಲು (ವಿಶೇಷವಾಗಿ ಕಥಾವಸ್ತುವಿನ ಬಗ್ಗೆ) ಸೃಷ್ಟಿಕರ್ತನಿಂದ (ಲೇಖಕ) ಅಭಿವೃದ್ಧಿ ಮಾಡಲ್ಪಟ್ಟ ಒಬ್ಬ ವೈಯಕ್ತಿಕ ಪಾತ್ರ ಅಥವಾ ಅವೈಯಕ್ತಿಕ ಧ್ವನಿಯಾಗಿರುತ್ತಾನೆ. ಬಹುತೇಕ ಲಿಖಿತ ಆಖ್ಯಾನಗಳ (ಕಾದಂಬರಿಗಳು, ಸಣ್ಣಕಥೆಗಳು, ಕವನಗಳು, ಇತ್ಯಾದಿ) ವಿಷಯದಲ್ಲಿ, ನಿರೂಪಕನು ಸಾಮಾನ್ಯವಾಗಿ ಕಥೆಯನ್ನು ಅದರ ಸಂಪೂರ್ಣತೆಯಲ್ಲಿ ಹೇಳಲು ಕಾರ್ಯಮಾಡುತ್ತಾನೆ. ನಿರೂಪಕನು ಅನಾಮಧೇಯ, ಅವೈಯಕ್ತಿಕ, ಅಥವಾ ಸ್ವತಂತ್ರ ಘಟಕವಾಗಿ ಲೇಖಕನಿಂದ ರೂಪಿಸಲ್ಪಟ್ಟ ಧ್ವನಿಯಾಗಿರಬಹುದು; ಲೇಖಕನು ಒಬ್ಬ ಪಾತ್ರವಾಗಿ, ಅಥವಾ ಲೇಖಕನು ತನ್ನ ಸ್ವಂತ ಕಥೆಯೊಳಗೆ ಕಾಣಿಸಿಕೊಳ್ಳುವ ಅಥವಾ ಭಾಗವಹಿಸುವ ಯಾವುದೋ ಇತರ ಕಾಲ್ಪನಿಕ ಅಥವಾ ಕಾಲ್ಪನಿಕವಲ್ಲದ ಪಾತ್ರವಾಗಿ. ಅವನು/ಅವಳು ಕಥೆಯೊಳಗೆ ಒಬ್ಬ ಪಾತ್ರನಾಗಿದ್ದರೆ ನಿರೂಪಕನನ್ನು ಭಾಗಿಯೆಂದು ಪರಿಗಣಿಸಲಾಗುತ್ತದೆ, ಅವನು/ಅವಳು ಸೂಚಿತ ಪಾತ್ರ ಅಥವಾ ಸರ್ವಜ್ಞ ಅಥವಾ ಅರೆಸರ್ವಜ್ಙ ಜೀವಿ ಅಥವಾ ವಾಸ್ತವಿಕ ಘಟನೆಗಳಲ್ಲಿ ಭಾಗಿಯಾಗಿರದೆ ಕೇವಲ ಕಥೆಯನ್ನು ಓದುಗರಿಗೆ ಸಂಬಂಧಿಸುವ ಧ್ವನಿಯಾಗಿದ್ದರೆ ನಿರೂಪಕನನ್ನು ಭಾಗಿಯಲ್ಲವೆಂದು ಪರಿಗಣಿಸಲಾಗುತ್ತದೆ. ಒಂದೇ, ಹೋಲುವ, ಅಥವಾ ಭಿನ್ನ ಸಮಯಹಳಲ್ಲಿ ವಿವಿಧ ಪಾತ್ರಗಳ ಕಥಾವಸ್ತುಗಳನ್ನು ವಿವರಿಸಲು ಕೆಲವು ಕಥೆಗಳು ಬಹು ನಿರೂಪಕರನ್ನು ಹೊಂದಿರುತ್ತವೆ. ಹೀಗೆ ಹೆಚ್ಚು ಸಂಕೀರ್ಣ, ಏಕವಚನವಲ್ಲದ ದೃಷ್ಟಿಕೋನಕ್ಕೆ ಅವಕಾಶ ಸಿಗುತ್ತದೆ.
ಕಥನವು ಕೇವಲ ಕಥೆಯನ್ನು ಹೇಳುವವನನ್ನಷ್ಟೇ ಒಳಗೊಳ್ಳುವುದಿಲ್ಲ, ಜೊತೆಗೆ ಕಥೆಯನ್ನು ಹೇಗೆ ಹೇಳಲಾಗುತ್ತದೆ ಎಂಬುದನ್ನು ಕೂಡ ಒಳಗೊಳ್ಳುತ್ತದೆ (ಉದಾಹರಣೆಗೆ, ಪ್ರಜ್ಞಾ ಪ್ರವಾಹ ಅಥವಾ ವಿಶ್ವಾಸಾರ್ಹವಲ್ಲದ ನಿರೂಪಣೆಯನ್ನು ಬಳಸಿ). (ಕಾದಂಬರಿಗಳು, ಸಣ್ಣಕಥೆಗಳು, ಮತ್ತು ಆತ್ಮಕಥೆಗಳಂತಹ) ಸಾಂಪ್ರದಾಯಿಕ ಸಾಹಿತ್ಯಿಕ ಆಖ್ಯಾನಗಳಲ್ಲಿ, ಕಥನವು ಅಗತ್ಯವಾದ ಕಥಾ ಘಟಕವಾಗಿರುತ್ತದೆ; ಇತರ ಪ್ರಕಾರದ (ಮುಖ್ಯವಾಗಿ ಸಾಹಿತ್ಯಿಕವಲ್ಲದ) ಆಖ್ಯಾನಗಳಲ್ಲಿ, ಉದಾಹರಣೆಗೆ ನಾಟಕಗಳು, ದೂರದರ್ಶನ ಶೋಗಳು, ವೀಡಿಯೋ ಆಟಗಳು ಮತ್ತು ಚಲನಚಿತ್ರಗಳಲ್ಲಿ, ಕಥನವು ಕೇವಲ ಐಚ್ಛಿಕವಾಗಿರುತ್ತದೆ.

ಕವಿತೆ/ಕವನ ಭಾಷೆಯ ಉಪಯೋಗದ ಒಂದು ಕಲೆ. ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಿಗೆ ಅಥವಾ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು. ಕವಿತೆಯು ಸ್ವತಂತ್ರವಾಗಿ ರಚಿತವಾಗಿರಬಹುದು ಅಥವಾ ಸಂಗೀತ, ನಾಟಕ ಮುಂತಾದ ಕಲೆಗಳೊಂದಿಗೆ ಉಪಯೋಗಿಸಲ್ಪಡಬಹುದು.
end
****






ಪ್ರಕಾರ....
29. ಡೊಳ್ಳಿನ ಕುಳಿತ - ಜನಪದ ಹಾಗೂ ಶಾಸ್ತ್ರೀಯ ಕಲೆ,  ನೃತ್ಯ ರೂಪಕದ್ದು. ಡೊಳ್ಳು ಬಾರಿಸಿಕೊಂಡು ಕುಣಿಯುವುದರಿಂದ ಇದಕ್ಕೆ ಡೊಳ್ಳು ಕುಣಿತ ಎಂಬ ಹೆಸರು
 following info is from https://kn.wikipedia.org/
ಜನಪದ ಕಲೆಗಳಲ್ಲಿ ಗಂಡುಕಲೆ ಎನಿಸಿರುವ ಡೊಳ್ಳು ಕುಣಿತ ಪುರುಷರಿಗೆ ಮಿಸಲಾದ ಕಲೆ. ಒಳ್ಳೆಯ ಮೈಕಟ್ಠು ಮತ್ತು ಶಕ್ತಿ ಉಳ್ಳ ಕಲಾವಿದರು ಮಾತ್ರ ಈ ಕಲೆಯನ್ನು ಪ್ರದರ್ಶಿಸಬಲ್ಲರು. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಹಾಗೂ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಡೊಳ್ಳೂ ಕುಣಿತ ತನ್ನ ವಿಶಿಷ್ಟವಾದ ನೃತ್ಯ ಶೈಲಿಗಳಿಂದ ಉಳಿದುಕೊಂಡು ಬಂದಿದೆ. ಡೊಳ್ಳು ಕುಣಿತ- ಒಂದು ಜನಪದ ಹಾಗೂ ಶಾಸ್ತ್ರೀಯ ಕಲೆ, ನೃತ್ಯ. ಡೊಳ್ಳು ಬಾರಿಸಿಕೊಂಡು ಕುಣಿಯುವುದರಿಂದ ಇದಕ್ಕೆ ಡೊಳ್ಳು ಕುಣಿತ ಎಂಬ ಹೆಸರು.
ಡೊಳ್ಳಿನ ಇತಿಹಾಸ
ಮೂಲತಃ ಕುರುಬ ಜನಾಂಗದ ವಾದ್ಯವಾಗಿರುವ ಡೊಳ್ಳು ಹಳ್ಳಿಯ ಸಂಸ್ಕೃತಿ ಜೀವನದೊಂದಿಗೆ ಸಮರಸವಾಗಿ ಬೆರೆತುಕೊಂಡಿದೆ. ಡೊಳ್ಳಿನ ಉತ್ಪತ್ತಿಯ ಬಗ್ಗೆ ಹಲವು ಕಥೆಗಳು ರೂಡಿಯಲ್ಲಿರುವುದರಿಂದ ಅದರ ಬಗ್ಗೆ ಭಕ್ತಿ ಗೌರವಗಳು ವ್ಯಕ್ತವಾಗುತ್ತದೆ. ಡೊಳ್ಳಿನ ಉತ್ಪತ್ತಿಯ ಬಗ್ಗೆ ಪೌರಣಿಕ ಹಿನ್ನೆಲೆಯ ಒಂದು ವಿಚಿತ್ರ ಕತೆ ಹಿಗೀದೇ

ಕಥೆ ಒಂದು
ಡೊಳ್ಳು ಸುರನೆಂಬ ರಕ್ಕಸ ತಪಸ್ಸಿನಿಂದ ಪರಶಿವನನ್ನು ಮೆಚ್ಚಿಸಿ ಪರಶಿವನು ತನ್ನ ಹೊಟ್ಟೆಯಲ್ಲಿಯೆ ನೆಲೆಸಬೇಕೆಂದು ವರಪಡೆದ. ಅದರಂತೆ ಶಿವನು ಗಂಗೆ, ಗೌರಿಯನ್ನು ಆತ ತೊರೆದು ರಕ್ಕಸನ ಹೊಟ್ಟೆಯನ್ನು ಸೇರಿದ. ಶಿವನಿಲ್ಲದ ಕೈಲಾಸ ಕಳೆಗುಂದಿತು. ದುಃಖಿತರಾದ ಶಿವಗಣಗಳು ವಿಷ್ಣುವಿನ ಮೊರೆಹೊಕ್ಕರು ವಿಷ್ಣುವಿನ ರಹಸ್ಯ ನಿರ್ದೇಶನದಂತೆ ಪಂಚ ರಾತ್ರಿಗಳು (ಕಾಮ, ಕ್ರೊದ, ಮೋಹ, ಮದ, ಮಾತ್ಸರ್ಯಗಳು ಪಂಚ ರಾತ್ರಿಯ ಪ್ರತೀಕ) ಸೇರುವುದು. ಶಿವನು ಕೋಪದಿಂದ ಕಣ್ಣು ತೆರೆದರೆ ಪ್ರಳಯವೆ ಉಂಟಾಗುವುದೆಂದು ಅರಿತ ವಿಷ್ಣು ಡೊಳ್ಳಾಸುರನ ಹೊಟ್ಟಯನ್ನೆ ವಾದ್ಯವಿಶೇಷವಾಗಿ ಮಾಡಿಕೊಂಡು ಅವನ ಮೂಳೆಗಳಿಂದ ಡೊಳ್ಳು ಬಾರಿಸಲು ಆರಂಬಿಸಿದ. ಶಿವನು ಆ ವಾದ್ಯದ ದನಿಗೆ ಮಾರು ಹೋಗಿ ಲಾಸ್ಯದಲ್ಲಿ ತೊಡಗಿದ. ಈ ವೇಳೆಗೆ ತೊಡೆಯ ಗೌರಿ, ಜೆಡೆಯ ಗಂಗೆಯರು ಬಂದು ಶಿವನನ್ನು ಸೇರಿದರು. ಶಿವ ಸುಪ್ರಿತನಾದ! ಮುಂದೆ ಡೊಳ್ಳು ಶಿವಸ್ತುತಿಯ ವಿಶೇಷ ವಾದ್ಯವಾಯಿತು. ತಲತಲಾಂತರದಿಂದ ದೈವ ಆರಾಧನೆಯ ಸಾಧನವಾಗಿ ಬೆಳೆದು ಬಂದ ಈ ಕಲೆ ಇತ್ತೀಚೆಗೆ ಮನರಂಜನೆಯಾ ಮಾಧ್ಯಮವಾಗಿ ಮನ್ನಣೆಯನ್ನು ಗಳಿಸಿದೆ. ಯಾವುದೇ ಧಾರ್ಮಿಕ ಸಾಂಸ್ಕ್ರತಿಕ ಸಮಾರಂಭಗಳಲ್ಲಿ ಇದು ಒಂದು ಮುಖ್ಯ ಕಲೆಯಾಗಿದೆ ಗುರುತಿಸಿಕೊಂಡಿದೆ. ಡೊಳ್ಳು ಕುಣಿತವನ್ನು ಚೆನ್ನಾಗಿ ಮೈಗೂಡಿಸಿಕೊಂಡು ಪರಿಣಿತಿಯನ್ನು ಸಾಧಿಸಿರುವವರೆಂದರೆ ಕುರುಬ ಜನಾಂಗ. ಬಿಡುವು ದೊರೆತಾಗಲೆಲ್ಲಾ ಅದರ ಅಭ್ಯಾಸ ಅಭಿವ್ಯಕ್ತಿಗಳಲ್ಲಿ ಆಸಕ್ತರಾಗಿರುತ್ತಿದ್ದರು. ಕಲಾವಿದರಿಗೆ ವಯಸ್ಸಿನ ಕಟ್ಟುಕಟ್ಟಳೆಯಿಲ್ಲ. ಅದರೆ ಡೊಳ್ಳು ಹೊತ್ತು ಕುಣಿಯುವ ದೈಹಿಕ ಶಕ್ತಿ ಇರಬೇಕಾಗುತ್ತದೆ[೧].
ಡೊಳ್ಳಿನ ಬಾರಿಸುವ ನಿಯಮ
ಡೊಳ್ಳು ಕುಣಿತದ ತಂಡದಲ್ಲಿ ಸಾಮಾನ್ಯವಾಗಿ ನಾಲ್ಕು ಜನರಿರುತ್ತಾರೆ ಕೆಲವು ಬಾರಿ ಇಷ್ಟೆ ಜನರಿರಬೇಕು ಎಂಬ ನಿಯಮವಿಲ್ಲ. ಹಿನ್ನೆಲೆಯಲ್ಲಿ ತಾಳ, ತಪ್ಪಡಿ, ಕಹಳೆ, ಜಾಗಟೆ, ಕೊಳಲುಗಳನ್ನು ಬಳಸುತ್ತಾರೆ. ಪದ ಹೇಳಿಕೊಂಡು ಡೊಳ್ಳನ್ನು ಬಾರಿಸುತ್ತಾರೆ. ಪದಕ್ಕೆ ಪ್ರತ್ಯೇಕವಾದ ಕೈಪಟ್ಟು ಬಳಸುತ್ತಾರೆ ಡೊಳ್ಳು ಬಾರಿಸುವಾಗ ಬಲಗೈಯಲ್ಲಿ ಮಾತ್ರ ಕೊಲಿರುತ್ತದೆ. ಒಮ್ಮೆ ಕೊಲಿನಿಂದ ಬಾರಿಸಿದರೆ ಎಡಗೈಯಲ್ಲಿ ಒಂದು ಪೆಟ್ಟು ಕೊಡಬೇಕು. ಬಲಗೈ ಗುಣಿಯ ಬಡಿತ ಬ್ರಹ್ಮದೊಡ್ ಎಂದು ಸಪ್ಪಲ ಮಾಡಿದರೆ ಎಡಗೈ ಪೆಟ್ಟು ಡೌಂವ ಎಂದು ನಾದ ಹಬ್ಬಿಸುತ್ತದೆ. ಹೀಗೆ ಅದು ಬ್ರಹ್ಮ ದೊಡ್ಡಂವ ಎಂದು ಶದ್ದ ಹೊರಹೊಮ್ಮುತ್ತದೆ. ವೃತ್ತಾಕಾರವಾಗಿ ನಿಂತು ಸಜ್ಜುಗೊಂಡ ತಂಡದ ಸದಸ್ಯರು ನಿಧಾನವಾಗಿ ಡೊಳ್ಳು ಭಾರಿಸಲು ತೊಡಗುವುದರೊಂದಿಗೆ ಸುತ್ತಲು ಪ್ರಾರಂಭಿಸುತ್ತಾರೆ. ಹಿಮ್ಮಳವೂ ಜೊತೆಗೂಡುತ್ತದೆ. ಕ್ರಮೇಣ ಗತ್ತು ಹೋದಂತೆ ಡೊಳ್ಳನ್ನು ಶಕ್ತಿ ಮೀರಿ ಕೇಳುವವರ ಕಿವಿ ಗಡಗುಟ್ಟುವಂತೆ ಬಾರಿಸುತ್ತಾರೆ. ಒಂದು ಗತ್ತು ಶಿಖರವನ್ನು ಮುಟ್ಟಿದ ಬಳಿಕ ನಿಲ್ಲಿಸಿದಂತ್ತಾಗಿ, ಮತ್ತೆ ನಿಧಾನವಾಗಿ ಬೆರೋಂದು ಪ್ರಕಾರದ ಬಡಿತ ಆರಂಭವಾಗುತ್ತದೆ. ದಿಲ್ಗಿಗೆ ಹೋದರೂ ಡೊಳ್ಳಿಗೆ ಒಂದೆ ಪೇಟ್ಟು ಎಂಬ ಗಾದೆಯಿಂದ ತಿಳಿಯಬಹುದು. ಬಾರಿಸುವ ವಿಧಾನ ಎಲ್ಲಾ ಗತ್ತುಗಳಲ್ಲಿಯು ಒಂದೇ ರೀತಿ ಇರುತ್ತದೆ. ಲೆಕ್ಕದಲ್ಲಿ ಬಾರಿಸುವಿಕೆ ಹೊಡೆತಗಳ ಸಂಖ್ಯೆಯನ್ನು ಜೊಡಿಸುತ್ತದೆ. ಒಂದು ಗುಣಿ ಎಂದರೆ ಮೊದಲ ಹೆಜ್ಜೆ ಎಂದು ಕರೆಯುತ್ತಾರೆ. ಅಂದರೆ ಒಂದು ಕೊಲು ಬಲಕ್ಕೆ ಒಂದು ಪೆಟ್ಟು ಎಡಕ್ಕೆ. ಇದೇ ಕ್ರಮೇಣ ಹೆಚ್ಚುತ್ತಾ ಹೊಗುತ್ತದೆ. ಏಳು ಗುಣಿ ಪೆಟ್ಟು ಮಾತ್ರ ಬಾರಿಸುವುದಿಲ್ಲ ಕಾರಣ ಅವರ ದೃಶ್ಟಿಯಲ್ಲಿ ಏಳು ಅಶುಬ ಸಂಖ್ಯೆ!ಎನ್ನುತ್ತಾರೆ. ಹೆಚ್ಚು ಗುಣಿಯನ್ನು ಬಾರಿಸುವಾಗ ಜೊಡಿ ಕಲಾವಿದರು ಎದುರು ಬದುರು ಬಂದು ನಿಂತುಕೊಂಡು ಬಲಗಾಲು ಮುಂದಿಟ್ಟು ಬಾಗಿ ಪೈಪೊಟಿಯಿಂದ ಗತ್ತು ಬಾರಿಸುತ್ತಾರೆ. ಆಗ ಕಲಾವಿದರ ಭಂಗಿ, ಬಾರಿಸುವ ಗತ್ತುಗಾರಿಕೆ ನೋಡಲು ರಂಜನಿಯ. ಕೊಲಿನ ಪೆಟ್ಟು ಏರಿಕೆಯಲ್ಲಿಯೇ ಮುಂದುವರಿದು ಮುಕ್ತಾಯಕ್ಕೆ ಬರುತ್ತೆ. ಇದಕ್ಕೆ ಕಲಬುರಗಿ (ಗುಲ್ಬರ್ಗಾ) ಜಿಲ್ಲೆಯಲ್ಲಿ ಹೆಜ್ಜೆಗೆ ಪಾವುದಿ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ಕುರುಬರು ಮೈಗೆ ಕಂಬಳಿ ಸುತ್ತಿ ಡೊಳ್ಳು ಬಾರಿಸುತ್ತಾರೆ. ಮಧ್ಯದಲ್ಲಿ ವೀರಗಾರನೊಬ್ಬ ಕಾವಿ ಉಟ್ಟಿರುತ್ತಾನೆ. ಈತ ಡೊಳ್ಳು ಬಾರಿಸುವುದಿಲ್ಲ ಬದಲಿಗೆ ತಾಳ ನುಡಿಸುತ್ತಾ ಹಾಡು ಹೇಳುತ್ತಾನೆ. ಈತ ಮೆಳಕ್ಕೆ ಸೂತ್ರದಾರನಿದ್ದಂತೆ. ಕಾಲಿನ ಗೆಜ್ಜೆಯ ಸದ್ದು ಕೂಡ ಗುತ್ತಿಗೆ ಹಿನ್ನೆಲೆಯಾಗುತ್ತದೆ.
7 ಕಲಾವಿದರ ಭಂಗಿ, ಬಾರಿಸುವ ಗತ್ತುಗಾರಿಕೆ ನೋಡಲು ರಂಜನಿಯ. ಕೊಲಿನ ಪೆಟ್ಟು ಏರಿಕೆಯಲ್ಲಿಯೇ ಮುಂದುವರಿದು ಮುಕ್ತಾಯಕ್ಕೆ ಬರುತ್ತೆ. ಇದಕ್ಕೆ ಕಲಬುರಗಿ (ಗುಲ್ಬರ್ಗಾ) ಜಿಲ್ಲೆಯಲ್ಲಿ ಹೆಜ್ಜೆಗೆ ಪಾವುದಿ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ಕುರುಬರು ಮೈಗೆ ಕಂಬಳಿ ಸುತ್ತಿ ಡೊಳ್ಳು ಬಾರಿಸುತ್ತಾರೆ. ಮಧ್ಯದಲ್ಲಿ ವೀರಗಾರನೊಬ್ಬ ಕಾವಿ ಉಟ್ಟಿರುತ್ತಾನೆ. ಈತ ಡೊಳ್ಳು ಬಾರಿಸುವುದಿಲ್ಲ ಬದಲಿಗೆ ತಾಳ ನುಡಿಸುತ್ತಾ ಹಾಡು ಹೇಳುತ್ತಾನೆ. ಈತ ಮೆಳಕ್ಕೆ ಸೂತ್ರದಾರನಿದ್ದಂತೆ. ಕಾಲಿನ ಗೆಜ್ಜೆಯ ಸದ್ದು ಕೂಡ ಗುತ್ತಿಗೆ ಹಿನ್ನೆಲೆಯಾಗುತ್ತದೆ.
ಡೊಳ್ಳಿನ ಪ್ರಕಾರಗಳು
ಕುಳಿತು ಭಾರಿಸುವುದು: ಇದನ್ನು ಕಲಬುರಗಿ ಜಿಲ್ಲೆಯಲ್ಲಿ ಕೂತು ಪೌಲಿ ಎಂದು ಕರೆಯುತ್ತಾರೆ. ಕುಕ್ಕರ ಗಾಲಿನಲ್ಲಿ ಕುಳಿತು ಡೊಳ್ಳು ಬರಿಸುತ್ತಾ ಕುಪ್ಪಳಿಸುವುದು. ಇದು ನಿಧಾನವಾಗಿ ನಡೆಯುತ್ತದೆ.
ಲಾಗ ಹಾಕುವುದು: ಇದನ್ನು ತಂಡದ ಒಂದೆರಡು ಮಂದಿ ಮಾತ್ರ ಅಭ್ಯಾಸ ಮಾಡುತ್ತಾರೆ. ಡೊಳ್ಳು ಬಾರಿಸುವಾಗಲೇ ಗತ್ತಿಗೆ ತಕ್ಕಂತೆ ಲಾಗ ಹಾಕುವುದು, ಮತ್ತೆ ನೇರ ಸ್ಥಿತಿಗೆ ಬಂದು ಗತ್ತು ತಪ್ಪದೆ ಪೆಟ್ಟು ಹಾಕುವುದು.
ಹಾರಿ ಬಾರಿಸುವುದು: ಡೊಳ್ಳು ಬಾರಿಸುವಾಗಲೆ ಎರಡು ಅಥವಾ ಮೂರು ಅಡಿ ಮೇಲೆ ಹಾರಿ ಕುಣಿಯುವುದು.
ಮಂಡಿ ಬಡಿತ: ಜೊಡಿ ಕಲಾವಿದರು ಎಡಗಾಲು ಮಂಡಿಯನ್ನು ನೇಲಕ್ಕೆ ಒತ್ತಿ ಬಲಗಾಲನ್ನು ಊರಿಕೊಂಡು ಡೊಳ್ಳು ಬಾರಿಸುವುದು.
ಮರಗಾಲು ಬಡಿತ: ಸುಮಾರು ಒಂದರಿಂದ ಎರಡು ಅಡಿ ಎತ್ತರದ ಮರಗಾಲನ್ನು ಕಟ್ಟಿಕೊಂಡು ಡೊಳ್ಳನ್ನು ಬಾರಿಸುವುದು.
ಗಾಡಿ ಚಕ್ರದ ಬಡಿತ: ಕಬ್ಬಿಣದ ಅಚ್ಚಿನ ಮೇಲೆ ಎತ್ತಿನ ಗಾಡಿಯ ಚಕ್ರವನ್ನಿಟ್ಟು ಅದರ ಮೇಲೆ ನಿಂತುಕೊಂಡು ತಲೆಯ ಮೇಲೆ ತುಂಬಿದ ಕೊಡವನ್ನಿಟ್ಟುಕೊಂಡು ಡೊಳ್ಳು ಬಾರಿಸುವುದು. ಇದೊಂದು ವಿಶೇಷ ಪ್ರಕಾರವೆನಿಸುತ್ತದೆ. ಬಾಯಲ್ಲಿ ತುಂಬಿದ ಕೊಡ ಕಚ್ಚಿಕೊಂಡು ನೀರು ಚಲ್ಲದಂತೆ ಡೊಳ್ಳು ಬಾರಿಸುತ್ತ ಕುಣಿಯುವುದು. ಈ ರೀತಿ ಬಾರಿಸುವುದು ತುಂಬಾ ವಿರಳ.
ಇತರೆ ಪ್ರಕಾರಗಳು: ಕಲಾವಿದನ ಹಿಂಭಾಗ ಹಾಗೂ ಮುಂಭಾಗಗಳಿಗೆ ಒಂದೊಂದು ಡೊಳ್ಳನ್ನು ಕಟ್ಟಿ ಅ ಡೊಳ್ಳಿನ ಮೇಲೆ ಚಿಕ್ಕ ಬಾಲಕರನ್ನು ಕೂರಿಸಿಕೊಂಡು ಎರಡು ಡೊಳ್ಳುಗಳನ್ನು ಬಾರಿಸುವುದು. ಅಲ್ಲದೆ ಒಂದ್ಹೆಜ್ಜೆ ಕುಣಿತ, ಎರಡ್ಡೆಜ್ಜೆ ಕುಣಿತ, ಮಂಡಲ ಕುಣಿತ, ಜೋಡು ಕುಣಿತ ಮುಂತಾದ ಗತ್ತುಗಳಿವೆ. ಜೊಡುಪಾಯಿಲಿ ಎಂದರೆ ಎದುರು ಬದುರು ಕುಳಿತುಕೊಂಡು ಎದೆಯ ಮೇಲೆ ಡೊಳ್ಳು ಕಟ್ಟಿಕೊಂಡು ಹಿಂಬಾಗದಲ್ಲಿ ನೆಲದ ಮೇಲೆ ಇಟ್ಟಿರುವ ಕೊಬ್ಬರಿಯನ್ನೊ ಅಥವಾ ರೂಪಾಯಿ ನೋಟನ್ನೊ ಬಾಯಲ್ಲಿ ತೆಗೆಯುವುದು. ಡೊಳ್ಳು ಕುಣಿತದಲ್ಲಿ ಮತ್ತೊಂದು ಪ್ರಾಕರವೆಂದರೆ ಲವಳ ಹಾಕುವುದು. ಕೆಲವು ಕಡೆ ಇದನ್ನು ಜಡೆ ಹೆಣೆಯುವುದು ಎಂದು ಕರೆಯತ್ತಾರೆ. ವೃತ್ತಾಕಾರದಲ್ಲಿ ಸಣ್ಣ ಹಲಗೆಯ ಮೇಲುಭಾಗದಲ್ಲಿ ಒಂದು ಕಬ್ಬಿಣದ ಕೊಂಡಿಯನ್ನು ಲಗತ್ತಿಸಿ ಅದರ ಸುತ್ತಲೂ ಎಂಟ ರಿಂದ ಹತ್ತು ರಂಧ್ರಗಳನ್ನು ಮಾಡಿ ಅದಕ್ಕೆ ನೂಲಿನ ಸಣ್ಣ ಹಗ್ಗಗಳನ್ನು ಸೇರಿಸಿ ಇಳಿಬಿಟ್ಟಿರುತ್ತಾರೆ. ಎಂಟು ಹತ್ತು ಅಡಿ ಎತ್ತರದಲ್ಲಿ ಕಟ್ಟಿರುವ ಬಿದಿರು ಬೊಂಬಿಗೆ ಈ ಕೊಂಡಿಯನ್ನು ಹುರಿಯಿಂದ ಭದ್ರವಾಗಿ ಬಿಗಿಯುತ್ತಾರೆ. ಡೊಳ್ಳು ಬಡಿಯುವವರು ಒಬ್ಬೊಬರು ತಮ್ಮ ಎಡಗೈಯಲ್ಲಿ ಹಗ್ಗವನ್ನು ಹಿಡಿದು, ಬಲಗೈಯಲ್ಲಿ ಡೊಳ್ಳನ್ನು ಬಾರಿಸುತ್ತಾರೆ ಎದುರು-ಬದುರು, ಅಕ್ಕ-ಪಕ್ಕ, ವೃತ್ತಾಕರವಾಗಿ ಹೀಗೆ ಒಂದು ಕಮ್ರದಲ್ಲಿ ಸುತ್ತುತ್ತಾರೆ. ಮಧ್ಯದಲ್ಲಿ ನಾಯಕ ನಿಂತು ಪದ ಹಾಡುತ್ತಾನೆ. ಕಲಾವಿದರು ಕ್ರಮವಾಗಿ ಸುತ್ತಿದಾಗ ಹಗ್ಗಗಳು ಜಡೆಯಂತೆ ಹೆಣೆದುಕೊಳುತ್ತದೆ. ಹಾಗೆಯೇ ಹಿಮ್ಮುಕ ಮಾಡಿದರೆ ಅದು ಬಿಡಿಸಿಕೊಳುತ್ತಾ ಹೊಗುತ್ತದೆ. ಈ ಕಲೆಯಲ್ಲಿ ಕುಣಿತವಷ್ಟೆ ಅಲ್ಲ ಒಳ್ಳೆಯ ಸಾಹಿತ್ಯವೂ ಇದೆ. ತಂಡದ ನಾಯಕ ತಾಳ ಬಡಿಯುತ್ತಾ ಪದ ಹೇಳಿಕೊಟ್ಟರೆ ಉಳಿದವರು ಧ್ವನಿ ಗೂಡಿಸುತ್ತಾರೆ. ಡೊಳ್ಳಿನ ವಿವಿಧ ಪ್ರಕಾರಗಳನ್ನು ನೋಡಿದಾಗ ಇದು ಶಕ್ತಿ-ಯುಕ್ತಿ ಎರಡನ್ನು ಮೈಗೂಡಿಸಿಕೊಂಡು ಬೆಳೆದು ಬಂದಿರುವ ವಿಶೇಷ ಕಲೆ ಎಂಬುದು ಸ್ವಷ್ಟವಾಗುತ್ತದೆ. ಡೊಡ್ಡ ಗಾತ್ರದ ಡೊಳ್ಳುಗಳನ್ನು ಸೊಂಟಕ್ಕೆ ಬಿಗಿದು ನಿಂತು ಗುಂಪಿನ ಪ್ರಥಮ ದರ್ಶನದಲ್ಲೆ ಪ್ರೇಕ್ಷಕರಿಗೆ ಕಲೆಯ ಭವ್ಯತೆಯ ಕಲ್ಪನೆಯುಂಟಾಗುತ್ತದೆ. ಕ್ರಮ ಕ್ರಮವಾಗಿ ಪೆಟ್ಟುಗಳೊಂದಿಗೆ ಬಡಿತ ಪರಾಕಾಷ್ಠೆಯನ್ನು ಮುಟ್ಟಿದಾಗ ಡೊಳ್ಳಿನ ನಾದ ಮುಗಿಲೇರುತ್ತದೆ. ಆರಂಭದಲ್ಲಿ ಡೊಳ್ಳಿನ ಗತ್ತು ಎಂಬ ಘೋಷಣೆಯನ್ನು ಹುಟ್ಟಿಸಿದೆರೆ ಮುಕ್ತಾಯಕ್ಕೆ ಬರುವ ಹೊತ್ತಿಗೆ ಹಿಡಿದ್ದಾಂಗ್ ಬಟ್ಟಂಗ್ ಎಂಬಂತೆ ಕೆಳುವ ಪೆಟ್ಟು ಹಾಕುತ್ತಾ ಡುಬ್ಬದ್ಹರಿ ಡುಬ್ಬದ್ದುರಿ ಎಂದು ತಿರ್ಮಾನ ಹೇಳುವಂತೆ ಗತ್ತನ್ನು ಮುಗಿಸುತ್ತಾರೆ.
ಡೊಳ್ಳಿನ ಹಾಡು
ಡೊಳ್ಳಿನ ಹಾಡು ಎಂದರೆ ಕುರುಬರ ಹಾಡುಗಳು ಎಂದು ಕರೆಯುತ್ತಾರೆ. ಬೀರದೇವರ ವರ್ಣನೆ ಮತ್ತು ಆತನ ಭಕ್ತಿಯ ಮಹಿಮೆಯನ್ನು ಕುರಿತು ಇರುವ ಹಾಡುಗಳೆ ಹೆಚ್ಚು ಬಹುತರವಾಗಿ ಡೊಳ್ಳಿನ ಹಾಡುಗಳನ್ನು ರಚಿಸಲಾಗಿದೆ. ಹಾಡುಗಳಲ್ಲಿ ಹಾಲುಮತ ಪುರಣ, ಅನಸೂಯ ಪದ, ಮಾರ್ಕಾಂಡೇಯ ಚರಿತ್ರೆ, ನಿಂಬೆಕ್ಕಿನ ಪದ, ಪಡವರ ಪದ, ಡೊಳ್ಳು ಮರದ ಪದ, ಬಸವಣ್ಣನ ಚರಿತ್ರೆ, ಬೀಮಾರ್ಜುನರ ಗರ್ವಭಂಗ, ಬೀರಲಿಂಗೇಶ್ವರನ ಪದ, ಜಂಗುಮನ ಪದ, ಸತ್ಯವಾನ ಸಾವಿತ್ರಿ, ಭಕ್ತ ಕುಂಬಾರ ಇತ್ಯಾದಿ ಪ್ರಸಂಗಗಳು ಸೇರಿವೆ. [೪]
end
****







ಪ್ರಕಾರ....
30. ಸೂತ್ರದ ಗೊಂಬೆಯಾಟ - ಸೂತ್ರಧಾರ ತೆರೆಯ ಮರೆಯಲ್ಲೇ ಇದ್ದು ಕೇವಲ ಗೊಂಬೆಗಳಿಂದ ಅಭಿನಯ ಪ್ರದರ್ಶನ ಮಾಡಿಸುವುದು
 following info is from https://kn.wikipedia.org/
ಸೂತ್ರದ ಗೊಂಬೆ - ಈ ಆಟ ಯಕ್ಷಗಾನದ ಇನ್ನೊಂದು ಪದ್ಧತಿ. ಗೊಂಬೆಗಳನ್ನು ಕುಣಿಸುವ ಆಟಗಾರರು ಪರದೆಯ ಹಿಂದೆ ನಿಂತು, ಅಲಂಕೃತ ಗೊಂಬೆಗಳನ್ನು ಪರದೆಯ ಮುಂದೆ ಬಿಟ್ಟು ಪ್ರೇಕ್ಷಕರಿಗೆ ಕಾಣದಂತೆ ಇದ್ದು ದಾರಗಳಿಂದ ಅವನ್ನು ಆಡಿಸುತ್ತಾರೆ. ಅವು ಕುಣಿದಂತೆ ಹಿಂದೆ ನಿಂತವರು ಹಾಡುತ್ತಾರೆ; ಅವುಗಳ ಅಂಗಾಂಗಗಳ ಚಲನೆಗನುಸಾರವಾಗಿ ಮಾತನಾಡುತ್ತಾರೆ. ಕಥೆ ಸಾಗುತ್ತ ಪ್ರೇಕ್ಷಕರು ಆಟಗಾರನ ಕೈಗೊಂಬೆಗಳಾಗುತ್ತಾರೆ. ಈ ಕೌಶಲ ಅದ್ಭುತವಾದುದು. ಕಥೆಯ ಪಾತ್ರಧಾರಿಗಳಲ್ಲಿ ಹುಟ್ಟುವ ನವರಸಗಳೆಲ್ಲವೂ ಗೊಂಬೆಗಳ ಚಲನೆಗಳ ಮೂಲಕ ಪ್ರೇಕ್ಷಕನಲ್ಲಿ ಉದ್ಭವಿಸಿ ಮಾಯೆಯ ವಾತಾವರಣವನ್ನು ಕಲ್ಪಿಸುತ್ತವೆ.
ಸೂತ್ರದ ಗೊಂಬೆಯಾಟ ಮನರಂಜನೆಗಾಗಿ ಸೃಷ್ಟಿಗೊಂಡು ಬೆಳೆದು ಬಂದಿರುವ ಕಲೆ. ಹೆಸರೇ ಹೇಳುವಂತೆ ಇಲ್ಲಿ ಸೂತ್ರ, ಗೊಂಬೆ ಮತ್ತು ಸೂತ್ರಧಾರ ಪ್ರಮುಖ. ವಿಶೇಷ ವೆಂದರೆ ಸೂತ್ರಧಾರ ತೆರೆಯ ಮರೆಯಲ್ಲೇ ಇದ್ದು ಕೇವಲ ಗೊಂಬೆಗಳಿಂದ ಅಭಿನಯ ಪ್ರದರ್ಶನ ಮಾಡಿಸುವುದು.
ಜನಪದ ಕಲಾಕ್ಷೇತ್ರದ ಅದರಲ್ಲೂ ಜನಪದ ರಂಗಭೂಮಿಯ ಒಂದು ಚಮತ್ಕಾರಯುತ ಆಕರ್ಷಕ ಕಲೆ ಸೂತ್ರದ ಗೊಂಬೆ. ಹೆಸರೇ ಹೇಳುವಂತೆ ಇಲ್ಲಿ ಸೂತ್ರ, ಗೊಂಬೆ ಮತ್ತು ಸೂತ್ರಧಾರ ಪ್ರಮುಖ. ಜೀವಂತ ವ್ಯಕ್ತಿಗಳಿಗೆ ಬದಲಾಗಿ ಗೊಂಬೆಗಳನ್ನು ಸೂತ್ರದ ಹಿಡಿತದಲ್ಲಿ ತನ್ನ ಕೈಚಳಕದಿಂದ ಆಡಿಸಿ ತೋರಿಸುವ ಸೂತ್ರಧಾರನ ಕಲಾಕುಶಲತೆ ಮೆಚ್ಚತಕ್ಕದ್ದು. ವಿಶೇಷವೆಂದರೆ ಸೂತ್ರಧಾರ ತೆರೆಯ ಮರೆಯಲ್ಲೇ ಇದ್ದು ಕೇವಲ ಗೊಂಬೆಗಳಿಂದ ಅಭಿನಯ ಪ್ರದರ್ಶನ ಮಾಡಿಸುವುದು.
ದೂರದಿಂದ ನೋಡುವ ಪ್ರೇಕ್ಷಕರಿಗೆ ರಂಗ ಸಜ್ಜಿಕೆಯ ಮೇಲೆ ಪಾತ್ರದ ಸಂದರ್ಭಕ್ಕನುಗುಣವಾಗಿ ಗೊಂಬೆಗಳು ಬಂದು ಪ್ರದರ್ಶನ ನೀಡಿ ಹೋಗುವುದು ಮಾತ್ರ ಕಾಣುತ್ತದೆ. ಸೂತ್ರದ ಹಿಡಿತದಲ್ಲಿ ಆಡುತ್ತಿರುವುದು ಕಾಣಿಸುವುದಿಲ್ಲ. ಆಧುನಿಕ ರೀತಿಯ ಚಲನ ಚಿತ್ರಗಳ ಪ್ರವೇಶವಾಗುವ ಮೊದಲು ಕಾಲಿರಿಸಿದ ಮೂಕಿ ಚಿತ್ರಗಳನ್ನು ನೆನಪಿಗೆ ತರುವ ಈ ಕಲೆ ಆ ಚಿತ್ರಗಳಿಗಿಂತ ಅನೇಕ ಪಾಲು ಆಕರ್ಷಕ ರೀತಿಯಲ್ಲಿ ಕಂಡು ಬರುತ್ತದೆ. ಈ ಕಲೆಯನ್ನು 'ಪುತ್ಥಳಿ ಗೊಂಬೆಯಾಟ’ವೆಂದೂ ಕರೆಯುತ್ತಾರೆ.
ಕನ್ನಡ ನಾಡಿನಲ್ಲಿ ಈ ಕಲೆ ಅತ್ಯಂತ ಪ್ರಾಚೀನತೆಯನ್ನು ಹೊಂದಿರುವುದಕ್ಕೆ ಆಧಾರಗಳಿವೆ. ವಚನಗಳಲ್ಲಿ ಇವುಗಳ ಪ್ರಸ್ತಾಪ ಬರುತ್ತದೆ. ದಾಸರ ಪದಗಳಲ್ಲಿ ಬರುವ'ಗೊಂಬೆಯಾಟ’ ಶಬ್ದ ಹಾಗೂ ಕೆಲವು ಶಾಸನಗಳಲ್ಲಿನ ಉಲ್ಲೇಖಗಳು ಗಮನಾರ್ಹ. ಸೂತ್ರದ ಗೊಂಬೆಯಾಟಕ್ಕೂ ಯಕ್ಷಗಾನ ಬಯಲಾಟಕ್ಕೂ ಒಂದು ಬಗೆಯ ಸಂಬಂಧವಿದ್ದು ಅವು ಪರಸ್ಪರ ಪೂರಕವಾಗಿವೆ. ಎರಡು ಕಲೆಗಳಲ್ಲಿ ಯಾವುದು ಪ್ರಾಚೀನ ಎಂಬುದನ್ನು ಸ್ಪಷ್ಟವಾಗಿ ಹೇಳಬರುವುದಿಲ್ಲ.
ಮನರಂಜನೆಯ ಸಾಧನವಾಗಿ ಸೂತ್ರದ ಗೊಂಬೆ
ಸೂತ್ರದ ಗೊಂಬೆಯಾಟ ಮನರಂಜನೆಗಾಗಿ ಸೃಷ್ಟಿಗೊಂಡು ಬೆಳೆದುಬಂದಿರುವ ಕಲೆ. ಗ್ರಾಮಾಂತರ ಪ್ರದೇಶಗಳ ಮೇಲೆ ನಾಗರಿಕತೆ ಯ ಪ್ರಭಾವ ಬೀಳುವುದಕ್ಕೆ ಮುಂಚೆ ಈ ಕಲೆಗೆ ಒಳ್ಳೆಯ ಆಕರ್ಷಣೆಯಿತ್ತು. ಮನರಂಜನೆಯ ಸಾಧನವಾಗಿ ಸೂತ್ರದ ಗೊಂಬೆ ಪ್ರಚಲಿತವಿದ್ದ ಕಾಲದಲ್ಲೇ ಯಕ್ಷಗಾನ-ಬಯಲಾಟ ಕಲೆಗಳು ಇದ್ದುವಾದರೂ ಈ ಕಲಾ ತಂಡಗಳು ಬಹುಶಃ ವೆಚ್ಚದ ದೃಷ್ಟಿಯಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಪ್ರದರ್ಶನ ನೀಡುವುದು ಕಷ್ಟವಾಗಿತ್ತು.
ಅಂತಹ ಸನ್ನಿವೇಶದಲ್ಲಿ ಸೀಮಿತ ಸಿಬ್ಬಂದಿ ಮತ್ತು ಕಡಿಮೆ ವೆಚ್ಚದ ಸೂತ್ರದ ಗೊಂಬೆಯಾಟದ ತಂಡಗಳು ಆಹ್ವಾನ ಬಂದ ಸ್ಥಳಗಳಿಗೆ ಹೋಗಿ ಪ್ರದರ್ಶನ ನೀಡುತ್ತಿದ್ದುವು. ಈ ಕಾರಣದಿಂದಾಗಿ ಸೂತ್ರ ಗೊಂಬೆ ಪೂರ್ವಕಾಲದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿತ್ತು. ಸೂತ್ರದ ಗೊಂಬೆಯಾಟ ಪ್ರಮುಖವಾಗಿ ತುಮಕೂರು, ಮೈಸೂರು, ಮಂಡ್ಯ, ದಕ್ಷಿಣ ಕನ್ನಡ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹಾಗೂ ಬಳ್ಳಾರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ.
ಈ ಕಲೆ ತಲೆತಲಾಂತರಗಳಿಂದ ಬೆಳೆದು ಬಂದಿದ್ದರೂ ಇದನ್ನೇ ಜೀವನವೃತ್ತಿಯನ್ನಾಗಿ ಅವಲಂಬಿಸಿರುವವರು ಕಡಿಮೆ. ಈ ಕಲೆ ಪ್ರಚಲಿತವಿರುವ ಪ್ರದೇಶಗಳಲ್ಲಿ ಕೆಲವು ಆಸಕ್ತ ಕುಟುಂಬಗಳು ತಮ್ಮದೇ ಆದ ಮಂಡಳಿಗಳನ್ನು ರಚಿಸಿಕೊಂಡು ಕಲಾಪ್ರದರ್ಶನ ನೀಡುತ್ತ ಬಂದಿವೆ. ಇವರಿಗೆ ಇದೇ ಮೂಲ ವೃತ್ತಿಯಲ್ಲ; ಒಂದು ಹವ್ಯಾಸ. ಇಂಥ ಜನಾಂಗದವರೇ ಈ ಕಲೆಯನ್ನು ಪ್ರದರ್ಶಿಸಬೇಕೆಂಬ ನಿಯಮ-ನಿಬಂಧನೆಗಳೂ ಇಲ್ಲ. ಈ ಕಲಾಪ್ರದರ್ಶಕರಲ್ಲಿ ವ್ಯವಸಾಯ ಹಾಗೂ ಕುಶಲಕರ್ಮಿ ಕುಟುಂಬಗಳು ಹೆಚ್ಚು.
ವಿಶಿಷ್ಟತೆ
ಹತ್ತರಿಂದ ಹದಿನೈದು ಕಲಾವಿದರಿಂದ ಕೂಡಿದ ಕಲಾ ತಂಡದಲ್ಲಿ ಪ್ರತಿಯೊಂದು ಗೊಂಬೆಗೂ ಹಿನ್ನೆಲೆಯಲ್ಲಿ ಒಬ್ಬೊಬ್ಬ ಸೂತ್ರಧಾರನಿರಬೇಕು. ಈ ಆಟದಲ್ಲಿ ಭಾಗವತನೇ ಪ್ರಮುಖ. ತೆರೆಯ ಮುಂದೆ ಬರುವ ಪಾತ್ರಗಳಿಗೆ ತಕ್ಕಂತೆ ಭಾಗವತನಾದವನು ಹಾಡುತ್ತಾನೆ. ಉಳಿದವರು ದನಿಗೂಡಿಸುತ್ತಾರೆ. ಗೊಂಬೆಗಳ ಕುಣಿತ ನಡೆಯುತ್ತದೆ ಪಾತ್ರಗಳಿಗೆ ತಕ್ಕ ಮಾತುಗಳನ್ನು ಆಯಾ ಪಾತ್ರಗಳ ಸೂತ್ರಧಾರರೇ ಆಡುತ್ತಾರೆ.
ಮಾತಿಗೆ ತಕ್ಕಂತೆ ಸೂತ್ರದ ಮೂಲಕ ಗೊಂಬೆಗಳ ಅಂಗಚಲನೆ, ಭಾವಾಭಿನಯ ವ್ಯಕ್ತವಾಗುತ್ತದೆ. ತಂಡದಲ್ಲಿ ಸೂತ್ರಧಾರಿಗಳಲ್ಲದೆ ಗೊಂಬೆಗಳನ್ನು ಸಿದ್ಧಪಡಿಸಿಕೊಡಲು ಒಬ್ಬಿಬ್ಬರು ಸಹಾಯಕರಿರುತ್ತಾರೆ. ಸೂತ್ರದ ಗೊಂಬೆಯಾಟದ ಹಿಮ್ಮೇಳ ಬಯಲಾಟದ ಹಿಮ್ಮೇಳವನ್ನೇ ಹೋಲುತ್ತದೆ. ಹಿಮ್ಮೇಳದ ಮುಖ ವೀಣೆ, ತಾಳ ಮತ್ತು ಮೃದಂಗ ವಾದಕರು ರಂಗಸ್ಥಳದ ಬಲಭಾಗದಲ್ಲಿರುತ್ತಾರೆ.
ಬಳಸುವ ಸಾಧನ-ಸಲಕರಣೆಗಳು/ಮಾಡುವ ವಿಧಾನ
ಗೊಂಬೆಗಳನ್ನು ಸಾಮಾನ್ಯವಾಗಿ ಸಾಗುವಾನಿ, ಹಾಲಿವಾಣ, ಬೂರಗ, ಅತ್ತಿ ಮುಂತಾದ ಹಗುರವಾದ ಮರಗಳಿಂದ ತಯಾರಿಸುತ್ತಾರೆ. ಮುಖ, ಕೈಕಾಲು -ಇವುಗಳನ್ನು ರಚಿಸಲು ಸಾಗುವಾನಿಯನ್ನು ಬಳಸಿದರೆ, ಇನ್ನುಳಿದ ಭಾಗಗಳ ತಯಾರಿಕೆಗೆ ಮೆದು ವಾದ ಹಾಲಿವಾಣ, ಬೂರಗ ಅತ್ತಿ ಇತ್ಯಾದಿ ಮರಗಳನ್ನು ಬಳಸುತ್ತಾರೆ. ಈ ಕಲೆಯಲ್ಲಿ ಬಳಸುವ ಗೊಂಬೆಗಳನ್ನು ಸ್ಥೂಲವಾಗಿ ಗಂಡು ಗೊಂಬೆ, ಹೆಣ್ಣುಗೊಂಬೆ, ನಕಲಿ ಗೊಂಬೆ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು.
ಗಂಡು ಗೊಂಬೆಗಳ ಎತ್ತರ ೧೮ ಅಂಗುಲದಿಂದ ೨೭ ಅಂಗುಲಗಳು. ಹೆಣ್ಣು ಗೊಂಬೆಗಳು ಎತ್ತರದಲ್ಲಿ ಗಂಡು ಗೊಂಬೆಗಳಿಗಿಂತ ಚಿಕ್ಕವಿರುತ್ತವೆ. ಗೊಂಬೆಗಳಿಗೆ ಕೈ, ಕುತ್ತಿಗೆ, ಕಾಲುಗಳನ್ನು ಪ್ರತ್ಯೇಕವಾಗಿ ಕೀಲುಗಳ ಅಥವಾ ಗಟ್ಟಿಯಾದ ದಾರಗಳಿಂದ ಜೋಡಿಸಿರುತ್ತಾರೆ. ಈ ಜೋಡಿ ದಾರಗಳ ತುದಿಗಳನ್ನು ಒಂದು ಅಡ್ಡಪಟ್ಟಿಯ ಸಹಾಯದಿಂದ ಬಂಧಿಸಿರುತ್ತಾರೆ. ವಸ್ತ್ರಾಲಂಕಾರ, ಬಣ್ಣವೆಲ್ಲಾ ಯಕ್ಷಗಾನದ ಪಾತ್ರಗಳಿಗಿರುವಂತೆಯೇ ಇರುತ್ತದೆ.
ರೌದ್ರ, ಸೌಮ್ಯ, ಕೋಮಲ ಇತ್ಯಾದಿ ಪಾತ್ರಗಳಿಗನುಗುಣವಾಗಿ ಗೊಂಬೆಗಳಿಗೆ ಬಣ್ಣ ಹಾಕಿರುತ್ತಾರೆ. ರಾಕ್ಷಸ ಪಾತ್ರಗಳ ಮುಖವರ್ಣಿಕೆ ಉಗ್ರಸ್ವರೂಪದ್ದಾಗಿರುತ್ತದೆ. ಶ್ರೀಕೃಷ್ಣನ ಪಾತ್ರಕ್ಕೆ ನೀಲಿಬಣ್ಣವನ್ನು ಬಳಸುತ್ತಾರೆ. ನಾರದ, ಮುನಿ ಪಾತ್ರಗಳು ಸಾಮಾನ್ಯವಾಗಿ ಸ್ವಲ್ಪ ಗಿಡ್ಡವಾಗಿರುತ್ತವೆ. ಕಥಾ ಪಾತ್ರಗಳಿಗನುಗುಣವಾಗಿ ಅವನ್ನು ಸುಂದರವಾದ ಬಟ್ಟೆಗಳಿಂದ ಸಿಂಗರಿಸಿರುತ್ತಾರೆ.
ಹೆಣ್ಣು ಪಾತ್ರಗಳ ಬಳೆ, ಸರ, ಸೊಂಟಕ್ಕೆ ವಡ್ಯಾಣ, ಪಾದಕ್ಕೆ ನೂಪುರ, ಕರ್ಣಪತ್ರ, ಕಿರೀಟಾದಿ ಅಲಂಕಾರಗಳನ್ನು ಕೆತ್ತನೆಯಲ್ಲಿಯೇ ರಚಿಸಿ ಬಣ್ಣ ಹಾಕಿರುತ್ತಾರೆ. ಅಲ್ಲದೆ ಪಾತ್ರಗಳಿಗೆ ತಕ್ಕಂತಹ ಆಯುಧಗಳನ್ನು ಕೈಗಳಿಗೆ ಭದ್ರವಾಗಿ ಹೊಂದಿಸಿರುತ್ತಾರೆ. ಉದಾಹರಣೆಗೆ- ಅರ್ಜುನನಿಗೆ ಬಿಲ್ಲು ಬಾಣ, ಭೀಮನಿಗೆ ಗದೆ, ಶ್ರೀಕೃಷ್ಣನಿಗೆ ಚಕ್ರ, ಕೊಳಲು ಇತ್ಯಾದಿ.
ಗಂಡು ಗೊಂಬೆಗಳನ್ನು ಕುಣಿಸುವಾಗ ಅದಕ್ಕೊಪ್ಪುವ ವೀರ, ಪರಾಕ್ರಮ, ಗಂಭೀರ ನಿಲುವುಗಳು ಪ್ರದರ್ಶಿತವಾಗುವಂತೆ ಮತ್ತು ಹೆಣ್ಣು ಗೊಂಬೆಗಳನ್ನು ಕುಣಿಸುವಾಗ ಹೆಣ್ಣಿಗನುಗುಣವಾದ ನಾಚಿಕೆ, ವಯ್ಯಾರ, ಬೆಡಗು-ಬಿನ್ನಾಣಗಳು ತೋರ್ಪಡುವಂತೆ ಅಂಗ ಚಲನೆಯಲ್ಲಿ ವ್ಯತ್ಯಾಸಗಳನ್ನು ಕಾಣಿಸುವ ಸೂತ್ರಧಾರರ ಕಲಾ ಚಾತುರ್ಯ ಅದ್ಭುತವಾದುದು!
ಆಡಿಸುವ ಕಲೆ
ಗೊಂಬೆಗಳ ತಲೆಗೆ ಎರಡು ಸೂತ್ರಗಳಿರುತ್ತವೆ. ಈ ಸೂತ್ರಗಳನ್ನು ಸೂತ್ರಧಾರ ತನ್ನ ತಲೆಗೆ ಸಿಕ್ಕಿಸಿಕೊಂಡಿರುತ್ತಾನೆ. ಕೈಗಳಿಗೆ ಉದ್ದನೆಯ ತೆಳುವಾದ ಸರಳಿನ ಕೊಕ್ಕೆಯನ್ನು ಹೊಂದಿಸಿಕೊಂಡು ಅದನ್ನು ಸೂತ್ರಧಾರ ಕೈಯಲ್ಲಿ ಹಿಡಿದು ಆಡಿಸುತ್ತಾನೆ. ಈ ಗೊಂಬೆಗಳ ಕಾಲುಗಳು ಕಾಣಿಸದಂತೆ ತುಂಬಿದ ನೆರಿಗೆಯುಳ್ಳ ಸೀರೆಯನ್ನು ನೆಲದವರೆಗೆ ಹಾಸುವಂತೆ ತೊಡಿಸುತ್ತಾರೆ. ಆಭರಣಗಳೂ ಪಾತ್ರಕ್ಕೆ ತಕ್ಕಂತೆ ಇದ್ದು, ತಲೆಗೆ ಸೂಕ್ತ ಶೃಂಗಾರ ಮಾಡಿ, ಹೆರಳು (ಜಡೆ) ಹಾಕಿ ಹೂವು ಮುಡಿಸಿರುತ್ತಾರೆ.
ಸುಂದರವಾದ ಕೆತ್ತನೆಯ ಮುಖವರ್ಣಿಕೆ ತುಂಬ ಆಕರ್ಷಣೀಯವಾಗಿರುತ್ತದೆ. ನಕಲಿ ಗೊಂಬೆಗಳ ಎತ್ತರ ಸುಮಾರು ೧೮ ರಿಂದ ೨೨ ಅಂಗುಲಗಳಷ್ಟಿರುತ್ತದೆ. ಉಳಿದ ಗೊಂಬೆಗಳಂತೆ ಇವಕ್ಕೂ ತಲೆ ಮತ್ತು ಕೈಗಳಿಗೆ ಸೂತ್ರಗಳಿರುತ್ತವೆ. ಕೆಳದವಡೆ ಚಲಿಸುವಂತಿದ್ದು ಅದಕ್ಕೂ ಸೂತ್ರ ಜೋಡಿಸಿ ಹಾಸ್ಯ ಸನ್ನಿವೇಶಕ್ಕೆ ಅನುಕೂಲವಾಗುವಂತೆ ರಚಿಸಿರುತ್ತಾರೆ. ಅಂಗಿ-ಚಲ್ಲಣ ತೊಡಿಸಿದ ನಕಲಿಗೊಂಬೆಗಳ ಕೈಯಲ್ಲಿ ಕೋಲು ಇರುತ್ತದೆ. ತಲೆಯ ಮೇಲೆ ಉದ್ದನೆಯ ಟೋಪಿ ಇರುತ್ತದೆ.
ನಕಲಿ ಸ್ತ್ರೀ ಗೊಂಬೆಗಳು ಸಾಧಾರಣ ಸೀರೆ ಧರಿಸಿದ್ದು ಸಾಮಾನ್ಯವಾಗಿರುತ್ತವೆ. ದೂತ-ದೂತಿಯರ ಕೆಲಸವೂ ಈ ನಕಲಿ ಪಾತ್ರಗಳಿಂದಲೇ ಆಗುತ್ತದೆ. ಸೂತ್ರಧಾರಿಗಳು ಕಥಾಪ್ರಸಂಗದ ಮಧ್ಯೆ ಮಧ್ಯೆ ಜನರನ್ನು ನಗಿಸಲು ನಕಲಿ ಪಾತ್ರಗಳನ್ನು ತಂದು, ಹಾಸ್ಯ ಸನ್ನಿವೇಶಗಳಿಂದ ಪ್ರೇಕ್ಷಕರನ್ನು ನಗಿಸುತ್ತಾರೆ. ಇವುಗಳ ಮುಖವರ್ಣಿಕೆಯೇ ನಗುವಂತಿದ್ದು, ಚಾಕಚಕ್ಯತೆಯ ಮಾತುಗಾರಿಕೆಯ ಸೂತ್ರಧಾರಿಗಳ ಕೈಯಲ್ಲಿ ಇವು ಉತ್ತಮ ಮನರಂಜನೆಯನ್ನು ನೀಡುತ್ತವೆ.
ಈ ನಕಲಿ ಪಾತ್ರಗಳನ್ನು ಕೆಲವು ಕಡೆ ಹನುಮನಾಯಕನ ದಾಂಪತ್ಯ, ಅಳ್ಳಾಚಾರಿಯ ದಾಂಪತ್ಯ ಕೇವಲ ನಗೆಗಾಗಿ ಇರುವುದು. ಅಳ್ಳಾಚಾರಿಯ ಗೊಂಬೆ ಮಾನವನ ಮನದ ವಿಡಂಬನೆಯನ್ನು ಪ್ರದರ್ಶಿಸಿ ಹುಚ್ಚು ನಗೆಯನ್ನು ತರಿಸುವುದು. ಅಳ್ಳಾಚಾರಿ ಅವನ ಹೆಂಡತಿ ಇಬ್ಬರೂ ತೀರ ಮುಪ್ಪಿನವರು. ಅವರಿಗೆ ಮಕ್ಕಳಿರುವುದಿಲ್ಲ. ಮತ್ತ ಸಿರಿವಂತಿಕೆಯ ಪ್ರದರ್ಶನ ಮಾಡುವುದಕ್ಕಾಗಿ ಆಡಿಯಿಂದ ಮುಡಿಯವರೆಗೂ ವಿವಿಧಾಲಂಕಾರಗಳಿಂದ ಭೂಷಿತರಾಗಿರುವರು.
ತಮ್ಮ ವೃದ್ಧಾಪ್ಯಕ್ಕೆ ಸರಿ ಹೊಂದದ ಶೃಂಗಾರ ಚೇಷ್ಟೆಗಳನ್ನು ತೋರಿಸುತ್ತಾ ಭಾವಾಭಾಸವನ್ನುಂಟು ಮಾಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸುವರು. ಗಣಪತಿ, ಶಾರದೆ, ಬಾಲವೇಷಗಳ ಗೊಂಬೆಗಳೂ ಇದ್ದು ಅವು ಸಾಮಾನ್ಯ ೧೪ ಅಂಗುಲ ಎತ್ತರ ವಿರುತ್ತವೆ. ಬಯಲು ರಂಗಮಂದಿರವೇ ಗೊಂಬೆಯಾಟಕ್ಕೆ ಸೂಕ್ತ ವೇದಿಕೆ. ಸಾಮಾನ್ಯವಾಗಿ, ಸುಮಾರು ಹತ್ತು ಅಡಿ ಉದ್ದ, ಐದು ಅಡಿ ಎತ್ತರ ನಾಲ್ಕೈದು ಅಡಿ ಅಗಲದಷ್ಟಿರುವ ಒಂದು ಚೌಕಟ್ಟಿನಲ್ಲಿ ಸೂತ್ರದ ಗೊಂಬೆಯಾಟವನ್ನು ತೋರಿಸುತ್ತಾರೆ.
ಅದರ ಮೇಲಂಚಿನಲ್ಲಿ ಸೂತ್ರಧಾರಿಗಳು ಕೈ ಊರಿಕೊಂಡು ಎದೆಯೊಡ್ಡಿಕೊಂಡು ಗೊಂಬೆ ಕುಣಿಸಲು ಅನುಕೂಲವಾಗುವಂತೆ ಭದ್ರವಾದ ಅಡ್ಡಕಟ್ಟನ್ನು ಕಟ್ಟಿರುತ್ತಾರೆ. ಇದನ್ನು `ಮಂತಿನ ಕೋಲು’, `ಮಂತಿನ ಕಟ್ಟೆ’ ಅಥವಾ `ಮಂತ್ರದ ಕಟ್ಟೆ’ ಎಂದು ಕರೆಯುತ್ತಾರೆ. ಈ ಅಡ್ಡಕಟ್ಟಿನಿಂದ ಮೂರಡಿ ಅಂತರದಲ್ಲಿ (ಮುಂಭಾಗಕ್ಕೆ) ಸೂತ್ರಧಾರಿಗಳು ಕಾಣಿಸದಂತೆ ಮೇಲಿನಿಂದ ಮತ್ತೊಂದು ತೆರೆಯನ್ನು ಇಳಿ ಬಿಟ್ಟಿರುತ್ತಾರೆ.
ಈ ಎರಡು ತೆರೆಗಳ ನಡುವಿನ ಸ್ಥಳವೇ ಗೊಂಬೆಗಳ ರಂಗಸ್ಥಳ. ಗೊಂಬೆಗಳ ಪ್ರವೇಶಕ್ಕೆ ಎರಡೂ ಕಡೆಗಳಲ್ಲಿ ಜಾಗ ಬಿಟ್ಟಿರುತ್ತಾರೆ. ಸೂತ್ರಧಾರಿಗಳು ಮಂತಿನ ಕಟ್ಟೆಗೆ ಎದೆಯೊಡ್ಡಿ ಮುಂದಕ್ಕೆ ತಲೆಬಾಗಿ ಕೆಳಗೆ ನೋಡುತ್ತಾ ಸೂತ್ರಗಳನ್ನು ಆಡಿಸಿ ಗೊಂಬೆ ಗಳನ್ನು ಕುಣಿಸುತ್ತಾರೆ. ಅವಶ್ಯಬಿದ್ದರೆ ಗೊಂಬೆಗಳನ್ನು ಮೇಲಿನಿಂದಲೇ ಪ್ರವೇಶ ಮಾಡಿಸುತ್ತಾರೆ.
ಹಿಂದೆ ಹೊಂಗೆ ಎಣ್ಣೆ, ಹರಳೆಣ್ಣೆ, ಹಿಪ್ಪೆಎಣ್ಣೆಯನ್ನು ಬೆಳಕಿಗಾಗಿ ಬಳಸುತ್ತಿದ್ದು ಸೂತ್ರಗಳು ಕಾಣಿಸದೇ ಬರೀ ಗೊಂಬೆಗಳ ಅಭಿನಯವೇ ಪ್ರೇಕ್ಷಕರಿಗೆ ತೋರಿಬಂದು ಅತ್ಯಂತ ಪರಿಣಾಮಕಾರಿವಾಗುತ್ತಿತ್ತು. ಆದರೆ ಈಗ ವಿದ್ಯುದ್ವೀಪಗಳ ಬಳಕೆಯಿಂದ ಗೊಂಬೆ ಪ್ರದರ್ಶನದಲ್ಲಿಯ ಸೂಕ್ಷ್ಮತೆ, ಕಲಾತ್ಮಕತೆ ಮಾಯವಾಗಿದೆ ಎನ್ನಬಹುದು.
ಪ್ರದರ್ಶನ
ರಂಗಸ್ಥಳದ ಒಳಭಾಗದಲ್ಲಿ ಪ್ರತ್ಯೇಕವಾದ ಸ್ಥಳದಲ್ಲಿ ಸುತ್ತಲೂ ಗೊಂಬೆಗಳನ್ನು ತೂಗಿ ಬಿಡಲು ಹಗ್ಗಗಳನ್ನು ಕಟ್ಟಿರುತ್ತಾರೆ. ಪ್ರದರ್ಶನಕ್ಕೆ ಇಪ್ಪತ್ತರಿಂದ ಇಪ್ಪತ್ತೈದು ಗೊಂಬೆಗಳು ಬೇಕಾಗುತ್ತವೆ. ಗೊಂಬೆಗಳ ಸಂಖ್ಯೆ ಕಲಾಮಂಡಳಿಯ ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಅರವತ್ತು ಗೊಂಬೆಗಳನ್ನು ಇಟ್ಟಿರುವವರೂ ಇದ್ದಾರೆ. ಸೂತ್ರದ ಗೊಂಬೆಯಾಟದಲ್ಲಿ ಗೊಂಬೆ ಕುಣಿಸುವುದನ್ನು ಬಿಟ್ಟರೆ ಉಳಿದೆಲ್ಲ ರೀತಿನೀತಿ ಸಂಪ್ರದಾಯಗಳೂ ಯಕ್ಷಗಾನ ಬಯಲಾಟದಲ್ಲಿರುವಂತೆಯೇ.
ಪ್ರಾರಂಭದಲ್ಲಿ ಗಣಸ್ತುತಿ, ಶಾರದಾ ಪೂಜೆ ಇತ್ಯಾದಿಗಳಿದ್ದು, ಅದರಲ್ಲಿ ಬಳಸುವ ಕಥಾಪ್ರಸಂಗಗಳನ್ನೇ ಇಲ್ಲೂ ಬಳಸಿಕೊಳ್ಳುತ್ತಾರೆ. ಇಲ್ಲಿಯೂ ಭಾಗವತನದೇ ಮುಖ್ಯ ಪಾತ್ರ. ಕಥೆಯ ಪ್ರಾರಂಭದಲ್ಲಿ ಮತ್ತು ಅಂತ್ಯದಲ್ಲಿ ಪ್ರಾರ್ಥನೆ ಮತ್ತು ಮಂಗಳವನ್ನು ಗೊಂಬೆಗಳ ಕೈಲಿ ಆರತಿ ಬೆಳಗಿಸುವುದರ ಮೂಲಕ ಮಾಡಿಸುತ್ತಾರೆ.
ಸೂತ್ರಗೊಂಬೆಯಾಟದಲ್ಲಿ ಪೌರಾಣಿಕ ಪ್ರಸಂಗಗಳ ಪ್ರದರ್ಶನವೇ ಹೆಚ್ಚು. ಕುರುಕ್ಷೇತ್ರ, ಕೃಷ್ಣಾರ್ಜುನರ ಕಾಳಗ, ಲವ ಕುಶ, ವೀರ ಅಭಿಮನ್ಯು, ರತಿ ಕಲ್ಯಾಣ, ಕನಕಾಂಗಿ, ಕೃಷ್ಣ ಸಂಧಾನ, ಕರ್ಣಪರ್ವ, ಲಂಕಾದಹನ, ಶಿವಾರ್ಜುನ ಕಾಳಗ ಮುಂತಾದವು ಜನಪ್ರಿಯ ಪ್ರಸಂಗಗಳು.
end
****






ಪ್ರಕಾರ....
31. ತೊಗಲು ಗೊಂಬೆಯಾಟ - ಚರ್ಮದ ಗೊಂಬೆಗಳ ಆಟವೆಂದು ಅರ್ಥ ಮತ್ತು ನೆರಳು ಗೊಂಬೆಯಾಟ ಎಂದೂ ಹೆಸರು 
 following info is from https://kn.wikipedia.org/
ತೊಗಲು ಗೊಂಬೆಯಾಟ - ಈ ಗೊಂಬೆಗಳು ಕಾಗದದಂತೆ ತೆಳ್ಳಗಿರುವ ಹದ ಮಾಡಿದ ಚರ್ಮದವು. ಹಿಂದೆ ಪ್ರಕಾಶವಾದ ಬೆಳಕಿಟ್ಟರೆ ಅವು ಪರದೆಯ ಮೇಲೆ ಕಾಣುತ್ತವೆ. ಅವಕ್ಕೆ ಬಣ್ಣ ಹಾಕಿರುತ್ತಾರೆ. ತೆಳ್ಳನೆ ಪರದೆಯ ಹಿಂದೆ ಪ್ರಕಾಶವಾದ ಒಂದು ದೀಪವನ್ನು ಕೊಂಚ ಪಕ್ಕಕ್ಕೆ ನೇತುಹಾಕಿರುತ್ತಾರೆ. ಆಟಗಾರನ ಇಡೀ ಸಂಸಾರವೇ ಈ ಆಟದಲ್ಲಿ ಭಾಗವಹಿಸುತ್ತದೆ. ಒಂದೊಂದಾಗಿ ಗೊಂಬೆಗಳನ್ನು ತೆಗೆದು ಕೊಡುವುದು, ಅವನ್ನು ಕ್ರಮವಾಗಿ ಜೋಡಿಸುವುದು ಮುಂತಾದ ಕೆಲಸವನ್ನು ಹೆಂಡತಿ ಮಕ್ಕಳು ನಿರ್ವಹಿಸುತ್ತಾರೆ.
ಗೊಂಬೆಗಳ ಕೈಕಾಲುಗಳಿಗೆ ಕಡ್ಡಿಗಳನ್ನು ಸಿಕ್ಕಿಸಿ, ತನ್ನ ನೆರಳು ಪರದೆಯ ಮೇಲೆ ಬೀಳದಂತೆ ಬೆಳಕಿನ ಹಿಂದೆ ನಿಂತು ಅವನ್ನು ಯಜಮಾನ ಪರದೆಗೆ ಅಂಟಿಸುತ್ತಾನೆ. ಅವುಗಳ ಕೈಕಾಲು ಆಡಿಸಿ ಅದಕ್ಕೆ ಸರಿಯಾಗಿ ಮಾತನಾಡುತ್ತಾನೆ. ಹೆಣ್ಣು ಗೊಂಬೆಗೆ ಹೆಂಡತಿಯ ಸ್ವರ ಸೇರುತ್ತದೆ. ಗೊಂಬೆಗಳು ಕುಣಿಯುವಾಗ ಮಕ್ಕಳ ಹಾಡುಗಳು, ಗೆಜ್ಜೆಶಬ್ದ, ಗಡಸು ಗಂಡಸಿನ ಮಾತುಗಳಿಗೆ ಗಂಡಿನ ಕಂಠ- ಹೀಗೆ ಈ ತೊಗಲು ಗೊಂಬೆಯ ಆಟ ಮೂಕ ಚಲನಚಿತ್ರಕ್ಕೆ ಶಬ್ದ ಜೋಡಿಸಿದಂತಿರುತ್ತದೆ.
end
****
 following info is from https://kn.wikipedia.org/
ತೊಗಲುಗೊಂಬೆಯಾಟದವರನ್ನು ಕಿಳ್ಳೆಕ್ಯಾತ, ಸಿಳ್ಳೆಕ್ಯಾತ, ಕಟುಬೂಜ್ಯಾತ, ಕೋಲುಕ್ಯಾತ, ಅಸ್ತ್ರೀಕ್ಯಾತ, ಕಾಲಿಕ್ಯಾತ, ಬುಂಡೇಕ್ಯಾತ ಹೀಗೆ ಅನೇಕ ಹೆಸರುಗಳಿಂದ ಕರೆಯುವರು. ಕಿಳ್ಳೆಕ್ಯಾತರು, ಗೊಂಬೆರಾಮರು ಹಾಗೂ ಚಿತ್ರಮರಾಟರು ಎಂಬ ಹೆಸರಿನಿಂದ ತೊಗಲುಗೊಂಬೆಯಾಟ ಆಡಿಸುವವರನ್ನು ಗುರುತಿಸಬಹುದು.
ಇವರು ರಾಮಾಯಣದಲ್ಲಿ ಗುಹನ ವಂಶಕ್ಕೆ ಸೇರಿದವರೆಂದೂ ಗೊಂಬೆಯಾಟ ಕುಲಕಸುಬಾಗಿ ಇವರಲ್ಲಿ ಉಳಿಯಲು ಶ್ರೀ ರಾಮನ ಶಾಪವೇ ಕಾರಣವೆಂದು ದಂತ ಕಥೆಯನ್ನು ಹೇಳುವರು. ಕಿಳ್ಳೆಕ್ಯಾತರ ಬಗೆಗಿನ ಕಥೆಯೊಂದು ಈ ರೀತಿ ಇದೆ. "ಕತ್ತಾರೆ ಕಾಳಾಚಾರಿ ಎಂಬ ಮರಾಟಿ ವ್ಯಕ್ತಿ ವ್ಯವಸಾಯ ಕುಟುಂಬದ ಒಬ್ಬ ಹೆಂಗಸಿನೊಂದಿಗೆ ಗೌಪ್ಯ ಸಂಬಂಧವಿಟ್ಟುಕೊಂಡಿದ್ದನಂತೆ. ಈ ಗುಪ್ತ ಸಂಬಂಧ ಬಯಲಾದಾಗ ಆ ಹೆಣ್ಣಿನ ಮನೆಯವರು ಅವಳನ್ನು ಮಕ್ಕಳು ಸಮೇತವಾಗಿ ಹೊರಹಾಕಿದರು.
ಆಗ ಕಾಳಾಚಾರಿ ತೊಗಲುಗೊಂಬೆಗಳನ್ನು ಮಾಡಿಕೊಟ್ಟು ಅವರ ಜೀವನ ನಡೆಸಲು ಸಹಾಯ ಮಾಡಿದ. ಅವರೇ ಇಂದಿನ ಕಿಳ್ಳೆಕ್ಯಾತ ಜನಾಂಗದವರು". ತೊಗಲುಗೊಂಬೆಯಾಟದ ಹಿಂದೆ ಅನೇಕ ಉದ್ದೇಶಗಳಿವೆ. ಮಳೆ ಬರದೆ ಹೋದಾಗ ಗೊಂಬೆಯಾಟ ಆಡಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ತೊಗಲುಗೊಂಬೆಯಾಟ ಆಡಿಸುವುದರಿಂದ ದನಕರುಗಳಿಗೆ ಬರುವ ರೋಗದ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿಂದ ಜಾತ್ರೆ, ಉತ್ಸವಗಳಲ್ಲಿ ಕೂಡ ಆಟವು ನೆರವೇರುವುದು.
ತೊಗಲುಗೊಂಬೆಯಾಟದ ಪ್ರಾಚೀನತೆ
ಈ ಕಲೆಯು ಶಾತವಾಹನ, ಪಲ್ಲವ, ಚಾಳುಕ್ಯ, ಕಾಕತೀಯ ರಾಜರ ಕಾಲದಲಲ್ಲದೆ ವಿಜಯನಗರ, ತಂಜಾವೂರು ರಾಜರುಗಳ ಕಾಲದಲ್ಲಿ ಅತ್ಯಂತ ಉನ್ನತಸ್ಥಿತಿಯನ್ನು ಪಡೆದು ಪ್ರಾಚೀನ ರೇವುಪಟ್ಟಣಗಳಾದ ಕಳಿಂಗಪಟ್ಟಣ, ಜೀಮಾನೀ ಪಟ್ಟಣ, ಕೋರಂಗಿ ವಾಡ್ರೇವು ಇವುಗಳ ಮೂಲಕ ವಿದೇಶಗಳಿಗೆ ತೆರಳಿದ ಭಾರತೀಯರೊಡನೆ ಆಗ್ನೇಯ ಏಷ್ಯಾವನ್ನು ಪ್ರವೇಶಿಸಿದವು ಎಂಬ ಅಭಿಪ್ರಾಯವಿದೆ.
ಕೆಲವರು ಗೊಂಬೆಯಾಟದ ಪ್ರಾಚೀನತೆಯನ್ನು ಭಗವದ್ಗೀತೆಯ ಕಾಲಕ್ಕೆ ಎಂದರೆ ಕಿ.ಪೂ.೩೦೦೦ ವರ್ಷಗಳ ಹಿಂದಕ್ಕೆ ಕೊಂಡೊಯ್ಯಬಹುದಾಗಿದೆ ಎಂಬುದಾಗಿ ತಿಳಿಸುತ್ತಾರೆ. ಅಲ್ಲದೆ ತೊಗಲುಗೊಂಬೆಯಾಟವನ್ನು 'ನೆರಳು ಗೊಂಬೆಯಾಟ' ಎಂಬುದಾಗಿ ಕರೆದು ಸಂಸ್ಕೃತದ 'ಮಹಾನಾಟಕ'ವನ್ನು ನೆರಳು ಗೊಂಬೆಯಾಟಕ್ಕಾಗಿಯೇ ಬರೆದುದು ಎಂದೂ ಅಭಿಪ್ರಾಯ ಪಡಲಾಗಿದೆ.
ತೊಗಲುಗೊಂಬೆಯ ರಚನೆ
ಗೊಂಬೆಯ ರಚನೆಗೆ ಜಿಂಕೆ ಅಥವಾ ಆಡಿನ ಚರ್ಮವನ್ನು ಉಪಯೋಗಿಸುತ್ತಾರೆ. ಕೆಲವೊಂದು ಬಾರಿ ದೇವತಾ ಪಾತ್ರಗಳಿಗೆ ಮೀಸಲಾದ ರಾಮಾಯಣ, ಮಹಾಭಾರತ ಪ್ರಸಂಗದ ಗೊಂಬೆಗಳನ್ನು ಜಿಂಕೆ ಚರ್ಮದಿಂದಲೇ ಮಾಡಬೇಕೆಂಬ ನಿಯಮವಿದೆ. ಅನಂತರ ಅದರ ಮೇಲೆ ಬೇಕಾದ ಚಿತ್ರಗಳನ್ನು ಅಂದವಾಗಿ ಬರೆದು ಆಭರಣ, ಸೀರೆಯ ಅಂಚು, ರಥದ ಚಕ್ರ, ಕಿರೀಟ ಇತ್ಯಾದಿ ಕುಸುರಿ ಕೆಲಸಗಳನ್ನು ಬಹಳ ಸೂಕ್ಷ್ಮವಾಗಿ ಮಾಡುತ್ತಾರೆ. ಅನಂತರ ಹದವರಿತ ಬಣ್ಣವನ್ನು ಹಾಕುತ್ತಾರೆ.
ಹೆಚ್ಚಾಗಿ ದೇವತಾ ಪಾತ್ರದ ಗೊಂಬೆಗಳಿಗೆ ನೀಲಿ, ನಸುಕೆಂಪು, ಹಳದಿ ಬಣ್ಣವನ್ನೂ ಉಪಯೋಗಿಸುತ್ತಾರೆ. ಬೇರೆ ಬೇರೆ ರೀತಿಯ ಗಿಡಮೂಲಿಕೆಗಳಿಂದ ಸ್ವತಃ ಅವರೇ ಬಣ್ಣವನ್ನು ತಯಾರಿಸಿಕೊಳ್ಳುತ್ತಾರೆ. ಹೀಗಾಗಿ ಬಹುಕಾಲದವರೆಗೂ ಬಣ್ಣ ಮಸುಕಾಗದಂತೆ ಈ ಗೊಂಬೆಗಳು ಉಳಿಯುತ್ತವೆ. ಗೊಂಬೆಗಳು ನೇರವಾಗಿ ನಿಂತುಕೊಳ್ಳಲು ಅನುವಾಗುವಂತೆ ಬಿದಿರಿನ ಅಥವಾ ಲಾಳದ ಕಡ್ಡಿಗಳನ್ನು ಮಧ್ಯಕ್ಕೆ ಸೀಳಿ ಅದರ ಮಧ್ಯೆ ಗೊಂಬೆಯನ್ನು ಸಿಕ್ಕಿಸಿ ದಾರದಿಂದ ಅಲ್ಲಲ್ಲಿ ಹೊಲಿಗೆ ಹಾಕುತ್ತಾರೆ.
ಗೊಂಬೆಯನ್ನು ಹಿಡಿದು ಕುಣಿಸಲು ಅನುವಾಗುವಂತೆ ಕೆಳಗಡೆ ಅರ್ಧ ಅಡಿ ಉದ್ದದಷ್ಟು ಕಡ್ಡಿಯನ್ನು ಬಿಟ್ಟಿರುತ್ತಾರೆ. ಇದು ಮೂಲದ ಗೊಂಬೆಗಳ ರೂಪವಾಗಿರುವುದು. ಗೊಂಬೆಗಳನ್ನು ಅಚ್ಚುಕಟ್ಟಾಗಿ ಇಡಲು ಅದಕ್ಕೆಂದೇ ಮಾಡಿದ ಬಿದಿರು ಪೆಟ್ಟಿಗೆಯಲ್ಲಿ ಜೋಡಿಸಿರುತ್ತಾರೆ. ಇದಕ್ಕೆ 'ಬಾದಲಿ' ಎಂದು ಹೆಸರು. ಇದು ಅವರಿಗೆ ಪೂಜ್ಯ ವಸ್ತುವಾಗಿರುವುದು. ಆ ವೃತ್ತಿಯನ್ನು ಕೈಬಿಟ್ಟವರನೇಕರು ಆ ಗೊಂಬೆಗಳನ್ನು ಮನೆಯಲ್ಲಿ ಹಾಗೆಯೇ ಬಿಡಬಾರದೆಂದು ಅವನ್ನು ನೀರಲ್ಲಿ ತೇಲಿ ಬಿಡುವ ಕ್ರಮವೂ ಇದೆ.
ಕರ್ನಾಟಕದಲ್ಲಿ ಮೂರು ಜಾತಿಯ ಗೊಂಬೆಗಳು ಕಂಡು ಬರುತ್ತವೆ. ಕೈಕಾಲುಗಳ ಚಲನೆ ಇಲ್ಲದ ಆದರೆ ಸುಂದರ ಹಾಗೂ ಕಲಾತ್ಮಕವಾದ ಗೊಂಬೆಗಳು. ಅವು ಬಹುತೇಕ ಉತ್ತರ ಕರ್ನಾಟಕದವು. ಕೈಕಾಲುಗಳ ಚಲನೆಯುಳ್ಳ ಚುರುಕಾಗಿ ಆಡಿಸ ಬಲ್ಲ ಗೊಂಬೆಗಳು ದಕ್ಷಿಣ ಕರ್ನಾಟಕದ ಗೊಂಬೆಗಳು. ಅವೆರಡೂ ಗೊಂಬೆಗಳು ಒಂದರಿಂದ ಮೂರು ಅಡಿ ಎತ್ತರವಿರುತ್ತವೆ. ಆಂಧ್ರ ಭಾಗದ ಗೊಂಬೆಗಳು ಚಲನೆಯುಳ್ಳ ಅಂದರೆ ಕೀಲುಗಳುಳ್ಳ ಗೊಂಬೆಗಳಾಗಿದ್ದು ಆಳೆತ್ತರ ಇರುತ್ತವೆ. ಅವುಗಳನ್ನ್ನು ನಿಂತೇ ಆಡಿಸಬೇಕು.
ಕಥಾವಸ್ತುವಿಗೆ ಪೂರಕ ಗೊಂಬೆಗಳು
ಗೊಂಬೆಯಾಟಕ್ಕೆ ಬಳಸುವಂತಹ ಕಥಾವಸ್ತು ಬಯಲಾಟದಂತೆ ರಾಮಾಯಣ, ಮಹಾಭಾರತ, ಭಾಗವತಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಭೀಮ, ದುರ್ಯೋಧನ, ರಾವಣರಂತಹ ಪಾತ್ರಗಳು ಹೆಚ್ಚು ಕೆಂಪು, ಕಪ್ಪು ಬಣ್ಣಗಳಿಂದ ಕೂಡಿರುತ್ತದೆ. ಸ್ತ್ರೀ ಪಾತ್ರದ ಗೊಂಬೆಗಳಲ್ಲಿ ಸಾಮಾನ್ಯವಾಗಿ ಎರಡು ವಿಧ. ರಾಣಿಯರಿಗೆ ಉಚಿತವಾದ ವೇಷಭೂಷಣಗಳಿಂದ ಕೂಡಿದ ಗೊಂಬೆಗಳು ಹಾಗೂ ಸಾಮಾನ್ಯ ವರ್ಗದ ಗೊಂಬೆಗಳು.
ಇವನ್ನು ಬಿಟ್ಟರೆ ರಾಕ್ಷಸೀ ವರ್ಗದ ಹಿಡಿಂಬೆ, ಶೂರ್ಪನಖಿಯರಂಥ ಗೊಂಬೆಗಳು ಪ್ರತ್ಯೇಕವಾಗಿರುತ್ತದೆ. ಸ್ತ್ರೀ ಪಾತ್ರದ ಗೊಂಬೆಗಳು ಹೆಚ್ಚಾಗಿ ನೋಡಲು ಉದ್ದನೆಯ ಮೂಗು, ಅಗಲವಾದ ಕಣ್ಣು, ಜೊತೆಗೆ ಬೈತಲೆ ತೆಗೆದು ಕಟ್ಟಿದ ತುರುಬು, ಅದಕ್ಕೆ ಹೂವು ಮುಡಿಸಿರುತ್ತಾರೆ. ಬೈತಲೆಯಿಂದ ಹಣೆಯ ಮೇಲೆ ಬಿಟ್ಟ ಆಭರಣ, ಕಿವಿಗೆ ಆಭರಣ, ಮೂಗಿಗೆ ಮೂಗುತಿ ಹಾಗೂ ಬುಲಾಕು, ಕೈಬಳೆ ಇತ್ಯಾದಿಗಳಿರುತ್ತವೆ.
ರಂಗಸ್ಥಳ ಮತ್ತು ಆಟ
ಸಾಮಾನ್ಯವಾಗಿ ಹಳ್ಳಿಗಳು ಇಂತಹ ಮನೋರಂಜನೆ ಏರ್ಪಡಿಸುತ್ತಿದ್ದು ಸುಗ್ಗಿಯ ಕಾಲದಲ್ಲಿ ದುಡಿಮೆಯ ನಂತರ ಫಸಲನ್ನು ಮನೆಯಲ್ಲಿ ತುಂಬಿಕೊಂಡ ಮೇಲೆ ಇಂತಹ ಮನರಂಜನೆಗೆ ತೊಡಗುತ್ತಿದ್ದರು. ಕಲಾವಿದರು ಮೊದಲಿಗೆ ಊರಿನ ಮುಖಂಡರನ್ನೇ ಕಂಡು ಗೊಂಬೆಯಾಟಕ್ಕೆ ಅವಕಾಶ ಮಾಡಿಕೊಡುವಂತೆ ಕೇಳಬೇಕಾಗಿತ್ತು. ಅವರಿಂದ ಅನುಮತಿ ಸುಲಭವಾಗಿ ದೊರಕುತ್ತಿತ್ತು. ಈಡೀ ರಾತ್ರಿ ದೀಪಕ್ಕೆ ಬೇಕಾದ ಎಣ್ಣೆಯ ಖರ್ಚನ್ನು ಅವರೇ ಕೊಡುತ್ತಿದ್ದರು.
ಅಲ್ಲದೆ ಸಂಭಾವನೆಯ ಜೊತೆಗೆ ಒಂದಿಷ್ಟು ಧವಸ ಧಾನ್ಯವನ್ನು ಊರಿನವರಿಂದ ಸಂಗ್ರಹಿಸಿ ಕೊಡುತ್ತಿದ್ದರು. ಗೊಂಬೆಯಾಟದವರು ಅಲೆಮಾರಿಗಳಾದರು ಕೆಲವರು ಇಂತಿಷ್ಟು ಪ್ರದೇಶವೆಂದು ಹಂಚಿಕೊಂಡು ಅದಕ್ಕೆ ಸೇರಿದ ಹಳ್ಳಿಗಳಲ್ಲಿ ಮಾತ್ರ ಆಟ ಆಡಿಸುತ್ತಿದ್ದರು. ಊರಿನ ಮಧ್ಯಭಾಗದಲ್ಲಿ ವಿಶಾಲವಾದ ಜಾಗವಿರುವಡೆಯಲ್ಲಿ ಆಟದ ಎರ್ಪಾಡು ನಡೆಯುತ್ತದೆ. ಇದೊಂದು ಸಂಚಾರಿ ಕಲೆಯಾದುದರಿಂದ ಸಂಚಾರಕ್ಕೆ ಸುಲಭವಾದ ರಂಗಪರಿಕರಗಳನ್ನು ಹೊಂದಿರುವುದು ಕಂಡು ಬರುತ್ತದೆ.
ರಂಗಮಂದಿರಕ್ಕೆ ನೆಡುವುದಕ್ಕಾಗಿ ನಾಲ್ಕು ಬಿದಿರುಗಳು, ಮೇಲ್ಬಾಗದಲ್ಲಿ ಕಟ್ಟುವುದಕ್ಕೆ ನಾಲ್ಕು ಬಿದಿರುಗಳು, ಮೇಲ್ಭಾಗ ಮತ್ತು ಗೊಂಬೆಗಳನ್ನು ತೋರಿಸುವ ಭಾಗವನ್ನು ಉಳಿದು ಮಿಕ್ಕ ಮೂರು ಕಡೆಗಳಲ್ಲಿ ಮರೆಮಾಡಲು ಬೇಕಾಗುವ-ಚಾಪೆ, ತಡಿಕೆ, ಗೊಂಬೆಗಳ ಪ್ರದರ್ಶನದ ಭಾಗಕ್ಕೆ ಬೇಕಾಗುವ ಬಿಳಿಯ ಪಂಚೆ ಹಾಗು ಕರಿಯ ಕಂಬಳಿ ಇವಿಷ್ಟಿದ್ದರೆ ತೊಗಲು ಗೊಂಬೆಯಾಟದ ರಂಗಮಂದಿರ ಸಿದ್ದಗೊಳ್ಳುತ್ತದೆ. ಜೊತೆಗೆ ಶುಭದ ಸಂಕೇತವಾಗಿ ಮಾವಿನಸೊಪ್ಪನ್ನು ಕಟ್ಟುವ ಕ್ರಮವೂ ಇದೆ.
ಕುಳಿತುಕೊಂಡು ಕುಣಿಸುವ ಚಿಕ್ಕದಾದ ಗೊಂಬೆಗಳ ರಂಗಮಂದಿರ ಆರು ಅಡಿ ಎತ್ತರವಿದ್ದು ಎಂಟು ಅಡಿಯಷ್ಟು ಚಚ್ಚೌಕವಾಗಿರುತ್ತದೆ. ರಂಗದ ಮುಂಭಾಗದಲ್ಲಿ ಕೆಳಗಡೆ ಎರಡುವರೆ ಅಡಿಯಷ್ಟು ಕರಿಯ ಕಂಬಳಿಯನ್ನು ಕಟ್ಟುತ್ತಾರೆ . ಮೇಲ್ಭಾಗದಲ್ಲಿ ಇನ್ನುಳಿದ ಜಾಗಕ್ಕೆ ಅಪ್ಪಟ ಬಿಳಿಯ ಬಣ್ಣದ ಪಂಚೆಯನ್ನು ಕಟ್ಟುತ್ತಾರೆ. ಗೊಂಬೆಗಳನ್ನು ಅದರ ಹಿಂಬದಿಯಲ್ಲಿಯೆ ಪ್ರದರ್ಶಿಸುವುದು. ಗೊಂಬೆಗಳನ್ನು ಆಡಿಸುವವರು ಒಳಭಾಗದಲ್ಲಿಯೇ ಕುಳಿತಿದ್ದು ಕರಿ ಕಂಬಳಿಯಿಂದಾಗಿ ಅವರು ಯಾರು ಪ್ರೇಕ್ಷಕರ ಕಣ್ಣಿಗೆ ಬೀಳುವುದಿಲ್ಲ. * ಒಳಗಡೆ ಅದರ ಹಿಂಭಾಗದಲ್ಲಿ ಒಂದು ದೀಪವನ್ನು ತೂಗು ಬಿಟ್ಟರುತ್ತಾರೆ. ಇತ್ತೀಚೆಗೆ ಗ್ಯಾಸ್ ಹಾಗು ಗ್ಯಾಸ್ ಲೈಟಿನ ಬಳಕೆಯೂ ಇದೆ. ಅದರ ಬೆಳಕು ತೊಗಲುಗೊಂಬೆಗಳ ಮೇಲೆ ಬಿದ್ದು ಆ ಗೊಂಬೆಗಳ ಪ್ರತಿಫಲನ ಪಂಚೆಯ ಮೇಲೆ ಅದ್ಭುತವಾಗಿ ಕಾಣಿಸಿ ಕೊಳ್ಳುತ್ತದೆ. ಈ ರೀತಿಯ ರಂಗ ಮಂದಿರ ಚಿಕ್ಕ ಗೊಂಬೆಗಳಿಗೆ ಮಾತ್ರ ಸಾಧ್ಯವಾಗುತ್ತಿತ್ತು.
ಆಳೆತ್ತರದ ಗೊಂಬೆಗಳ ರಚನೆಯೇ ಬೇರೆ ಇದು ಬಯಲು ಸೀಮೆಯ ಬಯಲಾಟದ ರಂಗಮಂದಿರವನ್ನೇ ಹೆಚ್ಚು ಕಡಿಮೆ ಹೋಲುತ್ತದೆ. ಆಳೆತ್ತರದ ಗೊಂಬೆಗಳನ್ನು ಕುಣಿಸಬೇಕಾದರೆ ಕಲಾವಿದ ನಿಂತುಕೊಳ್ಳಬೇಕಾಗುತ್ತದೆ. ನಿಂತುಕೊಂಡೆ ಸೂತ್ರದ ಗೊಂಬೆಯನ್ನಾಡಿಸುವಂತೆ ಕಡ್ಡಿಯ ಸಹಾಯದಿಂದ ಇದನ್ನು ಆಡಿಸುತ್ತಾನೆ. ಪಾತ್ರವನ್ನು ಕುಣಿಸುವಾಗ ಜೊತೆಯಲ್ಲಿ ತಾನೂ ಕುಣಿಯುತ್ತಾನೆ.
ಬಯಲಾಟದ ಪಾತ್ರಧಾರಿಗಳಂತೆ ಕಾಲಿಗೆ ಗೆಜ್ಜೆಯನ್ನು ಈತ ಕಟ್ಟಿಕೊಂಡಿರುತ್ತಾನೆ. ಕೆಳಭಾಗದಲ್ಲಿ ಹಲಗೆಗಳನ್ನು ಹಾಸಿಕಟ್ಟಿಯನ್ನು ನಿರ್ಮಿಸುವುದು ವಾಡಿಕೆ. ಇದೆಲ್ಲಾ ಆದ ಬಳಿಕ ಆಡಿಸು ಭಾಗವೊಂದನ್ನು ಬಿಟ್ಟು ಉಳಿದ ಮೂರು ಕಡೆಗಳನ್ನು ಸೋಗೆಯ ಗರಿಯಿಂದಲೋ, ಚಾಪೆ ಅಥವಾ ತಡಿಕೆಯಿಂದಲೋ ಮರೆ ಮಾಡುತ್ತಾರೆ. ಮುಂಭಾಗವನ್ನು ನೀಲಿಯ ಪಂಚೆಯಿಂದ ಮುಚ್ಚುತ್ತಾರೆ. ಉಳಿದೆಲ್ಲಾ ತಂತ್ರವೂ ಕುಳಿತುಕೊಂಡು ಆಡಿಸುವ ಗೊಂಬೆಗಳ ರಂಗ ಮಂದಿರದಂತೆಯೇ ಇರುತ್ತದೆ.
ವಿಘ್ನೇಶ್ವರನ ಪ್ರಾರ್ಥನೆಯೊಂದಿಗೆ ಆಟ ಪ್ರಾರಂಭವಾಗುತ್ತದೆ. ತೊಗಲು ಗೊಂಬೆಯಾಟವನ್ನು ಆಕರ್ಷಣೀಯವನ್ನಾಗಿ ಮಾಡಿ ಪ್ರೇಕ್ಷಕರನ್ನು ಅಲೌಕಿಕ ಪ್ರಪಂಚಕ್ಕೆ ಕರೆದೊಯ್ಯುವ ಚಮತ್ಕಾರವು ಆಡಿಸುವವನ ಕೈಚಳಕದಲ್ಲಿರುತ್ತದೆ. ಅವನು ಚುರುಕಾಗಿದ್ದಷ್ಟೂ ಕಲೆಗಾರಿಕೆ ಉತ್ತಮವಾಗಿರುತ್ತದೆ. ಆಯಾ ಪಾತ್ರಗಳ ಗುದ್ದುಗಾರಿಕೆಗೆ ಸರಿ ಹೊಂದುವಂತೆ. ಹಾಡನ್ನು ಸಂಭಾಷಣೆಯನ್ನು ಜೊಡಿಸುತ್ತಾ ತನ್ನ ಎರಡೂ ಕೈಗಳಿಂದ ಒಂದೊಂದು ಗೊಂಬೆಯನ್ನು ಹಿಡಿದು ಕುಣಿಸು ರೀತಿ ಅಚ್ಚರಿಯನ್ನು ಉಂಟುಮಾಡುವಂತದ್ದು. * ಯುದ್ದದ ಸಂದರ್ಭ, ಬಾಣವನ್ನು ಬಿಡುವ ಗತ್ತು, ಗಧೆಯನ್ನು ಬೀಸುವ ವೈಖರಿ, ತನ್ನ ಮಾತಿನ ಗತ್ತಿನ ಕ್ರಮಕ್ಕೆ ಸರಿಹೊಂದುವಂತೆ ಕತ್ತು ಕೈಕಾಲುಗಳನ್ನು ಆಡಿಸುವ ರೀತಿ ಇವೆಲ್ಲವೂ ಅಪೂರ್ವವಾದ ದೃಶ್ಯಗಳಂತೆ ತೋರುತ್ತವೆ. ಒಂದು ಪಾತ್ರದ ಪ್ರವೇಶ, ನಿರ್ಗಮನಗಳನ್ನು ಬಹಳ ಚಮತ್ಕಾರಗಳಿಂದ ನಿರ್ವಹಿಸಬೇಕಾಗುತ್ತದೆ.
ನಾಲ್ಕಾರು ಪಾತ್ರಗಳು ಒಟ್ಟೊಟ್ಟಿಗೆ ಬಂದಾಗ ಅವೆಲ್ಲವುಗಳ ಸಂಭಾಷಣೆ, ಹಾಡನ್ನು ಅದಕ್ಕೆ ತಕ್ಕ ಅಭಿನಯವನ್ನು ಏಕಕಾಲದಲ್ಲಿ ಕಲಾವಿದರು ನಿರ್ವಹಿಸಬೇಕಾಗುತ್ತದೆ. ಇವೆಲ್ಲವೂ ಅಭ್ಯಾಸ ಮತ್ತು ವಿಶಿಷ್ಟ ಕಲಾಶಕ್ತಿಯಿಂದ ನೆರವೇರುತ್ತದೆ. ಮೈಸೂರು ಭಾಗದ ಗೊಂಬೆಯಾಟದಲ್ಲಿ ನಾಲ್ಕಾರು ಜನ ಕಲಾವಿದರು ಒಟ್ಟಿಗೆ ಗೊಂಬೆಯಾಡಿಸುವ ಕ್ರಮವುಂಟು.
end
****






ಪ್ರಕಾರ....

32.  ಗಾರುಡಿ ಗೊಂಬೆ - ಬೊಂಬೆಯ ಬಟ್ಟೆಯೊಳಗೆ ಸೇರಿಕೊಂಡು ನರ್ತಿಸುವ ಮನುಷ್ಯ
ಮೆರವಣಿಗೆಯ ಒಂದು ಸಾಲಿನಲ್ಲಿ ಮೊದಲು ಕಾಣುವುದು ದೊಡ್ಡ ಗೊಂಬೆಗಳು- ಒಂದು ಹೆಣ್ಣು, ಒಂದು ಗಂಡು. ಅವುಗಳ ಮೈ ಬಿದಿರ ಬುಟ್ಟಿಗಳದ್ದು. ಮೇಲಿನ ಹೊದಿಕೆ ಹರಕು ಸೀರೆ, ತಲೆಗೆ ಒಂದು ಮಡಕೆ. ರಂಗಕ್ಕೆ ಸಿದ್ಧವಾದ ಮೇಲೆ ಅವಕ್ಕೆ ಗಾರುಡಿಗತನದ ಆವೇಶ ಬರುತ್ತದೆ. ಅವುಗಳ ಜಡ ದೇಹದಲ್ಲಿ ಜೀವ ಸುಳಿದಾಡುತ್ತದೆ. ಅವಕ್ಕೆ ಹೀಗೆ ಜೀವ ಕೊಡುವವ ಅವನ್ನು ಕುಣಿಸುವಾತ; ಬೊಂಬೆಯ ಬಟ್ಟೆಯೊಳಗೆ ಸೇರಿಕೊಂಡು ನರ್ತಿಸುವ ಮನುಷ್ಯ.
end
****





ಪ್ರಕಾರ....
33. ಕಂಸಾಳೆ/ಕಂಸಾಳೆ ಪದಗಳು- ಕಂಸಾಳೆ ಹಿಡಿದು ಶಿವ ಮತ್ತು ಶರಣರ ಮಹಿಮೆಗಳನ್ನು ಕಥಾರೂಪದಲ್ಲಿ ಹಾಡುವ ಒಂದು ವಿಶಿಷ್ಟ ಜಾನಪದ ಸಂಪ್ರದಾಯ
   following info is from https://kn.wikipedia.org/
ಕಂಸಾಳೆ - ಹಳೆಯ ಮೈಸೂರಿನ ಬೀಸುಕಂಸಾಳೆ ನೃತ್ಯಗಳಲ್ಲಿ ಕಂಸಾಳೆಯ ಗತ್ತಿಗನುಸಾರವಾಗಿರುವ ಹಿನ್ನಲೆ ಸಂಗೀತಕ್ಕೆ ಹೊಂದುವಂತೆ ನೃತ್ಯಗಾರರು ಆಕರ್ಷಣೀಯವಾಗಿ ಕುಣಿಯುತ್ತಾರೆ. ಕಂಸಾಳೆ ಕುಣಿತದಲ್ಲಿ ಒಂದು ಕಂಚಿನ ಬಟ್ಟಲು ಮತ್ತು ತಾಳಗಳನ್ನು ಉಪಯೋಗಿಸುತ್ತಾರೆ. ಕಂಸಾಳೆ ಪದ ಲಾವಣಿ ರೂಪದ ಹಾಡು. ನೃತ್ಯಗಾರರ ಜೊತೆಗೆ ಇಬ್ಬರು ಕಂಸಾಳೆ ಬಾರಿಸುತ್ತ ಪಲ್ಲವಿ ಹಾಡುತ್ತಾರೆ. ಒಬ್ಬ ಕಂಸಾಳೆಯನ್ನು ಬಡಿಯುತ್ತ ಬಾಗಿ ಬಳುಕಿ ಕುಣಿಯುತ್ತಾನೆ.
ಕಂಸಾಳೆ ಮಲೆ ಮಹಾದೇಶ್ವರನ ಭಕ್ತರಾದ ದೇವರಗುಡ್ಡರು ಬಳಸುವಂತಹ ವಿಶಿಷ್ಟ ಬಗೆಯ ವಾದ್ಯ. ಮಾದೇಶ್ವರನ ಕಾವ್ಯವನ್ನು ಈ ಕಲಾವಿದರು ಹಾಡುವರು. ಇವರು ಮೈಸೂರು, ಮಂಡ್ಯ, ಬೆಂಗಳೂರು ಜಿಲ್ಲೆಗಳಲ್ಲಿ ನೆಲೆಸಿರುವರು. ಕಥಾ ರೂಪದಲ್ಲಿ ಶಿವ ಮತ್ತು ಶರಣರ ಮಹಿಮೆಗಳನ್ನು ವಂಶಪಾರಂಪರ್ಯವಾಗಿ ಹೇಳುತ್ತಾ ಮುಂದುವರೆಸಿಕೊಂಡು ಬಂದಿರುವರು.
ಇದರ ನಿಷ್ಪತ್ತಿಯ ಬಗೆಗೆ ಹಲವು ಚರ್ಚೆಗಳಿವೆ. ’ಕಾಂಸ್ಯ(ಕಂಚು)ತಾಳವೇ ಕಂಸಾಳೆಯಾಗಿದೆ’ ಎಂಬ ಅಭಿಪ್ರಾಯವಿದೆ. ಇದಕ್ಕೆ ಕೇಶಿರಾಜನ ಸಮರ್ಥನೆಯೆಂದರೆ "ಪೂರ್ವ ಪದಾಂತಕ್ಕೆ ದೀರ್ಘಮುಂ ಉತ್ತರ ಪದಾದಿಗೆ ಲೋಪಮುಮಾಗಿ ಕಾಂಸ್ಯತಾಳಕ್ಕೆ ಕಂಸಾಳಂ ಎಂದಾಯ್ತು" (ಸೂತ್ರ.೨೦೮) ಎಂಬ ವಿವರಣೆಯನ್ನು ನೀಡಿರುವನು.
ಹಳಗನ್ನಡ ಕಾವ್ಯಗಳಲ್ಲಿ ಕಂಸಾಳೆಯ ಬಗ್ಗೆ ಕಂಡುಬರುವ ಉಲ್ಲೇಖಗಳೆಂದರೆ ಹರಿಹರನ ’ಗಿರಿಜಾ ಕಲ್ಯಾಣ” ಮತ್ತು ವಿರೂಪಾಕ್ಷ ಪಂಡಿತನ ಚನ್ನಬಸವ ಪುರಾಣಗಳಲ್ಲಿ ’ಕಂಸಾಳ’ ಎಂಬ ಪದದ ಬಳಕೆಯಿರುವುದು.
ಅಷ್ಟೇ ಅಲ್ಲದೆ ರಾಘವಾಂಕನ ’ಸಿದ್ದರಾಮ ಚಾರಿತ್ರ‍್ಯ’ , ಭೀಮಕವಿಯ ’ಬಸವ ಪುರಾಣ’ , ಸೂರ‍್ಯಕವಿಯ ’ಕವಿಕಂಠಹಾರ’ , ಗೋವಿಂದ ವೈದ್ಯನ ’ಕಂಠೀರವ ನರಸರಾಜ ವಿಜಯಂ’, ಗೋವಿಂದ ಕವಿಯ ’ನಾರಿಮಹಾತ್ಮ್ಯಂ’ ಕೃತಿಗಳಲ್ಲಿ ಕೌಸಾಳ, ಕಂಸತಾಳ, ಕಾಂಸಾಳ, ಕೈತಾಳ ಎಂಬ ಪ್ರಯೋಗಗಳು ಬಂದಿರುವುದನ್ನು ಗಮನಿಸಬಹುದಾಗಿದೆ.
ಆಡುಭಾಷೆಯಲ್ಲಿ ಕಂಸಾಳೆ, ಕೈತಾಳ, ಕೌಸಳೆ, ಬಟ್ಲು ಎಂಬಿತ್ಯಾದಿ ಪದಗಳು ರೂಢಿಯಲ್ಲಿರುವುದು.’ಕಂಸಾಳೆ’ಯು ಕಂಚಿನಿಂದ ತಯಾರಿಸಿದ ತಾಳವಾಗಿರುವುದು.ಮಧ್ಯೆ ದಾರ ಕಟ್ಟಿರುವ ಅಂಗೈ ಅಗಲದ ಒಂದು ಬಟ್ಟಲು. ಎಡ ಕೈಗೆ, ಹಾಗೆಯೇ ಇನ್ನೊಂದು ಕೈಯಲ್ಲಿ ಮಟ್ಟಸವಾದ ತಾಳ. ಮುಚ್ಚಳದ ನಡುಭಾಗ ಬಿಟ್ಟಿದ್ದು ಅದರ ರಂಧ್ರದ ಮೂಲಕ ದಾರವೊಂದನ್ನು ಬಿಗಿದು ಅದನ್ನು ಗೊಂಡೆಗಳಿಂದ ಅಲಂಕಾರ ಮಾಡಿ ಇಳಿ ಬಿಡುತ್ತಾರೆ. ಸಾಮ್ಯಾನವಾಗಿ ಇದು ಬಲಗೈ ಮೇಲಿಂದ ಇಳಿ ಬಿದ್ದಿರುತ್ತದೆ.
ಶಿವ ಮತ್ತು ಶರಣರ ಮಹಿಮೆಗಳನ್ನು ಕಥಾರೂಪದಲ್ಲಿ ಹಾಡುತ್ತ ಒಂದು ವಿಶಿಷ್ಟ ಜಾನಪದ ಸಂಪ್ರದಾಯವನ್ನು ಬೆಳಸಿಕೊಂಡು ಬಂದಿದೆ ಕಂಸಾಳೆ ಪ್ರಾಕಾರ. ಕಂಸಾಳೆಯ ಕಲಾವಿದರು ಪ್ರಮುಖವಾಗಿ ಮೈಸೂರು ಜಿಲ್ಲೆಯ ಮಲೆ ಮಹದೇಶ್ವರನ ಭಕ್ತರು. ಮಂಡ್ಯ-ಬೆಂಗಳೂರು ಜಿಲ್ಲೆಗಳಲ್ಲೂ ವಿರಳವಾಗಿ ಕಾಣುತ್ತಾರೆ.
ಜಾನಪದ ಸತ್ವವುಳ್ಳ ಕಥನಗೀತೆ, ಕಂಚಿನ ತಾಳಗಳ ವಿಶಿಷ್ಟವಾದ ಶಬ್ದ ಹಾಗೂ ಕಲಾವಿದರ ಕೈಚಳಕಗಳ ಸುಂದರ ಸಮ್ಮಿಳನದಿಂದಾಗಿ ಈ ಕಲೆ ವಿಸ್ಮಯಕಾರಕವಾಗಿ ಜನಮನವನ್ನು ತಣಿಸಿ ಶ್ರವಣಾನಂತವುಂಟುಮಾಡುತ್ತದೆ. `ಕಂಸಾಳೆ’ ಎನ್ನುವುದು ಕಲಾವಿದರು ಕೈಯಲ್ಲಿ ಹಿಡಿಯುವ ಒಂದು ಬಗೆಯ ವಾದ್ಯ ವಿಶೇಷ. ಭಿಕ್ಷಾಪಾತ್ರೆಯಂತಿರುವ, ಮಧ್ಯೆ ದಾರದ ಕುಚ್ಚು ಕಟ್ಟಿದ, ಅಂಗೈ ಅಗಲದ ಮಿಶ್ರಲೋಹದ ಒಂದು ಬಟ್ಟಲು ಎಡಗೈಯಲ್ಲಿದ್ದರೆ, ಬಲಗೈಯಲ್ಲಿ ಮಟ್ಟಸವಾದ ತಾಳವಿರುತ್ತದೆ.
ಮುಚ್ಚಳದ ನಡುವಿನ ಹೊರಭಾಗ ಉಬ್ಬಿರುತ್ತದೆ. ಆ ಉಬ್ಬಿನ ರಂಧ್ರದಿಂದ ಬಿಗಿದ ನೀಳವಾದ ದಾರ ಗೊಂಡೆಗಳಿಂದ ಅಲಂಕೃತವಾಗಿ ಬಲಗೈ ಮೇಲಿಂದ ಇಳಿಬಿದ್ದಿರುತ್ತದೆ. ಸಾಮಾನ್ಯವಾಗಿ ಕಂಸಾಳೆಯ ಮೇಳದಲ್ಲಿ ಮೂರು ಜನರಿರುತ್ತಾರೆ. ವೃತ್ತಿ ಗಾಯಕರಾದ ಕಂಸಾಳೆಯವರಿಗೆ ವಿಶೇಷವಾದ ವೇಷಭೂಷಣಗಳೇನೂ ಇರುವುದಿಲ್ಲ. ಸಾಧಾರಣವಾಗಿ ಅಂಗಿ, ಪಂಚೆ, ಹೆಗಲಲ್ಲಿ ಜೋಳಿಗೆ, ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ, ಇವರಲ್ಲಿ ಇಬ್ಬರು ಏಕತಾರಿ ಕಂಜರ ಹಿಡಿದು ಹಿಮ್ಮೇಳದವರಾಗುತ್ತಾರೆ. * ಇನ್ನೊಬ್ಬ ಮುಮ್ಮೇಳದವನಾಗಿ ನಡುವೆ ಕಂಸಾಳೆ ಹಿಡಿದು ಕುಳಿತಿರುತ್ತಾನೆ. ಎಡಗೈ ಬಟ್ಟಲನ್ನು ಮೇಲುಮುಖವಾಗಿ ಅಂಗೈ ಮೇಲೆ ಇರಿಸಿಕೊಂಡು. ಬಲಗೈಯ ಮೇಲು ತಾಳವನ್ನು ಕುಟ್ಟುವುದರಿಂದ ಕಂಚಿನ ಕಣಿ ಕಣಿ ನಾದ ಉಂಟಾಗುತ್ತದೆ. ವಿವಿಧ ಧಾಟಿಯ ವಿವಿಧ ತಾಳದ ಹಾಡುಗಳಿಗೆ ಈ ನಾದ ಮಧುರ ಹಿನ್ನಲೆಯಾಗುತ್ತದೆ.
ಹಬ್ಬ ಹರಿದಿನಗಳಲ್ಲಿ, ಶಿವರಾತ್ರಿ-ನವರಾತ್ರಿ ಕಾಲದಲ್ಲಿ ಮಹದೇಶ್ವರನ ಜಾತ್ರೆ ಸಂದರ್ಭದಲ್ಲಿ ಕೈಯಲ್ಲಿ ಕಂಸಾಳೆ ಹಿಡಿದು, ಮಾದಯ್ಯನ ಕೋಲ (ನಾಗಬೆತ್ತ)ನ್ನು ಕಂಕುಳಲ್ಲಿಟ್ಟು ಕೊಂಡು, ಬುತ್ತಿಯ ಗಂಟನ್ನು ತಲೆಯ ಮೇಲಿಟ್ಟುಕೊಂಡು, ಯಾತ್ರೆ ಹೊರಡುವುದು ಮೈಸೂರು ಜಿಲ್ಲೆಯಲ್ಲಿ ಸಾಮಾನ್ಯ ದೃಶ್ಯ. ಮಲೆಯ ಮಹದೇಶನ ಜಾತ್ರೆಯಲ್ಲಿ ಕಂಸಾಳೆಯ ಪ್ರದರ್ಶನ ಕೇಂದ್ರವಾಗುತ್ತದೆ ಆ ಪ್ರದೇಶ. ಬೆಳದಿಂಗಳ ರಾತ್ರಿಯಲ್ಲಿ ಕಂಸಾಳೆಯ ಕಲಾವಿದರ ಹಲವಾರು ಗುಂಪುಗಳು ಅಲ್ಲಿ ಮೇಳ ನಡೆಸುತ್ತವೆ.
ಕಂಸಾಳೆಯ ಕಲಾವಿದರಲ್ಲಿ ಮಹದೇಶ್ವರನ ಹುಟ್ಟು, ಬಾಲ್ಯ, ಬಾಲಲೀಲೆ, ಯೌವನ, ವಿನೋದ, ವಿರಸ, ಮುಪ್ಪು, ಮಹಿಮೆಗಳು ಕಂಠಸ್ಥವಾಗಿ ನಿಂತಿವೆ. ಈ ಕಾವ್ಯವನ್ನು ಇಡೀ ರಾತ್ರಿ ಹಾಡಿ ತಣಿಸುವ ಅವರ ಕಲೆಗಾರಿಕೆ ಮೆಚ್ಚುವಂತಹುದು, ಇದಲ್ಲದೆ ಕಲಾವಿದರು ಪಿರಿಯಾಪಟ್ಟಣದ ಲಾವಣಿ, ಸಾರಂಗಧರ, ಚೆನ್ನಿಗರಾಮ, ಘನಪತಿರಾಯ, ಬಾಲನಾಗಮ್ಮ, ಅರ್ಜುನ ಜೋಗಿ ಮುಂತಾದ ಜನಪದ ಕಥಾ ಪ್ರಸಂಗಗಳನ್ನೂ ಹಾಡುತ್ತಾರೆ. ಜನಪದ ಬೆಳಸಿಕೊಂಡು ಬರುತ್ತಿರುವ ಇವರ ಕಲೆ ಜಾನಪದ ಕ್ಷೇತ್ರದ ದೊಡ್ಡ ನಿಧಿಗಳಲ್ಲೊಂದಾಗಿದೆ.
ಕಂಸಾಲೆಯಲ್ಲಿ ಎರಡು ವಿಧ 
1.ಕುಳಿತು ಹಾಡುವ ಕಂಸಾಳೆ
2.ಬೀಸು ಕಂಸಾಳೆ
end
****
   following info is from https://kn.wikipedia.org/
ಕಂಸಾಳೆ ಪದ - ಕೈಯಲ್ಲಿ ಕಂಚಿನ ಬಟ್ಟಲು; ಅದಕ್ಕೊಂದು ಮುಚ್ಚಳ ಹಿಡಿದುಕೊಂಡು ತಾಳ ಬಾರಿಸಿಕೊಂಡು ಬೆಟ್ಟದ ಮಾದೇಶ್ವರನ ಮೇಲೆ ಪದಗಳನ್ನು ಹೇಳುವವರು ಉದ್ದಕ್ಕೂ ಸಾಹಿತ್ಯ ಜೋಡಿಸಿಕೊಂಡು ಒಂದೇ ರಾಗದಲ್ಲಿ ಹಾಡುತ್ತಾರೆ. ಕನಿಷ್ಠವೆಂದರೆ ಮೇಳದಲ್ಲಿ ಮೂರು ಮಂದಿ ಗಂಡಸರಿರುವರು. ಒಬ್ಬಾತ ತ್ರಿಶೂಲಕ್ಕೆ ಹೂವಿನ ಅಲಂಕಾರ ಮಾಡಿ ಹಿಡಿದುಕೊಂಡಿರುತ್ತಾನೆ ; ಮತ್ತಿಬ್ಬರು ಹಾಡುತ್ತಾರೆ. ಕೊಡಗರ ಬೊಳ್ಕಾಟ: ಕೊಡಗಿನಲ್ಲಿ ಗಂಡಸರು ಮಂಗಲದ ಸಮಯದಲ್ಲಿ ಹಾಗೂ ಹುತ್ತರಿ ಹಬ್ಬದ ಸಮಯದಲ್ಲಿ ಹತ್ತಾರು ಜನ ಸೇರಿಕೊಂಡು ಕುಣಿಯುವರು ; ಕರಿನಿಲುವಂಗಿ, ಜರತಾರಿ ನಡುಕಟ್ಟು, ತಲೆಗೆ ಬಿಳಿಜರತಾರಿ ರುಮಾಲು, ಸೊಂಟದಲ್ಲಿ ಕತ್ತಿ, ಒಂದು ಕೈಯಲ್ಲಿ ಚವರಿ- ಹೀಗೆ ತಮ್ಮ ಪಂಗಡದ ವಿಶೇಷ ಅಲಂಕಾರಗಳಲ್ಲಿರುವ ಅವರನ್ನು ಆಗ ನೋಡಲು ಸೊಗಸೆನಿಸುತ್ತದೆ. ದುಡಿಯ ದನಿಗೆ ಸರಿಯಾಗಿ ವೃತ್ತಾಕಾರದಲ್ಲಿ ನಿಂತು ಹಿಂದಕ್ಕೂ ಮುಂದಕ್ಕೂ ಅಕ್ಕಪಕ್ಕಗಳಿಗೂ ಬಳುಕಾಡುವರು. ಇದೇ ಇವರ ನೃತ್ಯ. ಕೊಡಗಿನ ಭಾಷೆಯ ಬಾಳೋ ಬಾಳೋ ಎಂಬ ಪಾಟು ಹಾಡುವರು. ದೂರಕ್ಕೆ ಆ ದನಿ ದುಂಬಿ ಗುನುಗುಟ್ಟುವಂತೆ, ಪುಂಗಿ ಬಾರಿಸಿದಂತೆ ಕೇಳುವುದು. ಪುನ್ನಾಗವರಾಳಿ, ನಾದನಾಮಕ್ರಿಯ ಮಿಶ್ರವಾಗಿರುವುದಲ್ಲದೆ ತಾಳಗತಿಯಲ್ಲಿ ತಧಿತ್ತಯ್ಯಾ, ತಧಿತ್ತಯ್ಯಾ, ತಧಿತ್ತಯ್ಯಾ ತಧಿತ್ತಾವ ಎಂಬಂತೆ ಹಾಡು ಮುಂದುವರಿಯುವುದು. ಈ ಕುಣಿತ, ಹಾಡುಗಾರಿಕೆ, ದುಡಿಯ ಬಳಕೆ ಗಂಟೆಗಟ್ಟಲೆ ನಡೆಯುವುದು.

ಬಾಳೋ ಬಾಳೋ ನಂಗಡಾ, ಬಾಳೋ ಬಾಳೋ ಮಾದೇವ
ಪಾಡಿ ನೋಡಿ ಕಂಡಲ್ಲಿ ಪೊರ್ಮಾಲೆ ಕೊಡುದೇಶ
ಆದಿಮೂಲಾ ಲೇ ಲೇ ಲೋ || - ಇದು ಒಂದು ಹಾಡಿನ ಪಲ್ಲವಿ.
end
****




ಪ್ರಕಾರ....
34. ನಂದಿಕಂಬದ ಕುಣಿತ - 30-40 ಅಡಿ ಎತ್ತರದ ಕಂಬವನ್ನು ನೃತ್ಯಕಾರರು ಹೊಟ್ಟೆಗೆ ಜೋತುಹಾಕಿ ಮೆರವಣಿಗೆಯಲ್ಲಿ ಕುಣಿಯುತ್ತಾರೆ 
   following info is from https://kn.wikipedia.org/
ನಂದಿಕಂಬದ ಕುಣಿತವನ್ನು (ನಂದಿಕೋಲು) ಸಾಮಾನ್ಯವಾಗಿ ಮೆರವಣಿಗೆಗಳಲ್ಲಿ ಕಾಣಬಹುದು. ಯಾವುದಾದರೂ ವಿಜೃಂಭಣೆಯ ಮೆರವಣಿಗೆ ಹೊರಟಾಗ ಅಲಂಕೃತವಾದ 30-40 ಅಡಿ ಎತ್ತರದ ಕಂಬವನ್ನು ನೃತ್ಯಕಾರರು ಹೊಟ್ಟೆಗೆ ಜೋತುಹಾಕಿಕೊಂಡು ತಮ್ಮಟೆಯ ತಾಳಕ್ಕೆ ಸರಿಯಾಗಿ ಕುಣಿಯುತ್ತ ಕೋಲನ್ನು ನೆಟ್ಟಗೆ ನಿಲ್ಲಿಸುವುದು ಆಶ್ಚರ್ಯಕರ.
end
****





ಪ್ರಕಾರ....
35. ಕರಗದ ಕುಣಿತ - ಅಲಂಕೃತ ಕರಗವನ್ನು ತಲೆಯ ಮೇಲೆ ಧರಿಸಿ ಕುಣಿಯುವುದು 
   following info is from https://kn.wikipedia.org/
ಕರಗದ ಕುಣಿತ ಮೈಸೂರಿನ ವಿಶೇಷ ಜನಪದ ನೃತ್ಯ. ಅಲಂಕೃತ ಕರಗವನ್ನು ತಲೆಯ ಮೇಲೆ ಧರಿಸಿ, ಭಕ್ತಿಪರವಶನಾದ ಒಬ್ಬ ನೃತ್ಯಗಾರ ವಿವಿಧ ರೀತಿಯ ಕೈಚಲನೆ, ಕಾಲುಚಲನೆಗಳಿಂದ ನರ್ತಿಸುತ್ತಾನೆ. ವಾದ್ಯಗೋಷ್ಠಿಯ ನಾದಕ್ಕೆ ಸ್ಫೂರ್ತಿಗೊಂಡು ದಿಗ್ಭ್ರಾಂತನಂತೆ ಕುಣಿದರೂ ಆತನ ತಲೆಯ ಮೇಲಿನ ಕರಗ ಒಂದಿಷ್ಟೂ ಅಲುಗಾಡುವುದಿಲ್ಲ, ತುಳುಕುವುದಿಲ್ಲ. ಜೊತೆಗೆ ಖಡ್ಗ ಹಿಡಿದು ಅವನನ್ನು ಹಿಂಬಾಲಿಸುವ ಪಂಗಡ ಆ ದೃಶ್ಯಕ್ಕೆ ಕಳೆ ಕೊಡುತ್ತದೆ. ಜಡೆ ಮತ್ತು ಚಿತ್ರಗೋಪುರ ಎಂಬವು ಕರಗದ ಇತರ ವಿಧಗಳು. ಇವುಗಳಲ್ಲದೆ ಡೊಳ್ಳುಕುಣಿತ, ಬಣಜದ ತಾಂಡ ಕುಣಿತ, ಕುದುರೆ ಕುಣಿತ, ಪುಜಾ ಕುಣಿತ, ವೀರಗಾಸೆ ಕುಣಿತ, ಪಟ್ಟಾ ಕುಣಿತ, ಮುಂತಾದ ಹಲವಾರು ಕುಣಿತಗಳಿವೆ.
end
****




ಪ್ರಕಾರ....
36. ವೀರಭದ್ರ ಕುಣಿತ - ವೀರಕುಣಿತ ಆವೇಶಭರಿತವಾದುದು
   following info is from https://kn.wikipedia.org/
ವೀರಭದ್ರ ಕುಣಿತ, ವೀರಮಕ್ಕಳ ಕುಣಿತಗಳು ಮೈಸೂರಿನಲ್ಲಿವೆ. ವೀರಕುಣಿತ ವೀರರಿಗೆ ಸಾಧ್ಯ. ಕಾಳಗಕ್ಕೆ ಮುಂಚೆಯೋ ಬೇಟೆಯ ಕೊನೆಯಲ್ಲೋ ಹುಮ್ಮಸ್ಸು ಹುರುಪುಗಳನ್ನು ಹೊರ ಸೂಸುವ ಈ ವೀರಕುಣಿತ ಆವೇಶಭರಿತವಾದುದು. ಕುಣಿವಾಗಿನ ಈ ವೀರರ ಕೇಕೆ ಹಲವಾರು ಮೈಲಿಗಳವರೆಗೆ ಕೇಳುತ್ತಿರುತ್ತದೆ.
end
****





ಪ್ರಕಾರ....
37. ಗೊಂದಲ- ಭವಾನಿ ದೇವಿಯ ಭಕ್ತರು ಗೊಂದಲದ ಪದ ಹಾಡಿಸುವರು 
   following info is from https://kn.wikipedia.org/
ಮಲೆನಾಡಿನಲ್ಲಿ ಹಾಗೂ ಉತ್ತರ ಕರ್ನಾಟಕದ ಕರೆನಾಡಲ್ಲಿ ಭವಾನಿ ದೇವಿಯ ಭಕ್ತರು ಗೊಂದಲದ ಪದ ಹಾಡಿಸುವ ವಾಡಿಕೆಯಿದೆ. ಅಂಬಾ ಭವಾನಿ ಪೂಜೆ ನಡೆದಾಗ ಇಡೀ ರಾತ್ರಿ ಗೊಂದಲ ನಡೆಸುವರು. ಗೊಂದಲದವರ ಪಕ್ಕವಾದ್ಯ ಚೌಡಿಕೆಯಂತಿರುತ್ತದೆ. ತಾಮ್ರದ ಕೊಳಗಕ್ಕೆ ನರದ ತಂತಿ ಕಟ್ಟಿ ಅದನ್ನು ಥೊಯ್ ಥೊಯ್ ಎಂದು ಮೀಟುತ್ತ ದೇವಿಯ ಸ್ತುತಿರೂಪವಾದ ಪದಗಳನ್ನು ಅವರು ಹಾಡುತ್ತಾರೆ.
ಗೊಂದಲ ಹಾಕುವವರು ಗಂಡಸರು. ಕಂಬಳಿ ಹೊದ್ದು ಕವಡೆ ಹಾರ ಹಾಕಿಕೊಂಡು, ಮುಖಕ್ಕೆ ಭಂಡಾರ ಕುಂಕುಮ ಹಚ್ಚಿಕೊಂಡು, ತಲೆಗೆ ಕರಡಿ ಚರ್ಮದ ಟೊಪ್ಪಿಗೆ ಹಾಕಿಕೊಂಡು ಸಿದ್ಧರಾಗುವ ಗೊಂದಲದವರ ವೇಷ ವಿಚಿತ್ರವಾಗಿರುತ್ತದೆ. ಗೊಂದಲ ಮರಾಠಿ ಭಜನೆಯನ್ನು ಹೋಲುತ್ತದೆ. ವಾದ್ಯದ ನಾದ, ಪದಗಳ ಗುಂಗು, ತಾಳ, ಕುಣಿತ- ಎಲ್ಲ ಸೇರಿದಾಗ ಹಾಡುವವರಿಗೂ ನೋಡುವವರಿಗೂ ಭಕ್ತಿಯ ಆವೇಶ ಬಂದಂತಾಗುತ್ತದೆ.
end
****



ಪ್ರಕಾರ....
38. ಭೂತನೃತ್ಯ- ತಾವು ನಂಬುವ ಭೂತಗಳ ತೃಪ್ತಿಗಾಗಿ ಕುಣಿತ 
   following info is from https://kn.wikipedia.org/
ಪಶ್ಚಿಮ ಘಟ್ಟದ ಮಲೆಕುಡಿಯರ ಪಂಗಡಗಳಲ್ಲಿ ವಿಶೇಷ ತರಹದ ಒಂದು ಭೂತನೃತ್ಯವಿದೆ. ಮೂವರು ಯುವಕರು ಖಡ್ಗಾಯುಧರಾಗಿ ಕಹಳೆ-ಕೊಂಬು ವಾದ್ಯಕ್ಕೆ ಹೊಂದಿದಂತೆ ಮೈಮರೆತು ಕುಣಿಯುತ್ತಾರೆ. ಈ ನೃತ್ಯ ಅನಾಗರಿಕರ ಯುದ್ಧನೃತ್ಯವನ್ನು ಹೋಲುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂತಗಳ ಕುಣಿತ ಹೆಸರಾದುದು. ಬೇರೆ ಬೇರೆ ಜನರು ಬೇರೆ ಬೇರೆ ಭೂತಗಳನ್ನು ನಂಬಿ ಪುಜಿಸುತ್ತಾರೆ. ವರ್ಷದ ನಾನಾಕಾಲಗಳಲ್ಲಿ ಈ ದೆವ್ವಗಳಿಗೆ ಜಾತ್ರೆ ನಡೆಯುತ್ತದೆ. ದೆವ್ವದ ಆವೇಶ ಪಡೆಯುವವರ ಜಾತಿಯೇ ಬೇರೊಂದಿದೆ. ಈ ನೃತ್ಯಗಳೆಲ್ಲ ಭಕ್ತಿಪ್ರಧಾನವಾದುವು. *ಭಕ್ತರು ತಾವು ನಂಬುವ ಭೂತಗಳ ತೃಪ್ತಿಗಾಗಿ ಅವನ್ನು ಆಹ್ವಾನಿಸಿ, ಉಣಿಸುವರು. ಭೂತದ ಆವೇಶ ಪಡೆಯುವ ಪುಜಾರಿ ವಿಶಿಷ್ಟ ವೇಷಭೂಷಣಗಳನ್ನು ಧರಿಸಿ ಬಣ್ಣ ಲೇಪಿಸಿಕೊಂಡು ವೀರಾವೇಶದಿಂದ ಕುಣಿದು ತನ್ನನ್ನೇ ಮರೆಯುತ್ತಾನೆ. ಆತನ ಬಾಯಿಂದ ಬರುವ ಮಾತುಗಳು ಭೂತದ ಮಾತುಗಳೆಂಬ ಭ್ರಾಂತಿ ಜನರಲ್ಲಿ ಮೂಡುತ್ತದೆ. ಬೇರೆ ಬೇರೆ ಭೂತಗಳಿಗೆ ತಕ್ಕ ನಡೆ, ನೃತ್ಯ, ವೇಷ, ಕಿರೀಟ, ಭೂಷಣಗಳಿರುತ್ತವೆ.
ಸಾಮಾನ್ಯವಾಗಿ ಭೂತಗಳ ಉಗ್ರಸ್ವರೂಪ ಆಯಾ ವೇಷದಲ್ಲಿ ವ್ಯಕ್ತವಾಗುತ್ತದೆ. ಇಂಥ ನೃತ್ಯ ಸಂಪ್ರದಾಯದಲ್ಲಿ ನಾಗನೃತ್ಯ ವಿಚಿತ್ರವಾದುದು. ವೈದ್ಯರೆಂಬ ಪುಜಾರಿಗಳ ಈ ನೃತ್ಯಕ್ಕೆ ನಾಗಮಂಡಲವೆನ್ನುತ್ತಾರೆ. ರಂಗಮಂಟಪದಲ್ಲಿ ಮಹಾಶೇಷನ ರಂಗೋಲಿಯನ್ನು ಹಾಕಿಸುತ್ತಾರೆ. ಪುಜಾರಿ ಕೆಂಪು ರೇಷ್ಮೆಯನ್ನುಟ್ಟು ಚದುರಿದ ಕೂದಲನ್ನು ಬಿಟ್ಟು ಸುಬ್ಬರಾಯನಾಗಿ ಬಂದು ನಿಲ್ಲುತ್ತಾನೆ. ಅವನ ಮುಂದೆ ಪ್ರಕೃತಿ ಪುರುಷ ಸೂಚಕವಾಗಿ ಅರ್ಧ ಗಂಡಸಿನ ಅರ್ಧ ಹೆಂಗಸಿನ ಉಡುಪನ್ನು ಧರಿಸಿದ ನೃತ್ಯಗಾರ ನಿಂತಿರುತ್ತಾನೆ.
ಹಿಮ್ಮೇಳದ ಗಾಯಕರು ದೇವರ ಲೀಲೆಗಳನ್ನು ಹಾಡುತ್ತಾರೆ. ಒಂದು ಡಮರು, ಒಂದು ಜೊತೆ ತಾಳಕ್ಕೆ ಅನುಗುಣವಾಗಿ ನಾಗದ ಆವೇಶ ತಂದುಕೊಂಡು ದೇಹಕ್ಕೆ ಮೂಳೆಗಳೇ ಇಲ್ಲವೆಂಬಂತೆ ನಾಗನರ್ತನ ನರ್ತಿಸುವಾಗ ಅದು ಪ್ರೇಕ್ಷಕರಿಗೆ ರೋಮಾಂಚನಕಾರಿಯಾಗಿ ಪರಿಣಮಿಸುತ್ತದೆ. ನಾಗಬ್ರಹ್ಮನೇ ಪ್ರತ್ಯಕ್ಷವಾಗಿ ಎದುರಿಗೆ ಬಂದಂತೆ ಭಾಸವಾಗುತ್ತದೆ.
end
****




ಪ್ರಕಾರ....
39. ವೀರಗಾಸೆ-  ಶೈವ ಸಂಪ್ರದಾಯದ ಧಾರ್ಮಿಕ ವೀರ ನೃತ್ಯ 
   following info is from https://kn.wikipedia.org/
ವೀರಗಾಸೆ ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುವರು. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಈ ನೃತ್ಯ ಪ್ರಚಲಿತವಿದೆ. ತಾಳ, ಶ್ರುತಿ, ಚಮಾಳ (ಸಮ್ಮೇಳ ಸಂಬಾಳ), ಓಲಗ ಅಥವಾ ಮೌರಿ, ಕರಡೆವಾದ್ಯ-ಈ ಪಂಚವಾದ್ಯಗಳು ಇಲ್ಲಿ ಬಳಕೆಯಾಗುತ್ತವೆ. ಕರಡೆ ಈ ಕುಣಿತದಲ್ಲಿ ಅನಿವಾರ್ಯ ವಾದ್ಯ ಎನಿಸಿದೆ.
ಪ್ರದರ್ಶನ
ವೀರಗಾಸೆಯ ಪ್ರಕಾರದಲ್ಲಿ ಹಿರಿಯ ಕಲಾವಿದರು ಗಂಡಕ್ಷರಗಳಿಂದ ಕೂಡಿದ ಕನ್ನಡದ ಗದ್ಯ ಸಾಹಿತ್ಯದ ನುಡಿಗಟ್ಟನ್ನು ಆವೇಶಭರಿತರಾಗಿ ನುಡಿಯುತ್ತಾರೆ, ಇಂತಹ ಆವೇಶಭರಿತ ನುಡಿಗಟ್ಟುಗಳನ್ನು 'ಒಡಪು' ಅಥವಾ 'ಒಡಬು' ಗಳೆಂದು ಕರೆಯಲಾಗಿದೆ. ಇಂತಹ ಒಡಪು ಅಥವಾ ಒಡಬು ಸಾಹಿತ್ಯ ಹೇಗಿರುತ್ತದೆ ಎಂದರೆ ಉದಾಹರಣೆಗೆ:- ಉಲ್ಲಾಸಭರಿತರಾಗಿ ಕುಳಿತಿರುವ ಎಲ್ಲಾ ಜನಗಳು ಸುಲಲಿತವಾಗಿ ಗುಲ್ಲುಮಾಡದೆ ನೀವು ಕೇಳಿರಿ, ಅಹಹ ರುದ್ರಾ ಅಹಹಾ ದೇವಾ....... ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ. ಈ ಕುಣಿತದಲ್ಲಿ ವೀರಭದ್ರನ ವರ್ಣನೆಯೇ ಪ್ರಧಾನವಾಗಿರುತ್ತದೆ. ವೀರಭದ್ರ ಹುಟ್ಟಿದ ಸಂದರ್ಭದ ಒಂದು ವರ್ಣನೆ ಹೀಗಿದೆ: "ವೀರಭದ್ರದೇವರು ಹುಟ್ಟಿದ ರೂಪೆಂತೆಂದೊಡೆ, ಹುಟ್ಟಿದಾಗಲೆ ಹೂವಿನಗಾಸೆ, ಮಂಜುಳಗಾಸೆ, ಬ್ರಹ್ಮಗಾಸೆ, ವಿಷ್ಣುಗಾಸೆ, ರುದ್ರಗಾಸೆ, ಮೆಟ್ಟಿದ ಹೊನ್ನಾವಿಗೆ, ಸಾವಿರ ಶಿರ, ಮೂರು ಸಾವಿರ ನಯನ, ಎರಡು ಸಾವಿರ ಭುಜ, ಕೆಕ್ಕರಿಸಿದ ಕಣ್ಣು, ಜುಂಜುಮಂಡೆ ಇಂತಪ್ಪ ಶ್ರೀ ವೀರಭದ್ರ ದೇವರು ಹೋಮದ ಕುಂಡದ ಬಳಿಗೆ ಹೇಗೆ ಬರುತ್ತಾರೆಂದರೆ .........." ಇಂತಹ ಒಡಪು-ಒಡಬುಗಳನ್ನು ಹೇಳಿದ ಬಳಿಕ ಸಮ್ಮಾಳದ (ಚರ್ಮ ವಾದ್ಯದ) ಹಾಗೂ ಕರಡೆಯ (ಚರ್ಮ ವಾದ್ಯ) ನುಡಿತಗಳು ಕಲಾವಿದರ ಕುಣಿತಕ್ಕೆ ಸ್ಪೂರ್ತಿ ನೀಡುತ್ತವೆ. ನಾಲ್ಕೈದು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಅನಂತರ ಯಾರಾದರೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋರ್ಗರೆತದೊಂದಿಗೆ ಮತ್ತೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ. ಗತಿಯಿಂದ ಗತಿಗೆ ಕುಣಿತ, ಬಡಿತಗಳ ವೇಗ ಹೆಚ್ಚುತ್ತಾ ಹೋಗುತ್ತದೆ.
ಪೌರಾಣಿಕ ಹಿನ್ನೆಲೆ
ಈ ಕಲೆಯ ಸೃಷ್ಟಿ ಹೇಗೆ ಬಂದಿತೆನ್ನುವುದಕ್ಕೆ ಜನಪದರ ಪೌರಾಣಿಕ ಕಥೆಯಿದೆ: ತಂದೆಯ ಮಾತನ್ನು ಮೀರಿ ಪಾರ್ವತಿ ಶಿವನನ್ನು ವರಿಸುತ್ತಾಳೆ. ಇದೇ ಕಾರಣವಾಗಿ ಪಾರ್ವತಿಯ ತಂದೆ ದಕ್ಷಬ್ರಹ್ಮ ಶಿವನನ್ನು ದ್ವೇಷಿಸತೊಡಗುತ್ತಾನೆ. ಹೀಗಿರುವಾಗ ದಕ್ಷಬ್ರಹ್ಮ ಆಚರಿಸಿದ ಯಾಗಕ್ಕೆ ಶಿವನೊಬ್ಬನನ್ನು ಹೊರತುಪಡಿಸಿ ಉಳಿದೆಲ್ಲ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ತನ್ನ ತಂದೆ ಉದ್ದೇಶಪೂರ್ವಕವಾಗಿ ಗಂಡನನ್ನು ಅವಮಾನಿಸಿದ್ದಾನೆಂದು ಭಾವಿಸಿದ ಪಾರ್ವತಿ ಉಗ್ರಳಾಗುವಳು. ನ್ಯಾಯ ಕೇಳುವ ಸಲುವಾಗಿ ಗಂಡನ ತಡೆಯನ್ನು ಉಲ್ಲಂಘಿಸಿ ತಂದೆಯ ಬಳಿಗೆ ಬರುತ್ತಾಳೆ. ಅಳಿಯನ ಮೇಲಿನ ಕೋಪದಿಂದ ಮಗಳೆಂಬ ಮಮತೆಯನ್ನೂ ತೊರೆದು ದಕ್ಷಬ್ರಹ್ಮ ಪಾರ್ವತಿಯನ್ನು ತಿರಸ್ಕಾರದಿಂದ ನಡೆಸಿಕೊಂಡದ್ದಲ್ಲದೆ ಅವಳೆದುರಿಗೆ ಶಿವನನ್ನು ನಿಂದಿಸುತ್ತಾನೆ; ಪತಿನಿಂದೆಯನ್ನು ಸಹಿಸಲಾಗದ ಪಾರ್ವತಿ ಅಗ್ನಿಕುಂಡದಲ್ಲಿ ಬಿದ್ದು ಪ್ರಾಣಾರ್ಪಣೆ ಮಾಡಿಕೊಳ್ಳುತ್ತಾಳೆ. ಈ ದುರ್ಘಟನೆಯಿಂದ ಕುಪಿತನಾದ ಶಿವ ಉಗ್ರನಾಗಿ ತಾಂಡವ ನೃತ್ಯದಲ್ಲಿ ತೊಡಗುತ್ತಾನೆ. ಕೋಪದಿಂದ ಹಣೆಯ ಬೆವರನ್ನು ಬೆರಳುಗಳಿಂದ ಬಾಚಿ ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದ ವೀರಭದ್ರನ ಅವತಾರವಾಗುತ್ತದೆ. ಮುಂದೆ ವೀರಭದ್ರ ದಕ್ಷಬ್ರಹ್ಮನ ಯಾಗಶಾಲೆಗೆ ಬಂದು ಅದನ್ನು ಹಾಳುಗೈಯುತ್ತಾನೆ. ಹೀಗೆ ವೀರಭದ್ರ ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಕುಣಿತ ಎಂದೂ ಅಂದಿನಿಂದ ಈ ಕಲೆ ಬೆಳೆದುಬಂದಿತೆಂದೂ ಕಲಾವಿದರ ಹೇಳಿಕೆ.
ಆಚರಣೆ
ಸಾಮಾನ್ಯವಾಗಿ ಜಾತ್ರೆ, ದೇವರ ಮೆರವಣಿಗೆ, ಹಬ್ಬ, ಹುಣ್ಣೆಮೆ, ವೀರಶೈವರ ಮದುವೆ, ಗೃಹ ಪ್ರವೇಶ ಮೊದಲಾದ ಸಂದರ್ಭಗಳಲ್ಲಿ ವೀರಗಾಸೆ ನಡೆಯುತ್ತದೆ.ವೀರಶೈವರಲ್ಲಿ ವೀರಭದ್ರನನ್ನು ಮನೆ ದೇವರಾಗಿ ನಂಬುವವರು ವೀರಗಾಸೆ ಮಾಡಿದಾಗ ಅದನ್ನು 'ಆಡಣಿ' ಎಂದು ಕರೆಯಲಾಗುತ್ತದೆ.ಇದು ಒಂದು ರೀತಿಯ ವೈಶಿಷ್ಠ್ಯ ಪೂರ್ಣವಾದ ಆಚರಣೆಯೇ ಆಗಿರುತ್ತದೆ. ಸಾಮಾನ್ಯವಾಗಿ ವೀರಭದ್ರ ದೇವರ ಒಕ್ಕಲಿನವರು ತಮ್ಮ ಹಿರಿಯ ಮಗನ ಮದುವೆಯಲ್ಲಿ ಮಾತ್ರ ವೀರಗಾಸೆಯನ್ನು ಮಾಡುತ್ತಾರೆ. ಆ ದಿವಸ ಐದು ಜನ ಮುತ್ತೈದೆಯರು ಮತ್ತು ಐದು ಜನ ಗಂಡು ಮಕ್ಕಳು ಉಪವಾಸವಿರುತ್ತಾರೆ. ಆ ದಿವಸ ಐದು ಜನ ಹೆಣ್ಣು ಮಕ್ಕಳಿಗೆ ಮತ್ತು ಗಂಡಸರಿಗೆ ಶಸ್ತ್ರ ಹಾಕುತ್ತಾರೆ. ಇದರ ಮೇಲೆ ಮದುಮಗ ಹಾಗೂ ಮುತ್ತೈದೆಯರು ಕೊಂಬಿ ದೇವರನ್ನು ತೆಗೆದುಕೊಂಡು ನಡೆಯುತ್ತಿರುತ್ತಾರೆ. ಹಾಗೆ ಹೋಗುವಾಗ ವೀರಭದ್ರ ದೇವರ ಹಾಗೂ ಹಲವು ದೇವರುಗಳ ಒಡಬುಗಳನ್ನು ಹೇಳುತ್ತಾರೆ. ದೇವಸ್ಥಾನ ಮುಂಬಾಗದಲ್ಲಿ ಒಂದು ಅಡಿ ಆಳ. ಒಂದು ಅಡಿ ಉದ್ದ ಹಾಗೂ ಎರಡು ಅಡಿ ಅಗಲದ ಗುಂಡಿಯನ್ನು ತೆಗೆದು ಅತ್ತಿ, ಆಲ, ಶ್ರೀಗಂಧ ಮರದ (ಈಗ ಗಂಧದ ಮರ ಇರುವುದಿಲ್ಲ) ಹತ್ತು ಹೊರೆ ಕಟ್ಟಿಗೆಗಳನ್ನು ಗುಂಡಿಗೆ ಹಾಕಿ ವೀರಗಾಸೆಯವರಿಂದ ಬೆಂಕಿಯನ್ನು ಹಚ್ಚಿಸುತ್ತಾರೆ, ಈ ಯಜ್ಞಕುಂಡದಲ್ಲಿ ಹಾಲುಕ್ಕಿಸಿ ಎಡೆಕೊಡುತ್ತಾರೆ. ಸ್ವಾಮಿಗಳು, ಪುರವಂತರು, ಮದುಮಕ್ಕಳು, ಮುತ್ತೈದೆಯರು ಯಜ್ಞಕುಂಡವನ್ನು ಹಾಯ‍್ದು ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಕೊಂಬಿ ದೇವರು ಈ ಆಚರಣೆಯಲ್ಲಿ ಬಹುಮುಖ್ಯವಾದುದು.
ವೇಷಭೂಷಣ
ವೀರಗಾಸೆ ಕುಣಿತದವರ ವೇಷ ಭೂಷಣಗಳು ಕಾಲಕಾಲಕ್ಕೆ ಬದಲಾಗುತ್ತಾ ಬಂದಿವೆ, ಕನಿಷ್ಠ ಎಂಟು ಅಥವಾ ಅದಕ್ಕೆ ಮೇಲ್ಪಟ್ಟ ಸಮ ಸಂಖ್ಯೆಯ ಕಲಾವಿದರು ತಲೆಗೆ ಪೇಟ, ಕಿವಿಗೆ ಕಡಕು,ಹಣೆಗೆ ವಿಭೂತಿ, ಕೊರಳಿಗೆ ರುದ್ರಾಕ್ಷಿ ಹಾಗೂ ನಾಗಾಭರಣ, ಎದೆಗೆ ವೀರಭದ್ರ ಸ್ವಾಮಿಯ ಹಲಗೆ, ಸೊಂಟಕ್ಕೆ ದಕ್ಷಬ್ರಹ್ಮನ ಶಿರ ಕಟ್ಟಿಕೊಳ್ಳುತ್ತಾರೆ. ಕೈಯಲ್ಲಿ ಕತ್ತಿ, ಕಾಲಿಗೆ ಕಡಗ ಮತ್ತು ಗೆಜ್ಜೆ ಮೈಗೆ ಕಾವಿ ಜುಬ್ಬ ಮತ್ತು ಕಾವಿಯ ಕಸೆಗಳಿರುತ್ತವೆ. ವೀರಶೈವರಿಗೆ ಮಾತ್ರ ವಿಶಿಷ್ಟವಾದ ಈ ಕಲೆ ಅವರ ವೇಷಭೂಷಣದಿಂದಲೇ ಈ ಹೆಸರು ಪಡೆದುಕೊಂಡಿದೇ ಎನಿಸುತ್ತದೆ. (ವೀರ+ಕಾಸೆ=ವೀರಗಾಸೆಯಾಗಿರುತ್ತದೆ) ಕಾಸೆ ಕಟ್ಟಿದವರೇ ಈ ಕಲೆಯ ಪ್ರಮುಖ ಕಲಾವಿದರು. ವೀರಗಚ್ಚೆಯೇ, ವೀರಕಾಸೆಯಾಗಿ ನಂತರ ವೀರಗಾಸೆಯಾಗಿರಬಹುದು ಎಂಬ ಅಭಿಪ್ರಾಯವೂ ಇದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಂಡುಬರುವ ಈ ವೀರಗಾಸೆಯ ವೇಷಭೂಷಣಗಳು ಪ್ರಾದೇಶಿಕತೆಗೆ ತಕ್ಕಂತೆ ಕೆಲವು ವ್ಯತ್ಯಾಸಗಳನ್ನು ಪಡೆದುಕೊಂಡಿವೆ. ಹಲವು ಕಡೆ ತಲೆಗೆ ಕೂದಲು ಮತ್ತು ರೇಷ್ಮೆದಾರದಿಂದ ತಯಾರಿಸಿದ ಚೌಲಿಯನ್ನು ಧರಿಸಲಾಗುತ್ತದೆ. ಕಾವಿ ಬಣ್ಣದ ಗರಿ ಅಂಚಿನ ಪೇಟವನ್ನು ತಲೆಗೆ ಸುತ್ತಿ, ಅದರ ಮುಂಭಾಗಕ್ಕೆ ಜಯ ಪಟ್ಟಿಯನ್ನು ಕಟ್ಟುತ್ತಾರೆ. ಸೊಂಟಕ್ಕೆ ಕಸೂತಿಗಳಿಂದ ಕೂಡಿದ ಕೆಂಪು ಬಣ್ಣದ ಜೊಲುಗಳಿದ್ದು, ಸೊಂಟದ ಎರಡು ಕಡೆ ಕಪ್ಪು ಬಣ್ಣದ ಚವರಿ ಕುಚ್ಚುಗಳಿರುತ್ತವೆ. ಸೊಂಟಕ್ಕೆ ಬಿಳಿ ಪಂಚೆಯನ್ನು ವೀರಗಚ್ಚೆಯಾಗಿ ತೊಡುತ್ತಾರೆ. ಕೆಂಪು ಬಣ್ಣದ ಪೈಜಾಮ, ಕಾಲಿಗೆ ಗೆಜ್ಜೆ, ಬಲಗೈಯಲ್ಲಿ ಮರದ ಖಡ್ಗ, ಕೊರಳಲ್ಲಿ ಬೆಳ್ಳಿಯ ಲಿಂಗದಕಾಯಿ (ಅಡ್ಗಾಯಿ) ಎಡಗೈಯಲ್ಲಿ ಕರವಸ್ತ್ರಗಳಿರುತ್ತವೆ. ಹಾಗೆಯೇ ಕೆಲವರ ಕೈಯಲ್ಲಿ ತ್ರಿಶೂಲಾಕಾರದ ಶಸ್ತ್ರಗಳಿರುವುದು ಉಂಟು. ಸಮಾಳೆ, ಮುಖವೀಣೆ, ಕಂಚಿನ ತಾಳಗಳು ಈ ಕಲೆಗೆ ಬೇಕಾದ ಮುಖ್ಯ ವಾದ್ಯ ಪರಿಕರಗಳು, ಕಾಸೆ ಕಟ್ಟುವವರು, ಎದೆಯ ಮೇಲೆ ಲಿಂಗಧಾರಣೆ ಮಾಡಬೇಕು. ಹೀಗೆ ವೇಷ-ಭೂಷಣವನ್ನು ಕಲಾವಿದರು ಧರಿಸಿಕೊಂಡು ಸಾಮೂಹಿಕ ನೃತ್ಯವನ್ನು ಅಟ್ಟಹಾಸದಲ್ಲಿ ಕೊಡಬಲ್ಲರು, ಹೀಗಾಗಿ ಈ ಕಲೆಯನ್ನು ಜನರು ಇದೊಂದು ಗಂಡು ಕಲೆ ಎಂದು ಗುರುತಿಸಿರುವರು. ಇತ್ತೀಚಿನ ದಿನಗಳಲ್ಲಿ ರಾಜ್ಯದ ಹೆಣ್ಣುಮಕ್ಕಳೂ ಈ ಕಲೆಯನ್ನು ಕರಗತಮಾಡಿಕೊಂಡು ಪ್ರದರ್ಶನ ನೀಡುವಲ್ಲಿ ಯಶಸ್ಸನ್ನು ಸಾಧಿಸಿರುವರು.
end
****
 



ಪ್ರಕಾರ....
40.  ಪೂಜಾ ಕುಣಿತ- ಇದು ಶಕ್ತಿ ದೇವತೆಗೆ ಸಂಬಂದಿಸಿದಂತಹ ಕುಣಿತ
   following info is from https://kn.wikipedia.org/
ಪೂಜಾ ಕುಣಿತವು ಶಕ್ತಿ ದೇವತೆಗೆ ಸಂಬಂದಿಸಿದಂತಹ ಕುಣಿತವಾಗಿರುವುದು. ಬೆಂಗಳೂರು, ಮಂಡ್ಯ, ಕೋಲಾರ,ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು ಪ್ರಚಲಿತವಾಗಿರುವಂತಹುದು. ಆಯಾ ಗ್ರಾಮದೇವತೆಗಳ ಪ್ರತೀಕವಾಗಿರುವುದು. ಹಬ್ಬ, ಉತ್ಸವದ ದಿನಗಳಲ್ಲಿ ದೇವತೆಯು 'ಪೂಜೆ'ಯ ರೂಪದಲ್ಲಿ ಹೊರಬರುತ್ತಾಳೆ. ಬಿದಿರಿನ ತಳಿ (ತಟ್ಟಿ) ಮದ್ಯೆ ದೇವತೆಯ ಮುಖವಾಡಗಳನ್ನು ಇರಿಸಿಕೊಂಡು ಕುಣಿಯುವುದಕ್ಕೆ ಪೂಜಾ ಕುಣಿತವೆಂದು ಕರೆಯುವರು. ಸುಮಾರು ೫ ಅಡಿ ಉದ್ದ, ೪ ಅಡಿ ಅಗಲವಿರುವ ಬಿದಿರಿನ 'ಗಳು' ಮತ್ತು ಅದರ ಹಚ್ಚೆಗಳನ್ನು ಜೋಡಿಸಿ ಪೂಜೆಯನ್ನು ಸಿದ್ದಪಡಿಸುತ್ತಾರೆ. ಇದಕ್ಕೆ 'ತಳಿ'ಎಂದು ಕರೆಯುವರು. ಇದರ ಮದ್ಯೆ ದೇವರ ಮುಖವಾಡಗಳನ್ನು ಕಟ್ಟಿರುತ್ತಾರೆ. ಎರಡು ಕಡೆ ತಳಿಯ ಭಕ್ತರು ಹರಕೆ ಹೊತ್ತ ಸೀರೆಯನ್ನು ಇಳಿ ಬಿಟ್ಟು, ಮೆಲ್ತುದಿಗೆ ಹಿತ್ತಾಳೆ ಇಲ್ಲವೇ ಬೆಳ್ಳಿಯ ಕಳಸಗಳಿಂದ ಅಲಂಕಾರವನ್ನು ಮಾಡಿರುತ್ತಾರೆ. ಹರಕೆ ಹೊತ್ತ ಭಕ್ತರು ಸಲ್ಲಿಸಿರುವಂತಹ ಕಡಗ, ಕಾಲುಮುರಿ, ಹಸ್ತ, ಓಲೆ, ಡಾಬು ಮೊದಲಾದಂತಹ ಆಭರಣಗಳನ್ನು ಇಟ್ಟು ಅಲಂಕರಿಸಿ ಹೂವಿನ ಮಾಲೆಗಳನ್ನು ಹಾಕಿರುತ್ತಾರೆ. ತಳಿಯ ಹಿಂಭಾಗಕ್ಕೂ 'ಬೆನ್ ಬಟ್ಟೆ' ಹಾಕಿರುತ್ತಾರೆ. ಇದನ್ನು ಹೊರಲು ಅನುಕೂಲವಾಗುವಂತೆ ತಳಿಯ ಕೆಳಭಾಗದಲ್ಲಿ ಮದ್ಯೆ ಕಂಚು ಇಲ್ಲವೇ ಹಿತ್ತಾಳೆಯ ಒಂದು ಗಿಂಡಿಯನ್ನು ಸೇರಿಸಿ ಬಿಗಿದಿರುತ್ತಾರೆ. ತಲೆಯ ಮೇಲೆ ಇಟ್ಟಾಗ ಅಲುಗಾಡದಂತೆ ಸಹಕಾರಿಯಾಗುತ್ತದೆ.
ಪ್ರತಿಯೊಂದು ದೇವರ ಹೆಸರಿನಲ್ಲಿ ಗುಡ್ಡನ್ನು ನೇಮಕಗೊಂಡಿರುತ್ತಾನೆ. ಈತ ಪೂಜಾರಿ ಮಾತ್ರ. ಪೂಜೆಯನ್ನು ಹೊತ್ತು ಕುಣಿಯುವವರು ಬೇರೆಯವರು ಆಗಿರುತ್ತಾರೆ. ಹಬ್ಬ, ಉತ್ಸವ ಮಾತ್ರವಲ್ಲದೆ, ಭಕ್ತರು ಹರಕೆ ಮಾಡಿಕೊಂಡಾಗಲೂ ಪೂಜಾ ಕುಣಿತವನ್ನು ಪ್ರದರ್ಶನ ಮಾಡುವುದುಂಟು. ಹಳ್ಳಿಯ ಗುಡಿ ಮುಂಭಾಗ ಇಲ್ಲವೆ, ವಿಶಾಲವಾದ ಬಯಲಿನಲ್ಲಿ ಕುಣಿತವು ನಡೆಯುತ್ತದೆ. ಪೂಜೆಯನ್ನು ಹೊತ್ತು ಕುಣಿಯುವವರು ಬಿಳಿ ಅಂಗಿ ತೊಟ್ಟು ವೀರಗಾಸೆಯ ರೀತಿಯಲ್ಲಿ ಪಂಚೆ, ಕಾಲಿಗೆ ಗೆಜ್ಜೆ ಹಾಕಿರುತ್ತಾರೆ. ಹಣೆಗೆ ಕುಂಕುಮ ಇಟ್ಟುಕೊಂಡಿರುತ್ತಾರೆ. ತಮಟೆ, ನಗಾರಿ, ಡೋಲು ಬಡಿತಕ್ಕೆ ಅನುಗುಣವಾಗಿ ಮೂರೆಜ್ಜೆ, ನಾಲ್ಕೆಜ್ಜೆ, ಐದು ಹೆಜ್ಜೆ, ಆರು ಹೆಜ್ಜೆ, ಎಂಟು ಹೆಜ್ಜೆ, ಹದಿನಾಲ್ಕೆಜ್ಜೆ ಈ ರೀತಿಯಲ್ಲಿ ಮಟ್ಟಿಗೆ ಅನುಗುಣವಾಗಿ ಕುಣಿಯುತ್ತಾರೆ. ಕೆಲವರು ಸಾಮ್ಯಾನವಾಗಿ ಬೋರಲಿಟ್ಟ ಮಡಿಕೆಗಳ ಮೇಲೆ ಅವು ಒಡೆಯದಂತೆ ತಾಳಕ್ಕೆ ತಕ್ಕಂತೆ ಒಂದೊಂದೇ ಹೆಜ್ಜೆಯಲ್ಲಿ ನಡೆಯುವುದು, ಮುಖವನ್ನು ಒಂದೇ ಕಡೆ ಮಾಡಿಕೊಂಡು ತಲೆಯ ಮೇಲಿರುವ ಪೂಜೆಯನ್ನು ಮಾತ್ರ ಒಂದು ಸುತ್ತು ತಿರುಗುವಂತೆ ಮಾಡುವುದು ಬಹಳ ಸೊಗಸಾಗಿರುವುದು. ಕುಣಿತದ ಹಿನ್ನೆಲೆಯಾಗಿ ವಾದ್ಯಗಳ ಬಾರಿಸುವ ಜೊತೆಗೆ ಗ್ರಾಮದೇವತೆಗಳ ಹಾಡನ್ನು ಹೇಳುವರು.
ನಿಯಮ
ಪೂಜಾ ಕುಣಿತ ಪ್ರಾಥಮಿಕ ನಿಯಮಗಳೇನಂದರೆ, ಕರ್ನಾಟಕದಲ್ಲಿ ದೇವರು ಒಂದು ದೇಹದ ಮೇಲೆ ಪ್ರವೇಶಿಸಿ ವಿವಿಧ ಅವತಾರಗಳನ್ನು ತೋರ್ಪಡಿಸುವಂತಹದ್ದಾಗಿರುತ್ತದೆ. ಇದು ಧಾರ್ಮಿಕ ಮೆರವಣಿಗೆ ಮುಂತಾದ ಕಾರ್ಯಕ್ರಮಗಳಲ್ಲಿ ನಡೆಸಲಾಗುತ್ತದೆ. ಈ ಪೂಜಾ ಕುಣಿತವು ಆಡಂಬರದ ವ್ಯೆಭವವಾಗಿದೆ. ಹಬ್ಬ ಹರಿದಿನಗಳಲ್ಲಿ ಈ ನೃತ್ಯವನ್ನು ಜನ ಅತೀ ಮೆಚ್ಚುಗೆಯಿಂದ ಪ್ರಸ್ತುತಪಡಿಸುತ್ತಾರೆ. ಈ ಸೊಬಗು ನೋಡಲು ಬಲು ಚೆಂದ. ಪೂಜಾ ಕುಣಿತವು ತನ್ನ ಸೆಳೆತವನ್ನು ಇಡೀ ಕರ್ನಾಟಕದಲ್ಲಿ ವಿಜ್ರಂಭಣೆಯಿಂದ ಉಳಿಸಿಕೂಳ್ಳಬೇಕಾಗಿದೆ. ಈ ಕುಣಿತವನ್ನು ರೂಡಿಸಿಕೊಳ್ಳುವವರು ಮುಂಚೆ ಅನೇಕ ರೀತಿಯ ಅಭ್ಯಾಸಗಳನ್ನು ಮಾಡಿಕೊಂಡಿರಬೇಕು. ಹೊರತಾಗಿ ಒಂದು ರಾಜ್ಯದ ಏಳಿಗೆಗೆ ಮತ್ತು ಆ ರಾಜ್ಯದ ಧಾರ್ಮಿಕ ಸಂಪ್ರದಾಯಗಳಿಗೆ ಪೂಜಾಕುಣಿತ ಚ್ಯುತಿ ತರುವುದಿಲ್ಲ. ಕರ್ನಾಟಕದ ಪೂಜಾ ಕುಣಿತಕ್ಕೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಾಕೆಂದರೆ, ಅತ್ಯಂತ ವಿಜೃಂಭಣೆಯಿಂದ ನಡೆಯುವ ಈ ನೃತ್ಯವು ಜನರ ಮನಸ್ಸಿಗೆ ಆಹ್ಲಾದಕರವಾಗಿ ತಲುಪುತ್ತದೆ.
ಕುಣಿತಕ್ಕೆಬೇಕಾದ ಕೌಶಲ್ಯಗಳು
ಈ ಪೂಜಾಕುಣಿತಕ್ಕೆ ಅನೇಕ ರೀತಿಯ ಕೌಶಲ್ಯಗಳು ಬಹಳ ಮುಖ್ಯ. ಅದಾವುದೆಂದರೆ, ಒಂದು ದೇವರ ವಿಗ್ರಹವನ್ನು ತಲೆಯ ಮೇಲೆ ಇಟ್ಟುಕೊಂಡು ದೇಹವನ್ನು ಸಮತೋಲನ ಮಾಡುವಂತಹದ್ದು ತೀರ ಸುಲಭದ ವಿಷಯವೇನಲ್ಲ. ಅನೇಕ ಪರಿಣಿತರ ಸಹಾಯ ಮುಖ್ಯವೆನಿಸುತ್ತದೆ. ಪೂಜಾಕುಣಿತವನ್ನು ನೋಡಲು ಜನ ದೇಶ ವಿದೇಶಗಳಿಂದ ಬರುವುದೂ ಉಂಟು. ಕರ್ನಾಟಕದಲ್ಲಿ ಪೂಜಾಕುಣಿತ ಜನರ ಮನಸ್ಸನ್ನು ಗೆದ್ದಿದೆ. ಧಾರ್ಮಿಕ ಕ್ಷೇತ್ರದಲ್ಲಿ ಪೂಜಾಕುಣಿತ ತನ್ನದೇ ಆದ ವೈಶಿಷ್ಯತೆಗಳನ್ನು ಮೂಡಿಸಿದೆ. ಈ ಕುಣಿತ ಪ್ರದರ್ಶನವು ಹಲವು ರೀತಿಯಲ್ಲಿ ಜನರ ಮನಸ್ಸನ್ನು ಗೆದ್ದಿದೆ. ಸಂಸ್ಕಾರ ಎಂಬ ವಿಶಿಷ್ಡ ಕಲ್ಪನೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಪೂಜಾಕುಣಿತ ಎಂಬ ಕಲೆಯು ಸುಮಾರು ರೀತಿಯ ಭಂಗಿಗಳನ್ನು ಹೊಂದಿದೆ. ಇದೊಂದು ಧರ್ಮವು ಪ್ರಾಮುಖ್ಯತೆಗೆ ಒಲವು ನೀಡುತ್ತದೆ. ಹಾಗೆಯೇ ಕರ್ನಾಟಕದಲ್ಲಿ ಭರತನಾಟ್ಯ, ಡೊಳ್ಳುಕುಣಿತ ಹಾಗೂ ಇನ್ನಿತರ ಕಲೆಗಳ ಜೊತೆಗೆ ಪೂಜಾಕುಣಿತವು ವಿಭಿನ್ನತೆಯಿಂದ ಕೂಡಿದೆ. ಎಲ್ಲವು ತನ್ನದೇ ಆದ ನಿಯಮಾವಳಿಗಳನ್ನು ಹೊಂದಿದೆ. ಮಾನವ ಸಂಸ್ಕೃತಿಯನ್ನು ಜಾನಪದ ವಿದ್ವಾಂಸರು, ಶುದ್ದ ಜನಪದ ಸಂಸ್ಕೃತಿಗಳಾಗಿ ಮಾಡಿದ್ದಾರೆ. ನಗರಗಳು ಬೆಳವಣಿಗೆಯನ್ನು ಪಡೆಯುವ ಪೂರ್ವದಲ್ಲಿ ಬಹಳ ಮಂದಿ ಗ್ರಾಮಾಂತರ ಪ್ರದೇಶಗಳಲ್ಲಿ ಇದ್ದವರು. ಪ್ರಾಣಿ ಸಮುದಾಯದಿಂದ ಮನುಷ್ಯನನ್ನು ಬೇರ್ಪಡಿಸಿರುವುದು ಅವನ ಸಂಸ್ಕೃತಿ. ಇಲ್ಲದಿದ್ದರೆ ಪ್ರಾಣಿಗೂ ಮನುಷ್ಯನಿಗೂ ವ್ಯತ್ಯಾಸ ಇರುತ್ತಿರಲಿಲ್ಲ. ಕಲೆ, ಧರ್ಮ ವಿಜ್ನಾನಗಳು ಸಂಸ್ಕೃತಿಯ ಮುಖ್ಯ ಅಂಗಗಳು. ಇವು ಸಂಪೂರ್ಣವಾಗಿ ಮನುಷ್ಯನ ಬಾಳನ್ನು ಕಲ್ಪಿಸಿಕೊಳ್ಳುವುದಕ್ಕೂ ಆಗುವುದಿಲ್ಲ ಮನುಷ್ಯ ಕಲ್ಪಿಸಿಕೊಂಡ ಧ್ಯೆವಾರಾಧನೆಯ ಜೊತೆಯಲ್ಲಿ ಹಾಡು, ಕುಣಿತ, ಶಿಲ್ಪ, ಚಿತ್ರ ಮೊದಲಾದ ಕಲ್ಪನೆಗಳು ರೂಢಿಗೆ ಬಂದಿವೆ.
ದಕ್ಷಿಣ ಕರ್ನಾಟಕದಲ್ಲಿ ಈ ಕಲೆ ಜೀವಂತ
ಈ ಪೂಜಾ ಕುಣಿತ ದಕ್ಕಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಪೂಜಾಕುಣಿತ ಪೂಜಾ ಮೂಲತ: ಶಕ್ತಿ ದೇವತೆಗೆ ಸಂಬಂಧಿಸಿದ ಕುಣಿತ. ಪೂಜಾ ಕುಣಿತವು ನಂತರದ ದಿನಗಳಲ್ಲಿ ಮನರಂಜನೆ ಕಲೆಯಾಗಿ ವಿಕಸನಗೊಂಡಿದೆ. ಸಾಮಾನ್ಯವಾಗಿ ಪೂಜೆಗಳೆಲ್ಲವೂ ಹೆಣ್ಣು ದೇವರುಗಳಾಗಿರುತ್ತದೆ. ಅಪರೂಪಕ್ಕೆ ಗಂಡು ದೇವರ ಪೂಜೆಗಳುಂಟು. ಪೂಜೆಯಲ್ಲಿ ಎರಡು ವಿಧಗಳಿವೆ. ದೇವರ ಉತ್ಸವಮೂರ್ತಿಯನ್ನು ಒಂದು ಅಡ್ಡೆಗೆ ಬಿಗಿದು ನಾಲ್ಕಾರು ಜನ ಹೆಗಲಮೇಲೆ ಹೊತ್ತು ಮೆರೆಸುವುದು ಒಂದು ಬಗೆಯಾದರೆ, ತಳಿ ಅಥವ ತಟ್ಟಿಯಲ್ಲಿ ಅಲಂಕರಿಸಿದ ಪೂಜೆಯನ್ನು ಒಬ್ಬರೇ ಹೊತ್ತು ಕುಣಿಸುವುದು ಮತ್ತೊಂದು ಬಗೆ. ಬಿದಿರು ಅಥವಾ ಸೀಳಿದ ದಬ್ಬೆಗಳನ್ನು ಬಳಸಿ ಸುಮಾರು ಐದು ಅಡಿ ಉದ್ದ ನಾಲ್ಕು ಅಡಿ ಅಗಲದ ಚೌಕಾಕೃತಿಯ ಹಂದರವನ್ನು ಸಿದ್ದ ಪಡಿಸುತ್ತಾರೆ. ಈ ಹಂದರದ ಮದ್ಯ ಭಾಗಕ್ಕೆ ಮೆರೆದೇವರ ವಿಗ್ರಹವನ್ನಿರಿಸಲು ಅನುಕೂಲವಾಗುವಂತೆ ಪುಟ್ಟದಾದ ಮರದ ಹಲಗೆ ಒಂದನ್ನು ಜೋಡಿಸುತ್ತಾರೆ. ಹಲಗೆಯ ಮೇಲೆ ಕೂರಿಸುವ ಪುಟ್ಟ ಮೆರೆದೇವರ ವಿಗ್ರಹಕ್ಕೆ ಭಕ್ತಾದಿಗಳು ಹರಕೆ ಹೊತ್ತು ಸಲ್ಲಿಸಿದ ಆಭರಣಗಳನ್ನು ತೊಡಿಸುತ್ತಾರೆ.
ಪೂಜಾ ಕುಣಿತದ ವಿಧಗಳು
ತೊಟ್ಟಿಲು ಕುಣಿತ
ಎದುರು ಕುಣಿತ
ಹಾಯ್ಗುಣಿತ
ಹೆಜ್ಜೆ ಕುಣಿತ
ಗೆಜ್ಜೆ ಕುಣಿತ
end
****



ಪ್ರಕಾರ....
41. ಕೀಲು ಕುದುರೆ- ಕುದುರೆಯ ಆಕಾರದಲ್ಲಿ ಸಿದ್ಧಪಡಿಸಿ ಕುಣಿತ 
   following info is from https://kn.wikipedia.org/
ಕೀಲು ಕುದುರೆಯು ಕರ್ನಾಟಕದ ಬಿಜಾಪುರ, ಬಳ್ಳಾರಿ, ಮಂಡ್ಯ, ಮೈಸೂರು, ಬೆಂಗಳೂರು, ಕೋಲಾರ, ಕೊಡಗು ಮತ್ತು ಇನ್ನು ಹಲವಾರು ಜಿಲ್ಲೆಗಳಲ್ಲಿ ಜನಪ್ರಿಯವಾದ ಕುಣಿತವಾಗಿದೆ. ಕೊಡಗಿನಲ್ಲಿ ಇದನ್ನು 'ಪೊಯ್ ಕುದುರೆ' ಎಂದು ಕರೆಯುವರು. 'ಕುದುರೆ ಕೋಲ' ಹಾಗೂ 'ಮರಗಾಲು ಕುಣಿತ'ಗಳು ಇದಕ್ಕೆ ಸಂವಾದಿಯಾದ ಪದವಾಗಿದೆ. ಜನಪದ ಕತೆಗಳ ಪ್ರಕಾರ ರಾಜಕುಮಾರನು ತನ್ನ ಪ್ರಿಯತಮೆಯನ್ನು ಗುಟ್ಟಾಗಿ ಸಂದರ್ಶಿಸುವಾಗ, ಇಲ್ಲವೆ ಆಕೆಯನ್ನು ಅಪಹರಿಸಿಕೊಂಡು ಹೋಗುವಾಗ ಕೀಲು ಕುದುರೆಯನ್ನು ಬಳಸುವ ಕಲ್ಪನೆಯು ಇದೆ. ಏಳು ಉಪ್ಪರಿಗೆ ಅರಮನೆ ಮೇಲೆ ‌‌‌‌‌‌‌‍‍‍‍‍‍‌‌‌‌‌‌‌‍‍‍‍‍‍‍‍‍‍‍‍ಜೋಪಾನವಾಗಿರುವಂತಹ ರಾಜಕುಮಾರಿ ಸಾಮೀಪ್ಯವನ್ನು ಆಕೆಯ ಪ್ರಿಯತಮ ಅಂತರಿಕ್ಶ ಮಾರ್ಗವಾಗಿ ಬಂದು ಸೇರಲು ಕೀಲುಕುದುರೆಯನ್ನು ಉಪಯೋಗಿಸುತ್ತಾನಂತೆ!
ಕೀಲು ಕುದುರೆಯ ತಯಾರಿಸುವಿಕೆ
ಬಿದಿರಿನ ದಬ್ಬೆಗಳಿಂದ ರಚಿಸಿರುತ್ತಾರೆ. ಕುದುರೆಯ ಆಕಾರಕ್ಕೆ ತಕ್ಕಂತೆ ಹೊಟ್ಟೆ, ಎದೆ, ಮತ್ತು ಹಿಂಭಾಗವನ್ನು ಎಳೆಗಳಿಂದ ಹೆಣೆದು ರೂಪಿಸಿರುತ್ತಾರೆ. ತಲೆ ಮತ್ತು ಕತ್ತನ್ನು ಕಲಾವಿದರು ಇಲ್ಲವೇ ಆ ಊರಿನ ಗ್ರಾಮಸ್ತರು ಮಾಡಿಕೊಡುತ್ತಾರೆ. ಕುದುರೆಯ ತಲೆಯನ್ನು ಕಾಗದದ ಹಿಟ್ಟಿನಿಂದ ರಚಿಸಿರುತ್ತಾರೆ. ಇದು ಟೊಳ್ಳಾಗಿರುತ್ತದೆ. ಕುಣಿತಕ್ಕೆ ಸೂಕ್ತವಾದ ರೀತಿಯಲ್ಲಿ ಮರಗಾಲನ್ನು ಕಟ್ಟಿಕೊಂಡಿರುತ್ತಾರೆ. ಈ ಮರದ ಕಾಲನ್ನು ಎರಡು ಅಡಿ ಉದ್ದದ ಹಗುರು ಮರದಿಂದ ಮಾಡಿ ಅದರ ಮೇಲೆ ಕಲಾವಿದರ ಕಾಲುಗಳನ್ನು ಕೂರಿಸಲು ಅನುಕೂಲವಾಗುವಂತೆ 'ಕಂಡು' ಮಾಡಿರುತ್ತಾರೆ.'ಕೋಡಿನ್' ಭಾಗವನ್ನು ಕಾಲಿಗೆ ಮದ್ಯೆ ಒತ್ತದಂತೆ ಬಟ್ಟೆ ಇಟ್ಟು ಬಿಗಿಯಾಗಿ ಕಟ್ಟಿರುತ್ತಾರೆ. ಕುದುರೆಗೆ ಸೂಕ್ತವಾದ ಬಣ್ಣವನ್ನು ಹಾಕಲಾಗಿರುತ್ತದೆ.
ಕಲಾವಿದರ ವಸ್ತ್ರದ ಮಾದರಿ
ಕಲಾವಿದರು ಕುದುರೆಯ ಬೆನ್ನಿನಲ್ಲಿ ಸೇರಿಕೊಂಡು ತನ್ನೆರಡು ಹೆಗಲುಗಳಿಗೆ ಕುದುರೆಯ ದಬ್ಬೆಯ ದೇಹವನ್ನು ಬಿಗಿದುಕೊಳ್ಳುತ್ತಾನೆ. ಲಗಾಮು ಕೈಯಲ್ಲಿ ಹಿಡಿದು ಅದರ ತಲೆ ಬಾಲಗಳನ್ನು ಆಡಿಸುತ್ತ ಹಿಂದು ಮುಂದು ಮಾಡಿ ಕುಣಿಯುವಾಗ ಕುದುರೆಯೇ ಸಹಜ ಭಂಗಿಯಲ್ಲಿ ಕುಣಿದಂತೆ ಭಾಸವಾಗುತ್ತದೆ. ರಾಜ ರಾಣಿಯರಂತೆ ಕಿರೀಟ, ಭುಜಕೀರ್ತಿ, ಎದೆಹಾರ, ನಡುಬಿಲ್ಲೆ, ವೀರಗಾಸೆಗಳನ್ನು ತೊಟ್ಟಿರುತ್ತಾರೆ. ಮುಖಕ್ಕೆ ಬಣ್ಣ ಹಾಕಿಕೊಂಡು, ಕಾಲಿಗೆ ಗೆಜ್ಜೆಯನ್ನು ಕಟ್ಟಿ ಕುಣಿಯುತ್ತಾರೆ. ಸಾಮ್ಯಾನವಾಗಿ ಈ ಕುಣಿತದಲ್ಲಿ ಒಬ್ಬರು ಗಂಡು, ಒಬ್ಬರು ಹೆಣ್ಣು ವೇಶ ಹಾಕಿಕೊಂಡು ಜೊತೆಯಾಗಿ ಕುಣಿಯುವ ವಾಡಿಕೆಯು ಇರುವುದು. ಕೆಲವು ಕಡೆ ನವಿಲು ಆಕೃತಿಗಳ ಕಲಾವಿದರು ಸೇರಿಕೊಂಡು ಕುಣಿಯುವಂತಹ ಬಗೆಯು ಇರುವುದು.
ಕೀಲು ಕುದುರೆಯ ವಾದ್ಯಗಳು
ನಾಗಸ್ವರ, ಡೋಲು, ತಮಟೆ ಈ ವಾದ್ಯಗಳನ್ನು ಬಳಸಲಾಗುತ್ತದೆ. ಕೆಲವೊಮ್ಮೆ ಕರಡಿ ಮಜಲನ್ನು ಬಳಸುವುದುಂಟು. ಇತ್ತೀಚೆಗೆ ಬ್ಯಾಂಡ್ ಸೆಟ್ ಉಪಯೋಗಿಸುವುದು ಕಂಡುಬರುವುದು. ಹಬ್ಬ, ಮದುವೆ, ಉತ್ಸವದ ದಿನಗಳಲ್ಲಿ, ಹಳ್ಳಿಯ ಬಯಲಲ್ಲಿ ಇಲ್ಲವೇ ಅಗಲವಾದ ಹಾಗೂ ನೇರವಾದ ಬೀದಿಯಲ್ಲಿ ಪ್ರದರ್ಶನ ಮಾಡುವರು.
end
****




ಪ್ರಕಾರ....
42. ಪಟದ ಕುಣಿತ- ಹತ್ತು ಅಡಿ ಉದ್ದದ ಪಟದ ಬಿದಿರಿನ ಕೋಲಿಗೆ ರೇಷ್ಮೆ ಬಟ್ಟೆ ಸುತ್ತಿಹಿತ್ತಾಳೆ ಅಥವಾ ಬೆಳ್ಳಿಯ ಛತ್ರಿಯನ್ನು ಅಳವಡಿಸಿ ಕುಣಿತ 
   following info is from https://kn.wikipedia.org/
ಪಟದ ಕುಣಿತವು ವೈಷ್ಣವ ಸಂಪ್ರದಾಯದ ಕುಣಿತಗಳಲ್ಲಿ ಒಂದು. ಇದು ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಕಂಡುಬರುವುದು. ಈ ಕುಣಿತವನ್ನು ಕಂಡಾಗ ಸುಗ್ಗಿಯ ಕುಣಿತದಂತಿದ್ದರೂ ಕಲಾವಿದರ ಕೈಯಲ್ಲಿ ಹಿಡಿದಂತಹ ಪಟಗಳಿಂದ ವಿಶಿಷ್ಷ ಕಲೆಯೆನಿಸಿರುವುದು. ಹತ್ತು, ಹದಿನೈದು ಅಡಿ ಉದ್ದದ ಪಟದ ಬಿದಿರಿನ ಕೋಲಿಗೆ ಬಣ್ಣದ ರೇಷ್ಮೆ ಜಾಲರಿ ಬಟ್ಟೆಯಿಂದ ಸುತ್ತಿ ಅಲಂಕಾರವನ್ನು ಮಾಡಿರುತ್ತಾರೆ. ಪಟದ ತುದಿಯಲ್ಲಿ ಹಿತ್ತಾಳೆ ಅಥವಾ ಬೆಳ್ಳಿಯ ಛತ್ರಿಯನ್ನು ಅಳವಡಿಸಿ ರುತ್ತಾರೆ. ಪಟದ ಕುಣಿತವು ಸಾಮಾನ್ಯವಾಗಿ ಒಂದೇ ಸಾಲಿನಲ್ಲಿ, ಎದುರು ಬದುರಿನ ಸಾಲಿನಲ್ಲಿ ಕುಣಿತವು ನಡೆಯುವುದನ್ನು ಕಾಣಬಹುದು. ಈ ಕುಣಿತವನ್ನು ಕಂಡಾಗ ವಿಜಯದ ಸಂಭ್ರಮದ ಸಂಕೇತವಾಗಿ ಗೋಚರಿಸುವುದು. ಕೆಲವು ಕಡೆ ಈ ಕುಣಿತವು ಭಾಗವಂತಿಕೆಯ ಜೊತೆಯಲ್ಲಿ ಪಟದ ಕುಣಿತ ನಡೆಯುವುದುಂಟು. ಮಂಡ್ಯ ಜಿಲ್ಲೆಯ ಸ್ಥಳಗಳಲ್ಲಿ ದೀವಳಿಗೆ ತಿಂಗಳಲ್ಲಿ ಮಾತ್ರ ಪಟವನ್ನು ಮುಟ್ಟುವ ಸಂಪ್ರದಾಯವಿದೆ ಎಂದು ಹೇಳುವುದು ತಿಳಿಯುತ್ತದೆ.
ಇತಿವೃತ್ತ
ಒಕ್ಕಲಿಗ ಸಂಪ್ರದಾಯದವರು ಈ ಪಟದ ಕುಣಿತವನ್ನು ಹಬ್ಬ,ಜಾತ್ರೆ, ಉತ್ಸವಗಳಲ್ಲಿ ಮಾಡುವರು. ನಗಾರಿಗಳ ಬಡಿತವು ಈ ಪಟದ ಕುಣಿತಕ್ಕೆ ಹಿನ್ನೆಲೆಯ ವಾದ್ಯವಾಗಿರುವುದು. ಬಿಳಿಯ ಕಾಸೆಪಂಚೆ, ಬಿಳಿಯ ನಿಲುವಂಗಿ, ಬಿಳಿಯ ರುಮಾಲು, ಸೊಂಟಕ್ಕೆ ಬಿಗಿದ ಬಣ್ಣದ ವಸ್ತ್ರ, ಕೊರಳಿಗೆ ಮಣಿಸರ, ಒಂದು ಕೈಯಲ್ಲಿ ಬಿಳಿಯ ಚೌಕ, ಕಾಲಿಗೆ ಗೆಜ್ಜೆಯನ್ನು ಕಲಾವಿದರು ಧರಿಸಿರುತ್ತಾರೆ.
ಹೆಗಲಿಗೆ ಅಡ್ಡವಾಗಿ ಹಾಕಿಕೊಂಡಂತಹ ಬಟ್ಟೆಯ ’ನವಾರ’ದಲ್ಲಿ ಸಿಕ್ಕಿಸಿದ ಪಟದ ಕೋಲನ್ನು ಬಲಗೈಯಲ್ಲಿ ಹಿಡಿದು ವಾದ್ಯದ ದಾಟಿಗೆ ತಕ್ಕಂತೆ ವಿವಿಧ ಭಂಗಿಯಲ್ಲಿ ಕುಣಿಯುವುದು ಕಂಡುಬರುವುದು. ಪಟದ ಕುಣಿತಕ್ಕೆ ಇಷ್ಟೆ ಕಲಾವಿದರೂ ಇರಬೇಕೆಂಬ ನಿಯಮವೇನೂ ಇಲ್ಲ . ಪಟದ ಕುಣಿತದ ಸಂದರ್ಭದಲ್ಲಿ ಪಟದ ಜವಳಿಗಳು ಬಾಗುವಾಗುವುದು.
ವಿಧಗಳು
ಪಟದ ಕುಣಿತದಲ್ಲಿ-
ಗೆಜ್ಜೆ ಕುಣಿತ,
ಎರಡ್ಹೆಜ್ಜೆ ಕುಣಿತ,
ಮೂರು ಹೆಜ್ಜೆ ಕುಣಿತ 
ಮೊದಲಾದ ವಿಧಗಳಿರುವುದು.
end
****





ಪ್ರಕಾರ....
43. ಲಂಬಾಣಿ ತಾಂಡ ನೃತ್ಯ- ಲಂಬಾಣಿ ಕುಣಿತ (ತೀಜೆರ್ ನಾಸ್) ದೇವರನ್ನು, ಸಮಾಜವನ್ನು ಕೊಂಡಾಡಿ ಮಾಡುವ ನೃತ್ಯ
   following info is from https://kn.wikipedia.org/
ಗದಗ ಜಿಲ್ಲೆಯ ನಾಗಾವಿ ಲಂಬಾಣಿ ತಾಂಡಾ ಕರ್ನಾಟಕದ ಲಂಬಾಣಿ ತಾಂಡಾಗಳಲ್ಲಿ ಪ್ರಮುಖವಾದುದು. ತಮ್ಮ ಆಚಾರ, ವಿಚಾರ, ಸಂಸ್ಕøತಿ ಸಂಪ್ರದಾಯಗಳಿಂದ ಪ್ರಸಿದ್ಧರಾಗಿರುವ ಲಂಬಾಣಿಗಳು ಗದಗ ಜಿಲ್ಲೆಯ ನಾಗಾವಿ ಗ್ರಾಮದಲ್ಲಿ ನೆಲೆನಿಂತಿದ್ದಾರೆ.
ಹಿನ್ನೆಲೆ
ಲಂಬಾಣಿ ವೇಷಭೂಷಣ
ಲಂಬಾಣಿಗಳು ಮೂಲತಃ ರಾಜಸ್ತಾನದವರು. ರಾಜಸ್ತಾನದಲ್ಲಿದ್ದುಕೊಂಡೇ ಇತರ ರಾಜ್ಯಗಳೊಡನೆ ವ್ಯಾಪಾರ ಸಂಬಂಧ ವೃದ್ಧಿಸಿಕೊಂಡರು. ಬ್ರಿಟಿಷರ ಕಾಲದಲ್ಲಿ ಕಾರಣಾಂತರಗಳಿಂದ ಬೇರೆ ಬೇರೆ ಭಾಗಗಳಿಗೆ ಗುಳೆ ಹೋದರು. ಹಾಗೆ ವಲಸೆ ಬಂದವರಲ್ಲಿ ನಾಗಾವಿ ತಾಂಡಾದ ಲಂಬಾಣಿಗಳು ಪ್ರಮುಖರು. ನಾಗಾವಿ ಗ್ರಾಮ ಪವನ ವಿದ್ಯುತ್ ಘಟಕ ಹಾಗೂ ಕೃಷಿ ಪ್ರಧಾನ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಈ ಗ್ರಾಮದ ಸುತ್ತಲೂ ಲಂಬಾಣಿಗಳು ವಾಸವಾಗಿದ್ದರು. 1850ರಲ್ಲಿ ಸಮಾಜದ ಪ್ರಮುಖರ ನೇತೃತ್ವದಲ್ಲಿ ಲಂಬಾಣಿ ಜನರೆಲ್ಲ ಒಂದಾಗಿ ನಾಗಾವಿ ಗ್ರಾಮದಲ್ಲಿತಾಂಡಾ ಕಟ್ಟಿಕೊಂಡರು. ಮೊದಲು ಗುಡಿಸಲು, ಚಿಕ್ಕ ಹಟ್ಟಿಗಳಲ್ಲಿ ಇವರು ವಾಸವಾಗಿದ್ದರು. 1950 ರಲ್ಲಿ ಒಂದು ಗುಡಿಸಲಿನಲಲಿ ನಡೆದ ಆಕಸ್ಮಿಕ ಅಗ್ನಿ ಅವಘಡ ಇಡೀ ತಾಂಡಾವನ್ನು ಬಲಿ ತೆಗೆದುಕೊಂಡಿತ್ತು. ಈ ಘಟನೆಯಿಂದ ಪಾರಾದವರು ಚೇರಿಸಿಕೊಂಡು ಮತ್ತೆ ಅದೇ ಸ್ಥಳದಲ್ಲಿ ತಮ್ಮ ತಾಂಡಾ ರೂಪಿಸಿದರು. ಅಂದು ಅವರು ರೂಪುಗೊಳಿಸಿದ ನೀಲನಕ್ಷೆ ಇಂದು ವಿಸ್ತøತಗೊಂಡಿದೆ. ಗುಡಿಸಲುಗಳು, ಹಟ್ಟಿಗಳು ಮರೆಯಾಗಿ ಇದೀಗ ಆರ್‍ಸಿಸಿ ಮನೆಗಳು ತಲೆಯೆತ್ತಿವೆ. ಜನರ ಕೃಷಿ, ವ್ಯಾಪಾರ, ವ್ಯವಹಾರಗಳೂ ಕೂಡ ವಿಸ್ತಾರಗೊಂಡಿವೆ.
ಮುಖ್ಯ ಕಸುಬು
ಆಧುನಿಕತೆಗೆ ತಕ್ಕಂತೆ ನಾಗಾವಿ ತಾಂಡಾದ ಜನರ ಜೀವನ ಶೈಲಿ ಬದಲಾದರೂ ಆದಾಯ ಗಳಿಕೆಯ ವಿಧಾನ ಮಾತ್ರ ಪುರಾತನವಾದದ್ದು. ಕೃಷಿ ಇವರ ಮುಯ ಕಸುಬು. ನಾಗಾವಿಯ ಹೊರಪ್ರದೇಶಗಳು, ಗುಡ್ಡಗಳೇ ಇವರ ಸಾಗುವಳಿ ಭೂಮಿಗಳು. ಮೊದಲು ಕೃಷಿ ಕಾರ್ಮಿಕತನ, ವಸ್ತು ವಿನಿಮಯ ಸಾಗುವಳಿ ಪದ್ಧತಿಗಳು ರೂಢಿಯಲ್ಲಿದ್ದವು. ಜೋಳ, ಸಜ್ಜೆ, ಹೆಸರು, ನವಣೆ, ಶೇಂಗಾ ಇವರ ಮುಖ್ಯ ಬೆಳೆಗಳು.ಇತ್ತೀಚಿನ ತಲೆಮಾರಿನವರು ವಿದ್ಯಾಭ್ಯಾಸವನ್ನು ಪಡೆದು ಒಳ್ಳೆಯ ಉದ್ಯೋಗಗಳನ್ನು ಪಡೆಯುವ ಪ್ರಯತ್ನ ನಡೆಸಿದ್ದಾರೆ. ಇದರ ಜೊತೆಗೆ ತಾಂಡಾದ ಬಹುತೇಕ ಯುವಕರು ಗೋವಾದಲ್ಲಿ ಸ್ವಂತ ವ್ಯಾಪಾರಗಳನ್ನು ನಡೆಸುತ್ತಿದ್ದಾರೆ.
ಧಾರ್ಮಿಕ ಆಚರಣೆಗಳು
ಹಿಂದೂ ಧಾರ್ಮಿಕ ಸಂಪ್ರದಾಯಗಳನ್ನೇ ಆಚರಿಸುತ್ತಿದ್ದು, ಇವುಗಳ ಜೊತೆಗೆ ಕೆಲವು ವಿಶಿಷ್ಟ ಆಚರಣೆಗಳನ್ನೂ ಹೊಂದಿದ್ದಾರೆ. ನವರಾತ್ರಿಯ ಸಮಯದಲ್ಲಿ 5 ಬುಟ್ಟಿಗಳಲ್ಲಿ ಗೋಧಿ ಸಸಿ ನೆಟ್ಟು ಖಂಡೇ ಪೂಜೆಯ ದಿನ ಅದನ್ನು ಮಹಿಳೆಯರು ತಲೆಯ ಮೇಲೆ ಹೊತ್ತು ನರ್ತಿಸುತ್ತಾರೆ. ಹೋಳಿ ಹುಣ್ಣಿಮೆಯ ಸಮಯದಲ್ಲಿ `ಲೇಂಗೀ ಗೀತೆ'ಗೆ ನೃತ್ಯ ಮಾಡಲಾಗುತ್ತದೆ. ಮಕ್ಕಳಿಲ್ಲದ ದಂಪತಿಯ ಮನೆ ಮುಂದೆ ಈ ನೃತ್ಯ ಮಾಡಿ ಓಕುಳಿ ಆಡಲಾಗುತ್ತದೆ. ಈ ಆಚರಣೆಯಿಂದ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಅವರಲ್ಲಿದೆ. ಮಣ್ಣೆತ್ತಿನ ಅಮವಾಸ್ಯೆಯ ನಂತರ ಬರುವ ಮದಲ ಮಂಗಳವಾರದಂದು ಸಪ್ತಮಾತೃಕೆಯರ ಆಚರಣೆ ಮಾಡಲಾಗುತ್ತದೆ. ತಮ್ಮ ತಾಂಡಾವನ್ನು ಎಲ್ಲಾ ರೋಗರುಜಿನಗಳಿಂದ ಕಾಪಾಡುವಂತೆ ಪ್ರಾರ್ಥಿಸಿ ಸಪ್ತಮಾತೃಕೆಯರನ್ನು ಪೂಜಿಸಲಾಗುತ್ತದೆ. `ಕೋಳಿಹಬ್ಬ' ನಾಗಾವಿ ತಾಂಡಾದ ಪ್ರಸಿದ್ಧ ಹಬ್ಬ. ತಾಂಡಾದ ಹೊರಗೆ ಕೋಳಿಗಳನ್ನು ಬಲಿಕೊಟ್ಟು ದೇವರನ್ನು ತೃಪ್ತಿಪಡಿಸಲಾಗತ್ತದೆ. ಈ ಎಲ್ಲಾ ಹಬ್ಬಗಳನ್ನು ತಾಂಡಾದ ಜನರೆಲ್ಲ ಸೇರಿ ಒಟ್ಟಿಗೆ ಆಚರಿಸುತ್ತಾರೆ.
ಲಂಬಾಣಿ ಕುಣಿತ ಹಾಗೂ ವೇಷಭೂಷಣ
ಲಂಬಾಣಿ ಕುಣಿತ
ಇವರನ್ನು ಕರ್ನಾಟಕದಲ್ಲಿ `ಲಂಬಾಣಿ'ಗಳೆಂದು, ಮಹಾರಾಷ್ಟ್ರದಲ್ಲಿ `ಬಂಜಾರ'ರೆಂದು, ಆಂಧ್ರಪ್ರದೇಶದಲ್ಲಿ `ಲಂಬಡ್'ಗಳೆಂದು ಕರೆಯುತ್ತಾರೆ. ಅವರ ಮಾತೃಭಾಷೆ ಲಂಬಾಣಿ. ಅದು ಮರಾಠಿ, ಹಿಂದಿ ಹಾಗೂ ಪಟೇಗಾರ ಭಾಷೆಗಳ ಗುಂಪಿನಲ್ಲಿಯೇ ಬರುತ್ತದೆ. ರಾಜ್ಯ ಯಾವುದೇ ಇರಲಿ ಆದರೆ ಅವರ ಆಚರಣೆಗಳೆಲ್ಲ ಒಂದೇ ಎಂಬುದು ಮುಖ್ಯ ಅಂಶ. ಲಂಬಾಣಿ ಕುಣಿತಕ್ಕೆ "ತೀಜೆರ್ ನಾಸ್" ಎಂಬ ಹೆಸರಿದೆ. ದೇವರನ್ನು, ಸಮಾಜವನ್ನು ಕೊಂಡಾಡಿ ಮಾಡುವ ನೃತ್ಯವದು. ಸುಮಾರು 400ರಿಂದ 500 ಲಂಬಾಣಿ ಗೀತೆಗಳಿದ್ದು ಅದಕ್ಕೆ ಈ ಲಂಬಾಣಿ ನೃತ್ಯವನ್ನು ಮಾಡಲಾಗುತ್ತದೆ. ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಈ ನೃತ್ಯ ಕಟ್ಟುನಿಟ್ಟಿನ ಸಂಪ್ರದಾಯವೇ ಹೌದು. ನಗಾರಿ, ಕಂಚಿನ ಗಂಗಾಳ, ಹಲಗೆ, ತಾಳದಂತಹ ವಾದ್ಯಗಳನ್ನು ನೃತ್ಯದ ಸಮಯದಲ್ಲಿ ಬಳಸಲಾಗುತ್ತದೆ. ಲಂಬಾಣಿಗಳ ವೇಷಭೂಷಣವೂ ಕೂಡ ಅಷ್ಟೇ ವೈವಿಧ್ಯಮಯವಾದುದು. ಗಂಡಸರು ಕಡ್ಡಾಯವಾಗಿ ರುಮಾಲು ಧರಿಸಬೇಕು. ಇನ್ನು ಹೆಂಗಸರು ಪೇಠಿಯಾ(ಲಹಂಗಾ), ಸಾಠಿಯಾ(ದುಪ್ಪಟ್ಟಾ), ಕಾನ್ಸಳಿ(ಕುಪ್ಪಸ) ಧರಿಸುತ್ತಾರೆ. ಈ ಬಟ್ಟೆಗಳ ಮೇಲೆ ಕನ್ನಡಿ, ನಾಣ್ಯ, ಮುತ್ತು, ಮಣಿಗಳನ್ನು ಸೇರಿಸಿ ಕಸೂತಿ ಕೆಲಸ ಮಾಡಿರುತ್ತಾರೆ. ವಿವಾಹಿತ ಮಹಿಳೆಯರು ರಟ್ಟೆಗೆ ಬಳೆ, ಕೂದಲಿಗೆ ಘುಗ್ಗರಿ ಹಾಕಿರುತ್ತಾರೆ. ಇವನ್ನು ಮುತ್ತೈದೆತನದ ಕುರಹುಗಳೆಂದೇ ಪರಿಗಣಿಸಲಾಗುತ್ತದೆ. ಇನ್ನುಳಿದಂತೆ ಭುರಿಯಾ, ಸೂಡಿ, ಬಲಿಯಾ, ಬಳೆಗಳು, ಕೊರಳಿಗೆ ಬೆಳ್ಳಿಯ ಹಾಸಲಿ, ತರಹೇವಾರಿ ಮಣಿಸರಗಳು, ಕಾಲಿಗೆ ಕಡಗ, ಕಸ್ಯೆ, ಅಂಗೂತ್ಯಾ, ಚಟಿಗೆ, ವಿಸುವಾಗಳನ್ನು ತೊಡುತ್ತಾರೆ. ಲಂಬಾಣಿ ಮಹಿಳೆಯರು ತಮ್ಮ ಉಡುಗೆಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಒಂದು ಜೊತೆ ಬಟ್ಟೆ ತಯಾರಿಸಲು ಎರಡರಿಂದ ಮೂರು ತಿಂಗಳು ಹಿಡಿಯುತ್ತದೆ. ವಿದೇಶಿಗರಿಗೆ ಈ ಬಟ್ಟೆಗಳ ಮೇಲೆ ವಿಶೇಷ ವ್ಯಾಮೋಹ. ತಮ್ಮ ಪ್ರವಾಸದ ಸಮಯದಲ್ಲಿ ಲಂಬಾಣಿಗಳೆಲ್ಲಾದರೂ ಸಿಕ್ಕರೆ ಈ ಬಟ್ಟೆಗಳನ್ನು ಖರೀದಿಸುವ ವಿದೇಶಿಗರೂ ಇದ್ದಾರೆ.
end
****




ಪ್ರಕಾರ....
44. ಹುತ್ತರಿ ಕುಣಿತ - ಹುತ್ತರಿ ಹಬ್ಬದ ಸಂದರ್ಭದಲ್ಲಿ ಕೊಡಗಿನ ಒಂದು ಜನಪದ ನೃತ್ಯ
   following info is from https://kn.wikipedia.org/
ಹುತ್ತರಿ ಕುಣಿತ - ಹುತ್ತರಿ ಹಬ್ಬದ ಸಂದರ್ಭದಲ್ಲಿ ನಡೆಯುವ ಕೊಡಗಿನ ಒಂದು ಜನಪದ ನೃತ್ಯ. ಹಬ್ಬದ ಅಂಗವಾಗಿ ಊರಿನ ದೇವಸ್ಥಾನದ ಮಂದಿನಲ್ಲಿ (ಬಯಲಿನಲ್ಲಿ) ಒಂದು ವಾರ ಪರ್ಯಂತ ಕೋಲಾಟ ನಡೆಯುತ್ತದೆ. ಹಬ್ಬಕ್ಕೆ 4-5 ದಿನಗಳಿರುವ ಮೊದಲು ಗ್ರಾಮದ ಯುವಕರು, ಹಿರಿಯರು ಗ್ರಾಮದ ಮಂದಿನಲ್ಲಿ ಸೇರಿ ಕೋಲಾಟ ಅಭ್ಯಾಸ ಮಾಡುತ್ತಾರೆ. ಇದಕ್ಕೆ ಈದ್ ಎಂದು ಹೆಸರು. ಈದ್ ದಿನಗಳಲ್ಲಿ ಮತ್ತು ಹಬ್ಬದ ದಿನಗಳಲ್ಲಿ ಕೋಲಾಟದಲ್ಲಿ ಭಾಗವಹಿಸು ವವರು ಮತ್ತು ಕೋಲಾಟ ನೋಡಲು ಆಗಮಿಸುವವರು ದುಡಿ ಬಾರಿಸುವ ವಾದ್ಯಗಾರರೊಂದಿಗೆ ಮಂದಿಗೆ ಬರುತ್ತಾರೆ. ಅವರು ತಲುಪಿದಾಗ
ಬಾಳ್ ಬಾಳೆನ್ನಡ ಜಬ್ಬೂಮಿ ಬಾಳೋ
ಜಬ್ಬೂಮಿ ಮೀದಲೆ ಪೂಮಂದ್ ಬಾಳೋ
ಪೂಮಂದ್ ಮೀದಲ್ ದೇವಯ್ಯ ಬಾಳೋ
ದೇವಂಗೊತ್ತಾಚಾರ ಪಾಡಿಚೊ ನಂಗ
ಆಚಾರಪಾಡಿತ್ ಪಾಟ್ ಬೆಕ್ಕನ ಎಂಗ
(ಜೀವನ ಮಾಡು ಒಳ್ಳೆಯ ಭೂಮಿಯ ಮೇಲೆ, ಒಳ್ಳೆಯ ಭೂಮಿಯ ಮೇಲೆ ಚೆನ್ನಾಗಿ ಬಾಳು, ಒಳ್ಳೆಯ ಭೂಮಿಯ ಮೇಲೆ ದೇವಯ್ಯ ನೀನು ಬಾಳು, ದೇವರಿಗೆ ಒಪ್ಪುವಂಥ ಆಚಾರವಿಚಾರವನ್ನು ಹಾಡಿದೆವು ನಾವು. ಆಚಾರವನ್ನು ಹಾಡಿ ಪಾಡಿ ಹೇಳುವೆವು ನಾವು) ಎಂದು ಹಾಡಿ ವಾದ್ಯಗಾರರು ಹಾಡು ನಿಲ್ಲಿಸುತ್ತಾರೆ.
ಅನಂತರ ಅನೇಕ ಬಗೆಯ ಕೋಲಾಟ ಪ್ರದರ್ಶಿತವಾಗುತ್ತದೆ. ಬೊಳಕಾಟ, ಪಡೆಕಳಿ ಇತ್ಯಾದಿ ನೃತ್ಯಗಳೂ ನಡೆಯುತ್ತವೆ. ಹಾಡುಗಳ ರೀತಿ ಧಾಟಿಗಳು. ಹಾಡಿನೊಂದಿಗೆ ನೃತ್ಯದ ಹೆಜ್ಜೆಗಳನ್ನೂ ಜೊತೆಜೊತೆಯಾಗಿಡುವಂತೆ ಪ್ರೇರೇಪಿಸುತ್ತವೆ. ಹುತ್ತರಿ ಕೋಲಾಟದ ಹಾಡುಗಳು ಪೊಯಿಲೇ ಪೊಯಿಲೇ ಎಂಬ ಪಲ್ಲವಿಯಿಂದ ಪ್ರಾರಂಭವಾಗುತ್ತವೆ. ಈ ಹಾಡುಗಳಲ್ಲಿ ದೇವರ ಆಶೀರ್ವಾದವನ್ನು ಬೇಡುವ, ವಾದ್ಯದವರಿಗೂ ನೃತ್ಯದವರಿಗೂ ಸಲಹೆಗಳನ್ನು ಕೊಡುವ ವಿಚಾರಗಳೂ ಸರಸ ಮತ್ತು ಹಾಸ್ಯಪ್ರಸಂಗಗಳೂ ನಿರೂಪಿತವಾಗಿರುತ್ತವೆ.
ಪಡೆಕಳಿ ಅಥವಾ ಪರಿಯಕಳಿ ಯುದ್ಧಪರಂಪರೆಗೆ ಸೇರಿದ ನೃತ್ಯ. ಶೂರ ಯುವಕರು ಪೆಟ್ಟುಗಳನ್ನು ತಡೆಯುವ ಗುರಾಣಿಯಂಥ ಸಾಧನವನ್ನು ತಮ್ಮ ಎಡಗೈಯಲ್ಲಿ ಹಿಡಿದು, ಬಲಗೈಯಲ್ಲಿ ಉದ್ದವಾದ ಬೆತ್ತದ ಕೋಲನ್ನು ಹಿಡಿದು, ನಾನ್ ಬಾಳ್, ನೀನ್ ಬಾಳ್, ಏಡಕೂಡ ಇಳಿಯುವ ಜಂಙದಿ ಬಾಳ್. ಇಗ್ಯೆತಪ್ಪ ಬಾಳ್, ಬಯತೂರಪ್ಪ ಬಾಳ್, ಬಾಳ್ ಬಾಳರೇ ಬಾಳ್ ಎಂದು ಹೇಳುತ್ತ ಹೋರಾಟಕ್ಕೆ ಆಹ್ವಾನಿಸುತ್ತಾರೆ. ಈ ಆಟದಲ್ಲಿ ಪರಸ್ಪರ ಯಾರೂ ಕೂಡ ಮೊಣಕಾಲಿನ ಮೇಲೆ ಹೊಡೆಯಬಾರದು. ಆಟ ಒಂದು ಘಟ್ಟಕ್ಕೆ ಮುಟ್ಟಿದಾಗ (ಒಬ್ಬರಿಗಿಂತ ಮತ್ತೊಬ್ಬರ ಕೈ ಮೇಲಾಗಿದೆ ಎಂದು ತಿಳಿದಾಗ) ಆಟವನ್ನು ನಿಲ್ಲಿಸಿ, ಪರಸ್ಪರ ಅಪ್ಪಿಕೊಂಡು ಅಭಿನಂದಿಸಿ ಬೇರ್ಪಡುತ್ತಾರೆ.
ಹುತ್ತರಿ ಹಬ್ಬದ ಸಂಜೆ ಅಥವಾ ಕೋಲಾಟ ನಡೆಯುವಷ್ಟು ದಿನ ಪ್ರತಿ ರಾತ್ರಿ ಗ್ರಾಮದ ಮನೆ ಮನೆಗೆ ಹೋಗಿ ಮನೆಹಾಡು ಹೇಳುವ ಸಂಪ್ರದಾಯವೂ ಇದೆ. ಮನೆಯವರನ್ನು ಹಾಡಿ ಹೊಗಳಿದ ಅನಂತರ ಅವರಿಂದ ಕಾಣಿಕೆಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಒಂದು ಮನೆಯ ಹಾಡು :
ನಂದಾಟ್ ಈ ಮನೆ ನಂದಿ ಮಹದೇವ
ಪತ್ತಾಯ ಚಿತ್ತಾರಿ ತೊನೆಯತಿರಡೊ
ತೊಟ್ಟಿಲ್ ಪಾಕು ಞತಪ್ಪತಿರಡೊ
ಕೊಟ್ಟಿಲ್ ಕರಪತ್ರ ತಪ್ಪತಿರಡೊ
ಪೊಟ್ಟಿಲ್ ಬೀರಾಳಿ ನೀಂಗತಿರಡೊ
ಬೆಪ್ಪಲ್ ಪೊಂಬಣನಂಗತಿರಡೊ
(ಈ ಮನೆಯವರಿಗೆ ಮಂಗಳವನ್ನುಂಟುಮಾಡು ಮಹದೇವ. ಈ ಮನೆ ಎಲ್ಲ ದಿಕ್ಕಿನಲ್ಲೂ ಅಭಿವೃದ್ಧಿ ಹೊಂದಲಿ; ಇದರ ಉಗ್ರಾಣದಲ್ಲಿ ಸಣ್ಣಕ್ಕಿ ತುಂಬಿ ತುಳುಕಾಡುತಿರಲಿ, ಸದಾಕಾಲವೂ ತೊಟ್ಟಿಲಲ್ಲಿ ಹಾಲು ಹಸುಳೆ ನಗುತಿರಲಿ. ಕೊಟ್ಟಿಗೆಯಲಿ ಹಾಲು ಕರೆಯುವ ಹಸು ಇರಲಿ ಇತ್ಯಾದಿ).
end
****



others/other categories
   following info is from https://kn.wikipedia.org/

ರಂಗದ ಕುಣಿತ  
ಕರ್ನಾಟಕ ರಾಜ್ಯದ ಒಂದು ಜನಪದ ಕುಣಿತ. ಇದು ಮಂಡ್ಯ ಜಿಲ್ಲೆಯಲ್ಲಿ ವ್ಯಾಪಕವಾಗಿಯೂ ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿರಳವಾಗಿಯೂ ಕಂಡುಬರುತ್ತವೆ

ಹುಲಿಹೆಜ್ಜೆ ಕುಣಿತ  
ಬಹಳ ಹಿಂದೆ ಸಾರಿಗೆ ವ್ಯವಸ್ಥೆ ಇರಲಿಲ್ಲ. ಮಹದೇಶ್ವರನ ಬೆಟ್ಟಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ, ದಟ್ಟ ಕಾಡಿನ ನಡುವೆ ಪ್ರಯಾಣ ಮಾಡಬೇಕಾಗಿತ್ತು. ಕ್ರೂರಪ್ರಾಣಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಗುಂಪು ಗುಂಪಾಗಿ ಹೋಗುವಾಗ ಪ್ರಯಾಣದ ಆಯಾಸಕ್ಕೊ, ಪ್ರಾಣಿಗಳ ಮೇಲಿನ ಭಯಕ್ಕೊ, ದೊಡ್ಡ ದೊಡ್ಡ ಹೆಜ್ಜೆ ಇಡುತ್ತಾ ಸಾಗುತ್ತಿದ್ದರಂತೆ.

ಸುಗ್ಗಿಯ ಕುಣಿತ
ಸುಗ್ಗಿಯ ಕುಣಿತ ಅನೇಕ ಕಡೆಗಳಲ್ಲಿ ಪ್ರಚಾರದಲ್ಲಿದೆ. ಅದರಲ್ಲಿ ರಂಗದ ಕುಣಿತ, ಮಾರಿ ಕುಣಿತ ಎಂಬ ವಿಧಾನಗಳಿವೆ. ಸುಗ್ಗಿಯ ಸಂತೋಷ ದುಡಿದ ರೈತನಿಗಲ್ಲದೆ ಇನ್ನಾರಿಗೆ ತಿಳಿದೀತು ? ಅವನ ಕಷ್ಟ, ಶ್ರಮ, ಜಾಗರಣೆ, ಮಳೆಯ ಹಂಬಲ, ಇವೆಲ್ಲ ಕಾಳಿನ ರಾಶಿಯನ್ನು ನೋಡುವಾಗ ಮಾಯವಾಗುತ್ತವೆ. ಹಾಡು, ಕುಣಿತಗಳಲ್ಲಿ ಅವನ ಸಂತೋಷ ಹೊರಹೊಮ್ಮುತ್ತದೆ. ಒಂದು ತಮಟೆಯ ತಾಳಕ್ಕೆ ನಾಲ್ಕಾರು ಜನ ಸಾಲಾಗಿ ನಿಂತು ಹೆಜ್ಜೆಹಾಕಲು ಆರಂಭಿಸುತ್ತಾರೆ. ಒಂದು ಕೈಯಲ್ಲಿ ಬಣ್ಣದ ಚೌಕ ಹಿಡಿದು ಇನ್ನೊಂದು ಕೈಯನ್ನು ಸೊಂಟದ ಮೇಲಿಟ್ಟು ಬಳುಕುತ್ತ, ಕುಪ್ಪಳಿಸುತ್ತ ಕುಣಿಯುತ್ತಾರೆ. ಹಳ್ಳಿಯ ಗುಡಿಯ ಹೊರಾಂಗಣದಲ್ಲಿ ಉರಿಹಾಕಿ ತಮಟೆ ಬಾರಿಸಿ ಕೇಕೆ ಹಾಕುತ್ತಿರುವಾಗ ಹಳ್ಳಿಯ ಜನರೆಲ್ಲ ಸೇರಿ ಇದರಲ್ಲಿ ಭಾಗವಹಿಸುತ್ತಾರೆ. ಹೀಗೆಯೇ ಅನೇಕ ಬಗೆಯ ನೃತ್ಯಗಳು ಕರ್ನಾಟಕದಲ್ಲಿ ಲಭ್ಯವಾಗುತ್ತವೆ.

ಕಂಗಿಲು ಕುಣಿತ ಮತ್ತ ಆಚರಣೆ : ಕಂಗಿಲು ಮಾರಿ ಓಡಿಸುವ ಆಶಯವನ್ನು ಹೊಂದಿರುವ ಒಂದು ಜನಪದ ಕುಣಿತ. ಇದು ತುಳುನಾಡಿನಲ್ಲಿ ಕಂಡುಬರುವ ಪ್ರದರ್ಶನ ಕಲೆ. ಕರಾವಳಿ ಕರ್ನಾಟಕದಲ್ಲಿ ಕಂಗಿಲು ಆಚರಣೆ ಹಾಗೂ ಕುಣಿತ ಪ್ರಕಾರವು ಒಂದು ನಿರ್ದಿಷ್ಟ ಜನವರ್ಗದವರುಗಳ ಆರಾಧನಾ ಪದ್ಧತಿಯಾಗಿದೆ.

ಲಂಬಾಣಿಯರ ಜನಪದ ನೃತ್ಯಗಳು
ಗುಡ್ಡಬೆಟ್ಟಗಳಲ್ಲಿ ವಾಸಿಸುವ ಲಂಬಾಣಿಯರ ಜನಪದ ನೃತ್ಯಗಳು ರಮಣೀಯವಾಗಿವೆ. ಕಸೂತಿ, ಮಣಿ, ಕನ್ನಡಿಗಳಿಂದ ಹೊಲೆದಿರುವ ಬಣ್ಣದ ಲಂಗ, ಕುಪ್ಪಸಗಳನ್ನು ತೊಟ್ಟುಕೊಂಡು, ಕಾಲುಬೆರಳುಗಳಿಂದ ತಲೆಯ ಕೂದಲಿನವರೆಗೂ ಆಭರಣಗಳನ್ನು ಧರಿಸಿ, ಕೈಗಳನ್ನು ಜೋತುಹಾಕಿ ಸಾಮೂಹಿಕವಾಗಿ ಕುಣಿಯುವಾಗ ಈ ನೃತ್ಯದ ಚಲನೆಗಳ ಲಾಲಿತ್ಯ ಎದ್ದುಕಾಣುತ್ತದೆ.

ಕೊಡಗಿನ ಜನಪದ ನೃತ್ಯಗಳು
ಕೊಡಗಿನ ಹುತ್ತರಿ ನೃತ್ಯ ಮತ್ತು ಬೊಳ್ಕಾಟ ನೃತ್ಯಗಳು ಜನಪ್ರಿಯವಾದುವು. ದೇವರ ಪುಜಾವಿಧಾನವಾದ ಈ ನೃತ್ಯವನ್ನು ಧಾರ್ಮಿಕ ಸಂದರ್ಭಗಳಲ್ಲಿ ಗಂಡಸರು ಮಾಡುತ್ತಾರೆ. ಸುಗ್ಗಿಯ ಕಾಲದಲ್ಲಿ, ಉತ್ಸವ, ಮದುವೆ ಸಮಾರಂಭಗಳಲ್ಲಿ ಕೊಡವರು ಕಪ್ಪು ಬಣ್ಣದ ಉದ್ದ ನಿಲುವಂಗಿ, ಧೋತಿ ಧರಿಸಿ, ತಲೆಗೆ ರುಮಾಲು ಸುತ್ತಿ, ಪೀಚ ಕತ್ತಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಆನಂದದಿಂದ ನರ್ತಿಸುತ್ತಾರೆ. ಹಾಡುಗಾರಿಕೆಯ ಜೊತೆಗೆ ಚರ್ಮವಾದ್ಯ ಬಾರಿಸುವವರು ಮಧ್ಯದಲ್ಲಿ ನಿಂತು ತಾಳವನ್ನು ಕೊಡುತ್ತಿರಲು ಸುತ್ತಲೂ ನೃತ್ಯಗಾರರು ಡಮರು ನಾದಕ್ಕೆ ಚಾಮರಗಳನ್ನು ಬೀಸಿ ನರ್ತಿಸುವ ದೃಶ್ಯ ಮೋಹಕವಾದುದು.

ತುಳುನಾಡಿನ ಜನಪದ ನೃತ್ಯಗಳು
ತುಳುನಾಡಿನಲ್ಲಿ ಅನೇಕ ವಿಧದ ಜನಪದ ನೃತ್ಯಗಳು ರೂಢಿಯಲ್ಲಿವೆ. ಅಲ್ಲಿನ ಹರಿಜನರು ಲೇ ಲೇ ಲೇ ಲೋ ಎಂಬ ಪಲ್ಲವಿ ಹಾಡುತ್ತ ದುಡಿಯ ತಾಳಕ್ಕೆ ಕುಣಿಯುತ್ತಾರೆ. ಒಬ್ಬಾತ ದುಡಿಯನ್ನು ಬಾರಿಸುತ್ತಾನೆ. ಹೆಂಗಸರು ಬಳುಕಿ, ಬಾಗಿ, ಕೈ ಅಲುಗಿಸಿ ಹಿಂದೆ ಮುಂದೆ ಸರಿದು ಕೂಟ ನೃತ್ಯದಲ್ಲಿ ಭಾಗವಹಿಸುತ್ತಾರೆ. ಕುಂದಾಪುರ, ಉಡುಪಿಯ ಹರಿಜನರಲ್ಲಿ 5-6 ಯುವಕರು ಚಿಕ್ಕ ಕೋಲುಗಳನ್ನು ಹಿಡಿದು ಸರಳವಾಗಿ ಹೆಜ್ಜೆ ಹಾಕಿ ಕುಣಿಯುತ್ತಾರೆ.
ಹಿನ್ನೆಲೆ ಸಂಗೀತಕ್ಕೆ ಇಬ್ಬರು ಚರ್ಮವಾದ್ಯದವರು, ಒಬ್ಬ ಕೊಳಲು ಬಾರಿಸುವವನು ಇರುತ್ತಾರೆ. ಹೆಂಗಸೊಬ್ಬಳು ದೊಡ್ಡ ತಾಳಗಳನ್ನು ಬಾರಿಸುತ್ತಾಳೆ. ಸಂಗೀತದ ಲಯ ಹೆಚ್ಚಾದಂತೆ ನೃತ್ಯಗಾರರ ಆವೇಶ ಹೆಚ್ಚಾಗುತ್ತದೆ. ಪುತ್ತೂರು ತಾಲ್ಲೂಕಿನ ಮೇರಾ ಜನರಲ್ಲಿ ಹೆಂಗಸರು ಮಾಡುವ ಕೂಟನೃತ್ಯಗಳಿವೆ. ಇಬ್ಬರು ಗಂಡಸರು ದುಡಿಬಡಿದಂತೆ ಬಿಳಿ ಸೀರೆ ಉಟ್ಟ ಹೆಂಗಸರು ಕೈಚಪ್ಪಾಳೆಗಳಿಂದ ಹಿಂದೆಮುಂದೆ ಬಳುಕಿ ಬಾಗಿ ವಾದ್ಯಗಾರರ ಸುತ್ತಲೂ ಕುಣಿಯುತ್ತಾರೆ.
ಅವರ ಸರಳ ಲಲಿತ ಚಲನೆಗಳಲ್ಲಿ ಸ್ನೇಹಪರವಶತೆಯ ಆನಂದ ಉಕ್ಕಿ ಹರಿಯುತ್ತದೆ. ರಾಣಿಯಾರ್ ಪಂಗಡದವರು ಭಕ್ತಿ ಶಕ್ತಿಗಳಿಂದ ಕೋಲಾಟ ಮಾಡುವಾಗ ಅವರ ಕೋಲುಗಳೂ ಕಾಲುಗೆಜ್ಜೆಗಳೂ ಮಾತನಾಡುವಂತೆ ಭಾಸವಾಗುತ್ತದೆ. ಕಾರ್ಕಳ ತಾಲ್ಲೂಕಿನ ಕುಡುಬಿಯರಲ್ಲಿ ಸುಂದರ ಕೂಟ ನೃತ್ಯವಿದೆ. ಗಂಡಸರು ಬಿಳಿ ಬಟ್ಟೆಯುಟ್ಟು ಕೆಂಪು ರುಮಾಲು ಸುತ್ತಿ, ಕೈಯಲ್ಲಿ ಮಣ್ಣಿನ ವಾದ್ಯ ಹಿಡಿದು ಎರಡು ಸಾಲಾಗಿ ನಿಂತು ಹಾಡುತ್ತ ಸಂಭಾಷಣೆ ನಡೆಸುತ್ತಾರೆ.

ಮದುವೆಯ ಹಾಡುಗಳು
ಮದುವೆಯ ಸಂದರ್ಭದಲ್ಲಿನ ಎಣ್ಣೆಯೊತ್ತುವ ಹಾಡು, ಉರುಟಣೆ ಹಾಡು, ಸೋಬಾನೆ ಪದ, ಬೀಗಿತ್ತಿ ಹಾಸ್ಯದ ಪದಗಳು, ಆರತಿ ಪದಗಳು ಹೇರಳವಾಗಿ ಬಳಕೆಯಲ್ಲಿವೆ. ಇವಕ್ಕೆ ಒಂದೊಂದು ಉದಾಹರಣೆ ನೋಡಬಹುದು.

ಎಣ್ಣೆಯೊತ್ತುವ ಪದ
ಎಣ್ಣೆಯನ್ನೊತ್ತಿದರು-ರಘುಕುಲತಿಲಕಗೆ
ದಶರಥ ಸುತನಿಗೆ-ಧರ್ಮ ಪರಿಪಾಲನಿಗೆ
ನಿರ್ಮಲರೂಪ ಶ್ರೀರಾಮಚಂದ್ರನಿಗೆ

ಉರುಟಣೆ ಹಾಡು
ಉರುಟಾಣೆ ಹೇಳೊ ಹರಿಯೆ ಉರಗಶಯನದೊರೆಯೆ
ನಂದಗೋಪಿ ಕುಮಾರ, ನತ ಜಗದುದ್ಧಾರ
ನಂದನಂದನ ಸಿಂಧುಶಯನ ನೀಬಾರೊ
ಬಂದಿರುವೆನು ಮಂಟಪದೊಳು-ಮರದಿಂದಲಿ

ಸೋಬಾನೆ ಪದ
ಬಾಳೆಯಾ ಮರದ ಕೆಳಗೆ ಬಾವನ ಮಗಳು ಮೈನೆರೆದಳು
ನಿಂಬಿಯ ಮರದ ಕೆಳಗೆ ರಂಭೆ ಮೈನೆರೆದಳು
ಸೋಬಾನವೇ ಸೋಬಾನವೇ.

ತಿಂಗಳುಮಾವನ ಪದ
ಹುಣ್ಣಿಮೆ ಹಬ್ಬದ ರಾತ್ರಿ ಬೆಳುದಿಂಗಳ ಆನಂದದಲ್ಲಿ ಕೂಡಿಕೊಂಡು ಹೆಣ್ಣುಮಕ್ಕಳು ಕೈ ಕೈ ಹಿಡಿದುಕೊಂಡು ಗರಗರನೆ ಸುತ್ತು ತಿರುಗುತ್ತ ಈ ಪದಗಳನ್ನು ಹಾಡುವರು.
ತಿಂಗಳು ತಿಂಗಳಿಗೆ ತಿಂಗಳು ಮಾವನ ಪೂಜೆ
ಗರುಡನ ಪೂಜೆ ಗನಪೂಜೆ-ಕೋಲು ಮಲ್ಲಿಗೆ ಕೋಲೆ
ತಿಂಗಳು ಮಾವನಿಗೆ ನಿನ ಪೂಜೆ ಗಂಗೆ ದಡದಾಗೆ
ತಿಂಗಳು ಮಾವನ ತಂಗೇರೇಳು ಮಂದಿ
ಬಂಗಾರದೋಲೆ ಬಳೆಯೋರು-ಕೋಲು ಮಲ್ಲಿಗೆ ಕೋಲೆ
ಹೊಂದೇರ್ ಹಕ್ಕಿ ಬಂದಾವಕ್ಕ ಗರಗರನಾಡಿ ನಿಂದಾವಕ್ಕ
ಕಾಮಾನೂರಾ ಹೊಳೆಯಿಂದಾ ಕುಂತು ನಿಂತು ಬರುತ್ತಿದ್ದ
ಕಾಮನ್ ಯಾರೇ ತಡೆದೋರು
ಭೀಮನ್ ಯಾರೇ ತಡೆದೋರು
ಬಾರಯ್ಯ ಬೆಳುದಿಂಗಳೇ ನಮ್ಮೂರ ಹಾಲಿನಂಥ ಬೆಳುದಿಂಗಳೇ.

ಮಾನವಮಿ ಪದ
ನವರಾತ್ರಿ ನಾಡಹಬ್ಬದಲ್ಲಿ ಮಕ್ಕಳು ಹರಕೆ ಪದ ಹಾಡುವ ಸಂಪ್ರದಾಯ ಹಿಂದಿನಿಂದ ಬಂದಿದೆ. ಚೌಪದಿಯಲ್ಲಿ ನಾಲ್ಕು ಸಾಲು ಬರುತ್ತದೆ.
ಆಶ್ವೀಜ ಶುದ್ಧ ಮಾನವಮಿ ಬರಲೆಂದು
ಲೇಸಾಗಿ ಹರಿಸಿದೆವು ಬಾಲಕರು ಬಂದು
ಈಶ ನಿಮಗಧಿಕ ಸೌಖ್ಯ ಕೊಡಲೆಂದು
ಶಾಶ್ವತದಿ ಹರಸಿದೆವು ನಾವಿಂದು ಬಂದು.
ಮಳೆ ಹೊಯ್ದು ಬೆಳೆಬೆಳೆದು ಇಳೆ ತಣಿಯಲೆಂದು
ತಿಳಿಗೊಳಗಳುಕ್ಕಿ ಗೋಗಳು ಕರೆಯಲೆಂದು
ನಳಿನಮುಖಿಯರು ಸುಪುತ್ರರ ಪಡೆಯಲೆಂದು
ಇಳೆಯೊಳಗೆ ಹರಿಸಿದೆವು ಬಾಲಕರು ಬಂದು
ಅಂತೂ ಲಾವಣಿ, ತ್ರಿಪದಿಗಳು ಹಳ್ಳಿಯ ಹಾಡಿನಲ್ಲಿ ಮಹತ್ತ್ವದ ಸ್ಥಾನ ಪಡೆದಿವೆ. ಹೀಗೆಯೆ ಸಾಂಗತ್ಯ ಮತ್ತು ರಗಳೆಗಳಿಗೂ ಜನಪದ ಸಂಗೀತವೇ ಮೂಲವಾಗಿದ್ದಿರಬಹುದು. ಅಲ್ಲದೆ ಶ್ರಮಜೀವಿಗಳ ಹಾಡುಗಳು, ಹಂತಿ ಪದ, ಡೊಳ್ಳು ಪದ, ಮದುವೆ ಹಾಡು, ಜುಂಜಪ್ಪನ ಪದ, ಸುವ್ವಿ ಪದ, ಲಾಲಿ ಪದ, ಉತ್ತರೆ ಮಳೆ ಹಾಡು, ಕೊರವಂಜಿ ಹಾಡು, ಕಣಿ ಹೇಳೋ ಹಾಡು, ಹಚ್ಚೆ ಕಟ್ಟಿಸಿಕೊಳ್ಳುವ ಹಾಡು- ಈ ಮೊದಲಾದವೂ ಇವೆ. ಜಾತ್ರೆ ಮತ್ತು ಪರಿಷೆಯ ಮಹಾಮೇಳಗಳಲ್ಲಿ ಕೊಂಬು, ಕಹಳೆ, ಉರುಮೆ, ಡೊಳ್ಳು, ಮದ್ದಲೆ, ಕರಡೆ ವಾದ್ಯಗಳ ಸೊಲ್ಲು ಮುಗಿಲು ಮುಟ್ಟುತ್ತದೆ. ಅವಕ್ಕೆ ಅನುಸರಿಸಿ ಜನ ಹಾಡುತ್ತಾರೆ, ಕುಣಿಯುತ್ತಾರೆ ; ನಂದಿಕೋಲು ಕುಣಿಸುತ್ತಾರೆ; ಮನಬಂದಂತೆ ಪದ ಹಾಡುತ್ತಾರೆ ; ಜಯಕಾರ ಮೊಳಗಿಸುತ್ತಾರೆ.

ಕಥನ ಗೀತಗಳು
ನಾಡಿನ ವೀರಾಗ್ರಣಿಗಳ ಹಾಗೂ ವೀರಮಾತೆಯರ ಮಹಾತ್ಯಾಗಜೀವಿಗಳ ಚರಿತೆಯನ್ನು ಸುಲಭವಾಗಿ ಹಾಡುವಂತೆ ರಚನೆ ಮಾಡಿದ್ದಾರೆ. ಅದರಲ್ಲಿ ಕೆರೆಗೆ ಹಾರ ಎಂಬ ನೀಳ್ಗವನದಲ್ಲಿ ಕರುಣರಸ ಮಡುಗಟ್ಟಿ ನಿಂತಿದೆ. ಒಂದು ಹಳ್ಳಿಯ ಮಲ್ಲನಗೌಡರು ಕೆರೆ ಕಟ್ಟಿಸಿದಾಗ ನೀರು ನಿಲ್ಲಲಿಲ್ಲ. ಬಲಿ ಕೊಡಬೇಕೆಂದು ಜೋಯಿಸರು ಸಲಹೆ ಕೊಟ್ಟರು. ಕಿರಿಯ ಸೊಸೆ ಭಾಗೀರಥಿ ಮುಂದೆ ಬಂದು ಕೆರೆಗೆ ಆಹಾರವಾಗುತ್ತಾಳೆ. ಗಂಗೆ ಒಡಮೂಡುತ್ತಾಳೆ. ಅಂಥ ಹೆಂಡತಿಯನ್ನು ಕಳೆದುಕೊಂಡ ಗಂಡನೂ ಪ್ರಾಣಾರ್ಪಣೆ ಮಾಡುತ್ತಾನೆ.
ಸಾವಿರ ಕೊಟ್ಟರೂ ಸಿಗಲಾರದ ಸತಿ ನೀನು
ಬಿಟ್ಟನು ಕಣ್ಣೀರ, ಹಾರಿದ ಕೆರೆ ನೀರಿನಾಗ.
ಈ ಪದ ಖಂಡಜಾತಿ ಚಾಪು ತಾಳದಲ್ಲಿದೆ. ಏಕನಾದದ ಜೊತೆಯಲ್ಲಿ ಹಾಡಿದರೆ ಬಹು ಸ್ವಾರಸ್ಯವಾಗಿರುತ್ತದೆ. ಕೆರೆಗೆ ಹಾರದಂತೆಯೇ ಗೋವಿನ ಕಥೆ ಮತ್ತೊಂದು ಅಮರವಾದ ಪದ-
ಧರಣಿ ಮಂಡಲ ಮಧ್ಯದೊಳಗೆ, ಮೆರೆಯುತಿಹ ಕರ್ನಾಟದೇಶದಿ
ಇರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು
ಕೊಟ್ಟ ಭಾಷೆಗೆ ತಪ್ಪಲಾರೆನು | ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ | ಕಟ್ಟಕಡೆಗಿದು ಖಂಡಿತ
ಸತ್ಯವೆಂಬುದು ತಾಯಿ ತಂದೆ, ಸತ್ಯವೆಂಬುದು ಬಂಧುಬಳಗವು
ಸತ್ಯವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚನಾ ಜಗದೀಶನು.
ಪುಣ್ಯಕೋಟಿ ಎಂಬ ಗೋವು ಹುಲಿರಾಯನಿಗೆ ಭಾಷೆ ಕೊಟ್ಟು, ಅದರಂತೆ ನಡೆದು ಹುಲಿರಾಯನನ್ನು ಸೋಲಿಸಿದ ಕಥೆಯಿದು.
ದಾಸರಪದ ಮತ್ತು ವಚನಗಳೂ ಜನಪ್ರಿಯವಾಗಿ ನಾಡಿನಲ್ಲೆಲ್ಲ ಹಬ್ಬಿವೆ ; ವೇದ, ಪುರಾಣಗಳ ತಿರುಳನ್ನು ತಿಳಿಗನ್ನಡದಲ್ಲಿವು ಸಾರಿವೆ. ಹಾಡಿಕೊಳ್ಳಲು ಯೋಗ್ಯವಾಗಿವೆ. ಇವುಗಳ ಹಾಡುಗಾರಿಕೆಯೇ ಒಂದು ಬಗೆಯ ಸಂಪ್ರದಾಯವಾಗಿದೆ. ರಾಗ, ಭಾವ, ಲಯ ಪ್ರಧಾನವಾದ ಇವಕ್ಕೆ ಸಂಗೀತದಲ್ಲೂ ಸಾಹಿತ್ಯದಲ್ಲೂ ಹಿರಿಯ ಸ್ಥಾನವೇರ್ಪಟ್ಟಿದೆ.
ಆವ ಕುಲವಾದರೇನು ಆವನಾದರೇನು
ಆತ್ಮಭಾವ ಅರಿತಮೇಲೆ ಮನುಜಾ|
ತಲ್ಲಣಿಸದಿರು ಕಂಡ್ಯ ತಾಳು ಮನವೆ
ಎಲ್ಲರನು ಸಲಹುವನು ಇದಕ್ಕೆ ಸಂಶಯ ಬೇಡ|
ದಯವಿಲ್ಲದ ಧರ್ಮ ಆವುದಯ್ಯ
ದಯವೇ ಬೇಕು ಸಕಲ ಪ್ರಾಣಿಗಳಲ್ಲಿ
ದಯವೇ ಧರ್ಮದ ಮೂಲವಯ್ಯ||

ಹಾಸ್ಯದ ಪದ
ಅಸಂಬದ್ಧ ಪ್ರಲಾಪವಾದಾಗ ನಗು ಸಹಜ. ಹೀಗೆ ನಗು ಉಕ್ಕಿಸುವ ಹಾಡುಗಳಿಗೆ ಜನಪದ ಸಾಹಿತ್ಯದಲ್ಲಿ ಕೊರತೆಯೇನಿಲ್ಲ.
ಸುಳ್ಳೂ ನಮ್ಮಲಿಲ್ಲ ಸುಳ್ಳೇ ನಮ್ಮನಿ ದೇವರು
ಗೊದ್ದ ಗೋಡೆ ಹಾಕಿದ್ ಕಂಡೆ ; ಬೆಕ್ಕು ರೊಟ್ಟಿ ತಟ್ಟಿದ್ ಕಂಡೆ ;
ಮೆಣಸಿಕಾಯಿ ಕಂಡೆ ನಕ್ಕ ಮನಸ್ ತೋರಾವಾ
ಕೋಳಿ ಕೋಟೆ ಗೆದ್ದದ್ ಕಂಡೆ ; ಹಕ್ಕಿ ಕಂಬ್ಳಿ ನೇಯೋದ್ ಕಂಡೆ ;
ಅವರೆ ಕಂಡೇನಕ್ಕ ಆನೇಗಾತ್ರವಾ ;
ಮತ್ತೆ ಪಾರಿವಾಣ ಕೋರಿ ಹುಳು ಚಿಕ್ಕಾಟನ ಮೇಲ್
ಸಬರ್ಹಾಕಿ ಮಲೆನಾಡು ಮಲದೇಶ ತಿರುಗಿ ತಾನು ತಂದು ಕೊಟ್ಟಿತು ಸಣ್ಣಕ್ಕಿ
ಹಾಳಿಹದ್ದು ಬಂದು ಹೋಳಿಗಿ ಮಾಡಿತು ಬಹಳ ಬಹಳ ಹೂರಣಹಾಕಿ
ಮೀನು ಬಂದು ಖರುಬಾನ ಬಸ್ತಿತು. ನೊಣ ಬಂದು ಅರಸಿಣ ಹಚ್ಚಿತು.
ಬೆಕ್ಕು ಬಾಸಿಂಗ ಕಟ್ಟಿತು; ಕಟ್ಟಿರುವೆ ಕಂಕಣ ಕಟ್ಟಿತು.
ಇರುವೆ ಬಂದು ನೀರ ಬಡಿಸಿತು; ಇಲಿ ಬಂದು ಎಲೆ ಅಡಿಕೆ ಕೊಟ್ಟಿತು.
ಮತ್ತೊಂದು ಪದದಲ್ಲಿ ಕಿವುಡನ ಕೂಡೆ ಸರಸದ ಒಂದು ಪ್ರಸಂಗ ಬರುತ್ತದೆ :
ಚಪ್ಪರದೊಳಗೊಬ್ಬ ಕೆಪ್ಪನ ನೋಡಿ ತಪ್ಪದೆ ಮಾತಾಡಿದ ದನಿಗೂಡಿ
ನಾಮಾಂಕಿತವೇನಯ್ಯ, ನಿಮಗೆ ? ಸೋಮವಾರ ಒಪ್ಪತ್ತಯ್ಯ ನಮಗೆ.
ಅವಧಾನಂಗಳಿಗಾವೂರಾಯ್ತು ? ದವಸವು ನಮ್ಮಲಿ ಬಹು ಬೆಲೆಯಾಯ್ತು.
ಹೆಂಡರುಮಕ್ಕಳು ಎಲ್ಲಿದ್ದಾರೆ ? ಪಂಡಿತರಾಸ್ತಿಗೆ ಕ್ರಯಗಳೆ ಬೇರೆ.
ಎಣ್ಣೂರಿಗೆ ತರಿಸಲೆ ನಿಮಗೆ ? ಕನ್ನಿಕೆ ನೆರೆದೊ ಚಿನ್ನದ ಹಾಗೆ.
ಚೆನ್ನಾಗಿದೆಯ ಹುಣಸೆ ಸಾರು ? ಚನ್ನಯ್ಯನ ಅಂಗಡೀಲ್ ಕಡಿಮೆ ಸೇರು.
ಬಾಳೆಹಣ್ಣಿನ ಸೀಕರಣೆ ಬೇಕೆ ? ಸೂಳೇರಾಟ ಇನ್ಯಾತಕೆ ನಮಗೆ ?
ಕೆಪ್ಪರ ಕೂಟ ಮಾತೇ ಹೀಗೆ !

ಮಕ್ಕಳ ಹಾಡು
ಶಿಶುಸಾಹಿತ್ಯದ ರಚನೆ ಬಹಳ ಕಷ್ಟ. ಹಾಡೂ ಅಷ್ಟೆ. ಸಣ್ಣದಾಗಿರಬೇಕು. ಕಂಠಪಾಠ ಮಾಡುವಂತಿರಬೇಕು, ಮಹಾಪ್ರಾಣಾಕ್ಷರಗಳು, ಒತ್ತಕ್ಷರಗಳು ಹೆಚ್ಚಿಗಿರಬಾರದು. ಅವರು ಆನಂದಪಟ್ಟು ಕುಣಿಯುತ್ತ ಹಾಡುವಂತಿರಬೇಕು. ಇದರಲ್ಲೂ ಹಳ್ಳಿಯವರು ಹಿಂದೆ ಬಿದ್ದಿಲ್ಲ.
ಶರಣು ಶರಣುವಯ್ಯ ಗಣನಾಯ್ಕ
ನಮ್ಮ ಕರುಣದಿಂದಲೆ ಕಾಯೊ ಗಣನಾಯ್ಕ ;
ಎಳ್ಳುಂಡೆ ಜೇನುತುಪ್ಪ ಗಣನಾಯ್ಕ
ನಮ್ಗೆ ವಿದ್ಯಾವ ಕಲಿಸಯ್ಯ ಗಣನಾಯ್ಕ
ಎಂಬ ಗಣಪತಿಯ ಕೋಲಾಟದ ಪದವನ್ನು ಯಾವ ಮಗುತಾನೆ ಹಾಡಲು ಒಲ್ಲೆ ಅನ್ನುತ್ತದೆ !
ಈ ಪ್ರಾಸಕ್ಕೆ (ನರ್ಸರಿ ರೈಮ್) ಸಮನಾದ ಮತ್ತೊಂದು ಪದ : ಇದು ಕುಟ್ಟುವಾಗ ಹೇಳುವ ಹಾಡಾದರೂ ಶಿಶುಗಳಿಗೆ ಪ್ರಿಯವಾಗಿದೆ.
ಎಂದೂ ಬಾರದ ಮಳೆ ಬಂದಿತಣ್ಣ.
ಮಳೆ ಬಂದಿದ್ದ ಕಂಡು ಚಿಗುರೊಡೆದಿದ್ದಿತಣ್ಣ.
ಚಿಗುರೊಡೆದಿದ್ದ ಕಂಡು ಬೀರಪ್ಪ ಕುರಿಗಳ ಬಿಟ್ಟನಣ್ಣ.
ಬೀರಪ್ಪ ಕುರಿಗಳ ಬಿಟ್ಟಿದ್ದ ಕಂಡು ಮಾಳವ್ವ ಹಿಟ್ಟಿನ್ ಮುದ್ದೆ ಹೊತ್ತಳಣ್ಣ ;
ಮಾಳವ್ವ ಹಿಟ್ಟಿನ್ ಮುದ್ದೆ ಹೊತ್ತಿದ್ದ ಕಂಡು ಬೀರಪ್ಪ ಉಣ್ಣಲಿಕೆ ಕುಂತನಣ್ಣ ;
ಬೀರಪ್ಪ ಉಣ್ಣಲಿಕೆ ಕುಂತಿದ್ದ ಕಂಡು ತೋಳಪ್ಪ ಕುರಿಗಳ ಕದ್ದನಣ್ಣ.
ತೋಳಪ್ಪ ಕುರಿಗಳ ಕದ್ದಿದ್ದ ಕಂಡು ಬೀರಪ್ಪ ದೊಣ್ಣೆ ತೆಕ್ಕೊಂಡು ಹೊಂಟನಣ್ಣ ;
ಬೀರಪ್ಪ ದೊಣ್ಣೆ ತಕೊಂಡು ಹೊಂಟಿದ್ದ ಕಂಡು ನಾಯಪ್ಪ ಹಿಟ್ಟಿನ್ ಮುದ್ದೆ ತಿಂದನಣ್ಣ ;
ನಾಯಪ್ಪ ಹಿಟ್ಟಿನ್ ಮುದ್ದೆ ತಿಂದಿದ್ದ ಕಂಡು ಬೀರಪ್ಪ ಬಿಕ್ಕಿ ಬಿಕ್ಕಿ ಅತ್ತನಣ್ಣ ;
ಬೀರಪ್ಪ ಬಿಕ್ಕಿ ಬಿಕ್ಕಿ ಅತ್ತಿದ್ದ ಕಂಡು ಮಾಳವ್ವ ಕಿಸಿಕಿಸಿ ನಕ್ಕಳಣ್ಣ !

ಮತ್ತೊಂದು ನವಿಲಿನ ಹಾಡು ; ಕೂಲಿಗಾರರು ಭಾರ ಎತ್ತುವಾಗ ಇದನ್ನು ಹಾಡುತ್ತಾರೆ, ಮಕ್ಕಳಿಗೆ ಚೆನ್ನಾಗಿದೆ.
ನವ್ವಾಲೆ ಬಂದಿತ್ತು ನವ್ವಾಲೆ ಸೋಗೇರಿ ಬಣ್ಣದ ನವ್ವಾಲೆ
ಬರಗನೆ ಮೇಯದು ನವ್ವಾಲೆ ಬರಗದ್ಹೂವನೆ ಮೇಯದು ನವ್ವಾಲೆ ||
ಬರಗದ ಒಡಿಕಾಡು ಬೆನ್ಹತ್ತಿ ಬರುವಾಗ ಬರಬರನೆ ಓಡಿತು ನವ್ವಾಲೆ
ರಾಗೀಯ ಮೇಯೊದು ನವ್ವಾಲೆ ರಾಗಿ ಹೂವನೆ ಮೇಯೋದು ನವ್ವಾಲೆ
ರಾಗೀಯ ಒಡಿಕಾಡು ಬೆನ್ಹತ್ತಿಬರುವಾಗ ರಾಗವ ಪಾಡಿತು ನವ್ವಾಲೆ
ಬತ್ತವ ಮೇಯದು ನವ್ವಾಲೆ ಬತ್ತದ್ಹೂವನೆ ಮೇಯದು ನವ್ವಾಲೆ
ಬತ್ತವ ಒಡಿಕಾಡು ಬೆನ್ಹತ್ತಿ ಬರುವಾಗ ರೆಕ್ಕೆಯನುದುರಿಸಿತು ನವ್ವಾಲೆ.

ಇನ್ನೂ ಒಂದು ಸೊಗಸಾದ ಹಾಡು- ಮಲ್ಲಿಗೆ ಹಾಡು.
ಮಲ್ಲೀಗೆ ಮಲ್ಲಿಗೆ ಬಾಡದಿರುವ ಮಲ್ಲಿಗೆ
ಬಾಡಿದರ ಶಿವನಾ ಪಾದದಾಣೆ ಮಲ್ಲಿಗೆ
ದುಂಡು ದುಂಡು ಮಲ್ಲಿಗೆ ಕೋಲು ಕೋಲುಮಲ್ಲಿಗೆ
ಏಳುಸುತ್ತಿನ್ ಮಲ್ಲಿಗೆ | ಕಾಕಡಾ ಮಲ್ಲಿಗೆ |
ಬಾಲೇರ್ ಮುಡಿಯಾ ಮಲ್ಲಿಗೆ | ಗರತೇರ್ ಮುಡಿಯಾ ಮಲ್ಲಿಗೆ |
ಮಿತ್ರೇರ್ ಮುಡಿಯಾ ಮಲ್ಲಿಗೆ | ರಂಭೇರ್ ಮುಡಿಯಾ ಮಲ್ಲಿಗೆ |
ಬಂಗಾರದ ಮಲ್ಲಿಗೆ | ಸಿಂಗಾರದ ಮಲ್ಲಿಗೆ
ಮೈಸೂರು ಮಲ್ಲಿಗೆ | ಕರುನಾಡ ಮಲ್ಲಿಗೆ ||

ಪಾಡ್ದನ ಮತ್ತು ಓಬೇಲೆ ಪದ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆಯಲ್ಲಿ ಭೂತನನ್ನು ಕುರಿತು ಹಾಡುವ ಪದಗಳಿವು. ಸಾವಿನ ಸಮಯದಲ್ಲೂ ಹಾಡುವುದಿದೆ. ಹಾಡುವವರು ಭೂತ ಮೈಮೇಲೆ ಬಂದಂತೆ ಭಯಾನಕವಾಗಿ ಕುಣಿಯುತ್ತ ದನಿ ಗೈಯ್ಯುವರು. ಓಬೇಲೆ ಪದಗಳನ್ನು ನೇಜಿ (ನೆಲ್ಲು) ನೆಡುವಾಗ ಹೆಣ್ಣು ಮಕ್ಕಳು ಹಾಡುವ ವಾಡಿಕೆ. ದೋಣಿ ನಡೆಸುವಾಗಲೂ ಬಂದರಿನಲ್ಲಿ ಸಾಮಾನು ಹೊರುವಾಗಲೂ ಓಬೇಲೆ ಹಾಗೂ ಐಸಾ ಪದಗಳನ್ನು ಸಾಮಾನ್ಯವಾಗಿ ಹಾಡುತ್ತಿರುತ್ತಾರೆ.

ಬಂಡಿಯ ಪದ
ಗಾಡಿಯನ್ನು ಹೊಡೆಯುತ್ತ ಎತ್ತಿಗೆ ಕಟ್ಟಿದ ಗೆಜ್ಜೆಗಳ ಹಾಗೂ ಬಂಡಿಯ ಚಕ್ರದ ದನಿಯನ್ನು ಮೀರಿ ಎತ್ತರದ ದನಿಯಲ್ಲಿ ಒಬ್ಬನೇ ‘ಬೇಲೂರ ಹೆಣ್ಣೆ ಬೇಗನೆ ರಾಗಿ ಮಾಡೆ | ಕೂರಿಗೆ ನಿಂತಾವೆ ಹೊಲದಾಗೆ ಎಲೆ ಹೆಣ್ಣೆ ಜಾಣ ನಿಂತವ್ನೆ ಬಿಸುಲಾಗೆ’- ಎಂದು ಹಾಡಿ ಕೇಕೆ ಹಾಕಿದಾಗ ಮುಗಿಲು ಮಾರ್ದನಿಸುವುದು. ಬಂಡಿಪದ ಹಾಡಲು, ಹಾಗೇ ಕಪಿಲೆ ನೀರೆತ್ತುವಾಗ ಹಾಡಲು ಎಂಟು ಎದೆ ಬೇಕಾದೀತು. ಬ್ರಹ್ಮಾಂಡಕ್ಕೆ ದನಿಮುಟ್ಟುವಂತೆ ಹಾಡಿ ಕೇಕೆ ಹಾಕುವುದು ಬಂಡಿ ಪದ ಹಾಡುವವರ ಗತ್ತು.

ಕಿನ್ನರಿ ಪದ
ಕಿನ್ನರಿವಾದ್ಯ ಹಿಡಿದು, ಮಧ್ಯಮ ಶೃತಿಯಲ್ಲಿ ತಂತಿಮೀಟುತ್ತ ದನಿಗೂಡಿಸಿ ಬಹಳ ಇಂಪಾಗಿ ಹಾಡುವ ಪದಗಳಿವು.
ಚೆಲುವಯ್ಯ ಚೆಲುವೋ - ತಾನಿತಂದನ್ನಾ | ಚಿನ್ಮಾಯಾರೂಪೇ ಕೋಲೆನ್ನ ಕೋಲೇ
ಬೆಟ್ಟದ ಮ್ಯಾಗಳ ಜಲ್ಲೇಬಿದಿರು - ಬೇಲಿ ಮ್ಯಾಗಳ್ ಸೋರೆ ಬುರುಡೆ
ಲೋಲುಕಿನ್ನುರಿ ನುಡಿಸೋನ್ ಯಾರಯ್ಯ -
ಎಂದು ಹಾಡು ಮೊದಲಾಗುತ್ತದೆ.

ಹಳ್ಳಿಯ ಪದಗಳು
ಸಂಗೀತ, ನೃತ್ಯಗಳ ಜೊತೆಗೆ ಉತ್ತಮ ಸಾಹಿತ್ಯ ಜನಪದ ಸಂಗೀತದಲ್ಲಿ ಹುಲುಸಾಗಿ ಮೂಡಿದೆ. ಮಾಣಿಕ್ಯದಂಥ ಮಾತುಗಳು ನೂರಾರು ಹಳ್ಳಿಯ ಪದಗಳಲ್ಲಿ ಸಿಗುತ್ತವೆ:
ಮಲ್ಲಯ್ಯ ನೀನಡಸು ಸರುವೆಲ್ಲ ;
ಬಂಗಾರದ ಬಿಸಿಲು ಒಡೆದಾದ ;
ತಾವರೆಯ ಗಿಡ ಹುಟ್ಟಿ ದೇವರಿಗೆ ನೆರಳಾದಿ ;
ಹಡದವ್ವ ನೀ ಕೊಟ್ಟ ಮನೆಗೆ ಹೆಸರಾದೆ;
ಹಡದವ್ವ ನೀ ಇದ್ದರೆ ನಮಗೆ ಸರಿರಾಜ್ಯ ;
ಅಡವ್ಯಾಗ ವಸತಿ ಇಳಿದಾಂಗ ;
ಜೋಡಕಿನ್ನರಿ ನುಡಿದಾಂಗ;
ಗಂಜೀಯ ಕುಡಿದರು ಗಂಡನ ಮನೆ ಲೇಸು ;
ಅಣ್ಣಯ್ಯನ ಕುಣಸ್ಯಾಡುತಾಳ ಅತ್ತೀಗಿ;
ನಮ್ಮಣ್ಣ ಬಂದರೆ ನಿಚ್ಚ ದೀವಳಿಗಿ ಮನಿಯಾಗ ;
ಕುಲವೆರಡು ನಮ್ಮ ಮನವೊಂದು ;
ಗುಣಕ ಕಟ್ಟೀನಿ ಗೆಳೆತನ ;
ಆಕಿ ಮಾತು ಬೆಣ್ಯಾಗ ಮುಳ್ಳು ಮುರಿದ್ಹಾಂಗ.
ಗಂಡಹೆಂಡಿರ ಜಗಳ ಗಂಧ ತೀಡೀಧಾಂಗ.
ಮಡದೀನ ಬಡಿದಾನ ಮನದಾಗ ಮರುಗ್ಯಾನ ;
ಸೆರಗ ಹಿಡಿಯೂತ ಕೇಳ್ಯಾನ -
ನಾ ಹೆಚ್ಚೊ ನಿನ್ನ ತವರ್ಹೆಚ್ಚೊ.
ಎಲ್ಲಾ ರೂಪವು ತಾನಂತೆ ಎಲ್ಲೆಲ್ಲಿಯೂ ತಾನಿಹನಂತೆ-
ಎಂಬ ನಾಡಪದದಂತೆ ಹಳ್ಳಿಹಾಡು ಹುಲ್ಲು ಬೆಳೆಯಂತೆ ಇಡೀ ನಾಡಿನಲ್ಲಿ ಸಹಜವಾಗಿ ಬೆಳೆದು ಅಲ್ಲಿನ ಭೂಮಿಯನ್ನೆಲ್ಲ ಆಕ್ರಮಿಸಿದೆ. ಹಳ್ಳಿಹಳ್ಳಿಯಲ್ಲೂ ವಿಧವಿಧವಾದ ಪದಗಳು ಸಿಗುತ್ತವೆ. ಒಟ್ಟಿನಲ್ಲಿ ಜಾನಪದದ ಬಹು ಮುಖ್ಯ ಅಂಗವಾದ ಜನಪದ ಸಂಗೀತ ಈಚೆಗೆ ನಾಡಿನ ಹಿರಿಯರ, ವಿದ್ವಾಂಸರ ಗಮನ ಸೆಳೆದ ವಿಷಯವಾಗಿದೆ.

ಕಣಿ -  ಕೊರವಂಜಿ ಹೇಳುವ ಭವಿಷ್ಯ
ಕೊರವಂಜಿ
ಕಣಿ ಹೇಳುವ ಕಾಯಕದಲ್ಲಿ ನಿರತರಾಗಿ, ದವಸಧಾನ್ಯ ಕಾಸು ಸಂಪಾದಿಸುವ ಅಲೆಮಾರಿ ಸ್ತ್ರೀಯರನ್ನು ಕೊರವಂಜಿ ಎಂದು ಕರೆಯುವರು. ಕೊರವಂಜಿ ಶಬ್ದ ದ್ರಾವಿಡ ಭಾಷೆಗಳಲ್ಲಿ ವಿವಿಧ ರೂಪದಲ್ಲಿ ಬಳಕೆಯಲ್ಲಿದೆ. ಕನಾ‍ಟಕದ ಎಲ್ಲಾ ಭಾಗಗಳಲ್ಲಿ ಇವರನ್ನು ಕಾಣಬಹುದು. ಉತ್ತರ ಕರ್ನಾಟಕ, ಬೆಳಗಾವಿ, ಬಿಜಾಪುರ, ಧಾರವಾಡಗಳಲ್ಲಿ ಹೇರಳವಾಗಿ ಕಂಡುಬರುತ್ತಾರೆ. ತಮಿಳುನಾಡಿನ ದಕ್ಷಿಣ ಅಕಾ‌‌‌‌‍ಟ್ , ತಂಜಾವೂರು, ತಿರುಚಿರಾಪಳ್ಳಿ, ಸೇಲಂ, ಕೊಯ್ಬತ್ತೂರು ಕಡೆಗಳಲ್ಲೂ ದಟ್ಡವಾಗಿ ಕಾಣಸಿಗುತ್ತಾರೆ. ಇವರು ಕನ್ನಡದ ಜೊತೆಗೆ ತಮಿಳು, ತೆಲಗು, ಮರಾಠಿ ಭಾಷೆಗಳನ್ನು ಕಲಿತು ಮಾತನಾಡುವರು. ಆದ್ದರಿಂದ, ಆಯಾ ಪ್ರದೇಶದ ಜನರಿಗೆ ತುಂಬ ಹತ್ತಿರದವರಾಗಿ ಕಾಣಬರುತ್ತಾರೆ. ಮುಖ ನೋಡಿ, ಕೈಗೆರೆ ನೋಡಿ ಭವಿಷ್ಯ (ಕಣಿ) ನುಡಿಯುವಾಗಿನ ಇವರ ಮಾತಿನ ಮೋಡಿಗೆ ಮರುಳಾಗದವರಿಲ್ಲ. ಈ ಸಂಬಂಧಿಸಿದಂತೆ ಐತಿಹ್ಯ, ಪೌರಾಣಿಕ ಹಿನ್ನಲೆಯನ್ನು ಆರೋಪಿಸಿಕೊಂಡು ಹೆಚ್ಚುಗಾರಿಕೆಯನ್ನು ತೋರಿಸಿಕೊಳ್ಳುವುದನ್ನು ಕಾಣಬಹುದು.
ಕೊರವಂಜಿ ಬಗೆಗಿನ ಪುರಾಣಗಳು
ಪುರಾಣ ೧
ಪಾರ್ವತಿ ತನ್ನ ಮಗುವಿಗೆ ಸರ್ಪವನ್ನು ಸೀಳಿ, ಅದರ ಹೊಟ್ಟೆಯಲ್ಲಿರುವ ವಜ್ರ ವೈಢೂರ್ಯಗಳ್ಳನ್ನು ತುಂಬಿ ಒಂದು ತೊಟ್ಟಿಲನ್ನು ಮಾಡಿಕೊಡುವಂತೆ 'ಮೇದವರ'ನಿಗೆ ಹೇಳಲಾಗಿ, ಆತ ಒಪ್ಪಲ್ಲಿಲ್ಲವಂತೆ. 'ಕೊರಚ'ರವನು ಹೆದರದೆ ಮಾಡಿಕೊಟ್ಟನಂತೆ. ಆಗ ಪಾರ್ವತಿ ಮೆಚ್ಚಿ ತನ್ನಲಿದ್ದ ಮಂತ್ರದಂಡವನ್ನು ಕೇರುವ ಮೊರವನ್ನು ಬಹುಮಾನವಾಗಿ ನೀಡಿ, ಭವಿಷ್ಯ ಹೇಳುವ ಅಧಿಕಾರವನ್ನು ಇವರಿಗೆ ಕರುಣಿಸಿದಳಂತೆ. ಧರ್ಮರಾಯ ವನವಾಸದಲ್ಲಿದ್ದಾಗ ಆತನನ್ನು ಮೋಹಿಸಿದ ಹೆಣ್ಣೊಬ್ಬಳು ತನ್ನ ವೇಷ ಮರಿಸಿಕೊಂಡು ವರಿಸಿದಳಂತೆ. ಆಕೆಯ ಮಕ್ಕಳೇ ಈ ಕೊರವರಂತೆ. ಕೊರವರಿಗೆ ಅದರಲ್ಲೂ ಅವರ ಹೆಂಗಸರಿಗೆ 'ಕಣಿ' ಹೇಳುವ ಹಕ್ಕು ದೈವದತ್ತವಾಗಿ ಬಂದಿದೆ ಎಂದು ಹೇಳಿಕೊಳ್ಳುತ್ತಾರೆ. ಪದ್ಮಾವತಿ ಕಲ್ಯಾಣ ಸಂದರ್ಭದಲ್ಲಿ ಶ್ರೀನಿವಾಸ ಕೊರವಂಜಿ ವೇಷ ಧರಿಸಿ ಬಂದಿದ್ದು ಕೂಡ ಪುರಾಣ ಪ್ರಸ್ಸಿದ್ದ ಕತೆ. ಪ್ರಣಯಿಗಳಲ್ಲಿ ಉಂಟಾಗುವ ಆತಂಕವನ್ನು ಪರಿಹರಿಸಿಕೊಳ್ಳಲು ಕೊರವಂಜಿ ವೇಷ ಪ್ರಮುಖ ಪಾತ್ರವಹಿಸುತ್ತದೆ.
ಪುರಾಣ ೨
ಧರ್ಮರಾಯನು ವನವಾಸದಲ್ಲಿದ್ದಾಗ ಅವನನ್ನು ಮೋಹಿಸಿದ್ದ ಹೆಣ್ಣೊಬ್ಬಳು ಭವಿಷ್ಯಗಾರ್ತಿಯಂತೆ ವೇಷ ಹಾಕಿಕೊಂಡು ಅವನಲ್ಲಿಗೆ ಹೋಗಿ ಅವನನ್ನು ವರಿಸಿದಳು. ಆಕೆಯ ಮಕ್ಕಳೇ ಕೊರವರೆಂದೂ ಮತ್ತೊಂದು ಕಥೆ ಇದೆ. ಶಿವ ಕೊರವಂಜಿ, ವಿಷ್ಣು ಕೊರವಂಜಿ, ಮನ್ಮಥ ಕೊರವಂಜಿಗಳು ಎಂಬ ಪ್ರಭೇದಗಳು ಕಂಡುಬರುವುದರ ಜೊತೆಗೆ ಕೊರವಂಜಿ ಹಾಡು, ಕಾವ್ಯ, ಪಾರಿಜಾತದಂಥ ಬಯಲಾಟಗಳಲ್ಲಿ ಕೊರವಂಜಿಯ ಪಾತ್ರವು ಕಂಡುಬರುತ್ತದೆ. ಕೊರವಂಜಿಗಳು ಆಯಾ ಪ್ರದೇಶಕ್ಕೆ ಅನುಗುಣವಾಗಿ ತಮ್ಮ ಕುಲದೇವತೆಯ ಹೆಸರನ್ನು ಹೇಳುತ್ತಿರುತ್ತಾರೆ.
ಪುರಾಣ ೩
ರಾಮಾಯಣ ಸಂದರ್ಭದಲ್ಲೂ ಆಂಜನೇಯ ಕೊರವಂಜಿ ವೇಷ ಧರಿಸಿ ರಾವಣನ ಪಟ್ಟಣದ ಅಶೋಕವನದಲ್ಲಿ ಸೀತೆಯನ್ನು ಕಂಡು ರಾಮ ಬಂದು ಲಂಕೆಯನ್ನು ಜಯಿಸಿ, ವಿಭಿಷಣನಿಗೆ ಪಟ್ಟ ಕಟ್ಟಿ ನಿನನ್ನು ಕರೆದುಕೊಂಡು ಹೋಗುವುದು ಕಂಡಿತಾ ಎಂದು ಭವಿಷ್ಯ ನುಡಿಯುವ ಪ್ರಸಂಗ ಜನಪದ ರಾಮಾಯಣಗಳಲ್ಲಿ ಬರುತ್ತದೆ. ಹನುಮಂತ ತನ್ನ ತಲೆ ಕೂದಲನ್ನು ಎತ್ತಿ ಕಟ್ಟಿ ಸಿಂಗರಿಸಿಕೊಳ್ಳುವ ಬಗೆಯನ್ನು ಜನಪದ ಕವಿಗಳು ಚಿತ್ರಿಕರಿಸಿರುವುದು ಸೊಗಸಾಗಿದೆ. ರುಕ್ಮೀಣಿಯ ಮನಸ್ಸಿಗೆ ಸಮಾಧಾನವನ್ನು ನೀಡಲು ಕೃಷ್ಣ ಕೊರವಂಜಿ ವೇಷ ಧರಿಸಿ, ಕಣಿ ಹೇಳಿ, ದೇವಮಾನವಾದ್ದರಿಂದ ತನ್ನ ನಿಜ ರೂಪವನ್ನು ತೋರು ರುಕ್ಮಣಿ ನಾಚಿ ನೀರಾಗುವಂತೆ ಮಾಡಿದ್ದು ಉಂಟು. ಕೋಲಾಟದಲ್ಲಿ 'ಕೊರವಂಜಿ ಕೋಲಾಟ' ಒಂದು ಬಗೆ ಹತ್ತು ಹನ್ನೆರಡು ಮಂದಿ ಕೂಡಿ ಕೋಲು ಹುಯ್ಯುವ ಸಂದರ್ಭದಲ್ಲಿ ಅವರ ಮಧ್ಯೆ ಬಾಗುತ್ತಾ ಬಳಕುತ್ತಾ ಬಂದು ಎಡದ ಕಂಕುಳಲ್ಲಿ ಪುಟ್ಟಿ ಒಂದು ಕೈಯಲ್ಲಿ ಕೊರವಂಜಿ ಕೋಲು ಹಿಡಿದು ಬೆನ್ನಟ್ಟಿದ ಗಂಟಿನ ಕೈಗೆ ಸಿಗದಂತೆ ನುಸುಳಿಕೊಂಡು ಆಡುವ ಪರಿಪಾಟವಿತ್ತಂತೆ.
ಪುರಾಣ ೪
ಒಮ್ಮೆ ಪಾರ್ವತಿ ಕೊವರಂಗಜಿಯ ವೇಷ ಧರಿಸಿ ಭವಿಷ್ಯ ಹೇಳಿದಳು ಎಂಬ ಪ್ರತೀತಿ ಇದೆ. ಹಾಗೆಯೇ ತಾವು ಪಾರ್ವತಿಯ ಮಕ್ಕಳೆಂದೇ ಹೇಳಿಕೊಳ್ಳುತ್ತಾರೆ. ಇವರಿಗೆ 'ಕೊರವರು' ಎಂಬ ಹೆಸರು ನಿಂತಿತಂತೆ.
ವೇಷಭೂಷಣ
ಕೊರವಿ ಪದಗಳು ಅಥವಾ ಕುರುತ್ತಿ ಪಾಟ್ಟುಗಳು ಕರ್ನಾಟಕ ತಮಿಳುನಾಡುಗಳಲ್ಲಿ ಹೇರಳವಾಗಿ ಸಿಗುತ್ತದೆ. ಬಹುತೇಕ ಎರಡೂ ಕಡೆ ಅವರ ವೇಷಭೂಷಣಗಳು ಒಂದೆ ಆಗಿವೆ. ತುಂಬ ಢಾಳಾಗಿ ವೈಭವೋಪೇರಿತವಾಗಿಲ್ಲದ ಆದರೆ ಅತ್ಯಾಕರ್ಷಕ ಉಡುಗೆ ತೊಡುಗೆ ಕೊರವಿಯರದು. ಮೈತುಂಬಾ ಹಚ್ಚೆಯಿಂದ ಅಲಂಕಾರ, ಬಣ್ಣ ಬಣ್ಣದ ಸೀರೆ ಕುಬುಸ, ವಾಲಿಸಿ ಕಟ್ಟಿದ ತುರುಬು, ಕಾಲಕಡಗ, ಮೂಗಿಗೆ ಮುಕುರ, ತಲೆಗೆ ದುಪ್ಪಟಿ ಹಾಗೂ ಬುಟ್ಟಿ, ಆ ಬುಟ್ಟಿಯಲ್ಲಿ ಯಲ್ಲಮ್ಮ ದೇವಿಯದೆಂದು ಹೇಳುವ ಚೌಕಾಕಾರದ ಚಿಕ್ಕ ಪೆಟ್ಟಿಗೆ, ಕೈಯಲ್ಲಿ ಉದ್ದವಾದ ಕೋಲು, ಹಣೆಗೆ ಕುಂಕುಮ, ರಟ್ಟೆಗಳಿಗೆ ಬೆಳ್ಳಿ ವಂಕಿಗಳು ಇವು ಕಲಾವಿದರ ವೇಷಭೂಷಣಗಳು. ಹೀಗೆ ಅಲಂಕಾರಗೊಂಡ ಕೊರವಂಜಿಯು 'ಹೇಳುವೆ ಕಣಿ ಹೇಳುವೆ ಕಣಿ' ಎಂದು ಹಾಡುತ್ತಾ ಬರುತ್ತಾಳೆ. ಒಂದು ಕಾಲಕ್ಕೆ 'ಕಣಿ' ಹೇಳುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದು ಇದೀಗ ಬುಟ್ಟಿ, ತಟ್ಟೆ ಹೆಣೆಯುವ ಉಪವೃತ್ತಿಯಲ್ಲಿ ತೊಡಗಿರುವುದು ಕಂಡುಬರುತ್ತದೆ.
ಕೌಶಲ್ಯ
ಕೊರವಂಜಿಗಳು ಹಚ್ಚೆ ಹಾಕುವುದಕ್ಕೂ ಪ್ರಸಿದ್ದರು. ಹಚ್ಚೆ ಹಾಕುತ್ತಾ ನೋವು ಕಾಣಿಸದಂತೆ ಕಣಿ ಹಾಡನ್ನು ಹಾಡುತ್ತಾ, ಮೋಹಕವಾಗಿ ರಾಗದ ಸೊಲ್ಲೆತ್ತುತ್ತ ತಾಸುಗಟ್ಟಲೆ ಹಚ್ಚೆ ಹೊಯ್ದರು. ಬೇಸರ ನೋವುಗಳು ಗಮನಕ್ಕೆ ಬಾರದಂತೆ ನಿಭಾಯಿಸುವುದರಲ್ಲಿ ಇವರು ನಿಪುಣರು. ಸೂಜಿಯಂತಹ ಸಾಧನದಿಂದ ಸೊಪ್ಪಿನ ರಸವನ್ನು ಹಚ್ಚೆ ಹೊಯ್ಯುವ ಜಾಗಕ್ಕೆ ಹಾಕಿ ಕಲಾತ್ಮಕವಾಗಿ ಹಚ್ಚೆ ಹಾಕುತ್ತಾರೆ. ಉತ್ತರ ಕರ್ನಾಟಕದ ಕಡೆಯೆಲ್ಲಾ ಯಕ್ಷಗಾನ ಪ್ರಸಂಗಗಳಲ್ಲಿ ಕೊರವಂಜಿ ಪಾತ್ರಗಳನ್ನೇ ಮುಖ್ಯವಾಗಿಟ್ಟುಕೊಂಡು 'ಬ್ರಹ್ಮ ಕೊರವಂಜಿ', 'ಮನ್ಮಥ ಕೊರವಂಜಿ, 'ಪದ್ಮಾವತಿ ಕೊರವಂಜಿ' ಇತ್ಯಾದಿ ಪ್ರದರ್ಶನಗಳನ್ನು ಮಾಡುವುದಿದೆ.
end
****  

ಇತರೆ   
  • ಬೊಳ್ಕಾಟ ನೃತ್ಯ
  • ಕೂಟ ನೃತ್ಯ
  • ಕುಮ್ಮಿಗಳ ಕೈ ಚಪ್ಪಾಳೆ ನೃತ್ಯ
  • ನಾಗ ನೃತ್ಯ - ನಾಗಮಂಡಲ
  • ಅನಾಗರಿಕರ ಯುದ್ಧ ನೃತ್ಯ

***

ಇತರೆ ಉತ್ತರ ಕರ್ನಾಟಕದಲ್ಲಿ ಕಾಣಸಿಗುವುದು 

  1. ಅಲಾವಿ ಕುಣಿತ
  2. ಕರಡೆ ಮಜಲು ಕುಣಿತ 
  3. ನಂದೀ ಧ್ವಜ ಕುಣಿತ 
  4. ಕೊಡದ ಕುಣಿತ/ ಪುಗಡಿ ಕುಣಿತ
  5. ಜಗ್ಗಳಿಗೆ ಮೇಳ
  6. ಜೋಗತಿ ಕುಣಿತ 
  7. ಡೊಳ್ಳಿನ ಕೈ ಪೆಟ್ಟು ಕುಣಿತ 
  8. ದಟ್ಟೀ ಕುಣಿತ 
  9. ದುಮ್ಮಾಲಿ ಮೇಳ/ ದಿಮ್ಮಿ ಮೇಳ/ಶಿವ ಭಜನೆ 
  10. ಪುರವಂತಿಕೆ
  11. ಬಹುರೂಪಿ/ಹಗಲುವೇಷ ಕಲೆ 
  12. ಭಜನಾ ಬಾರೋಡ್ (ಭಜನೆ + ಬಯಲಾಟ)
  13. ಭೂತೇರ ಕುಣಿತ 
  14. ಹೆಜ್ಜೆ ಮೇಳ 
  15. ಹೋಳಿ ಕುಣಿತ 

ಈ ಮೇಲಿನ 15 ಬಗೆಯ ಉತ್ತರ ಕರ್ನಾಟಕದ ಕಲೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 

ಕ್ಲಿಕ್ click ಮಾಡಿ 

ಉತ್ತರ ಕರ್ನಾಟಕದ ಜನಪದ ಪ್ರಕಾರಗಳು

author- ಡಾ. ಚಕ್ಕೆರೆ ಶಿವಶಂಕರ್ 
end
*****



ತಾರತಮ್ಯ ಭಜನೆ
ಭಜನಾ ಕ್ರಮ ಎಂಬುದು ಒಂದು ಮುಖ್ಯವಾದ ಅಂಶ. ಮನಸ್ಸಿಗೆ ಬಂದ ಹಾಗೆ ಸುಮ್ಮನೆ ಸ್ತುತಿಗಳನ್ನು ಮಾಡುವುದು ನಮ್ಮ ಸಂಪ್ರದಾಯ ಪ್ರಕಾರ ನಿಷಿದ್ಧ. ಹಾಗಾಗಿ ಎಲ್ಲರೂ ತಾರತಮ್ಯ ರೀತ್ಯ ಭಜನೆ ಮಾಡಬೇಕು. ಮತ್ತು ಎಲ್ಲ ದೇವರನಾಮಗಳನ್ನು ಪೂರ್ತಿಯಾಗಿ ಹಾಡಬೇಕು. ಅಂಕಿತ ಇರುವ ಪದ್ಯಗಳನ್ನೇ ಹಾಡಬೇಕು.  ತಾರತಮ್ಯ  ಕ್ರಮ ಯಾವುದು ಇಲ್ಲಿ ತಿಳಿಯಿರಿ.  

ಏಕಾದಶಿ ತಾರತಮ್ಯ ಭಜನೆ - ಆರೋಹಣ ಕ್ರಮ

ದಾಸರ ತಾರತಮ್ಯ

೧)ಶೇಷದಾಸರು
೨)ಜಗನ್ನಾಥಸಾಸರು
೩)ಗೋಪಾಲದಾಸರು
೪)ವಿಜಯದಾಸರು
೫)ಪುರಂದರದಾಸರು

ಯತಿಗಳ ತಾರತಮ್ಯ
೧)ಸತ್ಯಪ್ರಮೋದತಿರ್ಥರು
೨)ಸತ್ಯಜ್ಞಾನತಿರ್ಥರು
೩)ವಿಷ್ಣುತಿರ್ಥರು
೪)ಸತ್ಯಭೋದರು
೫)ರಾಯರು
೬)ರಘೂತ್ತಮ ತಿರ್ಥರು
೭)ವಾದಿರಾಜರು
೮)ವ್ಯಾಸರಾಜರು
೯)ಶ್ರೀಪಾದರಾಜರು
೧೦)ಟೀಕಾರಾಯರು
೧೧)ಮಧ್ವಾಚಾರ್ಯರು

ದೇವತಾ ತಾರತಮ್ಯ
೧)ಗಣಪತಿ
೨) ಪಾರ್ವತಿ*
೩)ರುದ್ರದೇವರು
೪)ಗರುಡ, ಶೇಷ
೫)ಸರಸ್ವತಿ, ಭಾರತಿ
೬)ಪ್ರಾಣದೇವರು
೭)ಲಕ್ಷ್ಮೀದೇವಿಯರು
೮)ವೇದವ್ಯಾಸರು
೯)ದೇವರ ಹಾಡುಗಳು.
   ೧)ದೇವರನ್ನ ಕಾಣುವ ಹಂಬಲ
   ೨)ದೇವರನ್ನ ಕರೆಯುವುದು
   ೩)ದೇವರು ಬಂದಿದ್ದು
   ೪)ದೇವರನ್ನ ಕಂಡಿದ್ದು
   ೫)ದೇವರು ನಿಂತಿದ್ದು
   ೬)ದೇವರ ರೂಪ ಚಿಂತನೆ
   ೭)ದೇವರಲ್ಲಿ ಶರಣಾಗತಿ(ಆತ್ಮ ನೀವೆದನೆ)
   ೮)ದೇವರ ದಶಾವತಾರ ಹಾಡುಗಳು
   ೯)ದೇವರ ನಿಂದಾಸ್ತುತಿ
೧೦)ವೈರಾಗ್ಯದ ಹಾಡುಗಳು
೧೧)ದೇವರ ಲಾಲಿ ಹಾಡು
ಎಲ್ಲಾ ಹಾಡುಗಳನ್ನು ಪೂರ್ಣ ಹಾಡಬೇಕು
****


****



village of classical artists - rudrapatna village near Hassan