Showing posts with label ರಕ್ಷಿಸೋ ಗುರುವರ ರಕ್ಷಿಸೋ krishnavittala. Show all posts
Showing posts with label ರಕ್ಷಿಸೋ ಗುರುವರ ರಕ್ಷಿಸೋ krishnavittala. Show all posts

Monday 2 August 2021

ರಕ್ಷಿಸೋ ಗುರುವರ ರಕ್ಷಿಸೋ ankita krishnavittala

ರಕ್ಷಿಸೋ ಗುರುವರ ರಕ್ಷಿಸೋ ಪ


ರಕ್ಷಿಸೊ ಗುರುವರ ನಂಬಿದೆ ನಿನ್ನ

ಈಕ್ಷಿಸೊ ಕರುಣ ಕಟಾಕ್ಷದಲಿನ್ನ

ಶಿಕ್ಷಿಸು ಮಧ್ವಾಗಮವ ಮುನ್ನ

ಉಕ್ಕಿಸು ಭಕ್ತಿ ವಿರಕ್ತಿ ಚೆನ್ನ | ಆಹ

ಲಕ್ಷ್ಮೀಕಾಂತನ ಅಪರೋಕ್ಷದಲಿ ಕಂಡು ಪ್ರ-

ತ್ಯಕ್ಷ ಔತಣ ಉಂಡ ದಕ್ಷ ಶ್ರೀ ಜಗನಾಥ ವಿಠಲನ ದೂತ ಅ.ಪ.


ನರಸಿಂಹದಾಸರ ಕುವರಾ-ಧರಿಸಿದೆ ಶ್ರೀನಿವಾಸನಪೆಸರ

ವರಕವಿತಾ ಹುಟ್ಟಿನ ಸಾರ-ಮೆರೆಯಿತು ಕೀರ್ತಿ ಅಪಾರ \ಆಹ

ವರದೇಂದ್ರನ್ನ ಅಶುಕವಿತಿಯಲಿಪೊಗಳಿ ವರಶಿಷ್ಯನಾಗುತ

ಮೂರೊಂದು ಶಾಸ್ತ್ರದಿ ಕಡುಹುಲಿ ಎನಿಸಿದೆ 1

ನ್ಯಾಯಶಾಸ್ತ್ರದಿ ಜಗಜ್ಜಟ್ಟೀ-ವೇದಾಂತರಸಗಳ ಭಟ್ಟಿ

ಮಾಯಾವಶಿರ ಮೆಟ್ಟಿ-ಅಹಂಕಾರ ಶಿರದಲಿಟ್ಟಿ ಆಹ

ಶ್ರೇಷ್ಠವಿಜಯದಾಸರು ಮನೆ ಮುಟ್ಟಿ ಕರೆದರು ನಿನ್ನ ಬಹು

ಕೆಟ್ಟ ಅಹಂಕಾರದಿ ಪೋಗದೆ ಅನಿಷ್ಟವ ಗಳಿಸಿ

ಬಹು ಕಂಗೆಟ್ಟೀ ಬತ 2

ಹಿರಿಯರ ದ್ರೋಹ ಗೈದುದರಿಂದ-ಕರಗಿ

ಹೋಯಿತು ಕಳೆಮುಖದಿಂದ

ಜರಿದರು ಜನರು ನಿಂದೆಗಳಿಂದ-ಗುರುಕ್ಷಯ

ಕಚ್ಚಿತು ಭರದಿಂದ ಆಹ

ಭರದಿ ಹರಿಯ ಕರುಣ ಜರುಗಿ ಪೋದುದಕಂಡು

ಕೊರಗಿ ಕೊರಗುತ ಕ್ಷೇತ್ರ ತಿರುಗುತ ಕೊನೆಗೆ

ಗುರು ರಾಘವೇಂದ್ರರ ಪುರವ ಸೇರುತ ಬಹಳ

ಸೊರಗಿ ಕಾಯ ದೆರಗಿ ಸೇವೆಯಗೈದೆ 3

ಕರುಣಾಮಯನು ಸ್ವಪ್ನದಿ ಗುರುವು-

ಗುರು ದ್ರೋಹ ಕಾರಣ ವರುಹಿ

ಸುರಿಸಿ ಆಶೀರ್ವಾದವ ಶಿರದಿ-

ತೆರಳೆಂದ ವಿಜಯದಾಸರ ಬಳಿ ಆಹ

ತೆರೆದು ಕಂಗಳು ಒಡನೆ ತರಿದು ಮದಮಾತ್ಸರ್ಯ

ಚರಣದಿಂದಲೆ ನಾರಿ ಎರಗಿ ದಾಸರ ಕರುಣ

ಕರೆದು ಕುಡಿಯುತ ಶಿಷ್ಯ-

ವರನು ಎನಿಸುತ ಚರಣಸಾರುವ ಬಿಡದೆ ಗೋಪಾಲದಾಸರ 4

ಕಂಡು ಶಿಷ್ಯಪ್ರಚಂಡ ಗುರುವು-ಉದ್ದಂಡ ಮಹಿಮ

ಸ್ವಗುರುಭಾವವತಿಳಿದು

ಕುಂಡಲಿಗಿವ e್ಞÁನಬೀರಲೆಂದು ಉಂಡು ಸಂತಸ

ತನ್ನಾಯುವನೆ ಇತ್ತ ಆಹ

ಕೊಂಡು ಆಯುರ್ದಾನ ತೊಂಡನೆಂದಡಿಗೆರಗಿ

ಕೊಂಡು ಶ್ರೀಹರಿದಾಸ ಗಂಡುದೀಕ್ಷೆಯ ಒಡನೆ

ತಾಂಡವಾಡುತ ಪೋಗಿ ಪಾಂಡುರಂಗನ ಪುರದಿ

ಮಂಡೆ ಮುಳುಗಿಸೆ ನದಿಲಿ ಕಂಡೆ ಅಂಕಿತ ಶಿರದಿ 5

ಪಂಡಿತನಾನೆಂಬ ಹೆಮ್ಮೆ ಬರಿ-ಪುಂಡತನವಲ್ಲದೆ ಹರಿಯ ನಿಜ

ತೊಂಡ ಲಕ್ಷಣವಲ್ಲೆಂಬ ತತ್ವಪ್ರಕಾಂಡವಾಯಿತು

ನಿನ್ನ ಚರಿತೆ ಆಹ

ತಂಡತಂಡದ ಕವನ ದಂಡೆ ಹಾರಲು ಹರಿಗೆ

ಪಂಢರೀಶನು ಭಕ್ತ ಶೌಂಡ ನಿನಗೆ ಕಾಣಿಸೆ

ಕೊಂಡು ಔಡಣ ನಡಿಸೆ

ಉಂಡು ಸಂತಸದಿಂದ ತುಂಡುಗೈಯುವ ಭವವ

ಕಂಡೆ ನಾಕವ ಭುವಿಲಿ 6

ದೇಶದೇಶಗಳ ಸಂಚರಿಸಿ-ಹೇಸಿ ಮತಗಳ ನಿರಾಕರಿಸಿ

ಬೀಸಿ ಮತಿಮತ ಗಾಳಿ ಸುಖಿಸೆ-ಆಶು ಶಿಷ್ಯರ

ಪೊರೆದೆ ಹರೆಸಿ ಆಹ

ಭಾಷಾದ್ವಯ ಯೋಜನೆ ಮೀಸಲು ನಿನಗೆಂಬೆ

ವ್ಯಾಸ ರಾಜಾದಿಗಳ ಆಶೆಯಂದದದಿ ತತ್ವ-

ರಾಶಿ ತುಂಬುತ ಗ್ರಂಥರಾಜ ರಚಿಸುತ ಜಗಕೆ

ತೋಷ ತಂದಿತ್ತಿಯೊ ದಾಸಜನರುಲ್ಲಾಸ 7

ಶ್ರೀಮದ್ಧರಿಕಥಾಮೃತಸಾರ-ನೇಮ ದಿಂದೋದುವನೆ ಧೀರ

ತಾಮಸರಿಗಿದು ಬಹಳದೂರ-

ನೀಮಾಡಿದೆ ಮಹೋಪಕಾರ ಆಹ

ಕಾಮವರ್ಜಿತವಾಗಿ ಪ್ರೇಮದಿ ನರಹರಿಯ

ಭಾಮಸಹ ಸಂತತ ನೇಮದಿಂ ಧ್ಯಾನಿಸುತ

ಹೋಮಿಸುವೆ ನಿತ್ಯ ಸಕಲೇಂದ್ರಿಯ ವ್ಯಾಪಾರ

ಧೂಮಕೇತುವು ಎನಿಸುತ ನಮ್ಮಘಕಾನನಕೆ 8

ಪ್ರಾಣೇಶ ಕರ್ಜಗಿ ದಾಸಾರ್ಯರವೃಂದ-

ನೀನಾಗಿ ಪೂರೆದಂತೆ ಘನ ಅಭಿಮಾನದಿಂದ

ದೀನರೆಮ್ಮಯವೃಂದ ಕಾಯೆಂಬೆ ಮುದದಿಂದ-

ತಾಣ ನಿಮ್ಮದೆ ನಮಗೆ ದಾಸಪಂಥ ಸ್ತಂಭ ಆಹ

ಕೃಷ್ಣಾಗ್ರಜ ಶಲ್ಯ ಸಹ್ಲಾದ ಮತ್ತಾ

ಮಾನ್ಯ ಪುರಂದರ ದಾಸಾತ್ಮಜನೀನಂತೆ

ದೀನಜನೋದ್ಧಾರಗೈಯ್ಯೆ ಮುಂದೇಳುಬಾರಿ

ಜನ್ಮಯೆತ್ತು ವಿಯಂತೆ ಶರಣು ಕರುಣಾಮಯ 9

ಪ್ರಾಕೃತ ಭಾಷೆಮಲಿನ ವೆಂತೆಂದು-ತಾಕಿಸಿದ್ದರು

ಕನ್ನಡಕೆ ಮುಳ್ಳು

ಸೋಕಿಸುತ ಪರಾವಿದ್ಯೆಮದ್ದು-ಶೋಕ ಹರಿಸಿದೆ

ಕುವರ ನೀಮುದ್ದು ಆಹ

ಶರ್ಕರಾಕ್ಷಸಗೋಸ್ಥ ಅನುಸಂಧಾನ ಕ್ರಮ ಸು

ನೀಕವಡಗಿಸಿ ಕವನ ಕಡಲೊಳು ಸಾಕಿಹೆ ಹರಿ

ಭಕ್ತಸಂಘವ ಹಿರಿಯ ದಾಸರ ಪಥವನನುಸರಿಸಿ

ಶಕ್ತನಾವನು ಗುಣಿಸೆ ನಿನ್ನುಪಕಾರ ಜಗಕೆ 10

ಸಣ್ಣವನು ನಾ ನಿನ್ನು ಗುರುವೇ-ನಿನ್ನವ ಸತ್ಯ ಮನ್ಮನ ಪ್ರಭುವೆ

ಮನ್ನಿಸಪರಾಧ ಕಲ್ಪ ಧ್ರುಮವೆ-ಚಿಣ್ಣರ ಸಲಹೆ ಪಿತಗೆ ಶ್ರಮವೆ ಆಹ

ಘನ್ನ ಜಯತೀರ್ಥ ವಾಯ್ವಂತರ್ಗತ ಶ್ರೀ

ಕೃಷ್ಣವಿಠಲ ತದ್ವನನೆಂದು ಭಜಿಸುವ ಭಾಗ್ಯ

ಜನ್ಮಜನ್ಮಂತರ ಕೊಟ್ಟು ಕಾಪಾಡುವಂಥ

ನಿನ್ನಭಯಕರವೆನ್ನ ಶಿರದಲಿಡುವಲಿ ಸತತ 11

****