Showing posts with label ಬಂದ ಬಂದ ಇಂದಿರೇಶ ನಂದನಂದನಾ krishnavittala. Show all posts
Showing posts with label ಬಂದ ಬಂದ ಇಂದಿರೇಶ ನಂದನಂದನಾ krishnavittala. Show all posts

Monday 2 August 2021

ಬಂದ ಬಂದ ಇಂದಿರೇಶ ನಂದನಂದನಾ ankita krishnavittala

ಬಂದ ಬಂದ ಇಂದಿರೇಶ ನಂದನಂದನಾ

ನಂದಪೂರ್ಣ ನಿಖಿಳ ಜನಕ ಕಂಧರಾಶ್ರಯಾ ಪ


ಬಂದ ಬಂದ ಭಜಕ ಬಂಧು

ಮಂದರಾದ್ರಿಧರ ಅರ-

ವಿಂದನಯನ ಸುಂದರಾಂಗ

ಸಿಂಧುಶಯನ ನಳಿನನಾಭ ಅ.ಪ.


ನೀಲಮೇಘ ಶ್ಯಾಮಸುಂದರಾತನಿಗೆ

ಮೇಲುಸಮರು ಇಲ್ಲವೆನಿಸಿದ

ಲೀಲೆಯಿಂದ ಜಗವ ಸೃಜಿಸಿ

ಪಾಲಿಸುತ್ತ ಮತ್ತೆ ಅಳಿಸಿ

ಆಲದೆಲೆಯಮೇಲೆ ಸಿರಿ

ಲೋಲನಾಗಿ ಮೆರೆವ ಕೃಷ್ಣ 1

ಐದು ರೂಪದಿಂದ ಕ್ರೀಡಿಪಾ ಪ್ರಕೃತಿ

ಬೋಧ್ಯ ಸಿರಿಗುನಾಥ ನಾಯಕಾ

ಆದಿಮಧ್ಯ ಅಂತ್ಯ ಶೂನ್ಯ

ಮೋದಪೂರ್ಣ e್ಞÁನಕಾಯ

ಮೋದ ಮುನಿಯ ಹೃದಯಸದನ

ಗೋಧರಾತಪತ್ರ ಶ್ರೀಪ 2

ಆದಾನಾದಿ ಕರ್ತ ಬ್ರಹ್ಮನೂ ದಿವಿಜ

ಸಾಧುಸಂಘ ಸೇವೆ ಗೊಂಬನೂ

ವೇದವೇದ್ಯ ವೇದ ವಿನುತ

ವೇದ ಭಾಗಗೈದು ಪೊರೆದ

ಛೇದ ಭೇದರಹಿತ ಗಾತ್ರ

ಸಾಧು ಪ್ರಾಪ್ಯ ಬಾದರಾಯಣ 3

ದಾಸಜನಕೆ ಮುಕ್ತಿನೀಡುವ ಮಹಿ-

ದಾಸಕಪಿಲ ಪೂರ್ಣ ಕಾಮನೂ

ದೋಷ ದೂರ ನಾಶರಹಿತ

ವಾಸುದೇವ ಕ್ಲೇಶವಿದೂರ

ಈಶವಿಧಿಗಳನ್ನು ಕುಣಿಪ

ಕೇಶವಾದ್ಯನಂತ ರೂಪ4

ಮೊತ್ತಜಗಕೆ ಸತ್ತೆನೀಡುವಾ ನಿಖಿಳ

ಸತ್ಯ ಜಗದ ಚೇಷ್ಟೆನಡೆಸುವಾ

ಮೊತ್ತಶಬ್ದ ಘೋಷವರ್ಣ

ಮತ್ತೆ ಪ್ರಣವ ಮಂತ್ರಗಣದಿ

ಸ್ತುತ್ಯನಾಗಿ ನಿಖಿಳ ಯಜ್ಞ

ಭೋಕ್ತನಾಥ ಅಂಗಭೂತ 5

ಜಿಷ್ಣುಸೂತ ಕೃಷ್ಣೆಕಾಯ್ದವಾ ಸ್ವರತ

ವಿಷ್ಣು ಪುರುಷಸೂಕ್ತ ಸುಮೇಯಾ

ವಿಶ್ವಕರ್ತ ವಿಶ್ವಭೋಕ್ತ

ವಿಶ್ವರೂಪ ವಿಶ್ವಭಿನ್ನ

ವಿಶ್ವವ್ಯಾಪ್ತ ಶಶ್ವದೇಕ

ವಿಶ್ವ ತೈಜಸ ಪ್ರಾಜ್ಞತುರ್ಯ 6

ಸತ್ಯಧರ್ಮಗಳನು ಕಾಯುವಾ ದುಷ್ಟ

ದೈತ್ಯತತಿಯ ದಮನಗೈಯ್ಯುವಾ

ಮತ್ಸ್ಯಕೂರ್ಮ ಕೋಲ ಚರಿತ

ಭೃತ್ಯಭಾಗ್ಯ ನಾರಸಿಂಹ

ಸತ್ಯಶೀಲ ಬಲಿಯವರದ

ಕ್ಷಿತಿಪದಮನ ಕ್ಷಾತ್ರವೈರಿ ಪರಶುಧಾರಿ7

ಜೀವಜೀವ ವಿಶ್ವ ಬಿಂಬನು ರಾ

ಜೀವಪೀಠನನ್ನು ಪಡೆದನೂ

ರಾವಣಾರಿ ಕೃಷ್ಣ ಬುದ್ಧ

ಭಾವಿಕಲ್ಕಿ ನಿತ್ಯಮಹಿಮ

ಭಾವಜಾರಿ ಪ್ರೀಯ ಸಖನು 8

ಹಯಗ್ರೀವ ದತ್ತ ಋಷಭನೂ ಅಪ್ರ-

ಮೇಯ ಹಂಸ ಶಿಂಶುಮಾರನು

ಜಯಮುನೀಂದ್ರ ವಾಯುಹೃಸ್ಥ

ಜಯೆಯ ರಮಣ ಕೃಷ್ಣವಿಠಲ

ದಯದಿ ಪೊರೆಯಲೆಮ್ಮನೀಗ

ಜಯವು ಎನುತ ನಲಿದು ನಲಿದು 9

****