Showing posts with label ಕೆಲವು ಕಾಲಗಳ ಹಿಂದೆ ಗ್ರಾಮದ madhwesha krishna ಶಿರಿಯಾಳ ಷಷ್ಠಿ ಕಥೆ KELAVU KAALAGALA HINDE GRAAMADA SHIRIYALA SHASHTI STORY. Show all posts
Showing posts with label ಕೆಲವು ಕಾಲಗಳ ಹಿಂದೆ ಗ್ರಾಮದ madhwesha krishna ಶಿರಿಯಾಳ ಷಷ್ಠಿ ಕಥೆ KELAVU KAALAGALA HINDE GRAAMADA SHIRIYALA SHASHTI STORY. Show all posts

Friday 27 December 2019

ಕೆಲವು ಕಾಲಗಳ ಹಿಂದೆ ಗ್ರಾಮದ ankita madhwesha krishna ಶಿರಿಯಾಳ ಷಷ್ಠಿ ಕಥೆ KELAVU KAALAGALA HINDE GRAAMADA SHIRIYALA SHASHTI STORY



ಶಿರಿಯಾಳ  ಷಷ್ಠಿ ಕಥೆ


ಕೆಲವು ಕಾಲಗಳ ಹಿಂದೆ ಗ್ರಾಮದಲ್ಲೊಬ್ಬ ಬ್ರಾಹ್ಮಣನಸಂಸಾರ
  ಇರುತಿರಲು| ತಂದೆ ತಾಯಿಗಳು ಇಬ್ಬರು ಮಕ್ಕಳೊಂದಿಗೆ
ಅವ್ವ ತಾತ ಕೂಡ ಇರತಿರಲು||ಪಲ್ಲ||

ಊರಿಗೆ ದೊಡ್ಡ ಕೆರೆಯ ಕಟ್ಟಿಸಿರಲು ನೀರು ರಭಸದಿ ತೂಬಿ
ನಿಂದ ಹರಿಯೆ| ಏನು ಮಾಡಲು ತೋಚದೆ ತಾತ ಚಿಂತಾಕ್ರಾಂತ
ನಾಗಿರುತಿರಲು| ಸ್ವಪ್ನದಿ ಪೇಳಿದ ಸ್ವಾಮಿಯು ತಾನು ಚೊಚ್ಚಿಲ
ಮಗನ ತೂಬಿನಲ್ಲಿ ಮಲಗಿಸೆ| ನೀರಿನ ರಭಸಕಡಮೆಯಾಗು
ವುದೆಂದು ನಿರ್ಧಾರವಾಗಿ ಪೇಳಲು||೧||

ಬೆಳಗಾಗಲೆದ್ದು ವನಿತೆಯರು ಮನೆಯ ಕೆಲಸಗಳ ಮಾಡುತ್ತಿರೆ
  ಯಾರು ನೋಡದಲೆ ಹಿರಿಯ ತಾತನು ತಾನು ಮೊಮ್ಮಗನನ್ನ
ಎತ್ತಿಕೊಂಡು| ಕೆರೆಯ ಬಳಿಗೆ ಶಾಲಿನಲ್ಲಿ ಸುತ್ತಿದ ಮಗುವನ್ನ
ತೂಬಿನಲ್ಲಿ ಮಲಗಿಸೆ| ಹರಿಯುತಿದ್ದ ನೀರಿನ ರಭಸವು ಹಿಂದ
ಲೆ ಕಡಮೆಯಾಗಲು||೨||

 ಮನದಲ್ಲಿ ಚಿಂತಿಸುತ ಬಂದನು ತಾನು ವಿಷಾದ ಮನಸಿನಿಂದ
 ಸೊಸೆಯು ಮೊಸರನ್ನ ಕಲಸಿ ಉಪ್ಪಿನಕಾಯಿ ಗಿಲಗಂಚಿತಂದು
  ಶಿರಿಯಾಳ ಬಾರೋ ಎಂದು ಕೂಗಲು ತಾತ ಆಶ್ಚರ್ಯ ಪಡು
ತಿರೆ| ಹಿಂದಲೆ ಓಡಿಬಂದನು ಶಿರಿಯಾಳ ಅಮ್ಮನಕರೆಗೆ
ಓಗೊಟ್ಟು||೩||

 ಶ್ರಾವಣಮಾಸದಶುಧ್ಧ ಅಷ್ಟಮಿ ದಿನದಿಶಿರಿಯಾಳಷಷ್ಟಿ ಎಂದು| ಮಣ್ಣಿನಿಂದ ತೊಟ್ಟಿಲು ಮಾಡಿ ಕೂಸಿನ ಗೊಂಬಿ ಮಲ
ಗಿಸಿ| ಅರಿಷಿಣ ಕುಂಕುಮ ಹೂವು ಗೆಜ್ಜೆವಸ್ತ್ರದಿ ಭಕ್ತಿಂದ ಪೂ
ಜಿಸಿ| ಹಣ್ಣು ಕಾಯಿ ನೈವೇದ್ಯಮಾಡಿ ಸಂಭ್ರಮದಿ ಹಬ್ಬ ಆಚ
ರಿಸಿ||೪||

 ಮೊಸರು  ಅನ್ನವು ಉಪ್ಪಿನಕಾಯಿ ಗಿಲಗಂಚಿಗಳನೆ ಮಾಡಿ
 ಶ್ಯಾವಿಗೆ ಪಾಯಸದೊಡನೆ ಕೆಲವು  ಮನೆಗಳಿಗೆ ಬೀರಿಸಬೇ
ಕೆಂದು| ಮದುವೆ ಆದ ಹೆಣ್ಣುಮಕ್ಕಳು   ತಪ್ಪದೆ ಆಚರಿಸಬೇ
ಕೆಂದು| ಮಧ್ವೇಶಕೃಷ್ಣನ  ದಯವು ದೊರಕುವುದೆಂದು ಹಿರಿ
ಯರು ಶಿಸ್ತಿಲಿ ಪೇಳುವರು||೫||
***


 ಕೆಲವು ಕಾಲಗಳಹಿಂದೆ ಗ್ರಾಮದಲ್ಲೊಬ್ಬ ಬ್ರಾಹ್ಮಣನ ಸಂಸಾರ
ಇರುತಿರಲು ತಂದೆ ತಾಯಿಗಳು ಇಬ್ಬರು ಮಕ್ಕಳೊಂದಿಗೆ ಅವ್ವ ತಾತ
ಇರುತಿರಲು||ಪಲ್ಲ||

ಊರಿಗೆ ದೊಡ್ಡ ಕೆರೆಯ ಕಟ್ಟಿಸಿರಲು ನೀರುರಭಸದಿ ತೂಬಿನಿಂದ ಹರಿಯೆ
 ಏನು ಮಾಡಲು ತೋಚದೆ ತಾತ ಚಿಂತಾಕ್ರಾಂತರಾಗಿ ಇರುತಿರಲು
ಸ್ವಪ್ನದಿ ಪೇಳಿದ ಸ್ವಾಮಿಯು ತಾನು ಚೊಚ್ಚಿಲಮಗನ ತೂಬಿನಲ್ಲಿ ಮಲಗಿಸೆ ನೀರಿನ ರಭಸವು ಕಡಿಮೆಯಾಗುವುದೆಂದು ನಿರ್ಧಾರವಾಗಿ
ಪೇಳಲು||೧||

 ಬೆಳಗಾಗಲೆದ್ದು ವನಿತೆಯರು ಮನೆಯ ಕೆಲಸಗಳ  ಮಾಡುತ್ತಿರೆ
 ಯಾರು ನೋಡದಲೆ ಹಿರಿಯ ತಾತನು ತಾನು ಮೊಮ್ಮಗನ ಎತ್ತಿಕೊಂಡು
 ಕೆರೆಯ ಬಳಿಗೆ ಶಾಲಿನಲ್ಲಿ ಸುತ್ತಿದ ಮಗವನ್ನು ತೂಬಿನಲ್ಲಿ ಮಲಗಿಸೆ
 ಹರಿಯುತಿದ್ದ ನೀರಿನ ರಭಸವು ಹಿಂದಲೆ ಕಡೆಯಾಗಲು||೨||

 ಮನದಲ್ಲಿ ಚಿಂತಿಸುತ ಬಂದನು  ತಾತನು ವಿಷಾದ ಮನಸಿನಿಂದ
ಸೊಸೆಯು ಮೊಸರನ್ನ ಕಲಸಿ ಉಪ್ಪಿನಕಾಯಿ ಗಿಲಗಂಚಿ ತಂದು
ಶಿರಿಯಾಳ ಬಾರೋ ಎಂದು ಕೂಗಲು ತಾತ ಆಶ್ಚರ್ಯ ಪಡುತಿರೆ
 ಹಿಂದಲೆ ಓಡಿ ಬಂದನುಶಿರಿಯಾಳ   ಅಮ್ಮನ ಕರೆಗೆ ಓ ಗೊಟ್ಟು||೩||

ಶ್ರಾವಣ ಮಾಸದ ಶುಧ್ಧ ಷಷ್ಟಿ ದಿನದಿ ಶಿರಿಯಾಳ  ಷಷ್ಟಿ ಎಂದು
 ಮಣ್ಣಿನಿಂದ ತೊಟ್ಟಿಲು ಮಾಡಿ ಕೂಸಿನಗೊಂಬಿ ಮಲಗಿಸಿ
ಅರಿಷಿಣ ಕುಂಕುಮ ಹೂವು ಗೆಜ್ಜೆವಸ್ತ್ರದಿ ಭಕ್ತಿಂದ ಪೂಜಿಸಿ
 ಹಣ್ಣು ಕಾಯಿ ನೈವೇದ್ಯ ಮಾಡಿ ಸಂಭ್ರಮದಿ ಹಬ್ಬ ಆಚರಿಸಿ||೪||

 ಮೊಸರು ಅನ್ನವು ಉಪ್ಟಿನಕಾಯಿ ಗಿಲಗಂಚಿಗಳನೆ ಮಾಡಿ
ಶ್ಯಾವಿಗೆ ಪಾಯಸದೊಡನೆ ಕೆಲವು ಮನೆಗಳಿಗೆ ಬೀರಿಸಬೇಕೆಂದು
 ಮದುವೆಯಾದ ಹೆಣ್ಣುಮಕ್ಕಳು  ತಪ್ಪದೆ ಆಚರಿಸಬೇಕೆಂದು
 ಮಧ್ವೇಶಕೃಷ್ಣನ  ದಯವು ದೊರಕುವುದೆಂದು ಹಿರಿಯರು ಶಿಸ್ತಿಲಿ
ಪೇಳುವರು||೫||
***


***