Showing posts with label ಚಿತ್ತಪಹಾರಕನೇ ಅತ್ಯಂತ ಕರುಣಾಳು ಉತ್ತಮೋತ್ತಮ ಗುರುವೇ ಶ್ರೀ ರಾಘವೇಂದ್ರ seetarama vittala. Show all posts
Showing posts with label ಚಿತ್ತಪಹಾರಕನೇ ಅತ್ಯಂತ ಕರುಣಾಳು ಉತ್ತಮೋತ್ತಮ ಗುರುವೇ ಶ್ರೀ ರಾಘವೇಂದ್ರ seetarama vittala. Show all posts

Monday 6 September 2021

ಚಿತ್ತಪಹಾರಕನೇ ಅತ್ಯಂತ ಕರುಣಾಳು ಉತ್ತಮೋತ್ತಮ ಗುರುವೇ ಶ್ರೀ ರಾಘವೇಂದ್ರ ankita seetarama vittala

 ರಾಗ: ದರ್ಬಾರ್ ತಾಳ: ಆದಿ

ಚಿತ್ತಪಹಾರಕನೇ ಅತ್ಯಂತ ಕರುಣಾಳು

ಉತ್ತಮೋತ್ತಮ ಗುರುವೇ ಶ್ರೀ ರಾಘವೇಂದ್ರ


ನಿತ್ಯ ಮಂತ್ರಾಲಯಕೆ ಎಲ್ಲಿಂದಲೋ ಬಂದು

ಎತ್ತಿ ಕೈಮುಗಿವರಿಗೆ ಉತ್ತಮ ವರವೀವ ಅ. ಪ


ಚಿತ್ತವಹರಿಸುತ ವಿತ್ತಭಾಗ್ಯವನೀವೆ

ಇತ್ತುದವೆಲ್ಲವ ಮತ್ತೆ ನೂರ್ಮಡಿಮಾಡಿ

ಸ್ತುತ್ಯಗುರುವೆ ನಿನಗೆ ಎತ್ತಲೂ ಸರಿಗಾಣೆ

ಸತ್ಯವೋ ಸತ್ಯವೋ ಸತ್ಯ ಭಕ್ತವತ್ಸಲ ಸ್ವಾಮಿ 1

ಈಕ್ಷಿಸಿ ಕರುಣಕಟಾಕ್ಷದಿ ಭಕುತರ

ತಕ್ಷಣ ವರವಿತ್ತು ಪ್ರತ್ಯಕ್ಷವಾಗುತ

ಸೂಕ್ಷ್ಮದೃಷ್ಟಿಯ ಭಕ್ತಪಕ್ಷಪಾತಿಯೇ

ರಕ್ಷಾರಸದ ದಿವ್ಯ ಅಕ್ಷಯ ಪಾತ್ರೆಯೋ 2

ವರುಷಮುನ್ನೂರರಿಂ ನಿನ್ನ ಬೃಂದಾವನ

ವರಗಳ ಧಾರೆಯಸೂಸಿ ಸುರಿಯುತಲಿದೆ

ವರವಾತದೂತನೆ ಮಂತ್ರಾಲಯಪ್ರಭು ನಮ್ಮ

ಮರೆಯಬೇಡವೊ ಸೀತಾರಾಮವಿಠಲದೂತ 3

***