Showing posts with label ಸುಮ್ಮನೆ ಬರುವುದೆ ಮುಕ್ತಿ ನಮ್ಮ ಅಚ್ಯುತಾ purandara vittala SUMMANE BARUVUDE MUKTI NAMMA ACHYUTA. Show all posts
Showing posts with label ಸುಮ್ಮನೆ ಬರುವುದೆ ಮುಕ್ತಿ ನಮ್ಮ ಅಚ್ಯುತಾ purandara vittala SUMMANE BARUVUDE MUKTI NAMMA ACHYUTA. Show all posts

Monday 8 November 2021

ಸುಮ್ಮನೆ ಬರುವುದೆ ಮುಕ್ತಿ ನಮ್ಮ ಅಚ್ಯುತಾ purandara vittala SUMMANE BARUVUDE MUKTI NAMMA ACHYUTA





ಸುಮ್ಮನೆ ಬರುವದೆ ಮುಕ್ತಿ ||ಪ||

ನಮ್ಮ ಅಚ್ಯುತಾನಂತನ ನೆನೆಯದೆ ಭಕ್ತಿ ||ಅ.ಪ||

ಮನದಲ್ಲಿ ದೃಢವಿರಬೇಕು, ಪಾಪಿ
ಜನರ ಸಂಸರ್ಗವ ನೀಗಲುಬೇಕು
ಅನುಮಾನವನು ಬಿಡಬೇಕು, ತನ್ನ
ತನು ಮನಧನವನೊಪ್ಪಿಸಿಕೊಡಬೇಕು

ಕಾಮಕ್ರೋಧವ ಬಿಡಬೇಕು, ಪರ-
ಕಾಮಿನಿಯರ ಹಂಬಲ ಬಿಡಬೇಕು
ಹೇಮದಾಸೆಯ ಸುಡಬೇಕು, ಹರಿ-
ನಾಮ ಸಂಕೀರ್ತನೆಯನು ಮಾಡಬೇಕು

ಸಂದಣಿಗಳ ಬಿಡಬೇಕು, ದೇಹ
ಬಂಧುಬಾಂಧವರ ಸ್ನೇಹವ ಬಿಡಬೇಕು
ನಿಂದಿಸಿದರೆ ಹಿಗ್ಗಬೇಕು, ಕೋಪ
ಬಂದಾಗ ಸೈರಣೆ ಬಿಡದಿರಬೇಕು

ಹರಿಯೇ ಗುರುವೆನ್ನಬೇಕು, ಶ್ರೀ-
ಹರಿಯೇ ಪರದೈವವೆಂತೆನ್ನಬೇಕು
ಪರವಸ್ತು ಒಲ್ಲೆನಬೇಕು, ದೇಹ
ಸ್ಥಿರವಲ್ಲವೆಂತೆಂದು ತಿಳಿಯಲುಬೇಕು

ವ್ಯಾಪಾರವನು ಬಿಡಬೇಕು, ನಮ್ಮ
ಶ್ರೀಪತಿ ಪುರಂದರವಿಠಲೆನ್ನ ಬೇಕು
ಪಾಪರಹಿತನಾಗಬೇಕು, ಜ್ಞಾನ
ದೀಪದ ಬೆಳಕಿಲಿ ಓಡಾಡಬೇಕು
***


ರಾಗ ಆನಂದಭೈರವಿ ಅಟ ತಾಳ (raga, taala may differ in audio)

pallavi

summane baruvade mukti

anupallavi

namma acyutAnantana neneyade bhakti

caraNam 1

manadalli drDhavirabEku pApi janara samsargava nIgalu bEku
anumAnavanu biDa bEku tanna tanu manadhanavanoppisi koDa bEku

caraNam 2

kAma krOdhava biDa bEku para kAminiyara hambala biDa bEku
hEmadAseya suDa bEku hari nAma sankIrtaneyanu mADa bEku

caraNam 3

sandaNigaLa biDabEku dEha bandhu bAndhavara snEhava biDa bEku
nindisidare higga bEku kOpa bandAga smaraNe biDadira bEku

caraNam 4

hariyE guruvenna bEku shrI hariyE para daivataventenna bEku
paravastu ollene bEku dEha sthiravallaventendu tiLiyalu bEku

caraNam 5

vyApAravanu biDa bEku namma shrIpati purandara viTTalenna bEku
pApa rahitanAga bEku jnAna dIpada beLagili ODADa bEku
***


ರಾಗ: ಆನಂದಭೈರವಿ      ತಾಳ: ಆಟ

ಸುಮ್ಮನೆ ಬರುವುದೆ ಮುಕ್ತಿ
ನಮ್ಮ ಅಚ್ಯುತಾನಂತನ ನೆನೆಯದೆ ಭಕ್ತಿ || ಪ ||

ಮನದಲ್ಲಿ ದೃಢವಿರಬೇಕು ಪಾಪಿ
ಜನರ ಸಂಸರ್ಗವ ನೀಗಲಿ ಬೇಕು
ಅನುಮಾನವನು ಬಿಡಬೇಕು ತನ್ನ
ತನುಮನ ಧನವನೊಪ್ಪಿಸಿ ಕೊಡಬೇಕು || ೧ ||

ಕಾಮಕ್ರೋಧವ ಬಿಡಬೇಕು ಪರ
ಕಾಮಿನಿಯರ ಹಂಬಲ ಬಿಡಬೇಕು
ಹೇಮದಾಸೆಯ ಸುಡಬೇಕು ಹರಿ
ನಾಮ ಸಂಕೀರ್ತನೆಯನು ಮಾಡಬೇಕು || ೨ ||

ಸಂದಣಿಗಳ ಬಿಡಬೇಕು ದೇಹ
ಬಂಧುಬಾಂಧವರ ಸ್ನೇಹವ ಬಿಡಬೇಕು
ನಿಂದಿಸಿದರೆ ಹಿಗ್ಗಬೇಕು ಕೋಪ
ಬಂದಾಗ ಸೈರಣೆ ಬಿಡದಿರಬೇಕು || ೩ ||

ಹರಿಯೆ ಗುರುವೆನ್ನಬೇಕು ಶ್ರೀ
ಹರಿಯೆ ಪರದೈವವೆಂತೆನ್ನಬೇಕು
ಪರವಸ್ತು ಒಲ್ಲೆನಬೇಕು ದೇಹ
ಸ್ಥಿರವಲ್ಲವೆಂತೆಂದು ತಿಳಿಯಲು ಬೇಕು || ೪ ||

ವ್ಯಾಪಾರವನು ಬಿಡಬೇಕು ನಮ್ಮ
ಶ್ರೀಪತಿ ಪುರಂದರವಿಠಲೆನ್ನಬೇಕು
ಪಾಪರಹಿತನಾಗಬೇಕು ಜ್ಞಾನ
ದೀಪದಿ ಬೆಳಕಿನಲಿ ಓಡಾಡಬೇಕು || ೫ ||
***


ರಾಗ ಧನ್ಯಾಸಿ ಅಷ್ಟತಾಳ

ಸುಮ್ಮನೆ ಬಾಹೋದೆ ಮುಕ್ತಿ ||ಪ||

ಮನದಲ್ಲಿ ದೃಢವಿರಬೇಕು , ಕೋಪ
ಮನದ ಸಂಸಾರವ ನೀಡಾಡಬೇಕು
ಅನುಮಾನವನು ಬಿಡಬೇಕು, ತನ್ನ
ತನುವನ್ನು ಧರ್ಮಕೊಪ್ಪಿಸಿ ಕೊಡಬೇಕು ||೧||

ಪಾಪಿ ಕೋಪವ ಬಿಡಬೇಕು , ಅಲ್ಲಿ
ಗೋಪಾಲ ಕೃಷ್ಣನ್ನ ಪೂಜಿಸಬೇಕು
ತಾಪರಹಿತನಾಗಬೇಕು ತನ್ನ
ಪಾಪವನು ಕಳೆವ ಗುರುವ ನಂಬಬೇಕು ||೨||

ಶರೀರದಾಸೆಯ ಬಿಡಬೇಕು ತನ್ನ
ಶರೀರ ಅನಿತ್ಯ ಎನಲುಬೇಕು
ಪರದ ಇಷ್ಟಾರ್ಥಗಳು ಬೇಕು , ಹರಿ-

ಪುರಂದರ ವಿಠ್ಠಲನ್ನ ನಂಬಲು ಬೇಕು ||೩||
***