Showing posts with label ಆನೆ ಬಂದಿತಮ್ಮಾ ಮರಿ ಆನೆ ಬಂದಿತಮ್ಮಾ ಕಿಂಕರರಿಗೆ ankita raghavendra. Show all posts
Showing posts with label ಆನೆ ಬಂದಿತಮ್ಮಾ ಮರಿ ಆನೆ ಬಂದಿತಮ್ಮಾ ಕಿಂಕರರಿಗೆ ankita raghavendra. Show all posts

Thursday 5 August 2021

ಆನೆ ಬಂದಿತಮ್ಮಾ ಮರಿ ಆನೆ ಬಂದಿತಮ್ಮಾ ಕಿಂಕರರಿಗೆ ankita raghavendra

 ..

kruti by radhabai

ಆನೆ ಬಂದಿತಮ್ಮಾ ಮರಿ ಆನೆ ಬಂದಿತಮ್ಮಾ ಪ


ಕಿಂಕರರಿಗೆ ಬಂದ ಸಂಕಟಕಳೆವಾ ಶ್ರೀ

ವೆಂಕಟರಮಣನೆಂಬಾನೆ ಅ.ಪ.


ಸಿರಿಯಿಲ್ಲದರಿಲಾರೆನೆಂದಾತುರದಲಿ ಧರೆಗಿಳಿದಾನೇ

ಪಥದೊಳಗೆಲ್ಲ ಹುಡುಕ್ಯಾನೆ | ವಲ್ಮೀಕ ದೊಳು ಅಡಗ್ಯಾನೇ1

ಭಕ್ತರ ಸಲಹಲುಹೋಮನ ಮಾಡ್ಯಾನೇ ಬಕುಳೆಮಾತಿಗೆ

ಕಂದ ನಾಗ್ಯಾನೇ ನೆತ್ತಿಯ ಒಡ ಕೊಂಡು ನಿಂತಾನೇ ಬಹುವಿಧ

ಯೋಚನೆ ಮಾಡ್ಯಾನೇ2

ಬೇಟೆನಾಡಲು ಹೊರಟ್ಯಾನೆ ದಿಟ್ಟಕುದುರೆಯನೇರ್ಯಾನೇ

ಪಟುತರ ಶ್ರೀಹರಿ ನಡೆದಾನೇ ಮುಂದೆ ಮದಗಜ

ಒಂದನು ಕಂಡ್ಯಾನೇ 3

ಶನೆ ಬೆನ್ನಟ್ಟಿಕೊಂಡು ನಡೆದಾನೇ ಎಲ್ಲೆಲ್ಲಿಯು

ಕಾಣದೆ ಹೋದಾನೇ ಬಿಸಿಲಲ್ಲಿ ಬಳಲುತ ದಣಿದ್ಯಾನೇ ಅಲ್ಲಿ

ಪದ್ಮಾವತಿಯಳ ಕಂಡಾನೇ4

ಮನದಲ್ಲಿ ಹರುಷಿತನಾದಾನೇ ಮಾತನಾಡಲು

ಮುಂದೆ ನಡೆದಾನೇ ಕಲ್ಲುಹಳೆಸುವುದ ಕಂಡಾನೇ ತಡ ಮಾಡದೆ

ಹಿಂದೆ ಸರಿದಾನೇ 5

ಬಕುಳೆ ಮಾತೆಯ ಕರೆದಾನೇ ಸಕಲವೃತ್ತಾಂತವ ತಿಳಿಸ್ಯಾನೇ

ಬೇಗದಿ ಹೋಗಿ ಬಾರೆಂದಾನೇ ಮೌನದಿಂದಲಿ ಮಲಗ್ಯಾನೇ6

ಮಾತೆ ಬರುವುದ ಕಂಡಾನೇ | ಮುದ್ದದಿಂದಲಿ ಎದ್ದುಕುಳಿತಾನೇ

ತಂದ ಶುಭವಾರ್ತೆಯ ಕೇಳ್ಯಾನೇ

ಮಂದಹಾಸದಿಂದ ನಲಿದಾನೇ7

ಬಂಧುಗಳೆಲ್ಲರ ಕರಿಸ್ಯಾನೇ ಮುಂದೆ ಮಾಡಿಕೊಂಡು ನಡೆಸ್ಯಾನೇ

ಮದು ಮಗನಾಗಿ ನಿಂತಾನೆ | ಪದುಮಾವತಿ ಕೈ ಪಿಡಿದಾನೇ 8

ಜಯ ಜಯವೆಂದರು ಸುರಬ್ರಹ್ಮಾದಿಗಳು ವಾಣಿ-ಪಾರ್ವತಿಯರು

ಜಯ ಜಯ ವೆಂದರುಗಗನದಿ ಅಮರರು ಮದುಮಳ

ಮೇಲೆ ಪೂಮಳೆಗರೆದರು 9

ಮಂಗಳವೆನ್ನಿರೆ ಪದ್ಮಿನಿ ಅರಸಗೆ ಪನ್ನಗ ಶಯನಗೆ

ಮಂಗಳವೆನ್ನಿರೆ ಪರಮ ಕಲ್ಯಾಣಗೆ ಮಂಗಳವೆನ್ನಿರೆ ಶ್ರೀ

ವೇಂಕಟ ವಿಠಲಗೆ ಮಂಗಳಾ ಜಯಮಂಗಳಾ10

***