Showing posts with label ವಿಜಯರಾಜ ಗುರುರಾಜಾಧಿರಾಜ raghupati vittala VIJAYARAJA GURURAJADHIRAJA VIJAYADASA STUTIH. Show all posts
Showing posts with label ವಿಜಯರಾಜ ಗುರುರಾಜಾಧಿರಾಜ raghupati vittala VIJAYARAJA GURURAJADHIRAJA VIJAYADASA STUTIH. Show all posts

Wednesday 25 November 2020

ವಿಜಯರಾಜ ಗುರುರಾಜಾಧಿರಾಜ ankita raghupati vittala VIJAYARAJA GURURAJADHIRAJA VIJAYADASA STUTIH

Audio by Mrs. Nandini Sripad

ಶ್ರೀ ರಘುಪತಿವಿಟ್ಠಲದಾಸಾರ್ಯರ ಕೃತಿ 


 ರಾಗ ಆರಭಿ                  ಆದಿತಾಳ 


ವಿಜಯರಾಜ ಗುರುರಾಜಾಧಿರಾಜ ಮಹ -

ರಾಜಶಿರೋರತುನ ॥ ಪ ॥

ತ್ಯಜಿಸದೆ ನಿಮ್ಮ ಪದಬುಜವ ಬಿಡೆನೆಂಬೊ 

ಸುಜನರ ಪಾಲಿಸಯ್ಯ ॥ ಅ ಪ ॥ 


ಜ್ಞಾನಭಕುತಿ ಕೊಡು ಗಾನಶೀಲನ ಮಾಡು

ಹೀನಮನವ ಕೆಡಿಸೋ ।

ನಾನೆಂಬೊ ಅಹಂಕಾರವನ್ನೆ ತೊಲಗಿಸೋ

ನಿನ್ನವರವನೆನಿಸೋ ।

ಧೇನಿಸುವಂದದಿ ಹರಿಯ ಪದಬುಜವ

ಮಾನಸದಲಿ ಸರ್ವದಾ ।

ಕಾಣಿಸಿಕೊಡು ನಾನು ಜೀವನು ನಿಜವೆಂಬೊ

ಜ್ಞಾನ ಮನಕೆ ಬರಲಿ ॥ 1 ॥ 


ಮೌನವಾಗಿರಲಾರು ಹೀನತಿ ನುಡಿಯಲು

ಪ್ರಾಣಪ್ರೇರಕರಿಂದಲಿ ।

ಆನೇನಾಡುವುದೆಲ್ಲ ಆನೆ ಎನ್ನುವೆನೆಲ್ಲ

ಆನೆ ಸ್ವತಂತ್ರನಲ್ಲ ।

ದೀನನಾಗೆರಗಿ ಸಜ್ಜನರ ಪದಾಬ್ಜಕ್ಕೆ 

ರೇಣುವಾಗಿ ನಡೆದು ।

ನೀನೇ ಗತಿಯೆಂದು ನಿನ್ನ ಮೊರೆಹೊಕ್ಕೆನೊ

ಕ್ಷೋಣಿಯೊಳಗೆ ಬಳಲಿ ॥ 2 ॥ 


ನಿಮ್ಮ ಕೊಂಡಾಡುವ ಬುಧರು ಕಾಣಲು ಅವ -

ರೆಮ್ಮಾಪ್ತನೆಂದೆನಲಿ ।

ನಿಮ್ಮ ಪುಣ್ಯದ ಪುತ್ರ ಗೋಪಾಲದಾಸರು

ನಮ್ಮ ರಕ್ಷಕರಾಗಲಿ ।

ಇಮ್ಮಹಿಯೊಳಗೇಸು ಕಾಲವಾದರೂ ಪುಣ್ಯ -

ಸಂಬಂಧ ಕೆಡದಿರಲಿ ।

ಸುಮ್ಮನಸರೀಶ ರಘುಪತಿವಿಠಲ 

ನಮ್ಮ ಸ್ವಾಮಿಯಾಗಲಿ ॥ 3 ॥

*** 


 ವಿಶೇಷಾಂಶ : 

 ಅನುಪಲ್ಲವಿ : 

" ನಿಮ್ಮ ಪದಬುಜವ ಬಿಡೆನೆಂಬೊ ಸುಜನರ ತ್ಯಜಿಸದೆ ಪಾಲಿಸಯ್ಯಾ ! "  ಅಂತ ಅನ್ವಯ ಮಾಡಬೇಕು.


ಶ್ರೀವಿಜಯದಾಸಾರ್ಯರ ಶಿಷ್ಯರಾದ ಶ್ರೀವೇಣುಗೋಪಾಲವಿಠಲದಾಸರಿಗೂ (ಶ್ರೀಪಂಗನಾಮ ತಿಮ್ಮಣ್ಣಯ್ಯನವರು) ಮತ್ತು ಶ್ರೀವೇಣುಗೋಪಾಲವಿಠಲದಾಸರಿಂದ ಅಂಕಿತಪಡೆದ ಶ್ರೀವ್ಯಾಸವಿಠಲದಾಸರಿಂದ (ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರಿಂದ) ಅಂಕಿತೋಪದೇಶ ಪಡೆದ ರಘುಪತಿವಿಠಲಾಂಕಿತ ತಿಮ್ಮಣ್ಣದಾಸರಿಗೂ ಒಂದೇ ನಾಮಧೇಯ ' ತಿಮ್ಮಣ್ಣ ' ಎಂದು. ಇವರ ವೈರಾಗ್ಯಭಾಗ್ಯಕ್ಕೆ ಮೆಚ್ಚಿ ' ವೈರಾಗ್ಯಶಾಲಿ ತಿಮ್ಮಣ್ಣ ' ಎಂದು ಶ್ರೀವಿಜಯದಾಸಾರ್ಯರು ಸಂಭೋದನೆ ಮಾಡುತ್ತಿದ್ದರಂತೆ. ಇವರಿಗೆ ತಮ್ಮ ಗುರುಬಾಂಧವರಾದ ಶ್ರೀಗೋಪಾಲದಾಸರಾಯರಲ್ಲಿಯೂ ಪರಮಭಕ್ತಿ. ಆದ್ದರಿಂದ ' ನಿಮ್ಮ ಪುಣ್ಯದ ಪುತ್ರ ಗೋಪಾಲದಾಸರು ನಮ್ಮ ರಕ್ಷಕರಾಗಲಿ ' ಎಂಬ ವರವನ್ನು ಶ್ರೀವಿಜಯದಾಸರಾಯರಲ್ಲಿ ಯಾಚಿಸಿದ್ದಾರೆ ! 


 ವಿವರಣೆ : 

 ಹರಿದಾಸರತ್ನಂ ಶ್ರೀಗೋಪಾಲದಾಸರು

****

ರಾಗ : ಆರಭಿ        ತಾಳ : ಆದಿ


ವಿಜಯರಾಜಗುರು ರಾಜಾಧಿರಾಜ । ಮಹ ।

ರಾಜ ಶಿರೋರತುನ ।। ಪಲ್ಲವಿ ।।


ತ್ಯಜಿಸದೆ ನಿಮ್ಮ ಪದಾಬ್ಜವ ಬಿಡೆನೆಂಬೋ ।

ಸುಜನರ ಪಾಲಿಸಯ್ಯ ।। ಅನು ಪಲ್ಲವಿ ।।


ಜ್ಞಾನ ಭಕುತಿ ಕೊಡು ಗಾನ ಶೀಲನ ಮಾಡು ।

ಹೀನ ಮನವ ಕೆಡಿಸೋ ।

ಆನೆಂಬೋ ಅಹಂಕಾರವನ್ನೇ ತೊಲಗಿಸೋ ।

ನಿನ್ನವರವ ನೆನಿಸೋ ।।

ಧೇನಿಸುವಂದದಿ ಹರಿಯ ಪಾದಾಂಬುಜ ।

ಮಾನಸದಲಿ ಸರ್ವದ ।

ಕಾಣಿಸಿ ಕೊಡುವನು ಜೀವನು ನಿಜವೆಂಬ ।

ಧ್ಯಾನ ಮನಕೆ ಬರಲಿ ।। ಚರಣ ।।


ಮೌನಿಯಾಗಿರಲಾರು ಹೀನತೆ ನುಡಿಯಲು ।

ಪ್ರಾಣ ಪ್ರೇರಕರಿಂದಲಿ ।

ಆನೇನಾಡುವನಲ್ಲ ಆನೆನೆನಿಪನಲ್ಲ ಆನೆ ಸ್ವತಂತ್ರನಲ್ಲ ।

ದೀನನಾಗೆರಗಿ ಸಜ್ಜನರ ಪಾದಾಬ್ಜಕೆ ।।

ರೇಣುನಾಗಿ ನಡೆದು ।

ನೀನೇವೆ ಗತಿಯೆಂದು ।

ನಿನ್ನನೇ ಮೊರೆ ಹೊಕ್ಕೆ ।

ಕ್ಷೋಣಿಯೊಳಗೆ ಬಳಲಿ ।। ಚರಣ ।।


ನಿಮ್ಮ ಕೊಂಡಾಡುವ ಬುಧರ ನೋಡಲು ಅವ ।

ರೆಮ್ಮಾಪ್ತರೆಂದೆನಲಿ ।

ನಿಮ್ಮ ಪುಣ್ಯದ ಪುತ್ರ ಗೋಪಾಲದಾಸರು ।

ಎಮ್ಮ ರಕ್ಷಕರಾಗಿರಲಿ ।।

ಇಮ್ಮಹೀಯೊಳಗೇಸು ಕಾಲವಾದರು ಪುಣ್ಯ ।

ಸಮ್ಮಂದ ಕೆಡದಿರಲಿ ।

ಸುಮ್ಮನಸರೀಶ ರಘುಪತಿ ವಿಠ್ಠಲನು ।

ನಮ್ಮ ಸ್ವಾಮಿಯಾಗಲಿ ।।

****