Wednesday 25 November 2020

ವಿಜಯರಾಜ ಗುರುರಾಜಾಧಿರಾಜ ankita raghupati vittala VIJAYARAJA GURURAJADHIRAJA VIJAYADASA STUTIH

Audio by Mrs. Nandini Sripad

ಶ್ರೀ ರಘುಪತಿವಿಟ್ಠಲದಾಸಾರ್ಯರ ಕೃತಿ 


 ರಾಗ ಆರಭಿ                  ಆದಿತಾಳ 


ವಿಜಯರಾಜ ಗುರುರಾಜಾಧಿರಾಜ ಮಹ -

ರಾಜಶಿರೋರತುನ ॥ ಪ ॥

ತ್ಯಜಿಸದೆ ನಿಮ್ಮ ಪದಬುಜವ ಬಿಡೆನೆಂಬೊ 

ಸುಜನರ ಪಾಲಿಸಯ್ಯ ॥ ಅ ಪ ॥ 


ಜ್ಞಾನಭಕುತಿ ಕೊಡು ಗಾನಶೀಲನ ಮಾಡು

ಹೀನಮನವ ಕೆಡಿಸೋ ।

ನಾನೆಂಬೊ ಅಹಂಕಾರವನ್ನೆ ತೊಲಗಿಸೋ

ನಿನ್ನವರವನೆನಿಸೋ ।

ಧೇನಿಸುವಂದದಿ ಹರಿಯ ಪದಬುಜವ

ಮಾನಸದಲಿ ಸರ್ವದಾ ।

ಕಾಣಿಸಿಕೊಡು ನಾನು ಜೀವನು ನಿಜವೆಂಬೊ

ಜ್ಞಾನ ಮನಕೆ ಬರಲಿ ॥ 1 ॥ 


ಮೌನವಾಗಿರಲಾರು ಹೀನತಿ ನುಡಿಯಲು

ಪ್ರಾಣಪ್ರೇರಕರಿಂದಲಿ ।

ಆನೇನಾಡುವುದೆಲ್ಲ ಆನೆ ಎನ್ನುವೆನೆಲ್ಲ

ಆನೆ ಸ್ವತಂತ್ರನಲ್ಲ ।

ದೀನನಾಗೆರಗಿ ಸಜ್ಜನರ ಪದಾಬ್ಜಕ್ಕೆ 

ರೇಣುವಾಗಿ ನಡೆದು ।

ನೀನೇ ಗತಿಯೆಂದು ನಿನ್ನ ಮೊರೆಹೊಕ್ಕೆನೊ

ಕ್ಷೋಣಿಯೊಳಗೆ ಬಳಲಿ ॥ 2 ॥ 


ನಿಮ್ಮ ಕೊಂಡಾಡುವ ಬುಧರು ಕಾಣಲು ಅವ -

ರೆಮ್ಮಾಪ್ತನೆಂದೆನಲಿ ।

ನಿಮ್ಮ ಪುಣ್ಯದ ಪುತ್ರ ಗೋಪಾಲದಾಸರು

ನಮ್ಮ ರಕ್ಷಕರಾಗಲಿ ।

ಇಮ್ಮಹಿಯೊಳಗೇಸು ಕಾಲವಾದರೂ ಪುಣ್ಯ -

ಸಂಬಂಧ ಕೆಡದಿರಲಿ ।

ಸುಮ್ಮನಸರೀಶ ರಘುಪತಿವಿಠಲ 

ನಮ್ಮ ಸ್ವಾಮಿಯಾಗಲಿ ॥ 3 ॥

*** 


 ವಿಶೇಷಾಂಶ : 

 ಅನುಪಲ್ಲವಿ : 

" ನಿಮ್ಮ ಪದಬುಜವ ಬಿಡೆನೆಂಬೊ ಸುಜನರ ತ್ಯಜಿಸದೆ ಪಾಲಿಸಯ್ಯಾ ! "  ಅಂತ ಅನ್ವಯ ಮಾಡಬೇಕು.


ಶ್ರೀವಿಜಯದಾಸಾರ್ಯರ ಶಿಷ್ಯರಾದ ಶ್ರೀವೇಣುಗೋಪಾಲವಿಠಲದಾಸರಿಗೂ (ಶ್ರೀಪಂಗನಾಮ ತಿಮ್ಮಣ್ಣಯ್ಯನವರು) ಮತ್ತು ಶ್ರೀವೇಣುಗೋಪಾಲವಿಠಲದಾಸರಿಂದ ಅಂಕಿತಪಡೆದ ಶ್ರೀವ್ಯಾಸವಿಠಲದಾಸರಿಂದ (ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರಿಂದ) ಅಂಕಿತೋಪದೇಶ ಪಡೆದ ರಘುಪತಿವಿಠಲಾಂಕಿತ ತಿಮ್ಮಣ್ಣದಾಸರಿಗೂ ಒಂದೇ ನಾಮಧೇಯ ' ತಿಮ್ಮಣ್ಣ ' ಎಂದು. ಇವರ ವೈರಾಗ್ಯಭಾಗ್ಯಕ್ಕೆ ಮೆಚ್ಚಿ ' ವೈರಾಗ್ಯಶಾಲಿ ತಿಮ್ಮಣ್ಣ ' ಎಂದು ಶ್ರೀವಿಜಯದಾಸಾರ್ಯರು ಸಂಭೋದನೆ ಮಾಡುತ್ತಿದ್ದರಂತೆ. ಇವರಿಗೆ ತಮ್ಮ ಗುರುಬಾಂಧವರಾದ ಶ್ರೀಗೋಪಾಲದಾಸರಾಯರಲ್ಲಿಯೂ ಪರಮಭಕ್ತಿ. ಆದ್ದರಿಂದ ' ನಿಮ್ಮ ಪುಣ್ಯದ ಪುತ್ರ ಗೋಪಾಲದಾಸರು ನಮ್ಮ ರಕ್ಷಕರಾಗಲಿ ' ಎಂಬ ವರವನ್ನು ಶ್ರೀವಿಜಯದಾಸರಾಯರಲ್ಲಿ ಯಾಚಿಸಿದ್ದಾರೆ ! 


 ವಿವರಣೆ : 

 ಹರಿದಾಸರತ್ನಂ ಶ್ರೀಗೋಪಾಲದಾಸರು

****

ರಾಗ : ಆರಭಿ        ತಾಳ : ಆದಿ


ವಿಜಯರಾಜಗುರು ರಾಜಾಧಿರಾಜ । ಮಹ ।

ರಾಜ ಶಿರೋರತುನ ।। ಪಲ್ಲವಿ ।।


ತ್ಯಜಿಸದೆ ನಿಮ್ಮ ಪದಾಬ್ಜವ ಬಿಡೆನೆಂಬೋ ।

ಸುಜನರ ಪಾಲಿಸಯ್ಯ ।। ಅನು ಪಲ್ಲವಿ ।।


ಜ್ಞಾನ ಭಕುತಿ ಕೊಡು ಗಾನ ಶೀಲನ ಮಾಡು ।

ಹೀನ ಮನವ ಕೆಡಿಸೋ ।

ಆನೆಂಬೋ ಅಹಂಕಾರವನ್ನೇ ತೊಲಗಿಸೋ ।

ನಿನ್ನವರವ ನೆನಿಸೋ ।।

ಧೇನಿಸುವಂದದಿ ಹರಿಯ ಪಾದಾಂಬುಜ ।

ಮಾನಸದಲಿ ಸರ್ವದ ।

ಕಾಣಿಸಿ ಕೊಡುವನು ಜೀವನು ನಿಜವೆಂಬ ।

ಧ್ಯಾನ ಮನಕೆ ಬರಲಿ ।। ಚರಣ ।।


ಮೌನಿಯಾಗಿರಲಾರು ಹೀನತೆ ನುಡಿಯಲು ।

ಪ್ರಾಣ ಪ್ರೇರಕರಿಂದಲಿ ।

ಆನೇನಾಡುವನಲ್ಲ ಆನೆನೆನಿಪನಲ್ಲ ಆನೆ ಸ್ವತಂತ್ರನಲ್ಲ ।

ದೀನನಾಗೆರಗಿ ಸಜ್ಜನರ ಪಾದಾಬ್ಜಕೆ ।।

ರೇಣುನಾಗಿ ನಡೆದು ।

ನೀನೇವೆ ಗತಿಯೆಂದು ।

ನಿನ್ನನೇ ಮೊರೆ ಹೊಕ್ಕೆ ।

ಕ್ಷೋಣಿಯೊಳಗೆ ಬಳಲಿ ।। ಚರಣ ।।


ನಿಮ್ಮ ಕೊಂಡಾಡುವ ಬುಧರ ನೋಡಲು ಅವ ।

ರೆಮ್ಮಾಪ್ತರೆಂದೆನಲಿ ।

ನಿಮ್ಮ ಪುಣ್ಯದ ಪುತ್ರ ಗೋಪಾಲದಾಸರು ।

ಎಮ್ಮ ರಕ್ಷಕರಾಗಿರಲಿ ।।

ಇಮ್ಮಹೀಯೊಳಗೇಸು ಕಾಲವಾದರು ಪುಣ್ಯ ।

ಸಮ್ಮಂದ ಕೆಡದಿರಲಿ ।

ಸುಮ್ಮನಸರೀಶ ರಘುಪತಿ ವಿಠ್ಠಲನು ।

ನಮ್ಮ ಸ್ವಾಮಿಯಾಗಲಿ ।।

****



No comments:

Post a Comment