Showing posts with label ಭಾರತೀ ರಮಣನೆ ಸಾರಿದೆನು ಚರಣ ತೋರು ಮನ್ಮನದಲಿ ಭೂರಿಸುಕರುಣ varadesha vittala. Show all posts
Showing posts with label ಭಾರತೀ ರಮಣನೆ ಸಾರಿದೆನು ಚರಣ ತೋರು ಮನ್ಮನದಲಿ ಭೂರಿಸುಕರುಣ varadesha vittala. Show all posts

Sunday 1 August 2021

ಭಾರತೀ ರಮಣನೆ ಸಾರಿದೆನು ಚರಣ ತೋರು ಮನ್ಮನದಲಿ ಭೂರಿಸುಕರುಣ ankita varadesha vittala

 ..

kruti by ವರದೇಶ ವಿಠಲರು varadesha vittala dasaru


ಭಾರತೀರÀಮಣನೆ ಸಾರಿದೆನು ಚರಣ

ತೋರು ಮನ್ಮನದಲಿ ಭೂರಿಸುಕÀರುಣ ಪ


ನಾರಾಯಣಾಂಕದಿ ಕುಳಿತಿಹ ಶೂರಾ

ಸೂರಿಸ್ತೋಮತೇಜೊರಂಜಿಪುದಾರಾ

ಮಾರಮಣನಾಜ್ಞಾದಿಂ ಬ್ರಹ್ಮಾಂಡಧಾರಾ

ಧಾರಕಾನಂದ ವಿಠಲನ್ನಚಾರಾ 1


ದುರುಳರಕ್ಕಸತತಿಯ ದ್ವಿರದ ವಿದಾರ

ಹರಿರಘುವರನಪಾದ ಶರಧಿಜ ಚಕೋರ

ಹರಮುಖ್ಯ ಸುರಸರಸಿರುಹಕೆ ದಿನಕರ

ವರದೇಶವಿಠ್ಠಲನ ಸ್ಮರಿಪÀ ಸಮೀರ 2


ಕುರುಕುಲ ಸಂಜಾತ ದ್ರುಪದಜಾನಾಥ

ದುರಿಯೋಧನನ ಊರುತರಿದ ನಿರ್ಭೀತ

ಪರಮ ಭಗವದ್ಭಕÀ್ತವೃಂದ ಸುಪ್ರೀತ

ವರದೇಂದ್ರ ವಿಠ್ಠಲನ ಪ್ರೀಯ ಸುತನೀತ 3


ಅದ್ವೈತ ಮತತಿಮಿರ ಧ್ವಂಸÀನ ಧಿರ

ಶುದ್ಧವೈಷ್ಣವ ಮತಸ್ಥಾಪನಾಪಾರ

ಸದ್ವಾಕ್ಯದಿಂದಲಿ ಹರಿಪಾರವಾರ

ಮಧÀ್ವಸುಂದರ ವಿಠ್ಠಲನ ಸುಕುಮಾರ 4


ವರದೇಶವಿಠ್ಠಲ ವರದೇಂದ್ರ ವಿಠಲ ಸುಂ -

ದರ ವಿಠಲ ಆನಂದ ವಿಠ್ಠಲನ್ನ

ಪರಿಪರಿ ವಿಧದಲ್ಲಿ ಕರುಣವ ಪಡೆದಿಹ

ಗುರುಜಗನ್ನಾಥ ವಿಠ್ಠಲನ ನಿಜದೂತ 5

***