Sunday 1 August 2021

ಭಾರತೀ ರಮಣನೆ ಸಾರಿದೆನು ಚರಣ ತೋರು ಮನ್ಮನದಲಿ ಭೂರಿಸುಕರುಣ ankita varadesha vittala

 ..

kruti by ವರದೇಶ ವಿಠಲರು varadesha vittala dasaru


ಭಾರತೀರÀಮಣನೆ ಸಾರಿದೆನು ಚರಣ

ತೋರು ಮನ್ಮನದಲಿ ಭೂರಿಸುಕÀರುಣ ಪ


ನಾರಾಯಣಾಂಕದಿ ಕುಳಿತಿಹ ಶೂರಾ

ಸೂರಿಸ್ತೋಮತೇಜೊರಂಜಿಪುದಾರಾ

ಮಾರಮಣನಾಜ್ಞಾದಿಂ ಬ್ರಹ್ಮಾಂಡಧಾರಾ

ಧಾರಕಾನಂದ ವಿಠಲನ್ನಚಾರಾ 1


ದುರುಳರಕ್ಕಸತತಿಯ ದ್ವಿರದ ವಿದಾರ

ಹರಿರಘುವರನಪಾದ ಶರಧಿಜ ಚಕೋರ

ಹರಮುಖ್ಯ ಸುರಸರಸಿರುಹಕೆ ದಿನಕರ

ವರದೇಶವಿಠ್ಠಲನ ಸ್ಮರಿಪÀ ಸಮೀರ 2


ಕುರುಕುಲ ಸಂಜಾತ ದ್ರುಪದಜಾನಾಥ

ದುರಿಯೋಧನನ ಊರುತರಿದ ನಿರ್ಭೀತ

ಪರಮ ಭಗವದ್ಭಕÀ್ತವೃಂದ ಸುಪ್ರೀತ

ವರದೇಂದ್ರ ವಿಠ್ಠಲನ ಪ್ರೀಯ ಸುತನೀತ 3


ಅದ್ವೈತ ಮತತಿಮಿರ ಧ್ವಂಸÀನ ಧಿರ

ಶುದ್ಧವೈಷ್ಣವ ಮತಸ್ಥಾಪನಾಪಾರ

ಸದ್ವಾಕ್ಯದಿಂದಲಿ ಹರಿಪಾರವಾರ

ಮಧÀ್ವಸುಂದರ ವಿಠ್ಠಲನ ಸುಕುಮಾರ 4


ವರದೇಶವಿಠ್ಠಲ ವರದೇಂದ್ರ ವಿಠಲ ಸುಂ -

ದರ ವಿಠಲ ಆನಂದ ವಿಠ್ಠಲನ್ನ

ಪರಿಪರಿ ವಿಧದಲ್ಲಿ ಕರುಣವ ಪಡೆದಿಹ

ಗುರುಜಗನ್ನಾಥ ವಿಠ್ಠಲನ ನಿಜದೂತ 5

***


No comments:

Post a Comment