Showing posts with label ಅಂತರಂಗದ ಕದವು ತೆರೆಯಿತಿಂದು ankita vijaya vittala ANTARANGADA KADAVU TEREYITINDU. Show all posts
Showing posts with label ಅಂತರಂಗದ ಕದವು ತೆರೆಯಿತಿಂದು ankita vijaya vittala ANTARANGADA KADAVU TEREYITINDU. Show all posts

Thursday 17 October 2019

ಅಂತರಂಗದ ಕದವು ತೆರೆಯಿತಿಂದು ankita vijaya vittala ANTARANGADA KADAVU TEREYITINDU


 
1st Audio by Mrs. Nalini Parthasarathy


Raaga : Harikambhoji    Tala: Aadi  (AUDIO RAGA MAYBE DIFFERENT)

ಅಂತರಂಗದ ಕದವು ತೆರೆಯಿತಿಂದು 
ಎಂತೋ ಪುಣ್ಯದ ಫಲವಪ್ರಾಪ್ತಿಯಾಯಾತು ಇಂದು||ಪಲ್ಲ||

ಏಸು ದಿನವಾಯಿತೊ ಬೀಗಮುದ್ರೆಯ ಮಾಡಿ
ವಾಸವಾಗಿದ್ದರು ದುರುಳರಲ್ಲಿ
ಮೋಸಹೋಯಿತು ಇಂದಿನತನಕ ತಮಸಿನ
ಘಾಸಿಯೊಳಗೆ ಹೂಳೆ ಕಾಣೀಸುತ್ತಿರಲಿಲ್ಲ||೧||

ಹರಿಕರುಣವೆಂಬಂಥ ಕೀಲಿಕೈ ದೊರಕಿತು
ಗುರುಕರುಣವೆಂಬಂಥ ಶಕ್ತಿಯಿಂದ
ಪರಮಭಾಗವತರ ಸಹವಾಸದಲಿ ಪೋಗಿ
ಹರಿಸ್ಮರಣೆಯೆಂಬಂಥ ಬೀಗ ಮುದ್ರೆಯ ತೆರೆದೆ||೨||

ಸುತ್ತಲೀದ್ದವರೆಲ್ಲ ಪಲಾಯನರಾದರು
ಭಕ್ತಿ ಕಕ್ಕಡವೆಂಬ ಜ್ಞಾನದೀಪ
ಜತ್ತಾಗಿ ಹಿಡಕೊಂಡು ದ್ವಾರದೊಳಗೆ ಪೊಕ್ಕು
ಎತ್ತನೋಡಿದರತ್ತ ಶೃಂಗಾರ ಸದನ||೩||

ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು
ಪಾರದಾರಿಗೆ ಪ್ರಾಣ ಜಯ ವಿಜಯರು
ಮಿರಗೈವೋ ಮಧ್ಯ ಮಂಟಪಕೋಟಿ ರವಿಯಂತೆ
ಸರಸಿಜಾನಾಭನ ಅರಮನೆಯ ಸೊಬಗು||೪||

ಸ್ವರ ಮೂರ್ತಿ ಗಣಮಧ್ಯ ಸಚ್ಚಿದಾನಂದೈಕ
ರಮೆಧರೆಯಲಿಂದ ಇಂಗೀತ್ವದಿ
ಕಮಲಜಾತಿಗಳಿಂದ ಸ್ತುತಿಸಿಗೊಳುತಲಿ ಹೃದಯ
ಕಮಲದೊಳಗಿರುವಶ್ರೀ ವಿಜಯ ವಿಠಲನ ಕಂಡೆ||೫||
***

pallavi

antarangada kadavu tereyitindu

anupallavi

entu puNyada phalavu prApti dorakito enage

caraNam 1

Esu dinavayitO bIga mudraya mADi vAsavAgiddarO duruLarilli
mOsavayittu indind tanaka tamasina rAshiyoLage hULi kANi suttiralilla

caraNam 2

hari karuNavembanta kIli kaidorakittu guru karauNavembanta shakti inda
parama bhAgavatara sahavAsadali pOgi hari smaraNeyindalli bIga mudreya tegeda

caraNam 3

suttaliddavarella palayAnavAdaru bhakti kakkaLavemba jnAna dIpa
jattAgi hiDakoNDu dvAradoLage pokke ettanODidaratta shrngAra sadana

caraNam 4

horage dvArage nAlku oLagaidu dvAragaLu paradArige prANa jaya vijayaru
miruguvA madhya maNTapa kOTi raviyante sarasija nAbhana aramaneya sobagu

caraNam 5

svamUrtigaNa madhya saccidAnandaika rame dhareyarinda lAlingatvadi
kamala jAdigaLinda tutisi koLLuva hrdaya kamaladoLagiruva shrI vijayaviThalana kaNDe
***


ಅಂತರಂಗದ ಕದವು ತೆರೆಯಿತಿಂದು ||ಪ||
ಎಂತು ಪುಣ್ಯದ ಫಲವು ಪ್ರಾಪ್ತಿ ಯಾಯಿತೊ ಎನಗೆ ||ಅ||

ಏಸುದಿನವಾಯಿತೊ ಬೀಗಮುದ್ರೆಯ ಮಾಡಿ|
ವಾಸವಾಗಿದ್ದರೋ ದುರುಳರಿಲ್ಲಿ||
ಮೋಸವಾಯಿತು ಇಂದಿನ ತನಕ ತಮಸಿನ|
ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ||೧||

ಹರಿಕರುಣವೆಂಬಂಥ ಕೀಲಿಕೈ ದೊರಕಿತು|
ಗುರುಕರುಣವೆಂಬಂಥ ಶಕ್ತಿಯಿಂದ||
ಪರಮಭಾಗವತರ ಸಹವಾಸದಲಿ ಪೋಗಿ
ಹರಿಸ್ಮರಣೆಯಿಂದಲ್ಲಿ ಬೀಗಮುದ್ರೆಯ ತೆಗೆದೆ ||೨||

ಸುತ್ತಲಿದ್ದವರು ಪಲಾಯನವಮಾಡಿದರು|
ಭಕ್ತಿಕಕ್ಕಡವೆಂಬ ಜ್ಞಾನದೀಪ||
ಜತ್ತಾಗಿ ಹಿಡಕೊಂಡು ದ್ವಾರದೊಳಗೆ ಪೊಕ್ಕೆ|
ಎತ್ತನೋಡಿದರತ್ತ ಶೃಂಗಾರಸದನ ||೩||

ಹೊರಗೆ ದ್ವಾರವು ನಾಲ್ಕು , ಒಳಗೈದು ದ್ವಾರಗಳು|
ಪರ ದಾರಿಗೆ ಪ್ರಾಣ ಜಯವಿಜಯರು||
ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ
ಸರಸಿಜನಾಭನ ಅರಮನೆಯ ಸೊಬಗು ||೪||

ಸ್ವಮೂರ್ತಿಗಣ ಮಧ್ಯ ಸಚ್ಚಿದಾನಂದ|
ರಮೆಧರೆಯರಿಂದಲಾಲಿಂಗತ್ವದಿ||
ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯದ
ಕಮಲದೊಳಗಿರುವ ಶ್ರೀ ವಿಜಯವಿಠ್ಠಲನ ಕಂಡೆ ||೫||
*********


ಅಂತರಂಗದ ಕದವು ತೆರೆಯಿತಿಂದು ||ಪ||
ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತು ಎನಗೆ ||ಅ||

ಏಸುದಿನವಾಯಿತೊ ಬೀಗಮುದ್ರೆಯ ಮಾಡಿ
ವಾಸವಾಗಿದ್ದರೋ ದುರುಳರಿಲ್ಲಿ
ಮೋಸವಾಯಿತು ಇಂದಿನ ತನಕ ತಮಸಿನ
ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ||೧||

ಹರಿಕರುಣವೆಂಬಂಥ ಕೀಲಿಕೈ ದೊರಕಿತು
ಗುರುಕರುಣವೆಂಬಂಥ ಶಕ್ತಿಯಿಂದ
ಪರಮಭಾಗವತರ ಸಹವಾಸದಲಿ ಪೋಗಿ
ಹರಿಸ್ಮರಣೆಯಿಂದಲಿ ಬೀಗಮುದ್ರೆಯ ತೆಗೆದೆ ||೨||

ಸುತ್ತಲಿದ್ದವರು ಪಲಾಯನವಾದರು
ಭಕ್ತಿಕಕ್ಕಡವೆಂಬ ಜ್ಞಾನದೀಪ
ಜತ್ತಾಗಿ ಹಿಡಕೊಂಡು ದ್ವಾರದೊಳಗೆ ಪೊಕ್ಕೆ
ಎತ್ತನೋಡಿದರತ್ತ ಶೃಂಗಾರ ಸದನ ||೩||

ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು
ಪರ ದಾರಿಗೆ ಪ್ರಾಣ ಜಯವಿಜಯರು
ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ
ಸರಸಿಜನಾಭನ ಅರಮನೆಯ ಸೊಬಗು ||೪||

ಸ್ವಮೂರ್ತಿಗಣ ಮಧ್ಯ ಸಚ್ಚಿದಾನಂದೈಕ
ರಮೆಧರೆಯರಿಂದಲಾಲಿಂಗತ್ವದಿ
ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯ-


ಕಮಲದೊಳಗಿರುವ ಶ್ರೀ ವಿಜಯವಿಠಲನ ಕಂಡೆ ||೫||
*******