Showing posts with label ಶ್ರೀನಿವಾಸ ದಯಾನಿಧೇ ಭಾನುಕೋಟಿತೇಜ ಲಾವಣ್ಯ ಮೂರುತಿ gurushreesha vittala. Show all posts
Showing posts with label ಶ್ರೀನಿವಾಸ ದಯಾನಿಧೇ ಭಾನುಕೋಟಿತೇಜ ಲಾವಣ್ಯ ಮೂರುತಿ gurushreesha vittala. Show all posts

Saturday 1 May 2021

ಶ್ರೀನಿವಾಸ ದಯಾನಿಧೇ ಭಾನುಕೋಟಿತೇಜ ಲಾವಣ್ಯ ಮೂರುತಿ ankita gurushreesha vittala

 ಶ್ರೀ ಗುರು ಶ್ರೀಶವಿಠ್ಠಲರು 30 ಪದಗಳನ್ನೂ; 4 ಸುಳಾದಿಗಳನ್ನೂ, ಹರಿಕಥಾಮೃತಸಾರಕ್ಕೆ ಫಲಶ್ರುತಿಯನ್ನು, ಪ್ರಮೇಯ ರತ್ನಮಾಲಾ ರಚಿಸಿದ್ದಾರೆ. 

ಅದರಲ್ಲಿ " ಸ್ತುತಿರತ್ನ ಮಾಲಾ ಸ್ತೋತ್ರ " ಪ್ರಸಿದ್ಧಿಯಾಗಿದೆ. 

ರಾಗ : ಮೋಹನಕಲ್ಯಾಣಿ ರಾಗ : ಅಟ್ಟ 


ಶ್ರೀನಿವಾಸ ದಯಾನಿಧೇ ।। ಪಲ್ಲವಿ ।। 


ಭಾನುಕೋಟಿತೇಜ ಲಾವಣ್ಯ ಮೂರುತಿ ।

ಶ್ರೀ ವೆಂಕಟೇಶಗೆ ನಮೋ ನಮೋ ।। ಚರಣ ।। 

ಶೇಷಾಚಲ ನಿವಾಸ ದೋಷ ದೂರನೇ । ಭಕುತ ।

ಪೋಷಕ ಶ್ರೀಕಾಂತ ನಮೋ ನಮೋ ।। ಚರಣ ।। 

ಖಗರಾಜ ವಾಹನ ಜಗದೊಡೆಯನೆ ನಿನ್ನ ।

ಅಗಣಿತ ಮಹಿಮೆಗ ನಮೋ ನಮೋ

ಶ್ರೀನಿವಾಸಾ ದಯಾನಿಧೇ ।। ಚರಣ ।। 

ನೀಲಮೇಘಶ್ಯಾಮ ಪಾಲಸಾಗರ ಶಯನ ।

ಶ್ರೀ ಲಕುಮೀಶನೆ ನಮೋ ನಮೋ

ಶ್ರೀನಿವಾಸಾ ದಯಾನಿಧೇ ।। ಚರಣ ।। 

ಶಂಖ ಚಕ್ರಧರ ವೆಂಕಟರಮಣ । ಅಕ ।

ಳಂಕ ಮೂರುತಿ ದೇವ ನಮೋ ನಮೋ

ಶ್ರೀನಿವಾಸಾ ದಯಾನಿಧೇ ।। ಚರಣ ।। 

ಪನ್ನಂಗಶಯನ ನಿನ್ನಂಥ ದೇವರು ।

ಇನ್ನುಂಟೆ ಅಜಭವಸುರ ವಂದ್ಯ ನಮೋ ನಮೋ

ಶ್ರೀನಿವಾಸಾ ದಯಾನಿಧೇ ।। ಚರಣ ।।

ಸೃಷ್ಟಿಯಿಲ್ಲದೆಲೆ ಒತ್ತಟ್ಟಿದಿದ್ದವರನ್ನು ।

ಸೃಷ್ಟಿಸಿ ಜೀವರನ್ನು ಸಲಹುವೀ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ತನುಮನಕರಣಗಳನ್ನು ಕೊಟ್ಟು ।

ಅನಿಮಿಷರನು ಅಭಿಮಾನಿಗಳೆನಿಸಿದೀ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ದೀನವತ್ಸಲ ನಿನ್ನಧೀನದೊಳಗಿಟ್ಟು ।

ಜ್ಞಾನ ಕರ್ಮಗಳ ಮಾಡಿಸಿದೆಯೋ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ಕ್ಷಣ ಬಿಡದಲೆ ಭಕ್ತ ಜನರ ರಕ್ಷಿಸುವಿ । ದು ।

ರ್ಜನರಿಗೆ ದುರ್ಲಭ ನೆನಿಸುವೀ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ವೈಷಮ್ಯ ನೈರ್ಘ್ರುಣ್ಯ ಲೇಶವಿಲ್ಲದವರು ।

ಪಾಸನದಂತೆ ಫಲಗಳೀವಿ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ಒಂದೇ ರೂಪದಿ ಬಹು ಮಂದಿರದೊಳಿದ್ದು ।

ಬಂಧ ಮೋಕ್ಷಪ್ರದ ನೆನಿಸುವೀ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ಜ್ಞಾನಿಗಳರಸ ಅಜ್ಞಾನಿಗಳೊಳು ನಾ । ಅ ।

ಜ್ಞಾನಿ ಸುಜ್ಞಾನವ ಪಾಲಿಸೋ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ನಂಬಿದೆ ನಿನ್ನ ಬಿಂಬ ಮೂರುತಿ ಯೆನ್ನ ।

ಡಿಂಬದೊಳಗೆ ಪೊಳೆ ಅನುದಿನಾ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ನಿನ್ನ ಹೊರತು ಎನಗನ್ಯರಿಂದೇನಯ್ಯಾ ।

ನಿನ್ನ ಸ್ತುತಿಪ ಸುಖಕ್ಕೆಣೆಗಾಣೆ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ಘನ್ನ ಮಹಿಮಾ ಎನಗಿನ್ನೊಂದು ಬಯಕಿಲ್ಲ ।

ನಿನ್ನ ಧ್ಯಾನದೊಳಿಡು ಮರೆಯದೇ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ದುರ್ಜನ ಸಂಗ ವಿವರ್ಜ ಮಾಡಿಸಿ ಸಾಧು ।

ಸಜ್ಜನರ ಸೇವೆಯೊಳಗಿಡೋ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ಏಸು ಜನ್ಮಗಳೀಯೋ ಲೇಸು ಚಿಂತಯು ಇಲ್ಲ ।

ದಾಸನೆಂದೆನಿಸೋ ದಾಸ್ಯವನಿತ್ತು ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ಎನ್ನಪ್ಪ ಎನ್ನಣ್ಣ ಎನ್ನ ಕಾಯುವ ದೇವ ।

ನಿನ್ನ ವಿಸ್ಮರಣೆಯ ಕೊಡದಿರೋ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ಮನಸಿನ ಚಂಚಲವನು ತೊಲಗಿಸಿ ಪಾದ ।

ವನಜದಲ್ಲಿರಿಸಯ್ಯ ಜಿತವಾಗಿ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ಕಾರಣಗಳಿಂದ ಚರಿಸುವ ಆ ವಿಷಯ । ಶ್ರೀ ।

ಹರಿ ನಿನ್ನ ಸೇವೆಯಾಗಲಿ ಸ್ವಾಮೀ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ಹರಿಯು ಸರ್ವೋತ್ತಮ ಸುರರೆಲ್ಲ ದಾಸರು ।

ತಾರತಮ ಭೇದ ಜ್ಞಾನವನೀಯೋ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ಬುದ್ಧಿ ಪೂರ್ವಕ ಗುರು ಮಧ್ವಮತ । ತಿಳಿ ।

ದಿದ್ದವನೆ ಜ್ಞಾನ ವೃದ್ಧನೋ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ಗುರುಗಳ ಕರುಣ ಸುಸ್ಥಿರವಾಗಿದ್ದವರಿಗೆ ।

ಹರಿ ನಿನ್ನ ಅನುಗ್ರಹವಾಗ್ವದೋ ।। ಚರಣ ।। 

ನಿನ್ನ ಚಿತ್ತಕ್ಕೆ ಬಂದದ್ದೆನ್ನ ಚಿತ್ತಕೆ ಬರಲಿ ।

ಅನ್ಯಥ ಬಯಕೆಯ ಕೊಡದಿರೋ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ನಿನ್ನವರಲ್ಲದೆ ಅನ್ಯರು ಬಲ್ಲರೆ ।

ಘನ್ನ ಮಾತಿನ ಸುಖಸವಿಯನ್ನು ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ಸ್ತುತಿರತ್ನಮಾಲಾ ಸಂಸ್ತುತಿಸಿ ಹಿಗ್ಗುವರಿಗೆ ।

ಪ್ರತಿದಿನ ಸುಖ ಅಭಿವೃದ್ಧಿಯೋ ।

ಶ್ರೀನಿವಾಸಾ ದಯಾನಿಧೇ ।। ಚರಣ ।। 

ಗುರುಗಳು ಮಧ್ವರಾಯರು ಮೂರು ಲೋಕಕ್ಕೆ ।

ಧೊರೆ ಗುರು ಶ್ರೀಶ ವಿಠ್ಠಲ ನಮೋ ನಮೋ ।

ಶ್ರೀನಿವಾಸಾ ದಯಾನಿಧೇ ।। ಚರಣ ।।

****