Showing posts with label ಬರಿದೆ ದಣಿಯಬೇಡಿ ಬಯಲ ಸಾಧನ ಕೂಡಿ gurumahipati. Show all posts
Showing posts with label ಬರಿದೆ ದಣಿಯಬೇಡಿ ಬಯಲ ಸಾಧನ ಕೂಡಿ gurumahipati. Show all posts

Wednesday 1 September 2021

ಬರಿದೆ ದಣಿಯಬೇಡಿ ಬಯಲ ಸಾಧನ ಕೂಡಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಬರಿದೆ ದಣಿಯಬೇಡಿ | ಬಯಲ ಸಾಧನ ಕೂಡಿ | ನೆರೆ ಮಾಡಿ ಸಾಧು ಸಂತರಾ | ದಯವಂತರಾ ಪ 


ಏನು ಓದಿದರೇನು | ಏನು ಕೇಳಿದರೇನು | ಜ್ಞಾನಿಗಳೊಡನಾಡದೇ | ಅನುಭವವಾಗುದೇ 1 

ಬುಡದಲಿ ಫಲವಿದೆ | ತುದಿಮರನೇರುವರೇ | ಬಿಡು ಬಿಡು ನಾನಾ ಸಾಯಸಾ | ಭ್ರಾಂತಿ ವೇಷಾ 2 

ಗುರು ಮಹಿಪತಿ ನುಡಿ | ಸಾರಿದ ನಂದ ನೋಡಿ | ಮರೆಯದೆ ಮಾಡಿ ಸಾಧನಾ | ಹರುಷ ನಿಧಾನಾ 3

***